Tag: Tiktok

  • ಹೆಚ್ಚು ಲೈಕ್ಸಿಗೆ ಹುಚ್ಚು ಸಾಹಸ – ಸ್ನೇಹಿತರೆದುರೇ ಜೀವಬಿಟ್ಟ ಟಿಕ್‍ಟಾಕ್ ಸ್ಟಾರ್

    ಹೆಚ್ಚು ಲೈಕ್ಸಿಗೆ ಹುಚ್ಚು ಸಾಹಸ – ಸ್ನೇಹಿತರೆದುರೇ ಜೀವಬಿಟ್ಟ ಟಿಕ್‍ಟಾಕ್ ಸ್ಟಾರ್

    ಕೋಲ್ಕತ್ತಾ: ಇತ್ತೀಚೆಗೆ ಟಿಕ್‍ಟಾಕ್ ಅನ್ನು ಹೆಚ್ಚಾಗಿ ಎಲ್ಲರೂ ಬಳಸುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕ, ಯುವತಿಯರು, ವೃದ್ಧರು ಕೂಡ ಟಿಕ್‍ಟಾಕ್‍ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಟಿಕ್‍ಟಾಕ್ ವಿಡಿಯೋ ಮೂಲಕ ಹೆಚ್ಚು ಲೈಕ್ಸ್ ಪಡೆಯಲು ಹುಚ್ಚು ಸಾಹಸ ಮಾಡಲು ಹೋಗಿ ಸ್ನೇಹಿತರೆದುರೇ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

    ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಪೀಗಂಜ್ ಪ್ರದೇಶದ ಕರೀಮ್ ಶೇಖ್(17) ಮೃತ ಯುವಕ. ಮಂಗಳವಾರ ಈತ ತನ್ನ ಸ್ನೇಹಿರೊಂದಿಗೆ ಸೇರಿ ಟಿಕ್‍ಟಾಕ್ ವಿಡಿಯೋ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದಾನೆ. ಟಿಕ್‍ಟಾಕ್‍ನಲ್ಲಿ ಸದಾ ಮುಳುಗಿರುತ್ತಿದ್ದ ಶೇಖ್ ಯಾವಾಗಲೂ ವಿಡಿಯೋ ಮಾಡುವುದರಲ್ಲೇ ಬ್ಯುಸಿಯಾಗಿರುತ್ತಿದ್ದನು. ಎಂದಿನಂತೆ ಮಂಗಳವಾರ ಕೂಡ ಸ್ನೇಹಿತರೊಂದಿಗೆ ಸೇರಿ ವಿಡಿಯೋ ಮಾಡಲು ಮುಂದಾಗಿದ್ದನು. ಆದರೆ ಟಿಕ್‍ಟಾಕ್‍ನಲ್ಲಿ ಹೆಚ್ಚು ಲೈಕ್ಸ್ ಪಡೆಯಲು ಶೇಖ್ ಹುಚ್ಚು ಸಾಹಸಕ್ಕೆ ಕೈಹಾಕಿದನು. ಇದಕ್ಕೆ ಆತನ ಮೂವರು ಅಪ್ರಾಪ್ತ ಸ್ನೇಹಿತರು ಕೂಡ ಸಾಥ್ ಕೊಟ್ಟಿದ್ದರು.

    ಗ್ರಾಮದಲ್ಲಿದ್ದ ಒಂದು ವಿದ್ಯುತ್ ಕಂಬಕ್ಕೆ ನನ್ನನ್ನು ಹಗ್ಗದಿಂದ ಕಟ್ಟಿ ಹಾಕಿ, ಮುಖಕ್ಕೆ ಪ್ಲಾಸ್ಟಿಕ್ ಕವರ್ ಕಟ್ಟಿ. ಅದನ್ನು ನಾನು ಬಿಚ್ಚುತ್ತೇನೆ. ಈ ದೃಶ್ಯವನ್ನು ವಿಡಿಯೋ ಮಾಡಿ ಎಂದು ಶೇಖ್ ಸ್ನೇಹಿತರಿಗೆ ತಿಳಿಸಿದ್ದನು. ಆದ್ದರಿಂದ ಸ್ನೇಹಿತರು ಶೇಖ್ ಹೇಳಿದಂತೆ ಆತನನ್ನು ಕಟ್ಟಿ ಹಾಕಿ ವಿಡಿಯೋ ಮಾಡುತ್ತಿದ್ದರು. ಈ ವೇಳೆ ಮುಖಕ್ಕೆ ಪ್ಲಾಸ್ಟಿಕ್ ಕಟ್ಟಿದ್ದ ಪರಿಣಾಮ ಶೇಖ್‍ಗೆ ಉಸಿರಾಡಲು ಆಗದೆ ನರಳಾಡುತ್ತಿದ್ದನು. ಆದರೆ ಆತನ ಸ್ನೇಹಿತರು ವಿಡಿಯೋ ಚೆನ್ನಾಗಿ ಆಗಲೆಂದು ಶೇಖ್ ನಟನೆ ಮಾಡುತ್ತಿದ್ದಾನೆ ಅಂದುಕೊಂಡರು. ಹೀಗೆ ವಿಡಿಯೋ ಮಾಡುತ್ತಿದ್ದ ವೇಳೆಯೇ ಶೇಖ್ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಎಷ್ಟೇ ಹೊತ್ತು ವಿಡಿಯೋ ಮಾಡಿದರೂ ಶೇಖ್ ಯಾಕೆ ಹಗ್ಗ ಕಟ್ಟಿದ್ದನ್ನ ಬಿಡಿಸಿಕೊಳ್ಳುತ್ತಿಲ್ಲ ಎಂದು ಸ್ನೇಹಿತರು ಹತ್ತಿರ ಹೋಗಿ ನೋಡಿದಾಗ ಆತ ಮೃತಪಟ್ಟಿರುವುದು ತಿಳಿದಿದೆ. ಇದರಿಂದ ಗಾಬರಿಗೊಂಡ ಮೂವರು ಸ್ನೇಹಿತರು ಮೃತದೇಹವನ್ನ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳೀಯರು ಶೇಖ್‍ನನ್ನು ಗಮನಿಸಿ ತಕ್ಷಣ ಆತನನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ ಶೇಖ್ ಸಾವನ್ನಪ್ಪಿದ್ದಾನೆ ಎಂದು ವೈದರು ತಿಳಿಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

  • ಟಿಕ್‍ಟಾಕ್ ವಿಡಿಯೋಗಾಗಿ ವಿವಿ ಸಾಗರ ಜಲಾಶಯದಲ್ಲಿ ಯುವಕನಿಂದ ದುಸ್ಸಾಹಸ

    ಟಿಕ್‍ಟಾಕ್ ವಿಡಿಯೋಗಾಗಿ ವಿವಿ ಸಾಗರ ಜಲಾಶಯದಲ್ಲಿ ಯುವಕನಿಂದ ದುಸ್ಸಾಹಸ

    ಚಿತ್ರದುರ್ಗ: ಟಿಕ್‍ಟಾಕ್ ವಿಡಿಯೋ ಮಾಡಲು ಯುವಕನೊಬ್ಬ ವಿ.ವಿ ಸಾಗರ ಡ್ಯಾಂ ಮೇಲಿನಿಂದ ಜಿಗಿದು ನೀರಲ್ಲಿ ಈಜಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.

    ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ವಿ.ವಿ ಪುರ ಗ್ರಾಮದ ಬಳಿ ಇರುವ ವಾಣಿ ವಿಲಾಸ ಸಾಗರ ಜಲಾಶಯ 132 ಅಡಿ ಎತ್ತರವಿದೆ. ಹೊಸ ವರ್ಷದ ದಿನವಾದ ಬುಧವಾರ ಅತಿ ಹೆಚ್ಚು ಪ್ರವಾಸಿಗರು ವಿವಿ ಸಾಗರ ಡ್ಯಾಂಗೆ ಆಗಮಿಸಿದ್ದರು.

    ಇಂದು ಬೆಳಗ್ಗೆ ವಿವಿ ಸಾಗರಕ್ಕೆ ಆಗಮಿಸಿದ ಯುವಕನೊಬ್ಬ ಜಲಾಶಯದ ಕಟ್ಟೆ ಮೇಲಿಂದ ಹಾರಿದ್ದಾನೆ. ಈ ದುಸ್ಸಾಹಸ ಕಂಡು ನೆರೆದಿದ್ದ ಪ್ರವಾಸಿಗರು ಬೆರಗಾಗಿದ್ದಾರೆ. ಈ ಯುವಕನ ದುಸ್ಸಾಹಸದಿಂದಾಗಿ ಬಾರಿ ಆತಂಕ ಸೃಷ್ಟಿಯಾಗಿದ್ದು, ಕೆಲಕಾಲ ಪ್ರವಾಸಿಗರ ವೀಕ್ಷಣೆಗೆ ಬ್ರೇಕ್ ಹಾಕಲಾಗಿತ್ತು.

    ಅದೃಷ್ಟವಶಾತ್ ಈಜಿ ದಡ ಸೇರಿರುವ ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಸದ್ಯ ಈ ಯುವಕನ ದುಸ್ಸಾಹಸದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿರುವ ಯುವಕ ಯಾರು ಎಂಬುದು ತಿಳಿದು ಬಂದಿಲ್ಲ.

  • ಮೋದಿ, ಶಾ ವಿರುದ್ಧ ಅವಹೇಳನಕಾರಿ ಟಿಕ್‍ಟಾಕ್- ಯುವಕನ ಬಂಧನ

    ಮೋದಿ, ಶಾ ವಿರುದ್ಧ ಅವಹೇಳನಕಾರಿ ಟಿಕ್‍ಟಾಕ್- ಯುವಕನ ಬಂಧನ

    ಚಿಕ್ಕೋಡಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮೀತ್ ಶಾ ವಿರುದ್ಧ ಅವಹೇಳನಕಾರಿ ಟಿಕ್ ಟಾಕ್ ವಿಡಿಯೋ ಮಾಡಿದ್ದ ಯುವಕನನ್ನು ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ.

    ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿ ಅಮನ ವಾಹಿದ ಅವಟೆ ಬಂಧಿತ ಯುವಕ. ಬಂಧಿತ ಆರೋಪಿ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ.

    ಆರೋಪಿಯ ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದ ಪೋಸ್ಟ್ ಗಳ ಮೇಲೆ ನಿಗಾ ಇಟ್ಟಿದ್ದ ಸಂಕೇಶ್ವರ ಪೊಲೀಸರು ಯುವಕನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 153, 505 (1)ರ (ಸಮಾಜದ ಸಾಮರಸ್ಯ ಹಾಳು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯುವಕರನ್ನು ನಾಚಿಸುವಂತೆ ಟಿಕ್‍ಟಾಕ್‍ನಲ್ಲಿ ಅಜ್ಜಿ ಫುಲ್ ಮಿಂಚಿಂಗ್

    ಯುವಕರನ್ನು ನಾಚಿಸುವಂತೆ ಟಿಕ್‍ಟಾಕ್‍ನಲ್ಲಿ ಅಜ್ಜಿ ಫುಲ್ ಮಿಂಚಿಂಗ್

    ಬೆಳಗಾವಿ: ಯುವಕರು, ವೃದ್ಧರು ಎಂಬ ಬೇಧವಿದ್ದದೆ ಎಲ್ಲರೂ ಟಿಕ್‍ಟಾಕ್ ವಿಡಿಯೋ ಮಾಡವುದು ಒಂದು ರೀತಿ ಟ್ರೆಂಡ್ ಆಗಿಬಿಟ್ಟಿದೆ. ಹಾಗೆಯೇ ಬೈಲಹೊಂಗಲದ ಅಜ್ಜಿಯೊಬ್ಬರು ಟಿಕ್‍ಟಾಕ್ ವಿಡಿಯೋ ಮಾಡುವುದರ ಮೂಲಕ ಸಖತ್ ಫೇಮಸ್ ಆಗಿಬಿಟ್ಟಿದ್ದಾರೆ.

    ಯುವಕರು ನಾಚಿಸುವಂತೆ ಟಿಕ್‍ಟಾಕ್ ಮಾಡಿ ಬೈಲಹೊಂಗಲದ ವಕ್ಕುಂದ ಗ್ರಾಮದ ರುಕ್ಮವ್ವ(95) ಭಾರೀ ಫೇಮಸ್ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರುಕ್ಕವ್ವ ಅವರ ಟಿಕ್‍ಟಾಕ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದೆ. ಅಲ್ಲದೆ ಟಿಕ್‍ಟಾಕ್ ವಿಡಿಯೋಗಳಲ್ಲಿ ಅಜ್ಜಿಗೆ ಸಾಥ್ ನೀಡಿದ ಇಬ್ಬರೂ ಯುವಕರು ಕೂಡ ನೋಡುಗರ ಮೆಚ್ಚುಗೆ ಗಳಿಸಿದ್ದಾರೆ.

    ಟಿಕ್‍ಟಾಕ್‍ನಲ್ಲಿ ಅವರ ವಿಡಿಯೋ ಅಂದರೆ ಸಾಕು ಸಾವಿರಾರು ಲೈಕ್ಸ್, ಕಮೆಂಟ್ಸ್ ಬರುತ್ತಿದೆ. ಸಾಕಷ್ಟು ಮಂದಿ ಇವರ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಈಗ ಫೇಸ್‍ಬುಕ್ ಖಾತೆ ಇಲ್ಲದೆ ಇದ್ದರೂ ಪರವಾಗಿಲ್ಲ, ಟಿಕ್‍ಟಾಕ್ ಖಾತೆ ಮಾತ್ರ ತೆರದಿರಲೇಬೇಕು ಎನ್ನುವಂತಹ ಸ್ಥಿತಿ ಬಂದಿದೆ. ಯುವಕರಿಂದ ಇಳಿವಯಸ್ಸಿನವರೂ ಸಾಮಾಜಿಕ ಜಾಲತಾಣದಲ್ಲಿ, ಟಿಕ್‍ಟಾಕ್ ಮಾಡುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಅದರಲ್ಲೂ ರುಕ್ಕವ್ವ ಅಜ್ಜಿ ಈಗ ಟಿಕ್‍ಟಾಕ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

    ವಕ್ಕುಂದ ಗ್ರಾಮದ ನೇಕಾರಗಲ್ಲಿಯಲ್ಲಿ ಫಕ್ಕಿರಪ್ಪ ಕಾಂಬಳೆ, ಮಂಜುನಾಥ ಬುಚಡಿ ಚಕ್ಕುಂದ ಮತ್ತು ಮಾರುತಿ ಬುಚಡಿ ಅವರು ಟಿಕ್‍ಟಾಕ್‍ನಲ್ಲಿ ಫುಲ್ ಫೇಮಸ್ ಆಗುತ್ತಿದ್ದು, ಪಕ್ಕಾ ಉತ್ತರ ಕರ್ನಾಟಕದ ಭಾಷೆಯ ಸೊಗಡಿನ ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಒಂದೇ ಕುಟುಂಬದಂತೆ ಅಜ್ಜಿ ರುಕ್ಮವ್ವ, ಫಕ್ಕಿರ ಕಾಂಬಳೆ, ಮಂಜುನಾಥ ಬುಚಡಿ, ಮಾರುತಿ ಬುಚಡಿ, ಮತ್ತು ಮತ್ತು ರಾಜು ಕಾಂಬಳೆ ಮಾಡಿದ ಟಿಕ್‍ಟಾಕ್ ವಿಡಿಯೋಗಳಿಗೆ ಸಾವಿರಾರು ಲೈಕ್ ಸಿಗುತ್ತಿರುತ್ತದೆ. ಆದ್ದರಿಂದ ಅಜ್ಜಿಯ ಜೊತೆ ಯುವಕರು ಟಿಕ್‍ಟಾಕ್ ಮಾಡಲು ಮುಗಿಬಿದಿದ್ದಾರೆ.

    ಪಕ್ಕಿರ ಕಾಂಬಳೆ ಟಿಕ್‍ಟಾಕ್ ಖಾತೆಯಲ್ಲಿ 1 ಲಕ್ಷ 40 ಫಾಲೋವರ್ಸ್ ಇದ್ದರೆ, ಮಂಜುನಾಥ್ ಬುಚಡಿ ಅವರಿಗೆ 55 ಸಾವಿರ ಫಾಲೋವರ್ಸ್ ಇದ್ದಾರೆ. ಮಾರುತಿ ಬುಚಡಿ 40 ಸಾವಿರ ಫಾಲೋವರ್ಸ್ ಇದ್ದಾರೆ. ಅಜ್ಜಿ ರುಕ್ಮವ್ವ ಲೋಕರಿ, ರಾಜು ಕಾಂಬಳೆ ಇತರರು ಸೇರಿ ಹೆಚ್ಚಾಗಿ ಟಿಕ್‍ಟಾಕ್ ಮಾಡುತ್ತಿರುತ್ತಾರೆ. ಯುವಕರಿಗೆ ಅಜ್ಜಿ ಹೇಳಿವ ಪಂಚಿಂಗ್ ಡೈಲಾಗ್‍ನಿಂದ ಅವರು ಟಿಕ್‍ಟಾಕ್ ಸ್ಟಾರ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಜ್ಜಿ ಟಿಕ್‍ಟಾಕ್ ಹವಾ ಜೋರಾಗಿದೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಿಕ್‍ಟಾಕ್ ಸ್ಟಾರ್ಸ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಿಕ್‍ಟಾಕ್ ಸ್ಟಾರ್ಸ್

    ಬೆಂಗಳೂರು: ಟಿಕ್‍ಟಾಕ್ ಮೂಲಕ ಖ್ಯಾತಿ ಪಡೆದಿರುವ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈ ಜೋಡಿಯ ಮದುವೆಯಲ್ಲಿ ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭಾಗವಹಿಸಿದ್ದು, ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.

    ಟಿಕ್ ಟಾಕ್ ಮಾಡುವ ಮೂಲಕ ಅಲ್ಲು ರಘು ಮತ್ತು ಸುಷ್ಮಿತಾ ಶೇಷಗಿರಿ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿತ್ತು. ಈ ಜೋಡಿ ಗುರುವಾರ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ವರ ರಘು, ಧ್ರುವ ಸರ್ಜಾ ಅವರ ಅಭಿಮಾನಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ತನ್ನ ನೆಚ್ಚಿನ ನಟನನ್ನು ಮದುವೆಗೆ ಆಹ್ವಾನಿಸಿದ್ದರು. ಅಭಿಮಾನಿಯ ಆಹ್ವಾನವನ್ನು ಸ್ವೀಕರಿಸಿದ್ದ ಧ್ರುವ ಅವರು ವಿವಾಹ ಕಾರ್ಯಕ್ರಮಕ್ಕೆ ತೆರಳಿ ವಿಶ್ ಮಾಡಿದ್ದಾರೆ.

    ರಘು ಮತ್ತು ಸುಷ್ಮಿತಾ ಸ್ನೇಹಿತರಾಗಿದ್ದರು. ನಂತರ ಡಬ್‍ಸ್ಮಾಶ್ ಮಾಡಲು ಶುರು ಮಾಡಿದರು. ಇವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದವು. ಈ ಮೂಲಕ ಇವರಿಬ್ಬರಿಗೆ ಫಾಲೋವರ್ಸ್‍ಗಳ ಸಂಖ್ಯೆಗಳ ಕೂಡ ಹೆಚ್ಚಾಯಿತು. ಇದರಿಂದ ಈ ಜೋಡಿ ಖ್ಯಾತಿ ಪಡೆದುಕೊಂಡಿದೆ.

    ರಘು ‘ಒಂದೊಪ್ಪತ್ತು’ ಎಂಬ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ‘ಆರ್ಯಶಿವ’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ.

    https://www.instagram.com/p/B4jUy1gnfXv/

  • ಸೋಲಿನಿಂದ ಭಾವನಾತ್ಮಕ ವಿಡಿಯೋ ಹರಿಬಿಟ್ಟ ಸೋನಾಲಿ ಪೋಗಟ್

    ಸೋಲಿನಿಂದ ಭಾವನಾತ್ಮಕ ವಿಡಿಯೋ ಹರಿಬಿಟ್ಟ ಸೋನಾಲಿ ಪೋಗಟ್

    ಚಂಡೀಗಢ: ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕುಲದೀಪ್ ಬಿಶ್ನೋಯಿ ವಿರುದ್ಧ ಸೋನಾಲಿ ಪೋಗಟ್ ಸೋಲು ಅನುಭವಿಸಿದ್ದಾರೆ. ಈ ಬೇಸರದಲ್ಲೇ ಸೋನಾಲಿ ಭಾವನಾತ್ಮಕ ವಿಡಿಯೋ ಮಾಡಿ ಟಿಕ್‍ಟಾಕ್‍ನಲ್ಲಿ ಹಂಚಿಕೊಂಡಿದ್ದು, ಸದ್ಯ ಸಖತ್ ವೈರಲ್ ಆಗಿದೆ.

    ಹರ್ಯಾಣದ ಟಿಕ್‍ಟಾಕ್ ಸ್ಟಾರ್ ಸೋನಾಲಿ ಪೋಗಟ್ ಜನಪ್ರಿಯತೆಯನ್ನು ಲಾಭ ಪಡೆದುಕೊಳ್ಳಲು ಹೊರಟಿದ್ದ ಬಿಜೆಪಿ, ಅವರಿಗೆ ಅದಮ್‍ಪುರ ಕ್ಷೇತ್ರದಿಂದ ಟಿಕೆಟ್ ಕೊಟ್ಟಿತ್ತು. ಆದರೆ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಶ್ನೋಯಿ ಎದುರು ಸೋನಾಲಿ ಪೋಗಟ್ ಸೋಲನ್ನು ಅನುಭವಿಸಿದರು. ಇದೇ ಬೇಸರದಲ್ಲಿದ್ದ ಸೋನಾಲಿ ಭಾವನಾತ್ಮಕ ವಿಡಿಯೋ ಒಂದನ್ನು ಮಾಡಿ ಟಿಕ್‍ಟಾಕ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೆ ವಿಡಿಯೋ ನೋಡಿದ ನೆಟ್ಟಿಗರು ಸೋನಾಲಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ.

    https://twitter.com/scribe_prashant/status/1187343307199770624

    ಆದಂಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದು, 11 ಬಾರಿ ಬಿಶ್ನೋಯಿ ಕುಟುಂಬದ ಸದಸ್ಯರೇ ಸತತವಾಗಿ ಗೆಲುವಿನ ವಿಜಯಮಾಲೆ ಧರಿಸುತ್ತಾ ಬಂದಿದ್ದಾರೆ. ಹೀಗಾಗಿ 29,471 ಮತಗಳ ಅಂತರದಿಂದ ಸೋನಾಲಿ ಪೋಗಟ್ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಷ್ಣೋಯಿ ಎದುರು ಸೋತಿದ್ದಾರೆ. ಕುಲದೀಪ್ ಬಿಶ್ನೋಯಿ 63,693 (ಶೇ.51.7) ಮತಗಳನ್ನು ಪಡೆದುಕೊಂಡಿದ್ದಾರೆ. ಸೋನಾಲಿ ಪೋಗಟ್ 34,222 (ಶೇ.27.78) ಮತಗಳನ್ನು ಪಡೆದುಕೊಂಡಿದ್ದಾರೆ.

    ಹರ್ಯಾಣದ ಹಿಸಾರ್ ಜಿಲ್ಲೆಯ ಸಂತ ನಗರದ ನಿವಾಸಿ ಸೋನಾಲಿ ತಮ್ಮ ಟಿಕ್ ಟಾಕ್ ವಿಡಿಯೋಗಳ ಮೂಲಕ ಚರ್ಚೆಯಲ್ಲಿದ್ದರು. ಹರ್ಯಾಣದ ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಸೋನಾಲಿ ಆದಂಪುರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಹರ್ಯಾಣ ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯೆಯಾಗಿದ್ದರಿಂದ ಸೋನಾಲಿ ಪೋಗಟ್ ಟಿಕೆಟ್ ಪಡೆದು ಚುನಾವಣಾ ಕಣಕ್ಕೆ ಇಳಿದಿದ್ದರು.

    ಹರ್ಯಾಣದ ಮಾಜಿ ಮುಖ್ಯಮಂತ್ರಿ ಚೌಧರಿ ಭಜನ್ ಲಾಲ್ ಪುತ್ರ ಕುಲದೀಪ್ ಬಿಶ್ನೋಯಿ ಕ್ಷೇತ್ರ ಉಳಿಸಿಕೊಳ್ಳಲು ಭಾರೀ ಪ್ರಚಾರ ನಡೆಸಿದ್ದರು. ಹರ್ಯಾಣ 12 ವಿಧಾನಸಭಾ ಚುನಾವಣೆಯಲ್ಲಿ 11 ಬಾರಿ ಆದಂಪುರ ಕ್ಷೇತ್ರದಲ್ಲಿ ಬಿಶ್ನೋಯಿ ಕುಟುಂಬಸ್ಥರೇ ಗೆಲ್ಲುತ್ತಾ ಬಂದಿದ್ದಾರೆ. ಜಾಟ್ ಸಮುದಾಯದ ಕುಲದೀಪ್ ಮೂರು ಬಾರಿ ಶಾಸಕರಾಗಿ ಮತ್ತು ಒಂದು ಸಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹರ್ಯಾಣ ಕಾಂಗ್ರೆಸ್ಸಿನ ಜಾಟ್ ಸಮುದಾಯದ ನಾಯಕರಾಗಿಯೂ ಕುಲದೀಪ್ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಹರ್ಯಾಣದ ಹೆಚ್ಚು ಜಾಟ್ ಸಮುದಾಯದ ಜನರು ವಾಸಿಸುವ ಕ್ಷೇತ್ರಗಳಲ್ಲಿ ಕುಲ್‍ದೀಪ್ ಕೈ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದರು. ಜನ್‍ನಾಯಕ್ ಜನತಾ ಪಾರ್ಟಿಯ ರಮೇಶ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. ಆದಂಪುರ ವಿಧಾನಸಭಾ ಚುನಾವಣಾ ಕಣದಲ್ಲಿ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.

  • ‘Wait & See’ ಹೇಳುತ್ತಲೇ ಮೂವರ ಕೊಲೆಗೈದ ಟಿಕ್‍ಟಾಕ್ ಸ್ಟಾರ್ ಆತ್ಮಹತ್ಯೆ

    ‘Wait & See’ ಹೇಳುತ್ತಲೇ ಮೂವರ ಕೊಲೆಗೈದ ಟಿಕ್‍ಟಾಕ್ ಸ್ಟಾರ್ ಆತ್ಮಹತ್ಯೆ

    ಲಕ್ನೋ: ‘ವೈಟ್ ಆ್ಯಂಡ್ ಸೀ’ ಎನ್ನುತ್ತಲೇ ತನ್ನ ಮನದರಿಸಿ ಸೇರಿ ಮೂವರನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ಟಿಕ್ ಟಾಕ್ ಸ್ಟಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    33 ವರ್ಷದ ಅಶ್ವನಿ ಕುಮಾರ್ ಅಲಿಯಾಸ್ ಜಾನಿ ದಾದ ಮೂವರನ್ನು ಕೊಲೆಗೈದು ಪರಾರಿಯಾಗಿದ್ದು, ಇದೀಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈತ ಟಿಕ್ ಟಾಕ್ ವಿಡಿಯೋ ಹಾಗೂ ಕೆಲವೊಂದು ಫೋಟೋಗಳನ್ನು ತನ್ನ ಫೇಸ್ ಬುಕ್ ನಲ್ಲಿ ಹಾಕಿ ಪೋಸ್ಟ್ ಮಾಡಿಕೊಂಡಿದ್ದನು. ಅಲ್ಲದೆ ನನ್ನ ಹಾನಿ ನೋಡಿ, ಎಲ್ಲವನ್ನೂ ನಾಶ ಮಾಡುತ್ತೇನೆ. ನಾನು ನಂಬಿದವರೇ ನನಗೆ ನೋವುಂಟು ಮಾಡಿ ಅವಮಾನ ಮಾಡಿದ್ದಾರೆ. ಹೀಗಾಗಿ ನಾನು ಅವರನ್ನು ಸುಮ್ಮನೆ ಬಿಡಲ್ಲ ಎಂದೆಲ್ಲ ಬರೆದುಕೊಂಡಿದ್ದನು.

    ಸೆಪ್ಟೆಂಬರ್ 26ರಂದು ಬಧಪುರ್ ನ ಬಿಜ್ನೋರ್ ಗೆ ಮದ್ಯಪಾನ ಮಾಡಲೆಂದು ಸ್ಥಳೀಯ ಬಿಜೆಪಿ ನಾಯಕ ಭೀಮ್ ಸಿಂಗ್ ಕಶ್ಯಪ್ ಮಗ 24 ವರ್ಷದ ಚಂದ್ರ ಭೂಷಣ್ ಅಲಿಯಾಸ್ ರಾಹುಲ್ ಹಾಗೂ ಆತನ ಸಹೋದರ 25 ವರ್ಷದ ಕೃಷ್ಣ ಅಲಿಯಾಸ್ ಲಾಲ ಎಂಬಿಬ್ಬರನ್ನು ಕರೆದು ಕೊಲೆ ಮಾಡಿರುವ ಆರೋಪ ಅಶ್ವನಿ ಕುಮಾರ್ ಮೇಲಿತ್ತು.

    ಇಷ್ಟು ಮಾತ್ರವಲ್ಲದೆ ಅಶ್ವನಿ, ಮಾಜಿ ಗಗನಸಖಿ 27 ವರ್ಷದ ನಿಖಿತಾ ಶರ್ಮಾಳನ್ನು ಸೆ.30ರಂದು ಆಕೆಯ ಮನೆಯಲ್ಲಿಯೇ ಹತ್ಯೆ ಮಾಡಿದ್ದನು. ಈ ಕೊಲೆಯ ಬಳಿಕ ಅಶ್ವನಿ ದೌಲತಾಬಾದ್ ಅರಣ್ಯ ಪ್ರದೇಶದ ಮೂಲಕ ತಲೆಮರೆಸಿಕೊಂಡಿದ್ದನು. ಈತನ ಪತ್ತೆಗೆ ಪೊಲೀಸರು ಹರಸಾಹಸಪಟ್ಟರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಪೊಲೀಸರೊಂದಿಗೆ ಕ್ಷಿಪ್ರ ಕಾರ್ಯಪಡೆ(ಆರ್‍ಎಎಫ್) ಅಧಿಕಾರಿಗಳು ಕೈ ಜೋಡಿಸಿದ್ದರು. ಹೀಗೆ ಪೊಲೀಸರು ಹಾಗೂ ಅಧಿಕಾರಿಗಳು ಅರಣ್ಯದಲ್ಲಿ ಕೊಂಬಿಂಗ್ ಕಾರ್ಯಾಚರಣೆ ನಡೆಸಿದರೂ ಆರೋಪಿಯ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಇದನ್ನೂ ಓದಿ: ‘Wait And See’ ಹೇಳುತ್ತಲೇ 5 ದಿನದಲ್ಲಿ ಕ್ರಶ್ ಸೇರಿ ಮೂವರ ಕೊಲೆಗೈದ ಟಿಕ್‍ಟಾಕ್ ಸ್ಟಾರ್

    ಸದ್ಯ ಅಶ್ವನಿ ಮೃತಪಟ್ಟಿದ್ದಾನೆ ಎಂದು ಬಿಜ್ನೋರ್ ಪೊಲೀಸ್ ಅಧಿಕ್ಷಕ ಸಂಜೀವ್ ತ್ಯಾಗಿ ಸ್ಪಷ್ಟಪಡಿಸಿದ್ದಾರೆ. ಬಿಜ್ನೋರ್ ನಿಂದ ಪರಾರಿಯಾಗುವ ಸಲುವಾಗಿ ಉತ್ತರಾಖಂಡದ ಡೆಹ್ರಾಡೂನ್ ಗೆ ತೆರಳುತ್ತಿರುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಈತ ತನ್ನ ಕೈಯಲ್ಲಿ ರಿವಾಲ್ವರ್ ಹಿಡಿದುಕೊಂಡಿದ್ದನು. ಇದೀಗ ಅದರಲ್ಲಿ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

    ಪೊಲೀಸರ ತಂಡ ಬಧಾಪುರ್ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಶನಿವಾರ ನಸುಕಿನ ಜಾವ 12.45 ರ ಸುಮಾರಿಗೆ ಬಸ್ಸಿನ ಚಾಲಕನ ಪಕ್ಕದಲ್ಲಿರುವ ಮುಂಭಾಗದ ಸೀಟಿನಲ್ಲಿ ಶಂಕಿತ ವ್ಯಕ್ತಿಯೊಬ್ಬ ಕುಳೀತಿದ್ದನು. ಈತ ತನ್ನ ಮುಖವನ್ನು ಕರ್ಚಿಪಿನಿಂದ ಮುಚ್ಚಿಕೊಂಡಿದ್ದನು. ಇದೇ ವೇಳೆ ಪೊಲೀಸರು ಮುಖದ ಮೇಲಿದ್ದ ಬಟ್ಟೆ ತೆಗೆಯುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಪೊಲೀಸರಿಗೆ ತನ್ನ ಕೈಯಲಿದ್ದ ರಿವಾಲ್ವರ್ ನಿಂದ ಹೊಡೆದಿದ್ದಾನೆ. ಅಲ್ಲದೆ ಪೊಲೀಸರು ಆತನ ವಿರುದ್ಧ ಕ್ರಮಕೈಗೊಳ್ಳುವ ಮೊದಲೇ ಆತ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿದ್ದಾನೆ ಎಂದು ತ್ಯಾಗಿ ವಿವರಿಸಿದ್ದಾರೆ.

    ಆ ಬಳಿಕ ಶಂಕಿತನನ್ನು ಜಾನಿ ದಾದ ಎಂದು ಗುರುತಿಸಲಾಯಿತು. ಅಲ್ಲದೆ ಮೂರು ಜನರ ಹತ್ಯೆ ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದವನೇ ಆಗಿದ್ದನು ಎಂದು ಹೇಳಿದರು.

  • ‘Wait And See’ ಹೇಳುತ್ತಲೇ 5 ದಿನದಲ್ಲಿ ಕ್ರಶ್ ಸೇರಿ ಮೂವರ ಕೊಲೆಗೈದ ಟಿಕ್‍ಟಾಕ್ ಸ್ಟಾರ್

    ‘Wait And See’ ಹೇಳುತ್ತಲೇ 5 ದಿನದಲ್ಲಿ ಕ್ರಶ್ ಸೇರಿ ಮೂವರ ಕೊಲೆಗೈದ ಟಿಕ್‍ಟಾಕ್ ಸ್ಟಾರ್

    ಲಕ್ನೋ: ತನ್ನ ಮನದರಸಿ ಸೇರಿ 5 ದಿನದಲ್ಲಿ ಮೂವರನ್ನು ಟಿಕ್ ಟಾಕ್ ಬಳಕೆದಾರನೊಬ್ಬ ಕೊಲೆಗೈದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಬಿಜ್ನೋರ್ ಎಂಬಲ್ಲಿ ನಡೆದಿದೆ.

    ಆರೋಪಿಯನ್ನು ಅಶ್ವನಿ ಅಲಿಯಾಸ್ ಜಾನಿ ದಾದ ಎಂದು ಗುರುತಿಸಲಾಗಿದೆ. ಆರೋಪಿ ಡ್ರಗ್ ಸೇವನೆ ಮಾಡುತ್ತಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಸದ್ಯ ಆತನ ಹುಡುಕಾಟಕ್ಕಾಗಿ ಭಾರೀ ಪ್ರಯತ್ನಗಳು ನಡೆದವು. ಕ್ಷಿಪ್ರ ಕಾರ್ಯಪಡೆ(ಆರ್‍ಎಎಫ್) ಅಧಿಕಾರಿಗಳು ಕೂಡ ಪೊಲೀಸರ ಜೊತೆ ಸೇರಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು.

    5 ದಿನಗಳಲ್ಲಿ ಆರೋಪಿ ಮೂವರನ್ನು ಕೊಲೆ ಮಾಡಿದ್ದಾನೆ. ಈತ ತನ್ನ ಕ್ರಶ್ ನಿಟಿಕಾ, ರಾಹುಲ್ ಕುಮಾರ್ ಹಾಗೂ ಕೃಷ್ಣ ಕುಮಾರ್ ಎಂಬವರನ್ನು ಕೊಲೆ ಮಾಡಿದ್ದಾನೆ. ರಾಹುಲ್, ಕೃಷ್ಣ ಸಂಬಂಧಿಕರಾಗಿದ್ದು, ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.

    ಅಶ್ವನಿ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿಸುವ ಮೂಲಕ ಸಕ್ರಿಯನಾಗಿದ್ದನು. ಅಲ್ಲದೆ ಅವುಗಳಿಗೆ `ನನ್ನ ಹಾನಿ ನೋಡಿ’ ‘ಎಲ್ಲವನ್ನೂ ನಾನು ನಾಶ ಮಾಡುತ್ತೇನೆ, ವೈಟ್ ಆ್ಯಂಡ್ ಸೀ’ ಎಂದು ತಲೆ ಬರಹ ಕೊಡುತ್ತಿದ್ದನು. ಈತ ಇರುವ ಸ್ಥಳದ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಪೊಲೀಸರು ಅಶ್ವನಿಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಮಾಹಿತಿಗಳ ಪ್ರಕಾರ ಅಶ್ವನಿ ಸ್ಯೋಹಾರ ಪ್ರದೇಶದ ಬಿಜ್ನೋರ್ ನಿವಾಸಿಯಾಗಿದ್ದು, 3 ದಿನಗಳ ಹಿಂದೆ ಈತ ತನ್ನ ಕ್ರಶ್ ನನ್ನು ಕೊಲೆ ಮಾಡಿದ್ದನು.

    2002ರಲ್ಲಿ ನಿಟಿಕ ತನ್ನ ಅಂಕಲ್ ಮನೆಗೆ ಬಂದಿದ್ದಳು. ಈ ವೇಳೆ ಅಶ್ವನಿಗೆ ಆಕೆಯ ಮೇಲೆ ಕ್ರಶ್ ಆಗಿದೆ. ಇದನ್ನು ನಿರಾಕರಿಸಿದ ನಿಟಿಕಾ ದುಬೈಗೆ ತೆರಳಿದ್ದಳು. ಅಲ್ಲಿಯೇ ಆಕೆ ಉದ್ಯೋಗ ಮಾಡಿಕೊಂಡಿದ್ದಳು. ಆದರೆ ಇತ್ತೀಚೆಗೆ ಆಕೆಗೆ ಮದುವೆ ಕೂಡ ಆಗಿದ್ದು, ಹೀಗಾಗಿ ನಿಟಿಕಾ ದೌಲತಾಬಾದ್ ಗೆ ತೆರಳಿದ್ದಳು. ಈ ವಿಚಾರ ಆರೋಪಿ ಗಮನಕ್ಕೆ ಬಂದಿದ್ದು, ಅಶ್ವಾನಿ ನೇರವಾಗಿ ಆಕೆಯ ಮನೆಗೆ ತೆರಳಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ನಿಟಿಕಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

    ಈ ಕೊಲೆ ವಿಚಾರ ಬೆಳಕಿಗೆ ಬಂದ ಬಳಿಕ ಪೊಲೀಸರು ಅಶ್ವನಿಯನ್ನು ಬಂಧಿಸಲು 21 ನಿಲ್ದಾಣಗಳಲ್ಲಿ ಪೊಲೀಸರ ತಂಡವನ್ನು ನಿಯೋಜನೆ ಮಾಡಲಾಗಿದೆ. ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಬಿಜ್ನೋರ್ ಪೊಲೀಸ್ ಅಧೀಕ್ಷಕ ಸಂಜೀವ್ ತ್ಯಾಗಿ ತಿಳಿಸಿದ್ದಾರೆ.

  • ಪತ್ನಿ ಜೊತೆ ಜಗಳವಾಡಿ ಕಟ್ಟಡವೇರಿದ ಟಿಕ್‍ಟಾಕ್ ಸ್ಟಾರ್

    ಪತ್ನಿ ಜೊತೆ ಜಗಳವಾಡಿ ಕಟ್ಟಡವೇರಿದ ಟಿಕ್‍ಟಾಕ್ ಸ್ಟಾರ್

    – 18 ಗಂಟೆ ಟೆರೇಸ್‍ನಲ್ಲಿ ನಿಂತು ಆತ್ಮಹತ್ಯೆ ಬೆದರಿಕೆ

    ನವದೆಹಲಿ: ಪತ್ನಿ ಜೊತೆ ಜಗಳವಾಡಿ ಟಿಕ್‍ಟಾಕ್ ಸ್ಟಾರ್ ಒಬ್ಬ ಕಟ್ಟಡವೇರಿದ ಘಟನೆ ಭಾನುವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಸಂದೀಪ್ ಅಲಿಯಾಸ್ ಅರ್ಮಾನ್ ಮಲ್ಲಿಕ್ ಕಟ್ಟಡವೇರಿದ ವ್ಯಕ್ತಿ. ಭಾನುವಾರ ಮಧ್ಯಾಹ್ನ ಹರಿನಗರದಲ್ಲಿರುವ 10 ಅಂತಸ್ತಿನ ಹೋಟೆಲಿನ ಟೆರೇಸ್‍ಗೆ ಹೋಗಿದ್ದ ಸಂದೀಪ್ ಸೋಮವಾರ ಬೆಳಗ್ಗೆ 8.45ಕ್ಕೆ ಕೆಳಗೆ ಇಳಿದಿದ್ದಾನೆ. ಅಲ್ಲದೆ ಇಳಿಯುವುದಕ್ಕೂ ಮೊದಲು ತಾನು ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

    ಟಿಕ್‍ಟಾಕ್‍ನಲ್ಲಿ ಸಂದೀಪ್‍ಗೆ 50 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಹೋಟೆಲಿನ ಟೆರೇಸ್‍ಗೆ ಹೋದ ಬಳಿಕ ಸಂದೀಪ್ ಕೆಲವು ಟಿಕ್‍ಟಾಕ್ ವಿಡಿಯೋ ಮಾಡಿದ್ದಾನೆ. ಅಲ್ಲದೆ ಒಂದು ಪತ್ರವನ್ನು ಕೂಡ ಟಿಕ್‍ಟಾಕ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಪತ್ರದಲ್ಲಿ ಸಂದೀಪ್ ತನ್ನ ಪತ್ನಿಯೇ ಎಲ್ಲದಕ್ಕೂ ಹೊಣೆ ಎಂದು ಬರೆದಿದ್ದಾನೆ.

    ಟಿಕ್‍ಟಾಕ್ ವಿಡಿಯೋದಲ್ಲಿ ಸಂದೀಪ್, “ನಾನು ನನ್ನ ಪತ್ನಿ ಹಾಗೂ ಆಕೆಯ ಸಹೋದರಿಯರಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇನೆ. ಏಕೆಂದರೆ ಎಲ್ಲರೂ ಸೇರಿ ನನ್ನನ್ನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದಾನೆ.

    ಅಪ್ಲೋಡ್ ಮಾಡಿದ ಪತ್ರದಲ್ಲಿ ಸಂದೀಪ್ ತನ್ನನ್ನು ಇಳಿಸಲು ಬಂದ ಪೊಲೀಸರ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾನೆ. ಅಲ್ಲದೆ ಆ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಕಟ್ಟಡದಿಂದ ಇಳಿಯುವುದಾಗಿ ಹೇಳಿದ್ದನು. ಪೊಲೀಸರು ಇದಕ್ಕೆ ಒಪ್ಪಿದಾಗ ಸಂದೀಪ್ ತನ್ನ ಮೇಲಿರುವ ಎಲ್ಲ ಪ್ರಕರಣಗಳನ್ನು ರದ್ದುಪಡಿಸಬೇಕೆಂದು ಎಂದು ಹೇಳಿದ್ದಾನೆ.

    ಪೊಲೀಸರ ಪ್ರಕಾರ, ಸಂದೀಪ್ ಅಹಮದಾಬಾದ್ ನಿವಾಸಿಯಾಗಿದ್ದು, ದೆಹಲಿಯ ನಿಹಾಲ್ ವಿಹಾರ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಂದೀಪ್ ತನ್ನ ಸ್ನೇಹಿತೆ ಜೊತೆ ಹೋಟೆಲಿಗೆ ಹೋಗಿದ್ದನು. ಈ ವಿಷಯ ತಿಳಿದ ಆತನ ಪತ್ನಿ ಸ್ಥಳಕ್ಕೆ ಬಂದು ಜಗಳವಾಡಿದ್ದಾಳೆ. ಇದರಿಂದ ಕೋಪಗೊಂಡ ಸಂದೀಪ್ ಹೋಟೆಲಿನ ಟೆರೇಸ್‍ಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

  • ಟಿಕ್‍ಟಾಕ್‍ನಲ್ಲಿ 40 ಸಾವಿರ ಫಾಲೋವರ್ಸ್ ಹೊಂದಿದ್ದ ಯುವಕ ಅರೆಸ್ಟ್

    ಟಿಕ್‍ಟಾಕ್‍ನಲ್ಲಿ 40 ಸಾವಿರ ಫಾಲೋವರ್ಸ್ ಹೊಂದಿದ್ದ ಯುವಕ ಅರೆಸ್ಟ್

    ಲಕ್ನೋ: ಟಿಕ್‍ಟಾಕ್‍ನಲ್ಲಿ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಯುವಕನನ್ನು ಕಳ್ಳತನದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಶಾರೂಕ್ ಖಾನ್(23) ಅರೆಸ್ಟ್ ಆದ ಯುವಕ. ಶಾರೂಕ್ ಖಾನ್ ಟಿಕ್‍ಟಾಕ್‍ನಲ್ಲಿ ಯಾವಾಗಲೂ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದನು. ಅಲ್ಲದೆ ಆತನ ಮೂವರು ಸ್ನೇಹಿತರಾದ ಆಸೀಫ್, ಫೈಯಾಜ್ ಹಾಗೂ ಮುಕೇಶ್ ಆತನಿಗೆ ಸಾಮಾಜಿಕ ಜಾಲತಾಣದಲ್ಲಿ ಆತನ ಪೋಸ್ಟ್ ಗೆ ಸಹಾಯ ಮಾಡುತ್ತಿದ್ದರು.

    ಇಂದು ಬೆಳಗ್ಗೆ ಪೊಲೀಸರು ಶಾರೂಕ್ ಹಾಗೂ ಆತನ ಮೂವರು ಸ್ನೇಹಿತರನ್ನು ಕಳ್ಳತನದ ಪ್ರಕರಣದಲ್ಲಿ ಬಂಧಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಬಳಿ ಐದು ಮೊಬೈಲ್, ಒಂದು ಬೈಕ್ ಹಾಗೂ 3 ಸಾವಿರ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ನೋಯ್ಡಾದ ವಿವಿಧ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ನಾವು ಅವರನ್ನು ಹಿಡಿಯಲು ಸಾಧ್ಯವಾಯಿತು. ಅವರು ಪ್ರಯಾಣಿಕರಿಂದ ಮೊಬೈಲ್ ಹಾಗೂ ಹಣವನ್ನು ಕದಿಯುತ್ತಿದ್ದರು. ಬಳಿಕ ಬಾಲ್ಟಾ 2, ನಾಲೆಡ್ಜ್ ಪಾರ್ಕ್ ಮತ್ತು ಸುರ್ಜಾಪುರದಲ್ಲಿ ಸಕ್ರಿಯರಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ರನ್‍ವಿಜಯ್ ಸಿಂಗ್ ತಿಳಿಸಿದ್ದಾರೆ.

    ವಿಚಾರಣೆ ವೇಳೆ ಆರೋಪಿಗಳು ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಕನಿಷ್ಠ ಆರು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ನಾಲ್ವರು ಒಪ್ಪಿಕೊಂಡಿದ್ದಾರೆ. ನಾಲ್ವರಲ್ಲಿ ಮುಕೇಶ್ ಎಂಬವನು ಬಿಹಾರ್ ಮೂಲದವನಾಗಿದ್ದು, ಉಳಿದ ಮೂವರು ಬುಲಂದ್‍ಶಹರ್ ನಿವಾಸಿಗಳು ಎಂದು ಪೊಲೀಸರು ಹೇಳಿದ್ದಾರೆ.