Tag: Tokyo Olympics

  • ಸಿಂಧುಗೆ ಜಯ – ಭಾರತಕ್ಕೆ ಕಂಚಿನ ಸಿಂಧೂರ

    ಸಿಂಧುಗೆ ಜಯ – ಭಾರತಕ್ಕೆ ಕಂಚಿನ ಸಿಂಧೂರ

    ಟೋಕಿಯೋ: ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಪಿವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಸತತ ಎರಡು ಒಲಿಂಪಿಕ್ಸ್ ನಲ್ಲಿ ಭಾರತದ ಪರ ಪದಕ ಪಡೆದ ಮೊದಲ  ಮಹಿಳಾ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.

    ಇಂದು ನಡೆದ ಪಂದ್ಯದಲ್ಲಿ ಚೀನಾದ ಬಿಂಗ್ ಜಿಯಾವೋ ವಿರುದ್ಧ 21-13, 21-15 ನೇರ ಸೆಟ್‍ಗಳಿಂದ ಜಯಗಳಿಸಿ ಕಂಚಿನ ಪದಕ ಗೆದ್ದಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಸಿಂಧು ಫೈನಲ್ ನಲ್ಲಿ ಸೋತು ಬೆಳ್ಳಿ ಪದಕವನ್ನು ಗೆದ್ದಿದ್ದರು.

    ನಿನ್ನೆ ನಡೆದ ಪಂದ್ಯದಲ್ಲಿ ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧ ಸಿಂಧು ಸೋಲನ್ನು ಅನುಭವಿಸಿದ್ದರು. ಇಂದು ಆರಂಭದಿಂದಲೇ ಭರ್ಜರಿ ಆಟ ಪ್ರದರ್ಶಿಸಿ ಎದುರಾಳಿಯನ್ನು ಸೋಲಿಸಿ ಭಾರತಕ್ಕೆ ಎರಡನೇ ಪದಕವನ್ನು ತಂದುಕೊಟ್ಟಿದ್ದಾರೆ. ಇದನ್ನೂ ಓದಿ : ಡಿಸ್ಕಸ್ ಥ್ರೋನಲ್ಲಿ ಕಮಲ್‍ಪ್ರೀತ್ ಅಚ್ಚರಿ- ಫೈನಲ್‍ಗೆ ಲಗ್ಗೆ

    ಪುರುಷರ 66 ಕೆಜಿ ಕುಸ್ತಿ ವಿಭಾಗದಲ್ಲಿ ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು, 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

  • ಸೆಮಿಫೈನಲ್‍ನಲ್ಲಿ ಎಡವಿದ ಪಿ.ವಿ.ಸಿಂಧು- ಬ್ಯಾಡ್ಮಿಂಟನ್‍ನಲ್ಲಿ ಚಿನ್ನದ ಕನಸು ಭಗ್ನ

    ಸೆಮಿಫೈನಲ್‍ನಲ್ಲಿ ಎಡವಿದ ಪಿ.ವಿ.ಸಿಂಧು- ಬ್ಯಾಡ್ಮಿಂಟನ್‍ನಲ್ಲಿ ಚಿನ್ನದ ಕನಸು ಭಗ್ನ

    ಟೋಕಿಯೋ: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೆಮಿ ಫೈನಲ್ಸ್ ನಲ್ಲಿ ಮುಗ್ಗರಿಸಿದ್ದು, ಈ ಮೂಲಕ ಬ್ಯಾಡ್ಮಿಂಟನ್‍ನಲ್ಲಿ ಭಾರತಕ್ಕೆ ಚಿನ್ನದ ಪದಕ ಕೈ ತಪ್ಪಿದಂತಾಗಿದೆ.

    ಮುಸಾಶಿನೋ ಫಾರೆಸ್ಟ್ ಸ್ಪೋರ್ಟ್ ಪ್ಲಾಜಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‍ನಲ್ಲಿ ವಿಶ್ವದ ನಂ.1 ಆಟಗಾರ್ತಿ ಚೈನೀಸ್ ತೈಪೆ ತೈ ಜು ಯಿಂಗ್ ಆಕ್ರಮಣಕಾರಿ ಆಟವಾಡಿದರು. ಹೀಗಾಗಿ 21-18, 21-12 ನೇರ ಸೆಟ್‍ಗಳಲ್ಲಿ ಪಿ.ವಿ.ಸಿಂಧು ಸೋಲನುಭವಿಸಿದ್ದಾರೆ. ಈ ಪಂದ್ಯದಲ್ಲಿ ಗೆಲುವಿನೊಂದಿಗೆ ತೈ ಜು ಯಿಂಗ್ ಫೈನಲ್ ಪ್ರವೇಶಿಸಿದ್ದಾರೆ.

    ಪಿ.ವಿ.ಸಿಂಧು ಅವರು ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಪಿ.ವಿ.ಸಿಂಧು ಅವರು ಹಿ ಬಿಂಗ್ ಜಿಯಾವೋ ಅವರೊಂದಿಗೆ ಸೆಣಸಲಿದ್ದಾರೆ.

    ಸಿಂಧು ವಿರುದ್ಧ ತೈ ಜು ಯಿಂಗ್ ಈ ಮೊದಲು 13-7 ರ ಗೆಲುವಿನ ದಾಖಲೆ ಹೊಂದಿದ್ದರು. ಕಳೆದ 3 ಪಂದ್ಯಗಳಲ್ಲಿ ಸಿಂಧುಗೆ ಸೋಲುಣಿಸಿದ್ದಾರೆ. ಆದರೆ ರಿಯೋ ಒಲಿಂಪಿಕ್ಸ್, 2018ರ ವರ್ಲ್ಡ್ ಟೂರ್ ಫೈನಲ್ಸ್, 2019ರ ವಿಶ್ವ ಚಾಂಪಿಯನ್‍ಶಿಪ್ ಮೊದಲಾದ ಪಂದ್ಯಗಳಲ್ಲಿ ತೈ ಜು ಯಿಂಗ್ ಗೆ ಪಿ.ವಿ.ಸಿಂಧು ಸೋಲಿನ ರುಚಿ ತೋರಿಸಿದ್ದರು.

  • ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು

    ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು

    ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ ಸಿಂಧು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ.

    ಕ್ವಾರ್ಟರ್ ಫೈನಲ್‍ನಲ್ಲಿ ಜಪಾನ್‍ನ ಅಕಾನೆ ಯಮಗೂಚಿ ವಿರುದ್ಧ 21-13, 22-20 ಅಂಕಗಳೊಂದಿಗೆ ಸಿಂಧು ಗೆಲುವಿನ ನಗೆ ಬೀರಿದರು. ಈ ಮೂಲಕ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಪದಕ ಖಚಿತ – ಸೆಮಿಗೆ ಲವ್ಲೀನಾ ಎಂಟ್ರಿ

    4 ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆದಿದ್ದಾರೆ. ರಾಚನೋಕ್ ಇಂಟನಾನ್ ಮತ್ತು ತೈ ತ್ಸುಯಿಂಗ್ ನಡುವಿನ ಪಂದ್ಯದಲ್ಲಿ ವಿಜಯಿಯಾದವರ ಜೊತೆ ನಾಳೆ ಸಿಂಧು ಸೆಮಿಫೈನಲ್ ಆಡಲಿದ್ದಾರೆ.

  • ಭಾರತಕ್ಕೆ ಮತ್ತೊಂದು ಪದಕ ಖಚಿತ – ಸೆಮಿಗೆ ಲವ್ಲೀನಾ ಎಂಟ್ರಿ

    ಭಾರತಕ್ಕೆ ಮತ್ತೊಂದು ಪದಕ ಖಚಿತ – ಸೆಮಿಗೆ ಲವ್ಲೀನಾ ಎಂಟ್ರಿ

    ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು  ಪದಕ ಸಿಗುವುದು ಖಚಿತವಾಗಿದೆ. ಬಾಕ್ಸಿಂಗ್‍ನಲ್ಲಿ ಮಹಿಳಾ ಸ್ಪರ್ಧಿ ಲವ್ಲೀನಾ ಸೆಮಿಫೈನಲ್ ಪ್ರವೇಶಿಸಿದ್ದಾರೆ.

    ಮಹಿಳೆಯರ ವೆಲ್ಟರ್ ವೇಟ್ 64-69 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ಲವ್ಲೀನಾ ಚೈನೀಸ್ ತೈಪೆ(ತೈವಾನ್) ಚಿನ್ ಚೀನ್ ಅವರನ್ನು 4-1 ಅಂಕದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದನ್ನೂ ಓದಿ : ಒಲಿಂಪಿಕ್ಸ್ ಡೋಪಿಂಗ್ ಪರೀಕ್ಷೆ- 18 ಅಥ್ಲೀಟ್ಸ್ ಅನರ್ಹ

    ಬಾಕ್ಸಿಂಗ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಎಲ್ಲರಿಗೂ ಪದಕ ಸಿಗಲಿದೆ. ಸೋತ ಇಬ್ಬರು ಸ್ಪರ್ಧಿಗಳಿಗೆ ಕಂಚಿನ ಪದಕವನ್ನು ನೀಡಲಾಗುತ್ತದೆ. ಜುಲೈ 24 ರಂದು ಮೀರಾಬಾಯಿ ಚಾನು ಅವರು ವೇಟ್ ಲಿಫ್ಟಿಂಗ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು.

  • ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು

    ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು

    ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿಕೊಟ್ಟ ಹೆಮ್ಮೆಯ ವೇಟ್‍ಲಿಫ್ಟರ್ ಮೀರಾಬಾಯಿ ಚಾನು ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿರುವುದು ಅತೀವ ಆನಂದ ನೀಡಿದೆ ಎಂದು ಹೇಳಿದ್ದಾರೆ.

    ಪದಕ ಗೆದ್ದ ಖುಷಿಯನ್ನು ಟ್ವೀಟ್ ಮೂಲಕ ಹಂಚಿಕೊಂಡ ಮೀರಾಬಾಯಿ ಚಾನು, ಇದು ನನಗೆ ಕನಸು ನನಸಾದ ಗಳಿಗೆ. ಈ ಗೆಲುವನ್ನು ನನ್ನ ದೇಶ ಹಾಗೂ ನನ್ನ ಗೆಲುವಿಗಾಗಿ ನನ್ನ ಜರ್ನಿಯುದ್ದಕ್ಕೂ ಪಾರ್ಥಿಸಿದ ಕೋಟ್ಯಂತರ ಜನರಿಗೆ ಅರ್ಪಿಸುತ್ತೇನೆ. ತಮ್ಮ ಕುಟುಂಬದ ಪ್ರೋತ್ಸಾಹ ನನ್ನೊಂದಿಗೆ ಸದಾ ಇತ್ತು. ತಮ್ಮ ತಾಯಿ ತಮಗಾಗಿ ಮಾಡಿದ ತ್ಯಾಗ ಮತ್ತು ತನ್ನ ಮೇಲೆ ನಂಬಿಕೆಯಿಂದ ಈ ಗೆಲುವು ಸಾಧ್ಯವಾಯಿತು. ಸರ್ಕಾರದ ಪ್ರೋತ್ಸಾಹ ಹಾಗೂ ಕೋಚ್ ವಿಜಯ್ ಶರ್ಮಾ ಅವರಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಟ್ವಿಟ್ಟರ್‍ ನಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಮೀರಾಬಾಯಿ ಚಾನುಗೆ ಡಾ.ನಾರಾಯಣಗೌಡ ಅಭಿನಂದನೆ
    ಟೋಕಿಯೋ ಒಲಿಂಪಿಕ್ಸ್‍ನ ಮಹಿಳೆಯರ 49 ಕೆಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಬೆಳ್ಳಿ ಪದಕ ಗೆದ್ದ ಮಣಿಪುರದ ಮೀರಾಬಾಯಿ ಚಾನು ಅವರಿಗೆ ಕರ್ನಾಟಕದ ಯುವ ಸಬಲೀಕರಣ ಮತ್ತು ಕ್ರೀಡೆ ಸಚಿವ ಡಾ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.


    ಮೀರಾಬಾಯಿ ಚಾನು ಅವರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಭಾರತೀಯರ ನಿರೀಕ್ಷೆ ಹುಸಿಗೊಳಿಸದ ಮೀರಾ ಅವರು ಮೊದಲ ದಿನವೇ ಬೆಳ್ಳಿ ಪದಕ ಗೆದ್ದು ಶುಭಾರಂಭ ಮಾಡಿದ್ದಾರೆ. ಮೀರಾ ಅವರ ಗೆಲುವು ಭಾರತದ ಎಲ್ಲ ಕ್ರೀಡಾಪಟುಗಳಲ್ಲಿ ಇನ್ನಷ್ಟು ಹುಮ್ಮಸ್ಸು ತುಂಬುವಂತೆ ಮಾಡಿದೆ. ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಮೀರಾಬಾಯಿ ಚಾನು ಅವರು ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಪದಕ ಬೇಟೆಗೆ ನಾಂದಿ ಹಾಡಿದ ಮೀರಾ ಅವರಿಗೆ ಸಚಿವರು ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಸಂಭ್ರಮ – ಮೀರಾಬಾಯಿ ಚಾನುವಿಗೆ ಬೆಳ್ಳಿ!

     ಭಾರತಕ್ಕೆ ಮೊದಲ ಪದಕ ಸಂಭ್ರಮ:
    49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 26 ವರ್ಷದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿ ಕೊಟ್ಟಿದ್ದಾರೆ. ಚೀನಾದ ಹೊ ಜಿಹೂಹು ಒಟ್ಟು 210 ಕೆಜಿ (94+116 ಕೆಜಿ) ಭಾರ ಎತ್ತಿ ಚಿನ್ನದ ಪದಕ ಬೇಟೆಯಾಡಿದರೆ, ಮೀರಾಬಾಯಿ ಚಾನು 202 ಕೆಜಿ (87+115 ಕೆಜಿ) ಭಾರ ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇಂಡೋನೇಷ್ಯಾದ ಐಸಾಹ್ ವಿಂಡಿ ಕಾಂಟಿಕಾ ವಿಂಡಿ 194 ಕೆಜಿ (84+110ಕೆಜಿ) ಕಂಚಿನ ಪದಕ ಪಡೆದರು.

    84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ ಜಿಹೂಹು 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಇದು ಒಲಿಂಪಿಕ್ಸ್ ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. 69 ಕೆಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗಳಿಸಿದ್ದರು.

  • ಟೋಕಿಯೋ ಒಲಿಂಪಿಕ್ಸ್: ಈ ಬಾರಿ ಪದಕಕ್ಕೆ ಕೊರಳೊಡ್ಡುವಂತಿಲ್ಲ ತಾವೇ ಧರಿಸಿಕೊಂಡರಾಯಿತು!

    ಟೋಕಿಯೋ ಒಲಿಂಪಿಕ್ಸ್: ಈ ಬಾರಿ ಪದಕಕ್ಕೆ ಕೊರಳೊಡ್ಡುವಂತಿಲ್ಲ ತಾವೇ ಧರಿಸಿಕೊಂಡರಾಯಿತು!

    ಟೋಕಿಯೋ: ವಿಶ್ವದ ಸಾವಿರಾರು ಕ್ರೀಡಾಪಟುಗಳು ಒಂದೆಡೆ ಸೇರುವ ಕ್ರೀಡಾ ಜಾತ್ರೆ ಜಪಾನ್‍ನ ಟೋಕಿಯೋದಲ್ಲಿ ಆರಂಭವಾಗಿದೆ. ಈ ಬಾರಿಯ ಒಲಿಪಿಂಕ್ಸ್ ಹಲವು ವಿಶೇಷತೆಯಿಂದ ಕೂಡಿದ್ದು, ಪ್ರಮುಖವಾಗಿ ಹಿಂದಿದ್ದಂತಹ ವಿಜಯ ವೇದಿಕೆಯ ಸಂಭ್ರಮ ಈ ಬಾರಿ ಸ್ವಲ್ಪ ಕಳೆಗುಂದಲಿದೆ.

    ಈ ಹಿಂದಿನ ಎಲ್ಲಾ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಕ್ರೀಡಾಪಟುಗಳು ವಿಜಯ ವೇದಿಕೆಗೆ ಏರಿ ಸಂಭ್ರಮ ಪಡುತ್ತಿದ್ದರು. ಆದರೆ ಈ ಬಾರಿ ವಿಜಯ ವೇದಿಕೆಯ ಸಂಭ್ರಮ ಅಷ್ಟು ಸಿಗಲಾರದು. ಪ್ರತಿ ವರ್ಷ ವಿಜೇತರು ವಿಜಯವೇದಿಕೆ ಏರಿ ಪದಕ್ಕಾಗಿ ಕೊರಳೊಡ್ಡುತ್ತಿದ್ದರು. ಅತಿಥಿಗಳು ಪದಕ ಪ್ರಧಾನ ಮಾಡುತ್ತಿದ್ದರು. ಆದರೆ ಈ ಭಾರಿ ವಿಜೇತರೆ ತಮ್ಮ ಕೊರಳಿಗೆ ತಮ್ಮ ಪದಕ ಧರಿಸುವಂತಾಗಿದೆ. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್-21ನೇ ಕ್ರಮಾಂಕದಲ್ಲಿ ಧ್ವಜ ಹಿಡಿದು ಆಗಮಿಸಿದ ಭಾರತ ತಂಡ

    ಹೌದು ಕೊರೊನಾದಿಂದಾಗಿ ಒಂದು ವರ್ಷಗಳ ಬಳಿಕ ಆರಂಭವಾದ ಟೋಕಿಯೋ ಒಲಿಂಪಿಕ್ಸ್ ಗೆ ಕೊರೊನಾ ಕಾಟ ಕೊಡುತ್ತಿದೆ. ಹಲವು ದೇಶದ ಕ್ರೀಡಾಪಟುಗಳು ಅಂತಿಮ ಕ್ಷಣದಲ್ಲಿ ಕೊರೊನಾದಿಂದಾಗಿ ಹೊರ ಬಿದ್ದಿದ್ದಾರೆ. ಈ ನಡುವೆ ಹೊಸ ನಿಯಮದಂತೆ ಈ ಬಾರಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಒಲಿಂಪಿಕ್ಸ್ ನಡೆಸಲು ಒಲಿಂಪಿಕ್ಸ್ ಮಂಡಳಿ ನಿರ್ಧರಿಸಿದೆ. ಹಾಗಾಗಿ ಪ್ರತಿವರ್ಷದಂತೆ ಇದ್ದಂತಹ ವಿಜಯ ವೇದಿಕೆಯ ಸಂಭ್ರಮ ಈ ಬಾರಿ ಕಾಣಸಿಗದಾಗಿದೆ.

    ಈ ಹಿಂದೆ ಪದಕ ಗೆದ್ದ ಅಥ್ಲೀಟ್ಸ್‍ಗಳು ಬಂದು ವಿಜಯ ವೇದಿಕೆಗೆ ಏರಿ ಅಲ್ಲಿ ಅತಿಥಿಗಳಿಂದ ಪದಕ ಹಾಕಿಸಿಕೊಂಡು ಕೈ ಕುಲುಕಿ, ಅಪ್ಪಿಕೊಂಡು ಸಂಭ್ರಮಪಡುತ್ತಿದ್ದರು. ಆದರೆ ಈ ಬಾರಿ ಈ ಸಂಭ್ರಮವಿಲ್ಲ. ಪದಕ ಗೆದ್ದವರು ಸಾಮಾಜಿಕ ಅಂತರ ಕಾಯ್ದುಕೊಂಡು ರೂಪಿಸಿರುವ ವಿಜಯ ವೇದಿಕೆಯ ಬಳಿ ತೆರಳಿ ಮುಂದೆ ಇಟ್ಟಿರುವ ಮೂರು ಪದಕಗಳಲ್ಲಿ ತಮಗೆ ಸಿಕ್ಕಿರುವ ಪದಕ ಧರಿಸಿ ನಿಲ್ಲಬೇಕು. ಇದನ್ನು ಹೊರತು ಪಡಿಸಿ ಸಹ ವಿಜೇತರಿಗೂ ಕೂಡ ಕ್ರೀಡಾಪಟುಗಳು ಕೈ ಕುಲುಕಿ ಅಭಿನಂದಿಸುವ ಕ್ರಮವನ್ನು ನಿಷೇಧಿಸಲಾಗಿದೆ. ಹಾಗಾಗಿ ಈ ಬಾರಿ ವಿಜಯ ವೇದಿಕೆ ತನ್ನ ಹಳೆಯ ಖದರ್, ಕಳೆದುಕೊಂಡಂತಾಗಿದೆ.

  • ಟೋಕಿಯೋ ಒಲಿಂಪಿಕ್ಸ್-21ನೇ ಕ್ರಮಾಂಕದಲ್ಲಿ ಧ್ವಜ ಹಿಡಿದು ಆಗಮಿಸಿದ ಭಾರತ ತಂಡ

    ಟೋಕಿಯೋ ಒಲಿಂಪಿಕ್ಸ್-21ನೇ ಕ್ರಮಾಂಕದಲ್ಲಿ ಧ್ವಜ ಹಿಡಿದು ಆಗಮಿಸಿದ ಭಾರತ ತಂಡ

    ಟೋಕಿಯೋ: 2021ರ ಕ್ರೀಡಾ ಜಾತ್ರೆ ಟೋಕಿಯೋ ಒಲಿಂಪಿಕ್ಸ್ ಸರಳವಾಗಿ ಇಂದು ಉದ್ಘಾಟನೆಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ 20 ಮಂದಿ ಅಥ್ಲೀಟ್ಸ್ ಗಳು ಭಾಗವಹಿಸಿದರು. 21ನೇ ಕ್ರಮಾಂಕದಲ್ಲಿ ಭಾರತ ತಂಡ ತ್ರಿವರ್ಣ ಧ್ವಜ ಹಿಡಿದು ಪಥಸಂಚಲನದಲ್ಲಿ ಭಾಗವಹಿಸಿತು.

    ಜಪಾನ್‍ನ ಟೋಕಿಯೋದಲ್ಲಿ 2020ರಲ್ಲಿ ನಡೆಯ ಬೇಕಾಗಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಕೊರೊನಾದಿಂದಾಗಿ ಒಂದು ವರ್ಷದ ಬಳಿಕ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡು ಆರಂಭಗೊಂಡಿದೆ. ಉದ್ಘಾಟನ ಸಮಾರಂಭದ ಪಥಸಂಚಲನದಲ್ಲಿ ಭಾರತ 20 ಮಂದಿ ಕ್ರೀಡಾ ಪಟುಗಳು ಭಾಗವಹಿಸಿದ್ದರು. ಹಾಕಿ ತಂಡದ ನಾಯಕ ಮನ್‍ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಮೇರಿ ಕೋಮ್ ಭಾರತ ತ್ರಿವರ್ಣ ಧ್ವಜ ಹಿಡಿದು ಜಪಾನ್‍ನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಹೆಜ್ಜೆ ಇಟ್ಟರು. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಲು ಸಜ್ಜಾದ ಭಾರತೀಯ ಕ್ರೀಡಾಪಟುಗಳು

    ಜಪಾನಿನ ವರ್ಣಮಾಲೆಯ ಅಕ್ಷರದ ಕ್ರಮದಂತೆ ರಾಷ್ಟ್ರಗಳ ಪಥಸಂಚಲನ ನಡೆಯಿತು. ಈ ಪ್ರಕಾರ ಭಾರತಕ್ಕೆ ವರ್ಣಮಾಲೆಯ 21 ಅಕ್ಷರವಾಗಿ ಗಮನ ಸೆಳೆಯಿತು. ಈ ಬಾರಿ ಕೊರೊನಾದಿಂದಾಗಿ ಸರಳವಾಗಿ ಆರಂಭಕಂಡ ಒಲಿಂಪಿಕ್ಸ್ ನಲ್ಲಿ ಕೆಲ ಸಣ್ಣ ಪುಟ್ಟ ಕಾರ್ಯಕ್ರಮಗಳು ನಡೆಯಿತು. ಒಲಿಂಪಿಕ್ಸ್ ರಿಂಗ್‍ನಲ್ಲಿ ನೃತ್ಯ, ಲೈಟಿಂಗ್ ಕಲರವ ಸೆರಿದಂತೆ ಕೆಲ ಅಚ್ಚುಕಟ್ಟಾದ ಕಾರ್ಯಕ್ರಮಗಳು ನೋಡುಗರ ಗಮನಸೆಳೆಯಿತು.

  • ಟೋಕಿಯೋ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಲು ಸಜ್ಜಾದ ಭಾರತೀಯ ಕ್ರೀಡಾಪಟುಗಳು

    ಟೋಕಿಯೋ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಲು ಸಜ್ಜಾದ ಭಾರತೀಯ ಕ್ರೀಡಾಪಟುಗಳು

    ಟೋಕಿಯೋ: 2021ರ ಟೋಕಿಯೋ ಒಲಿಂಪಿಕ್ಸ್‍ಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಕೇವಲ ಕೆಲವೇ ಗಂಟೆಗಳು ಮಾತ್ರ ಭಾಗಿ ಉಳಿದುಕೊಂಡಿರುವಂತೆ, ಭಾರತ ಹಲವು ಕ್ರೀಡಾಪಟುಗಳು ಪದಕ ಬೇಟೆಯಾಡುವ ತವಕದಲ್ಲಿದ್ದಾರೆ.

    2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೊರೊನಾದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಈ ವರ್ಷ ಜುಲೈ 23ರಿಂದ ಆಗಸ್ಟ್ 8 ರವರೆಗೆ ಜಪಾನ್‍ನ ಟೋಕಿಯೋದಲ್ಲಿ ನಡೆಯುತ್ತಿದೆ.

    ಈಗಾಗಲೇ ಭಾರತದ 120 ಕ್ರೀಡಾಪಟುಗಳು ಟೋಕಿಯೋ ತಲುಪಿದ್ದಾರೆ. 120 ಕ್ರೀಡಾಪಟುಗಳ ಪೈಕಿ 5 ಮಂದಿ ಕನ್ನಡಿಗರು ಸೇರಿದ್ದಾರೆ. ಈ ಮೂಲಕ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಈ ಬಾರಿ ಅತೀ ಹೆಚ್ಚಿನ ಕ್ರೀಡಾಪಟುಗಳನ್ನು ಕಳುಹಿಸಿದೆ. ಈ ಬಾರಿ 68 ಪುರುಷ ಸ್ಪರ್ಧಿಗಳು ಮತ್ತು 52 ಮಹಿಳಾ ಸ್ಪರ್ಧಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ ಈ ಬಾರಿ ವಿಶೇಷವೆಂಬಂತೆ ಯುವ ಪಡೆ ಟೋಕಿಯೋಗೆ ತೆರಳಿದೆ. 120 ಕ್ರೀಡಾಪಟುಗಳ ಪೈಕಿ 10ಕ್ಕೂ ಹೆಚ್ಚು ಕ್ರೀಡಾಪಟುಗಳು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಭಾರತ ಭವಿಷ್ಯದ ಕ್ರೀಡಾಪಟುಗಳಾಗಿ ಗುರುತಿಸಿಕೊಂಡಿದ್ದಾರೆ. ಕೊರೊನಾದಿಂದಾಗಿ ಬಹಳ ವಿಭಿನ್ನವಾಗಿ ಈ ಬಾರಿಯ ಒಲಿಂಪಿಕ್ಸ್ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯದ ಬರೆ

    ಈಗಾಗಲೇ ಭಾರತದ ಸ್ಟಾರ್ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಈ ಕ್ರೀಡಾಪಟುಗಳಿಂದ ಪದಕ ನಿರೀಕ್ಷೆಗಳನ್ನು ಕ್ರೀಡಾ ತಜ್ಞರು ವ್ಯಕ್ತಪಡಿಸಿದ್ದಾರೆ. ಈ ವರ್ಷ ಎಲ್ಲ ಕ್ರೀಡಾಪಟುಗಳಿಗೆ ಅಭ್ಯಾಸಕ್ಕಾಗಿ ಸಾಕಷ್ಟು ಸಮಯವಕಾಶ ಸಿಕ್ಕಿರುವುದರಿಂದಾಗಿ ಪದಕ ಮುಡಿಗೇರಿಸಿಕೊಳ್ಳುವ ಅವಕಾಶವಿದೆ.

    ಭಾರತ ಸ್ಟಾರ್ ಅಥ್ಲೀಟ್‍ಗಳ ಪೈಕಿ ಪಿ.ವಿ ಸಿಂಧು ಬ್ಯಾಡ್ಮಿಂಟನ್, ಮೇರಿ ಕೋಮ್ ಬಾಕ್ಸಿಂಗ್, ಅಮಿತ್ ಫಂಗಲ್ ಬಾಕ್ಸಿಂಗ್, ಸಾಕ್ಷಿ ಮಲಿಕ್ ಕುಸ್ತಿ, ವಿನೇಶ್ ಪೊಗಾಟ್ ಕುಸ್ತಿ, ಭಜರಂಗ್ ಪೊನಿಯಾ ಕುಸ್ತಿ, ಮನು ಭಾಕರ್ ಶೂಟಿಂಗ್, ದೀಪಿಕಾ ಕುಮಾರಿ ಆರ್ಚರಿ, ಮೀರಾಬಾಯಿ ಚಾನು ವೇಟ್‍ಲಿಪ್ಟಿಂಗ್‍ನಲ್ಲಿ ಸ್ಪರ್ಧಿಸುತ್ತಿದ್ದು ಇವರೆಲ್ಲರ ಮೇಲೆ ಪದಕದ ನಿರೀಕ್ಷೆ ಇದೆ. ಇವರೊಂದಿಗೆ ಇನ್ನಿತರ ಯುವ ಕ್ರೀಡಾಪಟುಗಳು ಪದಕವನ್ನು ಮುಡಿಗೇರಿಸಿಕೊಳ್ಳಲಿ ಎಂಬುದು ನಮ್ಮೆಲ್ಲರ ಆಶಯ. ಆಲ್ ದಿ ಬೇಸ್ಟ್ ಇಂಡಿಯಾ.

  • ಕೊರೊನಾ ಎಫೆಕ್ಟ್: BMW ಕಾರು ಮಾರಾಟಕ್ಕಿಟ್ಟ ದ್ಯುತಿ ಚಂದ್

    ಕೊರೊನಾ ಎಫೆಕ್ಟ್: BMW ಕಾರು ಮಾರಾಟಕ್ಕಿಟ್ಟ ದ್ಯುತಿ ಚಂದ್

    ಭುವನೇಶ್ವರ: ಭಾರತದ ಓಟಗಾರ್ತಿ ದ್ಯುತಿ ಚಂದ್ ತರಬೇತಿಯ ವೆಚ್ಚಕ್ಕಾಗಿ ತಮ್ಮ ಬಳಿ ಇದ್ದ ಬಿಎಂಡಬ್ಲೂ ಕಾರನ್ನು ಮಾರಾಟಕ್ಕಿಟ್ಟಿದ್ದಾರೆ.

    ಚೀನಿ ವೈರಸ್ ಕಾರಣದಿಂದ ವಿಶ್ವದಾದ್ಯಂತ ಕಳೆದ 4 ತಿಂಗಳನಿಂದ ಕ್ರೀಡಾ ಜಗತ್ತು ಸ್ತಬ್ಧಗೊಂಡಿದೆ. ವೈರಸ್‍ನಿಂದ ಐಪಿಎಲ್ ಸೇರಿದಂತೆ ಹಲವು ಕ್ರೀಡೆಗಳ ಟೂರ್ನಿಗಳು ಮುಂದೂಡಿದ್ದರೆ, ಹಲವು ಟೂರ್ನಿಗಳು ರದ್ದಾಗಿದೆ. ಟೋಕಿಯೋ ಒಲಿಂಪಿಕ್ಸ್ ಕೂಡ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

    ಒಲಿಂಪಿಕ್ಸ್ ಮುಂದೂಡಿರುವ ಹಿನ್ನೆಲೆಯಲ್ಲಿ ತರಬೇತಿಯನ್ನು ಮುಂದುವರಿಸಿರುವ ದ್ಯುತಿ ಚಂದ್ ತರಬೇತಿಗಾಗಿ ತಮ್ಮ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಕಾರು ಮಾರಾಟ ಮಾಡುತ್ತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು.

    ಇಲ್ಲಿಯವರೆಗೂ ನನ್ನ ಶಿಕ್ಷಣ ಅತ್ಯುತ್ತಮವಾಗಿಸಾಗಿದೆ. ಭುವನೇಶ್ವರದಲ್ಲಿ ನಾನು ತರಬೇತಿ ಪಡೆಯುತ್ತಿದ್ದು, ಸರ್ಕಾರ ಹಾಗೂ ಪ್ರಯೋಜಕರು ನೀಡಿದ್ದ ಹಣ ಖಾಲಿಯಾಗಿದೆ. ಆದ್ದರಿಂದಲೇ ನನ್ನ ಕಾರನ್ನು ಮಾರಾಟ ಮಾಡಬೇಕೆಂದುಕೊಂಡಿದ್ದೇನೆ ಯಾರಾದರೂ ಖರೀದಿ ಮಾಡುವವರಿದ್ದರೆ ನನಗೆ ಸಂದೇಶ ರವಾನಿಸಿ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು.

    ಇತ್ತ ದ್ಯುತಿ ಚಂದ್ ಫೇಸ್‍ಬುಕ್ ಪೋಸ್ಟ್ ಬಳಿಕ ಒಡಿಶಾ ಸರ್ಕಾರ ಅವರ ನೆರವಿಗೆ ಆಗಮಿಸಿತ್ತು. ಪರಿಣಾಮ ಅವರು ಫೇಸ್‍ಬುಕ್ ಪೋಸ್ಟನ್ನು ದ್ಯುತಿ ಚಂದ್ ಡಿಲೀಟ್ ಮಾಡಿದ್ದಾರೆ. ಉಳಿದಂತೆ 2015ರಲ್ಲಿ ಬಿಎಂಡಬ್ಲೂ 3 ಸಿರೀಸ್ ಮಾಡೆಲ್ ಕಾರನ್ನು 40 ಲಕ್ಷ ರೂ.ಗಳಿಗೆ ದ್ಯುತಿ ಚಂದ್ ಖರೀದಿ ಮಾಡಿದ್ದರು.

    ಟೋಕಿಯೋ ಒಲಪಿಂಕ್ ತರಬೇತಿಗಾಗಿ ಸರ್ಕಾರ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿತ್ತು. ಕೋಚ್, ಫಿಜಿಯೋಥೆರಪಿಸ್ಟ್, ಡಯಟಿಷಿಯನ್ ಸೇರಿದಂತೆ ತಿಂಗಳಿಗೆ 5 ಲಕ್ಷ ರೂ. ಖರ್ಚಾಗುತ್ತಿತ್ತು. ಕೊರೊನಾ ಕಾರಣದಿಂದ ಯಾವ ಪ್ರಯೋಜಕರು ಕೂಡ ನನಗಾಗಿ ಖರ್ಚು ಮಾಡಲು ಮುಂದೆ ಬರುತ್ತಿಲ್ಲ. ಸದ್ಯ ನಾನು ಟೋಕಿಯೋ ಒಲಂಪಿಕ್‍ಗೆ ಸಿದ್ಧವಾಗುತ್ತಿದ್ದೇನೆ. ಜರ್ಮಿನಿಯಲ್ಲಿ ತರಬೇತಿ ಪಡೆಯಲು, ಫಿಟ್ನೆಸ್ ಕಾಯ್ದುಕೊಳ್ಳಲು ಹಣ ಅಗತ್ಯವಿದೆ. ಆದ್ದರಿಂದಲೇ ಕಾರು ಮಾರಾಟ ಮಾಡಲು ಮುಂದಾಗಿದ್ದೆ ಎಂದು ದ್ಯುತಿ ಚಂದ್ ಸಂದರ್ಶನವೊಂದರಲ್ಲಿ ಹೇಳಿದ್ದರು.

    2020ರ ಅರ್ಜನ ಪ್ರಶಸ್ತಿಗೆ ದ್ಯುತಿ ಚಂದ್ ಆಯ್ಕೆ ಆಗಿದ್ದು, 2018ರ ಏಷ್ಯನ್ ಗೇಮ್ಸ್ ನಲ್ಲಿ 2 ಬೆಳ್ಳಿ ಪದಕಗಳನ್ನು ಗೆದ್ದು ತಂದಿದ್ದರು. ಲಾಕ್‍ಡೌನ್ ಕಾರಣದಿಂದ ತರಬೇತಿಯಿಂದ ದೂರ ಉಳಿದಿದ್ದ ದ್ಯುತಿ ಚಂದ್ ಮೇ 25 ರಿಂದ ತರಬೇತಿ ಆರಂಭಿಸಿದ್ದರು. ಸದ್ಯ ಒಲಂಪಿಕ್ ಮುಂದೂಡಿರುವುದರಿಂದ ಅವರು ಒಂದು ವರ್ಷ ತರಬೇತಿಯನ್ನು ಮುಂದುವರಿಸಬೇಕಿದೆ.

  • ಒಂದು ವರ್ಷ ಒಲಿಂಪಿಕ್ಸ್ ಮುಂದೂಡಿಕೆ?

    ಒಂದು ವರ್ಷ ಒಲಿಂಪಿಕ್ಸ್ ಮುಂದೂಡಿಕೆ?

    ಟೋಕಿಯೊ: ಕೊರೊನಾ ವೈರಸ್ ಮರಣ ಮೃದಂಗಕ್ಕೆ ವಿಶ್ವವೇ ತತ್ತರಿಸಿದ್ದು ಅನಿವಾರ್ಯವಾಗಿ ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

    ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಆತಿಥೇಯ ರಾಷ್ಟ್ರ ಜಪಾನ್ ನಿಗದಿತ ವೇಳಾಪಟ್ಟಿಯಂತೆ ಒಲಿಂಪಿಕ್ಸ್ ನಡೆಸುವುದಾಗಿ ಹೇಳುತ್ತಿದ್ದವು. ಆದರೆ ಈಗ ಒಲಿಂಪಿಕ್ಸ್ ಮುಂದೂಡುವ ನಿಲುವನ್ನು ತೋರಿಸುತ್ತಿವೆ ಎಂದು ವರದಿಯಾಗಿದೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್‍ಗೆ ಸಂಬಂಧಿಸಿದಂತೆ ಕೆನಡಾ ಮತ್ತು ಆಸ್ಟ್ರೇಲಿಯಾ ಪ್ರಮುಖ ನಿರ್ಧಾರ ಕೈಗೊಂಡಿವೆ. ಟೋಕಿಯೊ ಕ್ರೀಡಾಕೂಟಕ್ಕೆ ತಮ್ಮ ಆಟಗಾರರನ್ನು ಕಳುಹಿಸುವುದಿಲ್ಲ ಎಂದು ಉಭಯ ದೇಶಗಳು ಸ್ಪಷ್ಟನೆ ನೀಡಿವೆ. ಇದನ್ನೂ ಓದಿ: ಕೊರೊನಾ ಭೀತಿ ಇದ್ರೂ ಒಲಿಂಪಿಕ್ ಜ್ಯೋತಿ ನೋಡಲು ಅರ್ಧ ಕಿ.ಮೀ. ಕ್ಯೂ

    ಕೆನಡಾ ಒಲಿಂಪಿಕ್ಸ್ ಸಮಿತಿ (ಸಿಒಸಿ) ಮತ್ತು ಕೆನಡಾ ಪ್ಯಾರಾ ಒಲಿಂಪಿಕ್ಸ್ ಸಮಿತಿ (ಸಿಪಿಸಿ) ಕ್ರೀಡಾಪಟುಗಳ ಆಯೋಗವು ರಾಷ್ಟ್ರೀಯ ಕ್ರೀಡಾ ಒಕ್ಕೂಟ ಮತ್ತು ಕೆನಡಾ ಸರ್ಕಾರದೊಂದಿಗೆ ಚರ್ಚಿಸಿದ್ದು, ತಮ್ಮ ಆಟಗಾರರನ್ನು ಟೋಕಿಯೊಗೆ ಕಳುಹಿಸದಿರಲು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಜೊತೆಗೆ ಆಟಗಾರರ ಮತ್ತು ವಿಶ್ವ ಸಮುದಾಯದ ಆರೋಗ್ಯಕ್ಕಿಂತ ಬೇರೆ ಯಾವುದೂ ನಮಗೆ ಮುಖ್ಯವಲ್ಲ ಎಂದು ಅಭಿಪ್ರಾಯಪಟ್ಟಿದೆ.  ಇದನ್ನೂ ಓದಿ: ಕೊರೊನಾ ಎಫೆಕ್ಟ್ – ಮನೆಯಲ್ಲೇ ಏಕಾಂಗಿಯಾಗಿ ಬೀಚ್ ವಾಲಿಬಾಲ್ ಆಡಿದ ರಾಸ್: ವಿಡಿಯೋ

    ಒಲಿಂಪಿಕ್ಸ್ ಅನ್ನು ಮುಂದೂಡಲು ಒಂದು ಆಯ್ಕೆ ಇದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಹೇಳಿದ್ದಾರೆ. ಆದರೆ ರದ್ದು ಮಾಡುವುದು ನಮ್ಮ ಕಾರ್ಯಸೂಚಿಯಲ್ಲಿಲ್ಲ. ‘ನಾವು ಜಗತ್ತಿನಾದ್ಯಂತÀ ಪರಿಸ್ಥಿತಿ ಮತ್ತು ಒಲಿಂಪಿಕ್ಸ್‍ನ ಪ್ರಭಾವದ ಬಗ್ಗೆ ಪಾಲುದಾರರೊಂದಿಗೆ ಚರ್ಚಿಸಿದ್ದೇವೆ. ಮುಂದಿನ 4 ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಸೋಮವಾರ ಜಪಾನ್ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಶಿಂಜೊ ಅಬೆ, ‘ನಾವು ಕ್ರೀಡಾಕೂಟವನ್ನು ಆಯೋಜಿಸಲು ಬದ್ಧರಾಗಿದ್ದೇವೆ. ಆಟಗಾರರ ಸುರಕ್ಷತೆಗೆ ಧಕ್ಕೆಯುಂಟಾಗುವುದಿಲ್ಲ. ಆದರೆ ಒಲಿಂಪಿಕ್ಸ್ ಅನ್ನು ಸುರಕ್ಷಿತವಾಗಿ ನಡೆಸಲು ಸಾಧ್ಯವಿಲ್ಲ ಎಂದು ಭಾವಿಸಿದರೆ, ನಾವು ಮುಂದೂಡುತ್ತೇವೆ ಎಂದು ಹೇಳಿದ್ದರು.

    ಶೇ.70ರಷ್ಟು ಅಮೆರಿಕದ ಆಟಗಾರರು ಒಲಿಂಪಿಕ್ಸ್ ಅನ್ನು ಮುಂದೂಡಲು ಒಲವು ತೋರಿದ್ದಾರೆ. ಇತ್ತ ಕ್ರೀಡಾಕೂಟವು 2020ರ ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆದರೆ ಆಟಗಾರರನ್ನು ಕಳುಹಿಸುತ್ತೇವೆ ಎಂದು ಕೆನಡಾ ಮತ್ತು ಆಸ್ಟ್ರೇಲಿಯಾ ಪಟ್ಟು ಹಿಡಿದಿವೆ.