ಬೆಂಗಳೂರು: ಟಿ.ಆರ್ ಸ್ವಾಮಿಗೆ ನೀಡಿದ್ದ ಕೆಐಎಡಿಬಿ ಮುಖ್ಯ ಎಂಜಿನಿಯರ್ ಹುದ್ದೆಯನ್ನು ಸಿಎಂ ಯಡಿಯೂರಪ್ಪ ಅವರ ಸರ್ಕಾರ ವಾಪಸ್ ಪಡೆದಿದೆ.
ಟಿ.ಆರ್.ಸ್ವಾಮಿ ವಿರುದ್ಧ ಭ್ರಷ್ಟಚಾರ ಆರೋಪ ಕೇಳಿಬಂದಿದ್ದ ಕಾರಣ ಹಿಂದಿನ ಸರ್ಕಾರ ಅವರನ್ನು ಅಮಾನತು ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ರಚನೆ ಆದ ನಂತರದಲ್ಲಿ ಮತ್ತೆ ಟಿ.ಆರ್ ಸ್ವಾಮಿಗೆ ಕೆಐಎಡಿಬಿ ಮುಖ್ಯ ಎಂಜಿನಿಯರ್ ಹುದ್ದೆಯನ್ನು ನೀಡಲಾಗಿತ್ತು.
ಕಳೆದ ವರ್ಷ ಆಕ್ಟೋಬರ್ ನಲ್ಲಿ ಎಸಿಬಿ ದಾಳಿ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಟಿ.ಆರ್ ಸ್ವಾಮಿಯನ್ನು ಅಮಾನತು ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಟಿ.ಆರ್.ಸ್ವಾಮಿಯನ್ನು ಮತ್ತೆ ನೇಮಕ ಮಾಡಲಾಗಿತ್ತು.
ಈ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ರಾಜಕೀಯ ವಲಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಈ ಹುದ್ದೆಯನ್ನು ವಾಪಸ್ ಪಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬೆಂಗಳೂರು: ಕಡುಭ್ರಷ್ಟ ಟಿಆರ್ ಸ್ವಾಮಿ ಮನೆಯಿಂದ ಎಸೆಯಲ್ಪಟ್ಟ ಕೋಟಿ ಹಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, 14ನೇ ಫ್ಲೋರ್ ನಿಂದ ಎಸೆಯಲ್ಪಟ್ಟ 4 ಕೋಟಿ ರೂ. ಸ್ವಾಮಿಯದ್ದಲ್ಲ ಎಂಬುದಾಗಿ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಇದು ಹೆಚ್ಡಿಕೆ ಸಂಪುಟದ ಪ್ರಭಾವಿ ಸಚಿವರಿಗೆ ಸೇರಬೇಕಿದ್ದ ಹಣವಾಗಿದೆ. `ಆ’ ಪ್ರಭಾವಿ ಸಚಿವ ದೋಸ್ತಿ ಸರ್ಕಾರದ `ಎಟಿಎಂ ಮಿನಿಸ್ಟರ್’ ಎನ್ನಲಾಗಿದೆ. ಟಿ ಆರ್ ಸ್ವಾಮಿ `ಆ’ ಸಚಿವರಿಗೆ ಹಣ ಸಂದಾಯ ಮಾಡಲು ಕೂಡಿಟ್ಟಿರುವುದಾಗಿ ತಿಳಿದುಬಂದಿದೆ.
`ಈ ಹಣ ಸಚಿವರದ್ದು.. ನಮ್ ತಂಟೆಗೆ ಬಂದ್ರೆ ಹುಷಾರ್…’ ಎಂದು ಹೇಳಿ ಬೆದರಿಕೆ ಹಾಕುವ ಮೂಲಕ ಸಚಿವರ ಹೆಸರೇಳಿ ತನಿಖಾ ತಂಡವನ್ನು ಬೆದರಿಸಲು ಸ್ವಾಮಿ ಕುಟುಂಬದ ಯತ್ನಿಸಿದೆ. ನೀವು ಬೇಕಿದ್ರೆ ಹೇಳಿಕೆ ರೆಕಾರ್ಡ್ ಮಾಡಿ.. ಕೋರ್ಟ್ ನಲ್ಲಿ ಉಲ್ಟಾ ಹೊಡಿತೀನಿ ಎಂದು ಸ್ವಾಮಿ ಪತ್ನಿ ಹೇಳಿದ್ದಾರೆ. ನಾನು ಕೋರ್ಟ್ ನಲ್ಲಿ ಉಲ್ಟಾ ಹೊಡೆದ್ರೆ ಸಚಿವರು ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತಾರೆ. ಸುಮ್ನೆ ನಮ್ಮೆಜಮಾನ್ರನ್ನು ಸಿಲುಕಿಸಬೇಡಿ. ಸಚಿವರ ಹಣವನ್ನ ತಮ್ಮ ಬಳಿ ಇಟ್ಟುಕೊಂಡಿದ್ರು ಅಷ್ಟೆ. ಆ ಪ್ರಭಾವಿ ಸಚಿವರ ಹಣ ಇಟ್ಟುಕೊಂಡಿದ್ದಕ್ಕೆ ನಮ್ಮ ಯಜಮಾನ್ರಿಗೆ ಯಾಕೆ ಶಿಕ್ಷೆ ಅಂತ ಟಿ ಆರ್ ಸ್ವಾಮಿಯ ಧರ್ಮಪತ್ನಿ ಎಸಿಬಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.
ಎಸಿಬಿ ದಾಳಿ:
ಕಳೆದ ಮೇ ತಿಂಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕೆಐಎಡಿಬಿ ಚೀಫ್ ಎಂಜಿನಿಯರ್ ಟಿಆರ್ ಸ್ವಾಮಿ, ತನ್ನ ಮನೆಯಲ್ಲಿದ್ದ 4 ಕೋಟಿ ಹಣವನ್ನು ಸೂಟ್ ಕೇಸ್ ಗೆ ತುಂಬಿ ಬಳಿಕ ಅದನ್ನು ಅಪಾರ್ಟ್ ಮೆಂಟ್ ನಿಂದ ಬಾಲ್ಕನಿಯಿಂದ ಹೊರಕ್ಕೆ ಎಸೆದಿದ್ದರು. ಕಂತೆ ಕಂತೆ ನೋಟುಗಳಲ್ಲಿ ಅಪಾರ್ಟ್ ಮೆಂಟ್ ಗಾರ್ಡನ್ ನಲ್ಲಿ ಬಿದ್ದಿರುವುದನ್ನು ಕಂಡ ಎಸಿಬಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಣವನ್ನು ಆಯ್ದುಕೊಂಡು ಬ್ಯಾಗಿಗೆ ತುಂಬಿದ್ದರು. ಬಳಿಕ ಹಣ ಸಮೇತ ಅಪಾರ್ಟ್ ಮೆಂಟ್ ನ 14ನೇ ಮಹಡಿಯಲ್ಲಿದ್ದ ಸ್ವಾಮಿ ಮನೆಗೆ ತೆರಳಿದ್ದರು.
ಅಧಿಕಾರಿಗಳು ಮನೆಯ ಬಾಗಿಲು ತೆಗೆಯಲು ಹೇಳಿದರೂ ಸುಮಾರು 1 ಗಂಟೆ ಕಾಲ ಬಾಗಿಲು ತೆರೆಯದೇ ಹೈಡ್ರಾಮ ನಡೆಸಿದ್ದರು. ಬಳಿಕ ಹೊರಕ್ಕೆ ಬಂದಿದ್ದು ಅಧಿಕಾರಿಗಳು ತಂದಿದ್ದ ಹಣ ತನ್ನದಲ್ಲ ಎಂದು ವಾದ ನಡೆಸಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ತಮ್ಮದೇ ವರಸೆಯಲ್ಲಿ ಪ್ರಶ್ನೆ ಮಾಡಿದ ಬಳಿಕ ಸ್ವಾಮಿ ಸುಮ್ಮನಾಗಿದ್ದರು ಎಂದು ತಿಳಿದು ಬಂದಿತ್ತು. ಈ ಹಂತದಲ್ಲಿ ಮನೆ ಪ್ರವೇಶಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮನೆಯ ಯಾವ ಮೂಲೆ ಹುಡುಕಿದರೂ ಸಿಗುತ್ತಿದ್ದ ಕಂತೆ ಕಂತೆ ಹಣ ಕಂಡು ದಂಗಾಗಿದ್ದರು. ಮನೆಯಲ್ಲಿದ್ದ ಟಿವಿ ಕೆಳ ಭಾಗ, ಆಡುಗೆ ಮನೆ, ಕ್ಯಾಬಿನ್, ಹಳೆಯ ಬ್ಯಾಗ್, ಸೋಫಾ ಕೆಳಗೆ, ಬಾತ್ ರೂಂ ಬಕೆಟ್ ಗಳಲ್ಲಿ ಹಣ ತುಂಬಿಡಲಾಗಿತ್ತು. ಇದರೊಂದಿಗೆ ಬೆಂಗಳೂರು, ಮೈಸೂರಿನಲ್ಲಿ ಸೈಟ್ಗಳು, ಮಕ್ಕಳ ಹೆಸರಲ್ಲಿ ದುಬಾರಿ ಬೆಲೆಯ ಕಾರುಗಳ ಖರೀದಿ ಮಾಡಿರುವ ಕುರಿತ ದಾಖಲೆಗಳು ಪತ್ತೆಯಾಗಿತ್ತು.
ಮನೆಯಲ್ಲಿ ಏನೇನು ಸಿಕ್ಕಿತ್ತು?
ಸ್ವಾಮಿ.ಟಿ.ಆರ್: ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿತ್ತು.
ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆಯೇ ಭ್ರಷ್ಟ ಅಧಿಕಾರಿಗಳ ಭೇಟೆಗೆ ಇಳಿದಿದ್ದ ಎಸಿಬಿ ಅಧಿಕಾರಿಗಳು ಕೆಐಎಡಿಬಿ ಚೀಫ್ ಎಂಜಿನಿಯರ್ ಟಿಆರ್ ಸ್ವಾಮಿ ಮನೆ ಮೇಳೆ ದಾಳಿ ನಡೆಸಿದ ಸ್ಥಳದಲ್ಲಿ ಹೈ ಡ್ರಾಮ ನಡೆದಿದೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 7 ಗಂಟೆ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಲು ಆಗಮಿಸಿದ್ದಾರೆ ಎಂಬ ಮಾಹಿತಿ ಲಭಿಸಿದ ಕೂಡಲೇ ಮನೆಯಲ್ಲಿದ್ದ 3 ಕೋಟಿ ರೂ. ಹಣವನ್ನು ಸೂಟ್ ಕೇಸ್ಗೆ ತುಂಬಿದ ಸ್ವಾಮಿ ಅರ್ಪಾಟ್ ಮೆಂಟ್ ಬಾಲ್ಕನಿಯಿಂದ ಹೊರಕ್ಕೆ ಎಸೆದಿದ್ದಾರೆ. ಈ ವೇಳೆ ಕಂತೆ ಕಂತೆ ನೋಟು ಅಪಾಟ್ ಮೆಂಟ್ ಗಾರ್ಡನ್ ನಲ್ಲಿ ಎಸೆದಿದ್ದು, ಇದನ್ನು ಕಂಡ ಎಸಿಬಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಣವನ್ನು ಆಯ್ದುಕೊಂಡು ಬ್ಯಾಗಿಗೆ ತುಂಬಿದ್ದಾರೆ.
ಬಳಿಕ ಹಣದ ಸಮೇತ ಅರ್ಪಾಟ್ ಮೆಂಟ್ ನ 14ನೇ ಮಹಡಿಯಲ್ಲಿದ್ದ ಸ್ವಾಮಿ ಮನೆಗೆ ತೆರಳಿದ್ದಾರೆ. ಅಧಿಕಾರಿಗಳು ಮನೆಯ ಬಾಗಿಲು ತೆಗೆಯಲು ಹೇಳಿದರೂ ಸುಮಾರು 1 ಗಂಟೆ ಕಾಲ ಬಾಗಿಲು ತೆರೆಯದೇ ಹೈಡ್ರಾಮ ನಡೆಸಿದ್ದಾರೆ. ಬಳಿಕ ಹೊರಕ್ಕೆ ಬಂದಿದ್ದು ಅಧಿಕಾರಿಗಳು ತಂದಿದ್ದ ಹಣ ತನ್ನದಲ್ಲ ಎಂದು ವಾದ ನಡೆಸಿದ್ದಾರೆ. ಈ ವೇಳೆ ಎಸಿಬಿ ಅಧಿಕಾರಿಗಳು ತಮ್ಮದೇ ವರಸೆಯಲ್ಲಿ ಪ್ರಶ್ನೆ ಮಾಡಿದ ಬಳಿಕ ಸ್ವಾಮಿ ಸುಮ್ಮನಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಂತದಲ್ಲಿ ಮನೆ ಪ್ರವೇಶಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮನೆಯ ಯಾವ ಮೂಲೆ ಹುಡುಕಿದರೂ ಸಿಗುತ್ತಿದ್ದ ಕಂತೆ ಕಂತೆ ಹಣ ಕಂಡು ದಂಗಾಗಿದ್ದಾರೆ. ಮನೆಯಲ್ಲಿದ್ದ ಟಿವಿ ಕೆಳ ಭಾಗ, ಆಡುಗೆ ಮನೆ, ಕ್ಯಾಬಿನ್, ಹಳೆಯ ಬ್ಯಾಗ್, ಸೋಫಾ ಕೆಳಗೆ, ಬಾತ್ ರೂಂ ಬಕೆಟ್ ಗಳಲ್ಲಿ ಹಣ ತುಂಬಿಡಲಾಗಿತ್ತು. ಇದರೊಂದಿಗೆ ಬೆಂಗಳೂರು, ಮೈಸೂರಿನಲ್ಲಿ ಸೈಟ್ಗಳು, ಮಕ್ಕಳ ಹೆಸರಲ್ಲಿ ದುಬಾರಿ ಬೆಲೆಯ ಕಾರುಗಳ ಖರೀದಿ ಮಾಡಿರುವ ಕುರಿತ ದಾಖಲೆಗಳು ಪತ್ತೆಯಾಗಿದೆ.
ಅಪಾರ್ಟ್ ಮೆಂಟ್ನಲ್ಲಿ ಟಿಆರ್ ಸ್ವಾಮಿ ಅವರೊಂದಿಗೆ ವಾಸವಿದ್ದ ಸಹೋದರಿ ಕೂಡ ಆಟೋರಿಕ್ಷಾದಲ್ಲಿ 30 ಲಕ್ಷ ರೂ. ಸಾಗಿರುವ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ಹಣವನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸದ್ಯ ಎಸಿಬಿ ಅಧಿಕಾರಿಗಳ ಪಂಚನಾಮೆ ಪೂರ್ಣಗೊಂಡಿದ್ದು, ದೊರೆತ ಹಣ ಹಾಗೂ ಆಸ್ತಿ ದಾಖಲೆಗಳ ಬಗ್ಗೆ ಟಿಆರ್ ಸ್ವಾಮಿ ಅವರ ಹೇಳಿಕೆ ಕೂಡ ಪಡೆದಿದ್ದಾರೆ. ಎಸಿಬಿ ಅಧಿಕಾರಿಗಳ ಪರಿಶೀಲನೆ ಸಂಪೂರ್ಣವಾಗಿದ್ದು, ಕೆಲ ತಾಂತ್ರಿಕ ಕೆಲಸಗಳು ಮಾತ್ರ ನಡೆಯಬೇಕಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಮನೆಯಲ್ಲಿ ಏನೇನು ಸಿಕ್ಕಿದೆ?
ಸ್ವಾಮಿ.ಟಿ.ಆರ್: ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿದೆ.
ಬೆಂಗಳೂರು: ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆಸಿ ಎರಡು ಭಾರೀ ತಿಮಿಂಗಿಲಗಳಿಗೆ ಗಾಳ ಹಾಕಿದೆ. ಮಲ್ಲೇಶ್ವರಂನ ಮಂತ್ರಿ ಗ್ರೀನ್ಸ್ ಅಪಾರ್ಟ್ಮೆಂಟ್ನಲ್ಲಿರುವ ಕೆಐಎಡಿಬಿಯ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ ಹಾಗೂ ಬಿಡಿಎ ಅಧೀಕ್ಷಕ ಅಭಿಯಂತರ ಎನ್.ಜಿ.ಗೌಡಯ್ಯ ಅವರ ಬಸವೇಶ್ವರ ನಗರ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿದೆ.
ಎಸಿಬಿ ಅಧಿಕಾರಿಗಳು ರೇಡ್ ಮಾಡುವುದನ್ನು ಮೊದಲೇ ತಿಳಿದ ಟಿ ಆರ್ ಸ್ವಾಮಿ ಬಾಗಿಲು ತೆಗೆಯದೇ ಡ್ರಾಮಾ ಮಾಡಿದ್ರು. ಆದ್ರೂ ಪಟ್ಟು ಬಿಡದ ಎಸಿಬಿ ಅಧಿಕಾರಿಗಳು ಬಲವಂತವಾಗಿ ಬಾಗಿಲು ತೆಗೆಸಿ ಪರಿಶೀಲನೆ ನಡೆಸಿದಾಗ ಕೋಟಿ ಕೋಟಿ ದುಡ್ಡು ಸಿಕ್ಕಿದೆ.
ಸ್ವಾಮಿ ಅಪಾರ್ಟ್ಮೆಂಟ್ನಲ್ಲೇ ಇದ್ದ ಸಹೋದರಿ ಆಟೋ ರಿಕ್ಷಾದಲ್ಲಿ 30 ಲಕ್ಷ ರೂಪಾಯಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಎಸ್.ಜಿ. ಗೌಡಯ್ಯ ಮನೆ ಹಾಗೂ ಕಚೇರಿ ಮೇಲೂ ದಾಳಿ ನಡೆಸಿದಾಗ ಕೋಟ್ಯಾಂತರ ರೂಪಾಯಿ ನಗದು ಹಾಗೂ ಅಕ್ರಮ ಆಸ್ತಿ ಕೂಡ ಸಿಕ್ಕಿದೆ.
ಯಾರ ಮನೆಯಲ್ಲಿ ಏನು ಸಿಕ್ಕಿದೆ? ಎನ್.ಜಿ ಗೌಡಯ್ಯ : ತನ್ನ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 2 ಮನೆ, 8 ನಿವೇಶನಗಳು, 14 ಅರ್ಪಾಟ್ಮೆಂಟ್, ಚಿನ್ನ 3 ಕೆಜಿ, 10 ಕೆಜಿ ಬೆಳ್ಳಿ, 3 ಕಾರು, 3 ದ್ವಿಚಕ್ರ ವಾಹನಗಳು, 1.5 ಕೋಟಿ ರೂ. ಹಾಗೂ ವಿವಿಧ ಬ್ಯಾಂಕಗಳಲ್ಲಿ ಠೇವಣಿಗಳು, ಮಾವನವರ ಮನೆಯಲ್ಲಿ 4.5 ಕೆಜಿ ಚಿನ್ನಾಭರಣ ಸಿಕ್ಕಿದೆ.
ಸ್ವಾಮಿ.ಟಿ.ಆರ್: ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿದೆ.