Tag: treatment

  • ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥ!

    ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥ!

    ಬೆಳಗಾವಿ: ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಡಾಣ ಗ್ರಾಮದಲ್ಲಿ ನಡೆದಿದೆ.

    ಶಿರಡಾಣ ಗ್ರಾಮದ ಟ್ಯಾಂಕರ್‍ನಲ್ಲಿದ್ದ ಕಲುಷಿತ ನೀರು ಸೇವಿಸಿದ ಗ್ರಾಮಸ್ಥರು ವಾಂತಿ ಭೇದಿಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ವೈದ್ಯರ ತಂಡ ಗ್ರಾಮದಲ್ಲೇ ಚಿಕಿತ್ಸೆ ನೀಡುತ್ತಿದೆ. ಕಲುಷಿತ ನೀರು ಸೇವಿಸಿದ ಪರಿಣಾಮ ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಘಟಪ್ರಭಾ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕಳೆದ ಎರಡು ವರ್ಷಗಳಿಂದ ಟ್ಯಾಂಕರ್ ಸ್ವಚ್ಚ ಮಾಡದೆ ನೀರು ಪೂರೈಸುತ್ತಿರುವುದೇ ಇದಕ್ಕೆ ಕಾರಣವಾಗಿದ್ದಲ್ಲದೇ, ಗ್ರಾಮ ಪಂಚಾಯತಿ ನಿರ್ಲಕ್ಷ್ಯವೂ ಕೂಡಾ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿಸುತ್ತಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಣಕ್ಕಾಗಿ ಮೃತ ದೇಹಕ್ಕೆ ಚಿಕಿತ್ಸೆ – ಕುಟುಂಬ ಸದಸ್ಯರ ಆಕ್ರೋಶಕ್ಕೆ ಮಣಿದು ಚಾರ್ಜ್ ಮಾಡದೇ ಶವ ನೀಡಿದ್ರು!

    ಹಣಕ್ಕಾಗಿ ಮೃತ ದೇಹಕ್ಕೆ ಚಿಕಿತ್ಸೆ – ಕುಟುಂಬ ಸದಸ್ಯರ ಆಕ್ರೋಶಕ್ಕೆ ಮಣಿದು ಚಾರ್ಜ್ ಮಾಡದೇ ಶವ ನೀಡಿದ್ರು!

    ಬೆಂಗಳೂರು: ಹಣಕ್ಕಾಗಿ ಮೃತದೇಹಕ್ಕೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎನ್ನುವ ಆರೋಪ ನಗರದ ಖಾಸಗಿ ಆಸ್ಪತ್ರೆಯ ಮೇಲೆ ಬಂದಿದೆ.

    ಚಿಕಿತ್ಸೆಯ ನೆಪವೊಡ್ಡಿ, ಬರೋಬ್ಬರಿ 17 ದಿನಗಳ ಕಾಲ ದಾಖಲಿಸಿಕೊಂಡು ಚಾಮರಾಜಪೇಟೆಯ ಬೃಂದಾವನ್ ಏರಿಯಾನ್ ಆಸ್ಪತ್ರೆ ಹಣ ದೋಚಲು ಮುಂದಾಗಿದೆ ಎಂದು ಮೃತ ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಆಡಳಿತ ಮಂಡಳಿ ಚಿಕಿತ್ಸೆಯ ವೆಚ್ಚವನ್ನು ಪಡೆಯದೇ ಮೃತ ದೇಹವನ್ನು ನೀಡಿ ರಾಜಿ ಮಾಡಿಕೊಂಡಿದೆ. ಇದನ್ನು ಓದಿ: ಹಣ ನೀಡಿಲ್ಲವೆಂದು ರೋಗಿಯನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡ್ರೆ ಅಪರಾಧ!

    ಏನಿದು ಪ್ರಕರಣ?:
    ಚನ್ನಪಟ್ಟಣ ಮೂಲದ ಬುಕ್ಕಸಾಗರ ನಿವಾಸಿ ಮಹದೇವಪ್ಪ (46) ಎಚ್1 ಎನ್1 ಗೆ ತುತ್ತಾಗಿ ಇದೇ ತಿಂಗಳು 1ರಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಚಿಕಿತ್ಸೆ ಪಡೆದ ಅವರು 5 ದಿನಕ್ಕೆ ಚೇತರಿಕೆಗೊಂಡಿದ್ದರೂ, ಆಸ್ಪತ್ರೆಯ ಸಿಬ್ಬಂದಿ ಕುಂಟು ನೆಪ ಹೇಳಿ ಚಿಕಿತ್ಸೆ ಮುಂದುವರಿಸಿದ್ದರು. ಬೆಡ್ ಮೇಲೆ ಕಟ್ಟಿ ಅನಸ್ತೇಶಿಯಾ ನೀಡಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದರು.

    ಈ ಸಂದರ್ಭದಲ್ಲಿ ರೋಗಿಯನ್ನು ಮಾತನಾಡಿಸಲು ಬಿಡದೇ ಬರೋಬ್ಬರಿ 17 ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ರೋಗಿಯನ್ನು ಮಾತನಾಡಿಸಲು ಮುಂದಾಗುತ್ತಿದ್ದಂತೆ ತಡೆಯುತ್ತಿದ್ದ ವೈದ್ಯರು, ನಿಮ್ಮವರು ಚೆನ್ನಾಗಿದ್ದಾರೆ. ತೊಂದರೆ ಕೊಡಬೇಡಿ ಅಂತಾ ಸೂಚನೆ ನೀಡಿದ್ದಾರೆ. ವೈದ್ಯರ ಮಾತಿಗೆ ಬೆಲೆ ನೀಡಿ ಸಂಬಂಧಿಕರು ಮಹದೇವಪ್ಪ ಹುಷಾರಾಗುತ್ತಿದ್ದಾರೆ ಎಂದೇ ನಂಬಿದ್ದರು. ಆದರೆ ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಫೋನ್ ಮಾಡಿ, ಮಹದೇವಪ್ಪ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಸಂಬಂಧಿ ರಘುಸ್ವಾಮಿ ದೂರಿದ್ದಾರೆ.

    ಮೃತಪಟ್ಟ ವಿಚಾರ ತಿಳಿದ ಕುಟುಂಬಸ್ಥರು ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇದನ್ನು ಅರಿತ ಆಸ್ಪತ್ರೆಯ ಸಿಬ್ಬಂದಿ, ಮಹದೇವಪ್ಪ ಚೆನ್ನಾಗಿದ್ದಾರೆ. ನೀವು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಹಾದೇವಪ್ಪ ಸಹೋದರಿ ಆಸ್ಪತ್ರೆ ಸಿಬ್ಬಂದಿಗೆ ಫುಲ್ ಜಾರ್ಜ್ ತೆಗೆದುಕೊಂಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಆಸ್ಪತ್ರೆ ಸಿಬ್ಬಂದಿ ಪರೋಕ್ಷವಾಗಿ ತಪ್ಪೊಪ್ಪಿಕೊಂಡು, ರಾಜಿ ಮಾಡಿಕೊಂಡು ಚಿಕಿತ್ಸೆ ಚಾರ್ಜ್ ಪಡೆಯದೇ ಶವ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/SA2swgIImVw

  • ಅಮಾವಾಸ್ಯೆಯೆಂದು ಚಿಕಿತ್ಸೆ ನೀಡದೆ ಮಾನವೀಯತೆ ಮರೆತ ಸರ್ಕಾರಿ ವೈದ್ಯೆ

    ಅಮಾವಾಸ್ಯೆಯೆಂದು ಚಿಕಿತ್ಸೆ ನೀಡದೆ ಮಾನವೀಯತೆ ಮರೆತ ಸರ್ಕಾರಿ ವೈದ್ಯೆ

    ಮಡಿಕೇರಿ: ಕಣ್ಣಿಗೆ ಕಾಣುವ ದೇವರು ಎಂದು ಜನಸಾಮಾನ್ಯರು ನಂಬುವ ವೈದ್ಯ ಕುಲಕ್ಕೆ ಅವಮಾನವಾಗುವಂತೆ ವೈದ್ಯನೊಬ್ಬ ಮಹಾಲಯ ಅಮಾವಾಸ್ಸೆಗೆ ರಜೆ ಇದೆ ಎಂದು ನೆಪವೊಡ್ಡಿ ರೋಗಿಗೆ ಚಿಕಿತ್ಸೆ ನೀಡದೆ ಮಾನವೀಯತೆಯನ್ನು ಮರೆತಿದ್ದಾರೆ.

    ಕುಶಾಲನಗರದ ವೈದ್ಯಾಧಿಕಾರಿ ವಸುಂದರಾ ಹೆಗ್ಡೆ ರೋಗಿಗೆ ಚಿಕಿತ್ಸೆ ನೀಡದೇ ಅಸಡ್ಡೆಯ ಉತ್ತರ ನೀಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಬೈಚನಳ್ಳಿಯ ನಿವಾಸಿಯಾಗಿರುವ ತಾಳಮ್ಮ ಎಂಬ ವೃದ್ಧೆಗೆ ಯಾರು ಇಲ್ಲದೆ ಇರುವುದನ್ನು ಮನಗಂಡು ಅನೇಕ ದಿನಗಳಿಂದ ಮರಿಯಾ ಜಿಜೆಶ್ ದಂಪತಿ ಆರೈಕೆ ಮಾಡುತ್ತಿದ್ದಾರೆ.

    ಆದರೆ ಮಹಾಲಯ ಅಮಾವಾಸ್ಯೆ ದಿನದಂದು ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿ ವಸುಂಧರಾ ಹೆಗ್ಡೆ, ಮಹಾಲಯ ಅಮಾವಾಸ್ಯೆ ಸಲುವಾಗಿ ಸರ್ಕಾರಿ ರಜೆ ಇದ್ದುದ್ದರಿಂದ ಅವರಿಗೆ ಇಂಜೆಕ್ಷನ್ ಕೊಡಲಾಗುವುದಿಲ್ಲ. ಅಲ್ಲದೇ ರೋಗಿಗಳಿಂದ ಒಂದು ಹಬ್ಬದ ದಿನವೂ ನೆಮ್ಮದಿ ಇಲ್ಲಾ ಎಂದು ಹೇಳಿ, ನರ್ಸ್ ಇಂಜೆಕ್ಷನ್ ಕೊಟ್ಟರೆ ತೆಗೆದುಕೊಂಡು ಹೋಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಂತರ ನರ್ಸ್ ಗಳಲ್ಲಿ ವಿನಂತಿಸಿಕೊಂಡ ಬಳಿಕ ವೃದ್ಧೆಗೆ ಚಿಕಿತ್ಸೆ ನೀಡಿ ಇಂಜೆಕ್ಷನ್ ಕೊಟ್ಟಿದ್ದಾರೆ. ಇದನ್ನು ಗಮನಿಸಿದ ವೈದ್ಯಾಧಿಕಾರಿ ನರ್ಸ್ ಗಳನ್ನು ತರಾಟೆಗೆ ತೆಗೆದುಕೊಂಡು ರಜಾದಿನಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಚಾರವಾಗಿ ನರ್ಸ್ ಗಳಿಗೆ ಬೈದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈದ್ಯಾಧಿಕಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ವಸುಂಧರಾ ಹೆಗ್ಡೆ ಅವರು ಈ ಮೊದಲೇ ಹಲವಾರು ರೋಗಿಗಳಿಗೆ ಚಿಕಿತ್ಸೆ ಕೊಡುವ ವಿಚಾರದಲ್ಲಿ ಅವರ ರಾಕ್ಷಸಿ ರೂಪ ಬಯಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಗಮನ ಹರಿಸಿ ವಸುಂಧರಾ ಹೆಗ್ಡೆ ಅಂತಹ ವೈದ್ಯಾಧಿಕಾರಿ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕುಶಾಲನಗರದ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಕಾದುಕಾದು ಸುಸ್ತಾದ 51 ಜನ ಗರ್ಭಿಣಿಯರು – ಕಡೆಗೂ ಸಿಗಲಿಲ್ಲ ಚಿಕಿತ್ಸೆ

    ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಕಾದುಕಾದು ಸುಸ್ತಾದ 51 ಜನ ಗರ್ಭಿಣಿಯರು – ಕಡೆಗೂ ಸಿಗಲಿಲ್ಲ ಚಿಕಿತ್ಸೆ

    ದಾವಣಗೆರೆ: ತಪಾಸಣೆಗೆ ಬಂದಿದ್ದ 50ಕ್ಕೂ ಹೆಚ್ಚು ಗರ್ಭಿಣಿಯರು ಚಿಕಿತ್ಸೆ ಸಿಗದೇ ಮರಳಿದ ಘಟನೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಪ್ರಾಥಮಿಕ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದಿದೆ.

    ಪ್ರಧಾನಮಂತ್ರಿ ಮಾತೃತ್ವ ಕಾರ್ಯಕ್ರಮ ಯೋಜನೆಯಡಿ ಪ್ರತಿ ತಿಂಗಳ 9ರಂದು ಗರ್ಭಿಣಿಯರಿಗೆ ಚಿಕಿತ್ಸೆ ನೀಡಲಾಗುತಿತ್ತು. ಹೀಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಟ್ನನಹಳ್ಳಿ, ಫಣಿಯಾಪುರ, ಕೆಂಚಾಪುರ, ಕರಡಿದುರ್ಗ, ಕುರೇಮಾಗನಹಳ್ಳಿ, ಕಲ್ಲಹಳ್ಳಿ, ಬೇವಿನಹಳ್ಳಿ ಗ್ರಾಮಗಳಿಂದ ಗರ್ಭಿಣಿಯರು ಬಂದಿದ್ದರು.

    ಬಹಳ ಸಮಯ ಕಳೆದರೂ ವೈದ್ಯ ಸುರೇಶ್ ಬಾರದೇ ಇದ್ದಾಗ, ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಕರೆ ಮಾಡಿದ್ದಾರೆ. ಆದರೆ ಫೋನ್ ತೆಗೆಯದೇ ಮಧ್ಯಾಹ್ನ 3 ಗಂಟೆಗೆ ಆಸ್ಪತ್ರೆಗೆ ಕರೆ ಮಾಡಿದ ಸುರೇಶ್ ನಾನು ಇವತ್ತು ರಜೆ ತೆಗೆದುಕೊಂಡಿದ್ದೇನೆ. ಹೀಗಾಗಿ ಆಸ್ಪತ್ರೆಗೆ ಬರುವುದಿಲ್ಲ ಅಂತ ದಿಢೀರ್ ಹೇಳಿದ್ದಾರೆ.

    ತಿಂಡಿ, ನೀರು ಇಲ್ಲದೆ ಗರ್ಭಿಣಿಯರು ಬೆಳಗ್ಗೆಯಿಂದ ವೈದ್ಯರಿಗಾಗಿ ಕಾಯುತ್ತ ಕುಳಿತಿದ್ದರು. ಸಂಜೆಯವರೆಗೆ ವೈದ್ಯರ ಬರುವಿಕೆಗಾಗಿ ಕಾದು ಚಿಕಿತ್ಸೆ ಇಲ್ಲದೇ ಗರ್ಭಿಣಿಯರು ನರಳುವಂತಾಯಿತು. ಬಡವರಿಗಾಗಿಯೇ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಅಹಿತಕರ ಘಟನೆ ನಡೆದಿದ್ದಕ್ಕೆ ಸ್ಥಳೀಯರು ಹಾಗೂ ಗರ್ಭಿಣಿಯರ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

    ವೈದ್ಯರ ನಿರ್ಲಕ್ಷ್ಯ ಹೀಗೆ ಮುಂದುವರಿದರೆ ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಹಾಗೂ ವೈದ್ಯರ ಬಗ್ಗೆ ಗೌರವ ಇಲ್ಲದಂತಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಮಹಿಳೆಯರು ಮತ್ತೊಮ್ಮೆ ತಪಾಸಣೆಗೆ ಆಸ್ಪತ್ರೆಗೆ ಬರುವುದು ಕಷ್ಟವಾಗುತ್ತದೆ. ಬಸ್ಸಿನಲ್ಲಿ ಪ್ರಯಾಣ ಮಾಡಲು ಅವರಿಗೆ ಕಷ್ಟವಾಗುತ್ತದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಮತ್ತೊಮ್ಮೆ ಆಸ್ಪತ್ರೆಗೆ ಬರುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬುದ್ಧಿಮಾಂದ್ಯ ಮೊಮ್ಮಗಳನ್ನ ಸಾಕ್ತಿರೋ ವಯಸ್ಸಾದ ಅಜ್ಜಿಗೆ ಬೇಕಿದೆ ನೆರವು

    ಬುದ್ಧಿಮಾಂದ್ಯ ಮೊಮ್ಮಗಳನ್ನ ಸಾಕ್ತಿರೋ ವಯಸ್ಸಾದ ಅಜ್ಜಿಗೆ ಬೇಕಿದೆ ನೆರವು

    ಚಿಕ್ಕೋಡಿ: ವಯಸ್ಸಾದ ಅಜ್ಜಿಯ ಆಶ್ರಯದಲ್ಲಿರುವ ಯುವತಿಯ ಹೆಸರು ಶೃತಿ ಕರಿಭೀಮಗೋಳ, ವಯಸ್ಸು 24 ವರ್ಷ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ವಾಸವಾಗಿದ್ದಾರೆ. ಶೃತಿ ಬುದ್ಧಿವಂತೆ ಮದುವೆಯೂ ಆಗಿ ಗಂಡನ ಜೊತೆ ಆರಾಮವಾಗಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಮಗು ಹುಟ್ಟಿದ 1 ತಿಂಗಳಲ್ಲಿ ಶೃತಿ ಅವರಿಗೆ ಮೆದುಳು ಜ್ವರ ಬಂದಿದ್ದು ಕೈ ಕಾಲುಗಳ ಶಕ್ತಿ ಕುಂಠಿತಗೊಂಡಿದೆ, ಬುದ್ಧಿ ಸ್ಥಿಮೀತ ಕಳೆದುಕೊಂಡಿದ್ದು, ಅಕ್ಷರಶಃ ಮಾನಸಿಕ ಅಸ್ವಸ್ಥೆ ಆಗಿದ್ದಾರೆ. ಆದಾಗಿ ಗಂಡ ಶೃತಿಯನ್ನು ತವರು ಮನೆಗೆ ಬಿಟ್ಟು ನಾಪತ್ತೆಯಾಗಿದ್ದಾನೆ. ತಂದೆ-ತಾಯಿಯನ್ನು ಕಳೆದುಕೊಂಡ ತಬ್ಬಲಿ ಶೃತಿ ಅಜ್ಜಿಯ ಆಶ್ರಯದಲ್ಲಿ ಜೀವನ ದೂಡುತ್ತಿದ್ದಾರೆ.

    70 ವರ್ಷ ವಯಸ್ಸಾಗಿರುವ ಈ ಅಜ್ಜಿ ಕಮಲಾ ಭೂಸಗೋಳ, ಹೊಟೆಲ್‍ನಲ್ಲಿ ತಟ್ಟೆ ತೊಳೆದು, ಟೇಬಲ್ ಒರೆಸುವ ಕೆಲಸ ಮಾಡಿ ಬಂದಂತಹ ಅಷ್ಟೋ ಇಷ್ಟೋ ಹಣದಿಂದ ಮೊಮ್ಮಗಳಾದ ಶೃತಿಗೆ ನಿತ್ಯ ಕರ್ಮಗಳನ್ನು ಮಾಡಿಸಿ ಆರೈಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಶೃತಿ ಜನ್ಮ ನೀಡಿದ 5 ವರ್ಷದ ಮಗುವನ್ನು ಆರೈಕೆ ಮಾಡುತ್ತಿರುವ ಅಜ್ಜಿಯ ಕಥೆ ಕರುಣಾಜನಕ.

    ಹೆತ್ತ ತಂದೆ-ತಾಯಿನ್ನು ಸಾಕಲು ಆಗದೇ ವೃದ್ಧಾಶ್ರಮಕ್ಕೆ ಬಿಟ್ಟು ಹೋಗುವ ನಾಗರೀಕ ಸಮಾಜದಲ್ಲಿ ಈ ವಯೋವೃದ್ಧೆ ಕೂಲಿ ಕೆಲಸ ಮಾಡಿ ಮಾನಸಿಕ ಅಸ್ವಸ್ಥೆಯಾದ ಮೊಮ್ಮಗಳು ಮತ್ತು ಆಕೆಯ ಮಗುವನ್ನು ಆರೈಕೆ ಮಾಡುತ್ತಿದ್ದಾರೆ. ಆದ್ರೆ ಅಜ್ಜಿಯು ನಾನು ಇರೋವರೆಗೂ ನೋಡಿಕೊಳ್ಳುತ್ತೇನೆ. ಮುಂದೆ ಆಕೆಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಪುಟ್ಟ ಕಂದಮ್ಮನನ್ನು ನೋಡಿಕೊಳ್ಳು ಯಾರೂ ಇಲ್ಲ, ಮೊಮ್ಮಗಳಿಗೆ ಚಿಕಿತ್ಸೆ ಕೊಡಿಸಿ, ಎಲ್ಲರಂತಿರಲು ಸಹಾಯ ಮಾಡಿ ಎಂದು ಅಜ್ಜಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=fEN3aKzTMPY

  • ಮಕ್ಕಳಿಗಾಗಿ ಜೀವ ಸವೆಸಿದ ತಂದೆಯನ್ನ ದೂರ ಮಾಡಿದ ಮಕ್ಕಳು

    ಮಕ್ಕಳಿಗಾಗಿ ಜೀವ ಸವೆಸಿದ ತಂದೆಯನ್ನ ದೂರ ಮಾಡಿದ ಮಕ್ಕಳು

    ತುಮಕೂರು: ಮಕ್ಕಳಿಗಾಗಿ ಜೀವ ಸವೆಸಿದ ತಂದೆಯನ್ನು ಮಕ್ಕಳು ದೂರ ಮಾಡಿದ್ದಾರೆ. ಮಕ್ಕಳಿಂದ ದೂರವಾದ ವೃದ್ಧ ತಂದೆ ಚಕ್ರಪಾಣಿ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ವೃತ್ತಿಯಲ್ಲಿ ಅಡುಗೆಭಟ್ಟರಾಗಿದ್ದರು.

    ಹೋಟೆಲ್ ಮದುವೆ ಸಮಾರಂಭಗಳಲ್ಲಿ ಅಡುಗೆ ಮಾಡುತ್ತಾ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. 4 ವರ್ಷಗಳ ಹಿಂದೆ ಮುಂಬೈನಲ್ಲಿ ಕೆಲಸಕ್ಕೆ ಹೋಗಿದ್ದ ವೃದ್ಧ ಚಕ್ರಪಾಣಿ ಅವರಿಗೆ ಅಪಘಾತವಾಗಿದ್ದು, ಇವರ ಕಾಲು ಮುರಿದಿದೆ. ಮಕ್ಕಳು ಶೃಂಗೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾತಿ ಮಾಡಿ, ಸಂಬಂಧವೇ ಇಲ್ಲದಂತೆ ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದಾರೆ.

    ಬಂಧು ಬಳಗ ಮಕ್ಕಳು ಇದ್ದರೂ ಅನಾಥವಾಗಿರುವ ವೃದ್ಧ ಚಕ್ರಪಾಣಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಇಲ್ಲದೆ ಒಂದು ಹೊತ್ತಿನ ಊಟವೂ ಇಲ್ಲದೆ ನಿಸ್ಸಹಾಯಕರಾಗಿದ್ದಾರೆ. ಆದರೆ ಇವರ ದಯನೀಯ ಸ್ಥಿತಿಯನ್ನ ಕಂಡ ತುಮಕೂರಿನ ಸಹೃದಯಿಯೊಬ್ಬರು ಶೃಂಗೇರಿಗೆ ಹೋಗಿ ವೃದ್ಧ ಚಕ್ರಪಾಣಿ ಅವರನ್ನು ಕರೆದು ತಂದು ತಮ್ಮ ಮನೆಯಲ್ಲಿಯೇ ಊಟ ತಿಂಡಿ, ವಸ್ತ್ರ, ನೀಡಿ ಕಳೆದ 15 ದಿನಗಳಿಂದ ಸ್ವತಃ ಆರೈಕೆ ಮಾಡುತ್ತಿದ್ದಾರೆ.

    ದಿನೇ ದಿನೇ ಚಕ್ರಪಾಣಿ ಅವರ ಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದು ಶಸ್ತ್ರಚಿಕಿತ್ಸೆ ಅಗತ್ಯವಾಗಿ ಮಾಡಲೇಬೇಕಾಗಿದೆ. ಆದರೆ ಆರೈಕೆ ಮಾಡುತ್ತಿರುವ ಯುವಕನಿಗೆ ಅಷ್ಟು ಶಕ್ತಿ ಇಲ್ಲ. ಚಿಕಿತ್ಸೆಗೆ ಯಾರಾದರು ದಾನಿಗಳು ಸಹಾಯ ಮಾಡಿ, ಅನಾಥ ಶ್ರಮಕ್ಕೆ ಸೇರಿಸಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ನೆರವು ಬಯಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=ZGsdNPvdDZ8

  • ಕಾಂಡೋಮ್ ಬಳಸಿ ಆಸ್ಪತ್ರೆ ಸೇರಿದ! ವೈದ್ಯರು ಹೇಳಿದ್ದು ಏನು?

    ಕಾಂಡೋಮ್ ಬಳಸಿ ಆಸ್ಪತ್ರೆ ಸೇರಿದ! ವೈದ್ಯರು ಹೇಳಿದ್ದು ಏನು?

    ಲಕ್ನೋ: ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್ ಬಳಸುತ್ತಾರೆ. ಕಾಂಡೋಮ್ ಬಳಕೆಯಿಂದಾಗಿ ಜನನ ನಿಯಂತ್ರಣ ಸೇರಿದಂತೆ ಹಲವು ಪ್ರಯೋಜನಗಳಿವೆ. ಆದ್ರೆ ಲಕ್ನೋನಲ್ಲಿ ವ್ಯಕ್ತಿಯೊಬ್ಬ ಕಾಂಡೋಮ್ ಬಳಸಿ ಆಸ್ಪತ್ರೆ ಸೇರಿರುವ ವಿಚಿತ್ರ ಘಟನೆಯೊಂದು ನಡೆದಿದೆ.

