Tag: transport department

  • ಗಮನಿಸಿ, ದಾಖಲೆ ಇದ್ರೆ ಮಾತ್ರ ಇನ್ನು ಮುಂದೆ ಈ ದ್ವಿಚಕ್ರ ವಾಹನಗಳು ನೋಂದಣಿ ಆಗುತ್ತೆ!

    ಗಮನಿಸಿ, ದಾಖಲೆ ಇದ್ರೆ ಮಾತ್ರ ಇನ್ನು ಮುಂದೆ ಈ ದ್ವಿಚಕ್ರ ವಾಹನಗಳು ನೋಂದಣಿ ಆಗುತ್ತೆ!

    ಬೆಂಗಳೂರು: 100 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ನಿಷೇಧ ಹೇರಿರುವ ಸಾರಿಗೆ ಇಲಾಖೆ ಈಗ, ಈ ವಾಹನಗಳ ಪಟ್ಟಿಯನ್ನು ಪಟ್ಟಿಯನ್ನು ಬಿಡುಗಡೆ ಮಾಡಿ ನೋಂದಣಿಗೆ ಸಂಬಂಧಿಸಿದಂತೆ ಸೂಚನೆಗಳನ್ನು ಪ್ರಕಟಿಸಿದೆ.

    ಈ ವಾಹನಗಳನ್ನು ನೋಂದಣಿ ಮಾಡಿಸಬೇಕಾದರೆ ಒಂದು ಸೀಟಿಗೆ ಬದಲಾಯಿಸಿಕೊಂಡು, ಬೈಕಿನ ಆಸನ ಸಾಮರ್ಥ್ಯ ಒಂದು ಎಂಬುದಾಗಿ ನಮೂದಿಸಿದ ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಮಾತ್ರ ಈ ವಾಹನವನ್ನು ನೋಂದಾಯಿಸಲಾಗುವುದು ಎಂದು ಸಾರಿಗೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.

    100 ಸಿಸಿ ಕಡಿಮೆ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳು: ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್(87.8 ಸಿಸಿ), ಟಿವಿಎಸ್ ಸ್ಪೋಟ್ರ್ಸ್ (99.77ಸಿಸಿ), ಹೀರೋ ಎಸ್‍ಎಫ್ ಡಿಲಕ್ಸ್ (97.2 ಸಿಸಿ), ಹೀರೋ ಸ್ಪ್ಲೆಂಡರ್ ಪ್ಲಸ್ (97.2 ಸಿಸಿ), ಟಿವಿಎಕ್ಸ್ ಎಕ್ಸ್‍ಎಲ್ 100 (99.7 ಸಿಸಿ), ಹೀರೋ ಸ್ಪ್ಲೆಂಡರ್ ಪ್ರೋ (97.2 ಸಿಸಿ), ಬಜಾಜ್ ಸಿಟಿ 100 (99.27ಸಿಸಿ), ಹೀರೋ ಎಸ್‍ಎಫ್ ಡಿಲಕ್ಸ್ ಎಕೋ (97ಸಿಸಿ), ಹೀರೋ ಪ್ಯಾಷನ್ ಪ್ರೋ ಐ3ಎಸ್ (97.2 ಸಿಸಿ).

    ಅಪಘಾತದಿಂದಾಗಿ ಹಿಂಬದಿ ಸವಾರರು ಮೃತಪಡುವುದನ್ನು ತಡೆಯುವ ನಿಟ್ಟಿನಲ್ಲಿ ಹೈಕೋರ್ಟ್ ಆದೇಶದಂತೆ ಕರ್ನಾಟಕ ಸರ್ಕಾರ ಮೋಟಾರು ವಾಹನ ಕಾಯ್ದೆಯಲ್ಲಿ ಈ ನಿಯಮವನ್ನು ರಾಜ್ಯಾದ್ಯಂತ ಜಾರಿಗೆ ತರಲು ತೀರ್ಮಾಸಿದೆ. ಈ ಕುರಿತು ಎಲ್ಲ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ರವಾನಿಸಲಾಗಿದೆ. ಮೋಟಾರು ವಾಹನ ಕಾಯ್ದೆಯ ನಿಯಮಗಳಲ್ಲಿ 100 ಸಿಸಿ ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಬೈಕ್‍ಗಳಲ್ಲಿ ಹಿಂಬದಿ ಸಾವರರು ಪ್ರಯಾಣ ಮಾಡಲು ಸೂಕ್ತವಲ್ಲ ಎಂದು ತಿಳಿಸಲಾಗಿದೆ.

  • ಯಶವಂತಪುರದಿಂದ ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ 6 ನೂತನ ಬಸ್‍ಗಳು

    ಯಶವಂತಪುರದಿಂದ ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ 6 ನೂತನ ಬಸ್‍ಗಳು

    ಬೆಂಗಳೂರು: ಗ್ರಾಮೀಣ ಭಾಗದ ಕಾರ್ಮಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಇಲಾಖೆ 6 ನೂತನ ಬಸ್‍ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೈಗಾರಿಕ ಪ್ರದೇಶದಲ್ಲಿ ನೂತನ ಬಸ್‍ಗಳಿಗೆ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಹಾಗೂ ಸಂಸದ ವೀರಪ್ಪ ಮೊಯ್ಲಿ ಚಾಲನೆ ನೀಡಿದರು. ಇನ್ನೂ ಗ್ರಾಮೀಣ ಭಾಗದ ಸಾವಿರಾರು ಕಾರ್ಮಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಇಲ್ಲಿಯವರೆಗೂ ಖಾಸಗಿ ಬಸ್ ಮೂಲಕ ಸಂಚಾರ ಮಾಡುತ್ತಿದ್ದರು. ಹೀಗಾಗಿ ಸಾರಿಗೆ ಇಲಾಖೆ ವತಿಯಿಂದ ಇಂದು 6 ನೂತನ ಬಿಎಂಟಿಸಿ ಬಸ್‍ಗಳ ಸೇವೆ ಕಲ್ಪಿಸಲಾಗಿದೆ. ಈ ಬಸ್‍ಗಳು ಪ್ರತಿನಿತ್ಯ ಯಶವಂತಪುರದಿಂದ ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ 6 ಸುತ್ತುವಳಿಗಳನ್ನ ಅರ್ಧ ಗಂಟೆಯ ಅಂತರದಲ್ಲಿ ಕಾರ್ಯಾಚರಣೆ ಮಾಡುತ್ತವೆ.

    ಉದ್ಘಾಟನೆಯ ನಂತರ ಮಾತನಾಡಿದ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ, ಪ್ರಮುಖವಾಗಿ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ನೆಲಮಂಗಲದ ಪಟ್ಟಣಕ್ಕೆ ಹೈಟೆಕ್ ಬಸ್ ಕೋರ್ಟ್ ನಿರ್ಮಿಸಲಾಗುವುದು ಎಂದರು. ಬಸ್ ನಿಲ್ದಾಣದ ಜೊತೆಗೆ ಶಾಪಿಂಗ್ ಮಾಲ್, ಕಚೇರಿಗಳು, ಅಂಗಡಿಗಳನ್ನ ಒಳಗೊಂಡಿರುವಂತೆ ಕರ್ನಾಟಕ ರಾಜ್ಯದಲ್ಲೇ ವಿನೂತನ ಬಸ್ ನಿಲ್ದಾಣವನ್ನ ನಿರ್ಮಿಸಲಾಗುವುದು ಎಂದರು.

    ಬಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಜನರಿಲ್ಲದ ಕಾರಣ ಸ್ಥಳೀಯ ಕಾಂಗ್ರೆಸ್ ಮುಖಂಡರು ಕಾರ್ಖಾನೆಗಳಿಂದ ನೂರಾರು ಮಹಿಳಾ ಕಾರ್ಮಿಕರನ್ನ ಕರೆತಂದ ಪ್ರಸಂಗವೂ ಕೂಡ ನಡೆದು ಮುಜುಗರಕ್ಕೀಡಾಯಿತು.