Tag: thippa reddy

  • ಆರೋಗ್ಯ ಇಲಾಖೆಯ ಟೆಂಡರ್ ಕೊಡಿಸದ್ದಕ್ಕೆ ನನ್ನ ಮೇಲೆ ಭ್ರಷ್ಟಾಚಾರ ಆರೋಪ: ಶಾಸಕ ತಿಪ್ಪಾರೆಡ್ಡಿ

    ಆರೋಗ್ಯ ಇಲಾಖೆಯ ಟೆಂಡರ್ ಕೊಡಿಸದ್ದಕ್ಕೆ ನನ್ನ ಮೇಲೆ ಭ್ರಷ್ಟಾಚಾರ ಆರೋಪ: ಶಾಸಕ ತಿಪ್ಪಾರೆಡ್ಡಿ

    ಚಿತ್ರದುರ್ಗ: ಆರೋಗ್ಯ ಇಲಾಖೆಯಲ್ಲಿ ಕೆ.ಹೆಚ್.ಎಸ್‌ಡಿಪಿ ಯೋಜನೆಯ ಟೆಂಡರ್ ಮಂಜುನಾಥ್‌ಗೆ ಕೊಡಿಸದ ಹಿನ್ನಲೆಯಲ್ಲಿ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆಂದು ಚಿತ್ರದುರ್ಗ ಕ್ಷೇತ್ರದ ಬಿಜೆಪಿ‌ (BJP) ಶಾಸಕ‌ ತಿಪ್ಪಾರೆಡ್ಡಿ (Thippa Reddy) ‌ಹೇಳಿದರು.

    ಸೋಮವಾರ ಬೆಂಗಳೂರಿನಲ್ಲಿ‌ (Bengaluru) ಗುತ್ತಿಗೆದಾರರ (Contractor) ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಂಜುನಾಥ್ ಬಿಡುಗಡೆ ಮಾಡಿರುವ ತಿಪ್ಪಾರೆಡ್ಡಿಯವರ ಆಡಿಯೋ ಕುರಿತು ಪ್ರತಿಕ್ರಿಯಿಸಿದ ಅವರು, ಮಂಜುನಾಥ್ ಯಾವುದೇ ಕಾಮಗಾರಿ ಮಾಡಿದರೂ, ಆತ ಹೇಳಿದ್ದೇ ಫೈನಲ್ ಆಗಬೇಕಿತ್ತು. ಆತ ಅಧಿಕಾರಿಗಳಿಗೆ ನಾನು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎಂದು ಬೆದರಿಸುತ್ತಾ ಕಾಮಗಾರಿ ಮಾಡುತ್ತಿದ್ದಾನೆ. ಅಲ್ಲದೇ ಸಣ್ಣಪುಟ್ಟ ಕಂಟ್ರಾಕ್ಟರ್‌ಗಳು ಕೆಲಸ‌ ಕೇಳಿದಾಗ ತಾರತಮ್ಯ ಮಾಡುತ್ತಿದ್ದನು. ಮೊದಲಿನಿಂದಲೂ ಆತ ಹಾಗೂ ನನ್ನ ಮಧ್ಯೆ ದ್ವೇಷವಿದೆ ಎಂದರು.

    ಈ ಹಿಂದೆ ಆತ ಮಾಡಿರುವ ಉಚ್ಚಂಗಿ ಯಲ್ಲಮ್ಮ ದೇಗುಲದ ಕಾಮಗಾರಿ ಕೂಡ ಕಳಪೆಯಾಗಿದೆ. ಆದರೆ ಅದನ್ನು ಈಗ ಆರೋಪಿಸುವುದು ಸರಿಯಲ್ಲ. ಯಾವುದೇ ಕಾಮಗಾರಿ ಮಾಡುವಾಲೂ ಆತನೇ ಸುಪ್ರಿಂ ಆಗಿದ್ದೂ, ನಾನು ಅಧ್ಯಕ್ಷ ಅಂತ ಎಲ್ಲರ ಮೇಲೆ ದೌರ್ಜನ್ಯ ಮಾಡುತ್ತಾನೆಂದು ಕಿಡಿಕಾರಿದರು.

    ಶಾಸಕರಿಗೆ 90 ಲಕ್ಷ‌ ರೂ. ಲಂಚ‌ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಆತ ಅಷ್ಟು ಕೊಟ್ಟಿದೀನಿ, ಇಷ್ಟು ಕೊಟ್ಟಿದಾನೆ ಎಂದು ಹೇಳಿದ್ದಾನೆ. ಯಾರಿಗೆ ಕೊಟ್ಟಿದ್ದಾನೆ? ಆತ ಕಾಮಗಾರಿ ಮಾಡುವ ವೇಳೆ ಯುಜಿಡಿ ಕಾಮಗಾರಿ ವೇಳೆ ಪೈಪ್‌ಲೈನ್ ಹೊಡೆದಾಗ ಕೇಳಿದ್ದೇ ತಪ್ಪಾ? ಎಂದು ಅಸಹಾಯಕತೆ ಹೊರಹಾಕಿದರು. ಇದನ್ನೂ ಓದಿ: Nepal Plane Crash – ವಿಮಾನದ ಎರಡು ಬ್ಲ್ಯಾಕ್ ಬಾಕ್ಸ್ ಪತ್ತೆ

    ಮಂಜುನಾಥ್‌ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಮ್ ‌ಜೊತೆಗೆ ಮಾಡುವುದಾಗಿ ಕೇಳಿದ್ದನು. ಆಗ ಅದನ್ನು ನಾ ವಿರೋಧಿಸಿದ್ದಕ್ಕೆ ಇದೆಲ್ಲ ಶುರುವಾಗಿದೆ. ಆತನ ಗುಣವೇ ಹೆದರಿಸಿ ಕೆಲಸ‌ ಮಾಡುವುದಾಗಿದೆ. ಆತ ಒಮ್ಮೆ ಪಿಡಬ್ಲುಡಿ ಸಚಿವರ ಎದುರಲ್ಲೇ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದನು. ಆಗ ಸಚಿವರು ಅವನ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಆತ ಇದನ್ನೆಲ್ಲ ವೈಯಕ್ತಿಕ ದ್ವೇಷದಿಂದ ಮಾಡಿದ್ದಾನೆ. ಯಾವ್ದೊ ಟೆಂಡರ್ ಕೊಡಿಸದ ಹಿನ್ನೆಲೆಯಲ್ಲಿ ಈ ಆರೋಪ ಮಾಡಲಾಗಿದೆ ಎಂದು ಆಡಿಯೋ ಆರೋಪವನ್ನು ತಳ್ಳಿಹಾಕಿದರು.

    ಇದೇ ವೇಳೆ ಈ ಆರೋಪದ‌ ಬಗ್ಗೆ ಏನನ್ನು ಹೇಳಲಾರೆ‌. ಯಾವುದೇ ಹೋರಾಟವನ್ನು ಮಾಡಲಾರೆ. ಆತ‌ ಏನು ಅಂತ ಎಲ್ಲರಿಗೂ ಗೊತ್ತಿದೆ. ಅಂತವರ ವಿರುದ್ಧ ಏನೆಂದು ಹೋರಾಡಲಿ ಎಂದು ಹುಸಿ ನಕ್ಕರು. ಇದನ್ನೂ ಓದಿ: ಬೀದಿನಾಯಿಗೆ ತಿಂಡಿ ನೀಡಲು ಹೋಗಿದ್ದ ಯುವತಿಯ ಮೇಲೆ ಹರಿದ ಕಾರು – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾಸಕ ತಿಪ್ಪಾರೆಡ್ಡಿಯ ಪರ್ಸೆಂಟೇಜ್ ಆಡಿಯೋ ಬಿಡುಗಡೆ ಮಾಡಿದ ಗುತ್ತಿಗೆದಾರರ ಸಂಘ

    ಶಾಸಕ ತಿಪ್ಪಾರೆಡ್ಡಿಯ ಪರ್ಸೆಂಟೇಜ್ ಆಡಿಯೋ ಬಿಡುಗಡೆ ಮಾಡಿದ ಗುತ್ತಿಗೆದಾರರ ಸಂಘ

    ಬೆಂಗಳೂರು: ರಾಜ್ಯದಲ್ಲಿ ಮತ್ತೇ ಕಮಿಷನ್ ಆರೋಪ ಸದ್ದು ಮಾಡುತ್ತಿದೆ. ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ (Thippa Reddy) ಪರ್ಸೆಂಟ್ ನೀಡುವ ಬಗ್ಗೆ ಮಾತನಾಡಿದ್ದಾರೆ ಎಂಬ ಆಡಿಯೋವನ್ನು ಕಾರ್ಯಾಧ್ಯಕ್ಷ ಮಂಜುನಾಥ್ ಬಿಡುಗಡೆ ಮಾಡಿದ್ದಾರೆ.

    ಸೋಮವಾರ ಗುತ್ತಿಗೆದಾರರ ಸಂಘ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂರ್ಯ, ಚಂದ್ರರಷ್ಟೇ ಭ್ರಷ್ಟಾಚಾರ ಆಗಿರೋದು ಸತ್ಯ. 13 ಶಾಸಕರು ಹಾಗೂ 4-5 ಜನ ಮಂತ್ರಿಗಳು ಭಾಗಿಯಾಗಿದ್ದಾರೆ. ಇದರಲ್ಲಿ ಎಲ್ಲಾ ಪಕ್ಷದವರು ಇದ್ದಾರೆ. ಈ ಬಗ್ಗೆ ರಾಜ್ಯದ ಎಲ್ಲ ಕಂಟ್ರ್ಯಾಕ್ಟರ್ (Contractor) ಹತ್ತಿರ ದಾಖಲೆ ಇವೆ. ಆದರೆ ಭಯ ಇದೆ. ಹಾಗಾಗಿ ಯಾರು ದಾಖಲೆ ಬಿಡುಗಡೆ ಮಾಡುತ್ತಿಲ್ಲ. ಚಿತ್ರದುರ್ಗದ (Chitradurga) ಶಾಸಕ ತಿಪ್ಪಾರೆಡ್ಡಿ ನಮ್ಮಲ್ಲಿ ಭ್ರಷ್ಟಾಚಾರ ಶುರು ಮಾಡಿರುವ ಬಗ್ಗೆ ಲೋಕಾಯುಕ್ತಕ್ಕೆ ಅಫಿಡೆವಿಟ್ ಸಲ್ಲಿಸಿದ್ದೇವೆ. ತಿಪ್ಪಾರೆಡ್ಡಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ಆಡಿಯೋ ಇದೆ ಎಂದು ಹೇಳಿದರು.

    ಚಿತ್ರದುರ್ಗದ 700 -800 ಕೋಟಿ ಕಾಮಗಾರಿ ಆಗಿದೆ. ಪಿಡಬ್ಲ್ಯೂಡಿ ಕೆಲಸ 15%, ಬಿಲ್ಡಿಂಗ್ 10 ಪರ್ಸೆಂಟ್ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಹತ್ತಿರ ಬಿಲ್ಡಿಂಗ್ ಕೆಲಸ ಮಾಡಿದ್ದಾಗ 1 ಕೋಟಿಗೆ 10 ಪರ್ಸೆಂಟ್ ಪಡೆದಿದ್ದಾರೆ. ಈ ಬಗ್ಗೆ ಸಿ.ಸಿ ಪಾಟೀಲ್ ಹತ್ತಿರ ಹೇಳಿದಾಗಲೂ ವ್ಯಂಗ್ಯವಾಗಿ ನಮ್ಮ ಬಳಿ ಹೇಳಿದರು. 2019 ರಿಂದ ಇಲ್ಲಿವರೆಗೆ 90 ಲಕ್ಷ ಕೊಟ್ಟಿದ್ದೇನೆ ಎಂದು ಆರೋಪಿಸಿದರು. ಇದನ್ನೂ ಓದಿ: ಸರ್ಕಾರಕ್ಕೆ ಮತ್ತೆ ಈದ್ಗಾ ವಿವಾದ ಟೆನ್ಷನ್- ಜ. 21ರೊಳಗೆ ನಿಲುವು ಪ್ರಕಟಿಸಲು ಡೆಡ್‍ಲೈನ್