    ಕೆಲವೊಂದು ಸಾರಿ ಎಷ್ಟೇ ಉಪಯುಕ್ತ ವಸ್ತುಗಳನ್ನು ಬಳಸಿದರೂ ಅವುಗಳಿಂದ ಅಪಾಯ ಮಾತ್ರ ತಪ್ಪಲ್ಲ. ಲಕ್ನೋ ನಗರದ ವ್ಯಕ್ತಿಯೊಬ್ಬರು ಎಕ್ಸಟೆಂಡ್ ಪ್ಲೆಸರ್ (extended pleasure) ಕಾಂಡೋಮ್ ಬಳಸಿದ್ದಾರೆ. ಕಾಂಡೋಮ್ ನಲ್ಲಿ ಬಳಕೆ ಮಾಡಲಾದ ರಾಸಾಯನಿಕ(ಕೆಮಿಕಲ್)ನಿಂದ ವ್ಯಕ್ತಿಗೆ ಅಲರ್ಜಿ ಉಂಟಾಗಿದೆ. ಇದೇ ಅಲರ್ಜಿಯಿಂದಾಗಿ ವ್ಯಕ್ತಿಯ ಮರ್ಮಾಂಗ ಸಂಪೂರ್ಣ ಕಪ್ಪು ಬಣ್ಣಕ್ಕೆ ಬದಲಾಗಿ ಊತ ಕಾಣಿಸಿಕೊಂಡಿದೆ. ಇದನ್ನೂ ಓದಿ: ಸೆಕ್ಸ್ ವೇಳೆ ಸ್ಫೋಟಗೊಂಡ ಕಾಂಡೋಮ್-ದೂರು ದಾಖಲಿಸಿದ ಮಹಿಳೆ

    ಕೂಡಲೇ ಆ ವ್ಯಕ್ತಿಯನ್ನು ನಗರದ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಡಾ. ಆಶೀಷ್ ಶರ್ಮಾ ವೈದ್ಯರ ತಂಡ ವ್ಯಕ್ತಿಗೆ ಚಿಕಿತ್ಸೆಯನ್ನು ನೀಡುತ್ತಿದೆ. ವ್ಯಕ್ತಿಗೆ ಯಾವುದೇ ಕೆಮಿಕಲ್‍ನಿಂದ ಅಲರ್ಜಿ ಆಗಿರೋದು ಕಂಡು ಬಂದಿಲ್ಲ. ವ್ಯಕ್ತಿಯ ಮರ್ಮಾಂಗದಲ್ಲಿ ಗ್ಯಾಂಗ್ರಿನ್ ಆಗಿದೆ. ಸದ್ಯ ಕೆಲವು ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತಿದ್ದೇವೆ ಎಂದು ಡಾ. ಆಶೀಷ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪ್ಲಾಸ್ಟಿಕ್ ನಿಷೇಧದಲ್ಲಿ ಕಾಂಡೋಮ್ ಸೇರಿದೆಯಾ? ಪೂನಂ Just asking

    ಆ್ಯಂಟಿಬೊಟಿಕ್ (antibiotics) ನೀಡುವ ಮೂಲಕ ವ್ಯಕ್ತಿಯ ಮರ್ಮಾಂಗದಲ್ಲಿಯ ಊತ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಮೂರು ವಾರಗಳ ಚಿಕಿತ್ಸೆಯ ಬಳಿಕ 6 ತಿಂಗಳ ನಂತರ ವ್ಯಕ್ತಿ ಸಂಪೂರ್ಣ ಗುಣಮುಖವಾಗಲಿದ್ದಾರೆ. 6 ತಿಂಗಳ ನಂತರ ಆತನಿಗೆ ಮೂತ್ರ ವಿಸರ್ಜನೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಲು ಯಾವುದೇ ಅಡೆತಡೆ ಇರಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರೋ ‘ಕಾಂಡೋಮ್ ಚಾಲೆಂಜ್’ ಟ್ರೈ ಮಾಡ್ಬೇಡಿ!

    1996ರಲ್ಲಿ ಮೊದಲ ಬಾರಿಗೆ ಕಾಂಡೋಮ್ ಅಲರ್ಜಿಗೆ ತುತ್ತಾದ ಪ್ರಕರಣ ಬೆಳಕಿಗೆ ಬಂದಿತ್ತು. ಅದಾದ ಬಳಿಕ ಇದೂವರೆಗೂ ಇಂತಹ 4 ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದು ಮಾಧ್ಯಮಗಳು ಪ್ರಕಟಿಸಿವೆ. ಇದನ್ನೂ ಓದಿ: ಒಲಿಂಪಿಕ್ಸ್ ಪಂದ್ಯಾವಳಿಗೆ ಪೂರೈಕೆ ಆಯ್ತು 1 ಲಕ್ಷಕ್ಕೂ ಅಧಿಕ ಕಾಂಡೋಮ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೃತಪಟ್ಟ ರೋಗಿಗೆ ಚಿಕಿತ್ಸೆ ನೀಡಿ ಹಣ ಪಡೆದ್ರು!

    ಮೃತಪಟ್ಟ ರೋಗಿಗೆ ಚಿಕಿತ್ಸೆ ನೀಡಿ ಹಣ ಪಡೆದ್ರು!

    – ಆಸ್ಪತ್ರೆ ಮುಂದೆ ಕುಟುಂಬಸ್ಥರ ಪ್ರತಿಭಟನೆ

    ಮೈಸೂರು: ಮೃತಪಟ್ಟ ಬಳಿಕವೂ ಚಿಕಿತ್ಸೆ ನೀಡಿ ಹಣ ಪಡೆದ ಆರೋಪದ ಮೇಲೆ ರೋಗಿಯ ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಘಟನೆ ನಗರದ ಯರಗನಹಳ್ಳಿಯಲ್ಲಿ ನಡೆದಿದೆ.

    ಪ್ರೀತಂ ಗೌಡ (22) ಆಸ್ಪತ್ರೆಯಲ್ಲಿ ದಾಖಲಾಗಿ ಮೃತಪಟ್ಟ ರೋಗಿ. ಕಳೆದ ಶುಕ್ರವಾರ ಪ್ರೀತಂ ಗೌಡ ತೀವ್ರ ಹಲ್ಲು ನೋವಿನಿಂದ ನಗರದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆಯೂ ಸಹ ವೈದ್ಯರು ಪ್ರೀತಂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಇದಾದ ಅರ್ಧ ಗಂಟೆ ಬಳಿಕ ಪ್ರೀತಂ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಇದಲ್ಲದೇ ಚಿಕಿತ್ಸೆಯ ವೆಚ್ಚವನ್ನು ಪಾವತಿಸಿಕೊಂಡಿದ್ದಾರೆ.

    ಪ್ರೀತಂ ಈಗಾಗಲೇ ಮೃತಪಟ್ಟಿದ್ದರೂ ವೈದ್ಯರು ಚಿಕಿತ್ಸೆ ನೀಡಿ, ಹಣ ಪಡೆದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಗಮಿಸಿದ ಸಂಬಂಧಿಕರು ಆಸ್ಪತ್ರೆ ಆವರಣದ ಬಳಿ ಪ್ರತಿಭಟನೆ ನಡೆಸಿ, ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆವನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ, ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪಘಾತವಾಗಿ 3ನೇ ದಿನವೂ ದರ್ಶನ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ- ವೈದ್ಯರು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ

    ಅಪಘಾತವಾಗಿ 3ನೇ ದಿನವೂ ದರ್ಶನ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ- ವೈದ್ಯರು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸುವ ಸಾಧ್ಯತೆಗಳಿವೆ. ಅಲ್ಲದೇ ದರ್ಶನ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

    ದರ್ಶನ್ ಅವರಿಗೆ ಅಪಘಾತವಾದ ಮೂರನೇ ದಿನವೂ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ನಟ ದರ್ಶನ್ ಅವರ ಆರೋಗ್ಯ ಬಗ್ಗೆ ವೈದ್ಯರು ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ. ವೈದ್ಯರು ಇಂದು ಸುದ್ದಿಗೋಷ್ಟಿ ನಡೆಸುವ ಸಾಧ್ಯತೆಗಳಿದ್ದು, ಸದ್ಯ ಆಸ್ಪತ್ರೆಯಲ್ಲಿ ದರ್ಶನ್ ಹಾಗೂ ಅವರ ಸ್ನೇಹಿತ ಆಂಟೋನಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಈ ಅಪಘಾತದಲ್ಲಿ ಗಾಯಗೊಂಡಿದ್ದ ನಟ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರು ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಘಟನೆಯೇನು?:
    ಶನಿವಾರ ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬ ಮೈಸೂರು ಮೃಗಾಲಯಕ್ಕೆ ತೆರಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದರು. ಆ ಬಳಿಕ ಮೈಸೂರಿನಲ್ಲೇ ಉಳಿದುಕೊಂಡು ಸೋಮವಾರ ಮುಂಜಾನೆ ಅಲ್ಲಿಂದ ಹೊರಟಿದ್ದರು. ಹೀಗೆ ಕಾರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ಹೊರವಲಯದ ಹಿನಕಲ್ ಬಳಿ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಅವರ ಬಲಗೈನ ಮೂಳೆ ಮುರಿದಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬಲಗೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಣ ನೀಡಿಲ್ಲವೆಂದು ರೋಗಿಯನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡ್ರೆ ಅಪರಾಧ!

    ಹಣ ನೀಡಿಲ್ಲವೆಂದು ರೋಗಿಯನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡ್ರೆ ಅಪರಾಧ!

    ನವದೆಹಲಿ: ಇನ್ನು ಮುಂದೆ ಹಣ ಪಾವತಿಸಿದ ಬಳಿಕವೇ ಮೃತ ದೇಹವನ್ನು ನೀಡುತ್ತೇವೆ ಅಥವಾ ರೋಗಿಯನ್ನು ಡಿಸ್ಚಾರ್ಜ್ ಮಾಡುತ್ತೇವೆ ಎಂದು ಆಸ್ಪತ್ರೆಯವರು ಪಟ್ಟು ಹಿಡಿದರೆ ಅದು ಅಪರಾಧವಾಗುತ್ತದೆ.

