Tag: Truck Driver

  • ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಮತ್ತೋರ್ವ ಟ್ರಕ್ ಚಾಲಕ ಬಲಿ

    ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಮತ್ತೋರ್ವ ಟ್ರಕ್ ಚಾಲಕ ಬಲಿ

    ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲಿದೆ. ಉಗ್ರರ ದಾಳಿಗೆ ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಬಿಜ್‍ಬೆಹರಾದಲ್ಲಿ ಮತ್ತೋರ್ವ ಟ್ರಕ್ ಚಾಲಕ ಬಲಿಯಾಗಿದ್ದಾನೆ.

    ಉಧಮ್‍ಪುರ ಜಿಲ್ಲೆಯ ಕಾತ್ರಾ ಪ್ರದೇಶದ ಚಾಲಕ ನಾರಾಯಣ್ ದತ್ ಮೃತ ದುರ್ದೈವಿ. ಸೋಮವಾರ ಸಂಜೆ ಈ ಘಟನೆ ನಡೆದಿದೆ. ಟ್ರಕ್ ಚಾಲಕನನ್ನು ಉಗ್ರರು ಗುಂಡಿಕ್ಕಿ ಅಮಾನುಷವಾಗಿ ಕೊಲೆಗೈದಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಧಾವಿಸಿದ್ದು, ಸುತ್ತಮುತ್ತಲ ಪ್ರದೇಶದಲ್ಲಿದ್ದ ಬೇರೆ ರಾಜ್ಯದ ಇನ್ನಿಬ್ಬರು ಟ್ರಕ್ ಚಾಲಕರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ:ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ – ಗುಂಡಿಕ್ಕಿ ಇಬ್ಬರು ಟ್ರಕ್ ಚಾಲಕರ ಹತ್ಯೆ

    ಕಳೆದು 2 ವಾರಗಳಿಂದ ಕಾಶ್ಮೀರದಲ್ಲಿ ಹೊರ ರಾಜ್ಯದಿಂದ ಬಂದ ಟ್ರಕ್ ಚಾಲಕರನ್ನೇ ಉಗ್ರರು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಕಾಶ್ಮೀರದ ವಸ್ತುಗಳು ಇಲ್ಲಿನ ಗಡಿದಾಟಿ ಹೋಗಬಾರದು, ಹೊರ ರಾಜ್ಯದಿಂದ ಕಾಶ್ಮೀರಕ್ಕೆ ಬರುವವರಲ್ಲಿ ಭಯ ಹುಟ್ಟಿಸಬೇಕೆಂದು ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ:ಕಾಶ್ಮೀರದಲ್ಲಿ 2 ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

    ದಕ್ಷಿಣ ಕಾಶ್ಮೀರದಲ್ಲಿ ಕಳೆದ 2 ವಾರಗಳಿಂದ ಈ ದಾಳಿಯನ್ನು ಸೇರಿ 6 ಮಂದಿ ಟ್ರಕ್ ಚಾಲಕರನ್ನು ಉಗ್ರರು ಹತ್ಯೆಗೈದಿದ್ದಾರೆ. ಅದರಲ್ಲೂ ಉಗ್ರರು ಗುಂಡಿಕ್ಕಿ ಕೊಂದ ಚಾಲಕರೆಲ್ಲರೂ ಬೇರೆ ರಾಜ್ಯಗಳಿಂದ ಕಾಶ್ಮೀರಕ್ಕೆ ಬಂದವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಭಾನುವಾರ ಹೊರ ರಾಜ್ಯಗಳ ಟ್ರಕ್ ಚಾಲಕರನ್ನು ಶೋಫಿಯಾನ್ ನಗರದಿಂದ ಹೊರ ಕಳುಹಿಸಲು ಮುಂದಾಗಿದ್ದರು. ಇದೇ ಬೆನ್ನಲ್ಲೆ ಈಗ ಮತ್ತೆ ಉಗ್ರರು ಓರ್ವ ಚಾಲಕನನ್ನು ಕೊಲೆ ಮಾಡಿರುವುದು ಕಾಶ್ಮೀರದಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ.

  • ಹಾಡಹಗಲೇ ನಡು ರಸ್ತೆಯಲ್ಲಿ ಟ್ರಾಫಿಕ್ ಎಎಸ್‍ಐನ ಲಂಚಾವತಾರ

    ಹಾಡಹಗಲೇ ನಡು ರಸ್ತೆಯಲ್ಲಿ ಟ್ರಾಫಿಕ್ ಎಎಸ್‍ಐನ ಲಂಚಾವತಾರ

    ರಾಯಚೂರು: ಹಾಡಹಗಲೇ ನಡು ರಸ್ತೆಯಲ್ಲಿ ಟ್ರಾಫಿಕ್ ಎಎಸ್‍ಐ ಒಬ್ಬರು ಲಂಚ ಪಡೆಯುತ್ತಿರುವ ಘಟನೆ ರಾಯಚೂರಿನ ಹೆದ್ದಾರಿಯಲ್ಲಿ ನಡೆದಿದೆ.

    ರಾಯಚೂರು ನಗರದ ಮಧ್ಯೆ ಹಾದು ಹೋಗುವ ನಂದಿ ದೇವಾಸ್ಥಾನದ ಹತ್ತಿರದ ಹೆದ್ದಾರಿಯಲ್ಲಿ ಟ್ರಾಫಿಕ್ ಪೊಲೀಸರೊಬ್ಬರು ಆಂಧ್ರ ಮೂಲದ ಟ್ರಕ್ ಚಾಲಕನಿಂದ 300 ರೂಪಾಯಿ ಲಂಚ ಪಡೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ದ್ವಿಚಕ್ರ ವಾಹನ, ಕಾರು, ಗೂಡ್ಸ್ ವಾಹನ ಮತ್ತು ಲಾರಿ ದಾಖಲೆ ಪರಿಶೀಲಿಸಿ ದಂಡ ವಿಧಿಸಬೇಕಾದ ಪೊಲೀಸರು ಲಂಚ ವಸೂಲಿ ದಂಧೆ ಮಾಡುತ್ತಿದ್ದಾರೆ. ವಿಡಿಯೋ ಮಾಡುತ್ತಿದ್ದರೂ ಕ್ಯಾರೆ ಎನ್ನದ ನಗರ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್‍ಐ ಲಂಚ ತೆಗೆದುಕೊಳ್ಳುವಲ್ಲಿ ಮಗ್ನನಾಗಿದ್ದಾರೆ.

    ಪೊಲೀಸರಿಗೆ ಹಣ ನೀಡಿ ರಶೀದಿ ಪಡೆಯದೇ ದಾರಿಯುದ್ದಕ್ಕೂ ಎಷ್ಟು ಜನರಿಗೆ ಕೋಡಬೇಕು ಎಂದು ಲಾರಿ ಚಾಲಕ ಕೇಳಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸ್ ಅವರಿವರದ್ದು ಬೇಡ ಇಲ್ಲಿ ಕೊಟ್ಟು ಮುಂದೆ ಹೋಗುತ್ತಾ ಇರು ಎಂದು ರಾಜಾರೋಷವಾಗಿ ಲಂಚ ಪಡೆದು ಬಿಲ್ ನೀಡದೆ ಬಿಟ್ಟು ಕಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.