Tag: tiruvanthapuram

  • ಹೂ ನೀಡುವ ಬದಲು ಪುಸ್ತಕ ನೀಡಿ – ಜನರಲ್ಲಿ ಶಾಸಕ ಮನವಿ

    ಹೂ ನೀಡುವ ಬದಲು ಪುಸ್ತಕ ನೀಡಿ – ಜನರಲ್ಲಿ ಶಾಸಕ ಮನವಿ

    – ಜನರು ನೀಡಿದ ಪುಸ್ತಕ ಶಾಲೆಗಳಿಗೆ ದಾನ
    – ಕ್ಷೇತ್ರದ ಗ್ರಂಥಾಲಯಕ್ಕೆ ನೀಡಲಿದ್ದಾರೆ ಪುಸ್ತಕ

    ತಿರುವನಂತಪುರಂ: ಹೂಗಳ ಬದಲಾಗಿ ಪುಸ್ತಕವನ್ನು ನೀಡಿ ಎಂದು ಕೇರಳ ಶಾಸಕರೊಬ್ಬರು ಜನರಲ್ಲಿ ಮನವಿ ಮಾಡಿದ್ದು, ಈಗ 35 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಸಂಗ್ರಹಗೊಂಡಿದೆ.

    ಕೇರಳದ ವಟ್ಟಿಯೂರ್ಕವು ಶಾಸಕ ವಿ.ಕೆ ಪ್ರಶಾಂತ್ ಹೂಗಳ ಬದಲು ಪುಸ್ತಕಗಳನ್ನು ನೀಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಜನ ಸ್ಪಂದಿಸಿದ್ದು ಶಾಸಕರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಶಾಸಕರು ತಮ್ಮ ಕ್ಷೇತ್ರದಲ್ಲಿ ಗ್ರಂಥಾಲಯ ತೆರೆಯಲು ಮುಂದಾಗಿದ್ದರು. ಗ್ರಂಥಾಲಯಕ್ಕೆ ಪುಸ್ತಕ ಬೇಕಾಗಿದ್ದರಿಂದ ತನ್ನ ಭೇಟಿಗೆ ಬರುವ ಜನರು ಹೂ, ಹಾರವನ್ನು ತರದೇ ಪುಸ್ತಕವನ್ನು ತನ್ನಿ. ಈ ಪುಸ್ತಕವನ್ನು ಸರ್ಕಾರಿ ಶಾಲೆಯ ಗ್ರಂಥಾಲಯಕ್ಕೆ ನೀಡುತ್ತೇನೆ ಎಂದು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

    ಪ್ರಶಾಂತ್ ಅವರು ಫೇಸ್‍ಬುಕ್‍ನಲ್ಲಿ ಈ ರೀತಿ ಪೋಸ್ಟ್ ಹಾಕುತ್ತಿದ್ದಂತೆ ಹಲವರು ತಮ್ಮ ಬಳಿಯಿದ್ದ ಪುಸ್ತಕಗಳನ್ನು ಅವರಿಗೆ ನೀಡಿದ್ದಾರೆ. ತಮ್ಮ ಫೇಸ್‍ಬುಕ್‍ನಲ್ಲಿ ಜನರು ಪುಸ್ತಕಗಳನ್ನು ನೀಡುತ್ತಿರುವ ಫೋಟೋಗಳನ್ನು ಪ್ರಶಾಂತ್ ಹಂಚಿಕೊಂಡಿದ್ದಾರೆ. ಪ್ರಶಾಂತ್ ಅವರಿಗೆ 35 ಸಾವಿರಕ್ಕೂ ಹೆಚ್ಚು ಪುಸ್ತಕಗಳು ದೊರೆತಿವೆ. ಪ್ರಶಾಂತ್ ಆ ಪುಸ್ತಕಗಳನ್ನು ತಮ್ಮ ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗೆ ನೀಡಲಿದ್ದಾರೆ. ಇದೇ ವೇಳೆ ಪುಸ್ತಕ ನೀಡಿದ ಜನರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

    ಸದ್ಯ ಶಾಸಕ ಪ್ರಶಾಂತ್ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 2018ರಲ್ಲಿ ಕೇರಳದಲ್ಲಿ ಪ್ರವಾಹ ಬಂದಿದ್ದಾಗ ಪ್ರಶಾಂತ್ ಪರಿಹಾರದ ಕಾರ್ಯಗಳಲ್ಲಿ ಸಕ್ರಯವಾಗಿ ಭಾಗವಹಿಸಿದ್ದರು. ಇದಾದ ಬಳಿಕ ಜನರು ಅವರನ್ನು ‘ಮೇಯರ್ ಬ್ರೋ’ ಎಂದು ಕರೆಯಲು ಶುರು ಮಾಡಿದ್ದರು.

  • ಕೃಷ್ಣನ ಅವತಾರದಲ್ಲಿ ಯುವತಿ ವೈರಲ್ – ವಿಡಿಯೋದ ಅಸಲಿಯತ್ತು ಏನು?

    ಕೃಷ್ಣನ ಅವತಾರದಲ್ಲಿ ಯುವತಿ ವೈರಲ್ – ವಿಡಿಯೋದ ಅಸಲಿಯತ್ತು ಏನು?

    ತಿರುವನಂತಪುರಂ: ಭಾರತದ ಹಲವೆಡೆ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಈ ಮಧ್ಯೆ ಯುವತಿಯೊಬ್ಬರು ಕೃಷ್ಣನ ವೇಷದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದು ಈ ವರ್ಷದ ವಿಡಿಯೋ ಅಲ್ಲ ಎಂದು ಯುವತಿ ಸ್ಪಷ್ಟನೆ ನೀಡಿದ್ದಾರೆ.

    ವೈರಲ್ ವಿಡಿಯೋದಲ್ಲಿ ಇರುವ ಯುವತಿಯ ಹೆಸರು ವೈಷ್ಣವ ಕೆ. ಸುನೀಲ್. ಮೂಲತಃ ಕೇರಳ ನಿವಾಸಿಯಾಗಿರುವ ಇವರು ಕಳೆದ ವರ್ಷ ಕೃಷ್ಣನ ಉಡುಪು ಧರಿಸಿ ನೃತ್ಯ ಮಾಡುವ ಮೂಲಕ ಮಡಿಕೆಯನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದರು. ಈ ವೇಳೆ ಸ್ಥಳೀಯರು ಅವರ ವಿಡಿಯೋ ಸೆರೆ ಹಿಡಿದಿದ್ದರು. ಆದರೆ ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಹಲವರು ತಮ್ಮ ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ವೈಷ್ಣವ ಕೆ. ಸುನೀಲ್, “ಗುರುವಾಯೂರು ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದ ವಿಡಿಯೋ ಇದು. ಇದು ಕಳೆದ ವರ್ಷದ ವಿಡಿಯೋ ಆಗಿದ್ದು, ಈಗ ವೈರಲ್ ಆಗುತ್ತದೆ ಎಂದುಕೊಂಡರಲಿಲ್ಲ. ನಾನು ಮೂರು ವರ್ಷದಿಂದ ಗುರುವಾಯೂರು ದೇವಸ್ಥಾನದಲ್ಲಿ ಡ್ಯಾನ್ಸ್ ಮಾಡುತ್ತಿದ್ದೇನೆ. ನಾನು ಗುರುವಾಯೂರು ನಿವಾಸಿಯಾಗಿದ್ದು, ಕೃಷ್ಣನ ಭಕ್ತೆ” ಎಂದು ತಿಳಿಸಿದ್ದಾರೆ.

    ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ವೇಳೆ ಚಿಕ್ಕ ಮಕ್ಕಳು ಕೃಷ್ಣನ ವೇಷ ಧರಿಸಿ ಹಬ್ಬವನ್ನು ಆಚರಿಸುತ್ತಾರೆ. ಹೀಗೆ ಕಳೆದ ವರ್ಷ ಚಿಕ್ಕ ಮಕ್ಕಳ ಜೊತೆ ವೈಷ್ಣವ ಕೂಡ ನೃತ್ಯ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅಲ್ಲದೆ ಯುವತಿಯ ಎಕ್ಸ್ ಪ್ರೆಶನ್ ಗೆ ಜನ ಫಿದಾ ಆಗಿದ್ದಾರೆ.

    https://www.youtube.com/watch?time_continue=39&v=4r29WrG6JbY