Tag: Troll

  • ತಾಜ್ ಮಹಲ್‍ಗೆ ಕರ್ಕೊಂಡ್ ಹೋಗಿದ್ದಕ್ಕೆ ಥ್ಯಾಂಕ್ಸ್ – ಭಾರತೀಯರ ಕ್ರಿಯೇಟಿವಿಟಿಗೆ ಇವಾಂಕಾ ಟ್ರಂಪ್ ಫಿದಾ

    ತಾಜ್ ಮಹಲ್‍ಗೆ ಕರ್ಕೊಂಡ್ ಹೋಗಿದ್ದಕ್ಕೆ ಥ್ಯಾಂಕ್ಸ್ – ಭಾರತೀಯರ ಕ್ರಿಯೇಟಿವಿಟಿಗೆ ಇವಾಂಕಾ ಟ್ರಂಪ್ ಫಿದಾ

    ನವದೆಹಲಿ: ಭಾರತೀಯರ ಕ್ರಿಯೇಟಿವಿಟಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಫಿದಾ ಆಗಿಬಿಟ್ಟಿದ್ದಾರೆ. ತಮ್ಮನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದರೂ ಕಿಂಚಿತ್ತು ಬೇಜಾರಾಗದೇ ಕ್ರಿಯೇಟಿವ್ ಆಗಿ ಟ್ರೋಲ್ ಮಾಡುತ್ತಿರುವ ಭಾರತೀಯರ ಟ್ಯಾಲೆಂಟ್ ನೋಡಿ ಇವಾಂಕಾ ಖುಷ್ ಆಗಿದ್ದಾರೆ.

    ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಪ್ರವಾಸಕ್ಕೆ ಭಾರತಕ್ಕೆ ಬಂದಿದ್ದರು. ಈ ವೇಳೆ ತಮ್ಮೊಂದಿಗೆ ಪತ್ನಿ ಮಲಾನಿಯಾ ಟ್ರಂಪ್, ಮಗಳು ಇವಾಂಕಾ ಟ್ರಂಪ್ ಹಾಗೂ ಅಳಿಯ ಜೆರಾಲ್ಡ್ ಕುಶ್ನರ್ ಕೂಡ ಭಾರತಕ್ಕೆ ಕರೆತಂದಿದ್ದರು. ಈ ವೇಳೆ ಟ್ರಂಪ್ ಕುಟುಂಬ ಭಾರತದ ಹೆಮ್ಮೆ ತಾಜ್ ಮಹಲ್‍ಗೆ ಭೇಟಿ ಕೊಟ್ಟು, ಪ್ರೇಮಸೌಧದ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿತ್ತು. ಅದರಲ್ಲೂ ಇವಾಂಕಾ ಅವರು ತಾಜ್‍ಮಹಲ್ ಮುಂದೆ ಕೂತು ಕ್ಲಿಕ್ಕಿಸಿದ ಫೋಟೋವಂತೂ ನೆಟ್ಟಿಗರ ಟ್ರೋಲ್‍ಗೆ ವಿಷಯವಾಗಿಬಿಟ್ಟಿದೆ.

    ಇವಾಂಕಾ ಟ್ರಂಪ್ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಸಖತ್ ಕಾಲೆಳೆಯಲಾಗುತ್ತಿದೆ. ಇವಾಂಕಾ ಪಕ್ಕ ಕೂತಿರುವ ಹಾಗೆ, ಸೈಕಲ್ ಮೇಲೆ ಅವರನ್ನು ಕೂರಿಸಿಕೊಂಡು ಹೋಗುತ್ತಿರುವ ಹಾಗೆ ಅನೇಕರು ತಮ್ಮ ಫೋಟೋಗಳನ್ನು ಎಡಿಟ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಈ ಟ್ರೋಲ್‍ಗಳನ್ನು ನೋಡಿದ ಇವಾಂಕಾ ಅವರು ಮಾತ್ರ ಬೇಸರಗೊಳ್ಳದೇ, ಭಾರತೀಯರ ಕ್ರಿಯೇಟಿವಿಗೆ ಭೇಷ್ ಅಂದಿದ್ದಾರೆ. ಇಂತಹ ಸುಂದರ ತಾಜ್ ಮಹಲ್‍ಗೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದ, ಈ ಅನುಭವವನ್ನು ನಾನು ಎಂದಿಗೂ ಮರೆಯಲ್ಲ ಎಂದು ಖುಷಿಯಿಂದ ಟ್ರೋಲ್ ಟ್ವೀಟ್‍ಗಳನ್ನು ತಮ್ಮ ಅಧಿಕೃತ ಖಾತೆಯಿಂದ ರೀ-ಟ್ವೀಟ್ ಮಾಡಿಕೊಂಡಿದ್ದಾರೆ.

    ಖ್ಯಾತ ಗಾಯಕ, ನಟ ದಿಲ್ಜಿತ್ ದೋಸಂಜ್ ಅವರು ಇವಾಂಕಾ ಫೋಟೋಗೆ ತಮ್ಮ ಫೋಟೋ ಎಡಿಟ್ ಮಾಡಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದರು. ತಾಜ್ ಮಹಲ್‍ಗೆ ಕರೆದುಕೊಂಡು ಹೋಗು ಎಂದು ಹಠ ಮಾಡುತ್ತಿದ್ದಳು, ಅದಕ್ಕೆ ಕರೆತಂದೆ ಎಂದು ಬರೆದು ಇವಾಂಕಾ ಹಾಗೂ ತಾವು ತಾಜ್ ಮಹಲ್ ಮುಂದೆ ಕೂತಿರುವ ಎಡಿಟೆಡ್ ಫೋಟೋವನ್ನು ದಿಲ್ಜಿತ್ ಟ್ವೀಟ್ ಮಾಡಿದ್ದರು. ಅಲ್ಲದೇ ಇವಾಂಕಾರನ್ನು ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇವಾಂಕಾ ಅವರು, ‘ನನ್ನನ್ನು ತಾಜ್ ಮಹಲ್‍ಗೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು, ಅದೊಂದು ಮರೆಯಲಾಗದ ಅನುಭವ’ ಎಂದು ಖುಷಿಯಿಂದ ರೀ-ಟ್ವೀಟ್ ಮಾಡಿದ್ದಾರೆ.

    ಕೇವಲ ಸೆಲಿಬ್ರೆಟಿ ಮಾತ್ರವಲ್ಲ, ಸುಮ್ಮನೆ ಟ್ರೋಲ್‍ಗಾಗಿ ಸಾಮಾನ್ಯ ಜನರು ಎಡಿಟ್ ಮಾಡಿದ ತಮ್ಮ ಫೋಟೋವನ್ನು ಕೂಡ ಇವಾಂಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಭಾರತೀಯರ ಕ್ರಿಯೇಟಿವಿಟಿಗೆ ಮನಸೋತಿದ್ದಾರೆ. ಭಾರತದಲ್ಲಿ ನನಗೆ ಹೊಸ ಗೆಳೆಯರು ಸಿಕ್ಕಿದ್ದಾರೆ. ಭಾರತೀಯರ ಕ್ರಿಯೇಟಿವಿಟಿ ನನಗೆ ಇಷ್ಟವಾಯ್ತು ಎಂದಿದ್ದಾರೆ.

    ಜನರು ನಗಲೆಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ಗಳನ್ನು ಮಾಡಲಾಗುತ್ತದೆ. ಹೀಗೆ ಮಾಡುವ ಟ್ರೋಲ್‍ಗಳು ಕೆಲವೊಮ್ಮೆ ಗಲಾಟೆಗೆ ಕೂಡ ಕಾರಣವಾಗುತ್ತೆ. ಅದರಲ್ಲೂ ಸೆಲೆಬ್ರೆಟಿಗಳನ್ನು ಟ್ರೋಲ್ ಮಾಡಿದಾಗ ನಮ್ಮ ಮೇಲೆಯೇ ಟ್ರೋಲ್ ಮಾಡ್ತೀರಾ ಅಂತ ಸಿಟ್ಟಾಗುವವರೇ ಹೆಚ್ಚು. ಕೆಲವೊಮ್ಮೆ ಟ್ರೋಲ್ ಪೇಜಸ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿರುವ ಪ್ರಕರಣಗಳೂ ಇವೆ. ಆದರೆ ಇವಾಂಕಾ ಮಾತ್ರ ತಮ್ಮನ್ನು ಟ್ರೋಲ್ ಮಾಡಿದನ್ನ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಟ್ರೋಲ್ ಮಾಡಿ ಭಾರತೀಯರು ಇವಾಂಕಾ ಮನ ಗೆದ್ದರೆ, ಇತ್ತ ಟ್ರೋಲ್ ಪೋಸ್ಟ್ ಗಳನ್ನು ತಾವೇ ಶೇರ್ ಮಾಡಿಕೊಂಡು ಇವಾಂಕಾ ನೆಟ್ಟಿಗರ ಮನ ಕದ್ದಿದ್ದಾರೆ.

  • ರಶ್ಮಿಕಾ ಫೋಟೋಗಳನ್ನು ತಮಿಳು ನಟ ವಡಿವೇಲುಗೆ ಹೋಲಿಸಿದ ನೆಟ್ಟಿಗರು

    ರಶ್ಮಿಕಾ ಫೋಟೋಗಳನ್ನು ತಮಿಳು ನಟ ವಡಿವೇಲುಗೆ ಹೋಲಿಸಿದ ನೆಟ್ಟಿಗರು

    ಚೆನ್ನೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಪದೇ ಪದೇ ಟ್ರೋಲ್ ಆಗುತ್ತಾನೆ ಇರುತ್ತಾರೆ. ಇದೀಗ ರಶ್ಮಿಕಾ ಅವರು ಹೊಸ ಫೋಟೋಶೂಟ್ ಮಾಡಿಸಿದ್ದು, ಅವರ ಫೋಟೋವನ್ನು ನೆಟ್ಟಿಗರು ತಮಿಳಿನ ಹಾಸ್ಯ ನಟ ವಡಿವೇಲು ಅವರಿಗೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ತಿಳಿಗುಲಾಬಿ ಬಣ್ಣದ ಫ್ಲೋರಲ್ ಡಿಸೈನ್ ಡ್ರೆಸ್ ಧರಿಸಿ ಅದಕ್ಕೆ ಫಿಶ್‍ಟೇಲ್ ಹೇರ್ ಸ್ಟೈಲ್ ಮಾಡಿಸಿ ವಿವಿಧ ಎಕ್ಸ್‌ಪ್ರೆಶನ್ ಕೊಡುವ ಮೂಲಕ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೆ ಈ ಫೋಟೋವನ್ನು ತಮ್ಮ ಇನ್‍ಸ್ಟಾದಲ್ಲೂ ಹಂಚಿಕೊಂಡಿದ್ದಾರೆ.

    ಈ ಫೋಟೋ ನೋಡಿದ ನೆಟ್ಟಿಗರು ರಶ್ಮಿಕಾರಂತೆ ಎಕ್ಸ್‌ಪ್ರೆಶನ್ ನೀಡಿದ ವಡಿವೇಲು ಅವರ ಫೋಟೋ ಜೊತೆ ಹೋಲಿಕೆ ಮಾಡಿದ್ದಾರೆ. ಅಲ್ಲದೆ ವಡಿವೇಲು ಫಾರ್ ಲೈಫ್ ಎಂಬ ಹ್ಯಾಶ್‍ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ರಶ್ಮಿಕಾ ಹಾಗೂ ವಡಿವೇಲು ಅವರ ಫೋಟೋ ನೋಡಿ ಕೆಲವರು ರಶ್ಮಿಕಾ ಇನ್ನೂ ಮಗುವಿನಂತೆ ವರ್ತಿಸುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ರಶ್ಮಿಕಾ ಯಾವಾಗಲೂ ಓವರ್ ಆ್ಯಕ್ಟಿಂಗ್ ಮಾಡುತ್ತಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

    https://twitter.com/Troll_Cinema/status/1231434815905230853?ref_src=twsrc%5Etfw%7Ctwcamp%5Etweetembed%7Ctwterm%5E1231434815905230853&ref_url=https%3A%2F%2Ftimesofindia.indiatimes.com%2Fentertainment%2Ftamil%2Fmovies%2Fnews%2Fthis-hilarious-vadivelu-version-of-rashmika-mandannas-recent-photoshoot-will-leave-you-in-splits%2Farticleshow%2F74278873.cms

    ಈ ಹಿಂದೆ ಹೈದರಾಬಾದ್‍ನಲ್ಲಿ ರಶ್ಮಿಕಾ, ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆ ನಟಿಸಿದ ‘ಸರಿಲೇರು ನೀಕ್ಕೆವ್ವರು’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ರಶ್ಮಿಕಾ ಭಾಷಣ ಕೇಳಿ ತೆಲುಗು ಪ್ರೇಕ್ಷಕರು ಅವರನ್ನು ಟ್ರೋಲ್ ಮಾಡಿದ್ದರು. ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ರಶ್ಮಿಕಾ ಮಾತನಾಡಿದ ವಿಡಿಯೋ ನೋಡಿದ ಪ್ರೇಕ್ಷಕರು ಅವರಿಗೆ ‘ಓವರ್ ಆ್ಯಕ್ಟಿಂಗ್’, ‘ಓವರ್ ಆ್ಯಕ್ಟಿಂಗ್‍ಗೆ ಮುಖ ಏನಾದರೂ ಇದ್ದರೆ ಅದು ರಶ್ಮಿಕಾ ರೀತಿ ಇರುತಿತ್ತು’ ಎಂದು ಸಾಕಷ್ಟು ಟ್ರೋಲ್ ಮಾಡಿದ್ದರು.

    ಸದ್ಯ ರಶ್ಮಿಕಾ ತೆಲುಗಿನಲ್ಲಿ ನಟ ನಿತಿನ್ ಜೊತೆ ನಟಿಸಿದ ‘ಭೀಷ್ಮ’ ಚಿತ್ರ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಈ ಸಿನಿಮಾ ಸಿತಾರಾ ಎಂಟರ್ ಟೇನ್‍ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು, ವೆಂಕಿ ಕುದುಮುಲ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

  • ಟಾಪ್ ಲೆಸ್ ಫೋಟೋಶೂಟ್ ಮಾಡಿಸಿದ ನಟಿಗೆ ಸೀರೆ ಉಡಿಸಿದ ನೆಟ್ಟಿಗರು

    ಟಾಪ್ ಲೆಸ್ ಫೋಟೋಶೂಟ್ ಮಾಡಿಸಿದ ನಟಿಗೆ ಸೀರೆ ಉಡಿಸಿದ ನೆಟ್ಟಿಗರು

    ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗೆ ಟಾಪ್‍ಲೆಸ್ ಫೋಟೋಶೂಟ್‍ನಲ್ಲಿ ಪೋಸ್ ಕೊಟ್ಟಿದ್ದರು. ಈ ಫೋಟೋವನ್ನು ನೋಡಿದ ನೆಟ್ಟಿಗರು ಕಿಯಾರಾ ಅವರನ್ನು ಸಖತ್ ಟ್ರೋಲ್ ಮಾಡುತ್ತಿದ್ದು, ಟಾಪ್ ಲೆಸ್ ಫೋಟೋನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿಗೆ ಸೀರೆ ಉಡಿಸಿ ಸಾಂಪ್ರದಾಯಿಕ ಲುಕ್ ನೀಡಿದ್ದಾರೆ.

    ಹೌದು. ಕಿಯಾರಾ ಅಡ್ವಾಣಿ ಇದೀಗ ಫೋಟೋ ಶೂಟ್ ಒಂದರಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಪ್ರಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ನಡೆಸಿದ ಕ್ಯಾಲೆಂಡರ್ ಫೋಟೋಶೂಟ್‍ನಲ್ಲಿ ಕಿಯಾರಾ ಟಾಪ್ ಲೆಸ್ ಆಗಿ ಪೋಸ್ ಕೊಟ್ಟಿದ್ದಾರೆ. ದೊಡ್ಡ ಎಲೆ ಹಿಂದೆ ನಿಂತು ಬೆತ್ತಲಾಗಿ ಕಿಯಾರ ಪೋಸ್ ಕೊಟ್ಟ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರಿಗೆ ಟ್ರೋಲ್ ಮಾಡಲು ವಿಷಯ ದೊರೆತಂತಾಗಿದೆ.

    https://www.instagram.com/p/B8tb_w5HCtW/

    ಫೋಟೋಶೂಟ್‍ನಲ್ಲಿ ಕಿಯಾರಾ ನೋಡಲು ಚೆನ್ನಾಗೆ ಕಾಣಿಸುತ್ತಾರೆ. ಆದರೆ ಟಾಪ್ ಲೆಸ್ ಆಗಿ ಪೋಸ್ ಕೊಟ್ಟು ಸದ್ಯ ಟ್ರೋಲ್ ಆಗುತ್ತಿದ್ದಾರೆ. ಟಾಪ್ ಲೆಸ್ ಆಗಿದ್ದ ಕಿಯಾರಾಗೆ ನೆಟ್ಟಿಗರು ಸೀರೆ ತೊಡಿಸಿ, ಇದು ನಿಜವಾದ ಅಂದ ಎಂದು ಕಾಲೆಳೆಯುತ್ತಿದ್ದಾರೆ.

    ಎಲೆ ಹಿಂದೆ ಬೆತ್ತಲಾಗಿರುವ ಕಿಯಾರಾರಿಗೆ ಸೀರೆ ಉಡಿಸಿ ನೆಟ್ಟಿಗರು ಮದುಮಗಳಂತೆ ಸಿಂಗರಿಸಿ, ಕೈಯಲ್ಲಿ ಹಿಡಿದಿರುವ ಎಲೆ ಮೇಲೆ ಮದುವೆ ಊಟವನ್ನೂ ಬಡಿಸಿರುವ ಹಾಗೆ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು ಸಖತ್ ಟ್ರೋಲ್ ಆಗುತ್ತಿದೆ.

    ಅಷ್ಟೇ ಅಲ್ಲದೆ ಡಬೂ ರತ್ನಾನಿ ನಡೆಸಿರುವ ಟಾಪ್ ಲೆಸ್ ಕ್ಯಾಲೆಂಡರ್ ಫೋಟೋಶೂಟ್ ಕೆಲ ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದ್ದು, ದಯವಿಟ್ಟು ಸರಿಯಾದ ಬಟ್ಟೆ ಹಾಕಿ ಎಂದು ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ. ಡಬೂ ರತ್ನಾನಿ ನಡೆಸಿದ ಲೇಟೆಸ್ಟ್ ಕ್ಯಾಲೆಂಡರ್ ಫೋಟೋಶೂಟ್‍ನಲ್ಲಿ ಕೇವಲ ಕಿಯಾರಾ ಅಡ್ವಾಣಿ ಮಾತ್ರವಲ್ಲ ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಮತ್ತು ಸನ್ನಿ ಲಿಯೋನ್ ಕೂಡ ಟಾಪ್ ಲೆಸ್ ಆಗಿ ಪೋಸ್ ಕೊಟ್ಟಿದ್ದಾರೆ.

    https://twitter.com/BrutalBhau/status/1229805948803407872

    ಡಬೂ ರತ್ನಾನಿಗೆ ಸೇರೆ ಉಡಿಸಿ ಟ್ರೋಲ್:
    ಕೆಲ ನೆಟ್ಟಿಗರು ಟಾಪ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟ ನಟಿಗೆ ಸೀರೆ ಉಡಿಸಿದರೆ, ಇನ್ನೂ ಕೆಲವರು ಒಂದು ಸ್ಟೆಪ್ ಮುಂದಕ್ಕೆ ಹೋಗಿ ಟಾಪ್ ಲೆಸ್ ಫೋಟೋ ಶೂಟ್ ನಡೆಸಿದ ಡಬೂ ರತ್ನಾನಿಗೆ ಸೀರೆ ಉಡಿಸಿ ಫೋಟೋ ಎಡಿಟ್ ಮಾಡಿದ್ದಾರೆ. ಈ ಫೋಟೋಗಳು ಕೂಡ ಎಲ್ಲೆಡೆ ಸಖತ್ ಟ್ರೋಲ್ ಆಗುತ್ತಿದೆ.

  • 10 ವರ್ಷಗಳಲ್ಲಿ 5 ಡೆಡ್ ಲೈನ್- ಇನ್ನೂ ಪೂರ್ಣಗೊಳ್ಳದ ಪಂಪ್‍ವೆಲ್ ಸೇತುವೆ ಕಾಮಗಾರಿ

    10 ವರ್ಷಗಳಲ್ಲಿ 5 ಡೆಡ್ ಲೈನ್- ಇನ್ನೂ ಪೂರ್ಣಗೊಳ್ಳದ ಪಂಪ್‍ವೆಲ್ ಸೇತುವೆ ಕಾಮಗಾರಿ

    – ಅತೀ ಹೆಚ್ಚು ಟ್ರೋಲ್‍ಗೆ ಒಳಗಾದ ದೇಶದ No.1 ಸಂಸದ ನಳಿನ್
    – ಸಾಮಾಜಿಕ ಜಾಲತಾಣಗಳಲ್ಲಿ ಕಟೀಲ್ ವಿರುದ್ಧ ಆಕ್ರೋಶ

    ಮಂಗಳೂರು: ನಗರದ ಹೆಬ್ಬಾಗಿಲು ಎಂದೇ ಖ್ಯಾತಿ ಗಳಿಸಿರುವ ಪಂಪ್‍ವೆಲ್ ವೃತ್ತ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಪಂಪ್‍ವೆಲ್ ಮೇಲ್ಸೆತುವೆ ಪೂರ್ಣಗೊಳ್ಳದ್ದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಒಂದು ವೃತ್ತದ ಸೇತುವೆ ಈ ಪರಿ ಸುದ್ದಿಯಾಗಿದ್ದು, ಅದಕ್ಕೆ ಬಲವಾದ ಕಾರಣವೂ ಇದೆ. ಮಂಗಳೂರಿನ ಪಂಪ್ ವೆಲ್ ವೃತ್ತಕ್ಕೂ ಸಂಸದ ನಳಿನ್ ಕುಮಾರ್ ಕಟೀಲ್‍ಗೂ ಗಾಢ ನಂಟಿದೆ. ಕಳೆದ ಹತ್ತು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಮಂಗಳೂರಿನ ಪಂಪ್ ವೆಲ್ ಮೇಲ್ಸೆತುವೆ ಕಾಮಗಾರಿ ಡಿಸೆಂಬರ್ ಕೊನೆಗೆ ಮುಗಿದು, 2020ರ ಹೊಸ ವರ್ಷಕ್ಕೆ ಉದ್ಘಾಟನೆ ಆಗುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದರು. ಆದರೆ ಡಿಸೆಂಬರ್ ಮುಗಿದು ಹೊಸ ವರ್ಷ ಬಂದ್ರೂ ಕಾಮಗಾರಿ ಮುಗಿದೇ ಇಲ್ಲ.

    ಸಂಸದ ನಳಿನ್ ಕುಮಾರ್ ಹೀಗೆ ಡೆಡ್ ಲೈನ್ ನೀಡುವುದು, ಉದ್ಘಾಟನೆಗೆ ದಿನ ನಿಗದಿ ಮಾಡುವುದು ಮೊದಲೇನಲ್ಲ. ಒಂದು ವರ್ಷದಲ್ಲಿ ನಳಿನ್ ಕುಮಾರ್, ಹೀಗೆ ಐದು ಬಾರಿ ಡೆಡ್ ಲೈನ್ ನೀಡಿದ್ದಾರೆ. ಹೀಗಾಗಿ ನಳಿನ್ ಭರವಸೆ ಈ ಬಾರಿ ಭಾರೀ ಪ್ರಮಾಣದ ಟ್ರೋಲಿಗೆ ಕಾರಣವಾಗಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿಗೆ ಇನ್ನೂ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ. ಕೆಲಸ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಸಂಸದ ನಳಿನ್ ಕುಮಾರ್ ಕಟೀಲ್ ಭಾರೀ ಟ್ರೋಲಿಗೆ ಒಳಗಾಗಿದ್ದು, ಜನರ ಟೀಕೆಗೆ ಗುರಿಯಾಗಿದ್ದಾರೆ.

    ಟ್ರೋಲ್‍ಗಳಿಗೆ ಸಿಕ್ಕಾಪಟ್ಟೆ ಆಹಾರವಾಗಿರುವ ಪಂಪ್ ವೆಲ್ ಫ್ಲೈ ಓವರ್ ಮತ್ತು ನಳಿನ್ ಕುಮಾರ್ ಕಟೀಲ್ ಅವರಿಗೆ ಸದ್ಯಕ್ಕೆ ಮುಕ್ತಿ ಸಿಗುವ ಸಾಧ್ಯತೆಗಳು ಕಡಿಮೆ. ಕೇವಲ ಒಂದೂವರೆ ಕಿಲೋಮೀಟರ್ ಉದ್ದದ ಫ್ಲೈ ಓವರ್ ಕಾರ್ಯ ಅರ್ಧದಷ್ಟು ಮಾತ್ರ ಪೂರ್ಣಗೊಂಡಿದೆ. ನವಯುಗ ಕಂಪನಿ 2009 ರಿಂದ ಪಂಪ್ವೆಲ್ ಫ್ಲೈ ಓವರ್ ಕೆಲಸ ಮಾಡುತ್ತಿದ್ದು, ಕಾಮಗಾರಿ ಇನ್ನೂ ಮುಗಿದಿಲ್ಲ. ದೇಶದಲ್ಲೇ ಅತೀ ನಿಧಾನಗತಿಯ ಕಾಮಗಾರಿ ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಆಗಿರುವುದರಿಂದ ಸಂಸದ ನಳಿನ್ ಕುಮಾರ್ ಕಟೀಲ್ ಟ್ರೋಲ್ ಗಳಿಗೆ ಆಹಾರವಾಗುತ್ತಿದ್ದಾರೆ.

    ಕುಂದಾಪುರದಿಂದ ತಲಪಾಡಿಯವರೆಗೆ 91 ಕಿಲೋ ಮೀಟರ್ ರಸ್ತೆಯನ್ನು ಚತುಷ್ಪಥಗೊಳಿಸುವ ಸುಮಾರು 1,300 ಕೋಟಿ ರೂ. ಯೋಜನೆಯಲ್ಲಿ ಈ ಪಂಪ್ ವೆಲ್ ಫ್ಲೈ ಓವರ್ ಕೂಡ ಒಂದು. ಆದರೆ ಕಂಪನಿ ನಷ್ಟದಲ್ಲಿ ಮುಳುಗಿದ್ದರಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿತ್ತು. 6-7 ತಿಂಗಳ ಹಿಂದೆ ಕೇಂದ್ರ ಸರ್ಕಾರದಿಂದ ಸಾಲ ಪಡೆದು ಮತ್ತೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ನಿರೀಕ್ಷಿತ ವೇಗದಲ್ಲಿ ಕೆಲಸ ನಡೆಯದಿರುವ ಕಾರಣ ಫ್ಲೈ ಓವರ್ ಕೆಲಸ ಪೂರ್ಣಗೊಂಡಿಲ್ಲ. 8 ಪಿಲ್ಲರ್ ಗಳು ಎದ್ದು ನಿಂತಿದ್ದು, ಕಾಂಕ್ರೀಟ್ ಹಾಕುವುದು ಸೇರಿದಂತೆ ಇನ್ನೂ ಪ್ರಮುಖ ಕೆಲಸಗಳು ಬಾಕಿ ಇವೆ.

    ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೈವೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ನಳಿನ್ ಕುಮಾರ್ ಕಟೀಲ್, ಮತ್ತೆ ಜನವರಿ ಅಂತ್ಯಕ್ಕೆ ಡೆಡ್ ಲೈನ್ ನೀಡಿದ್ದಾರೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕರಾವಳಿ ಜನ ಕಾತುರದಿಂದ ಕಾಯುತ್ತಿದ್ದ ಪಂಪ್ವೆಲ್ ಫ್ಲೈ ಓವರ್ ಉದ್ಘಾಟನೆ ಮತ್ತಷ್ಟು ವಿಳಂಬವಾಗಲಿದ್ದು, ಪಂಪ್ ವೆಲ್ ಫ್ಲೈ ಓವರ್ ಕರಾಳ ಇತಿಹಾಸದಲ್ಲಿ ಹುದುಗಿಹೋಗಲಿದೆ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

  • ಯಡಿಯೂರಪ್ಪರ ಛಲದ ಬಗ್ಗೆ ಡಿಕೆಶಿ ಹೇಳಿದ ಮೆಚ್ಚುಗೆಯ ಮಾತು ವೈರಲ್

    ಯಡಿಯೂರಪ್ಪರ ಛಲದ ಬಗ್ಗೆ ಡಿಕೆಶಿ ಹೇಳಿದ ಮೆಚ್ಚುಗೆಯ ಮಾತು ವೈರಲ್

    ತುಮಕೂರು: ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಈ ಹಿಂದೆ ಸದನದಲ್ಲಿ ಡಿ.ಕೆ ಶಿವಕುಮಾರ್, ಸಿಎಂ ಯಡಿಯೂರಪ್ಪ ಅವರ ಬಗ್ಗೆ ವ್ಯಕ್ತಪಡಿಸಿದ ಮೆಚ್ಚುಗೆ ಮಾತುಗಳು ಸಖತ್ ವೈರಲ್ ಆಗಿದೆ.

    ಯಡಿಯೂರಪ್ಪ ಅವರ ಛಲವನ್ನು ನಾನು ಅಭಿನಂದಿಸುತ್ತೆನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದರು. ಅಲ್ಲದೆ ಯಶಸ್ಸು ಕಾಣಬೇಕಾದರೇ ಧರ್ಮರಾಯನ ಧರ್ಮತ್ವ ಇರಬೇಕು, ದಾನಶೂರ ಕರ್ಣನ ದಾನತ್ವ ಇರಬೇಕು, ಅರ್ಜುನನ ಗುರಿ ಇರಬೇಕು, ಭೀಮನ ಬಲ, ವಿದೂರನ ನೀತಿ, ಕೃಷ್ಣನ ತಂತ್ರ ಜೊತೆಗೆ ಯಡಿಯೂರಪ್ಪರ ಛಲವೂ ಬೇಕು ಎಂದು ಡಿಕೆ ಶಿವಕುಮಾರ್ ಬಿಎಸ್‍ವೈರನ್ನು ಹಾಡಿಹೊಗಳಿದ್ದರು.

    ಯಡಿಯೂರಪ್ಪನವರನ್ನು ಧರ್ಮರಾಯ, ಕರ್ಣ, ಅರ್ಜುನ, ಭೀಮ, ವಿದೂರ, ಕೃಷ್ಣನಿಗೆ ಹೋಲಿಕೆ ಮಾಡಿ ಛಲದಂಕ ಮಲ್ಲ ಎಂದು ಬಣ್ಣಿಸಿದ್ದರು. ಪ್ರಸ್ತುತ ಉಪ ಚುನಾವಣೆಯಲ್ಲಿ 12 ಸ್ಥಾನ ಗೆದ್ದು ಸಿಎಂ ಯಡಿಯೂರಪ್ಪರ ಬೀಗುತ್ತಿದ್ದಂತೆ ಡಿಕೆಶಿ ಸಲ್ಲಿಸಿದ್ದ ಅಭಿನಂದನೆ ವಿಡಿಯೋ ವೈರಲ್ ಆಗಿದೆ. 29 ಸೆಕೆಂಡಿನ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

  • ತಾಯಿಯನ್ನು ಟ್ರೋಲ್ ಮಾಡಿದವರ ವಿರುದ್ಧ ರೊಚ್ಚಿಗೆದ್ದ ರಾನು ಪುತ್ರಿ

    ತಾಯಿಯನ್ನು ಟ್ರೋಲ್ ಮಾಡಿದವರ ವಿರುದ್ಧ ರೊಚ್ಚಿಗೆದ್ದ ರಾನು ಪುತ್ರಿ

    ಮುಂಬೈ: ಇಂಟೆರ್‌ನೆಟ್ ಸ್ಟಾರ್ ರಾನು ಮೊಂಡಲ್ ತಮ್ಮ ಫೇಕ್ ಫೋಟೋದಲ್ಲಿನ ಮೇಕಪ್‍ನಿಂದಾಗಿ ಸಾಕಷ್ಟು ಟ್ರೋಲ್ ಆಗಿದ್ದು, ಅವರ ಮೇಲೆ ಹಲವು ಮಿಮ್ಸ್‌ಗಳನ್ನು ಮಾಡಲಾಗಿತ್ತು. ಈಗ ತಾಯಿಯನ್ನು ಟ್ರೋಲ್ ಮಾಡಿದವರ ವಿರುದ್ಧ ರಾನು ಪುತ್ರಿ ರೊಚ್ಚಿಗೆದ್ದಿದ್ದಾರೆ.

    ಕೆಲವು ದಿನಗಳ ಹಿಂದೆ ರಾನು ಅವರ ಫೋಟೋವನ್ನು ಎಡಿಟ್ ಮಾಡಿ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಆದರೆ ಟ್ರೋಲ್‍ಗಳ ಬಗ್ಗೆ ರಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಅವರ ಮಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಟ್ರೋಲ್ ಹಾಗೂ ಮಿಮ್ಸ್ ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ರಾನು ಮೊಂಡಲ್ ಮೇಕಪ್ ಫೋಟೋ ವೈರಲ್ – ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್

    ರಾನು ಅವರ ಮಗಳು ಎಲಿಜಬೆಥ್, “ನನ್ನ ತಾಯಿಯನ್ನು ಈ ರೀತಿ ಟ್ರೋಲ್ ಮಾಡಿರುವುದು ನೋಡಿ ನನಗೆ ತುಂಬಾ ದುಃಖವಾಗಿದೆ. ನನ್ನ ತಾಯಿಗೆ ಮೊದಲಿನಿಂದಲೂ ಆ್ಯಟಿಟ್ಯೂಡ್ ಸಮಸ್ಯೆ ಇದೆ. ಮೊದಲಿನಿಂದಲೂ ಅವರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜೀವನದಲ್ಲಿ ತುಂಬಾ ಕಷ್ಟಪಟ್ಟ ವ್ಯಕ್ತಿ ಯಶಸ್ಸು ಪಡೆದಾಗ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಎಂಬುದು ತುಂಬಾ ದುಃಖದ ಸಂಗತಿ” ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರಾನು ಮೇಕಪ್ ಫೋಟೋ ವೈರಲ್- ಮೇಕಪ್ ಆರ್ಟಿಸ್ಟ್‌ನಿಂದ ನಿಜವಾದ ಫೋಟೋ ಶೇರ್

    ಉತ್ತರ ಪ್ರದೇಶದ ಕಾನ್ಪುರದ ಬ್ಯೂಟಿ ಪಾರ್ಲರ್ ಕಾರ್ಯಕ್ರಮಕ್ಕೆ ರಾನು ಆಗಮಿಸಿದ್ದರು. ಈ ವೇಳೆ ಸ್ವತಃ ಮೇಕಪ್ ಆರ್ಟಿಸ್ಟ್ ಅವರಿಗೆ ಮೇಕಪ್ ಮಾಡಿದ್ದರು. ಆದರೆ ರಾನು ಅವರ ಈ ಫೋಟೋವನ್ನು ಕಿಡಿಗೇಡಿಗಳು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನು ನೋಡಿದ ನೆಟ್ಟಿಗರು ರಾನು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಅಲ್ಲದೆ ಅವರ ಮೇಲೆ ಮಿಮ್ಸ್‍ಗಳನ್ನು ಮಾಡಿದ್ದರು. ಇದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ

    ರಾನು ಅವರ ಫೇಕ್ ಮೇಕಪ್ ಫೋಟೋ ವೈರಲ್ ಆಗಿ ಸಾಕಷ್ಟು ಟ್ರೋಲ್ ಆಗುತ್ತಿತ್ತು. ಇದನ್ನು ನೋಡಿದ ಮೇಕಪ್ ಆರ್ಟಿಸ್ಟ್ ಸಂಧ್ಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಅಲ್ಲದೆ ತಮ್ಮ ಇನ್‍ಸ್ಟಾದಲ್ಲಿ ತಾವು ಮಾಡಿದ ಮೇಕಪ್ ಫೋಟೋ ಹಾಗೂ ನಕಲಿ ಫೋಟೋವನ್ನು ಹಂಚಿಕೊಂಡಿದ್ದರು.

  • ರಾನು ಮೊಂಡಲ್ ಮೇಕಪ್ ಫೋಟೋ ವೈರಲ್ – ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್

    ರಾನು ಮೊಂಡಲ್ ಮೇಕಪ್ ಫೋಟೋ ವೈರಲ್ – ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್

    ಮುಂಬೈ: ಇಂಟೆರ್‌ನೆಟ್ ಸ್ಟಾರ್ ರಾನು ಮೊಂಡಲ್ ಮೇಕಪ್ ಹಾಕಿರುವ ಫೋಟೋ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ರಾನು ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಡಿಸೈನರ್ ಡ್ರೆಸ್ ಧರಿಸಿ ಹೆಚ್ಚು ಮೇಕಪ್ ಮಾಡಿಕೊಂಡಿದ್ದರು. ರಾನು ಅವರ ಮೇಕಪ್ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಹಾಗೂ ಮಿಮ್ಸಿ ಮಾಡಲು ಶುರು ಮಾಡಿದ್ದಾರೆ. ಕೆಲವು ಫೋಟೋದಲ್ಲಿ ರಾನು ಮೊಂಡಲ್ ಅವರು ತುಂಬಾ ಬೆಳ್ಳಗೆ ಕಾಣಿಸಿಕೊಂಡಿದ್ದಾರೆ. ಆದರೆ ಇದು ಅವರ ನಿಜವಾದ ಫೋಟೋನಾ ಅಥವಾ ಫೋಟೋಶಾಪ್ ಮಾಡಿದ ಫೋಟೋನಾ ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ. ಇದ್ದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ

    ಈ ಮೊದಲು ರಾನು ಅವರ ವಿಡಿಯೋವೊಂದು ವೈರಲ್ ಆಗಿತ್ತು. ವಿಡಿಯೋದಲ್ಲಿ ಮಹಿಳಾ ಅಭಿಮಾನಿಯೊಬ್ಬರು ರಾನು ಅವರನ್ನು ನೋಡಿ ಅವರ ಕೈ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಅಭಿಮಾನಿಯ ವರ್ತನೆ ನೋಡಿ ರಾನು ಅವರ ಮೇಲೆ ರೇಗಾಡಿದ್ದರು. ಅಭಿಮಾನಿ ಕೈ ಹಿಡಿದು ಎಳೆಯುತ್ತಿದ್ದಂತೆ ರೊಚ್ಚಿಗೆದ್ದ ರಾನು, ನನ್ನ ಕೈಯನ್ನು ಏಕೆ ಹೀಗೆ ಹಿಡಿದು ಎಳೆದಿದ್ದೀರಿ. ಈ ರೀತಿ ಕೈ ಹಾಕುವುದು ಸರಿನಾ? ಏನಿದೆಲ್ಲಾ? ಎಂದು ಮಹಿಳೆ ಮೇಲೆ ರೇಗಾಡಿದ ವಿಡಿಯೋ ವೈರಲ್ ಆಗಿತ್ತು. ಇದ್ದನ್ನೂ ಓದಿ: ಮತ್ತೆ ರಾನು ವರ್ತನೆ ನೋಡಿ ನೆಟ್ಟಿಗರು ಗರಂ: ವಿಡಿಯೋ ವೈರಲ್

    https://twitter.com/Sk_Shizan/status/1195778253752913920?ref_src=twsrc%5Etfw%7Ctwcamp%5Etweetembed%7Ctwterm%5E1195778253752913920&ref_url=https%3A%2F%2Fwww.jagran.com%2Fentertainment%2Fbollywood-ranu-mondal-new-look-photos-viral-on-social-media-user-trolled-her-for-heavy-makeup-19764696.html

    ಅದಾದ ಬಳಿಕ ರಾನು ಅವರ ಮತ್ತೊಂದು ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಮಾಧ್ಯಮದವರು ರಾನು ಅವರನ್ನು ಹೊಗಳುತ್ತಾ ನಿಮಗೆ ಇಷ್ಟು ದೊಡ್ಡ ಯಶಸ್ಸು ಸಿಕ್ಕಿದೆ. ನಿಮಗೆ ಹೇಗೆ ಅನಿಸುತ್ತಿದೆ ಎಂದು ಪ್ರಶ್ನಿಸಿದ್ದರು. ಆಗ ರಾನು ಬ್ಯಾಗಿನಿಂದ ಏನೋ ತೆಗೆದುಕೊಂಡು ತಿನ್ನುತ್ತಾರೆ. ಬಳಿಕ ಅಲ್ಲಿ ಇಲ್ಲಿ ನೋಡುತ್ತಾ ಮಾಧ್ಯಮದವರಿಗೆ ನೀವು ಹೇಳಿದ್ದು ನನಗೆ ಕೇಳಿಸಲಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಈ ವಿಡಿಯೋ ನೋಡಿ ನೆಟ್ಟಿಗರು ರಾನು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

  • ‘ಪ್ರೆಶರ್ ಕುಕ್ಕರ್’ – ಹಾರ್ದಿಕ್ ಪಾಂಡ್ಯರನ್ನು ಟ್ರೋಲ್ ಮಾಡಿದ ಬುಮ್ರಾ

    ‘ಪ್ರೆಶರ್ ಕುಕ್ಕರ್’ – ಹಾರ್ದಿಕ್ ಪಾಂಡ್ಯರನ್ನು ಟ್ರೋಲ್ ಮಾಡಿದ ಬುಮ್ರಾ

    ಮುಂಬೈ: ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ಜಿಮ್‍ನಲ್ಲಿ ವ್ಯಾಯಾಮ ಮಾಡುತ್ತಿದ್ದ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ವಿಡಿಯೋ ಪ್ರತಿಕ್ರಿಯೆ ನೀಡಿರುವ ಜಸ್ಪ್ರೀತ್ ಬುಮ್ರಾ ಹಾರ್ದಿಕ್‍ರನ್ನು ಟ್ರೋಲ್ ಮಾಡಿದ್ದಾರೆ.

    ಬೆನ್ನು ನೋವಿನ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪಾಂಡ್ಯ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾ ದೇಶದ ವಿರುದ್ಧ ಟೂರ್ನಿಗೆ ಅಲಭ್ಯರಾಗಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವ ಪಾಂಡ್ಯ ವಿವಿಧ ಪೈಲೇಟ್ಸ್ ವ್ಯಾಯಾಮ ಮಾಡುತ್ತಿರುವ ವಿಡಿಯೋ ಟ್ವೀಟ್ ಮಾಡಿ, ಹಿಂದಿಗಿಂತಲೂ ಮತ್ತಷ್ಟು ಶಕ್ತಿಶಾಲಿಯಾಗಿ ಕಮ್ ಬ್ಯಾಕ್ ಮಾಡುವ ಕುರಿತು ಹೇಳಿದ್ದರು. ಅಲ್ಲದೇ ತಮಗಾಗಿ ಪ್ರಾರ್ಥಿಸಿದವರಿಗೆ ಧನ್ಯವಾದ ತಿಳಿಸಿದ್ದರು.

    https://twitter.com/hardikpandya7/status/1195283628218961925

    ಇತ್ತ ಹಾರ್ದಿಕ್ ಪಾಂಡ್ಯ ಟ್ವೀಟ್ ಪ್ರತಿಕ್ರಿಯೆ ನೀಡಿರುವ ಬುಮ್ರಾ, ಸರ್ ನೀವು ಪ್ರೆಶರ್ ಕುಕ್ಕರ್ ನಂತೆ ಧ್ವನಿ ಮಾಡುತ್ತಿದ್ದೀರಿ ಎಂದು ನಗುತ್ತಿರುವ ಇಮೋಜಿಯನ್ನು ಹಾಕಿ ಕಾಲೆಳೆದಿದ್ದಾರೆ. ಇತ್ತ ಬುಮ್ರಾ ಕೂಡ ಬೆನ್ನು ನೋವಿನ ಸಮಸ್ಯೆ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಯಾರಿ ನಡೆಸಿದ್ದಾರೆ. ಆದರೆ ಮುಂದಿನ ವರ್ಷ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಸರಣಿಯವರೆಗೂ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ತೀರ್ಮಾನಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

  • ಬೇರೆಯವ್ರ ವೈಯಕ್ತಿಕ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳೋದು ನಿಲ್ಲಿಸಿ: ರಚಿತಾ ಗರಂ

    ಬೇರೆಯವ್ರ ವೈಯಕ್ತಿಕ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳೋದು ನಿಲ್ಲಿಸಿ: ರಚಿತಾ ಗರಂ

    ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಟ್ರೋಲ್ ಮಾಡುವವರ ವಿರುದ್ಧ ಗರಂ ಆಗಿದ್ದಾರೆ.

    ಇತ್ತೀಚೆಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗಿದ್ದರು. ಬಳಿಕ ಸ್ವತಃ ರಶ್ಮಿಕಾ ಅವರೇ ಟ್ರೋಲ್‍ಗಳಿಗೆ ಖಡಕ್ಕಾಗಿ ಪ್ರತಿಕ್ರಿಯೆ ನೀಡಿದ್ದರು. ಸದ್ಯ ರಚಿತಾ ರಾಮ್ ಇತ್ತೀಚೆಗಷ್ಟೇ ಟ್ರೋಲ್ ಆಗಿದ್ದ ರಶ್ಮಿಕಾ ವಿಚಾರವನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

    ಟ್ರೋಲ್ ಮಾಡುವುದು ತಪ್ಪಲ್ಲ. ಆದರೆ ಪಾಸಿಟಿವ್ ಆಗಿ ಟ್ರೋಲ್ ಮಾಡಿ. ಈ ಸ್ಥಾನಕ್ಕೆ ಬರಲು ನಾವು ತುಂಬಾ ಕಷ್ಟಪಟ್ಟಿರುತ್ತೇವೆ. ನಾನು ನಮ್ಮ ಸ್ಥಾನಕ್ಕೆ ಗೌರವ ಕೊಡುತ್ತೇವೆ. ಹಾಗೆಯೇ ನೀವು ಬೇರೆಯವರಿಗೆ ಗೌರವ ಕೊಡಿ. ಬೇರೆಯವರ ವೈಯಕ್ತಿಕ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ.

