Tag: tipaturu

  • ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ – ಸವಾರ ಸ್ಥಳದಲ್ಲಿಯೇ ಸಾವು

    ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ – ಸವಾರ ಸ್ಥಳದಲ್ಲಿಯೇ ಸಾವು

    ತುಮಕೂರು: ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಎಚ್.ಬೈರಾಪುರ ಗೇಟ್ ಬಳಿ ವಿದ್ಯುತ್ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮೃತ ವ್ಯಕ್ತಿಯನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಲಕ್ಷ್ಮೀಪುರ ಗ್ರಾಮದ ಶ್ರೀಧರ್ (25) ಎಂದು ಗುರುತಿಸಲಾಗಿದೆ. ತಿಪಟೂರಿನ ಹುಚ್ಚನಟ್ಟಿ ಚಿಪ್ಪು ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಧರ್, ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ತಮ್ಮ ಬೈಕಿನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಎಚ್.ಬೈರಾಪುರ ಗೇಟ್ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

    ಘಟನೆಯಲ್ಲಿ ಬೈಕ್ ಚಲಾಯಿಸುತ್ತಿದ್ದ ಶ್ರೀಧರ್, ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಅದೇ ಗ್ರಾಮದ ನಿವಾಸಿ ಮಂಜುನಾಥ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗೆ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೊನ್ನವಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ:ತಂದೆಯಿಂದಲೇ ಮಗನ ಬರ್ಬರ ಹತ್ಯೆ!

  • ಜೀವನಾಡಿ ಹೇಮೆಯ ಒಡಲು ಸೇರುತ್ತಿದೆ ಯುಜಿಡಿ ಕಲುಷಿತ ನೀರು

    ಜೀವನಾಡಿ ಹೇಮೆಯ ಒಡಲು ಸೇರುತ್ತಿದೆ ಯುಜಿಡಿ ಕಲುಷಿತ ನೀರು

    ತುಮಕೂರು: ತುಮಕೂರು-ತಿಪಟೂರು ನಗರದ ಯುಜಿಡಿ ಕಲುಷಿತ ನೀರು ಹೇಮಾವತಿ ನಾಲೆಗೆ ಹರಿಯುತ್ತಿದೆ. ಜಿಲ್ಲೆಯ ಜನರ ಜೀವನಾಡಿ ಹೇಮಾವತಿ ನಾಲೆ ನೀರು ಮಲಿನವಾಗ್ತಿದೆ.

    ಹಾಸನ ಜಿಲ್ಲೆಯ ಗೋರೂರು ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ವಿವಿಧ ಕೆರೆಗಳಿಗೆ ನಾಲೆ ಮೂಲಕ ಹರಿಯುತ್ತಿರುವ ನೀರು ತಿಪಟೂರು ತಾಲೂಕಿನ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮಾಲಿನ್ಯಗೊಳ್ಳುತ್ತಿದೆ.

    ತಿಪಟೂರು ನಗರದ ಹೃದಯಭಾಗದಲ್ಲಿರುವ ಅಮಾನಿಕೆರೆ ತುಂಬಿ ಹರಿಯುವ ನೀರು ರಾಜಕಾಲುವೆ ಮೂಲಕ ಗೊರಗೊಂಡನಹಳ್ಳಿ, ಕೊಪ್ಪ, ಹುಲ್ಲುಕಟ್ಟೆ ಮಾರ್ಗವಾಗಿ ಹೇಮಾವತಿ ನಾಲೆ ಹಾದು ಈಚನೂರು ಕೆರೆ ಸೇರುತ್ತದೆ. ಈ ರಾಜ ಕಾಲುವೆಯಲ್ಲಿ ಹಲವು ವರ್ಷಗಳಿಂದ ತಿಪಟೂರು ನಗರದ ಯುಜಿಡಿ ಕೊಳಚೆ ನೀರು ಈಚನೂರು ಕೆರೆಗೆ ಬಂದು ಸೇರುತ್ತಿದೆ. ಇದೇ ಕೆರೆಯಿಂದ ಹಾಸನ ಜಿಲ್ಲೆಯ ಅರಸೀಕೆರೆ, ತಿಪಟೂರು ನಗರಕ್ಕೆ ನೀರು ಸರಬರಾಜು ಮಾಡಲಾಗ್ತಿದೆ. ತಿಪಟೂರು ನಗರದ ಜನರು ತಾವು ಬಳಸಿದ ಕಲುಷಿತ ನೀರನ್ನ ತಾವೇ ತಮಗರಿವಿಲ್ಲದಂತೆ ಕುಡಿಯುತ್ತಿದ್ದಾರೆ. ಇದೀಗ ಕಲುಷಿತ ನೀರು ನಾಲೆ ಸೇರುತ್ತಿದ್ದು, ತುಮಕೂರು ಜನರು ಇದೇ ನೀರನ್ನ ಕುಡಿಯುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ.

    ನಗರದ ಯುಜಿಡಿ ಕೊಳಚೆ ನೀರು ಹಾಗೂ ಚರಂಡಿಯ ನೀರು ರಾಜಕಾಲುವೆ ಮೂಲಕ ಹಳ್ಳಗಳ ಮೂಲಕ ಹರಿದು ನೇರವಾಗಿ ಈಚನೂರು ಬಳಿ ಹೇಮಾವತಿ ನಾಲೆ ಸೇರುತ್ತಿದೆ. ನಗರದ ತ್ಯಾಜ್ಯ ಹಾಗೂ ವಿಷಪೂರಿತ ನೀರು ನಾಲೆಗೆ ಸೇರಿ ನಾಲೆ ಪ್ರದೇಶ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಕೃಷಿ ಹಾಗೂ ಕುಡಿಯಲು ಬಳಕೆಯಾಗುತ್ತದೆ. ತುಮಕೂರು ನಗರ ಸೇರಿದಂತೆ ಗ್ರಾಮಾಂತರದ ಜನರೂ ಸಹ ಇದೆ ನೀರನ್ನ ಬಳಸಬೇಕಿದೆ.

    ತಿಪಟೂರು ನಗರಸಭೆಯ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾಡಳಿತ ತ್ಯಾಜ್ಯದ ನೀರು ಹೇಮೆ ಒಡಲು ಸೇರದಂತೆ ಕ್ರಮವಹಿಸಬೇಕು ಸಾರ್ವಜನಿಕರಿಗೆ ಶುದ್ದ ಹೇಮಾವತಿ ನೀರು ದೊರೆಯುವಂತೆ ಮಾಡಬೇಕಿದೆ.

  • ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿಗೆ ಬಿಗ್ ಶಾಕ್

    ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿಗೆ ಬಿಗ್ ಶಾಕ್

    ತುಮಕೂರು: ತಿಪಟೂರು ಕ್ಷೇತ್ರದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆ ನಡೆಯಲು ವೇದಿಕೆ ಸಜ್ಜಾಗ್ತಿದೆ. ಮೂರನೇ ಬಾರಿ ಆಯ್ಕೆ ಬಯಸಿ ಕಣಕ್ಕಿಳಿಯಲಿರುವ ಕಾಂಗ್ರೆಸ್ ಶಾಸಕ ಷಡಕ್ಷರಿ ಅವರಿಗೆ ಶಾಕ್ ಕೊಡಲೆಂದು ಅವರ ಎರಡನೇ ಪತ್ನಿ ಎನ್ನಲಾದ ಮಹಿಳೆಯೋರ್ವರು ಸನ್ನದ್ಧರಾಗಿದ್ದಾರೆ.

    ಮಧುಕುಮಾರಿ ಕೆ ಎಂಬವರು ಶಾಸಕ ಷಡಕ್ಷರಿ ವಿರುದ್ಧ ಈ ಬಾರಿ ಬಿಜೆಪಿ, ಜೆಡಿಎಸ್ ಗಿಂತ ಪ್ರಬಲ ಸ್ಪರ್ಧೆ ನೀಡಲು ಸಿದ್ಧರಾಗಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಮಧುಕುಮಾರಿಯನ್ನು ರಹಸ್ಯವಾಗಿ ಷಡಕ್ಷರಿ ಮದುವೆಯಾಗಿ ಈಗ ನನಗೂ ಅವಳಿಗೂ ಸಂಬಂಧ ಇಲ್ಲ ಅನ್ನುತಿದ್ದಾರೆ. ಆದ್ರೆ ಇತ್ತ ಷಡಕ್ಷರಿ ಅವರಿಂದ ತನಗೂ ತನ್ನ ಮಗನಿಗೂ ಆಗಿರುವ ಭಾರೀ ದೊಡ್ಡ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲೆಂದೇ ಪತ್ನಿ ಮಧು ಸನ್ನದ್ಧವಾಗಿದ್ದಾರೆ. ಇದಕ್ಕಾಗಿ ಅವರು ಇನ್ನೇನು ಕೆಲ ದಿನಗಳಲ್ಲೇ ತಿಪಟೂರಿಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.

    ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧರಾಗಿರೋ ಮಧು ಅವರ ಸ್ಪರ್ಧೆಯಿಂದಾಗಿ ಷಡಕ್ಷರಿಗೆ ತೀವ್ರ ತಲೆನೋವು ಸೃಷ್ಟಿಯಾಗಿದೆ. ಇದರ ಲಾಭ ಸಹಜವಾಗೇ ಷಡಕ್ಷರಿ ಅವರ ರಾಜಕೀಯ ವಿರೋಧಿಗಳಿಗೆ ಆಗಲಿದೆ ಎಂಬುದಾಗಿ ರಾಜಕೀಯವಲಯದಲ್ಲಿ ಚರ್ಚೆಯಾಗುತ್ತಿದೆ.