Tag: thief. Police

  • ಮಚ್ಚು, ಲಾಂಗು ಹಿಡಿದು ಓಡಾಡ್ತಿದ್ದ ದರೋಡೆಕೋರರ ಗುಂಪಿನಿಂದ ಮೂರು ಮನೆ ಕಳ್ಳತನ

    ಮಚ್ಚು, ಲಾಂಗು ಹಿಡಿದು ಓಡಾಡ್ತಿದ್ದ ದರೋಡೆಕೋರರ ಗುಂಪಿನಿಂದ ಮೂರು ಮನೆ ಕಳ್ಳತನ

    ಧಾರವಾಡ: ಮಚ್ಚು ಲಾಂಗು ಹಿಡಿದು ಬಡಾವಣೆಯಲ್ಲಿ ಓಡಾಡುತ್ತಿರುವ ದರೋಡೆಕೋರರ ಗುಂಪು ಮೂರು ಮನೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಧಾರವಾಡ ನಗರದ ಮದಿಹಾಳದ ಗಣೇಶನಗರದಲ್ಲಿ ನಡೆದಿದೆ.

    ಮಚ್ಚು ಲಾಂಗು ಹಿಡಿದುಕೊಂಡ ದರೋಡೆಕೋರರು ಕಳೆದ ರಾತ್ರಿ ಧಾರವಾಡ ನಗರದ ಮದಿಹಾಳದ ಗಣೇಶನಗರಲ್ಲಿ 10 ಮಂದಿ ಕಳ್ಳರು ಇರುವ ಗುಂಪು ಇದೇ ಬಡಾವಣೆಯ 3 ಮನೆಗಳನ್ನು ಕಳ್ಳತನ ಮಾಡಿದೆ.

    ಕಳ್ಳರ ಗ್ಯಾಂಗ್ ಓಡಾಡುತಿರುವ ದೃಶ್ಯ ಬಡಾವಣೆಯಲ್ಲಿರುವ ಸಿಸಿ ಟಿವಿಯೊಂದರಲ್ಲಿ ಸೆರೆಯಾಗಿದೆ. ಗಣೇಶನಗರದ ಅಸ್ಲಂ ಮುಲ್ಲಾ, ಗಂಗವ್ವ ಮುದಕಣ್ಣವರ ಮತ್ತು ಆರ್ಯರ ಮನೆಯಲ್ಲಿರುವ ಅಪಾರ ಪ್ರಮಾಣದ ಚಿನ್ನ ಹಾಗೂ ಹಣ ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ.

    ಕಳೆದ 8 ದಿನಗಳಿಂದ ಈ ಕಳ್ಳರ ಗುಂಪು ನಗರ ಹಲವು ಕಡೆ ಓಡಾಡುತಿತ್ತು. ಕೆಲ ಮನೆ ಬಾಗಿಲನ್ನು ಬಡಿದು ಕಳ್ಳತನಕ್ಕೆ ಯತ್ನ ಮಾಡುತ್ತಿದ್ದರು. ಆದರೆ ಕಳೆದ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿದ ಈ ದರೋಡೆಕೋರರ ಗುಂಪು ಕಳ್ಳತನ ಮಾಡಿ ಪರಾರಿಯಾಗಿದೆ.

    ಈ ಸಂಬಂಧ ಶಹರ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತನಿಖೆ ಕೈಗೊಂಡಿದ್ದಾರೆ.

  • ಖತರ್ನಾಕ್ ಕಳ್ಳರಿಂದ ಕೇವಲ 25 ಸೆಕೆಂಡ್‍ಗಳಲ್ಲಿ ಎರಡೂವರೆ ಲಕ್ಷ ಲೂಟಿ!

    ಖತರ್ನಾಕ್ ಕಳ್ಳರಿಂದ ಕೇವಲ 25 ಸೆಕೆಂಡ್‍ಗಳಲ್ಲಿ ಎರಡೂವರೆ ಲಕ್ಷ ಲೂಟಿ!

