Tag: Truecaller

  • ನಕಲಿ ʻಲೋಕಾಯುಕ್ತ ಜಸ್ಟೀಸ್ʼ ಹಾವಳಿಗೆ ಬೆಚ್ಚಿಬಿದ್ದ ಅಧಿಕಾರಿಗಳು – ದೂರು ದಾಖಲು

    ನಕಲಿ ʻಲೋಕಾಯುಕ್ತ ಜಸ್ಟೀಸ್ʼ ಹಾವಳಿಗೆ ಬೆಚ್ಚಿಬಿದ್ದ ಅಧಿಕಾರಿಗಳು – ದೂರು ದಾಖಲು

    ಬೆಂಗಳೂರು: ಹಣ ಮಾಡೋದಕ್ಕೆ ಅಡ್ಡದಾರಿ ಹಿಡಿಯೋ ಸೈಬರ್ ವಂಚಕರು ಈ ಬಾರಿ ಬಳಸಿದ್ದು ನ್ಯಾಯಾಧೀಶರ ಹೆಸರನ್ನ. ಅಚ್ಚರಿ ಅನಿಸಿದ್ರೂ ಇದು ನಿಜ. ಲೋಕಾಯುಕ್ತ ಜಸ್ಟೀಸ್ (Lokayukta Justice) ಹೆಸರಲ್ಲಿ ಅಧಿಕಾರಿಗಳಿಗೆ ಫೋನ್ ಮಾಡಿ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಫೋನ್ (Phone) ಮಾಡಿ ನಿಮ್ಮ ಇಲಾಖೆಯಲ್ಲೇ ಭ್ರಷ್ಟಚಾರ ನಡೆಯುತ್ತಾ ಇದೆ. ನಿಮ್ಮ ಮೇಲಿನ ಆರೋಪಿಗಳಿಂದ ರೇಡ್ ಮಾಡ್ತೀವಿ ಅಂತ ಬೆದರಿಸೋಕೆ ಶುರು ಮಾಡಿದ್ದಾರೆ. ಟ್ರೂ ಕಾಲರ್‌ನಲ್ಲಿ (Truecaller) ಲೋಕಾಯುಕ್ತ ಜಸ್ಟೀಸ್ ಹೆಸರು ಬಳಸಿ ಕರೆ ಮಾಡಿದ್ದಾರೆ. ಇದ್ರಿಂದ ಕರೆ ಸ್ವೀಕರಿಸಿದ ಸರ್ಕಾರಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಇದನ್ನೂ ಓದಿ: ಮುಂದಿನ ತಿಂಗಳಿಂದಲೇ ಭಾರತ್ ಟ್ಯಾಕ್ಸಿ ಶುರು – ಖಾಸಗಿ ಕ್ಯಾಬ್ ಸೇವೆಗಳ ಕಮಿಷನ್ ಹಾವಳಿಗೆ ಬ್ರೇಕ್!

    ಮಹಾ ವಂಚಕರು ಮಾಡ್ತಿದ್ದೇನು?
    ಈ ವಂಚಕರು ಅಧಿಕಾರಿಗಳು ಕಾರ್ಯ ನಿರ್ವಹಿಸುವ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ನಾನು ಲೋಕಾಯುಕ್ತ ಜಸ್ಟೀಸ್ ಬಿ.ಎಸ್ ಪಾಟೀಲ್ , ಹಾಗೂ ಉಪಯೋಕಾಯುಕ್ತ ಫಣೀಂದ್ರ ಎಂದು ಕರೆ ಮಾಡುವ ಅಪರಿಚಿತರು. ಇಂಪಾರ್ಟೆಂಟ್ ಕಾಲ್, ಜಸ್ಟೀಸ್ ಅವರೇ ಕರೆ ಮಾಡಿದ್ದಾರೆಂದು ತಕ್ಷಣ ರಿಸೀವ್ ಮಾಡುವ ಸರ್ಕಾರಿ ಅಧಿಕಾರಿಗಳು, ನಂತರ ಅವರ ಅವರು ಕಾರ್ಯನಿರ್ವಹಿಸುವ ಡಿಪಾರ್ಟ್ಮೆಂಟ್ ನಲ್ಲಿ ಏನೇನು ಕೆಲಸ ನಡೀತಿದೆ ಎಂದು ತಿಳಿದುಕೊಳ್ಳುವ ಅಪರಿಚಿತರು ಬಳಿಕ ಹೆದರಿಸುತ್ತಿದ್ದರು. ನಿಮ್ಮ ಮೇಲೆ ಲಂಚ ಸ್ವೀಕಾರದ ಆರೋಪ ಬಂದಿದೆ ಎಂದು ಬೆದರಿಕೆ ಹಾಕುತ್ತಿದ್ದರು. ಅಷ್ಟೇ ಅಲ್ಲದೆ ಲೋಕಾಯುಕ್ತ ದಾಳಿ ತಡೆಯಬೇಕು ಎಂದರೆ ಇಂತಿಷ್ಟು ಹಣ ಕೊಡಬೇಕು ಅಂತ ಡಿಮ್ಯಾಂಡ್‌ ಮಾಡಿದ್ದಾರೆ. ಇದೇ ರೀತಿ ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ)ಗೂ ಕರೆ ಮಾಡಿದ್ದ ಅಪರಿಚಿತರು ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ರಸ್ತೆಗಳಲ್ಲಿ ಬಟರ್ ಫ್ಲೈ ಲೈಟ್ ಹಾಕಿದ್ದೇವೆಂದು 73 ಲಕ್ಷ ಹಣ ಪಡೆದು ಗುಳುಂ; ಗೋಲ್ಮಾಲ್ ಬಹಿರಂಗ

    ಎಇಇ ವೆಂಕಟೇಶ್‌ಗೆ ಕರೆ ಮಾಡಿ ಸಿಕ್ಕಿಬಿದ್ದರು
    ಅಧಿಕಾರಿಗಳನ್ನು ಬೆದರಿಸುತ್ತಿದ್ದ ಖತರ್ನಾಕ್‌ಗಳು ಎಇಇ ವೆಂಕಟೇಶ್‌ ಅವರಿಗೂ ಕರೆ ಮಾಡಿದ್ದರು. ಮೊದಲಿಗೆ ಕರೆಯನ್ನ ಸ್ವೀಕಾರ ಮಾಡಿರಲಿಲ್ಲ. ಪದೇ ಪದೇ ಕರೆ ಮಾಡಿದಾಗ ಬೆದರಿಕೆ ಬಂದಿದೆ. ಇದ್ರಿಂದ ಅನುಮಾನಗೊಂಡು ನೇರವಾಗಿ ಲೋಕಾಯುಕ್ತ ಕಚೇರಿಗೆ ವೆಂಕಟೇಶ್‌ ಬಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಕಾಲ್‌ ಬಂದಿದ್ದ ನಂಬರ್‌ ಜಸ್ಟೀಸ್ ಬಿ.ಎಸ್ ಪಾಟೀಲ್ ಹಾಗೂ ಉಪಲೋಕಾಯುಕ್ತ ಫಣೀಂದ್ರ ಅವರದ್ದಲ್ಲ ಅನ್ನೋದು ಗೊತ್ತಾಗಿದೆ. ಜಸ್ಟೀಸ್ ಹೆಸರು ಬಳಸಿ ಬ್ಲ್ಯಾಕ್‌ಮೇಲ್‌ ಮಾಡಲಾಗ್ತಿದೆ ಎಂದು ತಿಳಿದುಬಂದಿದೆ. ಜಸ್ಟೀಸ್‌ಗಳ ಗೌರವಕ್ಕೆ ಧಕ್ಕೆ ತಂದಿರುವ ಹಾಗೂ ಹೆಸರು ದುರ್ಬಳಕೆ ಮಾಡಿರುವ ಹಿನ್ನಲೆ ಅವರ ಪರವಾಗಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ದೂರು ನೀಡಿದ್ದಾರೆ. ಇದನ್ನೂ ಓದಿ: ನೆಲಮಂಗಲ | ತಣ್ಣಗಾಗಿದ್ದ ಏರಿಯಾದಲ್ಲಿ ಮತ್ತೆ ರೌಡಿಸಂ – ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ

  • Unknown ನಂಬರ್ ಯಾರದು ಎಂದು ತಿಳಿಯಲು ಇನ್ಮುಂದೆ ಟ್ರೂ ಕಾಲರ್ ಬೇಡ

    Unknown ನಂಬರ್ ಯಾರದು ಎಂದು ತಿಳಿಯಲು ಇನ್ಮುಂದೆ ಟ್ರೂ ಕಾಲರ್ ಬೇಡ

    ನವದೆಹಲಿ: ದೂರಸಂಪರ್ಕ ಇಲಾಖೆ ಶೀಘ್ರವೇ ಹೊಸ ವ್ಯವಸ್ಥೆಯೊಂದನ್ನು ಹೊರತರಲಿದೆ. ಈ ವ್ಯವಸ್ಥೆಯಲ್ಲಿ ನಮಗೆ ಯಾರು ಕರೆ ಮಾಡುತ್ತಾರೋ ಅವರ KYC(ನೋ ಯುವರ್ ಕಸ್ಟಮರ್) ದಾಖಲೆ ನೀಡುವ ವೇಳೆ ಕೊಡುವ ಹೆಸರೇ ಫೋನ್ ಪರದೆ ಮೇಲೆ ಮೂಡುವಂತೆ ಮಾಡುತ್ತದೆ.

    ಟೆಲಿಕಾಂ ಆಪರೇಟರ್‌ಗಳಿಗೆ ಜನರು KYC ದಾಖಲೆಯನ್ನು ನೀಡುವಾಗ ಯಾವ ಹೆಸರು ಕೊಡುತ್ತಾರೋ ಅದೇ ಹೆಸರು ಫೋನ್ ಪರದೆ ಮೇಲೆ ಕಾಣಿಸಲಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಅಧ್ಯಕ್ಷ ವಘೇಲಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತದ ಮೊದಲ 5ಜಿ ಕರೆ ಯಶಸ್ವೀ ಪರೀಕ್ಷೆ

    ನಾವು KYC ದಾಖಲೆಯಲ್ಲಿ ನೀಡಿದ ಹೆಸರೇ ಕರೆಯ ಮಾಹಿತಿಯಲ್ಲಿ ಕಾಣಿಸುವಂತೆ ಮಾಡಲಿದ್ದು, ಈ ಸೇವೆ ಶೀಘ್ರವೇ ಆರಂಭವಾಗಲಿದೆ. ಇದರ ಪ್ರಕಾರ ಯಾರಾದರೂ ಕರೆ ಮಾಡಿದಾಗ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ KYC ದಾಖಲೆ ಪ್ರಕಾರವೇ ಅವರ ಹೆಸರು ಕಾಣಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

    ನಂಬರ್ ಸೇವ್ ಇಲ್ಲದಿದ್ದರೂ ಹೆಸರು ತಿಳಿಸಲಿದೆ:
    ನಿಮ್ಮ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದಾಗ ಅಥವಾ ಸೇವ್ ಇಲ್ಲದ ನಂಬರ್‌ನಿಂದ ಕರೆ ಬಂದಾಗ, KYC ಆಧಾರದ ಮೇಲೆ ಅವರ ಹೆಸರು ತಿಳಿಯಬಹುದು. ಇದನ್ನೂ ಓದಿ: 2030ರ ವೇಳೆಗೆ ಭಾರತಕ್ಕೆ 6ಜಿ ನೆಟ್‌ವರ್ಕ್ – ಪ್ರಧಾನಿ ಮೋದಿ

    ಸದ್ಯ ಬಳಕೆದಾರರು ಟ್ರೂಕಾಲರ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಿ ಕರೆ ಮಾಡಿದವರ ಹೆಸರನ್ನು ತಿಳಿದುಕೊಳ್ಳುತ್ತಾರೆ. ಆದರೆ ಅದು ಶೇ.100 ರಷ್ಟು ಅಧಿಕೃತವಾಗಿರುವುದಿಲ್ಲ. ಆದರೆ ಈ ಹೊಸ ವ್ಯವಸ್ಥೆ KYC ಡೇಟಾದಿಂದ ಜನರ ಹೆಸರನ್ನು ತಿಳಿಸಲಿದೆ.

    ಈವರೆಗೆ ಟ್ರಾಯ್ ಸ್ಪ್ಯಾಮ್ ಅಥವಾ ಬೇಡದ ಕರೆಗಳನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಸ್ಪ್ಯಾಮ್ ಕರೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಇಲಾಖೆಗೆ ಸಾಧ್ಯವಾಗಿರಲಿಲ್ಲ. ಇದೀಗ ಬರಲಿರುವ ಹೊಸ ವಿಧಾನದಿಂದ ಸ್ಪ್ಯಾಮ್ ಕರೆಗಳನ್ನು ಜನರೇ ತಿಳಿದು ತಪ್ಪಿಸಲು ಸಾಧ್ಯವಾಗಲಿದೆ.