Tag: Turban

  • ಟರ್ಬನ್ ಬಿಚ್ಚಿಟ್ಟು, ಸನ್‌ಗ್ಲಾಸ್, ಜಾಕೆಟ್ ತೊಟ್ಟು ದೆಹಲಿ ಬೀದಿಯಲ್ಲಿ ಕಂಡುಬಂದ ಅಮೃತ್‌ಪಾಲ್ ಸಿಂಗ್

    ಟರ್ಬನ್ ಬಿಚ್ಚಿಟ್ಟು, ಸನ್‌ಗ್ಲಾಸ್, ಜಾಕೆಟ್ ತೊಟ್ಟು ದೆಹಲಿ ಬೀದಿಯಲ್ಲಿ ಕಂಡುಬಂದ ಅಮೃತ್‌ಪಾಲ್ ಸಿಂಗ್

    – ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿರೋ ಖಲಿಸ್ತಾನ್ ಹೋರಾಟಗಾರ

    ನವದೆಹಲಿ: ಪಂಜಾಬ್‌ನಿಂದ (Punjab) ಪರಾರಿಯಾಗಿ ಒಂದು ವಾರಕ್ಕೂ ಹೆಚ್ಚು ಕಾಲ ತಲೆಮರೆಸಿಕೊಂಡಿರುವ ಮೂಲಭೂತವಾದಿ ಸಿಖ್ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ (Amritpal Singh) ಇದೀಗ ದೆಹಲಿಯಲ್ಲಿ (Delhi) ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

    ಅಮೃತ್‌ಪಾಲ್ ಸಿಂಗ್ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದು, ತಮ್ಮ ಗುರುತು ಯಾರಿಗೂ ಸಿಗದಂತೆ ವೇಷವನ್ನು ಬದಲಿಸಿ ತಪ್ಪಿಸಿಕೊಳ್ಳುತ್ತಿದ್ದಾನೆ. ಇದೀಗ ದೆಹಲಿ ಬೀದಿಯಲ್ಲಿ ಕಂಡುಬಂದಿರುವ ಸಿಂಗ್ ಟರ್ಬನ್ (Turban) ಅನ್ನು ತೆಗೆದು, ಸನ್‌ಗ್ಲಾಸ್ ಹಾಗೂ ಜಾಕೆಟ್ ಧರಿಸಿ ಓಡಾಡಿದ್ದಾನೆ. ಸಿಸಿಟಿವಿ ದೃಶ್ಯದಲ್ಲಿ ಅಮೃತ್‌ಪಾಲ್ ಸಿಂಗ್ ಜೊತೆಗೆ ಆತನ ಸಹಾಯಕ ಪಾಪಲ್‌ಪ್ರೀತ್ ಸಿಂಗ್ ಕೂಡಾ ಕಾಣಿಸಿಕೊಂಡಿದ್ದಾನೆ. ಇಬ್ಬರೂ ತಮ್ಮ ಗುರುತುಗಳನ್ನು ಮರೆಮಾಚಲು ಮಾಸ್ಕ್‌ಗಳನ್ನು ಧರಿಸಿದ್ದಾರೆ.

    ವರದಿಗಳ ಪ್ರಕಾರ ಈ ಸಿಸಿಟಿವಿ ದೃಶ್ಯ ಮಾರ್ಚ್ 21ನೇ ತಾರೀಖಿನದ್ದಾಗಿದೆ. ಪಂಜಾಬ್‌ನಲ್ಲಿ ಪೊಲೀಸರು ಆತನನ್ನು ಬಂಧಿಸಲು ಕಾರ್ಯಾಚರಣೆ ಪ್ರಾರಂಭಿಸಿರುವ 3 ದಿನಗಳ ಬಳಿಕದ ದೃಶ್ಯಗಳಾಗಿವೆ. ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್

    ಅಮೃತ್‌ಪಾಲ್ ಸಿಂಗ್ ಹಾಗೂ ಪಾಪಲ್‌ಪ್ರೀತ್ ಸಿಂಗ್ ಇಬ್ಬರೂ ಹರಿಯಾಣದ ಕುರುಕ್ಷೇತ್ರದ ಮೂಲಕ ದೆಹಲಿಗೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತ ಇನ್ನು ಕೂಡಾ ದೆಹಲಿಯಲ್ಲಿಯೇ ತಲೆಮರೆಸಿಕೊಂಡಿದ್ದಾನೆಯೇ ಅಥವಾ ಅಲ್ಲಿಂದ ಬೇರೆಡೆಗೆ ಓಡಿಹೋಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

