Tag: Thriller Manju

  • ಸಾಹಸ ಕಲಾವಿದರ ಕಟ್ಟಡ ನಿರ್ಮಾಣಕ್ಕೆ ಸುದೀಪ್ 10 ಲಕ್ಷ ದೇಣಿಗೆ

    ಸಾಹಸ ಕಲಾವಿದರ ಕಟ್ಟಡ ನಿರ್ಮಾಣಕ್ಕೆ ಸುದೀಪ್ 10 ಲಕ್ಷ ದೇಣಿಗೆ

    ಬೆಂಗಳೂರು: ಸದಾ ಒಂದಿಲ್ಲೊಂದು ಸಮಾಜಮುಖಿ ಕೆಲಸಗಳಿಂದ ಹಲವರಿಗೆ ಮಾದರಿಯಾಗಿ ನಿಲ್ಲುತ್ತಿರುವ ಸ್ಯಾಂಡಲ್ ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ‘ಪೈಲ್ವಾನ್’ ಚಿತ್ರದ ಬಳಿಕ ಫೈಟರ್ ಅಸೋಸಿಯೇಷನ್ ಬೆಂಬಲಕ್ಕೆ ಸಾಥ್ ನೀಡಿದ್ದಾರೆ.

    ಸಾಹಸ ಕಲಾವಿದರ ಕಟ್ಟಡ ನಿರ್ಮಾಣಕ್ಕೆ ಕಿಚ್ಚ ಸುದೀಪ್ ಧನಸಹಾಯ ಮಾಡಿದ್ದಾರೆ. ನಾಯಂಡಳ್ಳಿ ಬಳಿ ಸಾಹಸ ಕಲಾವಿದರ ಸಂಘದ ಕಟ್ಟಡ ಸಿದ್ಧವಾಗುತ್ತಿದೆ. ಕಟ್ಟದ ನಿರ್ಮಾಣಕ್ಕಾಗಿ ಹತ್ತು ಲಕ್ಷ ಹಣವನ್ನು ಸುದೀಪ್ ಸಹಾಯ ಮಾಡಿದ್ದಾರೆ.

    https://twitter.com/ThrillerManju/status/1191657488216739842

    ಹಣ ಸಹಾಯ ಮಾಡಿರುವ ಬಗ್ಗೆ ಫೈಟರ್ ಅಸೋಸಿಯೇಷನ್ ಅಧ್ಯಕ್ಷ ಥ್ರಿಲ್ಲರ್ ಮಂಜು ಟ್ವೀಟ್ ಮಾಡಿ, ಸುದೀಪ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ”ಎಲ್ಲರಿಗೂ ನಮಸ್ಕಾರ.. ಇಂದು ನನ್ನ ಗೆಳೆಯ ಹಾಗೂ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಸರ್ ಕಟ್ಟಡ ನಿರ್ಮಾಣಕ್ಕಾಗಿ 10 ಲಕ್ಷ ಧನಸಹಾಯ ಮಾಡಿದ್ದಾರೆ. ನಿಮಗೆ ಧನ್ಯವಾದಗಳು” ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಇತ್ತ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ”ಇಷ್ಟು ವರ್ಷ ತಮ್ಮ ಸಿನಿಮಾಗಳಿಗೆ ಉತ್ತಮ ಸಾಹಸ ನಿರ್ದೇಶನ ಮಾಡಿದ ಎಲ್ಲರಿಗೂ ಧನ್ಯವಾದಗಳು. ಎಲ್ಲಾ ಅದ್ಭುತ ತಂತ್ರಜ್ಞರು ಸೇರಿ ನನ್ನನ್ನು ಹೀರೋ ಮಾಡಿದ್ದಾರೆ. ಧನ್ಯವಾಗಳು…” ಎಂದು ತಿಳಿಸಿದ್ದಾರೆ.

  • 29 ವರ್ಷದ ಸಿನಿ ಜರ್ನಿಯಲ್ಲಿ 500 ಚಿತ್ರಕ್ಕೆ ಸ್ಟಂಟ್ ಡೈರೆಕ್ಟ್

    29 ವರ್ಷದ ಸಿನಿ ಜರ್ನಿಯಲ್ಲಿ 500 ಚಿತ್ರಕ್ಕೆ ಸ್ಟಂಟ್ ಡೈರೆಕ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ಫೈಟ್‍ಮಾಸ್ಟರ್ ಥ್ರಿಲ್ಲರ್ ಮಂಜು ಅವರು ತಮ್ಮ ಸಿನಿ ವೃತ್ತಿಯ ಪಯಣದಲ್ಲಿ ಬರೋಬ್ಬರಿ 500 ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ.

    ಥ್ರಿಲ್ಲರ್ ಮಂಜು ಅವರು 29 ವರ್ಷಗಳ ಸಿನಿಮಾ ಜರ್ನಿಯಲ್ಲಿ 500 ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಬಹುಭಾಷಾ ನಟಿ ರಾಯ್ ಲಕ್ಷ್ಮಿ ಅಭಿನಯದ ‘ಝಾನ್ಸಿ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದು, ಇದು ಅವರ 500ನೇ ಚಿತ್ರವಾಗಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ.

    ಒಮ್ಮೆ ನಾನು ಹಿಂದೆ ತಿರುಗಿ ನೋಡಿದಾಗ ಇಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದೀನಾ ಎಂದು ಆಶ್ಚರ್ಯ ಆಗುತ್ತದೆ. ಈಗ ನಾನು 500ನೇ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದೇನೆ. ಈ ಮೊದಲು ನಾನು ನಟಿ ಮಾಲಾಶ್ರೀ ಮತ್ತು ಆಯೇಷಾ ಅವರಿಗೆ ಸ್ಟಂಟ್ ಡೈರೆಕ್ಷನ್ ಮಾಡಿದ್ದೆ. ಇವರ ನಂತರ ರಾಯ್ ಲಕ್ಷ್ಮಿ ಅವರಿಗೆ ನಿರ್ದೇಶನ ಮಾಡಿದ್ದೇನೆ. ಈ ಸಿನಿಮಾದಲ್ಲಿ 6 ಆ್ಯಕ್ಷನ್ ದೃಶ್ಯಗಳಿವೆ. ಹಾಲಿವುಡ್ ಚಿತ್ರಗಳಲ್ಲಿ ನಟಿಯರು ಮಾಡುವ ರೀತಿ ಸ್ಟಂಟ್ ಕಂಪೋಸ್ ಮಾಡಿದ್ದೇನೆ ಎಂದು ಥ್ರಿಲ್ಲರ್ ಮಂಜು ತಿಳಿಸಿದ್ದಾರೆ.

    ಥ್ರಿಲ್ಲರ್ ಮಂಜು ಅವರು 1990ರಲ್ಲಿ ನಟ ಶಂಕರ್ ನಾಗ್ ಅಭಿನಯದ ‘ನರಸಿಂಹ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡುವ ಮೂಲಕ ತಮ್ಮ ಸಿನಿ ಪ್ರಯಣವನ್ನು ಶುರು ಮಾಡಿದ್ದರು. ನಂತರ ಸ್ಯಾಂಡಲ್‍ವುಡ್‍ನ ಬಹುತೇಕ ನಟರಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಥ್ರಿಲ್ಲರ್ ಮಂಜು ಅವರು ನಿರ್ದೇಶನ ಮಾಡಿದ್ದಾರೆ. ನಟಿ ಮಾಲಾಶ್ರೀ ಅವರ ಆ್ಯಕ್ಷನ್ ಸಿನಿಮಾಗಳಿಗೆ ಥ್ರಿಲ್ಲರ್ ಮಂಜು ಸ್ಟಂಟ್ ಡೈರೆಕ್ಷನ್ ಮಾಡಿದ್ದಾರೆ. ನಂತರ ನಟಿ ಆಯೇಷಾ ಅವರಿಗೆ ನಿರ್ದೇಶನ ಮಾಡಿದ್ದಾರೆ.