Tag: theft

  • ರಾತ್ರಿ ಕಳ್ಳತನಕ್ಕೆ ಇಳಿದಿದ್ದ ನೈಜೀರಿಯಾ ಪ್ರಜೆಗೆ ಬಿತ್ತು ಗೂಸಾ: ವಿಡಿಯೋ ನೋಡಿ

    ರಾತ್ರಿ ಕಳ್ಳತನಕ್ಕೆ ಇಳಿದಿದ್ದ ನೈಜೀರಿಯಾ ಪ್ರಜೆಗೆ ಬಿತ್ತು ಗೂಸಾ: ವಿಡಿಯೋ ನೋಡಿ

    ಬೆಂಗಳೂರು: ನಗರದಲ್ಲಿ ನೈಜೀರಿಯಾ ಪ್ರಜೆಗಳ ಪುಂಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾತ್ರಿ ಆಯ್ತು ಅಂದ್ರೆ ಸಾಕು ಫೀಲ್ಡಿಗಿಳಿದು ಸಿಕ್ಕ ಸಿಕ್ಕ ಮನೆಗಳನ್ನೆಲ್ಲಾ ದೋಚುತ್ತಿದ್ದ ಪ್ರಜೆಯೊಬ್ಬ ಈಗ ಸಿಕ್ಕಿಬಿದಿದ್ದಾನೆ.

    ಹೀಗೆಯೇ ಮನೆ ದೋಚಲು ಹೋದ ಒಬ್ಬನನ್ನು ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲ, ಕಂಬಕ್ಕೆ ಕಟ್ಟಿ ಹೊಡೆದು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನೈಜೀರಿಯಾ ಪ್ರಜೆಗಳ ಪುಂಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಹುಂಡಿ ಕಳ್ಳತನಕ್ಕೆ ಯತ್ನಿಸಿದ ಖದೀಮರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ಹುಂಡಿ ಕಳ್ಳತನಕ್ಕೆ ಯತ್ನಿಸಿದ ಖದೀಮರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ತುಮಕೂರು: ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಯತ್ನಿಸುತಿದ್ದ ಕಳ್ಳರನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

    ತಿಪಟೂರು ತಾಲೂಕಿನ ಬಿದರೆಗುಡಿಯ ಬಿದರಾಂಬಿಕಾ ದೇವಸ್ಥಾನದ ಹುಂಡಿ ಕದಿಯಲು ಹೊಂಚು ಹಾಕುತಿದ್ದಾಗ ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಿಬಿದಿದ್ದಾರೆ. ಚನ್ನರಾಯಪಟ್ಟಣದ ಹಿರಿಸಾವೆಯ ಮೂಲದವರಾದ ನಿಖಿಲ್ ಮತ್ತು ಲಯನ್‍ನನ್ನು ಗ್ರಾಮಸ್ಥರು ದೇವಸ್ಥಾನದ ಕಂಬಕ್ಕೆ ಕಟ್ಟಿಹಾಕಿ ಛೀಮಾರಿ ಹಾಕಿದ್ದಾರೆ.

    ಬಳಿಕ ಹೊನವಳ್ಳಿ ಪೊಲೀಸರಿಗೆ ಕಳ್ಳರನ್ನು ಒಪ್ಪಿಸಿದ್ದಾರೆ. ಈ ನಡುವೆ ಮತ್ತೊಬ್ಬ ಕಳ್ಳ ನರಸಿಂಹ ಮೂರ್ತಿ ಎಂಬಾತ ಪರಾರಿಯಾಗಿದ್ದಾನೆ. ಇವರು ವೃತ್ತಿಪರ ಕಳ್ಳರಾಗಿದ್ದು ಬ್ಯಾಗಲ್ಲಿ ಎಕ್ಸೆಲ್ ಬ್ಲೇಡ್ ಸೇರಿದಂತೆ ಬೀಗ ಮುರಿಯುವ ಹಲವು ಆಯುಧಗಳು ಪತ್ತೆಯಾಗಿವೆ. ಈ ಸಂಬಂಧ ಹೊನ್ನಾವಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟೊಮೆಟೋ ರೇಟು ಗಗನಕ್ಕೇರ್ತಿದ್ದಂತೆ ಕಳ್ಳರ ಕಾಟ- ಹೊಲದಲ್ಲಿದ್ದ ನೂರಾರು ಕೆಜಿ ಟೊಮೆಟೋ ಕದ್ದ ಖದೀಮರು

