Tag: treatment

  • ಶಾಸಕನಾಗಲು ಹೀಗೆ ಮಾಡ್ತಿದ್ದೀಯಾ?- ಪಾಟೀಲ್ ಪುತ್ರನಿಗೆ ಕೈ ಶಾಸಕಿ ಅವಾಜ್

    ಶಾಸಕನಾಗಲು ಹೀಗೆ ಮಾಡ್ತಿದ್ದೀಯಾ?- ಪಾಟೀಲ್ ಪುತ್ರನಿಗೆ ಕೈ ಶಾಸಕಿ ಅವಾಜ್

    ಮುಂಬೈ: ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆಯುತ್ತಿರೋ ಮುಂಬೈನ ಸೈಂಟ್ ಜಾರ್ಜ್ ಆಸ್ಪತ್ರೆ ಬಳಿ ಭಾರೀ ಹೈಡ್ರಾಮಾ ನಡೆದಿದೆ.

    ಶ್ರೀಮಂತ್ ಪಾಟೀಲ್ ಭೇಟಿಯಾಗಲು ಮುಂಬೈನ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಯಶೋಮತಿ ಠಾಕೂರ್ ಆಗಮಿಸಿದರು. ಆದರೆ ಶಾಸಕಿಗೆ ಶ್ರೀಮಂತ್ ಪಾಟೀಲ್ ಅವರನ್ನು ಭೇಟಿಯಾಗಲು ಅವಕಾಶವೇ ಸಿಗಲಿಲ್ಲ.

    ಬಾಗಿಲಲ್ಲೇ ನಿಂತಿದ್ದ ಶ್ರೀಮಂತ್ ಪಾಟೀಲ್ ಪುತ್ರ ಶ್ರೀನಿವಾಸ್, ಶಾಸಕಿಯನ್ನು ತಡೆದರು. ಈ ವೇಳೆ ಶ್ರೀನಿವಾಸ್ ಹಾಗೂ ಶಾಸಕಿ ಯಶೋಮತಿ ನಡುವೆ ಮಾತಿನ ಚಕಮಕಿ ನಡೆಯಿತು. ನೀನು ಎಂಎಲ್‍ಎ ಆಗಲು ಇದನ್ನೆಲ್ಲಾ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ ಶಾಸಕಿ, ಬಿಡು ನಿಮ್ಮಪ್ಪನನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇವೆ ಎಂದು ಯಶೋಮತಿ ಗಲಾಟೆ ಮಾಡಿದ್ದಾರೆ.

    ಮಹಾರಾಷ್ಟ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಶಾಸಕಿ ಯಶೋಮತಿಯನ್ನು ಆಸ್ಪತ್ರೆ ಒಳ ಹೋಗದಂತೆ ತಡೆದರು.

  • ರಾತ್ರಿ ನಾಪತ್ತೆಯಾಗಿ ಬೆಳಗ್ಗೆ ಆಸ್ಪತ್ರೆ ಸೇರಿದ ಶ್ರೀಮಂತ ಪಾಟೀಲ್

    ರಾತ್ರಿ ನಾಪತ್ತೆಯಾಗಿ ಬೆಳಗ್ಗೆ ಆಸ್ಪತ್ರೆ ಸೇರಿದ ಶ್ರೀಮಂತ ಪಾಟೀಲ್

    ಬೆಂಗಳೂರು: ರಾತ್ರೋ ರಾತ್ರಿ ಕಾಂಗ್ರೆಸ್ ಶಾಸಕರು ತಂಗಿದ್ದ ದೇವನಹಳ್ಳಿ ಪ್ರಕೃತಿ ರೆಸಾರ್ಟಿನಿಂದ ನಾಪತ್ತೆಯಾಗಿದ್ದ ಕಾಗವಾಡದ ಶಾಸಕ ಶ್ರೀಮಂತ ಪಾಟೀಲ್ ಅನಾರೋಗ್ಯದ ಸಮಸ್ಯೆಯಿಂದ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ರಾತ್ರೋ ರಾತ್ರಿ ಬೆಂಗಳೂರು ಬಿಟ್ಟು ಮುಂಬೈ ಸೇರಿದ್ದ ಶ್ರೀಮಂತ ಪಾಟೀಲ್ ಹೃದಯ ಬಡಿತ, ಬ್ಲಡ್ ಪ್ರೆಶರ್ ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ಮುಂಬೈನಲ್ಲಿರುವ ಸೆಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಾಗಿದ್ದು, ಎದೆ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ವಿಶ್ವಾಸಮತದ ಹಿನ್ನೆಲೆಯಲ್ಲಿ ಹೈಡ್ರಾಮಾ ನಡೆದಿದ್ದು, ಇಷ್ಟು ದಿನ ಸೈಲೆಂಟಾಗಿದ್ದ ರಮೇಶ್ ಜಾರಕಿಹೊಳಿ ಆಪ್ತ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಕಳೆದ ರಾತ್ರಿ ದಿಢೀರ್ ಕಾಂಗ್ರೆಸ್ ಶಾಸಕರು ತಂಗಿರುವ ದೇವನಹಳ್ಳಿಯ ಪ್ರಕೃತಿ ರೆಸಾರ್ಟಿನಿಂದ ನಾಪತ್ತೆಯಾಗಿದ್ದರು.

    ಸ್ಪೀಕರ್‍ ಗೆ ಪತ್ರ
    ಕಾಗವಾಡ ವಿಧಾನಸಭಾ ಸದಸ್ಯನಾದ ಶ್ರೀಮಂತ ಪಾಟೀಲ್ ಆದ ನಾನು ಅನಾರೋಗ್ಯದ ಕಾರಣದಿಂದ ವಿಧಾನ ಸಭೆ ಕಲಾಪಕ್ಕೆ ಬರುಲು ಆಗುತ್ತಿಲ್ಲ. ಹೃದಯ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ನಾನು ವೈದ್ಯರ ಅಣತಿಯಂತೆ ಸೆಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಅದ್ದರಿಂದ ಕರ್ನಾಟಕದ 15ನೇ ವಿಧಾನಸಭೆಯ 4ನೇ ಅಧಿವೇಶನಕ್ಕೆ ಗೈರು ಹಾಜರಾಗುತ್ತೇನೆಂದು ಈ ಮೂಲಕ ತಿಳಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ.

  • ವೈದ್ಯರ ಮೇಲೆ ಹಲ್ಲೆ – ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಮೆಡಿಕಲ್ ಶಾಪ್ ಬಂದ್

    ವೈದ್ಯರ ಮೇಲೆ ಹಲ್ಲೆ – ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಮೆಡಿಕಲ್ ಶಾಪ್ ಬಂದ್

    ಕೊಪ್ಪಳ: ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಇಂದು ಕೊಪ್ಪಳದ ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಬಂದ್ ಆಗಲಿದೆ.

    ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಗೌಸ್ ಮೊಹಿದ್ದೋನ್ (70) ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತಪಟ್ಟ ರೋಗಿಯ ಸಂಬಂಧಿಕರು ವೈದ್ಯ ಡಾ.ಅರ್ಜುನ್ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ.

    ಈ ಸಂಬಂಧ ವೈದ್ಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆ ಖಂಡಿಸಿ ಇಂದು ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್ ಗಳನ್ನು ಬಂದ್ ಮಾಡಿ ಸಿಬ್ಬಂದಿ ಪ್ರತಿಭಟಿಸಲಿದ್ದಾರೆ.

  • ಕಾಫಿನಾಡಿನಲ್ಲಿ ಜ್ವರಕ್ಕೆ ಒಂದೇ ತಿಂಗಳಲ್ಲಿ ಮೂವರು ಬಲಿ

    ಕಾಫಿನಾಡಿನಲ್ಲಿ ಜ್ವರಕ್ಕೆ ಒಂದೇ ತಿಂಗಳಲ್ಲಿ ಮೂವರು ಬಲಿ

    ಚಿಕ್ಕಮಗಳೂರು: ಎರಡು ತಿಂಗಳಿನಿಂದ ಚಿಕ್ಕಮಗಳೂರು ತಾಲೂಕಿನ ಮರ್ಲೆ, ತಿಮ್ಮನಹಳ್ಳಿ, ನಾಗರಹಳ್ಳಿ, ಗೌಡನಹಳ್ಳಿ, ಇಂದಾವರ ಸೇರಿದಂತೆ ಹಲವು ಗ್ರಾಮದ ಜನರು ಜ್ವರದಿಂದ ಬಳಲುತ್ತಿದ್ದಾರೆ. ಒಂದೇ ತಿಂಗಳಲ್ಲಿ ಜ್ವರಕ್ಕೆ ಮೂವರು ಬಲಿಯಾಗಿದ್ದಾರೆ.

    ಕಳೆದ ಒಂದು ತಿಂಗಳಲ್ಲಿ ಏಳಕ್ಕೂ ಹೆಚ್ಚು ಗ್ರಾಮದ ಜನ ಹಾಸಿಗೆ ಹಿಡಿದಿದ್ದು, ಹಳ್ಳಿಯಿಂದ ಹಳ್ಳಿಗೆ ಹರಡುತ್ತಿರುವ ವೈರಲ್ ಫಿವರ್ ನಿಂದ ಸಾವಿರ ಜನಸಂಖ್ಯೆವುಳ್ಳ ಗ್ರಾಮದಲ್ಲಿ ಆರೋಗ್ಯವಾಗಿ ಇರುವವರನ್ನು ಹುಡುಕುವಂತಾಗಿದೆ. ಜನ ಹಾಸಿಗೆ ಹಿಡಿಯುತ್ತಿರುವುದರಿಂದ ಹಳ್ಳಿ ಮಂದಿ ಆತಂಕಕ್ಕೀಡಾಗಿದ್ದಾರೆ. ಒಂದೇ ತಿಂಗಳಲ್ಲಿ ಏಳು ತಿಂಗಳ ಲೋಚನ್, 16ರ ಹರೆಯದ ಮೇಘನಾ ಹಾಗೂ ತಿಮ್ಮಣ್ಣ(56) ಎಂಬ ಮೂವರು ಜ್ವರಕ್ಕೆ ಬಲಿಯಾಗಿದ್ದಾರೆ.

    ಆಶಾ ಕಾರ್ಯಕರ್ತರು, ನರ್ಸ್‍ಗಳು ಬರುತ್ತಾರೆ ಮಾತ್ರೆ ಕೊಟ್ಟು ಹೋಗುತ್ತಾರೆ. ಆದರೆ ಜನರು ಮಾತ್ರ ಹುಷಾರಾಗುತ್ತಿಲ್ಲ. ಹುಷಾರಾದವರು ವಾರವಷ್ಟೇ ಓಡಾಡಿ ಮತ್ತೆ ಮಲಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆಯೂ ಸಿಗದ ಕಾರಣ ಹಳ್ಳಿ ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಗೌಡನಹಳ್ಳಿ, ಚಿಕ್ಕಮಗಳೂರು ನಗರದಿಂದ ಕೂಗಳತೆ ದೂರದಲ್ಲಿರುವ 300 ಮನೆಗಳುಳ್ಳ ಗ್ರಾಮವಾಗಿದೆ. ಆದರೆ ಈ ಗ್ರಾಮದಲ್ಲಿ ಆರೋಗ್ಯವಾಗಿರುವವರನ್ನು ಹುಡುಕಬೇಕಾಗಿದೆ. ಯಾಕೆಂದರೆ 300 ಮನೆಗಳ ಗ್ರಾಮದಲ್ಲಿ ಇರುವವರೆಲ್ಲರೂ ಕಾಯಿಲೆಯಿಂದ ಮಲಗಿದ್ದಾರೆ. ಹೇಳುವುದಕ್ಕೆ ಚಿಕ್ಕ ಹಳ್ಳಿಯಾದರು ಪ್ರತಿದಿನ ಆಸ್ಪತ್ರೆಗೆ ಹೋಗುವವರ ಸಂಖ್ಯೆ 300ಕ್ಕೂ ಅಧಿಕವಾಗಿದೆ. ಅಂಬಳೆ ಹೋಬಳಿಯ ಬಹುತೇಕ ರೋಗಿಗಳು ಅಲ್ಲಿಗೆ ಬರುತ್ತಾರೆ.

    ಆರ್ಥಿಕವಾಗಿ ಬಲವಿದ್ದವರು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಕೂಲಿ ಕಾರ್ಮಿಕರು, ರೈತರು ಜಿಲ್ಲಾಸ್ಪತ್ರೆಗೆ ಬಂದು ನರಳಾಡುತ್ತಾ ಬದುಕುತ್ತಿದ್ದಾರೆ. ಇಂಜೆಕ್ಷನ್ ಪವರ್ ಇರುವ ತನಕ ನಾರ್ಮಲ್ ಆಗಿರೋರು ಬಳಿಕ ಮತ್ತೆ ಕುಂಟುತ್ತಾ ಸಾಗುತ್ತಾರೆ. ವಾರಕ್ಕೆ ಹುಷಾರಾದವರು ಮುಂದಿನ ವಾರ ಮತ್ತೆ ಆಸ್ಪತ್ರೆಗೆ ಬರುವಂತಾಗಿದೆ. ಕೂಡಲೇ ಜಿಲ್ಲಾಡಳಿತ ಇಲ್ಲಿನ ಕಾಯಿಲೆಗೆ ಶಾಶ್ವತ ಪರಿಹಾರ ಹುಡುಕಬೇಕೆಂದು ಗ್ರಾಮಸ್ಥ ಮರೀಗೌಡ ಒತ್ತಾಯಿಸಿದ್ದಾರೆ.

    ಕಾಫಿನಾಡಿನ ಗ್ರಾಮೀಣ ಭಾಗದ ಒಂದಲ್ಲ ಒಂದು ಹಳ್ಳಿಯ ಜನ ಪ್ರತಿದಿನ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಅಲ್ಲಿನ ಜನ ಹಾಸಿಗೆ ಹಿಡಿಯುತ್ತಿರುವುದು ಚಿಂತೆಗೀಡು ಮಾಡಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೋಂಕು ತಗಲದಿರುವ ಗ್ರಾಮಗಳತ್ತ ಗಮನ ಹರಿಸಿ ಮುಂದಾಗುವ ಅನಾಹುತವನ್ನ ತಪ್ಪಿಸಬೇಕು. ಜೊತೆಗೆ ಡೇಂಘಿ ಹಾಗೂ ಚಿಕೂನ್ ಗುನ್ಯಾದಿಂದ ಬಳಲುತ್ತಿರುವ ಗ್ರಾಮಗಳಲ್ಲಿ ಹೆಲ್ತ್ ಕ್ಯಾಂಪ್ ಹಾಕಿ ಜನರ ಆರೋಗ್ಯವನ್ನು ಸುಧಾರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಮರಕ್ಕೆ ಟೊಯೋಟಾ ಡಿಕ್ಕಿ- ಮಂಜುನಾಥನ ದರ್ಶನ ಮಾಡಿ ಬರ್ತಿದ್ದ ಮೂವರ ದುರ್ಮರಣ

    ಮರಕ್ಕೆ ಟೊಯೋಟಾ ಡಿಕ್ಕಿ- ಮಂಜುನಾಥನ ದರ್ಶನ ಮಾಡಿ ಬರ್ತಿದ್ದ ಮೂವರ ದುರ್ಮರಣ

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಟೊಯೋಟಾ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, ಮೂವರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಬಳಿ ನಡೆದಿದೆ.