    ಡಿ. 27ರಂದು ನಾನು ಕೊನೆಯ ಬಾರಿಗೆ ಅವರಿಗೆ ಕಮಿಷನ್ ನೀಡಿದ್ದು, ನಂಗೆ ಇಂದಿಗೂ 6 ಕೋಟಿ ಬಾರಿ ಬರೋದಿದೆ. ಹೊಸ ಕಾಮಗಾರಿಗೆ ಅಡ್ವಾನ್ಸ್ ಅವರ ಮಗನ ಮುಂದೆಯೇ ಕೇಳಿದ್ದರು. ಕೊಟ್ಟಿಲ್ಲ ಅನ್ನೋದಾದ್ರೆ ಮಂಜುನಾಥನ ಮೇಲೆ ಆಣೆ ಮಾಡಲಿ ಎಂದು ಸವಾಲು ಹಾಕಿದರು.

    ಆಡಿಯೋದಲ್ಲಿ ಏನಿದೆ?: ನಾನು ನಿನ್ನ ಹತ್ರ ಮಾತಾಡೋದು ಸರಿಯಲ್ಲ. ನಿಮ್ಮಂತಹ ಹಲವರ ಹತ್ತಿರ ಅಡ್ಜಸ್ಟ್ ಮಾಡಿಕೊಂಡಿದ್ದೇನೆ. ನಾನು ನಿಮ್ಮನ್ನು ಪ್ರಶ್ನೆ ಮಾಡೋದು ತಪ್ಪು ಅನ್ನಿಸುತ್ತೆ. ನಾನು ಎಂಜಿನಿಯರ್ ಹತ್ರ ಮಾತಾಡುತ್ತೇನೆ. ನಿನ್ನ ಹತ್ರ ಮಾತಾಡೋಕೆ ಆಗಲ್ಲ. ಹಳೆಯದ್ದು ನಾನೂ ಮಾತಾಡಲ್ಲ, ನೀನೂ ಮಾತಾಡಬೇಡ. ನೀನು ಸಣ್ಣ ಕಂಟ್ರಾಕ್ಟರ್ ಇರಬಹುದು, ದೊಡ್ಡ ಕಂಟ್ರಾಕ್ಟರ್ ಇರಬಹುದು. ನಾನು ನಿಂಗೆ ಕೆಲಸ ನಿಲ್ಸು ಅಂತ ಹೇಳಿಲ್ಲ. ನಾನು ಎಂಜಿನಿಯರ್‍ಗೆ ಹೇಳಿದ್ದು, ನೀನು ನಂಗೆ ಡೈರೆಕ್ಷನ್ ಕೊಡಬೇಡ. ನೀನು ನನ್ನ ಪ್ರಶ್ನೆ ಮಾಡಬಾರದು. ನೀನು ನಂಗೆ ಹೇಳಬಾರದು. ಬೇಗ ಕ್ಲಿಯರ್ ಮಾಡಿಕೋ. ಕ್ಲಿಯರ್ ಆದ್ರೆ ಸ್ಮೂತ್ ಆಗಿ ಹೋಗುತಯ್ತೇ ಎಂದು ತಿಪ್ಪಾರೆಡ್ಡಿ ಮಾತಾಡಿದ್ದಾರೆಂಬ ಆಡಿಯೋದಲ್ಲಿದೆ. ಇದನ್ನೂ ಓದಿ: ಅವರ ಫೋಟೋ ಹಾಕಿ, ಅವರೇ ನಾ ನಾಯಕಿ ಅಂತಿದ್ದಾರೆ: ಪ್ರಿಯಾಂಕಾ ಗಾಂಧಿ ಕಾರ್ಯಕ್ರಮದ ಬಗ್ಗೆ ಸಿಎಂ ವ್ಯಂಗ್ಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k