Tag: treatment

  • ರಾತ್ರಿ ಸೆಕ್ಸ್ ಟಾಯ್ ಬಳಕೆ ಮಾಡ್ದ-ಬೆಳಗ್ಗೆ ಹೊರ ಬರಲೇ ಇಲ್ಲ

    ರಾತ್ರಿ ಸೆಕ್ಸ್ ಟಾಯ್ ಬಳಕೆ ಮಾಡ್ದ-ಬೆಳಗ್ಗೆ ಹೊರ ಬರಲೇ ಇಲ್ಲ

    -ಹೊರ ತೆಗೆಯಲು ವೈದ್ಯರಿಂದ ಹೊಸ ವಿಧಾನ

    ರೋಮ್: ಕೆಲವರು ಲೈಂಗಿಕ ಸಂತೃಪ್ತಿಗಾಗಿ ಸೆಕ್ಸ್ ಟಾಯ್ ಮಾಡಿಕೊಳ್ಳುತ್ತಾರೆ. ಸಂಗಾತಿ ಬದಲಾಗಿ ಸೆಕ್ಸ್ ಟಾಯ್ ಬಳಕೆ ಮಾಡೋವಾಗಿ ಕೆಲವರು ಎಡವಟ್ಟು ಮಾಡಿಕೊಳ್ಳುತ್ತಾರೆ. ಅಂತಹದೇ ಎಡವಟ್ಟಿನ ವಿಚಿತ್ರ ಘಟನೆಯೊಂದು ಇಟಲಿಯ ನಿಗಾರ್ಡ್ ನಲ್ಲಿ ನಡೆದಿದೆ.

    31 ವರ್ಷದ ವ್ಯಕ್ತಿಯೊಬ್ಬ ರಾತ್ರಿ ಪೂರ್ಣ ಸೆಕ್ಸ್ ಟಾಯ್ ಬಳಸಿ ಲೈಂಗಿಕ ಸಂತೃಪ್ತಿ ಪಡೆದಿದ್ದಾನೆ. ಆದ್ರೆ ಬೆಳಗ್ಗೆ ದೇಹದಲ್ಲಿ ಸೇರಿದ್ದ ಸೆಕ್ಸ್ ಆಟಿಕೆ ಹೊರ ಬಂದಿಲ್ಲ. ಎಷ್ಟೇ ಪ್ರಯತ್ನಿಸಿದ್ರೂ ಸೆಕ್ಸ್ ಟಾಯ್ ಹೊರ ಬಾರದ ಕಾರಣ ಕೊನೆಗೆ ನಗರದ ಎಎಸ್‍ಎಸ್‍ಟಿ ಗ್ರೇಟ್ ಮೊಟ್ರೋಪೊಲಿಟಿಯನ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

    ವೈದ್ಯರು ಶಾಕ್: ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ನೋಡಿದ ವೈದ್ಯರು ಒಂದು ಕ್ಷಣ ಶಾಕ್ ಆಗಿದ್ದಾರೆ. ವ್ಯಕ್ತಿಯ ದೇಹದಲ್ಲಿ ಬರೋಬ್ಬರಿ 23 ಇಂಚಿನ ಸೆಕ್ಸ್ ಟಾಯ್ ಸಿಲುಕಿಕೊಂಡಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ದಾಖಲಿಸಿಕೊಂಡು ವೈದ್ಯರು ಚಿಕಿತ್ಸೆ ಬಗ್ಗೆ ಕೆಲಕಾಲ ತಲೆಕೆಡಿಸಿಕೊಂಡಿದ್ದಾರೆ.

    ಹೊಸ ವಿಧಾನ: ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದನು. ಹೊಟ್ಟೆ ನೋವು ಹೊರತು ಪಡಿಸಿದ್ರೆ ಬೇರೆ ಯಾವುದೇ ತೊಂದರೆಗಳು ಆತನಲ್ಲಿ ಕಂಡುಬರಲಿಲ್ಲ. ವ್ಯಕ್ತಿಯ ದೇಹವನ್ನು ಎಕ್ಸ್-ರೇ ಗೆ ಒಳಪಡಿಸಿದಾಗ ಆತನ ದೇಹದಲ್ಲಿ ಉದ್ದ ಮತ್ತು ದಪ್ಪವಾದ ವಸ್ತು ಕಂಡು ಬಂತು. ಆರಂಭದಲ್ಲಿ ಸಾಮಾನ್ಯವಾಗಿ ಬಳಸುವ ವೈದ್ಯಕೀಯ ಸಲಕರಣೆಗಳಿಂದ ದೇಹದಲ್ಲಿ ಸಿಲುಕಿದ್ದ ವಸ್ತುವನ್ನು ತೆಗೆಯಲು ಪ್ರಯತ್ನಿಸಲಾಗಿತ್ತು. ಆದ್ರೆ ಸೆಕ್ಸ್ ಟಾಯ್ ಆಳದಲ್ಲಿ ಸಿಲುಕಿದ್ದರಿಂದ ಹೊರ ಬರಲೇ ಇಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

    ಕೊನೆಗೆ ಆಸ್ಪತ್ರೆಯ ಹಿರಿಯ ವೈದ್ಯರ ಸಲಹೆ ಪಡೆದು, ಹಿಡಿಕೆ ರೀತಿಯ ವಸ್ತುವೊಂದನ್ನ ಆತನ ದೇಹದಲ್ಲಿ ಸೇರಿಸಲಾಗಿತ್ತು. ಹಿಡಿಕೆಗೆ ಹಿಂದೆ ವೈರ್ ಕಟ್ಟಲಾಗಿತ್ತು. ದೇಹದಲ್ಲಿ ಸೇರಿದ ಹಿಡಿಕೆ ಸೆಕ್ಸ್ ಟಾಯ್ ನ್ನು ಕಚ್ಚಿಕೊಂಡಾಗ ಎಲ್ಲರೂ ಜೋರಾಗಿ ಎಳೆದಾಗ ಆಟಿಕೆ ಹೊರ ಬಂತು. ಟಾಯ್ ಹೊರ ತೆಗೆದ ಮೇಲೆ ಆತನನ್ನು ಒಂದು ದಿನ ದಾಖಲು ಮಾಡಿಕೊಂಡು ಮರುದಿನ ಡಿಸ್ಚಾರ್ಜ್ ಮಾಡಲಾಯಿತು ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಟಿಷ್ ಮೆಡಿಕಲ್, ಅನೈಸರ್ಗಿಕ ಲೈಂಗಿಕ ಕ್ರಿಯೆ ತುಂಬಾ ಅಪಾಯಕಾರಿ. ಲೈಂಗಿಕ ಕ್ರಿಯೆ ಸಂತೃಪ್ತಿ ಪಡೆಯಲು ಬಳಸುವ ವಸ್ತುಗಳ ಬಗ್ಗೆ ಅತ್ಯಂತ ಎಚ್ಚರಿಕೆ ಇಂದಿರಬೇಕು ಎಂದು ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ತುಮಕೂರು:ನಿಗೂಢ ಖಾಯಿಲೆಯಿಂದ ನರಳುತಿದ್ದ ತಾಯಿಯ ದಯಾಮರಣಕ್ಕೆ ಅನುಮತಿ ಕೊಡುವಂತೆ ಮಗನೊಬ್ಬ ತುಮಕೂರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

    ನಿಸ್ತೇಜ ಸ್ಥಿತಿಯಲ್ಲಿರುವ ತಾಯಿಯನ್ನು ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ ದಯಾಮರಣಕ್ಕಾಗಿ ಮಗ ಅಂಗಲಾಚಿದ್ದಾರೆ. ತುಮಕೂರು ನಗರದ ಗಾರ್ಡನ್ ರಸ್ತೆಯ ನಿವಾಸಿ ನಾಗರಾಜ್ ತನ್ನ ತಾಯಿ ನಾಗರತ್ನಮ್ಮಾರ ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ಕೈಕಾಲು ಸ್ವಾದೀನ ಕಳೆದುಕೊಂಡ ನಾಗರತ್ನಮ್ಮ ಕಳೆದ 10 ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ನಾಗರತ್ನಮ್ಮ ಅವರಿಗೆ ಎಷ್ಟೇ ಚಿಕಿತ್ಸೆ ಕೊಡಿಸಿದರೂ ಕಾಯಿಲೆ ಮಾತ್ರ ಗುಣಮುಖವಾಗಿರಲಿಲ್ಲ. ಇದರಿಂದ ಬೇಸತ್ತ ಮಗ ನಾಗರಾಜು ತಾಯಿಯನ್ನು ಕರೆದುಕೊಂಡು ಡಿಸಿ ಕಚೇರಿ ಬಳಿ ಹೋಗಿ ತಾಯಿಯ ದಯಾಮರಣಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

    ನಂತರ ತಾಯಿ ಮಗನ ಪರಿಸ್ಥಿತಿ ನೋಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ತಕ್ಷಣ ನಾಗರತ್ನಮ್ಮಾಳರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಮಾರಣ್ಣ ನನ್ನ ಜೀವ ಉಳಿಸಿ, ಕೊಟ್ಟ ಭರವಸೆ ನೆರವೇರಿಸಿ- ಸಿಎಂ ಎಚ್‍ಡಿಕೆಗೆ ಬಾಲಕ ಮನವಿ

    ಕುಮಾರಣ್ಣ ನನ್ನ ಜೀವ ಉಳಿಸಿ, ಕೊಟ್ಟ ಭರವಸೆ ನೆರವೇರಿಸಿ- ಸಿಎಂ ಎಚ್‍ಡಿಕೆಗೆ ಬಾಲಕ ಮನವಿ

    ಬೆಂಗಳೂರು: ಜೀವ ಉಳಿಸಿಕೊಡುತ್ತೇನೆಂದು ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಬಾಲಕನೋರ್ವ ತಮ್ಮ ಪೋಷಕರೊಂದಿಗೆ ಸಿಎಂ ಕುಮಾರಸ್ವಾಮಿಗೆ ಅಂಗಲಾಚಿಕೊಳ್ಳುತ್ತಿದ್ದಾನೆ.

    ಮನೋಜ್ ಕುಮಾರ್ ಜೀವ ಉಳಿಸಿಕೊಳ್ಳಲು ಅಂಗಲಾಚುತ್ತಿರುವ ಬಾಲಕ. ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಲಕ್ಕರಸನಪಾಳ್ಯದ ಮಹದೇವಪ್ಪ ಹಾಗೂ ಜ್ಯೋತಿ ದಂಪತಿಯ ಒಬ್ಬನೇ ಮಗನಾಗಿದ್ದು, ಎಲ್ಲರಂತೆ ಚೆನ್ನಾಗಿ ಆಟವಾಡಿಕೊಂಡು ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಭೀಕರ ಕಾಯಿಲೆಯಿಂದಾಗಿ ಆಸ್ಪತ್ರೆಯ ಬೆಡ್ ಮೇಲೆಯೇ ಮಲಗುವ ಸ್ಥಿತಿಯಲ್ಲಿದ್ದಾನೆ.

    ಇನ್ನೂ ಒಂದು ತಿಂಗಳಲ್ಲಿ ಬಾಲಕ ಮನೋಜ್‍ಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡದೇ ಹೋದರೆ, ಒಂದು ತಿಂಗಳು ಮಾತ್ರ ಬದುಕಿರುವುದಾಗಿ ವೈದ್ಯರು ಹೇಳಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಗೆ ಸುಮಾರು 13 ಲಕ್ಷ ರೂಪಾಯಿ ಹಣ ಬೇಕಾಗಿರುವುದರಿಂದ, ಹಣ ಭರಿಸಲು ಶಕ್ತವಿಲ್ಲದ ಕುಟುಂಬ ಸಿಎಂ ಕುಮಾರಸ್ವಾಮಿಯವರ ಮೊರೆ ಹೋಗಿದ್ದಾರೆ. ಇದನ್ನೂ ಓದಿ:  ದತ್ತು ಪಡೆದ ಬಾಲಕನನ್ನ ನಡುನೀರಿನಲ್ಲಿ ಕೈ ಬಿಟ್ಟ ಬಿಎಸ್‍ವೈ!

    ಪೋಷಕರು ಈ ಮೊದಲು ಕೊಳ್ಳೇಗಾಲದಲ್ಲಿ ನಡೆದ ವಿಕಾಸ ಪರ್ವದ ವೇಳೆ ಮನೋಜ್‍ನ ಅನಾರೋಗ್ಯದ ಕುರಿತು ಕುಮಾರಸ್ವಾಮಿಯವರಿಗೆ ಮನವಿ ಮಾಡಿಕೊಂಡಿದ್ದರು. ಆಗ ಬಾಲಕನನ್ನು ಉಳಿಸಿಕೊಡುವುದು ನನ್ನ ಜವಬ್ದಾರಿ ಎಂದು ಕುಮಾರಸ್ವಾಮಿ ಮಾತು ಕೊಟ್ಟಿದ್ದರು. ಇದಾದ ಬಳಿಕ ಪುನಃ ಶಿರಾ ಹಾಗೂ ಹಾಸನದ ವಿಕಾಸ ಪರ್ವದ ಸಮಯದಲ್ಲಿ ಪ್ರಸ್ತಾಪಿಸಿದಾಗ, ಚಿಕಿತ್ಸೆ ನೀಡುವ ಕುರಿತು ಮಾತನಾಡಿದ್ದರು. ಅಲ್ಲದೇ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಜನತಾ ದರ್ಶನದಲ್ಲೂ ಪಾಲ್ಗೊಂಡು ಮಗನನ್ನು ಉಳಿಸಿಕೊಡುವಂತೆ ಅಂಗಲಾಚಿದ್ದರು. ಆದರೆ ಬರೀ ಭರವಸೆಗಳನ್ನೇ ನೀಡುತ್ತಿದ್ದರೆ, ನಮ್ಮ ಮಗ ನಮ್ಮಿಂದ ದೂರವಾಗುತ್ತಾನೆ. ಕೂಡಲೇ ಅವನಿಗೆ ಚಿಕಿತ್ಸೆಗೆ ನೆರವು ನೀಡಿ ಎಂಬುದು ಪೋಷಕರ ಮನವಿಯಾಗಿದೆ.

    ಈಗಾಗಲೇ ಬಾಲಕನ ಜೀವ ಇಂಚಿಂಚಾಗಿ ಅಳಿದು ಹೋಗುತ್ತಿದ್ದು, ದೇಹದಲ್ಲಿ ರಕ್ತ ಕೂಡ ಉತ್ಪತ್ತಿಯಾಗುತ್ತಿಲ್ಲ. ಬಾಲಕನಿಗೆ ಮೂರು ದಿನಗಳಿಗೊಮ್ಮೆ ಕಡ್ಡಾಯವಾಗಿ ರಕ್ತ ಕೊಡಿಸಲೇಬೇಕು. ಸದ್ಯ ಎರಡು ಹೊಟ್ಟೆ ಆಪರೇಷನ್ ಮಾಡಿದ್ದು, ಅದರಲ್ಲಿ ಸಣ್ಣ ಕರುಳನ್ನ 23 ಸೆಂ.ಮೀ ಕತ್ತರಿಸಿದ್ದಾರೆ. ಇದರಿಂದಾಗಿ ರಾತ್ರಿ ನೋವಿನಲ್ಲೇ ನರಳಾಡಿ ಒದ್ದಾಡುತ್ತಿದ್ದಾನೆ. ಈಗಲಾದರೂ ನಮ್ಮ ಮಗನನ್ನು ಸಿಎಂ ಕುಮಾರಸ್ವಾಮಿಯವರು ಉಳಿಸಿ ಕೋಡುತ್ತಾರೆಯೇ ಎನ್ನುವ ನಿರೀಕ್ಷೆಯಲ್ಲಿ ಪೋಷಕರು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಬುಲೆನ್ಸ್ ನಲ್ಲಿ ವಾಹನದ ಸಿಬ್ಬಂದಿಯಿಂದ ಸುಸೂತ್ರ ಹೆರಿಗೆ

    ಅಂಬುಲೆನ್ಸ್ ನಲ್ಲಿ ವಾಹನದ ಸಿಬ್ಬಂದಿಯಿಂದ ಸುಸೂತ್ರ ಹೆರಿಗೆ

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳಗಾನೂರ ಕ್ರಾಸ್ ಬಳಿ 108 ಅಂಬುಲೆನ್ಸ್ ನಲ್ಲಿಯೇ ಗರ್ಭಿಣಿಗೆ ಹೆರಿಗೆಯಾಗಿದೆ.

    ಮುದ್ದೇಬಿಹಾಳ ತಾಲೂಕಿನ ಬಿಳೇಭಾವಿ ಗ್ರಾಮದ ಬಸಮ್ಮಾ ನಿಂಗಪ್ಪ ಕೆಸರಟ್ಟಿಗೆ 108 ನಲ್ಲಿ ಹೆರಿಗೆ ಆಗಿದೆ. 108 ವಾಹನದ ಸಿಬ್ಬಂದಿ ಸಮಯೋಚಿತ ಚಿಕಿತ್ಸೆಯಿಂದಾಗಿ ಸುಸೂತ್ರ ಹೆರಿಗೆ ಆಗಿದೆ. ತಾಯಿ ಬಸಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಮೊದಲು ಗರ್ಭಿಣಿಯನ್ನು ತಾಳಿಕೋಟೆ ಸರ್ಕಾರಿ ಸಮುದಾಯ ಆರೊಗ್ಯ ಕೇಂದ್ರಕ್ಕೆ ಕರೆ ತರಲಾಗಿತ್ತು. ಆದರೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಕಾರಣದಿಂದ ಗರ್ಭಿಣಿಯನ್ನು ಬಸವನಬಾಗೇವಾಡಿ ತಾಲೂಕು ಆಸ್ಪತ್ರೆ ಅಥವಾ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದ್ದರು. ಆಗ ಮಾರ್ಗ ಮಧ್ಯದಲ್ಲಿಯೇ ಬಳಗಾನೂರ ಕ್ರಾಸ್ ಬಳಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆರಿಗೆ ಆಗಿದೆ.

    ಸದ್ಯಕ್ಕೆ ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದೆ. ಹೆರಿಗೆ ಬಳಿಕ ತಾಳಿಕೋಟೆ ಸಮುದಾಯ ಕೇಂದ್ರದಲ್ಲಿ ಬಾಣಂತಿ ಹಾಗೂ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಬ್ಬುಲಿ ನಾಯಕಿ ಅಮಲಾ ಪೌಲ್ ಆಸ್ಪತ್ರೆಗೆ ದಾಖಲು

    ಹೆಬ್ಬುಲಿ ನಾಯಕಿ ಅಮಲಾ ಪೌಲ್ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಶೂಟಿಂಗ್ ಮಾಡುತ್ತಿದ್ದ ವೇಳೆ ನಟಿ ಅಮಲಾ ಪೌಲ್ ಅವರ ಕೈಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಟಿ ಅಮಲಾ ಪೌಲ್ ಅವರು ತಮಿಳಿನಲ್ಲಿ ಮೂಡಿ ಬರಲಿರುವ `ಅಧೋ ಅಂಧ ಪರವೈ ಪೊಲಾ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಫ್ ಅಂಡ್ ಟಫ್ ಹುಡುಗಿಯಾಗಿ ಅಮಲಾ ಪೌಲ್ ಕಾಣಿಸಿಕೊಳ್ಳಲಿದ್ದಾರೆ. ಶನಿವಾರ ರಾತ್ರಿ ಈ ಸಿನಿಮಾದಲ್ಲಿ ನಟಿ ಅಮಲಾ ಪೌಲ್ ಅವರ ಸ್ಟಂಟ್ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಸ್ಟಂಟ್ ಮಾಡುವ ಸಂದರ್ಭದಲ್ಲಿ ನಟಿ ಅಮಲಾ ಬಲಗೈ ಪೆಟ್ಟಾಗಿದೆ.

    ಅಮಲಾ ಪೌಲ್ ಅವರಿಗೆ ಪೆಟ್ಟಾಗಾದ ಬಲಗೈ ಉಳುಕಿರಬೇಕು ಎಂದು ಚಿತ್ರತಂಡ ಭಾವಿಸಿತ್ತು. ಆದ್ದರಿಂದ ಅವರಿಗೆ ಕೂಡಲೇ ಐಸ್ ಪ್ಯಾಕ್ ನೀಡಲಾಗಿತ್ತು. ನಂತರ ಶೂಟಿಂಗ್ ನಿಲ್ಲಿಸುವುದು ಬೇಡ ಎಂದು ಅಮಲಾ ಪೌಲ್ ಅಂದಿನ ರಾತ್ರಿ ಚಿತ್ರೀಕರಣವನ್ನು ಮುಂದುವರಿಸಿದ್ದರು. ಆದರೆ ಸ್ವಲ್ಪ ಸಮಯ ಕಳೆದಂತೆ ಅಮಲಾ ಪೌಲ್ ಗೆ ಕೈನೋವು ಜಾಸ್ತಿ ಆಗಿದೆ.

    ಕೈ ನೋವು ಹೆಚ್ಚಾದ ಪರಿಣಾಮ ತಕ್ಷಣ ಶೂಟಿಂಗ್ ನಿಲ್ಲಿಸಿ ಚಿಕಿತ್ಸೆಗಾಗಿ ಕೊಚ್ಚಿಗೆ ತೆರಳಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷೆ ಮಾಡಿ ಕೈ ಮುರಿದಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಅಮಲಾ ಪೌಲ್ ಕೊಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅಮಲಾ ಪೌಲ್ ಅವರು ಟ್ವೀಟ್ ಮಾಡಿದ್ದಾರೆ.

    “ನಿಮ್ಮೆಲ್ಲರ ಪ್ರೀತಿ ಆರೈಕೆಯಿಂದ ನಾನು ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ. ಬಲಗೈಗೆ ಪೆಟ್ಟಾಗಿದ್ದರಿಂದ ಎಡಗೈಯಲ್ಲಿ ಟೈಪ್ ಮಾಡುತ್ತಿದ್ದೇನೆ ಎಂದು ನಟಿ ಅಮಲಾ ಟ್ವೀಟ್ ಮಾಡಿದ್ದಾರೆ.

    ಅಮಲಾ ಪೌಲ್ ಸಿನಿಮಾದಲ್ಲಿ ಸ್ಟಂಟ್ ಮಾಡಲು ಸ್ಪೆಷಲ್ ಟ್ರೇನಿಂಗ್ ಪಡೆದುಕೊಂಡಿದ್ದು, ಯಾವುದೇ ಡ್ಯೂಪ್ ಬಳಸದೇ ಸ್ಟಂಟ್ ಗಳನ್ನೂ ನೈಜವಾಗಿ ಮಾಡಿದ್ದರು. ಆದರೆ ಒಂದು ದೃಶ್ಯದಲ್ಲಿ ಮಾತ್ರ ಈ ಅವಘಡ ಸಂಭವಿಸಿದೆ. ನಟಿ ಅಮಲಾ ಪೌಲ್ ಅವರು ಕಿಚ್ಚ ಸುದೀಪ್ ಅಭಿನಯದ `ಹೆಬ್ಬುಲಿ’ ಸಿನಿಮಾದಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಆಸರೆಯಾದ ಸನ್ನಿ ಲಿಯೋನ್

    ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಆಸರೆಯಾದ ಸನ್ನಿ ಲಿಯೋನ್

    ಮುಂಬೈ: ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ತಮ್ಮ ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದ ಪ್ರಭಾಕರ್ ಅವರಿಗೆ ಸನ್ನಿ ಲಿಯೋನ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಸನ್ನಿ ಲಿಯೋನ್ ತನ್ನ ಇನ್ಸ್ ಸ್ಟಾಗ್ರಾಂ ಮತ್ತು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

    ಪ್ರಭಾಕರ್ ಅವರು ಕಳೆದ ಒಂದು ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಆದರೆ ಇದುವರೆಗೂ ಅವರ ಸಹಾಯಕ್ಕೆ ಯಾರು ಮುಂದೆ ಬರಲಿಲ್ಲ. ಆದರೆ ಈಗ ಸ್ವತಃ ಸನ್ನಿ ಲಿಯೋನ್ ಅವರೇ ಸಹಾಯ ಹಸ್ತ ಚಾಚಿದ್ದಾರೆ.

    “ಕಿಡ್ನಿ ವೈಫಲ್ಯದ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿ ಮತ್ತು ಸ್ನೇಹಿತ ಪ್ರಭಾಕರರಿಗೆ ಸಹಾಯ ಮಾಡಲು ನನ್ನ ಪತಿ ಮತ್ತು ನಾನು ಪ್ರಯತ್ನಿಸುತ್ತಿದ್ದೇವೆ. ಅವರು ನಿಸ್ವಾರ್ಥ ವ್ಯಕ್ತಿಯಾಗಿದ್ದು, ಅನೇಕ ವರ್ಷಗಳ ಕಾಲ ನನ್ನ ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಒಬ್ಬ ನಿಷ್ಠವಂತ ಸ್ನೇಹಿತರಾಗಿದ್ದಾರೆ.

    ನಾವು ಒಂದು ವರ್ಷದವರೆಗೆ ಅವರ ಡಯಾಲಿಸಿಸ್ ಮತ್ತು ಔಷಧಿಗಳಿಗಾಗಿ ಹಣವನ್ನು ಪಾವತಿಸುತ್ತಿದ್ದೇವೆ. ಆದರೆ ಇದೀಗ ಅವರ ಜೀವ ಉಳಿಯಬೇಕಾದರೆ ಇವರು ಏಕೈಕ ಮಾರ್ಗವೆಂದರೆ ಕಿಡ್ನಿ ಕಸಿ ಮಾಡಿಸಿಕೊಳ್ಳಬೇಕು. ಆದ್ದರಿಂದ ನಾವು 20 ಲಕ್ಷ ರೂ.ಯನ್ನು ಕಿಡ್ನಿ ಕಸಿ ಮಾಡಿಸಿಕೊಳ್ಳಲು ನೀಡಿದ್ದೇವೆ.

    ಪ್ರಭಾಕರ್ ಅವರು ಆದಷ್ಟು ಬೇಗ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಅವರ ಹೆಂಡತಿ ಮತ್ತು ಅವರ ಮಕ್ಕಳಿಗಾಗಿ ಮನೆಗೆ ಹಿಂತಿರುಗಬೇಕು” ಎಂದು ಇನ್ಸ್ ಸ್ಟಾಗ್ರಾಂ ನಲ್ಲಿ ಬರೆದು ಸನ್ನಿ ಲಿಯೋನ್ ಫೋಟೋ ಅಪ್ಲೋಡ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bmc2efSH7Kh/?hl=en&taken-by=sunnyleone

  • ನಾವಿಬ್ಬರೂ ಒಟ್ಟಿಗೆ ಇರದ ಮೊದ್ಲ ಹುಟ್ಟುಹಬ್ಬ- ಮಗನ ಬರ್ತ್ ಡೇಗೆ ಸೋನಾಲಿ ಬೇಂದ್ರೆಯ ಭಾವುಕ ಪೋಸ್ಟ್

    ನಾವಿಬ್ಬರೂ ಒಟ್ಟಿಗೆ ಇರದ ಮೊದ್ಲ ಹುಟ್ಟುಹಬ್ಬ- ಮಗನ ಬರ್ತ್ ಡೇಗೆ ಸೋನಾಲಿ ಬೇಂದ್ರೆಯ ಭಾವುಕ ಪೋಸ್ಟ್

    ಮುಂಬೈ: ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರ ತಮ್ಮ ಮಗನ ಹುಟ್ಟುಹಬ್ಬದಂದು ಜೊತೆಯಲ್ಲಿ ಇರಲು ಸಾಧ್ಯವಾಗಿಲ್ಲ ಎಂದು ಇನ್ಸ್ ಸ್ಟಾಗ್ರಾಂನಲ್ಲಿ ಒಂದು ಮನಮಿಡಿಯುವ ಪೋಸ್ಟ್ ಹಾಕಿದ್ದಾರೆ.

    ಸೋನಾಲಿ ಬೇಂದ್ರೆ ಅವರ ಮಗ ರಣವೀರ್ ಹುಟ್ಟುಹಬ್ಬ ಶನಿವಾರ 11 ರಂದು ಇತ್ತು. ಆದ್ರೆ ಸೋನಾಲಿ ಅವರು ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ ಕಾರಣ ಭಾರತದಲ್ಲಿರುವ ತಮ್ಮ ಮಗನ ಬರ್ತ್ ಡೇ ದಿನ ಅವರ ಮಗನ ಜೊತೆ ಇರಲು ಸಾಧ್ಯವಾಗಿಲ್ಲ. ಇದೇ ಮೊದಲ ಬಾರಿಗೆ ನಾವಿಬ್ಬರು ಒಟ್ಟಿಗೆ ಇರದ ಹುಟ್ಟುಹಬ್ಬ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತನ್ನ ಭಯಾನಕ ಕಾಯಿಲೆ ಬಗ್ಗೆ ಹೇಳಿಕೊಂಡ ಸೋನಾಲಿ ಬೇಂದ್ರೆ

    ಸೋನಾಲಿ ಬೇಂದ್ರೆ ಅವರ ಪೋಸ್ಟ್?
    “ರಣವೀರ್! ನನ್ನ ಸೂರ್ಯ, ಚಂದ್ರ, ನಕ್ಷತ್ರಗಳು, ಆಕಾಶ.. ನಾನು ಸ್ವಲ್ಪ ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುತ್ತಿದ್ದೇನೆ. ಆದರೂ ನಿನ್ನ 13ನೇ ಹುಟ್ಟುಹಬ್ಬಕ್ಕೆ ಇದು ಅರ್ಹತೆ ಇದೆ. ವಾವ್ ನೀನು ಈಗ ಟೀನೇಜರ್. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಗುತ್ತದೆ. ನಿನ್ನ ಬುದ್ಧಿ, ಹಾಸ್ಯ, ಶಕ್ತಿ, ದಯೆ ಮತ್ತು ನಿನ್ನ ಕಿಡಿಕೇಡಿತನ ಎಲ್ಲದರ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಆದರೆ ಅದನ್ನು ಹೇಳಲು ಸ್ಯಾಧ್ಯವಾಗುತ್ತಿಲ್ಲ. ಹುಟ್ಟುಹಬ್ಬದ ಶುಭಾಶಯಗಳು ಮಗನೇ, ನಾವಿಬ್ಬರೂ ಒಟ್ಟಿಗೆ ಇರದ ಮೊದಲ ಹುಟ್ಟುಹಬ್ಬ ಇದಾಗಿದೆ. ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸೋನಾಲಿ ಬೇಂದ್ರೆ ಅವರು ಬರೆದು ಕೊಂಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ನಿಂದಾಗಿ ನೀಳ ಕೂದಲಿಗೆ ಕತ್ತರಿ ಹಾಕಿದ ಸೋನಾಲಿ

    ಸೋನಾಲಿ ಬೇಂದ್ರೆ ಅವರಿಗೆ ತೋರಿಸುತ್ತಿರುವ ಪ್ರೀತಿ ಮತ್ತು ನೀಡುತ್ತಿರುವ ಬೆಂಬಲಕ್ಕೆ ಧನ್ಯವಾದಗಳು. ಸದ್ಯಕ್ಕೆ ಯಾವುದೇ ತೊಂದರೆಗಳಿಲ್ಲದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಕೂಡ ಸುಧಾರಿಸುತ್ತಿದೆ ಎಂದು ಅವರ ಪತಿ ಗೋಲ್ಡಿ ಬೆಲ್ ಅವರು ಅಭಿಮಾನಿಗೆ ತಿಳಿಸಿದ್ದಾರೆ.

    ಇತ್ತೀಚೆಗೆ ಸೋನಾಲಿ ಬೇಂದ್ರೆ ತಮಗೆ ಕ್ಯಾನ್ಸರ್ ಕಾಯಿಲೆ ಇರುವುದಾಗಿ ಬಹಿರಂಗಪಡಿಸಿದ್ದರು. ಅವರು ತಮ್ಮದೊಂದು ಫೋಟೋವನ್ನು ಹಾಕಿ ಅದಕ್ಕೆ, “ನಾವು ಜೀವನದಲ್ಲಿ ಹೆಚ್ಚು ವಿಶ್ವಾಸವನ್ನಿಟ್ಟಾಗ ಜೀವನ ದೊಡ್ಡದೊಂದು ಆಘಾತ ನೀಡುತ್ತದೆ. ನನಗೆ ಹೈ ಗ್ರೇಡ್ ಕ್ಯಾನ್ಸರ್ ಇದೆ ಎಂಬುದು ನನಗೆ ಇತ್ತೀಚಿಗೆ ತಿಳಿಯಿತು. ಈ ವಿಷಯ ತಿಳಿದು ನನ್ನ ಕುಟುಂಬದವರು ಹಾಗೂ ನನ್ನ ಸ್ನೇಹಿತರು ನನ್ನ ಜೊತೆಯಲ್ಲೇ ಇದ್ದಾರೆ. ನಾನು ಇವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    ಸೋನಾಲಿ ಕನ್ನಡದಲ್ಲಿ ಶಿವರಾಜ್‍ಕುಮಾರ್ ಮತ್ತು ಉಪೇಂದ್ರ ಜೊತೆ `ಪ್ರೀತ್ಸೆ’ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ಅಲ್ಲದೇ ಹಿಂದಿಯ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದರು. ಹಮ್ ಸಾಥ್ ಸಾಥ್ ಹೈ, ಸರ್ಫರೋಶ್, ಕಲ್ ಹೋ ನಾ ಹೋ ಹೀಗೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮದುವೆಯಾದ್ಮೇಲೆ ಚಿತ್ರರಂಗದಿಂದ ದೂರವಿದ್ದ ಸೋನಾಲಿ ಹಲವಾರು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

    https://www.instagram.com/p/BmUz5ALFUAs/?taken-by=iamsonalibendre

  • ನಾಲ್ವರು ಬಂದು ರಕ್ತ ಕೊಟ್ಟು ಬಾಲಕನ ಜೀವ ಉಳಿಸಿದ್ರು

    ನಾಲ್ವರು ಬಂದು ರಕ್ತ ಕೊಟ್ಟು ಬಾಲಕನ ಜೀವ ಉಳಿಸಿದ್ರು

    ಧಾರವಾಡ: ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ನಗರದ ಬಾಲಕನೊಬ್ಬನಿಗೆ ನಾಲ್ವರು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿ ಜೀವ ಉಳಿಸಿದ್ದಾರೆ.

    ಜಿಲ್ಲೆಯ ನವಲಗುಂದ ಪಟ್ಟಣದ ದೀಲಿಪ್ ಮಂಜುನಾಥ ಚಿಕ್ಕನಾಳ(7) ಬಾಲಕನ ಹೃದಯದ ಕವಾಟ್ ಕ್ರಮೇಣವಾಗಿ ಬಂದ್ ಆಗುತ್ತಿತ್ತು. ಅದಕ್ಕೆ ಧಾರವಾಡದ ನಾರಾಯಣ ಹೃದಯಾಲಯದವರು 2015 ರಲ್ಲಿ ಬಲೂನ್ ಮೂಲಕ ತೆಗೆದು ಉಸಿರಾಡುವಂತೆ ಮಾಡಿದ್ದರು. ಆದರೆ ಈ ಸಮಸ್ಯೆ ಮತ್ತೆ ಆರಂಭವಾದಾಗ ಬಾಲಕನಿಗೆ ಹೃದಯದ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ.

    ಬಾಲಕನಿಗೆ ಇರುವುದು ಎ2ಬಿ ನೆಗೆಟಿವ್ ರಕ್ತ. ಇದು ಸಿಗುವುದು ತುಂಬಾ ವಿರಳ. ಆದ್ದರಿಂದ ವೈದ್ಯರು ರೆಡ್ ಡಾಟ್ ವೆಬ್‍ಸೈಟ್ ಇರುವವರಿಗೆ ಸಂಪರ್ಕ ಮಾಡಿ ಈ ರಕ್ತ ಬೇಕಾಗಿದೆ ಎಂದು ವೆಬ್‍ಸೈಟ್‍ನಲ್ಲಿ ಮನವಿ ಮಾಡಿದ್ದರು.

    ಕೊಪ್ಪಳ ಜಿಲ್ಲೆಯ ನಾಲ್ವರು ಈ ರಕ್ತವನ್ನ ಬಂದು ಕೊಟ್ಟು ಈ ಬಾಲಕನ ಜೀವ ಉಳಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆಯೇ ಬಾಲಕನ ಶಸ್ತ್ರ ಚಿಕಿತ್ಸೆ ಆಗಿದ್ದು, ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕೂಡ ಆಗಿದೆ. ಇದೀಗ ಮನೆಗೆ ಹೋಗಲು ತಯಾರಿ ನಡೆಸಿದ್ದಾನೆ. ಬಡ ರೈತರ ಮಗನಾದ ಇವರಿಗೆ ಆ ದೇವರೇ ರಕ್ತ ಕೊಟ್ಟು ಉಳಿಸಿದಂತೆ ಆಗಿದೆ ಎಂದು ಕುಟುಂಬದವರು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡ್ತಿದ್ದ ವೈದ್ಯನ ಮನೆ ಮೇಲೆ ದಾಳಿ!

    ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡ್ತಿದ್ದ ವೈದ್ಯನ ಮನೆ ಮೇಲೆ ದಾಳಿ!

    ಹಾವೇರಿ: ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ನಕಲಿ ವೈದ್ಯ ಬಾನಪ್ಪ ವಾಲ್ಮೀಕಿ ಮನೆ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಾರುತಿ ಚಿಕ್ಕಣ್ಣವರ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ವೇಳೆ ಅಧಿಕಾರಿಗಳನ್ನು ಕಂಡ ನಕಲಿ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ. ಅಧಿಕಾರಿಗಳು ಮನೆಯನ್ನು ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಸ್ಕೆತಾಸ್ಕೋಪ್, ಸಿರಿಂಜ್, ಔಷಧಿ ಬರೆಯಲು ಉಪಯೋಗಿಸುತ್ತಿದ್ದ ಚೀಟಿ ಮತ್ತು ವಿವಿಧ ಕಂಪೆನಿಯ ಔಷಧಿಗಳು ಪತ್ತೆಯಾಗಿವೆ.

    ಔಷಧಿಗಳು ಮತ್ತು ದಾಳಿ ವೇಳೆ ಸಿಕ್ಕ ವಸ್ತುಗಳನ್ನು ತಾಲೂಕು ವೈದ್ಯಾಧಿಕಾರಿಗಳು ವಶಪಡಿಸಿಕೊಂಡು ಸೀಜ್ ಮಾಡಿದ್ದಾರೆ. ಈ ಎಣ್ಣೆ ಡಾಕ್ಟರ್ ಕಳೆದ ಕೆಲವು ವರ್ಷಗಳಿಂದ ಮನೆಯಲ್ಲೇ ರಾಜಾರೋಷವಾಗಿ ಕ್ಲಿನಿಕ್ ನಡೆಸ್ತಿದ್ದನು. ಯಾವುದೇ ಕೋರ್ಸ್ ಕಲಿಯದೆ ಬಾನಪ್ಪ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.

    ಘಟನೆ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕಿಚ್ಚನ ಅಭಿಮಾನಿಗಳಿಂದ ಅಸ್ವಸ್ಥನ ಬದುಕಲ್ಲಿ ಮೂಡಿತು ಬೆಳಕು

    ಕಿಚ್ಚನ ಅಭಿಮಾನಿಗಳಿಂದ ಅಸ್ವಸ್ಥನ ಬದುಕಲ್ಲಿ ಮೂಡಿತು ಬೆಳಕು

    ಬೆಂಗಳೂರು: ನಟರ ಅಭಿಮಾನಿಗಳು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗ ಅಂತಹದ್ದೆ ಕೆಲಸವನ್ನು ನಟ ಸುದೀಪ್ ಅವರ ಅಭಿಮಾನಿಗಳು ಮಾಡಿದ್ದಾರೆ.

    ಸುದೀಪ್ ಅಭಿಮಾನಿಗಳು ಮಾನಸಿಕ ಅಸ್ವಸ್ಥನಿಗೆ ಸಹಾಯ ಮಾಡುವ ಮೂಲಕ ಆತನ ಬದುಕಿನಲ್ಲಿ ಬೆಳಕು ಮೂಡಿಸಿದ್ದಾರೆ. ಅಪರಿಚಿತನಾದ ಗಣೇಶ್ ಗೆ ಕಿಚ್ಚನ ಅಭಿಮಾನಿಗಳು ಸಹಾಯ ಮಾಡಿದ್ದಾರೆ. ಗಣೇಶ್ ಮೂಲತಃ ಹಾಸನದವನಾಗಿದ್ದು, ಬಾಲ್ಯದಲ್ಲಿಯೇ ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದನು. ಬಳಿಕ ಪೋಷಕರನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದನು.

    ಸುಮಾರು 10 ವರ್ಷದಿಂದ ಗಣೇಶ್ ಅನಾಥನಾಗಿ ಭಿಕ್ಷೆ ಬೇಡುತ್ತಾ ಹಾಸನ ನಗರದಲ್ಲಿ ಸುತ್ತಾಡಿಕೊಂಡಿದ್ದನು. ಒಂದು ದಿನ ಈ ಯುವಕನನ್ನು ಸುದೀಪ್ ಅಭಿಮಾನಿಗಳ ಸಂಘದವರು ನೋಡಿದ್ದಾರೆ. ಬಳಿಕ ಅವರು ಅಸ್ವಸ್ಥ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಪಡೆದ ನಂತರ ಯುವಕ ಗುಣಮುಖನಾಗಿದ್ದಾನೆ.

    ಯುವಕನ ಜೀವನಕ್ಕಾಗಿ ಒಂದು ಕೆಲಸ ಕೊಡಿಸಬೇಕು ಎಂದು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅದರಂತೆಯೇ ಸಂಘದಲ್ಲಿದ್ದ ಒಬ್ಬ ಅಭಿಮಾನಿಯ ಬಾವ ಮಂಗಳೂರಿನಲ್ಲಿ ಬೇಕರಿ ಇಟ್ಟುಕೊಂಡಿದ್ದರು. ಅಲ್ಲಿಯೇ ಗಣೇಶ್ ಗೆ ಕೆಲಸವನ್ನು ಕೊಡಿಸಿದ್ದಾರೆ. ತಮ್ಮ ಅಭಿಮಾನಿಗಳ ಕಾರ್ಯವನ್ನು ಸುದೀಪ್ ಅವರು ಟ್ವೀಟ್ ಮಾಡಿ ಶ್ಲಾಫಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews