Tag: Ticktock

  • ಸಿಲ್ಲಿ ಕೆಲಸ ಮಾಡೋಣ ಎಂದು ಬಾಲಿವುಡ್ ನಟನ ಜೊತೆ ಐಂದ್ರಿತಾ ಹೆಜ್ಜೆ

    ಸಿಲ್ಲಿ ಕೆಲಸ ಮಾಡೋಣ ಎಂದು ಬಾಲಿವುಡ್ ನಟನ ಜೊತೆ ಐಂದ್ರಿತಾ ಹೆಜ್ಜೆ

    ಬೆಂಗಳೂರು: ಇತ್ತೀಚೆಗಷ್ಟೆ ಬನ್ನಿ ಜೊತೆಯಲ್ಲಿ ಸಿಲ್ಲಿ ಕೆಲಸ ಮಾಡೋಣ ಎಂದು ಚಂದನವನದ ಹಾಟ್ ಬೆಡಗಿ ಐಂದ್ರಿತಾ ರೇ ಟಿಕ್‍ಟಾಕ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಬಾಲಿವುಡ್ ನಟನ ಜೊತೆ ಅದರಲ್ಲೂ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಬಾಲಿವುಡ್ ನಟ ಕರಣ್ ವೀರ್ ಬೋಹ್ರಾ ಜೊತೆ ಐಂದಿತ್ರಾ ರೇ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್ ನಟನ ಜೊತೆ ಟಿಕ್‍ಟಾಕ್ ಮಾಡಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮೊದಲ ಟಿಕ್‍ಟಾಕ್ ವಿಡಿಯೋದಲ್ಲಿ ಐಂದ್ರಿತಾ ರೇ ಇಂಗ್ಲಿಷ್ ಹಾಡಿಗೆ ಮಾದಕವಾಗಿ ಹೆಜ್ಜೆ ಹಾಕಿದ್ದರು. ಆಗ ಅಭಿಮಾನಿಗಳು ಕನ್ನಡ ಹಾಡಿಗೆ ಟಿಕ್‍ಟಾಕ್ ಮಾಡುವಂತೆ ಕಮೆಂಟ್ ಮಾಡಿದ್ದರು. ಹೀಗಾಗಿ ಅಭಿಮಾನಿಗಳ ಒತ್ತಾಯದ ಮೇರೆಗೆ ಬಾಲಿವುಡ್ ನಟನ ಜೊತೆ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    https://www.instagram.com/p/B9mn713lltv/

    ಅಭಿಮಾನಿಗಳು ಕನ್ನಡ ಟಿಕ್‍ಟಾಕ್ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದ್ದರಿಂದ ಈಗ ‘ಜಂಗ್ಲಿ’ ಸಿನಿಮಾದ ಹಾಡಿಗೆ ಕರಣ್ ವೀರ್ ಬೋಹ್ರಾ ಜೊತೆ  ಟಿಕ್‍ಟಾಕ್ ಮಾಡಿದ್ದೇನೆ.  ಕರಣ್ ವೀರ್ ಕನ್ನಡ ಹಾಡಿಗೆ ಅದ್ಭುತವಾಗಿ ಟಿಕ್‍ಟಾಕ್ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

    ನಟ ದಿಂಗತ್ ಅವರನ್ನು ಮದುವೆಯಾದ ನಂತರ ಸ್ವಲ್ಪ ಸಿನಿಮಾಗಳಿಂದ ದೂರವಿರುವ ಐಂದ್ರಿತಾ ರೇ, ಸದ್ಯಕ್ಕೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಾಸರವಾಗಲಿರುವ ‘ದಿ ಕ್ಯಾಸಿನೋ’ ಎಂಬ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ.

  • ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ – ಟಿಕ್‍ಟಾಕ್‍ಗೆ ವಿಡಿಯೋ ಅಪ್‍ಲೋಡ್

    ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ – ಟಿಕ್‍ಟಾಕ್‍ಗೆ ವಿಡಿಯೋ ಅಪ್‍ಲೋಡ್

    ರಾಜ್‍ಕೋಟ್: ನಡುರಸ್ತೆಯಲ್ಲಿಯೇ ಜೀಪ್ ಸ್ಟಾರ್ಟಾಗದೆ ನಿಂತ ಪರಿಣಾಮ ಕೋಪಗೊಂಡ ವ್ಯಕ್ತಿ ತನ್ನ ಜೀಪಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಗುಜರಾತ್‍ನ ರಾಜಕೋಟ್‍ನಲ್ಲಿ ಘಟನೆ ನಡೆದಿದ್ದು, ಇಂದ್ರಜೀತ್ ಸಿಂಗ್ ತನ್ನ ಜೀಪಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ. ಈ ಎಲ್ಲಾ ದೃಶ್ಯಗಳನ್ನು ಆತನ ಸ್ನೇಹಿತ ಹಾಗೂ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಟಿಕ್‍ಟಾಕ್‍ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ವೈರಲ್ ಮಾಡಿದ್ದಾರೆ. ವಿಡಿಯೋದಲ್ಲಿ ಇಂದ್ರಜೀತ್ ತನ್ನ ಇಷ್ಟದಂತೆ ಜೀಪ್‍ಗೆ ಹೊಸ ವಿನ್ಯಾಸಗಳನ್ನು ಮಾಡಿಸಿರುವುದು ಕಾಣಬಹುದಾಗಿದೆ. ಅಲ್ಲದೇ ಜೀಪ್‍ಗೆ ಬೆಂಕಿ ಹಚ್ಚಿ ವಿಡಿಯೋ ಮಾಡುತ್ತಿರುವ ಸ್ನೇಹಿತ ಕಡೆ ಇಂದ್ರಜೀತ್ ನಡೆದು ಬಂದಿದ್ದಾನೆ.

    https://twitter.com/dineshjoshi70/status/1168817621891870720

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದು, ಇಂದ್ರಜೀತ್ ಸಿಂಗ್ ಸೇರಿದಂತೆ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ. ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ ಹಚ್ಚುವ ಮೂಲಕ ಸರ್ಕಾರಿ ಆಸ್ತಿಗೆ ನಷ್ಟ ಉಂಟುಮಾಡಿರುವ ಆರೋಪದಲ್ಲಿ ಅವರನ್ನು ಬಂಧಿಸಿದ್ದಾರೆ.

    ಈ ಘಟನೆ ಕುರಿತು ಮಾಹಿತಿ ನೀಡಿರುವ ರಾಜ್‍ಕೋಟ್ ಎಸ್‍ಪಿ ಎಎನ್ ರಾಥೋಡ್, ಜೀಪಿನ ಬ್ಯಾಟರಿ ಕೆಲಸ ಮಾಡದ ಕಾರಣ ಅದು ಸ್ಟಾರ್ಟ್ ಆಗಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಇಂದ್ರಜೀತ್ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.