    ಟೊಮೆಟೋ ರೇಟು ಗಗನಕ್ಕೇರ್ತಿದ್ದಂತೆ ಕಳ್ಳರ ಕಾಟ- ಹೊಲದಲ್ಲಿದ್ದ ನೂರಾರು ಕೆಜಿ ಟೊಮೆಟೋ ಕದ್ದ ಖದೀಮರು

    ಚಿಕ್ಕಬಳ್ಳಾಪುರ: ಟೊಮೆಟೋ ಬೆಲೆ ದುಬಾರಿಯಾಗಿದ್ದೇ ತಡ ರೈತ ಕಷ್ಟಪಟ್ಟು ತೋಟದಲ್ಲಿ ಬೆಳೆದಿದ್ದ ಟೊಮೆಟೋಗಳನ್ನ ರಾತ್ರೋರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ದೊಡ್ಡ ಗಂಜೂರು ಗ್ರಾಮದ ರೈತ ಅನಂದ್ ತೋಟದಲ್ಲಿ ಬೆಳೆದಿದ್ದ ನೂರಾರು ಕೆಜಿಗಳಷ್ಟು ಟೊಮೆಟೋಗಳನ್ನ ಖದೀಮರು ಕಳವು ಮಾಡಿದ್ದಾರೆ.

    ಕೈಗೆ ಬಂದಿದ್ದ ಬೆಳೆಯನ್ನ ಅನಂದ್, ಪ್ಲಾಸ್ಟಿಕ್ ಕ್ರೇಟ್ ಬಾಕ್ಸ್‍ಗೆ ತುಂಬಿಸಿ ಮಾರ್ಕೆಟ್‍ಗೆ ಹಾಕೋದಕ್ಕೆ ನಿರ್ಧರಿಸಿದ್ರು. ಆದ್ರೆ ಮನೆಗೆ ಹೋಗಿ ಊಟ ಮಾಡಿಕೊಂಡು ತೋಟದ ಬಳಿ ವಾಪಾಸ್ ಬರುವಷ್ಟರಲ್ಲಿ ಕಳ್ಳರು ಟೊಮೆಟೋಗಳನ್ನು ಕದ್ದಿದ್ದಾರೆ. 64 ಕ್ರೇಟ್‍ನಲ್ಲಿದ್ದ ನೂರಾರು ಕೆಜಿ ಟೊಮೆಟೋಗಳನ್ನು ಕದ್ದು ಖಾಲಿ ಕ್ರೇಟ್‍ಗಳನ್ನ ಅಲ್ಲೇ ಬಿಸಾಡಿ ಹೋಗಿದ್ದಾರೆ.

    ಮಾರುಕಟ್ಟೆಯಲ್ಲಿ ಈಗ ಒಂದು ಕೆಜಿ ಟೊಮೆಟೋಗೆ 80 ರಿಂದ 100 ರೂಪಾಯಿ ಬೆಲೆ ಇದೆ. ಒಂದು ಕ್ರೇಟ್ ಅಂದ್ರೆ 10 ಕೆಜಿಯ ಟೊಮೆಟೋ ಬಾಕ್ಸ್ ಗೆ 800 ರೂಪಾಯಿಯಿಂದ ಸಾವಿರ ಬೆಲೆ ಇದೆ. 64 ಕ್ರೇಟ್‍ನಲ್ಲಿದ್ದ ಟೊಮೆಟೋಗಳಿಗೆ ಸರಿ ಸುಮಾರು 65000 ಹಣ ಸಿಗುತ್ತಿತ್ತು. ಆದ್ರೆ ಸಾಲ ಸೋಲ ಮಾಡಿ, ಹನಿ ಹನಿ ನೀರುಣಿಸಿ ಕಷ್ಟಪಟ್ಟು ಬೆಳಸಿದ್ದ ಟೊಮೆಟೋ ಇದೀಗ ಕಳ್ಳರ ಪಾಲಾಗಿವೆ.

    ಈ ಸಂಬಂಧ ರೈತ ಅನಂದ್ ಚಿಂತಾಮಣಿ ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಮಿಲ್ಟ್ರಿ ಹೋಟೆಲ್ ಬಾಗಿಲು ಮುರಿದು ಹೊಟ್ಟೆ ತುಂಬಾ ತಿಂದು ಜನರಲ್ ಸ್ಟೋರ್‍ನಲ್ಲಿ ಕಳ್ಳತನ

    ಮಿಲ್ಟ್ರಿ ಹೋಟೆಲ್ ಬಾಗಿಲು ಮುರಿದು ಹೊಟ್ಟೆ ತುಂಬಾ ತಿಂದು ಜನರಲ್ ಸ್ಟೋರ್‍ನಲ್ಲಿ ಕಳ್ಳತನ

    ಮಂಡ್ಯ: ಮಿಲ್ಟ್ರಿ ಹೋಟೆಲ್, ಕಬಾಬ್ ಸೆಂಟರ್ ಬಾಗಿಲು ಮುರಿದು ಹೊಟ್ಟೆ ತುಂಬಾ ತಿಂದು, ಬಳಿಕ ಜನರಲ್ ಸ್ಟೋರ್‍ನಲ್ಲಿ ಸಾವಿರಾರು ರೂಪಾಯಿ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.

    ಕಲ್ಲಹಳ್ಳಿಯ ಧರ್ಮಶ್ರೀ ಕಲ್ಯಾಣ ಮಂಟಪದ ಸಮೀಪ ತಡರಾತ್ರಿ ಈ ಘಟನೆ ನಡೆದಿದೆ. ಜೈ ಮಾರುತಿ ಕಬಾಬ್ ಸೆಂಟರ್, ಶ್ರೀ ವೆಂಕಟೇಶ್ವರ ಹಿಂದು ಮಿಲ್ಟ್ರಿ ಹೋಟೆಲ್‍ನಲ್ಲಿ ಊಟ ಮಾಡಿ, ನಂತರ ಶ್ರೀ ರಾಮ ಜನರಲ್ ಸ್ಟೋರ್‍ನಲ್ಲಿದ್ದ ಕ್ಯಾಶ್ ಬಾಕ್ಸ್ ಹೊಡೆದು ಹಣ ಕಳ್ಳತನ ಮಾಡಲಾಗಿದೆ.

    ಮೊದಲು ಕಬಾಬ್ ಸೆಂಟರ್ ಬಾಗಿಲು ಮುರಿದು ಕಬಾಬ್ ತಿಂದಿರುವ ಕಳ್ಳರು, ಬಳಿಕ ವೆಂಕಟೇಶ್ವರ ಮಿಲ್ಟ್ರಿ ಹೋಟೆಲ್‍ನಲ್ಲಿ ಮೀನಿನ ಸಾರಿನ ಊಟ ತಿಂದಿದ್ದಾರೆ. ಇಂದು ಬೆಳಗ್ಗೆ ಸಾರ್ವಜನಿಕರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸ್ಥಳಕ್ಕೆ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟಾರೆ ಈ ಪ್ರಕರಣವನ್ನು ನೋಡಿ ಉಂಡು ಹೋದ, ಕೊಂಡು ಹೋದ ಎಂದು ಜನ ಮಾತನಾಡಿಕೊಳ್ತಿದ್ದಾರೆ.

  • ಗಂಡನ ಬಳಿಯೇ 1 ಕೆಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿ ಅರೆಸ್ಟ್

    ಗಂಡನ ಬಳಿಯೇ 1 ಕೆಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿ ಅರೆಸ್ಟ್

    ಬೆಂಗಳೂರು: ಗಂಡನ ಬಳಿಯೇ 1 ಕೆ.ಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿಯನ್ನ ಬಂಧಿಸುವಲ್ಲಿ ಎಸ್‍ಜೆ ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ತಮಿಳುನಾಡಿನ ಹೊಸೂರು ಮೂಲದ ನಾಗಲಕ್ಷ್ಮಿ ಬಂಧಿತ ಮಹಿಳೆ. ಈಕೆ ಬೆಂಗಳೂರಿನಿಂದ ತಮಿಳುನಾಡಿನ ಸೇಲಂಗೆ ಬಸ್‍ನಲ್ಲಿ ಹೋಗುವಾಗ ತನ್ನ ಗಂಡನ ಬಳಿಯೇ ಚಿನ್ನಾಭರಣ ಕದ್ದಿದ್ದಳು. ಆದ್ರೆ ತಮಿಳುನಾಡಿನ ಸೇಲಂನಲ್ಲಿ ಚಿನ್ನ ಮಾರಾಟದ ವೇಳೆ ನಾಗಲಕ್ಷ್ಮಿ ಪೆÇಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾಳೆ. ಬಂಧಿತ ಮಹಿಳೆಯಿಂದ ಪೊಲೀಸರು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

    ಏನಿದು ಘಟನೆ?: ಬೆಂಗಳೂರಿನ ಚೆಮ್ಮನೂರು ಜ್ಯೂವೆಲರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಮುನಿಯಪ್ಪನ್ ಫೆಬ್ರವರಿ 21 ರಂದು ಬೆಂಗಳೂರಿನಿಂದ ಸೇಲಂಗೆ 1 ಕೆಜಿ ಚಿನ್ನ ತೆಗೆದುಕೊಂಡು ಹೋಗ್ತಿದ್ರು. ಈ ವೇಳೆ ಜೊತೆಯಲ್ಲೇ ಬಂದ ಹೆಂಡತಿ ನಾಗಲಕ್ಷ್ಮಿ ಗಂಡನಿಗೆ ಜ್ಯೂಸ್‍ನಲ್ಲಿ ನಿದ್ದೆ ಮಾತ್ರೆ ಹಾಕಿ ದರೋಡೆ ಮಾಡಿದ್ದಳು. ನಂತರ ಬಸ್‍ನಲ್ಲಿ ಚಿನ್ನಾಭರಣ ಕಳ್ಳತನವಾಗಿದೆ ಅಂತಾ ಡ್ರಾಮಾ ಮಾಡಿದ್ದಳು. ಈ ಬಗ್ಗೆ ಎಸ್.ಜೆ.ಪಾರ್ಕ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಇದೀಗ ನಾಗಲಕ್ಷ್ಮಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಯಾದಗಿರಿ: ಅಹಮದಾಬಾದ್-ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಚಾಕು ತೋರಿಸಿ ಹಣ ದೋಚಿದ ಕಳ್ಳರು!

    ಯಾದಗಿರಿ: ಅಹಮದಾಬಾದ್-ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಚಾಕು ತೋರಿಸಿ ಹಣ ದೋಚಿದ ಕಳ್ಳರು!

    ಯಾದಗಿರಿ/ರಾಯಚೂರು: ಅಹಮದಾಬಾದ್- ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಖದೀಮ ಕಳ್ಳರು ಇಂದು ನಸುಕಿನ ಜಾವ ಸರಣಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ರೈಲು ವಾಡಿಯಿಂದ ರಾಯಚೂರಿಗೆ ತೆರಳುತ್ತಿದ್ದಾಗ ವಾಡಿ-ಯಾದಗಿರಿ ಮಧ್ಯೆ ಗಾಡಿ ಹತ್ತಿದ ಕಳ್ಳರು ಚಾಕು ತೋರಿಸಿ ನಾಲ್ವರು ಪ್ರಯಾಣಿಕರನ್ನು ದೋಚಿದ್ದಾರೆ.

     

    ಜೇಬುಗಳಿಗೆ ಕತ್ತರಿಹಾಕಿದ್ದು 50 ಸಾವಿರ ರೂಪಾಯಿ ಕಳ್ಳತನ ಮಾಡಿದ್ದಾರೆ. ಎಸ್-5 ಬೋಗಿಯಲ್ಲಿ ಮಹಿಳೆಯೊಬ್ಬರ ಸರ ಕದಿಯಲು ಮುಂದಾದಾಗ ಮಹಿಳೆ ಕೂಗಿಕೊಂಡಿದ್ದಾರೆ. ರಾಮಚಂದ್ರ ಎಂಬುವವರಿಗೆ ಚಾಕು ತೋರಿಸಿ ಬೆದರಿಸಿ 10 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ.

    ಕಳ್ಳರನ್ನ ಹಿಡಿಯಲು ಮುಂದಾದ ಪ್ರಯಾಣಿರೊಬ್ಬರಿಗೆ ಥಳಿಸಿ ಕಳ್ಳರು ಪರಾರಿಯಾಗಿದ್ದಾರೆ. ಮೂರು ಜನ ಕಳ್ಳರ ಗುಂಪು ಈ ಕೃತ್ಯವೆಸಗಿದೆ. ಕಳ್ಳತನ ಹಿನ್ನೆಲೆ ಯಾದಗಿರಿ ನಿಲ್ದಾಣಕ್ಕೆ 5:20 ಆಗಮಿಸಿದ ರೈಲ್ವೆ ಗಾಡಿ 50 ನಿಮಿಷ ನಿಲ್ದಾಣದಲ್ಲಿಯೇ ನಿಂತು ತಡವಾಗಿ ತೆರಳಿದೆ.

    ರಾಯಚೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.

  • ಬೆಂಗ್ಳೂರಿಗರೇ ಎಚ್ಚರ: ಮನೆಗೆ ನುಗ್ಗಿ ಮಾಲೀಕನ ಬರ್ಬರ ಹತ್ಯೆ – ಬಾಲಕನ ತಲೆಗೆ ಹೊಡೆದ ಕಳ್ಳ

    ಬೆಂಗ್ಳೂರಿಗರೇ ಎಚ್ಚರ: ಮನೆಗೆ ನುಗ್ಗಿ ಮಾಲೀಕನ ಬರ್ಬರ ಹತ್ಯೆ – ಬಾಲಕನ ತಲೆಗೆ ಹೊಡೆದ ಕಳ್ಳ

    ಬೆಂಗಳೂರು: ಕಳ್ಳತನ ಮಾಡಲು ಮನೆಗೆ ನುಗ್ಗಿದ್ದ ಕಳ್ಳ ಮನೆ ಮಾಲೀಕನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಅನಂತರಾಮ್ ಕೊಲೆಯಾದ ದುರ್ದೈವಿ. ಯಲಹಂಕ ನ್ಯೂ ಟೌನ್‍ನಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಕಳ್ಳ ರಾಡ್‍ನಿಂದ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅನಂತರಾಮ್ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ.

    ಐದು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿ ಒಂದು ಮನೆಗೆ ನುಗ್ಗಿ ಬಾಲಕನ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಬಾಲಕನ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆಂದು ಹೇಳಲಾಗಿದೆ.

    ಘಟನೆಯಿಂದ ಯುಲಹಂಕ ನ್ಯೂ ಟೌನ್ ನಿವಾಸಿಗಳು ಭಯಭೀತರಾಗಿದ್ದಾರೆ. ಈ ಬಗ್ಗೆ ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ಮಂಡ್ಯ: ಜೆಸಿಬಿ ಕದ್ದ ತಿಪಟೂರು ನಗರಸಭೆ ಸದಸ್ಯೆಯ ಗಂಡ ಅರೆಸ್ಟ್

    ಮಂಡ್ಯ: ಜೆಸಿಬಿ ಕದ್ದ ತಿಪಟೂರು ನಗರಸಭೆ ಸದಸ್ಯೆಯ ಗಂಡ ಅರೆಸ್ಟ್

    ಮಂಡ್ಯ: ಜೆಸಿಬಿ ಕಳ್ಳತನ ಮಾಡಿ ಮಾರಾಟ ಮಾಡಿದ್ದ ಪ್ರಕರಣ ಪತ್ತೆ ಹೆಚ್ಚಿರುವ ಜಿಲ್ಲೆಯ ಬೆಳ್ಳೂರು ಪೊಲೀಸರು ನಗರಸಭಾ ಸದಸ್ಯೆಯ ಪತಿ ಸೇರಿ ಮೂವರನ್ನು ಬಂಧಿಸಿದ್ದಾರೆ.

    ತುಮಕೂರು ಜಿಲ್ಲೆಯ ತಿಪಟೂರು ನಗರಸಭಾ ಸದಸ್ಯೆ ರೂಪ ಎಂಬವರ ಪತಿ ಅನೂಪ್ ಗೌಡ, ನೆಲಮಂಗಲದ ನಾಗರಾಜು, ಕಲಾಸಿಪಾಳ್ಯದ ನವೀದ್ ಖಾನ್ ಬಂಧಿತರು. ಫೆಬ್ರವರಿ 2ರಂದು ನಾಗಮಂಗಲ ತಾಲೂಕಿನ ಬೆಳ್ಳೂರಿನ ಬಳಿ ಪ್ರಕಾಶ್ ಎಂಬವರಿಗೆ ಸೇರಿದ ಜೆಸಿಬಿ ಕಳ್ಳತನವಾಗಿತ್ತು. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಪ್ರಕರಣದ ಆರೋಪಿಗಳು ಪತ್ತೆಯಾಗಿರಲಿಲ್ಲ.

    ಜೂನ್ 13ರಂದು ಬೆಳ್ಳೂರಿನಲ್ಲಿ ಜೆಸಿಬಿ ನಿಲ್ಲಿಸಿದ ಸ್ಥಳದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ನಾಗರಾಜುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಹಿಂದಿನ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಅಂದು ಜೆಸಿಬಿ ಕಳ್ಳತನ ಮಾಡೋದಕ್ಕೆ ಯೋಜನೆ ರೂಪಿಸಿಕೊಟ್ಟಿದ್ದು ಅನೂಪ್ ಗೌಡ ಎಂಬುದನ್ನ ಒಪ್ಪಿಕೊಂಡಿದ್ದಾನೆ.

    ಕಳ್ಳತನದ ಬಳಿಕ ಜೆಸಿಬಿಯನ್ನು ಬಿಡಿ ಭಾಗಗಳಾಗಿ ಮಾಡಿ ಕಲಾಸಿಪಾಳ್ಯದ ನವೀದ್ ಖಾನ್ ಗೆ ಮಾರಾಟ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅನೂಪ್ ಗೌಡ, ನವೀದ್ ಖಾನ್ ನನ್ನು ಬಂಧಿಸಲಾಗಿದೆ. ಇದೀಗ ಮೂವರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

  • ಓಲಾ ಕ್ಯಾಬ್‍ನಲ್ಲಿ ಬಂದು ಕಳ್ಳತನ- ಬೆಂಗ್ಳೂರಲ್ಲಿ ಕದ್ದು ನೇಪಾಳಕ್ಕೆ ಚಿನ್ನಾಭರಣ ಸಾಗಿಸ್ತಿದ್ದ ಆರೋಪಿಗಳು ಅಂದರ್

    ಓಲಾ ಕ್ಯಾಬ್‍ನಲ್ಲಿ ಬಂದು ಕಳ್ಳತನ- ಬೆಂಗ್ಳೂರಲ್ಲಿ ಕದ್ದು ನೇಪಾಳಕ್ಕೆ ಚಿನ್ನಾಭರಣ ಸಾಗಿಸ್ತಿದ್ದ ಆರೋಪಿಗಳು ಅಂದರ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಗಳ್ಳತನ ಮಾಡಿ ನೇಪಾಳಕ್ಕೆ ಚಿನ್ನಾಭರಣ ಸಾಗಿಸ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಗೋವಿಂದ ಸಿಂಗ್ ಮತ್ತು ವಿಜಯ್ ಸಿಂಗ್ ಬಂಧಿತ ಆರೋಪಿಗಳು. ಐದು ಕೆಜಿಗೂ ಹೆಚ್ಚಿನ ಚಿನ್ನವನ್ನ ನೇಪಾಳಕ್ಕೆ ರವಾನೆ ಮಾಡಿದ್ದ ನೇಪಾಳದ ಈ ಖತರ್ನಾಕ್ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ.

    ಓಲಾ ಕ್ಯಾಬ್ ನಲ್ಲಿ ಬಂದು ಕಳ್ಳತನ ಮಾಡ್ತಿದ್ದ ಗ್ಯಾಂಗ್: ಗೋವಿಂದ್ ಸಿಂಗ್ ರಾತ್ರಿ ವೇಳೆ ಒಲಾ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಹಗಲು ವೇಳೆ ತಾಜ್ ವಿವಾಂತ ಹೋಟೆಲ್ ನಲ್ಲಿ ಕಾರು ಓಡಿಸುತ್ತಿದ್ದ. ಹಗಲು ವೇಳೆಯಲ್ಲಿ ಗೋವಿಂದ್ ಸಿಂಗ್ ಖಾಲಿ ಮನೆಗಳನ್ನು ಪತ್ತೆ ಮಾಡುತ್ತಿದ್ದ. ನಂತರ ರಾತ್ರಿ ಇಬ್ಬರು ಖದೀಮರು ಸೇರಿ ಕಳ್ಳತನ ಮಾಡ್ತಿದ್ರು. ಓಲಾದಲ್ಲಿ ತಾವೇ ಬುಕಿಂಗ್ ಮಾಡಿಕೊಂಡು ಈ ಖದೀಮರು ಕಳ್ಳತನಕ್ಕೆ ಹೋಗುತ್ತಿದ್ರು.

    ವಿಜಯ್ ಸಿಂಗ್ ಕದಿಯುವವರೆಗೂ ಗೋವಿಂದ್ ಸಿಂಗ್ ಕಾರ್ ನಲ್ಲೇ ಕಾದು ಕೂರುತ್ತಿದ್ದ. ಕಳ್ಳತನ ಮಾಡುವ ಸಮಯದಲ್ಲಿ ಪೊಲೀಸರು ಕೇಳಿದ್ರೆ ಒಲಾ ಬುಕ್ಕಿಂಗ್ ಆಗಿದೆ ಕಸ್ಟಮರ್‍ಗಾಗಿ ಕಾಯುತ್ತಿದ್ದೇವೆ ಎನ್ನುತ್ತಿದ್ದ ಈ ಕಳ್ಳ. ನಂತರ ಅದೇ ಓಲಾದಲ್ಲಿ ಚಿನ್ನಾಭರಣ ಸಾಗಾಟ ಮಾಡ್ತಿದ್ದರು.

    ಆರೋಪಿಗಳು ಸುಮಾರು ಐದು ಕೆಜಿಯಷ್ಟು ಚಿನ್ನ ಕಳ್ಳತನ ಮಾಡಿದ್ದಾರೆ. ಈ ಗ್ಯಾಂಗ್ ಮೇಲೆ ಸುಮಾರು ಮುವತ್ತು ಪ್ರಕರಣಗಳಿವೆ. ಗೋವಿಂದ್ ಸಿಂಗ್ ಮೇಲೆ 2009ರಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆ ಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. 2009ರಿಂದ ಇಲ್ಲಿಯವರೆಗೆ ಈ ಖದೀಮ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಸದ್ಯ ಈ ಗ್ಯಾಂಗ್‍ನ ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

    ಈ ಕಳ್ಳರು ಸಾಕಷ್ಟು ಚಿನ್ನವನ್ನು ನೇಪಾಳಕ್ಕೆ ಸಾಗಿಸಿದ್ದು, ಸದ್ಯ ಪೊಲೀಸರು ಒಂದೂವರೆ ಕೆಜಿಯಷ್ಟು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಜೆಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 2.5 ಲಕ್ಷದ ಚಿನ್ನದ ಸರ ಕದ್ದು ಮತ್ತೊಂದು ಅಂಗಡಿಯಲ್ಲಿ ಬಟ್ಟೆ ಎಗರಿಸಿದ್ರು: ಕಾರ್ಕಳ ಕಳ್ಳಿಯರ ಕೈ ಚಳಕ ವಿಡಿಯೋ ನೋಡಿ

    2.5 ಲಕ್ಷದ ಚಿನ್ನದ ಸರ ಕದ್ದು ಮತ್ತೊಂದು ಅಂಗಡಿಯಲ್ಲಿ ಬಟ್ಟೆ ಎಗರಿಸಿದ್ರು: ಕಾರ್ಕಳ ಕಳ್ಳಿಯರ ಕೈ ಚಳಕ ವಿಡಿಯೋ ನೋಡಿ

    ಉಡುಪಿ: ಚಿನ್ನ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಂದು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಇದೇ ತಂಡ ನಗರದ ಬಟ್ಟೆ ಅಂಗಡಿಯೊಂದರಲ್ಲಿಯೂ ಸಾವಿರಾರು ರೂಪಾಯಿ ಮೌಲ್ಯದ ಬಟ್ಟೆಗಳನ್ನು ಕದ್ದಿರುವ ವಿಚಾರ ಬೆಳಕಿಗೆ ಬಂದಿದೆ.

    ಕಾರ್ಕಳ ನಗರದ ಆಭರಣ ಜ್ಯುವೆಲ್ಲರ್ಸ್‍ಗೆ ಬಂದ ಮೂವರು ನಮಗೆ ಮಾಂಗಲ್ಯ ಸರ ತೋರಿಸಿ ಎಂದು ಕೇಳಿದ್ದಾರೆ. ಡಿಸೈನ್ ನೋಡುವ ವೇಳೆ ಇದೆಲ್ಲಾ ಹಳೆಯ ವಿನ್ಯಾಸ ಎಂದು ಹೇಳಿ ಬೇರೆ ವಿನ್ಯಾಸದ ಸರವನ್ನು ತೋರಿಸುವಂತೆ ಹೇಳಿದ್ದಾರೆ. ಅಂಗಡಿಯ ಸಿಬ್ಬಂದಿ ಬೇರೆ ಡಿಸೈನ್ ತೆಗೆಯುವಷ್ಟರಲ್ಲಿ ಮಾಂಗಲ್ಯ ಸರ ಎಗರಿಸಿದ್ದಾರೆ.

    ಎರಡು ಮಾಂಗಲ್ಯ ಸರ ಕದ್ದ ಮಹಿಳೆ ಕೆಲವೇ ನಿಮಿಷದಲ್ಲಿ ಡಿಸೈನ್ ಇಷ್ಟಾಗಿಲ್ಲ. ಬೇರೆ ಕಡೆ ಹೋಗ್ತೇವೆ ಅಂತ ಅಲ್ಲಿಂದ ಎಲ್ಲರೂ ತೆರಳುತ್ತಾರೆ. ಜ್ಯುವೆಲ್ಲರಿಯಿಂದ ತೆರಳುವ ಮೊದಲು ಈ ಮೂವರು 32 ಗ್ರಾಂ ಮತ್ತು 40 ಗ್ರಾಂ ತೂಕದ ಎರಡು ಮಾಂಗಲ್ಯ ಸರವನ್ನು ಎಗರಿಸಿದ್ದರು.

    ಬಟ್ಟೆ ಕಳ್ಳತನ: ಕಾರ್ಕಳ ನಗರದ ಬಂಡೀಮಠದ ರಿಜ್ವಾನ್ ಎಂಬುವವರ ಬಟ್ಟೆ ಅಂಗಡಿಗೆ ಇದೇ ತಂಡ ಆಗಮಿಸಿದೆ. ಇಲ್ಲೂ ಮೂರು ಜನರ ಟೀಂ. ಆದ್ರೆ ಗಂಡಸು ಮಾತ್ರ ಬೇರೆ. ಇಬ್ಬರು ಮಹಿಳೆಯರು ಅವರೇ, ಬಟ್ಟೆ ಅಂಗಡಿಗೆ ಬಂದು ನಮಗೆ ಬ್ರ್ಯಾಂಡೆಡ್ ಬಟ್ಟೆ ಬೇಕು ಅಂತ ಕೇಳ್ತಾರೆ. ಮೂರು ಜನ ಮೂರು ದಿಕ್ಕಿನಲ್ಲಿ ಬಟ್ಟೆಗಳ ಸೆಲೆಕ್ಷನ್‍ನಲ್ಲಿ ತೊಡಗುತ್ತಾರೆ. ಅಲ್ಲಿ ಚಿನ್ನ ಎಗರಿಸಿದ ಕಳ್ಳಿ ಇಲ್ಲೂ ತನ್ನ ಕೈಚಳಕ ತೋರಿಸಿದ್ದಾಳೆ.

    ಈ ಸಂಬಂಧ ಜ್ಯುವಲ್ಲರಿ ಶಾಪ್ ಮಾಲೀಕ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.

    https://youtu.be/tjbidsqO6Js