Tag: Troll

  • ನಿಮಗೇನು ಮಾಡಲು ಕೆಲಸ ಇಲ್ಲವೇ- ಟ್ರೋಲಿಗರ ವಿರುದ್ಧ ರಣ್‍ವೀರ್ ಸಿಂಗ್ ಗರಂ

    ನಿಮಗೇನು ಮಾಡಲು ಕೆಲಸ ಇಲ್ಲವೇ- ಟ್ರೋಲಿಗರ ವಿರುದ್ಧ ರಣ್‍ವೀರ್ ಸಿಂಗ್ ಗರಂ

    ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಆನ್‍ಲೈನ್ ಟ್ರೋಲ್ಸ್ ಬಗ್ಗೆ ನಟ ರಣ್‍ವೀರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

    ರಣ್‍ವೀರ್ ಕಾರಿನಲ್ಲಿ ಸಾಂಗ್ ಕೇಳುತ್ತಾ ಎಂಜಾಯ್ ಮಾಡಿಕೊಂಡು ಹೋಗುತ್ತಿದ್ದರು. ಈ ಮಧ್ಯೆಯೇ, “ಇಂದು ಎಂತಹ ವಿಭಿನ್ನವಾದ ಟ್ರೋಲ್‍ಗಳು ಬಂದಿವೆ. ಹೇ ಮೂಸ್ಯಿಕ್ ಬಂದ್ ಮಾಡು, ಜೋಕರ್ ತರ ಕಾಣಿಸುತ್ತಿದಿಯಾ ಎಂದು ಅನೇಕ ರೀತಿ ಟ್ರೋಲ್ ಮಾಡುತ್ತಿದ್ದಾರೆ ಎಂದಿದ್ದಾರೆ.

    ಅಲ್ಲದೇ “ನಿಮಗೇನು ಮಾಡಲು ಕೆಲಸ ಇಲ್ಲವೇ. ನನ್ನ ಜೀವನದ ಬಗ್ಗೆ ಮಾತನಾಡಲೂ ನೀವು ಯಾರು? ಎಂದು ರಣ್‍ವೀರ್ ಗರಂ ಆಗಿ ಪ್ರಶ್ನೆ ಮಾಡಿದ್ದಾರೆ.

    ನಟ ರಣವೀರ್ ಸಿಂಗ್ ಆಗಾಗ ವಿಭಿನ್ನ ಕಾಸ್ಟ್ಯೂಮ್‍ಗಳಲ್ಲಿ ಕಾಣಿಸಿಕೊಂಡು, ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೇ ಫೋಟೋಗಳನ್ನು ಟ್ರೋಲಿಗರು ಪೋಸ್ಟ್ ಮಾಡಿ ಅನೇಕ ರೀತಿ ಟ್ರೋಲ್ ಮಾಡುತ್ತಿರುತ್ತಾರೆ.

    https://twitter.com/filmfare/status/1297214933218729989

  • ಒಂದು ವರ್ಷದಲ್ಲಿ 10 ಕೆಜಿ ತೂಕ ಇಳಿಸಿಕೊಂಡ ಭೂಪತಿ ಬೆಡಗಿ ಶೆರಿನ್

    ಒಂದು ವರ್ಷದಲ್ಲಿ 10 ಕೆಜಿ ತೂಕ ಇಳಿಸಿಕೊಂಡ ಭೂಪತಿ ಬೆಡಗಿ ಶೆರಿನ್

    – ಟ್ರೋಲ್ ಮಾಡಿದವರಿಗೆ ಟಾಂಗ್ ಕೊಟ್ಟ ಶೆರಿನ್

    ಹೈದರಾಬಾದ್: ಒಂದು ವರ್ಷದಲ್ಲಿ 10 ಕೆಜಿ ತೂಕ ಇಳಿಸಿಕೊಂಡು ನಟಿ ಶೆರಿನ್ ಶೃಂಗಾರ್ ಅವರು ತಮ್ಮನ್ನು ಟ್ರೋಲ್ ಮಾಡುತ್ತಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ.

    ಕನ್ನಡದಲ್ಲಿ ದರ್ಶನ್ ಅವರ ಜೊತೆ ದ್ರುವ ಮತ್ತು ಭೂಪತಿ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮೆಚ್ಚುಗೆ ಪಾತ್ರರಾಗಿದ್ದ ನಟಿ ಶೆರಿನ್, ನಂತರದ ದಿನದಲ್ಲಿ ಸ್ವಲ್ಪ ದಪ್ಪ ಆಗಿದ್ದರು. ತನ್ನ ತೆಳ್ಳಗಿನ ಮೈಮಾಟದ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಶೆರಿನ್, ನಂತರ ತನ್ನ ದಪ್ಪಗಿನ ದೇಹದ ಮೂಲಕವೇ ಬಹಳ ಟ್ರೋಲ್ ಆಗಿದ್ದರು.

    https://www.instagram.com/p/CCQnLa0F9PR/

    ಟ್ರೋಲ್ ಮಾಡಿದವರಿಗೆ ಈಗ ಸರಿಯಾಗಿ ಉತ್ತರ ನೀಡಿರುವ ಶೆರಿನ್, ಲಾಕ್‍ಡೌನ್ ವೇಳೆ ತನ್ನ ದೇಹವನ್ನು ದಂಡಿಸಿ ಹತ್ತು ಕೆಜಿ ಸಣ್ಣ ಆಗಿದ್ದಾರೆ. ಈ ವಿಚಾರವಾಗಿ ಇನ್‍ಸ್ಟಾ ಪೋಸ್ಟ್ ಹಾಕಿರುವ ಶೆರಿನ್, ಒಂದು ವರ್ಷದಲ್ಲಿ ಹತ್ತು ಕೆಜಿ ಸಣ್ಣ ಆಗಿದ್ದೇನೆ. ಈಗ ನನ್ನ ಲುಕ್ ನೋಡಿ ನನಗೆ ಸಂತೋಷವಾಗಿದೆ. ತೂಕ ಇಳಿಸುವುದು ಸುಲಭ ಆದರೆ ಕೆಲ ಪದಗಳನ್ನು ಅರಗಿಸಿಕೊಳ್ಳುವುದು ಕಷ್ಟ. ನಾವು ಕೆಲವರ ಸಂತೋಷಕ್ಕೆ ಮತ್ತು ದುಃಖಕ್ಕೆ ಕಾರಣವಾಗಿರುತ್ತೇವೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/CCTLAQ2lXvB/

    ತೆಳ್ಳಗಿದ್ದ ಶೆರಿನ್ ದಪ್ಪ ಅಗುತ್ತಿದ್ದಂತೆ ಅವರ ದೇಹ ಸೌಂದರ್ಯವನ್ನು ಗುರಿಯಾಗಿಸಿಕೊಂಡು ಕೆಲವರು ಟ್ರೋಲ್ ಮಾಡಿದ್ದರು. ಜೊತೆಗೆ ನೀವು ಬಿಗ್ ಬಾಸ್‍ಗೆ ಎಂಟ್ರಿ ಕೊಟ್ಟಾಗ ನೀವು ಮಧ್ಯವಯಸ್ಕ ಆಂಟಿಯಂತೆ ಕಾಣುತ್ತಿದ್ದೀರಿ ಎಂದು ಓರ್ವ ಅಭಿಮಾನಿ ಕಮೆಂಟ್ ಮಾಡಿದ್ದ. ಇದಕ್ಕೆ ರಿಪ್ಲೈ ಕೊಟ್ಟಿದ್ದ ಶೆರಿನ್ ಜನರು ನಾವು ಹೇಗೆ ಕಾಣಿಸುತ್ತೇವೆ ಎನ್ನುವ ಆಧಾರದ ಮೇಲೆ ಬೇಗ ಜಡ್ಜ್ ಮಾಡುತ್ತಾರೆ. ನಾವು ನಿಜವಾಗಿಯು ಬಾಹ್ಯ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಇದು ಸ್ವಯಂ ಪ್ರೀತಿ ಮತ್ತು ಸ್ವಯಂ ಸ್ವೀಕಾರದ ಪರಿಕಲ್ಪನೆಯೊಂದಿಗೆ ಬದುಕಲು ಕಲಿಸುತ್ತೆ ಎಂದು ತಿರುಗೇಟು ನೀಡಿದ್ದರು.

    ಕನ್ನಡದ `ಪೊಲೀಸ್ ಡಾಗ್’ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಶೆರಿನ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ತಮಿಳು ಚಿತ್ರದಲ್ಲಿ ಶೆರಿನ್ ಖ್ಯಾತಿ ಗಳಿಸಿದ್ದಾರೆ. ದರ್ಶನ್ ಅಭಿನಯದ ಭೂಪತಿ ಸಿನಿಮಾ ಶೆರಿನ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಧ್ರುವ, ಭೂಪತಿ, ಸಿಹಿಗಾಳಿ ಸೇರಿದಂತೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಶೆರಿನ್ ಅಭಿನಯಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕಳೆದ ವರ್ಷ ತಮಿಳು ಬಿಗ್ ಬಾಸ್-3 ನಲ್ಲಿ ಶೆರಿನ್ ಭಾಗಿಯಾಗಿದ್ದರು. ಮೂರನೇ ರನ್ನರ್ ಅಪ್ ಆಗಿ ಬಿಗ್‍ಹೌಸ್‍ನಿಂದ ಹೊರಬಂದಿದ್ದರು.

  • ‘ಏನೋ ಸಿಗ್ನಲ್’- ನೆಟ್ಟಿಗರ ಅನುಮಾನಕ್ಕೆ ತೆರೆ ಎಳೆದ ಸ್ಯಾಂಡಲ್‍ವುಡ್ ಸಿಂಡ್ರೆಲಾ

    ‘ಏನೋ ಸಿಗ್ನಲ್’- ನೆಟ್ಟಿಗರ ಅನುಮಾನಕ್ಕೆ ತೆರೆ ಎಳೆದ ಸ್ಯಾಂಡಲ್‍ವುಡ್ ಸಿಂಡ್ರೆಲಾ

    ಬೆಂಗಳೂರು: ರಾಜ್ಯ ಸರ್ಕಾರದ ಲಾಕ್‍ಡೌನ್ ನಿಯಮಗಳ ಕುರಿತು ರಾಕಿಂಗ್ ಸ್ಟಾರ್ ಯಶ್ ಮಾಡಿದ ಪೋಸ್ಟ್ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಲಾಕ್‍ಡೌನ್ ಕುರಿತು ಯಶ್ ಮಾಡಿರುವ ಪೋಸ್ಟ್ ಹೊರತು ರಾಖಿ ಭಾಯ್ ಇನ್ನೇನೋ ಸಿಗ್ನಲ್ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಯಾಗುತ್ತಿತ್ತು. ಅನುಮಾನಕ್ಕೆ ಸ್ವತಃ ನಟಿ ಹಾಗೂ ಯಶ್ ಪತ್ನಿ ರಾಧಿಕಾ ಪಂಡಿತ್ ಉತ್ತರಿಸಿದ್ದಾರೆ.

    ಲಾಕ್‍ಡೌನ್ ದಿನಗಳನ್ನು ಎಂಜಾಯ್ ಮಾಡುತ್ತಿರುವ ಯಶ್ ದಂಪತಿ, ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದು, ಇದೇ ಗ್ಯಾಪ್‍ನಲ್ಲಿ ಕೆಜಿಎಫ್-2 ಸಿನಿಮಾದ ಕುರಿತು ಸಹ ಅಪ್‍ಡೇಟ್ಸ್ ನೀಡುತ್ತಿದ್ದಾರೆ. ಆದರೆ ತುಂಬಾ ದಿನಗಳ ಬಳಿಕ ರಾಕಿಂಗ್ ಸ್ಟಾರ್ ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದೂ ಸಹ ಲಾಕ್‍ಡೌನ್ ರೂಲ್ಸ್ ಕುರಿತು, ಈ ಪೋಸ್ಟ್ ಲಾಕ್‍ಡೌನ್ ರೂಲ್ಸ್ ಬಗ್ಗೆ ಗಮನ ಸೆಳೆದಿದ್ದಕ್ಕಿಂತ ಹೆಚ್ಚಾಗಿ ಬೇರೆಯದೇ ವಿಷಯದ ಕುರಿತು ವೈರಲ್ ಆಗಿತ್ತು. ಹೀಗಾಗಿ ಸ್ವತಃ ರಾಧಿಕಾ ಪಂಡೀತ್ ಪ್ರತಿಕ್ರಿಯಿಸಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ.

    ಅದ್ಯಾವ ವಿಷಯ ಏನು ಚರ್ಚೆ ಅಂತೀರಾ, ಅದೇ ರಾಧಿಕಾ ಪಂಡಿತ್ ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬ ಕುರಿತು. ಹೌದು ಪತ್ನಿ ಗರ್ಭಿಣಿಯಾಗಿದ್ದಾರೆ ಎಂಬ ಸಿಗ್ನಲ್ ನೀಡಲು ರಾಮಾಚಾರಿ ಈ ಪೋಸ್ಟ್ ಮಾಡಿದ್ದಾರೆ ಎಂದು ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಕಾರಣ ಯಶ್ ಹಾಕಿದ್ದ ಪೋಟೋದಲ್ಲಿ ಮೂರು ಬೆರಳು ತೋರಿಸಿದ್ದು. ಹೀಗಾಗಿ ಮೂರನೇ ಮಗು ಬರುತ್ತಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಕುರಿತು ಕಮೆಂಟ್ ಮಾಡುವ ಮೂಲಕ ಸ್ಯಾಂಡಲ್‍ವುಡ್ ಸಿಂಡ್ರೆಲಾ ಪ್ರತಿಕ್ರಿಯಿಸಿದ್ದಾರೆ. ಯಶ್ ಇನ್‍ಸ್ಟಾಗ್ರಾಮ್ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಅವರು, ಒಳ್ಳೆಯದು, ಒಬ್ಬ ಜವಾಬ್ದಾಯುತ ಪ್ರಜೆಯಾಗಿ ಈಗಲಾದರೂ ನನ್ನ ನಿಯಮಗಳನ್ನು ಪಾಲಿಸುತ್ತಿದ್ದೀಯಲ್ಲಾ ಎಂದಿದ್ದಾರೆ.

    ಗರ್ಭಿಣಿಯಾಗಿರುವ ಕುರಿತು ಉತ್ತರಿಸಿರುವ ಅವರು, ಸಿಗ್ನಲ್ ನೀಡಿದ್ದಾರೆ ಎಂಬ ಕುರಿತು ಯಾರೆಲ್ಲ ಯೋಚಿಸಿದ್ದೀರೋ ಅವರಿಗೆ ಉತ್ತರಿಸಲು ಬಯಸುತ್ತೇನೆ. ನಾನು ಗರ್ಭಿಣಿಯಾಗಿಲ್ಲ ಎಂದು, ಇಂಗ್ಲಿಷ್‍ನಲ್ಲಿ ನೋ ಐ ಆ್ಯಮ್ ನಾಟ್ ಪ್ರಗ್ನೆಂಟ್ ಎಂದು ಕಮೆಂಟ್ ಮಾಡಿದ್ದಾರೆ. ಈ ಮೂಲಕ ಹಲವರ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.

    ಭಾನುವಾರವಷ್ಟೇ ಯಶ್ ಲಾಕ್‍ಡೌನ್ ಕುರಿತು ಪೋಸ್ಟ್ ಮಾಡಿದ್ದರು. ತಮ್ಮ ಪತ್ನಿ ಜೊತೆಗಿರುವ ಫೋಟೋ ಅಪ್‍ಲೋಡ್ ಮಾಡಿ ಅದಕ್ಕೆ ಸಾಲುಗಳನ್ನು ಬರೆದಿದ್ದ ರಾಮಾಚಾರಿ, ಕರ್ನಾಟಕ ಸರ್ಕಾರ ಲಾಕ್‍ಡೌನ್ ಹೊಸ ನಿಯಮಗಳನ್ನು ಘೋಷಿಸಿದೆ. ಯಾಕೆ ಎಂದು ತಿಳಿದಿಲ್ಲ, ಇದನ್ನೇ ಇಟ್ಟುಕೊಂಡು ನನ್ನ ಹೆಂಡತಿ ನಿಯಮಗಳನ್ನು ರೂಪಿಸುತ್ತಾಳೆ. ಪ್ರತಿ ದಿನ ರಾತ್ರಿ 8ಕ್ಕೆ ಮನೆಗೆ ಬರಬೇಕು, ಭಾನುವಾರ ಸಂಪೂರ್ಣ ಲಾಕ್‍ಡೌನ್ ಎಂದು ಹೇಳುತ್ತಾಳೆ ಎಂದು ಪೋಸ್ಟ್ ಮಾಡುವ ಮೂಲಕ ಎಚ್ಚರಿಸಿದ್ದರು.

    ಏನೇ ಆಗಲಿ ಈ ಪತ್ನಿ ಸ್ನೇಹಿ ನಿಯಮಗಳು ಸ್ವಾಸ್ಥ್ಯ ಹಾಗೂ ಸುರಕ್ಷತೆ ಕಾಪಾಡುವಲ್ಲಿ ಸಹಾಯವಾಗಲಿವೆ. ಟೇಕ್ ಕೇರ್ ಗಾಯ್ಸ್ ಎಂದು ಬರೆದಿದ್ದು, ಈ ಪೋಸ್ಟ್‍ಗೆ ಪತ್ನಿ ರಾಧಿಕಾ ಪಂಡಿತ್ ಅವರನ್ನು ಟ್ಯಾಗ್ ಮಾಡಿದ್ದರು. ಈ ಮೂಲಕ ಸರ್ಕಾರದ ಲಾಕ್‍ಡೌನ್ ನಿಯಮಗಳ ಕುರಿತು ಸಂಕ್ಷಿಪ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗಿತ್ತು. ಅಲ್ಲದೆ ಲಾಕ್‍ಡೌನ್ ನಿಯಮಗಳ ಕುರಿತ ಚರ್ಚೆಗಳಿಗಿಂತ ಹೆಚ್ಚಾಗಿ ರಾಧಿಕಾ ಪ್ರಗ್ನೆಂಟ್ ಆಗಿರುವ ಸಿಗ್ನಲ್ ನೀಡಿದ್ದಾರೆ ಎಂದು ಟ್ರೋಲ್ ಆಗುತ್ತಿದೆ. ಹೀಗಾಗಿ ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.

  • ಸಾವನ್ನಪ್ಪಿದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ರೂಪದರ್ಶಿಯ ಟ್ರೋಲ್

    ಸಾವನ್ನಪ್ಪಿದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ರೂಪದರ್ಶಿಯ ಟ್ರೋಲ್

    – ಜನವರಿಯಲ್ಲಿ ಬೆಸ್ಟ್ ಫೀಮೇಲ್ ಮಾಡೆಲ್ ಅವಾರ್ಡ್
    – ಕರಾಚಿಯ ವಿಮಾನ ದುರಂತದಲ್ಲಿ ಸಾವು

    ಇಸ್ಲಾಮಾಬಾದ್: ಕರಾಚಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪಾಕ್ ರೂಪದರ್ಶಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

    ಜಾರಾ ಆಬಿದಾ ಸಾವನ್ನಪ್ಪಿದ ಬಳಿಕವೂ ಟ್ರೋಲ್ ಆಗುತ್ತಿರುವ ರೂಪದರ್ಶಿ. ಧಾರ್ಮಿಕ ನಿಯಮಗಳನ್ನ ಜಾರಾ ಪಾಲನೆ ಮಾಡುತ್ತಿರಲಿಲ್ಲ ಎಂದು ಒಂದು ಪಂಗಡದ ಜನ ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್‍ಗಳಿಗೆ ಪರ-ವಿರೋಧಗಳು ವ್ಯಕ್ತವಾಗುತ್ತಲೇ ಜಾರಾ ಬಳಸುತ್ತಿದ್ದ ಸೋಶಿಯಲ್ ಮೀಡಿಯಾ ಖಾತೆಗಳನ್ನು ಡಿ ಆ್ಯಕ್ಟಿವ್ ಮಾಡಲಾಗಿದೆ.

    ಪ್ಲೇನ್ ಕ್ರ್ಯಾಶ್ ನಲ್ಲಿ ಜಾರಾ ಬದುಕುಳಿದಿದ್ದಾರೆ ಎಂಬ ಸುದ್ದಿಗಳು ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಹಬ್ಬಿದ್ದವು. ಎಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದ ಕುಟುಂಬಸ್ಥರು, ಜಾರಾ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾಳೆ ಎಂದು ಖಚಿತಪಡಿಸಿದ್ದರು. ಸಾವಿನ ಸುದ್ದಿ ಖಚಿತವಾದ್ರೂ ಆಕೆ ಧರ್ಮ ವಿರೋಧಿ ಎಂಬ ಹೇಳಿಕೆಗಳನ್ನ ಬಳಸಿ ಟ್ರೋಲ್ ಮಾಡಿದ್ದಾರೆ.

    ಇರ್ಫಾನ್ ಎಂಬ ಸೋಶಿಯಲ್ ಮೀಡಿಯಾದಲ್ಲಿ, ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತೆ. ಯಾವ ಮುಸ್ಲಿಂ ಮಹಿಳೆ ತನ್ನ ಶರೀರವನ್ನು ಬಹಿರಂಗವಾಗಿ ತೋರಿಸುತ್ತಾಳೆ ಆಕೆಗೆ ನರಕ ಪ್ರಾಪ್ತಿಯಾಗುತ್ತೆ. ದೇವರು ಅಂತಹವರನ್ನು ಎಂದಿಗೂ ಕ್ಷಮಿಸಲ್ಲ. ಸ್ವರ್ಗ ಕೇವಲ ಶುದ್ಧ ಪುರುಷ ಮತ್ತು ಶುದ್ಧ ಮಹಿಳೆಯರಿಗೆ ಸಿಗುತ್ತೆ ಎಂದು ಬರೆದುಕೊಂಡಿದ್ದಾನೆ.

    ಜಾರಾ ಪರ ಬ್ಯಾಟಿಂಗ್: ಧರ್ಮ ವಿರೋಧಿ ಪಟ್ಟ ಕಟ್ಟಿ ಜಾರಾರನ್ನು ಕೆಲವರು ಟೀಕಿಸಿದ್ರೆ, ಮತ್ತೊಂದಿಷ್ಟು ಜನ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಕೆಲವರು ಜಾರಾರ ಸಾವನ್ನು ತಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಆ ಜನ ಜಾರಾ ವೃತ್ತಿಯನ್ನು ಕೆಟ್ಟದ್ದು ಅಂತ ಹೇಳೋದು ಅವರ ವೈಯಕ್ತಿಕ ಅಭಿಪ್ರಾಯ. ಈ ಸಮಯದಲ್ಲಿ ಸಾವನ್ನಪ್ಪಿರುವ ಜಾರಾಗಾಗಿ ಪ್ರಾರ್ಥನೆ ಮಾಡಬೇಕಿದೆ ಎಂದು ನೆಟ್ಟಿಗರೊಬ್ಬರು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕರಾಚಿ ವಿಮಾನ ದುರಂತಕ್ಕೆ 97 ಮಂದಿ ಬಲಿ

    28 ವರ್ಷದ ಜಾರಾ ಆಬಿದಾ ಮಾಡೆಲ್ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಹಲವು ವಿಶೇಷ ಕಾರ್ಯಕ್ರಮಗಳಲ್ಲಿ ಜಾರಾ ಭಾಗಿಯಾಗುವ ಮೂಲಕ ಮಾಡೆಲ್ ಲೋಕದಲ್ಲಿ ತಮ್ಮದೇ ಹೆಸರು ಮಾಡಿದ್ದರು. ಜನವರಿಯಲ್ಲಿ ಈ ವರ್ಷದ ಬೆಸ್ಟ್ ಫೀಮೇಲ್ ಮಾಡೆಲ್ ಅವಾರ್ಡ್ ಸಹ ಜಾರಾ ಪಡೆದುಕೊಂಡು ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಸಿದ್ಧತೆಯಲ್ಲಿದ್ದರು. ಈ ವರ್ಷದ ಅಂತ್ಯದಲ್ಲಿ ಜಾರಾ ಸಿನಿಮಾ ಸೆಟ್ಟೇರಲಿತ್ತು. ಅಷ್ಟರಲ್ಲಿ ಕರಾಚಿ ವಿಮಾನ ದುರಂತದಲ್ಲಿ ಜಾರಾ ಸಾವು ಆಗಿದೆ.

  • ಆನ್‍ಲೈನ್‍ಲ್ಲಿ ನಡತೆಯ ಬಗ್ಗೆ ಟೀಕೆ – 22ನೇ ವಯಸ್ಸಿಗೆ ಜಪಾನಿಸ್ ನಟಿ ಸಾವು

    ಆನ್‍ಲೈನ್‍ಲ್ಲಿ ನಡತೆಯ ಬಗ್ಗೆ ಟೀಕೆ – 22ನೇ ವಯಸ್ಸಿಗೆ ಜಪಾನಿಸ್ ನಟಿ ಸಾವು

    ಟೋಕಿಯೊ: ಸಾಮಾಜಿಕ ಜಾಲತಾಣದಲ್ಲಿ ತನ್ನ ನಡತೆಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಜಪಾನಿಸ್ ನಟಿ ಹಾಗೂ ವೃತ್ತಿಪರ ಕುಸ್ತಿಪಟು ಸಾವನ್ನಪ್ಪಿದ್ದಾರೆ.

    ಸಾವನ್ನಪ್ಪಿದ ನಟಿಯನ್ನು 22 ವರ್ಷದ ಹಾನಾ ಕಿಮುರಾ ಎಂದು ಗುರುತಿಸಲಾಗಿದೆ. ಈಕೆ ನೆಟ್‍ಫ್ಲಿಕ್ಸ್ ನಲ್ಲಿ ಪ್ರಸಾರವಾಗುವ ಜಪಾನಿಸ್‍ನ ಜನಪ್ರಿಯ ವೆಬ್ ಸೀರೀಸ್ ‘ಟೆರೇಸ್ ಹೌಸ್’ ನಲ್ಲಿ ನಟಿಸುತ್ತಿದ್ದರು. ಜೊತೆಗೆ ಈಕೆ ವೃತ್ತಿಪರ ಕುಸ್ತಿಪಟು ಆಗಿದ್ದರು. ಆದರೆ ಆನ್‍ಲೈನ್ ಅಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಹಾನಾ ಕಿಮುರಾಳ ಕುಸ್ತಿ ಸಂಸ್ಥೆ, ಆಕೆಯ ಸಾವಿಗೆ ನಿಖರವಾದ ಕಾರಣ ನಮಗೂ ಗೊತ್ತಿಲ್ಲ. ಆಕೆ ತುಂಬ ಪ್ರತಿಭಾನ್ವಿತ ನಟಿ ಮತ್ತು ಕುಸ್ತಿಪಟು. ಬಹಳ ಗಟ್ಟಿ ಮನಸ್ಸು ಇದ್ದ ಹುಡುಗಿ ಎಂದು ಹೇಳಿದ್ದಾರೆ. ಜೊತೆಗೆ ಅವಳು ಸಾಯುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಗಳಿಗೆ ಗುಡ್‍ಬಾಯ್ ಎಂಬ ಪೋಸ್ಟ್ ಅನ್ನು ಹಾಕಿಕೊಂಡಿದ್ದಾಳೆ ಎಂದು ಕುಸ್ತಿ ಸಂಸ್ಥೆ ತಳಿಸಿದೆ.

    ಈ ಬಗ್ಗೆ ಜಪಾನಿನ ಲೋಕಲ್ ಸುದ್ದಿ ವಾಹಿನಿಯೊಂದು ವರದಿ ಮಾಡಿದ್ದು, ಹಾನಾ ಕಿಮುರಾ ಟೆರೇಸ್ ಹೌಸ್‍ ನಲ್ಲಿ ಮಾಡಿದ ಪಾತ್ರವನ್ನು ಗುರಿಯಾಗಿ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಆಕೆಯ ನಡತೆಯ ಬಗ್ಗೆ ಕೆಟ್ಟದಾಗ ಟ್ರೋಲ್ ಮಾಡಲಾಗಿತ್ತು. ಈ ಕಾರಣದಿಂದ ಆಕೆ ಮನನೊಂದು ಸಾವನ್ನಪ್ಪಿರಬಹುದು ಎಂದು ಹೇಳಿದೆ. ಆದರೆ ಆಕೆ ಶನಿವಾರ ಸಾವನ್ನಪ್ಪಿದ್ದು, ಹಾನಾ ಯಾಕೆ ಸಾವನ್ನಪ್ಪಿದಳು ಎಂದು ನಿಖರ ಕಾರಣ ತಿಳಿದು ಬಂದಿಲ್ಲ.

    ಈ ಬಗ್ಗೆ ನೆಟ್‍ಫ್ಲಿಕ್ಸ್ ಮತ್ತು ಜಪಾನ್‍ನ ಫ್ಯೂಜಿ ಟೆಲಿವಿಷನ್ ಕೂಡ ಸುದ್ದಿ ಪ್ರಸಾರ ಮಾಡಿದ್ದು, ನಟಿ ಹಾನಾ ಕಿಮುರಾ ಸಾವನ್ನಪ್ಪಿದರು ಎಂದು ಹೇಳಲು ದುಖಃವಾಗುತ್ತಿದೆ. ಜಪಾನಿನ ಮಹಿಳಾ ಕುಸ್ತಿಪಟು ಆಗಿದ್ದ ಹಾನಾ ಸಾವಿಗೆ ಗೌರವ ಸಿಗಲಿ. ಅವಳ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಆಕೆಯ ಸಾವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಎರಡು ಮಾಧ್ಯಮಗಳು ಹೇಳಿವೆ.

    https://www.instagram.com/p/CAf_XFcJ8jQ/

    ಹಾನಾ ತಾನು ಸಾಯುವುದಕ್ಕೂ ಮುನ್ನಾ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿದ್ದು, ಇದರಲ್ಲಿ ಒಂದು ಬೆಕ್ಕಿನ ಜೊತೆ ಫೋಟೋ ಹಾಕಿ ‘ಐ ಲವ್ ಯು, ಖುಷಿಯಾದ ಜೀವನ, ನನ್ನನ್ನು ಕ್ಷಮಿಸು’ ಎಂದು ಬರೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಆಕೆ ಸಾವು ದೃಢಪಟ್ಟ ಕೂಡಲೇ ಮಾಧ್ಯಮವೊಂದು ಆಕೆಯ ಶವದ ಫೋಟೋವನ್ನು ಪ್ರಸಾರ ಮಾಡಿದೆ. ಆದರ ಜೊತೆಗೆ ಆಕೆ ಕೊನೆಯದಾಗಿ ಗುಡ್‍ಬಾಯ್ ಎಂದು ಪೋಸ್ಟ್ ಮಾಡಿದ್ದಾಳೆ ಎಂದು ಹೇಳಿದೆ.

    https://www.instagram.com/p/BwHSq4HnBDF/

    ಜಪಾನ್‍ನಲ್ಲಿ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿ ಇಬ್ಬರು ಕೆ-ಪಾಪ್ ಸಿಂಗರ್‍ಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾಲಿಗೆ ಹಾನಾ ಕಿಮೂರಾ ಅವರು ಸೇರಿದ್ದಾರೆ. ಆದರೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಪಾನಿನ ಸೈಬರ್ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ರಿಷಿ ಕಪೂರ್ ಅಂತ್ಯಕ್ರಿಯೆಯಲ್ಲಿ ಐಫೋನ್ ಹಿಡಿದು ಟ್ರೋಲ್ ಆದ ಆಲಿಯಾ

    ರಿಷಿ ಕಪೂರ್ ಅಂತ್ಯಕ್ರಿಯೆಯಲ್ಲಿ ಐಫೋನ್ ಹಿಡಿದು ಟ್ರೋಲ್ ಆದ ಆಲಿಯಾ

    ಮುಂಬೈ: ಬಾಲಿವುಡ್‍ನ ಖ್ಯಾತ ನಟ ರಿಷಿ ಕಪೂರ್ ಅವರ ಅಂತ್ಯಕ್ರಿಯೆ ವೇಳೆ ನಟಿ ಆಲಿಯಾ ಭಟ್ ಅವರು ತಮ್ಮ ಐಫೋನ್ ಹಿಡಿದುಕೊಂಡಿರುವುದು ಈಗ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ.

    ರಿಷಿ ಕಪೂರ್ ಅವರ ಅಂತ್ಯಕ್ರಿಯೆಗೆ ತೆರಳಿದ್ದ ಆಲಿಯಾ ಭಟ್ ಐಫೋನ್ ಹಿಡಿದುಕೊಂಡಿದ್ದರು. ಈ ಫೋಟೋ ಈಗ ವೈರಲ್ ಆಗಿದೆ. ಇದನ್ನು ಕಂಡ ನೆಟ್ಟಿಗರು ಮತ್ತು ಟ್ರೋಲಿಗರು ಈ ರೀತಿಯ ದುಃಖದ ಸಮಯದಲ್ಲೂ ನೀವು ಫೋನ್ ಹಿಡುದುಕೊಳ್ಳಬೇಕಾ? ಅಂತ್ಯಕ್ರಿಯೆ ಅನ್ನು ರೆಕಾರ್ಡ್ ಮಾಡಬೇಕಾ? ಎಂದು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದರು.

    ಆದರೆ ಅಂತ್ಯಕ್ರಿಯೆ ವೇಳೆಯೂ ಆಲಿಯಾ ಫೋನ್ ಹಿಡಿದುಕೊಂಡಿರುವುದಕ್ಕೆ ಕಾರಣವಿದೆ. ರಿಷಿ ಕಪೂರ್ ಅವರ ಮಗಳು ರಿದ್ಧಿಮಾ ಕಪೂರ್ ಅವರು ಲಾಕ್‍ಡೌನ್ ಇರುವುದರಿಂದ ದೆಹಲಿಯಿಂದ ಮುಂಬೈಗೆ ಬಂದು ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗಲಿಲ್ಲ. ಈ ಕಾರಣಕ್ಕೆ ಅವರು ಆಲಿಯಾ ಫೋನ್‍ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಈ ಮೂಲಕ ತಂದೆಯ ಅಂತ್ಯಸಂಸ್ಕಾರವನ್ನು ನೋಡಿದ್ದಾರೆ. ಆದರೆ ಇದು ತಪ್ಪು ಕಲ್ಪನೆಯಾಗಿ ಆಲಿಯಾ ಅವರು ಟ್ರೋಲ್ ಆಗಿದ್ದಾರೆ.

    ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಿದ್ಧಿಮಾ ಚಾರ್ಟರ್ ಫ್ಲೈಟ್ ಮೂಲಕ ತೆರಳಲು ಅನುಮತಿ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಇತ್ತ ದೆಹಲಿ ಪೊಲೀಸರು ರಸ್ತೆ ಮಾರ್ಗವಾಗಿ ತೆರಳಲು ಅನುಮತಿ ನೀಡಿದ್ದರು. ರಸ್ತೆ ಮೂಲಕ 1400 ಕಿ.ಮೀ. ಪ್ರಯಾಣ ಮಾಡಬೇಕು. ಹಾಗಾಗಿ ಕುಟುಂಬಸ್ಥರು ಪುತ್ರಿಯ ಅನುಪಸ್ಥಿತಿಯಲ್ಲಿ ರಿಷಿ ಕಪೂರ್ ಅವರ ಅಂತ್ಯಕ್ರಿಯೆ ನಡೆಸಿದ್ದರು.

    ಸುಮಾರು ಎರಡು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳುತ್ತಿದ್ದ ಬಾಲಿವುಡ್‍ನ ಲೆಜೆಂಡ್ ರಿಷಿ ಕಪೂರ್, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಸ್ಸಾಗಿದ್ದರು. ಆ ನಂತರ ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಗುರುವಾರ ಸಾವನ್ನಪ್ಪಿದ್ದರು. ಒಬ್ಬ ಒಳ್ಳೆಯ ನಟನನ್ನು ಕಳೆದುಕೊಂಡಿದ್ದಕ್ಕೆ ಇಡೀ ಭಾರತ ಚಿತ್ರರಂಗವೇ ಕಂಬನಿ ಮಿಡಿದಿತ್ತು.

    ಆಲಿಯಾ ರಣಬೀರ್ ಮದುವೆ
    ಆಲಿಯಾ ಭಟ್ ಮತ್ತು ರಿಷಿ ಕಪೂರ್ ಅವರ ಪುತ್ರ ರಣಬೀರ್ ಕಪೂರ್ ಅವರ ಮದುವೆ ಈಗಾಗಲೇ ನಿಶ್ಚಯವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮದುವೆಯ ವಿಚಾರವಾಗಿ ಈಗಾಗಲೇ ಎರಡು ಕುಟಂಬದ ಮಧ್ಯೆ ಮಾತುಕತೆ ನಡೆದಿತ್ತು. ಎಲ್ಲ ಅಂದುಕೊಂಡಂತೆ ಅಗಿದ್ದರೆ ಮದುವೆ ಸುದ್ದಿ ಘೋಷಣೆಯಾಗಬೇಕಿತ್ತು. ಆದರೆ ಮಗನ ಮದುವೆ ನೋಡದೆ ರಿಷಿ ಕಪೂರ್ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.

  • ಮದ್ಯ ಬಿಟ್ಟ ಮೇಲೆ ಜೀವನ ಚೆನ್ನಾಗಿದೆ: ಶ್ರುತಿ ಹಾಸನ್

    ಮದ್ಯ ಬಿಟ್ಟ ಮೇಲೆ ಜೀವನ ಚೆನ್ನಾಗಿದೆ: ಶ್ರುತಿ ಹಾಸನ್

    ಮುಂಬೈ: ಮದ್ಯಪಾನ ಮಾಡುವುದನ್ನು ಬಿಟ್ಟ ಮೇಲೆ ಜೀವನ ತುಂಬ ಚೆನ್ನಾಗಿದೆ ಎಂದು ನಟ ಕಮಲ್ ಹಾಸನ್ ಪುತ್ರಿ ನಟಿ ಶ್ರುತಿ ಹಾಸನ್ ಹೇಳಿದ್ದಾರೆ.

    ಶ್ರುತಿ ಹಾಸನ್ ಅವರು ಭಾರತ ಚಿತ್ರರಂಗದ ಮೇರು ನಟ ಕಮಲ್ ಹಾಸನ್ ಮತ್ತು ಸಾರಿಕಾ ಅವರ ಪುತ್ರಿ. ಈ ಮುಂಚೆ ಮದ್ಯಪಾನ ಪ್ರಿಯೆ ಆಗಿದ್ದ ಶ್ರುತಿ, ತನ್ನ ಕೆಲ ವಿವಾದಗಳಿಂದ ಹೆಚ್ಚು ಟ್ರೋಲ್ ಆದವರು. ಈಗ ಶ್ರುತಿ ಅವರು ಟ್ರೋಲ್‍ಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ ಮತ್ತು ಮದ್ಯಪಾನದ ಬಗ್ಗೆ ಅವರ ಅಭಿಪ್ರಾಯವೇನು ಎಂಬುದನ್ನು ತಿಳಿಸಿದ್ದಾರೆ.

    ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಶ್ರುತಿ ಅವರು, ಈ ಹಿಂದೆ ನಾನು ನನ್ನ ಸ್ನೇಹಿತರ ಜೊತೆ ಸೇರಿಕೊಂಡು ತುಂಬ ಮದ್ಯಪಾನ ಮಾಡುತ್ತಿದ್ದೆ. ಜೊತೆಗೆ ವೀಕೆಂಡ್ ಬಂತು ಎಂದರೆ ಶನಿವಾರ ರಾತ್ರಿ ತುಂಬ ಮದ್ಯವನ್ನು ಸೇವಿಸುತ್ತಿದೆ. ಈಗ ಜೀವನಕ್ಕೆ ಸಾಕಾಗುಷ್ಟು ಮದ್ಯಪಾನ ಮಾಡಿದ್ದೇನೆ. ಈಗ ಮತ್ತೆ ಯಾವತ್ತು ನಾನು ಮದ್ಯವನ್ನು ಮುಟ್ಟುವುದಿಲ್ಲ ಎಂದು ಹೇಳಿದ್ದಾರೆ.

    ನಾನು ಹೇಳುತ್ತಿರುವುದು ಏನೆಂದರೆ ನಾನು ಮದ್ಯವನ್ನು ಬಿಟ್ಟಿದ್ದೇನೆ. ಅದು ಮತ್ತೆ ನನ್ನ ಜೀವನದಲ್ಲಿ ಯಾವತ್ತು ಬೇಡ ಎಂದು ತೀರ್ಮಾನಿಸಿದ್ದೇನೆ. ನಾನು ಇನ್ನೂ ಮುಂದೆ ಒಂದು ಗ್ಲಾಸ್ ವೈನ್ ಅಥವಾ ಬಿಯರ್ ಅನ್ನು ಕೂಡ ಮುಟ್ಟುವುದಿಲ್ಲ. ಅದರಿಂದ ಹೊರಗೆ ಬಂದು ಜೀವನವನ್ನು ಬದಲಾಯಿಸಿಕೊಳ್ಳುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ನಾನು ಕುಡಿಯುವುದನ್ನು ಬಿಟ್ಟ ಮೇಲೆ ಮದ್ಯ ನನಗೆ ಏನನೂ ಸಹಾಯ ಮಾಡಿಲ್ಲ ಎಂಬುದು ನನಗೆ ಮನವರಿಕೆಯಾಗಿದೆ ಎಂದು ಶ್ರುತಿ ತಿಳಿಸಿದ್ದಾರೆ.

    ಈ ಸಮಾಜದಲ್ಲಿ ಪುರುಷ ಮದ್ಯಪಾನ ಮಾಡಿದರೆ, ಯಾಕೆ ಮದ್ಯಪಾನ ಮಾಡುತ್ತಿದ್ದೀಯಾ ಎಂದು ಯಾರೂ ಕೂಡ ಅವನನ್ನು ಪ್ರಶ್ನೆ ಮಾಡುವುದಿಲ್ಲ. ಯಾವಾಗ ಮಹಿಳೆ ಮದ್ಯಪಾನ ಮಾಡುತ್ತಾಳೆ ಆಗ ಸಮಾಜ ಅದರ ಬಗ್ಗೆ ಮಾತನಾಡಲು ಶುರು ಮಾಡುತ್ತೆ. ಗಂಡಂದಿರ ಹೊಡೆತವನ್ನು ತಡೆದುಕೊಳ್ಳಲು ಮಹಿಳೆಯರು ದಿನಲೂ ಹಳ್ಳಿಗಳಲ್ಲಿ ಮದ್ಯಪಾನ ಮಾಡುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳದ ಜನರು ವಿವಾದ ಮಾಡಲು ಬಯಸಿದರೆ ಅದು ಅವರ ಇಚ್ಛೆ ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಶ್ರುತಿ ಹೇಳಿದ್ದಾರೆ.

    ಈ ಹಿಂದೆ ಇಟಲಿ ಮೂಲದ ಮೈಕಲ್ ಕೋರ್ಸೇಲ್ ಜೊತೆ ರಿಲೇಶನ್ ಶಿಪ್‍ನಲ್ಲಿ ಇದ್ದ ಶ್ರುತಿ ಇತ್ತೀಚೆಗಷ್ಟೇ ಬ್ರೇಕ್‍ಆಪ್ ಮಾಡಿಕೊಂಡಿದ್ದರು. ಕ್ರಿಸ್‍ಮಸ್, ನ್ಯೂ ಇಯರ್ ಪಾರ್ಟಿ ಎಂದು ಜೊತೆಗೆ ಇರುತ್ತಿದ್ದ ಮೈಕಲ್ ಮತ್ತು ಶ್ರುತಿ ತಮ್ಮ ಕ್ಯೂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಜೊತೆಗೆ ಇವರಿಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು.

  • ನೀವೆಷ್ಟು ಸಹಾಯ ಮಾಡಿದ್ದೀರಿ ಎಂದಿದ್ದಕ್ಕೆ ನಟಿ ಗರಂ

    ನೀವೆಷ್ಟು ಸಹಾಯ ಮಾಡಿದ್ದೀರಿ ಎಂದಿದ್ದಕ್ಕೆ ನಟಿ ಗರಂ

    ನವದೆಹಲಿ: ನಟಿ ಸೋನಾಕ್ಷಿ ಸಿನ್ಹಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಕುರಿತು ಆಗಾಗ ಅಪ್‍ಡೇಟ್ ಮಾಡುತ್ತಲೇ ಇರುತ್ತಾರೆ. ಹಲವು ವಿಚಾರಗಳ ಕುರಿತು ಟ್ರೋಲ್‍ಗೆ ಒಳಗಾಗುತ್ತಾರೆ ಸಹ. ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜಟಾಪಟಿಗೆ ಇಳಿದಿದ್ದಾರೆ.

    ಕೊರೊನಾ ಭೀತಿ ಹಿನ್ನೆಲೆ ದೇಶದ ಪರಿಸ್ಥಿತಿ ಹೇಳತೀರದಾಗಿದ್ದು, ಕೊರೊನಾ ವೈರಸ್ ಪ್ರಕರಣಗಳನ್ನು ಹತ್ತಿಕ್ಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಆದರೆ ಈ ಮಹಾಮಾರಿ ಯಾವುದಕ್ಕೂ ಬಗ್ಗುತ್ತಿಲ್ಲ. ದೇಶವನ್ನೇ ಸಂಪೂರ್ಣವಾಗಿ ಲಾಕ್‍ಡೌನ್ ಮಾಡಿದರೂ ಮತ್ತೆ ಮತ್ತೆ ಕಾಡುತ್ತಿದೆ. ಆದರೂ ಸರ್ಕಾರಗಳು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿವೆ.

    ಇದೆಲ್ಲದರ ಮಧ್ಯೆ ಕಾರ್ಮಿಕರು, ಬಡವರು ನರಳಾಡುತ್ತಿದ್ದಾರೆ. ಇದನ್ನು ಕಂಡ ಧನಿಕರು ಹಾಗೂ ನಟ, ನಟಿಯರು ಸಹಾಯ ಹಸ್ತ ಚಾಚುತ್ತಿದ್ದಾರೆ. ಕೆಲವರು ಪಿಎಂ ಕೇರ್ಸ್ ಹಾಗೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಹಾಕುತ್ತಿದ್ದಾರೆ. ಅಕ್ಷಯ್ ಕುಮಾರ್, ಸುರೇಶ್ ರೈನಾ, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಈ ರೀತಿ ಸಹಾಯ ಮಾಡಿದ್ದಾರೆ. ಇನ್ನೂ ಕೆಲವರು ಸಿನಿಮಾ ದಿನಗೂಲಿ ನೌಕರರು, ಕಾರ್ಮಿಕರಿಗೆ ನೇರವಾಗಿ ಸಹಾಯ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಹಾಗೂ ನಿಖಿಲ್ ಕುಮಾರಸ್ವಾಮಿ ಈ ರೀತಿಯಾಗಿ ಸಹಾಯ ಮಾಡಿದ್ದಾರೆ.

    ಇದೆಲ್ಲವನ್ನು ಗಮನಿಸುತ್ತಿರುವ ನೆಟ್ಟಿಗರು, ಈ ಕುರಿತು ಸಹಾಯ ಮಾಡದೆ ಸುಮ್ಮನೇ ಕುಳಿತಿರುವ ನಟ, ನಟಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಇದೀಗ ಸೋನಾಕ್ಷಿ ಸಿನ್ಹಾ ಬಲಿಯಾಗಿದ್ದಾರೆ. ಹಲವು ಟ್ರೋಲ್ ಪೇಜ್‍ಗಳು ಸೋನಾಕ್ಷಿ ಸಿನ್ಹಾ ಅವರನ್ನು ಟ್ರೋಲ್ ಮಾಡುತ್ತಿದ್ದು, ನೀವು ಎಷ್ಟು ದಾನ ಮಾಡಿದಿರಿ. ಯಾರಿಗೆ ಮಾಡಿದಿರಿ ಎಂದೆಲ್ಲ ಪ್ರಶ್ನಿಸುತ್ತಿದ್ದಾರೆ. ಇದರಿಂದ ಬೇಸರಗೊಂಡ ಸೋನಾಕ್ಷಿ, ಸಾಮಾಜಿಕ ಜಾಲತಾಣಗಳಲ್ಲೇ ತಕ್ಕ ಉತ್ತರ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ದಾನ ನೀಡಿರುವುದನ್ನು ಹೇಳಿಕೊಂಡಿಲ್ಲ ಎಂದ ಮೇಲೆ ಮಾಡಿಯೇ ಇಲ್ಲ ಎಂದರ್ಥವಲ್ಲ. ಈ ಅರ್ಥದಲ್ಲಿ ಭಾವಿಸಿ ಟ್ರೋಲ್ ಮಾಡುತ್ತಿರುವವರ ಕುರಿತು ಒಂದು ನಿಮಿಷ ಮೌನಾಚರಣೆ ಆಚರಿಸುತ್ತೇನೆ. ಸಹಾಯ ಮಾಡಿದ್ದನ್ನು ಎಲ್ಲೂ ಹೇಳಿಕೊಳ್ಳಬಾರದು. ಕೆಲವರು ಈ ನಿಯಮವನ್ನು ಪಾಲಿಸುತ್ತಾರೆ. ಈಗಲಾದರೂ ಶಾಂತರಾಗಿ, ಯಾವುದಾದರೂ ಒಳ್ಳೆಯ ಕೆಲಸಗಳಿಗೆ ನಿಮ್ಮ ಸಮಯವನ್ನು ಬಳಸಿಕೊಳ್ಳಿ ಎಂದಿದ್ದಾರೆ. ಅಲ್ಲದೆ ಸಹಾಯ ಮಾಡಿದ್ದನ್ನು ಹೇಳಿಕೊಳ್ಳುವುದು, ಹೇಳಿಕೊಳ್ಳದೇ ಇರುವುದು ಅವರ ವೈಯಕ್ತಿಕ ವಿಚಾರ ಎಂದು ತಿವಿದಿದ್ದಾರೆ.

    https://twitter.com/sonakshisinha/status/1244998693465378821

    ಈ ಮೂಲಕ ಬಾಲಿವುಡ್ ಬ್ಯೂಟಿ ಸೀನಾಕ್ಷಿ ಸಿನ್ಹಾ ಸಿಕ್ಕಾಪಟ್ಟೆ ಗರಂ ಆಗಿ, ಟ್ರೋಲ್ ಪೇಜ್‍ಗಳ ವಿರುದ್ಧ ಹರಿಹಾಯ್ದಿದ್ದಾರೆ. ಕ್ಲಾಸ್ ಮಾಡಿದ್ದಾರೆ ಸಹ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.

  • ಹಾಟ್ ಬಟ್ಟೆತೊಟ್ಟಾಗ ಟ್ರೋಲ್ ಮಾಡುವವರಿಗೆ ಸವಾಲ್ ಹಾಕಿದ ಸಮಂತಾ

    ಹಾಟ್ ಬಟ್ಟೆತೊಟ್ಟಾಗ ಟ್ರೋಲ್ ಮಾಡುವವರಿಗೆ ಸವಾಲ್ ಹಾಕಿದ ಸಮಂತಾ

    ಬೆಂಗಳೂರು: ನಟಿಯರು ಹಾಟ್ ಬಟ್ಟೆ ಧರಿಸಿದಾಗ ಟ್ರೋಲ್ ಮಾಡುವವರಿಗೆ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸವಾಲ್ ಹಾಕಿದ್ದಾರೆ.

    ತಾವು ತೊಡುವ ಬಟ್ಟೆಯಿಂದಾಗಿ ಸಮಂತಾ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ವಿದೇಶಕ್ಕೆ ತೆರಳಿದ್ದ ಅವರು ಬಿಕಿನಿ ಧರಿಸಿ ಸುದ್ದಿಯಾಗಿದ್ದರು. ಜೊತೆಗೆ ಕೆಲ ಟ್ರೋಲ್ ಪೇಜ್‍ಗಳು ಹಾಗೂ ಅಭಿಮಾನಿಗಳು ಕೂಡ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ನೀವು ರೀತಿ ಬಟ್ಟೆ ಧರಿಸಬಾರದು ಎಂದು ಟ್ರೋಲ್ ಮಾಡಿದ್ದರು.

    ಅಂದು ಬಿಕಿನಿ ಹಾಕಿಕೊಂಡಿದ್ದಕ್ಕೆ ಟ್ರೋಲ್ ಮಾಡಿದವರ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದ ಸಮಂತಾ, ಮಧ್ಯದ ಬೆರಳಿನ ಫೋಟೋ ಹಾಕಿ ಟ್ರೋಲ್‍ಗಳಿಗೆ ಚಮಕ್ ನೀಡಿದ್ದರು. ಈಗ ಮತ್ತೆ ಹಾಟ್ ಆಗಿ ಕಾಣಿಸಿಕೊಂಡಿರುವ ಸಮಂತಾ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ನಾನು ಟ್ರೋಲ್‍ಗಳಿಗೆ ಭಯಪಡುವುದಿಲ್ಲ ಎಂದು ಸವಾಲ್ ಹಾಕಿದ್ದಾರೆ.

    https://www.instagram.com/p/Be7eVsgnUl-/

    ಈಗ ಸಂದರ್ಶನವೊಂದರಲ್ಲಿ ಟ್ರೋಲ್ ವಿಚಾರವಾಗಿ ಮಾತನಾಡಿರುವ ಸಮಂತಾ, ನನಗೆ ಇನ್ನೂ ನೆನಪಿದೆ ನಾನು ಮದುವೆಯಾದ ಮೇಲೆ ಧರಿಸಿದ್ದ ಒಂದು ಡ್ರೆಸ್ ಸಖತ್ ಟ್ರೋಲ್ ಆಗಿತ್ತು. ಈ ಡ್ರೆಸ್‍ನ ಫೋಟೋ ಇಟ್ಟುಕೊಂಡು ಭಯಾಂಕರವಾಗಿ ಟ್ರೋಲ್ ಮಾಡಿದ್ದರು. ಆಗ ನನಗೆ ಬಹಳ ಬೇಜಾರಾಗಿತ್ತು. ಆದರೆ ನಾನು ಮತ್ತೆ ಎರಡನೇ ಬಾರಿ ಅದೇ ಉಡುಪಿನಲ್ಲಿ ಕಾಣಿಸಿಕೊಂಡಾಗ ಅವರು ನನ್ನನ್ನು ಟ್ರೋಲ್ ಮಾಡಲಿಲ್ಲ ಎಂದು ಹೇಳಿದ್ದಾರೆ.

    https://www.instagram.com/p/B7OGZc_BHvd/

    ಮೊದಲು ನನಗೆ ಟ್ರೋಲ್‍ಗಳು ಎಂದರೆ ಭಯವಾಗುತ್ತಿತ್ತು. ಆ ಭಯ ನಾವು ಒಂದು ಹೆಜ್ಜೆ ಇಡುವವರಿಗೆ ಅಮೇಲೆ ಅದು ನಮಗೆ ಅಭ್ಯಾಸವಾಗಿ ಹೋಗುತ್ತದೆ. ಹೀಗೆ ಹೇಳುತ್ತಿದ್ದೇನೆ ಎಂದ ಮಾತ್ರಕ್ಕೆ ನಾನು ಅಷ್ಟೊಂದು ಧೈರ್ಯಶಾಲಿಯಲ್ಲ. ಕೆಲವು ಬದಲಾಗಬೇಕು. ಆ ಬದಲಾವಣೆ ಸಮಾಜದಲ್ಲಿ ಬರಲು ಏನೂ ಮಾಡಬೇಕು ಅದನ್ನು ನಾನು ಮಾಡುತ್ತೇನೆ ಎಂದು ಸಮಂತಾ ಟ್ರೋಲ್‍ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    https://www.instagram.com/p/B7OHwP3hh1i/

    ಇತ್ತೀಚಿಗೆ ಫ್ಲಾಪ್ ನಟಿ ಎಂದು ಕರೆದವರ ವಿರುದ್ಧ ಕಿಡಿಕಾರಿದ್ದ ಸಮಂತಾ, ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲು ಫ್ಲಾಪ್ ಆದರೂ ಅವರನ್ನು ಒಪ್ಪುತ್ತಾರೆ. ಆದರೆ ನಟಿಯರು ಕಷ್ಟಪಟ್ಟು ಸಿನಿಮಾ ಮಾಡಿದರೂ ಯಾರೂ ಅವರನ್ನು ಹೊಗಳುವುದಿಲ್ಲ. ಸಿನಿಮಾ ಫ್ಲಾಪ್ ಆದರೆ ಆ ಚಿತ್ರದ ನಟಿಯರೇ ಕಾರಣ ಎಂದು ಹೇಳುತ್ತಾರೆ. ನಟಿಯರ ಒಂದು ಸಿನಿಮಾ ಸೋತರು ಫ್ಲಾಪ್ ಎಂದು ಕರೆಯುತ್ತಾರೆ ಎಂದು ಗರಂ ಆಗಿದ್ದರು.