Tag: The court

  • ಮೊಸರಿಗಾಗಿ ಪತ್ನಿಗೆ ಚಾಕು ಇರಿದ ಗಂಡನಿಗೆ 8 ವರ್ಷ ಜೈಲು

    ಮೊಸರಿಗಾಗಿ ಪತ್ನಿಗೆ ಚಾಕು ಇರಿದ ಗಂಡನಿಗೆ 8 ವರ್ಷ ಜೈಲು

    ಮುಂಬೈ: ಮನೆಗೆ ತಂದ ಮೊಸರನ್ನ ತಿಂದಿದ್ದಕ್ಕೆ ಪತ್ನಿಗೆ ಚಾಕು ಇರಿದ ಪತಿಗೆ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆಯನ್ನ ವಿಧಿಸಿದೆ.

    ಸಚಿನ್ ಮಾಲೊರೆ (39) ಆಂಟಾಪ್ ಹಿಲ್ ನಿವಾಸಿಯಾಗಿದ್ದಾನೆ. ಈತನಿಂದ ಹಲ್ಲೆಗೊಳಗಾದ ಪತ್ನಿ ರಂಜನಾ ಆಗಿದ್ದಾಳೆ. ದಂಪತಿ ಜಗಳ ಕೋರ್ಟ್ ಮೆಟ್ಟಲೇರಿತ್ತು. ಇದೀಗ ಆರೋಪಿಗೆ 8 ವರ್ಷ ಜೈಲು ಶಿಕ್ಷೆಯಾಗಿದೆ.

    ಪ್ರಕರಣ ಹಿನ್ನೆಲೆ:
    ಸಚಿನ್ ಮನೆಗೆ ತಂದಿದ್ದ ಮೊಸರನ್ನ ಪತಿಗೆ ನೀಡದೇ ರಂಜನಾ ತಿಂದಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಗಲಾಟೆಯಾಗಿದೆ. ಪತಿ ಆಕೆಗೆ ಬೆಕ್ಕು ನೀನು ಎಂದು ಕರೆದಿದ್ದಾನೆ. ಇದು ಅವರಿಬ್ಬರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ. ಕೋಪಗೊಂಡ ಪತಿ, ಪತ್ನಿಯ ಹೊಟ್ಟೆಗೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಅಗ ನೆರೆಹೊರೆಯವರು ಬಂದು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ರಂಜನಾ ಪತಿ ವಿರುದ್ಧ ದೂರನ್ನು ದಾಖಲಿಸಿದ್ದಳು. 2 ವರ್ಷಗಳ ಹಿಂದೆ ನಡೆದಿರುವ ಈ ಪ್ರಕರಣಕ್ಕೆ ಸೆಷನ್ಸ್ ನ್ಯಾಯಾಲಯವು ಅಪರಾಧಿ ಪತಿರಾಯನಿಗೆ 8 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

    2017ರಲ್ಲಿ ಬಂಧನಕ್ಕೊಳಗಾದ ಸಚಿನ್ ನನ್ನು ಜೈಲಿನಲ್ಲಿ ಇಡಲಾಗಿತ್ತು. ವಿಚಾರಣೆಯ ಸಮಯದಲ್ಲಿ, ಸೆಷನ್ಸ್ ನ್ಯಾಯಾಲಯವು ಪತ್ನಿ ರಂಜನಾ ಆಕಸ್ಮಿಕವಾಗಿ ಉಕ್ಕಿನ ಪಾತ್ರೆ ಮೇಲೆ ಬಿದ್ದು ಗಾಯಗೊಂಡಿದ್ದಾಳೆ ಎಂದು ಆರೋಪಿ ಅಪವಾದವನ್ನು ತಳ್ಳಿ ಹಾಕಿದ್ದನು.

    ಸಚಿನ್ ನಿರುದ್ಯೋಗಿ ಆಗಿದ್ದನು. ಕುಡಿದು ಮನೆಗೆ ಬರುತ್ತಿದ್ದನು. ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು ಎಂದು ರಂಜನಾ ತಾಯಿ ನ್ಯಾಯಾಲಯದಲ್ಲಿ ಹೇಳಿದ್ದಾರೆ. ದೂರುದಾರ ರಂಜನಾ ಸಾಕ್ಷ್ಯವನ್ನು ಹಾಗೂ ವೈದ್ಯಕೀಯ ಸಾಕ್ಷ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳು ಆರೋಪಿ ಸಚಿನ್ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ. ಸಾಕ್ಷಿ ಆಧಾರಗಳನ್ನು ಪರಿಶೀಲನೆ ಮಾಡಿ ನ್ಯಾಯಾಲಯವಯ ತೀರ್ಪು ನೀಡಿದೆ.

  • ಪೊಲೀಸರಿಗೆ ಹೈಕೋರ್ಟ್ ನಿಂದ ಖಡಕ್ ಎಚ್ಚರಿಕೆ

    ಪೊಲೀಸರಿಗೆ ಹೈಕೋರ್ಟ್ ನಿಂದ ಖಡಕ್ ಎಚ್ಚರಿಕೆ

    ಬೆಂಗಳೂರು: ಸುಮ್ಮನೆ ಸುಮ್ಮನೆ ಕೇಸ್ ಹಾಕಿ ಅರೆಸ್ಟ್ ಮಾಡಿ ಜೈಲ್ ಪಾಲು ಮಾಡಿ ಕೋರ್ಟ್ ಕಚೇರಿ ಅಲೆಯುವಂತೆ ಮಾಡೋ ಪೊಲೀಸರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆಯನ್ನು ನೀಡಿದೆ.

    ಹೌದು, ಯಾವುದೋ ಕೇಸಿಗೆ ಇನ್ಯಾರನ್ನೋ ಅರೆಸ್ಟ್ ಮಾಡಿ ಜನಸಾಮಾನ್ಯರಿಗೆ ಪೊಲೀಸರು ಕಿರುಕುಳು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೇ ಸಾಕ್ಷಿ ಏನು ಇಲ್ಲ ಅಂತ ಬಿಟ್ಟು ಕಳುಹಿಸಿದ ಉದಾಹರಣೆಗಳಿವೆ. ಆದರೆ ಅರೆಸ್ಟ್ ಆದ ವ್ಯಕ್ತಿಯ ಗೌರವ ಸಮಾಜದಲ್ಲಿ ಏನಾಗಬಹುದು ಅನ್ನೋ ಕಿಂಚಿತ್ತು ಕಾಳಜಿ ಸಹ ಪೊಲೀಸರಿಗೆ ಇರೋದಿಲ್ಲ. ಹಾಗಾಗಿ ಹೈಕೋರ್ಟ್ ಸುಖಾ ಸುಮ್ಮನೆ ಅರೆಸ್ಟ್ ಮಾಡಿದರೆ ನಿಮ್ಮ ಮೇಲೆ ದಂಡ ಹಾಕಬೇಕಾಗುತ್ತದೆ ಅನ್ನೋ ಎಚ್ಚರಿಕೆ ನೀಡಿದೆ.

    ಮಂಗಳೂರಿನ ಕೇಸ್ ಒಂದರ ವಿಚಾರಣೆ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ನ್ಯಾಯಾಧೀಶರು ಹೇಳಿದ್ದಾರೆ. ಎಫ್‍ಐಆರ್ ಹಾಕುವಾಗ ಇರೋ ವ್ಯಕ್ತಿಯ ಹೆಸರು ಚಾರ್ಜ್ ಶೀಟ್ ಹಾಕುವಾಗ ಇರೋದಿಲ್ಲ ಇದರಿಂದ ಆತನ ವಿರುದ್ಧ ಯಾವುದೇ ಸಾಕ್ಷಾಧಾರ ಇಲ್ಲವೆಂದು ಗೊತ್ತಾಗುತ್ತದೆ. ಇದರಿಂದ ಆ ವ್ಯಕ್ತಿಯ ಘನತೆ ಸಮಾಜದಲ್ಲಿ ಆತನ ಗೌರವಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ ಸುಖಾ ಸುಮ್ಮನೆ ಅರೆಸ್ಟ್ ಆಗಿ ಜೈಲು ಶಿಕ್ಷೆ ಅನುಭವಿಸಿದ್ದಕ್ಕಾಗಿ ಆ ವ್ಯಕ್ತಿಯು ಪರಿಹಾರ ಕೇಳಬಹುದು ಪೊಲೀಸರ ಮೇಲೆ ಕೇಸ್ ಸಹ ದಾಖಲಿಸಬಹುದು ಅನ್ನೋ ಅಭಿಪ್ರಾಯವನ್ನು ಹಿರಿಯ ವಕೀಲರು ಶ್ಯಾಮ್ ಸುಂದರ್ ವ್ಯಕ್ತಪಡಿಸಿದರು.