    ಹೌದು. ಆಸ್ಪತ್ರೆಗಳು ಹಣಕ್ಕಾಗಿ ರೋಗಿಯ ಕುಟುಂಬದ ಸದಸ್ಯರಿಗೆ ಪೀಡಿಸುತ್ತಿವೆ ಎನ್ನುವ ದೂರುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೋಗಿಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ಕರಡು ನೀತಿಯನ್ನು ಬಿಡುಗಡೆ ಮಾಡಿದೆ.

    ಕರಡು ನೀತಿಯ ಅನ್ವಯ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಅಥವಾ ಮೃತ ಕುಟುಂಬದವರು ಹಣ ಪಾವತಿ ಮಾಡಲಿಲ್ಲವೆಂದು ಅವರನ್ನು ಆಸ್ಪತ್ರೆಯಲ್ಲಿ ಒತ್ತೆಯಾಳುಗಳಂತೆ ಅಲ್ಲಿಯೇ ಇಟ್ಟುಕೊಳ್ಳುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 28 ಪುಟಗಳಿರುವ ಕರಡು ನೀತಿಯನ್ನು ತಯಾರಿಸಿದ್ದು, ಆರೋಗ್ಯ ಸಚಿವಾಲಯ ವೆಬ್‍ಸೈಟ್‍ನಲ್ಲಿ ಕರಡು ನೀತಿಯನ್ನು ಪ್ರಕಟಿಸಿದೆ. ಸಾರ್ವಜನಿಕರು ಈ ಕರಡನ್ನು ಓದಿ ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಸಾರ್ವಜನಿಕರಿಂದ ಅಭಿಪ್ರಾಯ, ಸಲಹೆಗಳನ್ನು ಪಡೆದ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ನೀತಿಯನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಲಿದೆ.

    ಕರಡಿನಲ್ಲಿ ಏನಿದೆ?
    ರೋಗಿಗೆ ಯಾವುದೇ ರೀತಿಯ ಕುಂದು-ಕೊರತೆಯಾಗಿದ್ದರೆ ಅಥವಾ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ 15 ದಿನಗಳ ಒಳಗಾಗಿ ಲಿಖಿತ ದೂರು ನೀಡಬಹುದು. ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಇರುವ ಪ್ರತಿಯನ್ನು (ಕೇಸ್ ಪೆಪರ್ ಗಳನ್ನು) ರೋಗಿಯ ಸಂಬಂಧಿಕರಿಗೆ 24 ಗಂಟೆಯ ಒಳಗಾಗಿ ನೀಡಬೇಕು. ಜೊತೆಗೆ ಆಸ್ಪತ್ರೆಯಿಂದ ಮನೆಗೆ ಮರಳಿದ 72 ಗಂಟೆಯ ಒಳಗಾಗಿ ಮಾಹಿತಿ ಪತ್ರ ನೀಡಬೇಕು.

    ರೋಗಿಗಳ ವೈಯಕ್ತಿಕ ಜೀವನಕ್ಕೆ ದಕ್ಕೆ ತರುವಂತಹ ಯಾವುದೇ ಮಾಹಿತಿಯನ್ನು ವೈದ್ಯರು ನೀಡಬಾರದು. ಹಣ ಪಾವತಿಸುವಾಗ ರೋಗಿಯ ಕುಟುಂಬದವರು ವಿವರವಾದ ಬಿಲ್ ಕೇಳಿದರೆ ನೀಡಬೇಕು. ಚಿಕಿತ್ಸೆಗೆ ಸಂಬಂಧಿಸಿದಂತೆ ಪಾವತಿ ಮಾಡಿದ ಹಣದ ಮಾಹಿತಿಯನ್ನ ಕೇಳಿದಾಗ ಯಾವುದೇ ರೀತಿಯ ಶುಲ್ಕ ಪಡೆಯದೆ ಮಾಹಿತಿ ನೀಡಬೇಕು.

    ಆಸ್ಪತ್ರೆಯ ಒಂದು ಭಾಗದಲ್ಲಿ ಸೌಲಭ್ಯಗಳಿಗೆ ನಿಗದಿಯಾದ ಬೆಲೆಯ ಪಟ್ಟಿಯನ್ನು ಹಾಕಬೇಕು. ಅಷ್ಟೇ ಅಲ್ಲದೇ ಯಾವ ಚಿಕಿತ್ಸೆಗೆ ಎಷ್ಟು ಶುಲ್ಕ ಎನ್ನುವ ವಿವರ ಇರುವ ಕರಪತ್ರ ಗಳನ್ನು ನೀಡಬೇಕು. ಈ ಮಾಹಿತಿಗಳು ಇಂಗ್ಲಿಷ್ ಅಥವಾ ಆಯಾ ಪ್ರಾದೇಶಿಕ ಭಾಷೆಯಲ್ಲಿ ರೋಗಿಗಳಿಗೆ ಅರ್ಥವಾಗುವಂತೆ ಇರಬೇಕು. ಲಿಂಗ, ಜಾತಿ, ಭಾಷೆ ಸೇರಿದಂತೆ ಯಾವುದೇ ತಾರತಮ್ಯವಿಲ್ಲದೆ ಚಿಕಿತ್ಸೆ ನೀಡಬೇಕು. ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಒಬ್ಬ ಎಚ್‍ಐವಿ ರೋಗಿಯನ್ನು ಕಡೆಗಣಿಸುವಂತಿಲ್ಲ.

    ಹೊಸ ಆರೋಗ್ಯ ನೀತಿಯನ್ನು ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: PatientCharterforcomments

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv