Tag: theives

  • ಬೆಳ್ಳುಳ್ಳಿ ಕದಿಯುತ್ತಿದ್ದ ಕಳ್ಳರಿಬ್ಬರ ಬಂಧನ

    ಬೆಳ್ಳುಳ್ಳಿ ಕದಿಯುತ್ತಿದ್ದ ಕಳ್ಳರಿಬ್ಬರ ಬಂಧನ

    ಹಾವೇರಿ: ಜಿಲ್ಲೆಯ ರಾಣೇಬೆನ್ನೂರಿನ ಅನ್ನದಾತರಿಗೆ ಕಳ್ಳರ ಕಾಟಕ್ಕೆ ರಾತ್ರಿಯಿಡೀ ದೊಣ್ಣೆ ಹಿಡಿದುಕೊಂಡು ಬೆಳ್ಳುಳ್ಳಿ ಕಾಯುವ ಪರಿಸ್ಥಿತಿ ಬಂದಿತ್ತು. ಈಗ ಹಲಗೇರಿ ಪಿಎಸ್‍ಐ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಇಬ್ಬರು ಬೆಳ್ಳುಳ್ಳಿ ಕಳ್ಳರ ಬಂಧಿಸಿದ್ದಾರೆ.

    ಬಂಧಿತ ದೇವಲಪ್ಪ ಚಿಕ್ಕಮಾಗಡಿ ಅಲಿಯಾಸ್ ಲಮಾಣಿ 50 ವರ್ಷ ಮತ್ತು ಕರಬಸಪ್ಪ ಚಿಕ್ಕಮಾಗಡಿ ಅಲಿಯಾಸ್ ಲಮಾಣಿ 40 ವರ್ಷ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿ ಮತ್ತು ಕಳ್ಳತನಕ್ಕೆ ಬಳಸಿದ್ದ ಒಂದು ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳುಳ್ಳಿಯನ್ನು ರಕ್ಷಿಸಲು ದೊಣ್ಣೆ ಹಿಡಿದುಕೊಂಡು ಕುಳಿತ ರೈತರು

    ಕಳೆದ ಹತ್ತು ದಿನಗಳ ಹಿಂದೆ ಮಣಕೂರ ಗ್ರಾಮದ ರೈತರ ಜಮೀನಿನಲ್ಲಿ ರಾಶಿ ಮಾಡಲು ಹಾಕಿದ್ದ ವೇಳೆ ಬೆಳ್ಳುಳ್ಳಿ ಖದೀಮರು ಕದ್ದುಕೊಂಡು ಹೋಗಿದ್ದರು. ಇದರಿಂದ ರೈತರು ಕಳ್ಳರಿಗೆ ಹೆದರಿ ದೊಣ್ಣೆ ಹಿಡಿದುಕೊಂಡು ರಾತ್ರಿಯಿಡೀ ಬೆಳ್ಳುಳ್ಳಿ ಕಾವಲು ಕಾಯುತ್ತಿದ್ದರು. ಪೊಲೀಸರು ಈಗ ಕಳ್ಳರನ್ನು ಬಂಧಿಸಿದ್ದಕ್ಕೆ ಅನ್ನದಾತರು ಸ್ವಲ್ಪ ನಿಟ್ಟಿಸಿರು ಬಿಟ್ಟಿದ್ದಾರೆ. ಪಿಎಸ್‍ಐ ಸಿದ್ಧರೂಢ ಬಡಿಗೇರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

    ಬೆಳ್ಳುಳ್ಳಿ ಕದಿಯುತ್ತಿದ್ದಿದ್ದು ಏಕೆ?
    ಬೆಳ್ಳುಳ್ಳಿಗೆ ಈಗ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದೆ. ಪ್ರತಿ ಕ್ವಿಂಟಾಲ್ ಬೆಳ್ಳುಳ್ಳಿ ಕನಿಷ್ಟ 10 ಸಾವಿರದಿಂದ ಗರಿಷ್ಠ 18 ಸಾವಿರದವರೆಗೆ ಮಾರಾಟ ಆಗುತ್ತಿದೆ. ಹೀಗಾಗಿ ಬೆಳ್ಳುಳ್ಳಿ ಮೇಲೆ ಖದೀಮರ ಕಣ್ಣು ಬಿದ್ದಿತ್ತು. ರಾತ್ರೋರಾತ್ರಿ ರೈತರ ಜಮೀನುಗಳಿಗೆ ಎಂಟ್ರಿ ಕೊಟ್ಟು ಖದೀಮರು ಬೆಳ್ಳುಳ್ಳಿ ಕದ್ದುಕೊಂಡು ಹೋಗುತ್ತಿದ್ದರು. ಇದರಿಂದಾಗಿ ರೈತರು ಬೆಳ್ಳುಳ್ಳಿ ಕಾಯುವ ಕೆಲಸದಲ್ಲಿ ನಿರತರಾಗಿದ್ದರು.

  • ಕರುವನ್ನು ಗೋ ಕಳ್ಳರು ಕದ್ದಿದ್ದಕ್ಕೆ ಆಕ್ರೋಶಗೊಂಡು ಕಾರನ್ನು ಅಟ್ಟಿಸಿಕೊಂಡು ಹೋದ ತಾಯಿ ಹಸು

    ಕರುವನ್ನು ಗೋ ಕಳ್ಳರು ಕದ್ದಿದ್ದಕ್ಕೆ ಆಕ್ರೋಶಗೊಂಡು ಕಾರನ್ನು ಅಟ್ಟಿಸಿಕೊಂಡು ಹೋದ ತಾಯಿ ಹಸು

    ಚಿಕ್ಕಮಗಳೂರು: ಕರುವನ್ನು ಹೊತ್ತೊಯ್ದಿದ್ದಕ್ಕೆ ತಾಯಿ ಹಸು ಗೋಕಳ್ಳರ ಕಾರನ್ನು ಅಟ್ಟಿಸಿಕೊಂಡು ಹೋದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸ್ ನಿಲ್ದಾಣದ ಹಿಂಭಾಗ ನಡೆದಿದೆ.

    ಗುರುವಾರ ರಾತ್ರಿ ಮೂವರು ಗೋ ಕಳ್ಳರು ಹಸುಗಳ ಕಳ್ಳತನಕ್ಕೆಂದು ಝೈಲೋ ಕಾರಿನಲ್ಲಿ ಕೊಪ್ಪ ನಗರಕ್ಕೆ ಆಗಮಿಸಿದ್ದಾರೆ. ಈ ವೇಳೆ ಬಿಡಾಡಿ ಹಸುವನ್ನು ಕಾರಿನೊಳಗೆ ತುಂಬಲು ಯತ್ನಿಸಿದಾಗ ಹಸು ಓಡುವ ವೇಗಕ್ಕೆ ಅದರೊಂದಿಗೆ ಓಡಲಾಗದೆ ಅದನ್ನು ಹಿಡಿಯಲೂ ಆಗದೇ ಕೈಬಿಟ್ಟಿದ್ದಾರೆ.

    ಹಸುವಿನ ಕರುವನ್ನು ಕಾರಿನೊಳಗೆ ತುಂಬಿಕೊಂಡು ಹೋಗೋದನ್ನು ಕಂಡ ತಾಯಿ ಹಸು ಕಾರನ್ನು ಅಟ್ಟಿಸಿಕೊಂಡು ಹೋಗಿರುವ ಮನಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಕರುಗಿಂತ ಮೊದಲೇ ತಾಯಿ ಹಸುವನ್ನು ಹಿಡಿಯಲೆತ್ನಿಸಿದ ಕಳ್ಳರಿಗೆ ಹಸು ಚೆನ್ನಾಗಿ ಪಾಠ ಕಲಿಸಿದೆ. ಎರ್ರಾ ಬಿರ್ರಿ ಓಡಿ ಗೋಕಳ್ಳನನ್ನು ಹೈರಾಣು ಮಾಡಿದೆ.

    ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಕಳ್ಳರು ಯಾರೆಂದು ತಿಳಿದು ಬಂದಿಲ್ಲ. ಆದರೆ ಕಾರು ಝೈಲೋ ಅನ್ನೋದು ಪತ್ತೆಯಾಗಿದೆ. ಮುಂದೆ ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    https://www.youtube.com/watch?v=WRPMx1dEJvs&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಂತಾಮಣಿಯಲ್ಲಿ ಮತ್ತೆ ಕಾಣಿಸಿಕೊಂಡ ಓಜಿಕುಪ್ಪಂ ಗ್ಯಾಂಗ್

    ಚಿಂತಾಮಣಿಯಲ್ಲಿ ಮತ್ತೆ ಕಾಣಿಸಿಕೊಂಡ ಓಜಿಕುಪ್ಪಂ ಗ್ಯಾಂಗ್

    ಚಿಕ್ಕಬಳ್ಳಾಪುರ: ಕಂಟ್ರ್ಯಾಕ್ಟರ್ ಗಮನ ಬೇರೆಡೆ ಸೆಳೆದ ಖತರ್ನಾಕ್ ಕಿಡಿಗೇಡಿಗಳು ಅವರ ಬೈಕ್‍ನ ಬಾಕ್ಸ್ ನಲ್ಲಿಟ್ಟಿದ್ದ 1 ಲಕ್ಷದ 90 ಸಾವಿರ ನಗದು ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ಕಂಟ್ರ್ಯಾಕ್ಟರ್ ವೆಂಕಟೇಶ್ ಕೆನರಾ ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿ ತನ್ನ ಬೈಕ್‍ನ ಬಾಕ್ಸ್ ನಲ್ಲಿ ಹಣ ಇರಿಸಿಕೊಂಡು ಮನೆ ಕಡೆಗೆ ತೆರಳಿದ್ದರು. ಆದರೆ ಕಂಟ್ರ್ಯಾಕ್ಟರ್ ಆಗಿದ್ದ ವೆಂಕಟೇಶ್ ಪೈಂಟ್ ಖರೀದಿಗೆ ಅಂತ ಅಂಗಡಿ ಎದುರು ಬೈಕ್ ನಿಲ್ಲಿಸಿ ಖರೀದಿಯಲ್ಲಿ ನಿರತನಾಗಿದ್ದರು.

    ಮೊದಲೇ ಬ್ಯಾಂಕ್ ಬಳಿಯಿಂದ ವೆಂಕಟೇಶ್ ರನ್ನು ಫಾಲೋ ಮಾಡೊಕೊಂಡು ಬಂದಿದ್ದ ಕಿಡಿಗೇಡಿಗಳು ದುಡ್ಡು ಎಗರಿಸಿದ್ದಾರೆ. ಇತ್ತ ವೆಂಕಟೇಶ್ ಪೈಂಟ್ ಖರೀದಿಯಲ್ಲಿದ್ದಾಗ ಅವರನ್ನು ಮಾತಾನಾಡಿಸುವ ರೀತಿಯಲ್ಲಿ ಗಮನವನ್ನು ಓರ್ವ ಬೇರೆಡೆ ಸೆಳೆದರೆ, ಉಳಿದ ಇಬ್ಬರು ಬೈಕ್‍ನ ಬಾಕ್ಸ್ ನಲ್ಲಿದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ.

