Tag: Thumkur

  • ದಣಿವರಿಯದ ಮಹಾನ್ ಚೇತನದ ಹಿಂದಿದೆ ಮಹಾ ರಹಸ್ಯ!

    ದಣಿವರಿಯದ ಮಹಾನ್ ಚೇತನದ ಹಿಂದಿದೆ ಮಹಾ ರಹಸ್ಯ!

    ಹೋಟೆಲ್ ಊಟವನ್ನು ಎಂದೂ ಸೇವಿಸದ ಸಿದ್ದಗಂಗೆಯ ಬೆಳಕು ಶ್ರೀಗಳದ್ದು ಸದಾ ಸಾತ್ವಿಕ ಆಹಾರ. ರಾಗಿ ಜೋಳದಿಂದ ತಯಾರಿಸಲ್ಪಟ್ಟ ಆಹಾರ ಹಾಗೂ ಹಣ್ಣು ಹಂಪಲುಗಳನ್ನು ಅಷ್ಟೇ ಶ್ರೀಗಳು ಸೇವಿಸುತ್ತಿದ್ದರು.

    ಅದು ಮಿತ ಆಹಾರ ಸೇವನೆ. ಇನ್ನು ಹೆಚ್ಚಾಗಿ ಬೇವಿನ ಚಕ್ಕೆ ರಸವನ್ನು ಹಾಲಿನೊಂದಿಗೆ ಬೆರೆಸಿ ನಿತ್ಯ ಸೇವನೆ ಮಾಡುತ್ತಿದ್ದ ಶ್ರೀಗಳು ಯೋಗಭ್ಯಾಸವನ್ನು ಎಂದೂ ತಪ್ಪಿಸಿದವರಲ್ಲ. ಇದು ಬೇವಿನ ಚಕ್ಕೆ ಕಷಾಯವೇ ಅವರ ದಿವ್ಯ ಆರೋಗ್ಯದ ಮಹಾ ರಹಸ್ಯ.  ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಹುಳಿ, ಖಾರ ಎಣ್ಣೆ ಮಸಾಲೆ ಪದಾರ್ಥಗಳನ್ನು ಮುಟ್ಟುವುದೇ ಇಲ್ಲ, ಒಗ್ಗರಣೆಯ ಪದಾರ್ಥ ಸೇವಿಸುವುದು ಕೂಡ ತೀರಾ ಅಪರೂಪ. ಬೆಳಗ್ಗೆ ಹೆಸರು ಬೇಳೆಯನ್ನು ಸ್ವಲ್ಪ ಸೈಂಧಲವಣ ಜೀರಿಗೆ ಪುಡಿ ಹಾಕಿ ಕುದಿಸಿದರೆ ಆಯ್ತು. ಅದೇ ಅವರ ಸಾರು ಪಲ್ಯ, ಅದರ ಜೊತೆ ಉಪ್ಪು ಖಾರ ಹಾಕದೇ ಇರುವ ತೆಂಗಿನಕಾಯಿ ಚಟ್ನಿ ಇದ್ದರಾಯಿತು. ಇದನ್ನೂ ಓದಿ: ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!

    ಕೇವಲ ಅರ್ಧಕಪ್ ಹಾಲು ಮಾತ್ರ ಕುಡಿಯುತ್ತಿದ್ದರು. ಕೊಬ್ಬು ಉಂಟುಮಾಡುವ ಯಾವ ಪದಾರ್ಥಗಳನ್ನು ಸ್ವೀಕರಿಸುತ್ತಿಲ್ಲ. ಮಧ್ಯಾಹ್ನ ಈ ಹಿಂದೆ ಕೆಲವೊಮ್ಮೆ ಮುದ್ದೆ ಹಾಗೂ ತೊಗರಿ ಬೇಳೆ ಸಾರು ಸೇವಿಸುತ್ತಿದ್ದರು. ಈ ದೇಹ ಈಶ್ವರನ ಪ್ರಸಾದ ಕಾಯ, ಅದನ್ನು ಕೆಡಿಸಬಾರದು, ಅನಾರೋಗ್ಯಗೊಳಿಸಬಾರದು, ದೇಹವನ್ನು ರೋಗಾದಿಗಳಿಂದ ತುತ್ತಾಗದಂತೆ ನೋಡಿಕೊಳ್ಳುವುದು ಒಂದು ಪೂಜೆಯೇ ಅನ್ನೋದು ಶ್ರೀಗಳ ಮಾತು.

    https://www.youtube.com/watch?v=2lK_EgaS96U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವರ್ಗಾವಣೆ ಪತ್ರ ಕೇಳಿದ್ದಕ್ಕೆ ವಿದ್ಯಾರ್ಥಿನಿಗೆ ಆಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಸಿಬ್ಬಂದಿ

    ವರ್ಗಾವಣೆ ಪತ್ರ ಕೇಳಿದ್ದಕ್ಕೆ ವಿದ್ಯಾರ್ಥಿನಿಗೆ ಆಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಸಿಬ್ಬಂದಿ

    ತೂಮಕೂರು: ವರ್ಗಾವಣೆ ಪತ್ರ ಕೇಳಿದಕ್ಕೆ ವಿದ್ಯಾರ್ಥಿನಿ ಮೇಲೆ ಕಾಲೇಜು ಸಿಬ್ಬಂದಿ ಆಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ತುಮಕೂರು ನಗರದ ವಿವೇಕಾನಂದ ಕಾಮರ್ಸ್ ಕಾಲೇಜಿನಲ್ಲಿ ನಡೆದಿದೆ.

    ರಂಜಿತಾ(ಹೆಸರು ಬದಲಾಯಿಸಲಾಗಿದೆ) ಎಂಬ ವಿದ್ಯಾರ್ಥಿನಿ ಮೇಲೆ, ಕಾಲೇಜು ಮುಖ್ಯಸ್ಥರ ಕಾರು ಚಾಲಕ ಯದುಕುಮಾರ್ ಅವಾಚ್ಯ ಶಬ್ಧಗಳಿಂದ ಅವಹೇಳನ ಮಾಡಿ ಹಲ್ಲೆ ನಡೆಸಿದ್ದಾನೆ.

    ಎಂಕಾಂ ಮೊದಲ ವರ್ಷ ಪೂರೈಸಿದ ವಿದ್ಯಾರ್ಥಿನಿ ರಂಜಿತಾ ದ್ವಿತೀಯ ವರ್ಷದ ವ್ಯಾಸಾಂಗಕ್ಕಾಗಿ ಬೇರೆ ಕಾಲೇಜಿಗೆ ಹೋಗಲು ನಿರ್ಧರಿಸಿದ್ದಳು. ಈ ಕಾರಣಕ್ಕೆ ಪ್ರಾಂಶುಪಾಲರಾಗಿರುವ ಸುಮಾ ಅವರ ಬಳಿ ವರ್ಗಾವಣೆ ಪತ್ರವನ್ನು ನೀಡುವಂತೆ ಕೇಳಿದ್ದಾಳೆ.

    ಈ ವೇಳೆ ಪಕ್ಕದಲ್ಲಿದ್ದ ಕಾರು ಚಾಲಕ ಯದುಕುಮಾರ್ ವಿದ್ಯಾರ್ಥಿನಿಗೆ ಅಶ್ಲೀಲವಾಗಿ ಬೈದಿದ್ದಾನೆ. ಹಾಗಾಗಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆದ ಬಳಿಕ ರಶ್ಮಿ ಪೋಷಕರ ಜೊತೆ ಕಾಲೇಜಿಗೆ ಬಂದು ಪ್ರಶ್ನೆ ಮಾಡಿದ್ದಾಳೆ.

    ಪರಿಣಾಮವಾಗಿ ಕಾಲೇಜು ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾಲೇಜಿನ ಮುಖ್ಯಸ್ಥ ಬಿಜೆಪಿ ಮುಖಂಡರಾದ ಬ್ಯಾಟರಂಗೇಗೌಡರು ರಾಜಿ ಸಂಧಾನ ನಡೆಸಿ, ಕಾರು ಚಾಲಕನಿಂದ ವಿದ್ಯಾರ್ಥಿನಿಗೆ ಕ್ಷಮೆ ಕೇಳಿಸಿ ಆ ಜಗಳವನ್ನು ಮುಗಿಸಿದರು.