ನವದೆಹಲಿ: ಭಾರಿ ಭೂಕಂಪನದಿಂದ ನಿರಾಶ್ರಿತರಾದ ಟರ್ಕಿ (Turkey) ಜನರಿಗೆ ಬೆಂಗಳೂರಿನ ಆರೋಗ್ಯ ಸೇವಾ ಸಂಸ್ಥೆ (Aarogya Seva Samsthe) ಸಹಾಯ ಹಸ್ತ ಚಾಚಿದೆ. ದೆಹಲಿಯಲ್ಲಿರುವ ಟರ್ಕಿ ರಾಯಭಾರಿ ಕಚೇರಿಗೆ ಸಾವಿರಕ್ಕೂ ಅಧಿಕ ಕಂಬಳಿಗಳನ್ನು ನೀಡಿದ್ದು, ಮತ್ತಷ್ಟು ಅಗತ್ಯ ವಸ್ತುಗಳನ್ನು ಪೂರೈಸುವ ಭರವಸೆ ನೀಡಿದೆ.
ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುವ ಸಮಾನ ಮನಸ್ಕರ ಗುಂಪು ಸೂರ್ಯ ಫೌಂಡೇಶನ್ ಅಡಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಟರ್ಕಿ ಮತ್ತು ಸಿರಿಯಾದಲ್ಲಿ (Turkey-Syria Earthquake) ಭಾರಿ ಭೂಕಂಪವಾದ ಹಿನ್ನೆಲೆ ನಿರಾಶ್ರಿತರಿಗೆ ಆರೋಗ್ಯ ಸೇವಾ ಸಂಸ್ಥೆ ನೇತೃತ್ವದಲ್ಲಿ ಅಗತ್ಯ ವಸ್ತುಗಳನ್ನು ನೀಡಲು ನಿರ್ಧರಿಸಿದ್ದರು. ಇದನ್ನೂ ಓದಿ: ಟರ್ಕಿ, ಸಿರಿಯಾ ಭೂಕಂಪ- ಸಾವಿನ ಸಂಖ್ಯೆ 41 ಸಾವಿರಕ್ಕೆ ಏರಿಕೆ
ಟರ್ಕಿ ಮತ್ತು ಸಿರಿಯಾ ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಿದ ಆರೋಗ್ಯ ಸೇವಾ ಸಂಸ್ಥೆ, ಅಗತ್ಯವಿರುವ ವಸ್ತುಗಳ ಮಾಹಿತಿಯನ್ನು ಪಡೆದುಕೊಂಡು ಬಳಿಕ ಟರ್ಕಿಗೆ ಸಾವಿರ ಕಂಬಳಿಗಳನ್ನು ಮೊದಲ ಹಂತದಲ್ಲಿ ನೀಡಿದೆ. ಎರಡನೇ ಹಂತದಲ್ಲಿ ವೈದ್ಯಕೀಯ ವಸ್ತುಗಳನ್ನು ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಸಿರಿಯಾ ಹಣಕಾಸಿನ ನೆರವು ಕೇಳಿದ್ದು, ಅದರ ಕ್ರೋಢೀಕರಣವನ್ನು ಮಾಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಸೂರ್ಯ ಫೌಂಡೇಶನ್ ಸದಸ್ಯ ಪುನೀತ್, ಪ್ರಕೃತಿ ವಿಕೋಪಗಳು, ದೊಡ್ಡ ಪ್ರಮಾಣದಲ್ಲಿ ಅನಾಹುತಗಳು ಸಂಭವಿಸಿದ ವೇಳೆ ಬೇರೆ ಬೇರೆ ರಾಜ್ಯಗಳು ಸೇರಿದಂತೆ ಹಲವು ದೇಶಗಳಿಗೆ ಆರೋಗ್ಯ ಸೇವಾ ಸಂಸ್ಥೆ ನೆರವು ನೀಡಿದೆ. ಸೂರ್ಯ ಫೌಂಡೇಶನ್ ಅಡಿಯಲ್ಲೂ ಹಲವು ಕಾರ್ಯಗಳನ್ನು ಮಾಡಿದೆ. ಈಗ ಟರ್ಕಿ, ಸಿರಿಯಾಗೆ ಅಗತ್ಯವಿರುವ ವಸ್ತುಗಳನ್ನು ರಾಯಭಾರಿ ಕಚೇರಿ ಮೂಲಕ ತಲುಪಿಸುತ್ತಿದ್ದೇವೆ ಎಂದರು. ಇದನ್ನೂ ಓದಿ: PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..
Live Tv
[brid partner=56869869 player=32851 video=960834 autoplay=true]
ಗ್ಯಾಂಗ್ಟಾಕ್: ಟರ್ಕಿ, ಸಿರಿಯಾ (Turkey Syria Earthquake) ದೇಶಗಳಲ್ಲಿ ಭೂಕಂಪನ ಸಂಭವಿಸಿದ್ದು ಸಾವಿರಾರು ಜನರನ್ನ ಬಲಿ ಪಡೆದಿದೆ. ಈಗಾಗಲೇ 33 ಸಾವಿರ ಮಂದಿ ಮೃತಪಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅಲ್ಲದೇ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
— National Center for Seismology (@NCS_Earthquake) February 13, 2023
ಈ ಬೆನ್ನಲ್ಲೇ ಸೋಮವಾರ (ಫೆ.13) ಬೆಳ್ಳಂಬೆಳಗ್ಗೆ ಸಿಕ್ಕಿಂನಲ್ಲಿ (Sikkim) 4.3 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಭೂಕಂಪನವು ಸಿಕ್ಕಿಂನ ಯುಕ್ಸೋಮ್ನ ವಾಯುವ್ಯ ಭಾಗದಲ್ಲಿ ಮುಂಜಾನೆ 4.15ರ ಸುಮಾರಿಗೆ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ಗುರುತಿಸಲಾಗಿದೆ. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ
— National Center for Seismology (@NCS_Earthquake) February 13, 2023
ಭಾನುವಾರ ಮಧ್ಯಾಹ್ನ ಅಸ್ಸಾಂನ (Assam) ನಾಗಾನ್ನಲ್ಲಿ 4.0 ತೀವ್ರತೆಯ ಭೂಕಂಪನ ಸಂಭವಿಸಿದ ಒಂದು ದಿನದ ನಂತರ ಕಂಪನ ಸಂಭವಿಸಿದೆ. ಎರಡು ದಿನಗಳ ಹಿಂದೆಯಷ್ಟೇ ಗುಜರಾತ್ನ (Gujarat) ಸೂರತ್ ಜಿಲ್ಲೆಯಲ್ಲೂ 3.8 ತೀವ್ರತೆಯ ಭೂಕಂಪನ ದಾಖಲಾಗಿತ್ತು.
ಅಫ್ಘಾನ್ನಲ್ಲೂ ಭೂಕಂಪನ: ಇಂದು (ಫೆ.13) ಬೆಳಗ್ಗೆ ಅಫ್ಘಾನಿಸ್ತಾನದ (Afghanistan) ಫೈಜಾಬಾದ್ನಲ್ಲಿಯೂ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಇಲ್ಲಿನ ಈಶಾನ್ಯ ನಗರವಾದ ಫೈಜಾಬಾದ್ನ ಆಗ್ನೇಯಕ್ಕೆ 100 ಕಿಮೀ ದೂರದಲ್ಲಿ ಭೂಕಂಪನ ಉಂಟಾಗಿದೆ. ಬೆಳಗ್ಗೆ 6:47ರ ಸುಮಾರಿಗೆ 135 ಕಿಮೀ ಆಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಅಂಕಾರಾ: 9 ವರ್ಷ ವಯಸ್ಸಿನ ಬಾಲಕನೊಬ್ಬ, ತಾನು ಕೂಡಿಟ್ಟಿದ್ದ ಹಣವನ್ನು ಟರ್ಕಿ ಭೂಕಂಪದಿಂದ (Turkey Earthquake) ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗಾಗಿ ನೀಡಿ ಗಮನ ಸೆಳೆದಿದ್ದಾನೆ. ಕಳೆದ ವರ್ಷ ಈ ಬಾಲಕನು ಸಹ ಭೂಕಂಪಕ್ಕೆ ಸಿಲುಕಿ ಬದುಕುಳಿದಿದ್ದ.
ಕಳೆದ ವರ್ಷ ನವೆಂಬರ್ನಲ್ಲಿ ವಾಯುವ್ಯ ಡಜ್ ಪ್ರಾಂತ್ಯದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದ ಸಂದರ್ಭದಲ್ಲಿ ಬಾಲಕನನ್ನು ರಕ್ಷಿಸಲಾಗಿತ್ತು. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರೆಸಿಡೆನ್ಸಿ (ಎಎಫ್ಎಡಿ) ಸ್ಥಾಪಿಸಿದ್ದ ಟೆಂಟ್ನಲ್ಲಿ ಬಾಲಕನ ಆರೈಕೆ ಮಾಡಲಾಗಿತ್ತು. ಇದನ್ನೂ ಓದಿ: PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..
9-year-old Alparslan Efe Demir has donated his entire piggy bank savings to help people affected by #TurkeyEarthquake
ಭೂಕಂಪದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡುವ ಇಂಗಿತವನ್ನು ಬಾಲಕ ತನ್ನ ತಾಯಿಯೊಂದಿಗೆ ವ್ಯಕ್ತಪಡಿಸಿದ್ದ. ತಾನು ಕೂಡಿಟ್ಟಿದ್ದ ಹಣವನ್ನು ಸಂತ್ರಸ್ತರಿಗಾಗಿ ನೀಡಿದ್ದಾನೆ. “ಡಜ್ನಲ್ಲಿ ಭೂಕಂಪವಾದಾಗ ನಾನು ತುಂಬಾ ಹೆದರುತ್ತಿದ್ದೆ. ನಮ್ಮ ಅನೇಕ ನಗರಗಳಲ್ಲಿ ಉಂಟಾಗುವ ಭೂಕಂಪನದ ಬಗ್ಗೆ ಕೇಳಿದಾಗ ನನಗೆ ಅದೇ ಭಯವಿತ್ತು. ಅದಕ್ಕೆ ಹಿರಿಯರು ಕೊಡುವ ಪಾಕೆಟ್ ಮನಿಯನ್ನು ಅಲ್ಲಿನ ಮಕ್ಕಳಿಗೆ ಕಳುಹಿಸಲು ನಿರ್ಧರಿಸಿದೆ” ಎಂದು ಬಾಲಕ ತಿಳಿಸಿದ್ದಾನೆ.
“ನಾನು ಚಾಕೊಲೇಟ್ ಖರೀದಿಸದಿದ್ದರೂ ಪರವಾಗಿಲ್ಲ. ಅಲ್ಲಿನ ಮಕ್ಕಳು ಚಳಿ ಮತ್ತು ಹಸಿವಿನಿಂದ ಇರಬಾರದು. ಅಲ್ಲಿನ ಮಕ್ಕಳಿಗೆ ನನ್ನ ಬಟ್ಟೆ, ಆಟಿಕೆಗಳನ್ನು ಕಳುಹಿಸುತ್ತೇನೆ” ಎಂದು ಬಾಲಕ ಹೇಳಿದ್ದಾನೆ. ಇದನ್ನೂ ಓದಿ: ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ವಿನಾಶಕಾರಿ ಭೂಕಂಪದಿಂದ ಈವರೆಗೆ 28,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಕರ್ತರು ಕೊರೆವ ಚಳಿಯ ನಡುವೆಯೂ, ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರ ರಕ್ಷಣೆ ಕಾರ್ಯ ನಡೆಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ತರಗೆಲೆಯಂತೆ ಉದುರಿದ ಕಟ್ಟಡಗಳು. ಒಂದೆಡೆ ಅವಶೇಷಗಳಡಿ ಸಿಲುಕಿರುವ ಸಾವಿರಾರು ಜೀವಗಳ ಚೀತ್ಕಾರ. ಮತ್ತೊಂದೆಡೆ ತನ್ನವರನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಜನ. ಮಗದೊಂದೆಡೆ ಅವಶೇಷಗಳಡಿಯೇ ಸಮಾಧಿಯಾದ ಜೀವಗಳು. ಸೂರು ಕಳೆದುಕೊಂಡು ಬೀದಿಪಾಲಾದ ಬದುಕು. ಹೆತ್ತವರ ಕಳೆದುಕೊಂಡು ಅನಾಥರಾದ ಮಕ್ಕಳ ಆಕ್ರಂದನ.. ಈ ಕರುಣಾಜನಕ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸದೇ ಇರದು. ಇದು ಟರ್ಕಿ, ಸಿರಿಯಾ ರಾಷ್ಟ್ರಗಳ ದುರಂತ ಕಥೆ. ಪ್ರಕೃತಿ ಮುನಿಸು ಅದೆಷ್ಟು ಭಯಾನಕ?
ಟರ್ಕಿ ಮತ್ತು ಸಿರಿಯಾ (Turkey-Syria earthquake) ರಾಷ್ಟ್ರಗಳು ಭೂಕಂಪಕ್ಕೆ ನಲುಗಿ ಹೋಗಿವೆ. ಭೀಕರ ಭೂಕಂಪದಿಂದಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈವರೆಗೆ ಸುಮಾರು 25,000 ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಭೂಕಂಪಕ್ಕೆ ನೂರಾರು ಕಟ್ಟಡಗಳು ನೆಲಸಮಗೊಂಡಿವೆ. ಅವಶೇಷಗಳಡಿ ಜೀವಗಳ ಚೀತ್ಕಾರ ಕೇಳಿ ಬರುತ್ತಿದೆ. ಟರ್ಕಿ (Turkey) ಮತ್ತು ಸಿರಿಯಾದಲ್ಲಿ (Syria) ಅಕ್ಷರಶಃ ಸ್ಮಾಶನ ಸದೃಶ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF
ಕೇವಲ 11 ಗಂಟೆ ಅವಧಿಯಲ್ಲಿ 3 ಪ್ರಬಲ ಭೂಕಂಪ
1939ರಲ್ಲಿ ಟರ್ಕಿಯಲ್ಲೇ ಎರ್ಜಿಂಕನ್ನಲ್ಲಿ ಪ್ರಬಲ ಭೂಕಂಪ ಉಂಟಾಗಿತ್ತು. ಆ ವೇಳೆ 33,000 ಮಂದಿ ಬಲಿಯಾಗಿದ್ದರು. ಅದಾದ ದಶಕಗಳ ಬಳಿಕ ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪ ಇದಾಗಿದೆ. ಫೆ.6 ರಂದು ದಕ್ಷಿಣ ಟರ್ಕಿ ಪ್ರಾಂತ್ಯದ ಒಸ್ಮಾನಿಯೆದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತು. ಮತ್ತೆ 2ನೇ ಭೂಕಂಪವು ಮಧ್ಯಾಹ್ನದ ವೇಳೆಗೆ ಸಂಭವಿಸಿತು. ಆಗ ತೀವ್ರತೆ 7.5 ರಷ್ಟು ದಾಖಲಾಯಿತು. ಪುನಃ ಸಂಜೆ ವೇಳೆಗೆ 6.0 ತೀವ್ರತೆಯ ಮತ್ತೊಂದು ಭೂಕಂಪ ಉಂಟಾಯಿತು. ಇದೇ ವೇಳೆ ಸಿರಿಯಾದಲ್ಲೂ ಭೂಕಂಪ ಸಂಭವಿಸಿತು. ಕೇವಲ 11 ಗಂಟೆಗಳ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ ಭೂಕಂಪವಾಗಿ ಅಪಾರ ಪ್ರಮಾಣದ ಜೀವ, ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಯಿತು.
ಭೂಕಂಪಗಳ ತೀವ್ರತೆ ಅಳೆಯುವುದು ಹೇಗೆ?
ರಿಕ್ಟರ್ ಮಾಪಕ ಬಳಸಿ ಭೂಕಂಪಗಳ ತೀವ್ರತೆಯನ್ನು ಅಳೆಯಲಾಗುತ್ತದೆ. 1 ರಿಂದ 10ರ ಪ್ರಮಾಣದಲ್ಲಿ ಭೂಕಂಪನಗಳನ್ನು ಅಳೆಯುತ್ತಾರೆ. ಮೊದಲ 3ರ ತೀವ್ರತೆಯ ಭೂಕಂಪವು ಅಷ್ಟಾಗಿ ಅನುಭವಕ್ಕೆ ಬರುವುದಿಲ್ಲ. 4ರ ತೀವ್ರತೆಯಲ್ಲಿ ಕಿಟಕಿಗಳು ಕಂಪಿಸಬಹುದು. 6ರ ತೀವ್ರತೆಯ ಭೂಕಂಪವನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಇದಕ್ಕೂ ಹೆಚ್ಚಿನ ಪ್ರಮಾಣದ ಭೂಕಂಪಗಳು ಭಾರೀ ಪ್ರಮಾಣದ ಹಾನಿ, ವ್ಯಾಪಕ ವಿನಾಶವನ್ನು ಉಂಟು ಮಾಡಬಹುದು. ಈಗ ಟರ್ಕಿಯಲ್ಲಿ ಆಗಿರುವುದು 7.8 ತೀವ್ರತೆಯ ಭೂಕಂಪ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಜೀವ, ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ.
ಟರ್ಕಿಯಲ್ಲೇ ಭೂಕಂಪ ಹೆಚ್ಚು ಯಾಕೆ?
ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ರಾಷ್ಟ್ರಗಳಲ್ಲಿ ಟರ್ಕಿ ಪ್ರಮುಖವಾದದ್ದು. ಕಾರಣ, ಟರ್ಕಿ ಹಲವಾರು ಭೂದೋಷ ಇರುವಂತಹ ರೇಖೆಗಳ ಮೇಲೆ ಕುಳಿತಿದೆ. ಭೂಮಿಯ ಅಡಿಯಲ್ಲಿ ಹಲವಾರು ಪದರಗಳಿದ್ದು, ಇವನ್ನು ಟೆಕ್ಟಾನಿಕ್ ಪ್ಲೇಟ್ಗಳು ಎನ್ನುತ್ತಾರೆ. ಇವುಗಳ ಚಲನೆಯಿಂದ ಭೂಕಂಪಗಳು ಸಂಭವಿಸುತ್ತವೆ. ಟರ್ಕಿಯ ಹೆಚ್ಚು ಭೂಪ್ರದೇಶವು ಅನಾಟೋಲಿಯನ್ ಟೆಕ್ಟಾನಿಕ್ ಫಲಕದಲ್ಲಿದೆ. ಇದು ಯುರೇಷಿಯನ್ ಮತ್ತು ಆಫ್ರಿಕನ್ ಎಂಬ 2 ಪ್ರಮುಖ ಪ್ಲೇಟ್ಗಳು ಹಾಗೂ ಅರೇಬಿಯನ್ ಪ್ಲೇಟ್ಗಳ ನಡುವೆ ಇದೆ. ಇದನ್ನೂ ಓದಿ: ಟರ್ಕಿ ಭೀಕರ ಭೂಕಂಪದಲ್ಲಿ ಸಿಲುಕಿದ್ದ ಬೆಂಗಳೂರು ಮೂಲದ ಕಂಪನಿಯ ಟೆಕ್ಕಿ ಸಾವು – ಅವಶೇಷಗಳಡಿ ಮೃತದೇಹ ಪತ್ತೆ
ಟರ್ಕಿಯ ಭೂಪ್ರದೇಶ ಭಾಗದ ಕೆಳಗಿರುವ ಅನಾಟೋಲಿಯನ್ ಟೆಕ್ಟಾನಿಕ್ ಪ್ಲೇಟ್ ಪ್ರದಕ್ಷಿಣಾಕಾರಕ್ಕೆ ವಿರುದ್ಧವಾಗಿ ಚಲಿಸುತ್ತದೆ. ಅದೇ ಸಮಯಕ್ಕೆ ಅರೇಬಿಯನ್ ಪ್ಲೇಟ್ ಎಂಬುದು ಅನಾಟೋಲಿಯನ್ ಪ್ಲೇಟ್ ಅನ್ನು ತಳ್ಳುತ್ತದೆ. ತಿರುಗುವ ಅನಾಟೋಲಿಯನ್ ಪ್ಲೇಟ್ ಅನ್ನು ಅರೇಬಿಯನ್ ಪ್ಲೇಟ್ ತಳ್ಳಿದಾಗ, ಅದು ಯುರೇಷಿಯನ್ ಫಲಕದೊಂದಿಗೆ ಡಿಕ್ಕಿ ಹೊಡೆಯುತ್ತದೆ. ಈ ಫಲಕಗಳ ಘರ್ಷಣೆಯು ಭೂಕಂಪಗಳನ್ನು ಉಂಟು ಮಾಡುತ್ತದೆ. ಇಂತಹ 4 ಟೆಕ್ಟಾನಿಕ್ ಫಲಕಗಳು ಸೇರುವಲ್ಲಿ ಟರ್ಕಿ ನೆಲೆಗೊಂಡಿದೆ. ಆದ್ದರಿಂದಲೇ ಇಲ್ಲಿ ಅತಿ ಹೆಚ್ಚು ಭೂಕಂಪಗಳು ಸಂಭವಿಸುತ್ತವೆ. ಇಲ್ಲಿನ ಭೂಕಂಪ ತೀವ್ರತೆ ಪ್ರಮಾಣ ಹಾನಿಕಾರಕವಾಗಿರುತ್ತದೆ.
ಮಿಸೌರಿ ವಿಶ್ವವಿದ್ಯಾಲಯದ ಭೂಕಂಪಶಾಸ್ತ್ರಜ್ಞ ಎರಿಕ್ ಸ್ಯಾಂಡ್ವೋಲ್ ತಿಳಿಸಿರುವಂತೆ, ಟರ್ಕಿಯಲ್ಲಿ ಸಂಭವಿಸಿರುವುದು ಸ್ಟ್ರೈಕ್-ಸ್ಲಿಪ್ ಭೂಕಂಪ (ಅಲ್ಲಿ ಎರಡು ಟೆಕ್ಟಾನಿಕ್ ಪ್ಲೇಟ್ಗಳು ಪರಸ್ಪರ ವಿರುದ್ಧ ದಿಕ್ಕಿಗೆ ಜಾರುತ್ತವೆ). ಈ ಸಂದರ್ಭದಲ್ಲಿ ಭೂಮಿ ವಿವಿಧ ಭಾಗಗಳಾಗಿ ವಿಂಗಡಣೆಯಾಗುತ್ತದೆ. ಈ ಭಾಗಗಳು ಭೂದೋಷ ರೇಖೆಗಳಲ್ಲಿ ಸಂಧಿಸುತ್ತವೆ. ಅಲ್ಲಿ ಪ್ಲೇಟ್ಗಳು ಒಂದಕ್ಕೊಂದು ವೇಗವಾಗಿ ಡಿಕ್ಕಿ ಹೊಡೆಯುತ್ತವೆ. ಈ ವೇಳೆ ಹೆಚ್ಚಿನ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Turkey, Syria Earthquakeː ವರ್ಲ್ಡ್ ಬ್ಯಾಂಕ್ನಿಂದ 1.78 ಬಿಲಿಯನ್ ಡಾಲರ್ ನೆರವು ಘೋಷಣೆ
ಈ ಭೂಕಂಪ ಏಕೆ ವಿನಾಶಕಾರಿಯಾಗಿತ್ತು?
ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಜಾಜಿಯಾಂಟೆಪ್ ಬಳಿ ಪ್ರಬಲ ಭೂಕಂಪ ಸಂಭವಿಸಿದೆ. ಇದು ಹೆಚ್ಚು ಜನನಿಬಿಡ ಪ್ರದೇಶವಾಗಿತ್ತು. ಅಷ್ಟೇ ಅಲ್ಲ, ಈಗ ಭೂಕಂಪಕ್ಕೆ ಒಳಗಾದ ಈ ಪ್ರದೇಶಗಳು ದುರ್ಬಲ ಕಟ್ಟಡಗಳಿಗೆ ನೆಲೆಯಾಗಿದೆ. ದಕ್ಷಿಣ ಟರ್ಕಿಯ ಈ ಪ್ರದೇಶವು ಅನೇಕ ಹಳೆಯ ಎತ್ತರದ ಕಟ್ಟಡಗಳನ್ನು ಹೊಂದಿದೆ ಎಂದು ಯುಎಸ್ಜಿಎಸ್ ಸ್ಟ್ರಕ್ಚರಲ್ ಇಂಜಿನಿಯರ್ ಕಿಶೋರ್ ಜೈಸ್ವಾಲ್ ಹೇಳಿದ್ದಾರೆ.
ಟರ್ಕಿ ಭೂಕಂಪ ಇತಿಹಾಸ
1939 ರಲ್ಲೂ ಟರ್ಕಿಯ ಎರ್ಜಿಂಕನ್ನಲ್ಲಿ 7.8 ರ ಪ್ರಮಾಣದಲ್ಲಿ ಉಂಟಾದ ಕಂಪನದಿಂದಾಗಿ 33,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. 1999 ರಲ್ಲಿ ಟರ್ಕಿಯ ಇಜ್ಮಿತ್ನಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 17,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 1784 ರಂದು ಎರ್ಜಿಂಕನ್ನಲ್ಲಿ ಉಂಟಾಗಿದ್ದ 7.6 ತೀವ್ರತೆ ಭೂಕಂಪಕ್ಕೆ ಸುಮಾರು 5,000 ರಿಂದ 10,000 ಜನರು ಬಲಿಯಾಗಿದ್ದರು. ಇದೇ ರೀತಿ 1509ರಿಂದ ಈವರೆಗೂ ಹಲವಾರು ಬಾರಿ ಟರ್ಕಿಯಲ್ಲಿ ಭೂಕಂಪ ಸಂಭವಿಸಿದ್ದು, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದನ್ನೂ ಓದಿ: Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ
ಇತರೆ ರಾಷ್ಟ್ರಗಳಲ್ಲಿ ಸಂಭವಿಸಿದ ಭೀಕರ ಭೂಕಂಪಗಳ ಪಟ್ಟಿ
1999ರ ಆಗಸ್ಟ್ನಲ್ಲಿ ಪಶ್ಚಿಮ ಟರ್ಕಿಯಲ್ಲಿ ಸಂಭವಿಸಿದ್ದ 7.6 ತೀವ್ರತೆಯ ಭೀಕರ ಭೂಕಂಪದಲ್ಲಿ ಸುಮಾರು 17,000 ಮಂದಿ ಸಾವನ್ನಪ್ಪಿದ್ದರು. 2010ರ ಮಾರ್ಚ್ನಲ್ಲಿ ಮತ್ತೆ ಪಶ್ಚಿಮ ಟರ್ಕಿಯಲ್ಲಿ ಉಂಟಾಗಿದ್ದ 6 ತೀವ್ರತೆ ಭೂಕಂಪಕ್ಕೆ 51 ಮಂದಿ ಮೃತಪಟ್ಟಿದ್ದರು. 2021ರ ಅಕ್ಟೋಬರ್ನಲ್ಲಿ ಪೂರ್ವ ಟರ್ಕಿಯ ವ್ಯಾನ್ ಪ್ರಾಂತ್ಯವು ಇರಾನ್ನ ಗಡಿಗೆ ಹತ್ತಿರದ ಪ್ರದೇಶದಲ್ಲಿ ಉಂಟಾದ 7.2 ತೀವ್ರತೆ ಭೂಕಂಪಕ್ಕೆ 138 ಮಂದಿ ಬಲಿಯಾಗಿದ್ದರು. 2020ರ ಅಕ್ಟೋಬರ್ನಲ್ಲಿ ಏಜಿಯನ್ ಸಮುದ್ರದ ಗ್ರೀಕ್ ದ್ವೀಪ ಸಮೋಸ್ನಲ್ಲಿ ಸಂಭವಿಸಿದ 7 ತೀವ್ರತೆಯ ಭೂಕಂಪದಲ್ಲಿ 24 ಮಂದಿ ಸಾವನ್ನಪ್ಪಿದ್ದರು.
Live Tv
[brid partner=56869869 player=32851 video=960834 autoplay=true]
ಅಂಕಾರಾ: ಟರ್ಕಿಯಲ್ಲಿ (Turkey Syria Earthquake) ಸಂಭವಿಸಿದ ಭೀಕರ ಭೂಕಂಪದಲ್ಲಿ ಸಿಲುಕಿದ್ದ ಬೆಂಗಳೂರು ಮೂಲದ ಕಂಪನಿಯ ಟೆಕ್ಕಿ (Bengaluru Techie) ಮೃತದೇಹ ಅವಶೇಷಗಳಡಿ ಪತ್ತೆಯಾಗಿದೆ. ಶನಿವಾರ ಬೆಳಗ್ಗೆಯಷ್ಟೆ ವಿಜಯ್ ಕುಮಾರ್ ಪಾಸ್ಪೋರ್ಟ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಅವರ ಮೃತದೇಹ ಪತ್ತೆಯಾಗಿದೆ.
ಡ್ರೆಹಾಡೂನ್ ಮೂಲದ ವಿಜಯ್ ಕುಮಾರ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೃತದೇಹ ಶನಿವಾರ ಮುಂಜಾನೆ ಪೂರ್ವ ಅನಟೋಲಿಯಾ ಪ್ರದೇಶದ ಮಲತ್ಯಾ ನಗರದ 24 ಫ್ಲೋರ್ ಅವಸಾರ್ ಹೋಟೆಲ್ನ ಅವಶೇಷಗಳಡಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಟ್ವೀಟ್ ಮೂಲಕ ಭಾರತದ ರಾಯಭಾರ ಕಚೇರಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF
ವಿಜಯಕುಮಾರ್ ಕೈಯಲ್ಲಿದ್ದ ಟ್ಯಾಟೊ ಮೂಲಕ ಮೃತದೇಹ ಗುರುತು ಪತ್ತೆಯಾಗಿದೆ. ಉತ್ತರಾಖಂಡ್ನಲ್ಲಿರುವ ಕುಟುಂಬ ಸದಸ್ಯರು ರಕ್ಷಣಾ ಸ್ಥಳದಿಂದ ಕಳುಹಿಸಲಾದ ಪೋಟೋದ ಮೂಲಕ ವಿಜಯ್ ಕುಮಾರ್ ಎಡಗೈಯಲ್ಲಿದ್ದ ಟ್ಯಾಟೋ ಮೂಲಕ ಗುರುತು ಸಿಕ್ಕಿದೆ.
2023 ರ ಜನವರಿ 23 ರಂದು ವಿಜಯ್ ಕುಮಾರ್ ಟರ್ಕಿಗೆ ಹೋಗಿದ್ದರು. ಟರ್ಕಿಯ ಮಾಲತ್ಯದಲ್ಲಿರುವ ಅವಸರ್ ಹೋಟೆಲ್ನ ಎರಡನೇ ಮಹಡಿಯಲ್ಲಿ ತಂಗಿದ್ದರು. ಹೋಟೆಲ್ಗೆ ಸಮೀಪವಿರುವ ಗ್ಯಾಸ್ ಪೈಪ್ ಅಳವಡಿಕೆಯ ಯೋಜನೆಯನ್ನು ಪೂರ್ಣಗೊಳಿಸಿ ಮುಂದಿನ ವಾರ ಭಾರತಕ್ಕೆ ಮರಳಬೇಕಿತ್ತು. ಉತ್ತರಾಖಂಡ್ನ ಪೌರಿ ಗರ್ವಾಲ್ನ ಸ್ಥಳೀಯರು ಮತ್ತು ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ಬೆಂಗಳೂರು ಮೂಲದ ಆಕ್ಸಿಪ್ಲಾಂಟ್ಸ್ ಇಂಡಿಯಾದಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಕೆ ಎಂಜಿನಿಯರ್ ಆಗಿ ಕುಮಾರ್ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಟರ್ಕಿ ಭೂಕಂಪ – ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಪಾಸ್ಪೋರ್ಟ್ ಪತ್ತೆ
ವಿಜಯ್ ಕುಮಾರ್ಗೆ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಉತ್ತರಾಖಂಡ್ನಲ್ಲಿರುವ ತಮ್ಮ ಮನೆಯಿಂದ ಬೆಂಗಳೂರು ಮೂಲದ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಂನಲ್ಲಿ ಕೆಲಸ ಮಾಡುತ್ತಿದ್ದರು. ಟರ್ಕಿಯ ಕಂಪನಿಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಜನವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದಿದ್ದರು. ಬಳಿಕ ಜನವರಿ 23 ರಂದು ದೆಹಲಿಯಿಂದ ಇಸ್ತಾಂಬುಲ್ ಮೂಲಕ ಟರ್ಕಿಯ ಮಲತ್ಯಾಗೆ ಹೋಗಿದ್ದರು.
Live Tv
[brid partner=56869869 player=32851 video=960834 autoplay=true]
ಅಂಕಾರ: ಸರಣಿ ಭೂಕಂಪಗಳಿಂದ ತತ್ತರಿಸುತ್ತಿರುವ ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶದ ನೆರವಿಗೆ ವಿಶ್ವಬ್ಯಾಂಕ್ (World Bank) ಧಾವಿಸಿದ್ದು, 1.78 ಬಿಲಿಯನ್ ಡಾಲರ್ ನೆರವು ಘೋಷಣೆ ಮಾಡಿದೆ.
ಈ ಬೆನ್ನಲ್ಲೇ ಅಮೆರಿಕ (USA) ಸಹ 70.19 ಕೋಟಿ ರೂ. ನೆರವು ಘೋಷಣೆ ಮಾಡಿದೆ. ಲಕ್ಷಾಂತರ ಜನರಿಗೆ ತುರ್ತಾಗಿ ಅಗತ್ಯವಿರುವ ಆಹಾರ, ಆಶ್ರಯ, ಆರೋಗ್ಯ ಸೇವೆಗಳನ್ನು ಪೂರೈಸಲು ನೆರವು ನೀಡಲಾಗುತ್ತಿದೆ ಎಂದು ಹೇಳಿದೆ.
ಸರಣಿ ಭೂಕಂಪಗಳಿಂದ (Earthquake) ತತ್ತರಿಸುತ್ತಿರುವ ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಅಮೆರಿಕ, ರಷ್ಯಾ, ಚೀನಾ ಭಾರತದ ರಕ್ಷಣಾ ತಂಡಗಳು ಭಾಗಿಯಾಗಿವೆ. ಬದುಕುಳಿದರ ಶೋಧಕ್ಕಾಗಿ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ
ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಥರ್ಮಲ್ ಕ್ಯಾಮೆರಾಗಳನ್ನ ಹೊಂದಿರುವ ಚಿಕ್ಕ ವಾಹನಗಳಿಂದ ಮೈಕ್ರೋಫೋನ್ ಕಳುಹಿಸಿ ಬದುಕಿರುವ ಜನರನ್ನು ಹುಡುಕಲಾಗುತ್ತಿದೆ. ಡ್ರೋನ್ (Drone) ಕ್ಯಾಮೆರಾಗಳು ಮತ್ತು ರೋಬೋಟ್ ಗಳನ್ನು ಬಳಸಲಾಗುತ್ತಿದೆ. ಸಣ್ಣ, ಅತಿಸಣ್ಣ ಪ್ರದೇಶಗಳಲ್ಲಿ ಆಕ್ಸಿಜನ್ ಪೈಪ್ಗಳನ್ನ (Oxygen Pipe) ಕಳುಹಿಸಿ ಉಸಿರಾಟದ ಮೂಲಕ ಜನರ ಇರುವಿಕೆಯನ್ನು ಖಚಿತಪಡಿಸಕೊಳ್ಳಲಾಗುತ್ತಿದೆ. ಗುರುವಾರ 44 ಗಂಟೆಗಳಿಂದ ಕಟ್ಟಡದ ಅವಶೇಷಗಳ ಅಡಿಯಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.
ಮೃತರ ಸಂಖ್ಯೆ 21 ಸಾವಿರಕ್ಕೆ ಏರಿಕೆ: ಈ ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದೆ. ಸದ್ಯದಮಟ್ಟಿಗೆ ಟರ್ಕಿಯಲ್ಲಿ 17,674 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 3,377 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 70 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಸುಮಾರು 3 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಕಚ್ಚಿವೆ.
Live Tv
[brid partner=56869869 player=32851 video=960834 autoplay=true]
ಅಂಕಾರಾ/ನವದೆಹಲಿ: ಸರಣಿ ಭೂಕಂಪಗಳಿಂದ (Earthquake) ತತ್ತರಿಸುತ್ತಿರುವ ಟರ್ಕಿಯಲ್ಲಿ (Turkey) ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಅಮೆರಿಕ (USA), ರಷ್ಯಾ (Russia), ಚೀನಾ (China) ಭಾರತದ ರಕ್ಷಣಾ ತಂಡಗಳು ಭಾಗಿಯಾಗಿವೆ. ಬದುಕುಳಿದರ ಶೋಧಕ್ಕಾಗಿ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ.
ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಥರ್ಮಲ್ ಕ್ಯಾಮೆರಾಗಳನ್ನ ಹೊಂದಿರುವ ಚಿಕ್ಕ ವಾಹನಗಳಿಂದ ಮೈಕ್ರೋಫೋನ್ (Microphone) ಕಳುಹಿಸಿ ಬದುಕಿರುವ ಜನರನ್ನು ಹುಡುಕಲಾಗುತ್ತಿದೆ. ಡ್ರೋನ್ ಕ್ಯಾಮರಾಗಳು (Drone Camera) ಮತ್ತು ರೊಬೋಟ್ ಗಳನ್ನು ಬಳಸಲಾಗುತ್ತಿದೆ. ಸಣ್ಣ, ಅತಿಸಣ್ಣ ಪ್ರದೇಶಗಳಲ್ಲಿ ಆಕ್ಸಿಜನ್ ಪೈಪ್ಗಳನ್ನ (Oxygen Pipe) ಕಳುಹಿಸಿ ಉಸಿರಾಟದ ಮೂಲಕ ಜನರ ಇರುವಿಕೆಯನ್ನು ಖಚಿತಪಡಿಸಕೊಳ್ಳಲಾಗುತ್ತಿದೆ. ಗುರುವಾರ 44 ಗಂಟೆಗಳಿಂದ ಕಟ್ಟಡದ ಅವಶೇಷಗಳ ಅಡಿಯಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.
ಟರ್ಕಿ ತಲುಪಿದ ಭಾರತದ 6ನೇ ವಿಮಾನ: ಟರ್ಕಿಗೆ ಭಾರತದ ನೆರವು ಮುಂದುವರಿದಿದೆ. ಗುರುವಾರ ವಾಯುಸೇನೆಯ 6ನೇ ವಿಮಾನ ಹೆಚ್ಚುವರಿ ವೈದ್ಯಕೀಯ ಸಾಮಾಗ್ರಿಗಳು ಹೊತ್ತು ತೆರಳಿದೆ. ಇದರಲ್ಲಿ 44 ಮಂದಿ ತಂತ್ರಜ್ಞರಿದ್ದು ಟರ್ಕಿಯಲ್ಲಿ ವೈದ್ಯಕೀಯ ನೆರವು ನೀಡಲಿದ್ದಾರೆ. ಇದಕ್ಕೂ ಮುನ್ನ ಎನ್ಡಿಆರ್ಎಫ್ (NDRF) ತಂಡಗಳು ಹಾಗೂ ವೈದ್ಯರನ್ನ ಭಾರತ ಕಳುಹಿಸಿತ್ತು. ಇದನ್ನೂ ಓದಿ: Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ
ಬೆಂಗಳೂರು ಮೂಲದ ಟೆಕ್ಕಿ ಸುಳಿವಿಲ್ಲ: ಟರ್ಕಿಯಲ್ಲಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಟೆಕ್ಕಿ (Bengaluru Techie) ಸುಳಿವು ಸಿಕ್ಕಿಲ್ಲ. ಮಾಹಿತಿಗಳ ಪ್ರಕಾರ ಡೆಹ್ರಾಡೂನ್ ಮೂಲದ ವಿಜಯಕುಮಾರ್ ಎಂದು ತಿಳಿದುಬಂದಿದೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಪ್ಲ್ಯಾನೆಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವಿಜಯ್ ಕುಮಾರ್, ಕಳೆದವಾರ ಟರ್ಕಿಯ ಪ್ರಮುಖ ಕೈಗಾರಿಕಾ ಅನಿಲ ಪೂರೈಕೆ ಕಂಪನಿಯಾದ ಕುಲ್ಕು ಗಾಜ್ ಎಂಬ ಕಂಪನಿಗೆ ಕರಗಿದ ಅಸಿಟಿಲೀನ್ ಗ್ಯಾಸ್ ಪ್ಲಾಂಟ್ನ ನಿರ್ಮಾಣ ಮತ್ತು ಕಾರ್ಯಾರಂಭ ಹಿನ್ನೆಲೆ ಟರ್ಕಿಗೆ ತೆರಳಿದ್ದರು. ಸದ್ಯ ಅವರ ಹುಡುಕಾಟವೂ ಮುಂದುವರಿದಿದೆ.
Live Tv
[brid partner=56869869 player=32851 video=960834 autoplay=true]
ಅಂಕಾರ/ಬೆಂಗಳೂರು: ಭೀಕರ ಭೂಕಂಪದಿಂದಾಗಿ (Earthquake) ನಲುಗಿರುವ ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶಗಳಲ್ಲಿ ಇಲ್ಲಿಯವರೆಗೆ ಸಾವಿನ ಸಂಖ್ಯೆ 15 ಸಾವಿರಕ್ಕೆ ಏರಿಕೆಯಾದೆ. ಈ ನಡುವೆ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ (Government Of Karnataka) ಮುಂದಾಗಿದೆ.
ಟರ್ಕಿ, ಸಿರಿಯಾ ಅವಘಡದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ನೋಡೆಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಟರ್ಕಿ, ಸಿರಿಯಾ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕಿಸಿ ಕನ್ನಡಿಗರ ಮಾಹಿತಿ ಪಡೆಯಲು ಸರ್ಕಾರದಿಂದ ಸೂಚನೆ ನೀಡಿದೆ.
ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟಿಕ್ಕಿಯಲ್ಲ: ಟರ್ಕಿಯಲ್ಲಿ ಸಿಲುದ್ದಾರೆ ಎನ್ನಲಾದ ಟೆಕ್ಕಿ ಬೆಂಗಳೂರಿನ (Bengaluru Techie) ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆತ ಬೇರೆ ರಾಜ್ಯದಿಂದ ಬಂದು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಅದೇ ಕಂಪನಿಯಿಂದ ಬ್ಯುಸಿನೆಸ್ ಟ್ರಿಪ್ಗಾಗಿ ಟರ್ಕಿಗೆ ತೆರಳಿದ್ದ, ಕಳೆದ ವಾರವಷ್ಟೇ ಬೆಂಗಳೂರು ಕಂಪನಿ ಪರವಾಗಿ ಪ್ರವಾಸ ಕೈಗೊಂಡಿದ್ದ ಎನ್ನಲಾಗಿದೆ.
ಇದೇ ತಿಂಗಳ ಫೆಬ್ರವರಿ 6ರ ನಸುಕಿನ ಜಾವದಲ್ಲಿ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಕಳೆದ ಮೂರು ದಿನಗಳಲ್ಲಿ 5 ಬಾರಿ ಸತತವಾಗಿ ಭೂಕಂಪ ಸಂಭವಿಸಿದ್ದು ಸಾವಿನ ಸಂಖ್ಯೆ 15 ಸಾವಿರಕ್ಕೆ ತಲುಪಿದೆ. ಈಗಾಗಲೇ ವಿಶ್ವಸಂಸ್ಥೆ ಸಾವಿನ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗಬಹುದು ಎಂದು ಎಚ್ಚರಿಕೆ ನೀಡಿದೆ.
Live Tv
[brid partner=56869869 player=32851 video=960834 autoplay=true]
ಅಂಕಾರ: ಟರ್ಕಿ (Turkey) ಮತ್ತು ಸಿರಿಯಾ (Syria) ಭಾರೀ ಭೂಕಂಪದಿಂದ ನಲುಗಿ ಹೋಗಿದೆ. ಸಾವಿರಾರು ಮಂದಿ ಸಾವನ್ನಪ್ಪಿದ್ದು, ಹಲವರು ಸಾವು- ನೋವಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಅಚ್ಚರಿಯ ಪ್ರಸಂಗವೊಂದು ನಡೆದಿದೆ.
ವೀಡಿಯೋದಲ್ಲಿ ವ್ಯಕ್ತಿಯೊಬ್ಬ ನವಜಾತ ಶಿಶುವನ್ನು ಎತ್ತಿಕೊಂಡು ಓಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ವೀಡಿಯೊವನ್ನು ಸಿರಿಯಾದ ಅಲೆಪ್ಪೊದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ರಕ್ಷಿಸಲ್ಪಟ್ಟ ನಂತರ ನವಜಾತ ಗಂಡು ಶಿಶು (Boy Baby) ಬದುಕುಳಿದಿದೆ. ಆದರೆ ಅವಶೇಷಗಳ ಅಡಿಯಲ್ಲಿ ಜನ್ಮ ನೀಡಿದ ತಾಯಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಸೋಮವಾರ ಮುಂಜಾನೆ ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು 2,500ಕ್ಕೂ ಹೆಚ್ಚು ಜನರ ಹತ್ಯೆಗೆ ಕಾರಣವಾಯಿತು. ಟರ್ಕಿ ಸರ್ಕಾರದ ಪ್ರಕಾರ, ಕುಸಿದ ಕಟ್ಟಡಗಳ ಅವಶೇಷಗಳ ನಡುವೆ ರಕ್ಷಕರು ಬದುಕುಳಿದವರನ್ನು ಹುಡುಕುವುದನ್ನು ಮುಂದುವರಿಸಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ದೇಶವು ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿತು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಟರ್ಕಿಯಲ್ಲಿ ಸತತವಾಗಿ 5 ಭೂಕಂಪ (Earthquak) ಸಂಭವಿಸಿದ್ದು, ಸರಣಿ ಭೂಕಂಪನದ ಹೊಡೆತಕ್ಕೆ ಸಿಲುಕಿರುವ ಟರ್ಕಿ ಮತ್ತು ಸಿರಿಯಾ (Turkey – Syria) ನಾಮಾವಶೇಷವಾಗುತ್ತಿದೆ. ಜನರು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು, ಮೃತರ ಸಂಖ್ಯೆ 5,000ಕ್ಕೆ ಏರಿದೆ. ಈ ನಡುವೆ 15 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರ ಬೆಳಗ್ಗೆಯೂ 5.6 ಮತ್ತು 5.7 ತೀವ್ರತೆಯಲ್ಲಿ ಭೂಕಂಪನವಾದ ಬಳಿಕ ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ 5 ಸಾವಿರಕ್ಕೆ ಏರಿಕೆಯಾಗಿದೆ. ಗಾಯಾಳುಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಇತ್ತ ಕುಟುಂಬಸ್ಥರು ತಮ್ಮವರನ್ನ ಹುಡುಕಿ ಕೊಡುವಂತೆ ಕಣ್ಣೀರಿಡುತ್ತಿದ್ದಾರೆ. ಮಳೆ ಮತ್ತು ಹಿಮದ ವಾತಾವರಣ ರಕ್ಷಣಾ ಕಾರ್ಯಚರಣೆಗೆ ಭಾರೀ ತೊಂದರೆ ಉಂಟು ಮಾಡುತ್ತಿದ್ದು, ಸವಾಲಿನ ನಡುವೆ ಬದುಕಿಳಿದ ಜನರ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ಭೂಕಂಪನದ (Earthquak) ಬಗ್ಗೆ ಆಘಾತ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ (UN) 20,000ಕ್ಕೂ ಅಧಿಕ ಮಂದಿ ಸಾವನ್ನಪ್ಪಬಹುದು ಎಂದು ಅಂದಾಜು ಮಾಡಿದೆ. ಜೊತೆಗೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದೆ.
ಭಾರತದಿಂದ ಏನೇನು ನೆರವು?
ಭಾರತವೂ ಟರ್ಕಿಗೆ ನೆರವು ನೀಡಿದೆ. ಈಗಾಗಲೇ C-19 ವಿಶೇಷ ವಿಮಾನ (C19 Speical Flight) ಟರ್ಕಿ ತಲುಪಿದೆ. ಮೊದಲ ವಿಮಾನದಲ್ಲಿ ದೆಹಲಿ, ಕೋಲ್ಕತ್ತಾ, ಗಾಜಿಯಾಬಾದ್ ಮೂಲದಿಂದ 101 ಸಿಬ್ಬಂದಿಯನ್ನೊಳಗೊಂಡ ಎರಡು ತಂಡಗಳ ಕಳುಹಿಸಿದೆ. ಜೊತೆಗೆ ಭೂಕಂಪನ ಪರಿಹಾರ ಸಾಮಾಗ್ರಿಗಳು ಮತ್ತು ವಿಶೇಷ ತರಬೇತಿ ಹೊಂದಿದ ಶ್ವಾನ ದಳವನ್ನು ಕಳುಹಿಸಿದೆ. ಇದನ್ನೂ ಓದಿ: ಭಾರತದ ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು- ಇಂಟಲಿಜೆನ್ಸ್ ರಿಪೋರ್ಟ್
2ನೇ ವಿಮಾನ ಇನ್ನಷ್ಟೆ ಟರ್ಕಿ ತಲುಪಬೇಕಿದ್ದು ವಿಮಾನದಲ್ಲಿ, ಆಗ್ರಾ ಮೂಲದ ಆರ್ಮಿ ಫೀಲ್ಡ್ ಆಸ್ಪತ್ರೆಯು 89 ಸದಸ್ಯರ ವೈದ್ಯಕೀಯ ತಂಡ ಟರ್ಕಿಗೆ ರವಾನೆ ಮಾಡಿದೆ. ತಂಡದಲ್ಲಿ ಆರ್ಥೋಪೆಡಿಕ್ ಸರ್ಜಿಕಲ್ ತಂಡ, ಸಾಮಾನ್ಯ ಶಸ್ತ್ರಚಿಕಿತ್ಸಕ ತಜ್ಞರ ತಂಡ, ವೈದ್ಯಕೀಯ ತಜ್ಞರ ತಂಡಗಳು ಸೇರಿದಂತೆ ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ತಂಡಗಳನ್ನು ಒಳಗೊಂಡಿದೆ.
ಅಲ್ಲದೆ, 30 ಹಾಸಿಗೆಗಳ ವೈದ್ಯಕೀಯ ಸೌಲಭ್ಯವನ್ನು ಸ್ಥಾಪಿಸಲು ಸಿಬ್ಬಂದಿ, ಎಕ್ಸ್-ರೇ ಯಂತ್ರಗಳು, ವೆಂಟಿಲೇಟರ್ಗಳು, ಆಮ್ಲಜನಕ ಉತ್ಪಾದನಾ ಘಟಕ, ಕಾರ್ಡಿಯಾಕ್ ಮಾನಿಟರ್ಗಳು ಮತ್ತು ಸಂಬಂಧಿತ ಸಾಧನಗಳೊಂದಿಗೆ ಟರ್ಕಿಗೆ ಕಳುಹಿಸಿದೆ.
Live Tv
[brid partner=56869869 player=32851 video=960834 autoplay=true]