    ಈ ಸಂಬಂಧ ಕಂಟ್ರ್ಯಾಕ್ಟರ್ ವೆಂಕಟೇಶ್ ಚಿಂತಾಮಣಿ ನಗರ ಪೊಲೀಸರಿಗೆ ದೂರು ನೀಡಿದ್ದರು. ಮತ್ತೊಂದೆಡೆ ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂತಹ ಕೃತ್ಯಗಳನ್ನು ಮಾಡುವುದರಲ್ಲಿ ಓಜಿ ಕುಪ್ಪಂ ಗ್ಯಾಂಗ್ ಎಕ್ಸ್ ಫರ್ಟ್ ಆಗಿದೆ. ಹೀಗಾಗಿ ಈ ಕೃತ್ಯ ಸಹ ಅವರೇ ಮಾಡಿರಬಹದು ಅಂತ ತನಿಖೆ ನಡೆಸಲಾಗುತ್ತಿದೆ.

    ಮತ್ತೊಂದೆಡೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಇಬ್ಬರು ಓಜಿಕುಪ್ಪಂ ಗ್ಯಾಂಗ್ ನವರನ್ನು ಅರೆಸ್ಟ್ ಮಾಡಿ 11 ಲಕ್ಷ 80ಸಾವಿರ ಸೀಝ್ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಟರ್ ಮುರಿದು 7 ಲಕ್ಷ ರೂ. ಮೌಲ್ಯದ ಟಿವಿ, ಮೊಬೈಲ್ ಕಳವು

    ಶಟರ್ ಮುರಿದು 7 ಲಕ್ಷ ರೂ. ಮೌಲ್ಯದ ಟಿವಿ, ಮೊಬೈಲ್ ಕಳವು

    – ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ರಾಯಚೂರು: ಮನೆಯೊಂದರಲ್ಲಿ ಅಪಾರ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಬೆನ್ನಲ್ಲೇ ಈಗ ಟಿವಿ ಹಾಗೂ ಮೊಬೈಲ್ ಶೋ ರೂಂನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ಕದ್ದಿರುವ ಘಟನೆ ನಗರದ ಅರಬ್ ಮೊಹಲ್ಲಾ ವೃತ್ತದ ಬಳಿ ನಡೆದಿದೆ.

    ಕಳೆದ ಒಂದು ತಿಂಗಳಿಂದ ನೆಮ್ಮದಿಯಿಂದ ಇದ್ದ ರಾಯಚೂರು ನಗರ ಈಗ ಪುನಃ ಕಳ್ಳರ ಕಾಟಕ್ಕೆ ಭಯಭೀತವಾಗಿದೆ. ಕಳೆದ ರಾತ್ರಿ ಟಿವಿ, ಮೊಬೈಲ್ ಶೋ ರೂಂಗೆ ಖದೀಮರು ಕನ್ನ ಹಾಕಿದ್ದಾರೆ. ಶುಕ್ರವಾರ ರಾತ್ರಿ ಝೆಡ್ ಆನ್ ಪವರ್ ಶೋ ರೂಂನಲ್ಲಿ ಕಳ್ಳತನವಾಗಿದ್ದು, 7 ಲಕ್ಷ ರೂ. ಮೌಲ್ಯದ ಟಿವಿ ಹಾಗೂ ಮೊಬೈಲ್‍ಗಳನ್ನು ದೋಚಲಾಗಿದೆ. ಈ ವೇಳೆ 20 ಸಾವಿರ ರೂ ನಗದು ಹಾಗೂ ಮೊಬೈಲ್ ದೋಚಿರುವ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ರಾತ್ರಿ ಶೋ ರೂಂ ಮುಚ್ಚಿದ ಮೇಲೆ ಶಟರ್ ಮುರಿದು ಒಳನುಗ್ಗಿದ ಕಳ್ಳರು, ಇಡೀ ಶೋ ರೂಂ ತುಂಬಾ ಓಡಾಡಿದ್ದು ಕೈಗೆ ಸಿಕ್ಕ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾರೆ. ಘಟನೆ ಕುರಿತು ಸದರ್ ಬಜಾರ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ಮುಂದುವರಿದಿದೆ.

    https://www.youtube.com/watch?v=Mvcs_BxO4Lk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv