Tag: toofan

  • ಚಂಡಮಾರುತ ಆವಾಂತರ: ನಟಿ ನಮಿತಾ ಮನೆಗೆ ನುಗ್ಗಿದ ನೀರು

    ಚಂಡಮಾರುತ ಆವಾಂತರ: ನಟಿ ನಮಿತಾ ಮನೆಗೆ ನುಗ್ಗಿದ ನೀರು

    ಮಿಚಾಂಗ್ (Michang) ಚಂಡಮಾರುತದ (Toofan) ಹಾವಳಿ ಚೆನ್ನೈ (Chennai) ಜನರನ್ನು ನಿದ್ದೆಗೆಡಿಸಿದೆ. ಸಿಕ್ಕ ಸಿಕ್ಕ ಜಾಗಗಳಿಗೆ ನೀರು ನುಗ್ಗಿ ಆವಾಂತರವನ್ನೇ ಸೃಷ್ಟಿ ಮಾಡಿದೆ. ಭಾರೀ ಮಳೆಯಿಂದ ಮನೆಗಳು ಜಲಾವೃತಗೊಂಡಿದ್ದು, ನಟಿ ನಮಿತಾ (Namitha) ಮನೆಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ. ಚೆನ್ನೈ ಸಮೀಪದಲ್ಲಿರುವ ಪಲ್ಲಿಕರಣ ನಾರಾಯಣಪುರಂ ಕೆರೆ ಒಡೆದು, ನಮಿತಾ ಮನೆಗೆ ನೀರು ನುಗ್ಗಿದ್ದು, ಮನೆಯಲ್ಲಿ ಆರು ಅಡಿಗಳಷ್ಟು ನೀರು ತುಂಬಿದೆ ಎಂದು ಹೇಳಿದ್ದಾರೆ ನಮಿತಾ.

    ನಮಿತಾ ವಾಸವಿದ್ದ ಪಳ್ಳಿಕರಣ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ನಟಿ ನಮಿತಾ ವಾಸವಿದ್ದಾರೆ. ಇಬ್ಬರು ಮಕ್ಕಳು ಮತ್ತು ಪತಿಯೊಂದಿಗೆ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕೂಡಲೇ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿ, ಬಚಾವ್ ಆಗಿದ್ದಾರೆ ನಟಿ.

    ಆಮೀರ್, ವಿಶಾಲ್ ರಕ್ಷಣೆ

    ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ಕಾಲಿವುಡ್ ಹೀರೋ ವಿಷ್ಣು ವಿಶಾಲ್ ಮನೆಯಿರುವ ಪ್ರದೇಶ ಜಲಾವೃತ್ತಗೊಂಡಿದೆ. ಈ ಪರಿಣಾಮ, ಮನೆಯಿಂದ ಯಾರೂ ಹೊರಬರಲಾರದ ಸ್ಥಿತಿಯಲ್ಲಿದ್ದಾರೆ. ಇದೇ ವೇಳೆ, ಬಾಲಿವುಡ್ ನಟ ಆಮೀರ್ ಖಾನ್ ಅವರು ನಟ ವಿಷ್ಣು (Vishnu Vishal) ಮನೆಯಲ್ಲೇ ಲಾಕ್ ಆಗಿದ್ದಾರೆ.

    ಚೆನ್ನೈನ ಕರಪಾಕ್ಕಂ ಪ್ರದೇಶದಲ್ಲಿರುವ ತಮಿಳು ನಟ ವಿಷ್ಣು ವಿಶಾಲ್ ಮನೆಗೆ ಆಮೀರ್ ಖಾನ್ ಭೇಟಿ ನೀಡಿದ್ದರು. ಪ್ರವಾಹ ಪರಿಸ್ಥಿತಿಯಿಂದಾಗಿ ವಿಷ್ಣು ವಿಶಾಲ್ ಅವರ ನಿವಾಸದಲ್ಲೇ ಆಮೀರ್ ಖಾನ್ ಸಿಲುಕಿದ್ದರು. ಈ ಸಂದರ್ಭದಲ್ಲಿ ನೀರಿನ ಮಟ್ಟ ತೀವ್ರವಾಗಿ ಏರುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೆಟ್‌ವರ್ಕ್, ವೈಫೈ ಯಾವುದೂ ಇಲ್ಲವಾಗಿದೆ. ಇದೇ ಸಮಯದಲ್ಲಿ ವಿಷ್ಣು ವಿಶಾಲ್ ಮನೆಯೊಳಗೆ ನೀರು ನುಗ್ಗಿದ್ರಿಂದ ಸಹಾಯಕ್ಕಾಗಿ ನಟ ವಿಷ್ಣು ವಿಶಾಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮೂಲಕ ಮನವಿ ಮಾಡಿದ್ದರು.

    ಕೂಡಲೆ ಅಗ್ನಿಶಾಮಕ ದಳ ನಟ ವಿಷ್ಣು ವಿಶಾಲ್ ಮತ್ತು ಆಮೀರ್ ಖಾನ್ (Aamir Khan) ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದಾರೆ. ಮಿಚಾಂಗ್ ಚಂಡಮಾರುತದಿಂದ ನನ್ನ ಮನೆಯೊಳಗೆ ನೀರು ನುಗ್ಗಿದೆ ಅವಾಂತರ ಆಗಿದೆ. ಕರಪಾಕ್ಕಂನಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗುತ್ತಿದೆ. ಸಹಾಯಕ್ಕಾಗಿ ಕರೆ ಮಾಡಿದ್ದೇನೆ. ವಿದ್ಯುತ್ ಸಂಪರ್ಕ ಇಲ್ಲ. ವೈಪೈ, ಫೋನ್ ಸಿಗ್ನಲ್ ಇಲ್ಲ. ಇಲ್ಲಿರುವವರ ಸಹಾಯಕ್ಕೆ ಯಾರಾದರೂ ಧಾವಿಸಲಿ ಎಂದು ಬಯಸುತ್ತೇನೆ ಎಂದು ವಿಷ್ಣು ವಿಶಾಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

     

    ಈ ವಿಷಯ ಅರಿತ, ಅಗ್ನಿಶಾಮಕ ದಳ ವಿಷ್ಣು ಮನೆಗೆ ಧಾವಿಸಿ, ನಟ ವಿಷ್ಣು ಮತ್ತು ಆಮೀರ್ ಖಾನ್ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ತಂಡಕ್ಕೆ ವಿಷ್ಣು ಮತ್ತು ಆಮೀರ್‌ ಖಾನ್‌ ಧನ್ಯವಾದ ತಿಳಿಸಿದ್ದಾರೆ.

  • ಪಾತ್ರಕ್ಕಾಗಿ 69 ಕೆಜಿಯಿಂದ, 85 ಕೆಜಿಗೆ ತೂಕ ಏರಿಸಿಕೊಂಡ ಫರ್ಹಾನ್ ಅಖ್ತರ್‌

    ಪಾತ್ರಕ್ಕಾಗಿ 69 ಕೆಜಿಯಿಂದ, 85 ಕೆಜಿಗೆ ತೂಕ ಏರಿಸಿಕೊಂಡ ಫರ್ಹಾನ್ ಅಖ್ತರ್‌

    ಮುಂಬೈ: ಸದಾ ಡಿಫರೆಂಟ್ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಬಾಲಿವುಡ್ ನಟ ಫರ್ಹಾನ್ ಅಖ್ತರ್‌, ತೂಫಾನ್ ಚಿತ್ರಕ್ಕಾಗಿ ತಮ್ಮ ದೇಹ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಧಡೂತಿ ದೇಹ ಹೊಂದಿದ್ದ ಫರ್ಹಾನ್ ಅಖ್ತರ್‌ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬಾಲಿವುಡ್‍ನಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಅಭಿನಯಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿಸಲು ಫರ್ಹಾನ್ ಅಖ್ತರ್‌, ತೂಫನ್ ಚಿತ್ರಕ್ಕಾಗಿ ತಮ್ಮ ದೇಹ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಫರ್ಹಾನ್ ಅಖ್ತರ್‌ ಬಾಕ್ಸರ್ ಅಜೀಜ್ ಅಲಿ ಖಾನ್ ಆಗಿ ಕಾಣಿಸಿಕೊಂಡಿದ್ದು, ಬಾಕ್ಸರ್ ಆಗುವುದಕ್ಕೂ ಮುನ್ನ ಪುಡಿ ರೌಡಿಯಾಗಿದ್ದವರು, ನಂತರ ಬಾಕ್ಸಿಂಗ್ ಕಲಿಯುತ್ತಾರೆ. ಈ ಮಧ್ಯೆ ಬಾಕ್ಸಿಂಗ್ ತೊರೆಯುವ ಸಂದರ್ಭ ಬರುತ್ತದೆ. ಆಗ ಬಾಕ್ಸಿಂಗ್ ಬಿಟ್ಟಾಗ ಅಜೀಜ್ ದಪ್ಪ ಆಗುತ್ತಾರೆ.

    ತೂಫಾನ್ ಚಿತ್ರದಲ್ಲಿ ಬರುವ ಇದೊಂದು ಸಣ್ಣ ಪಾತ್ರಕ್ಕೆ ಫರ್ಹಾನ್ 69.9 ಕೆಜಿ ದೇಹ ತೂಕವನ್ನು 85 ಕೆ.ಜಿಗೆ ಏರಿಸಿಕೊಂಡಿದ್ದಾರೆ. ಬಳಿಕ ತೂಕ ಇಳಿಸಿಕೊಂಡು ಮತ್ತೆ ಸಿಕ್ಸ್ ಪ್ಯಾಕ್ ಮಾಡಿದ್ದಾರೆ.

    ಸದ್ಯ ಸಿಕ್ಸ್ ಪ್ಯಾಕ್ ಜೊತೆಗೆ ತೂಕ ಏರಿಸಿಕೊಂಡಿರುವ ಫೋಟೋವನ್ನು ಫರ್ಹಾನ್ ಅಖ್ತರ್‌ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಜೀಜ್​​ ಅಲಿಯವರ ಪಾತ್ರಕ್ಕಾಗಿ ತೂಫಾನ್ ಚಿತ್ರದಲ್ಲಿ ಹಲವು ಆಕಾರ ಮತ್ತು ಶೇಪ್‍ಗಳು. 18 ತಿಂಗಳ ಶ್ರಮ, ಪ್ರತಿ ಬೆವರಿನ ಹನಿ, ನೋಯುತ್ತಿರುವ ಸ್ನಾಯುಗಳು ಮತ್ತು ತೂಕ ಏರಿಸಿಕೊಂಡಿದ್ದು, ಇಳಿಸಿಕೊಂಡಿರುವುದು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ತೂಫಾನ್ ಚಿತ್ರಕ್ಕೆ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಆ್ಯಕ್ಷನ್ ಕಟ್ ಹೇಳಿದ್ದು, ಜುಲೈ 16ರಂದು ಈ ಸಿನಿಮಾ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿತ್ತು. 2013 ರಲ್ಲಿ ಭಾಗ್ ಮಿಲ್ಖಾ ಭಾಗ್ ಸಿನಿಮಾದ ಮೂಲಕ ಬಾಲಿವುಡ್‍ಗೆ ಎಂಟ್ರಿಕೊಟ್ಟ ಫರ್ಹಾನ್ ಅಖ್ತರ್‌ ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಕಂಡಿದ್ದರು. ಇದನ್ನೂ ಓದಿ:1.31 ಲಕ್ಷ ಬೆಲೆ ವೈನ್- ಪ್ರಿಯಾಂಕಾಗೆ ಪತಿಯಿಂದ ವಿಶೇಷ ಗಿಫ್ಟ್

     

    View this post on Instagram

     

    A post shared by Farhan Akhtar (@faroutakhtar)

  • ಗೃಹಪ್ರವೇಶದಿಂದ ಹಿಂದಿರುಗ್ತಿದ್ದಾಗ ಲಾರಿ, ತೂಫಾನ್ ಮುಖಾಮುಖಿ ಡಿಕ್ಕಿ- 3 ಮಹಿಳೆಯರು ಸೇರಿ ಐವರ ದುರ್ಮರಣ

    ಗೃಹಪ್ರವೇಶದಿಂದ ಹಿಂದಿರುಗ್ತಿದ್ದಾಗ ಲಾರಿ, ತೂಫಾನ್ ಮುಖಾಮುಖಿ ಡಿಕ್ಕಿ- 3 ಮಹಿಳೆಯರು ಸೇರಿ ಐವರ ದುರ್ಮರಣ

    ಮಂಗಳೂರು: ಲಾರಿ ಹಾಗೂ ತೂಫಾನ್ ಜೀಪ್ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಸೇರಿ ಒಟ್ಟು ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 13 ಮಂದಿ ಗಾಯಗೊಂಡ ಘಟನೆ ಕರ್ನಾಟಕ ಗಡಿಭಾಗ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಉಪ್ಪಳದಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 66ರ ಉಪ್ಪಳ ಸಮೀಪದ ನಯಬಝಾರ್ ನಲ್ಲಿ ಇಂದು ಬೆಳಗ್ಗೆ 6 ಘಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೃತರನ್ನು ಬೀಫಾತಿಮಾ(65), ಅಸ್ಮಾ(30), ನಸೀಮಾ(38), ಮುಸ್ತಾಕ್(41), ಇಮ್ತಿಯಾಝ್(35)ಎಂದು ಗುರುತಿಸಲಾಗಿದ್ದು, ಇವರು ಮಂಗಳೂರಿನ ತಲಪಾಡಿ ಸಮೀಪದ ಕೆ.ಸಿ ರೋಡು ಅಜ್ಜಿನಡ್ಕ ನಿವಾಸಿಗಳು ಎನ್ನಲಾಗಿದೆ.

    ಭಾನುವಾರ ಕೇರಳದ ಪಾಲಕ್ಕಾಡ್ ನಲ್ಲಿ ಸಂಬಂಧಿಕರ ಗೃಹ ಪ್ರವೇಶಕ್ಕೆ ತೆರಳಿ ಇಂದು ಉಳ್ಳಾಲಕ್ಕೆ ಮರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಒಟ್ಟು ಜೀಪ್ ನಲ್ಲಿ 18 ಮಂದಿ ಪ್ರಯಾಣಿಸುತ್ತಿದ್ದರು. ಇದರಲ್ಲಿ 5 ಮಂದಿ ಅಪಘಾತ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನುಳಿದ ಮಕ್ಕಳು ಸೇರಿದಂತೆ 13 ಮಂದಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಾಸರಗೋಡು ಕಡೆ ತೆರಳುತ್ತಿದ್ದ ಲಾರಿಯ ಟಯರ್ ಸಿಡಿದದ್ದೇ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಮೃತದೇಹವನ್ನು ಮಂಗಲ್ಪಾಡಿ ಸಿ.ಎಚ್.ಸಿ ಶವಾಗಾರದಲ್ಲಿ ಇಡಲಾಗಿದೆ.

    ಕುಂಬ್ಳೆ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.