    ಮಂಡ್ಯ: ಜನನಿಬಿಡ ಪ್ರದೇಶದಲ್ಲಿ ಕೇವಲ 25 ಸೆಕೆಂಡ್‍ಗಳಲ್ಲಿ ಖತರ್ನಕ್ ಕಳ್ಳರು ಎರಡೂವರೆ ಲಕ್ಷ ಹಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕಳ್ಳರ ಕೈಚಳಕದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

    ನಗರದ ಹೊಳಲು ಸರ್ಕಲ್‍ನಲ್ಲಿ ಈ ಘಟನೆ ನಡೆದಿದೆ. ಗೊರವಾಲೆ ಗ್ರಾಮದ ಕೃಷ್ಣ ಎಂಬವರು ಹಣ ಕಳೆದುಕೊಂಡಿದ್ದಾರೆ. ಕೃಷ್ಣ ಅವರು ಆಗಸ್ಟ್ 9 ರಂದು 4 ಗಂಟೆ ಸುಮಾರಿಗೆ ಬ್ಯಾಂಕ್ ನಿಂದ ಒಂದೂವರೆ ಲಕ್ಷ ಹಣ ಡ್ರಾ ಮಾಡಿದ್ದಾರೆ. ಅಲ್ಲದೇ ಅವರ ಬಳಿ ಒಂದು ಲಕ್ಷ ಹಣವಿತ್ತು. ಹೀಗಾಗಿ ಒಟ್ಟು ಎರಡೂವರೆ ಲಕ್ಷ ಹಣವನ್ನು ತಮ್ಮ ಆಕ್ಟೀವಾ ಹೊಂಡಾದಲ್ಲಿ ಇಟ್ಟುಕೊಂಡು ಹೊಳಲು ಸರ್ಕಲ್‍ನಲ್ಲಿರುವ ದಿನಸಿ ಅಂಗಡಿಯ ಬಳಿ ಬಂದಿದ್ದರು.

    ದಿನಸಿ ಅಂಗಡಿ ಮುಂದೆ ಆಕ್ಟೀವಾ ಹೊಂಡಾ ನಿಲ್ಲಿಸಿ ಮನೆಗೆ ಒಂದಷ್ಟು ದಿನಸಿ ಖರೀದಿಸಲು ಹೋಗಿದ್ದರು. ಕೃಷ್ಣ ಅವರನ್ನೇ ಪಾಲೋ ಮಾಡಿಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿಗಳು, ದಿನಸಿ ಸಾಮಾನು ಖರೀದಿಸುವುದರಲ್ಲೇ ಮಗ್ನರಾಗಿದ್ದ ಕೃಷ್ಣ ಅವರ ಸ್ಕೂಟರ್‍ನಿಂದ ಕೇವಲ 25 ಸೆಕೆಂಡ್‍ಗಳಲ್ಲಿ ಎರಡೂವರೆ ಲಕ್ಷ ಹಣ ದೋಚಿ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.

    ಇದನ್ನ ನೋಡಿ ಸಾರ್ವಜನಿಕರೊಬ್ಬರು ನೀವು ಬಂದ ಸ್ಕೂಟರ್‍ನಿಂದ ಯಾರೋ ಏನನ್ನೋ ಕದ್ದುಕೊಂಡು ಹೋಗ್ತಿದ್ದಾರೆ ನೋಡಿ ಎಂದು ತಿಳಿಸಿದ್ದಾರೆ. ಕೂಡಲೇ ಕೃಷ್ಣ ತಮ್ಮ ಸ್ಕೂಟರ್ ಬಳಿ ಬಂದು ಪರೀಕ್ಷಿಸುವಷ್ಟರಲ್ಲಿ ಹಣದೊಂದಿಗೆ ಕಳ್ಳರು ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾರೆ.

    ಐದು ಜನ ಪ್ಲಾನ್ ಮಾಡಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಜಿಲ್ಲೆಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.