    ಇದೀಗ ನೆರೆಯ ನೇಪಾಳದಲ್ಲಿ ಅಮೃತ್‌ಪಾಲ್ ಸಿಂಗ್‌ನನ್ನು ತನ್ನ ಕಣ್ಗಾವಲು ಪಟ್ಟಿಗೆ ಸೇರಿಸಿದೆ. ಏಕೆಂದರೆ ಆತ ನಕಲಿ ಪಾಸ್‌ಪೋರ್ಟ್ ಬಳಸಿ ಗಡಿ ದಾಟಲು ಯತ್ನಿಸುವ ಸಾಧ್ಯತೆಯಿದೆ. ಕಳೆದ ವಾರದಿಂದ ಆತ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗಿ ಮನೆಯೊಂದರಲ್ಲಿ ಆಶ್ರಯ ಪಡೆದಿರುವುದು ಹಲವು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಸಿಕ್ಕಿವೆ. ಇದನ್ನೂ ಓದಿ: ನೀವು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ 47ರ ಕಾಲವಲ್ಲ- SDPI ಮುಖಂಡನಿಗೆ ಸಿ.ಟಿ ರವಿ ವಾರ್ನಿಂಗ್

  • ಗಮನ ಸೆಳೆದ ಮೋದಿಯ ರಾಷ್ಟ್ರ ಧ್ವಜ ವಿನ್ಯಾಸದ ಟರ್ಬನ್, ಸಾಂಪ್ರದಾಯಿಕ ಉಡುಗೆ

    ಗಮನ ಸೆಳೆದ ಮೋದಿಯ ರಾಷ್ಟ್ರ ಧ್ವಜ ವಿನ್ಯಾಸದ ಟರ್ಬನ್, ಸಾಂಪ್ರದಾಯಿಕ ಉಡುಗೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲೆ ಭಾಷಣ ಮಾಡುವಾಗ ಅವರ ಸಾಂಪ್ರದಾಯಿಕ ಉಡುಗೆಯೂ ಪ್ರತಿಬಾರಿಯಂತೆ ಈ ಬಾರಿಯೂ ಜನರ ಗಮನ ಸೆಳೆದಿದೆ.

    ಸ್ವಾತಂತ್ರ್ಯ ದಿನಾಚರಣೆ ಹಾಗೂ ಭಾಷಣಗಳ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ವಿಶಿಷ್ಟ ಉಡುಪುಗಳು ಯಾವಾಗಲೂ ರಾಷ್ಟ್ರದ ಜನತೆಯ ಗಮನವನ್ನು ಸೆಳೆಯುತ್ತವೆ. ಅದೇ ಈ ರೀತಿ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರ ಧ್ವಜದ ಬಣ್ಣವಿರುವ ವಿಶೇಷ ವಿನ್ಯಾಸದ ಬಿಳಿಯ ಟರ್ಬನ್ ತೊಟ್ಟು, ಬಿಳಿ ಜುಬ್ಬಾ- ಪೈಜಾಮ ಹಾಗೂ ಅದರ ಮೇಲೆ ನೀಲಿ ಬಣ್ಣದ ಜಾಕೆಟ್ ತೊಟ್ಟು ಮೋದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

    ಸ್ವಾತಂತ್ರ್ಯೋತ್ಸವದ ದಿನವಾದ ಇಂದು ಕೆಂಪುಕೋಟೆಯ ಆವರಣದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಅವರು ಧರಿಸಿದ್ದ ಕೆಸರಿ, ಬಿಳಿ, ಹಸಿರು ಬಣ್ಣದ ಟರ್ಬನ್ ಎಲ್ಲರ ಗಮನವನ್ನು ಸೆಳೆಯಿತು. ಸಾಂಪ್ರದಾಯಿಕ ಉಡುಪು ಧರಿಸಿದ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜ ಹಾರಿಸಿ ಸತತ 9ನೇ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಆಡಳಿತವಾಗಲಿ ಕಾಲಕ್ಕೆ ತಕ್ಕಂತೆ ಕೆಲಸ ಮಾಡಬೇಕು: ಮೋದಿ

    ಈ ಸಂದರ್ಭದಲ್ಲಿ ದೇಶದ ಎಲ್ಲ ಭಾಗದಲ್ಲೂ ಒಂದಲ್ಲ ಒಂದು ರೂಪದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತೀಯರು ಧ್ವಜಾರೋಹಣ ಮಾಡುತ್ತಿದ್ದಾರೆ. ಅನಿವಾಸಿ ಭಾರತೀಯರಿಗೂ ನಾನು ಶುಭಾಶಯ ಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ತಿಳಿಸಿದರು. ಇದನ್ನೂ ಓದಿ: ಭಾರತ, ಅಮೆರಿಕ ಆತ್ಮೀಯ ಪಾಲುದಾರರು- ಸ್ವಾತಂತ್ರ್ಯ ದಿನಕ್ಕೆ ಶುಭ ಕೋರಿದ ಬೈಡನ್

    Live Tv

  • ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

    ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

    ಪೇಟಾ-ಪರಂಪರೆಯ ಕಿರೀಟ, ಇದನ್ನು ಯಾರು ತಾನೇ ಅರಿಯರು ಹೇಳಿ? ಸಣ್ಣ-ಸಣ್ಣ ಕುಶಲ ಕಲೆಗಾರಿಕೆ, ರತ್ನ-ಖಚಿತದಂತೆ ಹೊಳೆಯುವ ಅಂಚಿನ ಅರಳುಗಳು, ರೇಷ್ಮೆ ಬಟ್ಟೆಯಿಂದ ತಯಾರಿಸಲಾದ ಮದುವೆಯ ಪೇಟಗಳು ಅಬ್ಬಬ್ಬಾ ಹೇಳಿದಷ್ಟೂ ವಿಶೇಷ.

    Rajasthani Turban

    ಇದು ಕೆಲವರಿಗೆ ಪರಂಪರೆಯ ಶ್ರೀಮಂತಿಕೆಯಾದರೆ, ಇನ್ನೂ ಕೆಲವರಿಗೆ ಸಂಸ್ಕೃತಿಯ ಒಂದು ಭಾಗ. ವಧು ಬಂಗಾರದ ಆಭರಣಗಳಿಂದ ತನ್ನನ್ನು ಅಲಂಕರಿಸಿಕೊಳ್ಳುವಂತೆ, ವರನೂ ವಿವಿಧ ಶೈಲಿಯ ಪೇಟಗಳನ್ನು ಧರಿಸಿ ಅಲಂಕಾರ ಮಾಡಿಕೊಳ್ಳುತ್ತಾರೆ. ಆಧುನಿಕತೆಯಲ್ಲಿ ಟ್ರೆಂಡ್ ಬದಲಾದಂತೆ ಪೇಟ ಧರಿಸುವುದೇ ಒಂದು ಹೆಗ್ಗಳಿಕೆಯಾಗಿದೆ. ಮಾರುಕಟ್ಟೆಗಳಲ್ಲಿ, ವಿವಿಧ ಮೊಹಲ್ಲಾಗಳಲ್ಲಿಯೂ ತರಹೇವಾರಿ ಪೇಟಗಳು ಲಗ್ಗೆಯಿಟ್ಟಿದ್ದು, ಯುವಕರು, ಪುರುಷರು ತಮ್ಮಿಷ್ಟದ ಪೇಟಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಳಿಗೆದಾರರೂ ವಿಭಿನ್ನ ವಿನ್ಯಾಸಗಳನ್ನು ಪರಿಚಯಿಸುತ್ತಿದ್ದಾರೆ. ಅವುಗಳ ವಿವಿಧ ಶೈಲಿಗಳನ್ನಿಲ್ಲಿ ನೋಡಬಹುದು. ಇದನ್ನೂ ಓದಿ: ಫ್ಯಾಷನ್‍ನಲ್ಲೂ ರಾಷ್ಟ್ರಪ್ರೇಮ ಅಭಿವ್ಯಕ್ತ

    arwari Turban 01

    1. ರಾಜಸ್ಥಾನಿ ಪೇಟ
    ವಿವಾಹ ಸಮಾರಂಭಗಳಲ್ಲಿ ಬಳಸುವ ಈ ರಾಜಸ್ಥಾನಿ ಪೇಟವು ಇಂದಿಗೂ ಟ್ರೆಂಡ್ ಆಗಿ ಉಳಿದಿದೆ. ವರ ಮಾತ್ರವಲ್ಲದೇ ಇತರ ಪುರುಷರೂ ಧರಿಸುವುದರಿಂದ ಇಂದಿಗೂ ಬೇಡಿಕೆ ಹೆಚ್ಚಾಗಿಯೇ ಇದೆ. ಇಲ್ಲಿನ ಪ್ರತಿಯೊಂದು ಪ್ರದೇಶದಲ್ಲೂ ವಿಭಿನ್ನ ರೀತಿಯ ಪೇಟಗಳನ್ನು ಜನರು ಧರಿಸುತ್ತಾರೆ. ಪ್ರತಿ ಪೇಟಗಳೂ ಆ ಪ್ರದೇಶದ ಸಾಂಸ್ಕೃತಿಕ ಗುರುತನ್ನು ಪ್ರತಿನಿಧಿಸುತ್ತವೆ. ಉಡುಪಿಗೆ ತಕ್ಕ ಶೈಲಿಯನ್ನು ಆಯ್ಕೆ ಮಾಡಿಕೊಂಡರೆ ಒಳಿತು.

    Mewari turban

    2. ಮಾರ್ವಾಡಿ ಪೇಟ
    ರಾಜಸ್ಥಾನ ಮೂಲದ ಮಾರ್ವಾರ್ ಪ್ರದೇಶದಿಂದ ಬಂದಿರುವ ಈ ಪೇಟ ಯುವ ಸಮೂಹದ ಟ್ರೆಂಡ್ ಆಗಿದೆ. ಸಹಜವಾಗಿದ್ದರೂ ವರ್ಣರಂಜಿತವಾಗಿ ಕಾಣುವ ಈ ಪೇಟವನ್ನು ಸಾರ್ಪೇಚ್ ಎಂಬ ಆಭರಣದ ಅಲಂಕಾರಿಕ ಸ್ಪರ್ಶವನ್ನು ಹೊಂದಿರುತ್ತದೆ. ಬಂಧೇಜ್ ಬಟ್ಟೆಯಿಂದ ತಯಾರಿಸುವ ಈ ಪೇಟವನ್ನು ಹೂವಿನ ಮುದ್ರಣ ಶೈಲಿಯಿಂದಲೂ ಸಿಂಗರಿಸಬಹುದು. ನಿಮ್ಮ ಮದುವೆಯ ಸಜ್ಜು ಸರಳವಾಗಿದ್ದರೆ, ಸಾಧಾರಣ ಶೈಲಿಯ ಪೇಟ ಧರಿಸಿದರೂ ಸಾಕು. ಇದನ್ನೂ ಓದಿ: ಸೂಪರ್ ಹಾಟ್ ದೀಪಿಕಾ ಪಡುಕೋಣೆ ತೊಟ್ಟ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    3. ಮೇವಾರಿ ಪೇಟ
    ಮೇವಾರಿ ಮದುವೆ ಪೇಟವು ಹೆಚ್ಚು ವಿಸ್ತಾರವಾಗಿ ಇರುವುದಿಲ್ಲ. ನೀವು(ವರ) ವಧುವಿಗಿಂತಲೂ ಎತ್ತರವಾಗಿದ್ದಲ್ಲಿ ಈ ವಿಧಾನದ ಪೇಟದ ಆಯ್ಕೆಯು ಉತ್ತಮವಾಗಿರಲಿದೆ. ಸಾಮಾನ್ಯ ತಿರುವುಗಳೊಂದಿಗೆ ತೆಳು ಪದರಗಳನ್ನು ಇದು ಹೊಂದಿರಲಿದೆ. ನಿಮ್ಮ ಉಡುಪಿನ ಆಯ್ಕೆಗೆ ತಕ್ಕಂತೆ ಈ ಪೇಟವನ್ನು ಸಜ್ಜುಗೊಳಿಸಲಾಗುತ್ತದೆ. ಇದರಲ್ಲಿರುವ ವರ್ಣರಂಜಿತ ಸಣ್ಣಸಣ್ಣ ಅರಳು ತಲೆ ಮೇಲ್ಭಾಗವನ್ನು ರತ್ನಕಚಿತ ಕಿರೀಟದಂತೆ ಆಕರ್ಷಿಸಲು ಸಹಕರಿಸುತ್ತದೆ.