    ಇತ್ತ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಅವರ ಮದುವೆ ನಿಶ್ಚಯವಾಗಿದೆ. ಡಿಸೆಂಬರ್ 6ರಂದು ನಿತ್ಯಾ ಅವರು ಉದ್ಯಮಿಯನ್ನು ಮದುವೆ ಆಗಲಿದ್ದಾರೆ. ಉದ್ಯಮಿ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದು, ಸಹೋದರಿಯ ಮದುವೆ ವಿಚಾರವಾಗಿ ರಚಿತಾ ತುಂಬಾ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಉತ್ಸುಕಳಾಗಿದ್ದೇನೆ ಎಂದು ರಚಿತಾ ಸಂತಸ ವ್ಯಕ್ತಪಡಿಸಿದ್ದಾರೆ.

  • ಗಾಂಧಿ ಪುತ್ಥಳಿ ಮುಂದೆ ಗಳಗಳನೆ ಅತ್ತ ಎಸ್‍ಪಿ ನಾಯಕ ಟ್ರೋಲ್- ವಿಡಿಯೋ ವೈರಲ್

    ಗಾಂಧಿ ಪುತ್ಥಳಿ ಮುಂದೆ ಗಳಗಳನೆ ಅತ್ತ ಎಸ್‍ಪಿ ನಾಯಕ ಟ್ರೋಲ್- ವಿಡಿಯೋ ವೈರಲ್

    ಲಕ್ನೋ: ಬುಧವಾರ ಸಮಾಜವಾದಿ ಪಕ್ಷದ ನಾಯಕ ಫಿರೋಜ್ ಖಾನ್ ಮಹಾತ್ಮ ಗಾಂಧೀಜಿಯನ್ನು ನೆನೆದು ಅವರ ಪುತ್ಥಳಿ ಮುಂದೆ ಗಳಗಳನೆ ಅತ್ತ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದ್ಭುತ ನಟನೆ ಅವರಿಗೆ ಆಸ್ಕರ್ ಕೊಡಿ ಎಂದು  ನೆಟ್ಟಿಗರು ಫಿರೋಜ್ ಖಾನ್ ಕಾಲೆಳೆದಿದ್ದಾರೆ.

    ಉತ್ತರಪ್ರದೇಶದ ಸಂಬಲ್ ನಗರದ ಫವಾರ ಚೌಕದಲ್ಲಿರುವ ಗಾಂಧೀಜಿ ಪ್ರತಿಮೆ ಬಳಿ ಫಿರೋಜ್ ಖಾನ್ ಕಣ್ಣೀರು ಹಾಕಿದ್ದಾರೆ. ಇತರೆ ಎಸ್‍ಪಿ ನಾಯಕರು ಅಲ್ಲಿ ಕ್ಯಾಮೆರಾ ಕಂಡ ಕೂಡಲೇ ಅಳಲು ಆರಂಭಿಸಿ ನಾಯಕನಿಗೆ ಸಾಥ್ ಕೊಟ್ಟರು. ಮಹಾತ್ಮ ಗಾಂಧೀಜಿಯ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲು ಫಿರೋಜ್ ಖಾನ್ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಫಿರೋಜ್ ಖಾನ್ ನಮ್ಮ ಸಮಾಜದ ವಾಸ್ತವ ಸ್ಥಿತಿಯನ್ನು ಗಾಂಧೀಜಿ ಪುತ್ಥಳಿ ಮುಂದೆ ಹೇಳುತ್ತ ಗಳಗಳನೆ ಕಣ್ಣೀರು ಹಾಕಿದ್ದರು. ಫಿರೋಜ್ ಖಾನ್ ಕಣ್ಣೀರು ಹಾಕುತ್ತಿದ್ದಂತೆ ಅವರ ಜೊತೆಗಿದ್ದ ಬೆಂಬಲಿಗರು ಕೂಡ ಅತ್ತು, ಗೋಗರಿದಿದ್ದಾರೆ.

    ಈ ದೇಶಕ್ಕೆ ನೀವು ಸ್ವಾತಂತ್ರ ತಂದುಕೊಟ್ಟು ನಮ್ಮನ್ನೆಲ್ಲ ಬಿಟ್ಟು ಬಾಪು ನಿವೇಕೆ ದೂರ ಹೋದಿರಿ? ನಮ್ಮನ್ನೆಲ್ಲಾ ಅನಾಥರಾಗಿ ಬಿಟ್ಟು ಹೋದಿರಿ. ನಿಮ್ಮ ಎಲ್ಲ ಆದರ್ಶಗಳು ಸಮಯ ಕಳೆದಂತೆ ಮರೆಯಾಗುತ್ತಿದೆ. ಇದನ್ನೆಲ್ಲ ನೋಡಲು ನಾವು ಇನ್ನೂ ಇರಬೇಕಾ ಎಂದು ಹೇಳಿದ ಫಿರೋಜ್ ಖಾನ್ ಜೋರಾಗಿ ಅಳಲು ಆರಂಭಿಸಿದರು. ಈ ವೇಳೆ ಅವರನ್ನು ನೋಡಿದ ಬೆಂಬಲಿಗರು ಕೂಡ ಬಿಕ್ಕಿ ಬಿಕ್ಕಿ ಅತ್ತರು.

    https://twitter.com/AsYouNtWish/status/1179437716221509632

    ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಫಿರೋಜ್ ಖಾನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಎಂಥ ಅಭಿನಯ, ಇವರಿಗೆ ಆಸ್ಕರ್ ಪ್ರಶಸ್ತಿ ಕೊಡಿ ಎಂದು ಕಮೆಂಟ್ ಮಾಡಿ ಟೀಕಿಸುತ್ತಿದ್ದಾರೆ.

    ಈ ಬಾರಿಯ ಆಸ್ಕರ್ ಪ್ರಶಸ್ತಿ ಫಿರೋಜ್ ಖಾನ್ ಅವರ ಕೈಸೇರುವುದರಲ್ಲಿ ಅನುಮಾನವೇ ಇಲ್ಲ. ಯಾವ ಸೀರಿಯಲ್ ನೋಡಿ ಬಂದು ಫಿರೋಜ್ ಖಾನ್ ಕಣ್ಣೀರು ಹಾಕಿದರೋ ಗೊತ್ತಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಕೆಲವರು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗೋ ಪ್ಲಾನ್ ಇದ್ರೆ ಹೇಳಿ, ಸುಮ್ಮನೆ ನಾಟಕ ಯಾಕೆ ಮಾಡುತ್ತೀರಾ? ಎಂದು ಕಿಡಿಕಾರಿದ್ದರೆ, ಇನ್ನೂ ಕೆಲವರು ಕೊನೆಗೂ ನಮ್ಮ ದೇಶಕ್ಕೆ ಒಂದೊಳ್ಳೆ ಪ್ರತಿಭಾವಂತ ನಟ ಸಿಕ್ಕಿದನಲ್ಲ ಅಂತ ಖುಷಿಯಾಯ್ತು ಎಂದೆಲ್ಲ ಸಖತ್ ಟ್ರೋಲ್ ಮಾಡಿ ಗೇಲಿ ಮಾಡುತ್ತಿದ್ದಾರೆ.