Tag: Trap

  • ಬೋನಿಗೆ ಬಿದ್ದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ

    ಬೋನಿಗೆ ಬಿದ್ದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ

    ಕೊಪ್ಪಳ: ಜಿಲ್ಲೆಯ ಸುತ್ತಮುತ್ತ ಹಳ್ಳಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ ಇಂದು ಅರಣ್ಯ ಇಲಾಖೆ ಹಾಕಿದ್ದ ಬೋನಿಗೆ ಬಿದ್ದಿದೆ.

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ 17 ವರ್ಷದ ಕರಡಿ ಬೋನಿಗೆ ಬಿದ್ದಿದೆ. ಕಳೆದ ಒಂದು ತಿಂಗಳಿನಿಂದ ಹನುಮನಹಳ್ಳಿ, ಚಿಕ್ಕರಾಂಪೂರ, ಪಂಪಾ ಸರೋವರ, ಜಂಗ್ಲಿ ಮತ್ತು ವಿರೂಪಾಪೂರಗಡ್ಡಿ ಗ್ರಾಮಗಳ ಸುತ್ತ ತಿರುಗಾಡಿ ಕರಡಿ ಜನರಲ್ಲಿ ಭಯ ಹುಟ್ಟಿಸಿತ್ತು.

    ಆನೆಗೊಂದಿ ಸುತ್ತಲು ಬಾಳೆ ಬೆಳೆ ಬೆಳೆಯುವುದರಿಂದ ಇಲ್ಲಿ ಕರಡಿಗಳು ಹೆಚ್ಚಿವೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು. ಈ ಸಂಬಂಧ ಅರಣ್ಯ ಇಲಾಖೆ ಹಾಕಿದ್ದ ಬೋನಿಗೆ ಇಂದು ಬೆಳಗ್ಗೆ ಕರಡಿ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

  • 6 ತಿಂಗ್ಳಿನಿಂದ ಗ್ರಾಮದಲ್ಲಿ ಓಡಾಡ್ತಿದ್ದ ಹುಲಿ ಕೊನೆಗೂ ಟ್ರಾಪ್

    6 ತಿಂಗ್ಳಿನಿಂದ ಗ್ರಾಮದಲ್ಲಿ ಓಡಾಡ್ತಿದ್ದ ಹುಲಿ ಕೊನೆಗೂ ಟ್ರಾಪ್

    -ಟ್ರಾಪ್ ಆಗಿದ್ದು ಹೇಗೆ? ಇಲ್ಲಿದೇ ಮಾಹಿತಿ

    ಕಾರವಾರ: ಕಳೆದ ಆರು ತಿಂಗಳ ಹಿಂದೆ ಕದ್ರಾ ಗ್ರಾಮದ ಸುತ್ತಮುತ್ತ ಹುಲಿ ಓಡಾಡುತ್ತಿದೆ ಎಂಬ ಸುದ್ದಿ ಹರಿದಾಡಿ ಜನರನ್ನು ಆತಂಕಕ್ಕೀಡುಮಾಡಿತ್ತು. ನಿಜವಾಗಿಯೂ ಹುಲಿ ನಾಡಿನ ಸುತ್ತಮುತ್ತ ಓಡಾಡುತ್ತಿವೆಯೇ ಎಂಬ ಜನರ ಭಯಕ್ಕೆ ಅರಣ್ಯ ಇಲಾಖೆ ಮೌನವಹಿಸಿತ್ತು. ಆದರೆ ಕಾರವಾರದ ಸುತ್ತಮುತ್ತ ಹುಲಿಗಳು ತನ್ನ ಬೇಟೆ ಅರಸಿ ರಾತ್ರಿ ವೇಳೆ ಸಂಚರಿಸುತ್ತಿವೆ ಎನ್ನುವುದಕ್ಕೆ ಸ್ವತಃ ಅರಣ್ಯ ಇಲಾಖೆ ನಡೆಸಿದ ಕ್ಯಾಮೆರಾ ಟ್ರಾಪ್ ನಲ್ಲಿ ಭಯಲಾಗಿದೆ.

    ಕಾರವಾರ ತಾಲೂಕಿನ ಕದ್ರಾ ವಲಯ ವಿಭಾಗದ ದೇವಕಾರಿನಲ್ಲಿ ಹುಲಿ ಪ್ರತ್ಯಕ್ಷವಾಗಿದೆ. 4 ರಿಂದ 5 ವರ್ಷ ಪ್ರಾಯದ ಹುಲಿ ತನ್ನ ಬೇಟೆ ಅರಸಿ ಕೋಣವನ್ನು ಬೇಟೆಯಾಡಿದ್ದು, ಅರಣ್ಯ ಇಲಾಖೆ ಇರಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ:
    ಕಾಳಿ ಹುಲಿ ಸಂರಕ್ಷಣಾ ಪ್ರಾಧಿಕಾರ ಹುಲಿಗಳ ಅಧ್ಯಯನ ಹಾಗೂ ಮಾಹಿತಿ ಕ್ರೂಡೀಕರಿಸಲು ಹುಲಿ ಸಂರಕ್ಷಿತ ಪ್ರದೇಶವಾದ ಕಾರವಾರ, ಯಲ್ಲಾಪುರ, ಹಳಿಯಾಳ ಅರಣ್ಯ ವಿಭಾಗಕ್ಕಾಗಿ 30 ಟ್ರಾಪ್ ಕ್ಯಾಮೆರಾ ನೀಡಿತ್ತು. ನೀಡಿದ 30 ಕ್ಯಾಮೆರಾಗಳಲ್ಲಿ 15 ಕ್ಯಾಮೆರಾಗಳನ್ನು ಕಾಳಿ ಹುಲಿ ರಕ್ಷಿತ ಪ್ರದೇಶವಾದ ಹಳಿಯಾಳ, ಕಾರವಾರ ಹಾಗೂ ಯಲ್ಲಾಪುರ ವಲಯಗಳಿಗೆ ಅಳವಡಿಸಿ ಹುಲಿ ಬಗ್ಗೆ ಮಾಹಿತಿ ಪಡೆಯಲಾಯಿತು.

    ಕಾರವಾರದ ಕದ್ರಾ ವಲಯ ಅರಣ್ಯದ ದೇವಕಾರ ಕಾಡಿನಲ್ಲಿ ನವೆಂಬರ್ 15 ರಂದು ಕೋಣ ಸತ್ತು ಬಿದ್ದಿದ್ದನ್ನು ವಲಯ ಸಂರಕ್ಷಣಾಧಿಕಾರಿ ಪ್ರಕಾಶ್ ದೊಡ್ಡಮನಿ ಗಸ್ತು ತಿರುಗುವಾಗ ಗಮನಿಸಿದ್ದಾರೆ. ಈ ವೇಳೆ ಸತ್ತ ಕೋಣದ ಬಳಿ ಹುಲಿ ಹೆಜ್ಜೆ ಪತ್ತೆಯಾಗಿತ್ತು. ಈ ಕಾರಣ ಅಂದೇ ಅಲ್ಲಿ 15 ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಕ್ಯಾಮೆರಾ ಅಳವಡಿಸಿದ ಮರುದಿನವೇ ಸತ್ತ ಕೋಣದ ಬಳಿ ಹುಲಿ ಪತ್ತೆಯಾಗಿದೆ. ಈ ಭಾಗದಲ್ಲಿ ಹುಲಿ ಇರುವುದನ್ನು ಧೃಡಪಡಿಸಲಾಗಿದೆ ಎಂದು ಡಿಸಿಎಫ್ ಮಂಜುನಾಥ್ ನಾವಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಒಂದು ಹುಲಿಯು 20 ಕಿ.ಮೀ ವ್ಯಾಪ್ತಿಯಲ್ಲಿ ತನ್ನ ಪರದಿಯನ್ನು ನಿರ್ಮಿಸಿಕೊಂಡಿರುತ್ತದೆ. ಈ ಪರದಿಯಲ್ಲಿ ಆ ಹುಲಿಯನ್ನು ಹೊರತಾಗಿ ಬೇರೆ ಹುಲಿಗಳು ಈ ಪರದಿ ಪ್ರದೇಶಕ್ಕೆ ಬರುವುದಿಲ್ಲ. ಈಗಾಗಲೇ ಕಾಳಿ ಹುಲಿ ರಕ್ಷಿತ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಹುಲಿಗಳು ತನ್ನ ಪರದಿಯನ್ನು ಕೂಡ ಹೆಚ್ವಿಸಿಕೊಂಡಿದ್ದು, ಬೇಟೆಗಾಗಿ ಹಳ್ಳಿಯ ಕಡೆ ಬರತೊಡಗಿದೆ. ಹುಲಿಗಳು ಆಗಾಗ ರಾತ್ರಿ ವೇಳೆ ಹಳ್ಳಿಗಳ ಬಳಿ ಬರತೊಡಗಿದ್ದು, ತನ್ನ ಬೇಟೆ ಹಿಡಿದು ಮರಳಿ ಕಾಡಿಗೆ ತೆರಳುತ್ತಿವೆ.

    ಈವರೆಗೂ ಜನರ ಮೇಲೆ ದಾಳಿ ಮಾಡದೇ ಕಾಡು ಪ್ರಾಣಿಗಳ ಮೇಲೆ ಮಾತ್ರ ದಾಳಿ ನಡೆಸಿ ಭಕ್ಷಿಸುತ್ತಿವೆ. ಕಾಡಿನಲ್ಲಿ ಅದಕ್ಕೆ ಬೇಕಾದ ಆಹಾರ ಹೇರಳವಾಗಿದ್ದು, ಹೀಗಾಗಿ ಊರಿಗೆ ಇವು ಲಗ್ಗೆಯಿಟ್ಟು ದಾಳಿ ಮಾಡುವುದಿಲ್ಲ. ಈವರೆಗೂ ಇಂತಹ ಪ್ರಕರಣ ದಾಖಲಾಗಿಲ್ಲ ಹಾಗೂ ನಡೆದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಲೆಗೆ ಬಿದ್ದ ದೈತ್ಯ ರೇವ್ ಫಿಶ್ – ಮೀನುಗಾರರು ಫುಲ್ ಖುಷ್

    ಬಲೆಗೆ ಬಿದ್ದ ದೈತ್ಯ ರೇವ್ ಫಿಶ್ – ಮೀನುಗಾರರು ಫುಲ್ ಖುಷ್

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಮೀನುಗಾರರು ಬಂಪರ್ ಹೊಡೆದಿದ್ದಾರೆ. ಇಲ್ಲಿನ ಮಡಿಕಲ್ ಬೀಚ್ ನಲ್ಲಿ ಭಾರೀ ಗಾತ್ರದ ಮೀನುಗಳು ಬಲೆಗೆ ಬಿದ್ದಿದೆ.

    ಕಳೆದ ಒಂದು ವಾರದಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿತ್ತು. ಕಡಲು ಬುಡಮೇಲು ಆದಾಗ ಸಾಕಷ್ಟು ಮೀನುಗಳು ತೆರೆಯ ಜೊತೆ ದಡಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಬಲೆ ಬೀಸಿರುವ ಮೀನುಗಾರರಿಗೆ ದೊಡ್ಡ ದೊಡ್ಡ ರೇವ್ ಫಿಶ್ ಗಳು ಸಿಕ್ಕಿದೆ. ಒಂದೊಂದು ಮೀನುಗಳು 30-40 ಕಿಲೋ ಭಾರವಿದೆ.

    ಕಬ್ಬಿಣದ ಸಲಾಕೆಗಳನ್ನು ಉಪಯೋಗಿಸಿ ಮೀನನ್ನು ದಡಕ್ಕೆ ತರಲಾಗಿದೆ. ರೇವ್ ಫಿಶ್ ಗೆ ಸ್ಥಳೀಯವಾಗಿ ತೊರಕೆ ಅನ್ನುವ ಹೆಸರಿದೆ. ಚಪ್ಪಟೆಯಾಗಿರುವ ಈ ಮೀನುಗಳಿಗೆ ಬಾಲವಿರುತ್ತದೆ. ಇವುಗಳು ಮೊಟ್ಟೆಯಿಡಲು ದಡದ ಕಡೆ ಬರುತ್ತದೆ. ಚೂಪಾದ ಮುಳ್ಳುಗಳನ್ನು ಹೊಂದಿರುವ ಈ ಮೀನು ಮನುಷ್ಯ ಅದರ ಮೇಲೆ ಕಾಲಿಟ್ಟರೆ ಕಾಲನ್ನು ತಿವಿಯುತ್ತದೆ. ಹೀಗಾಗಿ ಇದನ್ನು ಡೇಂಜರ್ ಫಿಶ್ ಅಂತ ಮೀನುಗಾರರು ಕರೆಯುತ್ತಾರೆ.

    ಮೊದಲ ಬಾರಿಗೆ ನೋಡುವವರಿಗೆ ಪ್ರಾಣಿಯಂತೆ ಕಾಣುವ ಈ ಮೀನು ಅಚ್ಚರಿ ತರುತ್ತದೆ. ಮಳೆಗಾಲ ಆರಂಭದಲ್ಲಿ ಈ ಮೀನುಗಳು ದಡದತ್ತ ಬರುತ್ತದೆ ಎಂದು ಮೀನುಗಾರರು ಹೇಳುತ್ತಾರೆ. ಮೀನಿನಲ್ಲಿರುವ ಮುಳ್ಳು ವಿಷಕಾರಿ. ಅದರಲ್ಲಿ ನಂಜಿನ ಅಂಶ ಬಹಳ ಇರುತ್ತದೆ. ಆ ಮುಳ್ಳು ಚುಚ್ಚಿದರೆ ಬಹಳ ರಕ್ತಸ್ರಾವ ಆಗುತ್ತದೆ. 24 ಗಂಟೆಗಳ ಕಾಲ ಅದರ ಉರಿ ಇರುತ್ತದೆ ಎಂದು ಹೇಳುತ್ತಾರೆ.

  • ಬಲೆ ಹಾಕಿದ್ದು ಮೀನಿಗಾಗಿ, ಸೆರೆ ಸಿಕ್ಕಿದ್ದು 10 ಕೆಜಿ ತೂಕದ ಹೆಬ್ಬಾವು

    ಬಲೆ ಹಾಕಿದ್ದು ಮೀನಿಗಾಗಿ, ಸೆರೆ ಸಿಕ್ಕಿದ್ದು 10 ಕೆಜಿ ತೂಕದ ಹೆಬ್ಬಾವು

    ಶಿವಮೊಗ್ಗ: ಮೀನಿಗಾಗಿ ಬಲೆ ಹಾಕಿದ್ದು, ಆದರೆ ಮೀನಿನ ಬದಲಾಗಿ ಬಲೆಗೆ ಹೆಬ್ಬಾವು ಬಿದ್ದಿರುವ ಘಟನೆ ಜಿಲ್ಲೆಯ ಆಲ್ಕೊಳ ಬಡಾವಣೆಯ ಕೆರೆಯಲ್ಲಿ ನಡೆದಿದೆ.

    ಬಡಾವಣೆಯ ಕೆರೆಯಲ್ಲಿ ಮೀನಿಗಾಗಿ ಬಲೆ ಹಾಕಲಾಗಿತ್ತು. ಆದರೆ ಸುಮಾರು ಆರು ಅಡಿ ಉದ್ದದ ಹೆಬ್ಬಾವೊಂದು ಮೀನಿಗಾಗಿ ಹಾಕಲಾಗಿದ್ದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಬಲೆಯಲ್ಲಿ ಮೀನುಗಳ ಜೊತೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.

    ಸುಮಾರು 6 ಅಡಿ ಉದ್ದದ ಸುಮಾರು 10 ಕೆಜಿ ತೂಗುವ ಈ ಹೆಬ್ಬಾವು ಸ್ಥಳೀಯರಲ್ಲಿ ಭಯ ಮೂಡಿಸಿತ್ತು. ನಂತರ ಸ್ಥಳೀಯರು ಶಿವಮೊಗ್ಗದ ಉರಗ ಪ್ರೇಮಿ ಸ್ನೇಕ್ ಕಿರಣ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕಿರಣ್ ಸ್ಥಳಕ್ಕೆ ಬಂದು ಹೆಬ್ಬಾವನ್ನು ರಕ್ಷಿಸಿದ್ದಾರೆ. ಅಲ್ಲದೇ ಸಿಕ್ಕಿರುವ ಹೆಬ್ಬಾವನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

  • ಕುಡಿದ ಮತ್ತಿನಲ್ಲಿ ಚಿರತೆ ಬೋನಿನಲ್ಲಿ ಸೆರೆಯಾದ!

    ಕುಡಿದ ಮತ್ತಿನಲ್ಲಿ ಚಿರತೆ ಬೋನಿನಲ್ಲಿ ಸೆರೆಯಾದ!

    ಗಾಂಧಿನಗರ: ಗುಜರಾತಿನ ಗಿರ್ ಅರಣ್ಯದಲ್ಲಿ ಚಿರತೆಯನ್ನು ಹಿಡಿಯಲು ಇಟ್ಟಿದ್ದ ಬೋನಿಗೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಒಳಗೆ ಸೆರೆಯಾಗಿರುವ ಫೋಟೋ ಈಗ ಸಾಮಾಜಿಕ ಜಾತಾಣದಲ್ಲಿ ವೈರಲ್ ಆಗಿದೆ.

    ಗಿರ್ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಬೋನಿನೊಳಗೆ ಸೆರೆಯಾಗಿ ಕೆಲವು ಗಂಟೆಗಳು ಕಳೆದರೂ ಆ ವ್ಯಕ್ತಿಗೆ ಸಹಾಯ ಮಾಡಲು ಯಾರೊಬ್ಬರು ಮುಂದಾಗಲಿಲ್ಲ.

    ವ್ಯಕ್ತಿಯು ನನ್ನನ್ನು ಹೊರಗೆ ಬಿಡಿ, ಹಸಿವಾಗುತ್ತಿದೆ, ಕುಡಿಯಲು ನೀರು ಕೊಡಿ ಎಂದು ಬೇಡಿಕೊಂಡರೂ ಸ್ಥಳಿಯರು ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು ಎಂದು ವರದಿಯಾಗಿದೆ.

    ಸ್ವಯಂಚಾಲಿತ ತಂತ್ರಜ್ಞಾನವನ್ನು ಹೊಂದಿರುವ ಈ ಬೋನ್ ಒಳಗಡೆ ಯಾರೆ ಪ್ರವೇಶಿಸಿದರೂ ತಕ್ಷಣ ಲಾಕ್ ಆಗುತ್ತದೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ಅಧಿಕಾರಿಗಳು ಸ್ಥಳಕ್ಕೆ  ಬಂದು  ಬೋನಿನ ಲಾಕ್ ತೆಗೆದಿದ್ದು, ಬಳಿಕ ವೈಕ್ತಿ  ಹೊರಗೆ  ಬಂದಿದ್ದಾನೆ.