    Royal Turban 2

    4. ರಾಯಲ್ ಪೇಟ
    ರಾಜಮನೆತನದಿಂದ ಪ್ರೇರಿತವಾದ ಈ ರಾಯಲ್ ವೆಡ್ಡಿಂಗ್ ಟರ್ಬನ್‌ಗಳು ಸಾಮಾನ್ಯವಾಗಿ ಉದ್ದವಾದ ಬಾಲಗಳನ್ನು ಹೊಂದಿರುತ್ತವೆ. ಬಂಧಗಾಲಾ ಮತ್ತು ಜೋಧಪುರಿ ಪ್ಯಾಂಟ್‌ಗಳ ಲುಕ್‌ಗೆ ಸೂಟ್‌ ಆಗುತ್ತದೆ. ವಜ್ರದ ಅರಳಿನ ಆಭರಣವು ಇದಕ್ಕೆ ಮತ್ತಷ್ಟು ಹೊಳಪು ನೀಡುತ್ತದೆ. ತೀರಾ ಅದ್ಧೂರಿಯಾಗಿ ನಡೆಯುವ ವಿವಾಹ ಮಹೋತ್ಸವಗಳಲ್ಲಿ ಹೆಚ್ಚಿನ ಜನರು ಇದನ್ನು ಧರಿಸುತ್ತಾರೆ.

    Marathi Turban 2

    5. ಮರಾಠಿ ಪೇಟ
    ಮರಾಠಿ ಪೇಟ ನಂಬಲಾಗದಷ್ಟು ಗರಿಗರಿಯಾಗಿದೆ. ಈ ಪೇಟವನ್ನು ಎಷ್ಟು ಅಚ್ಚುಕಟ್ಟಾಗಿ ಹೊಂದಿಸಲಾಗಿದೆ ಎಂದರೆ ಅದು ಬಟ್ಟೆಯೇ ಅಥವಾ ಅಚ್ಚು ಮಾಡಿದ ಶಿಲ್ಪವೇ ಎನ್ನುವಷ್ಟು ಅಚ್ಚರಿ ಮೂಡಿಸುತ್ತದೆ.

    MYRURU TURBAN

    6. ಮೈಸೂರು ಪೇಟ
    ಇದು ಹಿಂದೆ ಮೈಸೂರು ಮಹಾಸಂಸ್ಥಾನದ ರಾಜರು ಧರಿಸುತ್ತಿದ್ದ ಸಾಂಪ್ರದಾಯಿಕ ಉಡುಪು. ಮೈಸೂರು ಪೇಟ ಪರಂಪರೆ ಮತ್ತು ಸಾಂಸ್ಕೃತಿಕ ಪೂರ್ವವರ್ತಿಗಳ ಸಂಕೇತವಾಗಿ ಇಂದಿಗೂ ಉಳಿಸಿಕೊಳ್ಳಲಾಗಿದೆ. ಮಹಾರಾಜರ ಭವ್ಯ ಪೋಷಾಕಿನಲ್ಲಿ ಅತಿ ಹೆಚ್ಚು ಘನತೆಯನ್ನು ಪಡೆದಿರುವುದು ಝರಿ ಪೇಟ. ಸಣ್ಣ ಹಾಗೂ ಕುಶಲ ಕಲೆಗಾರಿಕೆ, ಬಣ್ಣ ಬಣ್ಣದ ಅಂಚಿನ ರೇಷ್ಮೆಯ ಬಟ್ಟೆಯಿಂದ ತಯಾರಿಸಲಾದ ಮುಂಡಾಸನ್ನು ಮೈಸೂರು ಪೇಟ ಎಂದು ಕರೆಯಲಾಗುತ್ತದೆ. ಅರಮನೆಯ ರಾಜ ಪರಿವಾರ, ದಿವಾನರು ಹಿರಿಯ ಅಧಿಕಾರಿಗಳು ಈ ಪೇಟವನ್ನು ಧರಿಸುತ್ತಿದ್ದರು. ಇಂದಿಗೂ ಮೈಸೂರಿನ ಒಡೆಯರ್ ವಂಶಸ್ಥರು ಇದನ್ನು ಬಳಸುತ್ತಾರೆ. ಮದುವೆ ಸಮಾರಂಭಗಳಿಗೆ ಮಾತ್ರವಲ್ಲದೆ ಅಭಿನಂದನಾ ಕಾರ್ಯಕ್ರಮಗಳು, ಗಣ್ಯರಿಗೆ ಸ್ವಾಗತ ಕೋರುವ ಸಮಾರಂಭದಲ್ಲಿ ಇದನ್ನು ಬಳಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ದಲೈಲಾಮ, ರಾಹುಲ್‌ಗಾಂಧಿ, ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಹಲವು ಕಾರ್ಯಕ್ರಮಗಳಲ್ಲಿ ಈ ಪೇಟವನ್ನು ಧರಿಸಿದ್ದಾರೆ.

  • ಕೇಸರಿ ಶಾಲು, ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸಿ – ರಾಜಧಾನಿಯಲ್ಲಿ ಟರ್ಬನ್ ಸಂಘರ್ಷ

    ಕೇಸರಿ ಶಾಲು, ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸಿ – ರಾಜಧಾನಿಯಲ್ಲಿ ಟರ್ಬನ್ ಸಂಘರ್ಷ

    ಬೆಂಗಳೂರು: ರಾಜ್ಯದಲ್ಲಿ ಹಿಜಬ್ ಸಂಘರ್ಷದ ನಡುವೆ ಇದೀಗ ರಾಜಧಾನಿಯಲ್ಲಿ ಟರ್ಬನ್ ಚರ್ಚೆ ಭಾರೀ ಸದ್ದು ಮಾಡುತ್ತಿದೆ.

    ಹೈಕೋರ್ಟ್ ಆದೇಶದಂತೆ ವಿದ್ಯಾರ್ಥಿಗಳ ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸಿ ಎಂದು ನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರಿನ್ಸಿಪಾಲ್‍ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ; ಗಗನಕ್ಕೇರಿದ ತೈಲ, ಚಿನ್ನದ ಬೆಲೆ – ಭಾರತದ ಶೇರು ಮಾರುಕಟ್ಟೆಯಲ್ಲಿ ತಲ್ಲಣ

    2000ಕ್ಕೂ ಹೆಚ್ಚು ವಿದ್ಯಾರ್ಥಿ ಇರುವ ಈ ಕಾಲೇಜಿನಲ್ಲಿ ಸಿಖ್ ಸಮುದಾಯದ ಒಬ್ಬರು ವಿದ್ಯಾರ್ಥಿನಿ, ಅದು ಸ್ಟೂಡೆಂಟ್ ಯೂನಿಯನ್  ಅಧ್ಯಕ್ಷೆಯಾಗಿರುವ ಯುವತಿ ಮಾತ್ರ ಟರ್ಬನ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಹೀಗಾಗಿ ವಿದ್ಯಾರ್ಥಿಗಳು ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸುವಂತೆ ಕಾಲೇಜ್ ಪ್ರಿನ್ಸಿಪಾಲ್‍ಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್

    ನಂತರ ಪ್ರಿನಿಪಾಲ್ ಮತ್ತು ಆಡಳಿತ ಮಂಡಳಿ ಟರ್ಬನ್ ತೆಗೆಯುವಂತೆ ವಿದ್ಯಾರ್ಥಿನಿಗೆ ಮನವಿ ಮಾಡಿದ್ದಾರೆ. ಬಳಿಕವೂ ವಿದ್ಯಾರ್ಥಿನಿ ಟರ್ಬನ್ ತೆಗೆಯಲ್ಲ ಇದು ಸಿಖ್ ಸಮುದಾಯದ ಸಂಕೇತ ಎಂದು ಹೇಳಿದ್ದಾರೆ. ಕೊನೆಗೆ ಪೋಷಕರಿಗೆ ಟರ್ಬನ್ ತೆಗೆಯಬಹುದಾ ಎಂದು ಮೇಲ್ ಮಾಡಿದ್ದಾರೆ. ಜೊತೆಗೆ ಕಾಲೇಜಿನ ಆಡಳಿತ ಮಂಡಳಿ ಕೂಡ ಟರ್ಬನ್ ತೆಗೆಸಬಹುದೆ ಎಂದು ಕರೆಮಾಡಿ ಕೇಳಿದ್ದಾರೆ. ಇದಕ್ಕೆ ವಿದ್ಯಾರ್ಥಿ ಪೋಷಕರು ಹೈಕೋರ್ಟ್‍ನಲ್ಲಿ ಟರ್ಬನ್ ಬಗ್ಗೆ ಉಲ್ಲೇಖ ಆಗಿಲ್ಲ. ಸಿಖ್ ಸಮುದಾಯದ ಸಂಕೇತವನ್ನು ನಾವು ತೆಗೆಯಲ್ಲ ಎಂದು ಹೇಳಿದ್ದಾರೆ. ಇದೀಗ ವಿದ್ಯಾರ್ಥಿನಿ ಕಾಲೇಜಿಗೆ ಟರ್ಬನ್ ಹಾಕಿಕೊಂಡೇ ಆಗಮಿಸುತ್ತಿದ್ದಾರೆ.

    ಸದ್ಯ ಈ ಕುರಿತಂತೆ ಪ್ರತಿಕ್ರಿಯಿಸಿರುವ ಮೌಂಟ್ ಕಾರ್ಮೆಲ್ ಕಾಲೇಜ್ ಪ್ರಿನ್ಸಿಪಾಲ್ ಭಬಿತಾ ಅವರು, ಹೈಕೋರ್ಟ್ ಆದೇಶವನ್ನು ನಾವು ಪಾಲನೆ ಮಾಡುತ್ತಿದ್ದೇವೆ. ಹೈಕೋರ್ಟ್ ಆದೇಶದಂತೆ ಹಿಜಬ್ ತೆಗೆಸಿ ವಿದ್ಯಾರ್ಥಿಗಳು ಒಳಗಡೆ ಬರುತ್ತಿದ್ದರು. ಈ ವೇಳೆ ಸಿಖ್ ಸಮುದಾಯದ ಒಂದು ವಿದ್ಯಾರ್ಥಿನಿ ಟರ್ಬನ್ ಹಾಕಿದ್ದರು. ನಮ್ಮ ಹಿಜಬ್ ತೆಗೆಸಿದಂತೆ ಅವರ ಟರ್ಬನ್ ತೆಗೆಸಿ ಅಂತ ಇತರೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಟರ್ಬನ್ ಹಾಕಿದ್ದ ವಿದ್ಯಾರ್ಥಿನಿ ನಮ್ಮ ಕಾಲೇಜಿನ ಸ್ಟೂಡೆಂಟ್ ಯೂನಿಯನ್ ನಾ ಪ್ರೆಸಿಡೆಂಟ್ ಆಗಿದ್ದು, ಟರ್ಬನ್ ತೆಗೆಸಿ ಅಂತ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ. ನೀನು ಟರ್ಬನ್ ತೆಗೆಯಲು ಸಾಧ್ಯತೆವೇ ಅಂತ ವಿದ್ಯಾರ್ಥಿಯನ್ನು ಕೇಳಿದೆವು. ನಾನು ಟರ್ಬನ್ ತೆಗೆಯೋಕೆ ಆಗಲ್ಲ ಇದು ನಮ್ಮ ಸಿಖ್ ಸಮುದಾಯದ ಸಂಕೇತ ಎಂದು ಹೇಳಿದ್ದರು. ನಾವು ಅವರ ಪೋಷಕರನ್ನು ಕಾಲೇಜ್‍ಗೆ ಬರಬಹುದ ಅಂತ ಕೇಳಿದೇವು. ಅವರು ನಾವು ಬ್ಯುಸಿ ಇದ್ದೇವೆ ಬರುವುದಕ್ಕೆ ಆಗಲ್ಲ ಅಂದರು. ಹಾಗಾಗಿ ನಾವು ಕರೆ ಮಾಡಿಯೇ ಟರ್ಬನ್ ತೆಗೆಸುವ ಸಾಧ್ಯತೆ ಇದೆಯೇ ಎಂದು ಕೇಳಿದೇವು. ಅದಕ್ಕೆ ವಿದ್ಯಾರ್ಥಿನಿ ಪೋಷಕರು ಕೂಡ ಸಿಖ್ ಧರ್ಮದ ಸಂಕೇತ ತೆಗೆಯಲ್ಲ ಎಂದಿರುವುದಾಗಿ ತಿಳಿಸಿದ್ದಾರೆ.