    ಮಹೇಶ್, ನಾಗರಾಜ್ ಮತ್ತು ಸುರೇಶ್ ಮೃತ ದುರ್ದೈವಿಗಳು. ಮೃತರು ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಒಟ್ಟು ಆರು ಮಂದಿ ಟೊಯೋಟಾದಲ್ಲಿ ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಹೋಗಿದ್ದರು. ಮಂಜುನಾಥನ ದರ್ಶನ ಮುಗಿಸಿಕೊಂಡು ವಾಪಸ್ ಬಳ್ಳಾರಿ ಹೋಗುತ್ತಿದ್ದರು.

    ಇದೇ ವೇಳೆ ಉದ್ದೇಬೋರನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಟೊಯೋಟಾದಲ್ಲಿದ್ದ ಮಹೇಶ್, ನಾಗರಾಜ್ ಮತ್ತು ಸುರೇಶ್ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಮೂವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಚಿಕ್ಕಮಗಳೂರು ಜಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಕುರಿತು ಕಡೂರು ತಾಲೂಕಿನ ಸಖರಾಯ ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ.

  • ತಾಯಿಯ ಪ್ರಾರ್ಥನೆಯಿಂದ ಸಾವನ್ನೇ ಜಯಿಸಿದ ಮಗ

    ತಾಯಿಯ ಪ್ರಾರ್ಥನೆಯಿಂದ ಸಾವನ್ನೇ ಜಯಿಸಿದ ಮಗ

    ಅಮರಾವತಿ: ತಾಯಿ ಎಂದರೆ ದೇವರ ರೂಪ ಎಂಬ ಮಾತಿದೆ. ಅದರಂತೆ ತೆಲಂಗಾಣದಲ್ಲಿ ತಾಯಿಯೊಬ್ಬರು ಪವಾಡದ ರೀತಿಯಲ್ಲಿ ಸಾವಿನ ದವಡೆಯಲ್ಲಿದ್ದ ತನ್ನ ಮಗನನ್ನು ಉಳಿಸಿಕೊಂಡಿದ್ದಾರೆ.

    ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಪಿಳ್ಳಲಮರಿ ಎಂಬ ಹಳ್ಳಿಯ ಸಿದ್ದಮ್ಮ, ತನ್ನ 18 ವರ್ಷದ ಮಗ ಗಾಂಧಮ್ ಕಿರಣ್‍ಗೆ ಜೂನ್ 26 ರಂದು ವಾಂತಿ ಮತ್ತು ತೀವ್ರ ಭೇದಿ ಕಾಣಿಸಿಕೊಂಡ ಕಾರಣ ಅವನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಚಿಕಿತ್ಸೆ ಆರಂಭವಾದ ನಂತರ ಕಿರಣ್‍ಗೆ ಡೆಂಗ್ಯೂ ಮತ್ತು ಕಾಮಾಲೆ ರೋಗದ ಜೊತೆಗೆ ಹೆಪಟೈಟಿಸ್ ಬಿ ಇರುವುದು ಕಂಡು ಬಂದಿದೆ. ನಂತರ ಅಲ್ಲಿನ ಸರ್ಕಾರಿ ವೈದ್ಯರು ಕಿರಣ್ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

    ವೈದ್ಯರು ಹೇಳಿದಂತೆ ಮಗನನ್ನು ಕಿರಣ್ ತಾಯಿ ಹೈದರಾಬಾದಿಗೆ ಕರೆದುಕೊಂಡು ಹೋಗಿ ಅಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿಯೂ ಅವರ ಮಗನ ಆರೋಗ್ಯದ ಸ್ಥಿತಿ ಸುಧಾರಿಸದೇ ಕೋಮಾಗೆ ಜಾರಿದ್ದ. ನಂತರ ಜುಲೈ 3 ರಂದು ಅಲ್ಲಿನ ವೈದ್ಯರು ನಿಮ್ಮ ಮಗನ ಮೆದುಳು ಕೆಲಸ ಮಾಡುತ್ತಿಲ್ಲ. ಆತ ಬದುಕುವುದಿಲ್ಲ, ನಮ್ಮಿಂದ ಗುಣಪಡಿಸಲು ಸಾಧ್ಯವಿಲ್ಲ. ಅವನನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ತಾಯಿ ಸಿದ್ದಮ್ಮನಿಗೆ ಹೇಳಿದ್ದಾರೆ.

    ಇದರಿಂದ ನೊಂದ ತಾಯಿ ತನ್ನ ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಮಗನನ್ನು ಕರೆದುಕೊಂಡು ತನ್ನ ಹಳ್ಳಿಗೆ ಬಂದಿದ್ದಾಳೆ. ಆದರೆ ಆಗಲೇ ಕಿರಣ್ ಬದುಕುವುದಿಲ್ಲ ಎಂದು ಗ್ರಾಮಸ್ಥರು ಮತ್ತು ಕುಟುಂಬದವರು ಅಂತ್ಯಕ್ರಿಯೆ ಮಾಡಲು ತಯಾರಿ ಮಾಡಿದ್ದರು. ಆದರೆ ಭರವಸೆ ಬಿಡದ ಸಿದಮ್ಮ ತನ್ನ ಮಗನನ್ನು ಸಾಯಲು ಬಿಡದೆ ಅವನ ಹಾಸಿಗೆ ಪಕ್ಕದಲ್ಲೇ ಕುಳಿತುಕೊಂಡು ನಿಮಿಷಕ್ಕೆ ಒಂದು ಬಾರಿ ಮಗನನ್ನು ಕರೆಯುತ್ತಲೇ ಇದ್ದಳಂತೆ.

    ಈ ವೇಳೆ ಕಿರಣ್ ನಿಧಾವಾಗಿ ಉಸಿರಾಡುವುದು ಕಂಡು ಬಂದಿದೆ. ಈ ಸಮಯದಲ್ಲಿ ಅಂತ್ಯ ಕ್ರಿಯೆಯನ್ನು ಮುಂದೂಡಿದ ಗ್ರಾಮಸ್ಥರು ಅವನನ್ನು ನೋಡುತ್ತಾ ಕುಳಿತಿದ್ದಾರೆ. ಈ ವೇಳೆ ಕಿರಣ್ ಕಣ್ಣಿನಿಂದ ನೀರು ಬರುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ರಾಜಾಬಾಬು ರೆಡ್ಡಿ ತಕ್ಷಣ ಕಿರಣ್‍ನ ಸ್ಥಿತಿಯನ್ನು ಅರಿತು ಹೈದರಾಬಾದಿನಲ್ಲಿ ಚಿಕಿತ್ಸೆ ನೀಡಿದ ವೈದ್ಯರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ನಂತರ ಅ ವೈದ್ಯ ಕಿರಣ್‍ಗೆ ನಾಲ್ಕು ಇಂಜೆಕ್ಷನ್ಸ್ ಕೊಡಲು ಹೇಳಿದ್ದಾರೆ. ನಂತರ ಕಿರಣ್ ಉಸಿರಾಡಲು ಶುರು ಮಾಡಿದ್ದಾನೆ. ನಂತರ ಕಿರಣ್ ನಿಧಾನವಾಗಿ ಚೇತರಿಸಿಕೊಂಡಿದ್ದು, ಈಗ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ತಾಯಿಯೊಂದಿಗೆ ಮಾತನಾಡುತ್ತಾನೆ ಎಂದು ವೈದ್ಯ ರಾಜಾಬಾಬು ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸಿದ್ದಮ್ಮ 2005 ರಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ಮಗನನ್ನು ಉಳಿಸಿಕೊಳ್ಳಲು ಹಲವು ಪ್ರಯತ್ನ ನಡೆಸಿದರು. ವೈದ್ಯರು ಕೈ ಚೆಲ್ಲಿದ ಪರಿಣಾಮ ಕೊನೆಗೆ ಮಗ ಗುಣಮುಖನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ತಾಯಿಯ ಪ್ರಾರ್ಥನೆ ಫಲಪ್ರದವಾಗಿದ್ದು ಮಗ ಸಾವಿನ ದವಡೆಯಿಂದ ಪಾರಾಗಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

  • ಮಗುವಿಗೆ ಚಿಕಿತ್ಸೆ ಕೊಡದ ವೈದ್ಯರು – ಮೊಬೈಲಿನಲ್ಲಿ ಶೂಟ್ ಮಾಡೋ ವೇಳೆ ಲೈಟ್ ಆಫ್

    ಮಗುವಿಗೆ ಚಿಕಿತ್ಸೆ ಕೊಡದ ವೈದ್ಯರು – ಮೊಬೈಲಿನಲ್ಲಿ ಶೂಟ್ ಮಾಡೋ ವೇಳೆ ಲೈಟ್ ಆಫ್

    ಮೈಸೂರು: ಚಿಕಿತ್ಸೆಗಾಗಿ ಬಂದಿದ್ದ ಮಗುವಿಗೆ ಚಿಕಿತ್ಸೆ ನೀಡದ ವೈದ್ಯರನ್ನು ಮಗುವಿನ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ನಡೆದಿದೆ.

    ಭಾನುವಾರದಂದು ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಗುವನ್ನು ತಾಯಿ ಆಸ್ಪತ್ರೆಗೆ ಕರೆತಂದಿದ್ದರು. ಆದ್ರೆ ಈ ವೇಳೆ ವೈದ್ಯರು ಚಿಕಿತ್ಸೆ ಕೊಡಲು ನಿರಾಕರಿಸಿದ್ದಾರೆ. ಸತತ 2 ಗಂಟೆಗಳ ಕಾಲ ರೋಗಿಗೆ ಚಿಕಿತ್ಸೆ ನೀಡದೇ ಕೆ.ಆರ್.ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯಿಸಿದ್ದಾರೆ. ಅಲ್ಲದೆ ವೈದ್ಯರು ಚಿಕಿತ್ಸೆ ನೀಡಲು ಆಗಲ್ಲ ಎನ್ನುತ್ತಿರುವುದನ್ನ ಮಗುವಿನ ಸಂಬಂಧಿಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ವಿಡಿಯೋದಲ್ಲಿ ಮಗುವನ್ನು ತಾಯಿ ಎತ್ತುಕೊಂಡು ಚಿಕಿತ್ಸೆ ಕೊಡದ ವೈದ್ಯರ ನಡೆಯಿಂದ ಕಂಗಾಲಾಗಿ ನಿಂತಿರುವುದು ಕೂಡ ಸೆರೆಯಾಗಿದೆ. ಜೊತೆಗೆ ವೈದ್ಯರು, ನಾವು ಚಿಕಿತ್ಸೆ ನೀಡಲ್ಲ, ಹೊರಗಡೆ ಹೋಗಿ ಎಂದಿದ್ದಾರೆ. ಆಗ ಯಾಕೆ ನಾವು ಹೋಗಬೇಕು? ಚಿಕಿತ್ಸೆ ನೀಡಲು ಆಗಲ್ಲ ಎಂದು ಬರೆದು ಕೊಡಿ ಎಂದು ಮಗುವಿನ ಸಂಬಂಧಿಕರು ವೈದ್ಯರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿಯನ್ನು ಕರೆಸಿ ಅವರನ್ನು ಹೊರಗೆ ಕಳಿಹಿಸುವಂತೆ ವೈದ್ಯರು ಹೇಳಿದ್ದಾರೆ.

    ವಿಡಿಯೋ ಸೆರೆಹಿಡಿಯುವ ವೇಳೆ ಕ್ಯಾಮೆರಾ ಕಿತ್ತುಕೊಳ್ಳಲು ಸ್ಥಳದಲ್ಲಿದ್ದ ಮಹಿಳಾ ಸಿಬ್ಬಂದಿ ಮುಂದಾಗಿದ್ದಾರೆ. ಇದ್ಯಾವುದ್ದಕ್ಕೂ ರೋಗಿಯ ಸಂಬಂಧಿಕರು ಕೇಳದ ಹಿನ್ನೆಲೆಯಲ್ಲಿ ಕೊಠಡಿಯ ಲೈಟ್ ಆಫ್ ಮಾಡಿ ಏನಾದರೂ ಮಾಡಿಕೊಳ್ಳಿ ಎಂದು ತಮ್ಮ ಪಾಡಿಗೆ ವೈದ್ಯರು ಹಾಗೂ ಸಿಬ್ಬಂದಿ ಹೋಗಿದ್ದಾರೆ. ಈ ಏಲ್ಲಾ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಆರೋಗ್ಯ ಸಚಿವರೇ ಕೆ.ಆರ್.ಆಸ್ಪತ್ರೆಯತ್ತ ನೋಡಿ, ನಿರ್ಲಕ್ಷ್ಯ ತೋರುವ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಮಗುವಿನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪಾಗಲ್‍ಪ್ರೇಮಿಯ ಹುಚ್ಚಾಟದಿಂದ ಯುವತಿಯ ಸ್ಥಿತಿ ಗಂಭೀರ- 12 ಬಾರಿ ಇರಿದಿದ್ದ

    ಪಾಗಲ್‍ಪ್ರೇಮಿಯ ಹುಚ್ಚಾಟದಿಂದ ಯುವತಿಯ ಸ್ಥಿತಿ ಗಂಭೀರ- 12 ಬಾರಿ ಇರಿದಿದ್ದ

    -ಆಸ್ಪತ್ರೆಯಲ್ಲಿ ಕಣ್ಣ ಬಿಟ್ಟಾಗ ಪ್ರೇಯಸಿಯನ್ನ ಕೇಳಿದ ಪ್ರೇಮಿ

    ಮಂಗಳೂರು: ಪಾಗಲ್ ಪ್ರೇಮಿಯಿಂದ ಯುವತಿಯ ಕೊಲೆ ಯತ್ನ ಪ್ರಕರಣದ ತನಿಖೆ ಚುರುಕುಗೊಂಡಿದೆ. ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆರೋಪಿಗೆ ಜೈಲ್ ವಾರ್ಡ್ ನಲ್ಲೇ ಚಿಕಿತ್ಸೆ ನಡೆಯುತ್ತಿದೆ.

    ಸುಶಾಂತ್ ಪ್ರೇಯಸಿಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದನು. ಆರೋಪಿ ಸುಶಾಂತ್ ಇತ್ತೀಚಿಗಷ್ಟೇ 50 ಸಾವಿರ ರೂ. ಖರ್ಚು ಮಾಡಿ ಯುವತಿಯ ಹುಟ್ಟುಹಬ್ಬ ಆಚರಿಸಿದ್ದನು. ಇದಾದ ಮರುದಿನವೇ ಮಾನಸಿಕ ಕಿರುಕುಳದ ಆರೋಪ ಮಾಡಿ ಯುವತಿ ಸುಶಾಂತ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಇದನ್ನೂ ಓದಿ: ಪ್ರೇಯಸಿಗೆ ಚಾಕು ಇರಿದ – ತಾನೂ ಇರಿದ್ಕೊಂಡು, ಆಕೆಯ ಮೇಲೆಯೇ ಬಿದ್ದ

    ಅಷ್ಟೇ ಅಲ್ಲದೇ ಸುಶಾಂತ್‍ನನ್ನ ಯುವತಿ ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿ ಸುಶಾಂತ್ ಪ್ರೇಯಸಿಯ ಕೊಲೆಗೆ ಎರಡು ದಿನಗಳ ಹಿಂದೆಯೇ ಸ್ಕೆಚ್ ಹಾಕಿದ್ದನು. ಅದರಂತೆಯೇ ಶುಕ್ರವಾರ ಸಮಯ ನೋಡಿ ಯುವತಿಯ ಮೇಲೆ ಅಟ್ಯಾಕ್ ಮಾಡಿ 12 ಬಾರಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದನು. ಸುಶಾಂತ್ ಈ ಕೃತ್ಯ ಎಸಗುವ ಮುನ್ನ ಗಾಂಜಾ ಸೇವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಸದ್ಯಕ್ಕೆ ಆಸ್ಪತ್ರೆಯಿಂದ ಆರೋಪಿ ಸುಶಾಂತ್‍ನನ್ನು ಜೈಲ್ ವಾರ್ಡಿಗೆ ಶಿಫ್ಟ್ ಮಾಡಿದ್ದು, ಅಲ್ಲಿಯೇ ಸುಶಾಂತ್ ಚೇತರಿಕೆಯಾಗುತ್ತಿದ್ದಾನೆ. ಆದರೆ ಯುವತಿಗೆ ಅತಿಯಾಗಿ ರಕ್ತಸ್ರಾವ ಹೋಗಿದ್ದು, ಈಗಾಗಲೇ ರಕ್ತ ನೀಡಲಾಗಿದೆ. ಆದರೂ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಸದ್ಯಕ್ಕೆ ಯುವತಿಗೆ ದೇರಳಕಟ್ಟೆಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಜೈಲ್ ವಾರ್ಡ್ ನಲ್ಲಿರುವ ಸುಶಾಂತ್ ಪಜ್ಞೆ ಬಂದ ಬಳಿಕ ಪ್ರೇಯಸಿ ಹೇಗಿದ್ದಾಳೆ ಎಂದು ಕೇಳಿದ್ದಾನೆ ಎಂದು ತಿಳಿದುಬಂದಿದೆ.

  • ಗಾಯಗೊಂಡು ಫಾರ್ಮಸಿಗೆ ಬಂದ ಶ್ವಾನ -ವಿಡಿಯೋ ವೈರಲ್

    ಗಾಯಗೊಂಡು ಫಾರ್ಮಸಿಗೆ ಬಂದ ಶ್ವಾನ -ವಿಡಿಯೋ ವೈರಲ್

    ಅಂಕಾರಾ: ಸಾಮಾನ್ಯವಾಗಿ ಮನುಷ್ಯರು ಗಾಯಗೊಂಡರೆ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಇಲ್ಲೊಂದು ಶ್ವಾನ ಗಾಯಗೊಂಡ ತಕ್ಷಣ ಫಾರ್ಮಸಿಗೆ ಓಡಿ ಬಂದಿರುವ ಘಟನೆ ಟರ್ಕಿಯಲ್ಲಿ ನಡೆದಿದೆ.

    ಕಳೆದ ವಾರ ಟರ್ಕಿಯ ಇಸ್ತಾಂಬುಲ್‍ನಲ್ಲಿ ಈ ಘಟನೆ ನಡೆದಿದ್ದು, ನಾಯಿ ಫಾರ್ಮಸಿಗೆ ಓಡಿ ಬಂದು ಚಿಕಿತ್ಸೆ ಪಡೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಗಾಯಗೊಂಡು ದಾರಿತಪ್ಪಿ ಶ್ವಾನ, ಬಾನು ಸೆಂಗಿಜ್ ನಡೆಸುತ್ತಿದ್ದ ಫಾರ್ಮಸಿ(ಔಷಧಾಲಯಕ್ಕೆ) ಬಂದಿದೆ. ಗಾಯಗೊಂಡು ಫಾರ್ಮಸಿಗೆ ಬಂದು ಮಲಗಲು ಜಾಗ ಹುಡುಕುತ್ತಿರುವ ನಾಯಿ ಪ್ರಾಣಿ ಪ್ರೇಮಿಯಾಗಿರುವ ಎಂ.ಎಸ್. ಸೆಂಗಿಜ್ ಅವರ ಕಣ್ಣಿಗೆ ಬಿದ್ದಿದೆ. ಕೂಡಲೇ ಅವರು ನಾಯಿಯನ್ನು ನೋಡಿ ಬೇಬಿ, ಸಮಸ್ಯೆ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

    ನಾಯಿಯ ಒಂದು ಕಾಲಿಗೆ ಗಾಯವಾಗಿ ರಕ್ತ ಬರುತ್ತಿತ್ತು. ಇದನ್ನು ನೋಡಿದ ಸೆಂಗಿಜ್ ಅವರು ಗಾಯಗೊಂಡಿದ್ದ ನಾಯಿಗೆ ಚಿಕಿತ್ಸೆ ನೀಡಿದ್ದಾರೆ. ಅವರು ಚಿಕಿತ್ಸೆ ನೀಡುವಾಗ ನಾಯಿಯು ಸುಮ್ಮನೆ ನೋಡುತ್ತಾ ಚಿಕಿತ್ಸೆ ಪಡೆಯುತ್ತಿತ್ತು ಇದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಚಿಕಿತ್ಸೆ ಪಡೆದ ತಕ್ಷಣ ನಾಯಿ ಅಲ್ಲಿಯೇ ಮಲಗಿಕೊಂಡಿತು. ನಾನು ಬೇರೆ ಏನಾದರೂ ಸಮಸ್ಯೆ ಇದೆಯಾ ಎಂದು ಪರೀಕ್ಷೆ ಮಾಡಿದೆ. ಆದರೆ ಬೇರೆ ಯಾವ ಗಾಯವೂ ಆಗಿರಲಿಲ್ಲ. ಸ್ವಲ್ಪ ಸಮಯದ ನಂತರ ಅದು ನನಗೆ ಧನ್ಯವಾದ ಹೇಳಿತು ಎಂದು ತಿಳಿಸಿದ್ದಾರೆ.

    ತನಗೆ ಅಗತ್ಯವಾದ ಚಿಕಿತ್ಸೆ ಸಿಕ್ಕ ನಂತರ ನಾಯಿ ಅಲ್ಲಿಯೇ ವಿಶ್ರಾಂತಿ ಪಡೆದಿದೆ. ಸ್ವಲ್ಪ ಸಮಯದವರೆಗೂ ಫಾರ್ಮಸಿಯಲ್ಲಿ ಚೇತರಿಸಿಕೊಂಡು ಬಳಿಕ ಹೋಗಿದೆ. ಈ ಎಲ್ಲವೂ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿದೆ. ಇದೀಗ ಆಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

  • ಥ್ಯಾಂಕ್ಯೂ ಸಿಎಂ ಅಂಕಲ್, ನನ್ನ ಪ್ರಾಣ ಉಳಿಸಿದ್ರಿ – ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದ ಪುಟ್ಟ ಪೋರ

    ಥ್ಯಾಂಕ್ಯೂ ಸಿಎಂ ಅಂಕಲ್, ನನ್ನ ಪ್ರಾಣ ಉಳಿಸಿದ್ರಿ – ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದ ಪುಟ್ಟ ಪೋರ

    ಬೆಂಗಳೂರು: ಇಂದು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನಿರ್ಮಾಣಗೊಂಡಿರುವ 5 ಶಸ್ತ್ರಚಿಕಿತ್ಸೆ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಆಗಮಿಸಿದ್ದರು. ಈ ವೇಳೆ 6 ವರ್ಷದ ಸೃಜನ್ ಎಂಬ ಪುಟ್ಟ ಬಾಲಕ ಸಿಎಂ ಅವರಿಗೆ ಧನ್ಯವಾದ ಹೇಳಿದ್ದಾನೆ.

    16 ತಿಂಗಳ ಮಗುವಾಗಿದ್ದಾಗ ಸೃಜನ್ ಬ್ಲಡ್ ಕ್ಯಾನ್ಸರ್‍ಯಿಂದ ಬಳಲುತ್ತಿದ್ದ. ಚಿಕಿತ್ಸೆಗೆ 30 ಲಕ್ಷ ಖರ್ಚಾಗುತ್ತೆ ಎಂದು ಖಾಸಗಿ ಆಸ್ಪತ್ರೆಗಳು ಹೇಳಿದ್ದವು. ಹಾಗಾಗಿ ಸೃಜನ್ ತಂದೆ ಮೈಸೂರಿನ ಸೋಮಶೇಖರ್ ಸಿಎಂ ಬಳಿ ಸಹಾಯ ಕೇಳಿದ್ದರು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿಗಳು, ಸೃಜನ್ ಪೋಷಕರನ್ನು ಕಿದ್ವಾಯಿ ಆಸ್ಪತ್ರೆಗೆ ಕಳುಹಿಸಿಕೊಟ್ಟು, ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದ್ದರು.

    ಸಿಎಂ ಅವರ ಕೊಟ್ಟ ಮಾತಿನಂತೆ ಆ ಮಗುವಿಗೆ ಐದು ವರ್ಷ ಉಚಿತವಾಗಿ ಚಿಕಿತ್ಸೆ ಕೊಡಿಸಿದ್ದಾರೆ. ಇದರಿಂದ ಈಗ ಸೃಜನ್ ಗುಣಮುಖನಾಗಿದ್ದಾನೆ. ಅದ್ದರಿಂದ ಇಂದು ಕಿದ್ವಾಯಿ ಆಸ್ಪತ್ರೆಗೆ ಬಂದಿದ್ದ ಸಿಎಂ ಅವರನ್ನು ವೇದಿಕೆ ಮೇಲೆ ಅವರ ತಂದೆಯ ಜೊತೆ ಭೇಟಿ ಮಾಡಿದ ಸೃಜನ್ ಥ್ಯಾಂಕ್ಯೂ ಸಿಎಂ ಅಂಕಲ್, ನನ್ನ ಪ್ರಾಣ ಉಳಿಸಿದ್ರಿ. ನಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮಿನೇ ಎಂದು ಸಿಎಂ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ.

    ಮಗುವನ್ನು ಕಂಡು ಖುಷಿ ಪಟ್ಟ ಸಿಎಂ, ಈ ರೀತಿಯ ಸೇವೆಗೆ ನಮ್ಮ ಸರ್ಕಾರವೂ ಸಹಕಾರ ನೀಡಲಿದೆ. ವೇದಿಕೆ ಮೇಲೆ ಒಂದು ಮಗು ನನ್ನ ಮಾತನಾಡಿಸಲು ಬಂದಿತ್ತು. ಈಗಷ್ಟೇ ವೇದಿಕೆ ಮೇಲೆ ಮಾತನಾಡಿಸಿದೆ. ಆ ಮಗು ಚಿಕ್ಕವನಿದ್ದಾಗ ನನ್ನ ಬಳಿ ಚಿಕಿತ್ಸೆಗೆ ಸಹಾಯ ಕೇಳಿಕೊಂಡು ಬಂದಿದ್ದರು. ನಾನು ಅವರಿಗೆ ಕಿದ್ವಾಯಿ ಆಸ್ಪತ್ರೆಗೆ ಹೋಗಲು ಹೇಳಿದ್ದೆ. ಈಗ ಆ ಮಗು ಗುಣಮುಖವಾಗಿದೆ ಎಂದು ಹೇಳಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]