Tag: Thane

  • ಮಗನ ನಿರ್ಧಾರದಿಂದ ಖಿನ್ನತೆಗೆ ಜಾರಿದ್ದಾನೆ ಭೂಗತ ಪಾತಕಿ ದಾವೂದ್!

    ಮಗನ ನಿರ್ಧಾರದಿಂದ ಖಿನ್ನತೆಗೆ ಜಾರಿದ್ದಾನೆ ಭೂಗತ ಪಾತಕಿ ದಾವೂದ್!

    ಥಾಣೆ: ಭೂಗತ ಪಾತಕಿ, ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಕೌಟುಂಬಿಕ ಕಲಹಗಳಿಂದ ಖಿನ್ನತೆಗೆ ಒಳಗಾಗಿದ್ದಾನೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

    ದಾವೂದ್ ಉತ್ತರಾಧಿಕಾರಿ ಎಂದೇ ಕರೆಸಿಕೊಂಡಿದ್ದ, ಆತನ ಮಗ ಮೋಯಿನ್ ನವಾಜ್ ಡಿ ಕಸ್ಕರ್ (31) ಮೌಲ್ವಿ ಯಾಗಲು ನಿರ್ಧಾರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

    ಕಾನೂನು ಬಾಹಿರ ಕೃತ್ಯಗಳಿಂದ ಬೇಸತ್ತು ಹೋಗಿರುವ ಮೋಯಿನ್, ಕುಟುಂಬ ವ್ಯವಹಾರಗಳನ್ನು ಮುಂದುವರೆಸದೇ ಇರಲು ನಿರ್ಧರಿಸಿದ್ದು, ತಂದೆಯ ಕೃತ್ಯಗಳಿಂದ ಇಡೀ ಕುಟುಂಬಕ್ಕೆ ಕಳಂಕ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾನೆ ಎನ್ನಲಾಗಿದೆ.

    ಅಪಾರ ಸಂಪತ್ತು, ತೋಳ್ಬಲ ಹೊಂದಿದ್ದರೂ, ದಾವೂದ್ ತನ್ನ ಕುಟುಂಬದ ಸಮಸ್ಯೆಗಳನ್ನು ನಿವಾರಿಸಲು ವಿಫಲನಾಗಿದ್ದಾನೆ. ದಾವೂದ್ ನ ಮೂರು ಮಕ್ಕಳಲ್ಲಿ ಮೋಯಿನ್ ಒಬ್ಬನೇ ಗಂಡು ಮಗನಾಗಿದ್ದು, ಧರ್ಮ ನಿಷ್ಠನಾಗಿರುವ ಮೋಯಿನ್ ಮೌಲ್ವಿ (ಧಾರ್ಮಿಕ ಶಿಕ್ಷಕ) ಯಾಗಲು ನಿರ್ಧರಿಸಿದ್ದಾನೆ ಎಂದು ಥಾಣೆ ಪೋಲಿಸ್ ಅಧಿಕಾರಿ ಪ್ರದೀಪ್ ಶರ್ಮಾ ಹೇಳಿದ್ದಾರೆ.

    ಕಳೆದ ಸೆಪ್ಟೆಂಬರ್‍ನಲ್ಲಿ ಥಾಣೆಯ ಎಇಸಿಗೆ ಸಿಕ್ಕಿಬಿದ್ದ ದಾವೂದ್ ಸಹೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ವಿಚಾರಣೆ ವೇಳೆ ಈ ವಿಷಯ ಬಹಿರಂಗಗೊಂಡಿದ್ದು, ಇನ್ನು ಕೆಲವು ಕೌಟುಂಬಿಕ ಭಿನ್ನತೆಗಳು ಹಾಗೂ ವಯೋಸಹಜ ಅನಾರೋಗ್ಯಗಿಂದ ದಾವೂದ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆಂದು ವಿಚಾರಣೆ ವೇಳೆ ಮಾಹಿತಿ ನೀಡಿದ್ದ.

    ಇನ್ನು ಮೋಯಿನ್ ಖುರಾನ್ ನ 6,236 ಶ್ಲೋಕಗಳನ್ನು ಕಂಠಪಾಠ ಮಾಡಿದ್ದು, ಧಾರ್ಮಿಕ ಮುಖಂಡರಿಂದ ಅಪಾರ ಗೌರವ ಗಳಿಸಿದ್ದಾನೆ. ಅಲ್ಲದೇ ಈಗಾಗಲೇ ಶ್ರೀಮಂತ ಜೀವನ ತ್ಯಜಿಸಿರುವ ಮೋಯಿನ್ ಕರಾಚಿಯಲ್ಲಿ ನೀಡಲಾಗಿದ್ದ ಭವ್ಯ ಬಂಗಲೆ ಹಾಗೂ ಐಶಾರಾಮಿ ಸೌಕರ್ಯಗಳನ್ನು ತಿರಸ್ಕರಿಸಿ, ತನ್ನ ಕುಟುಂಬದೊಂದಿಗೆ ತಮ್ಮ ಮನೆಯ ಪಕ್ಕದ ಮಸೀದಿಯೊಂದರಲ್ಲಿ ಜೀವನ ನಡೆಸಲು ಮುಂದಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಮೋಯಿನ್ ಪತ್ನಿ ಹಾಗೂ ಆತನ ಮೂರು ಮಕ್ಕಳು ಪ್ರಸ್ತುತ ಆತನೊಂದಿಗೆ ಮಸೀದಿ ನೀಡಿರುವ ಸಣ್ಣ ಕ್ವಾಟ್ರಸ್ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮೋಯಿನ್ 2011ರಲ್ಲಿ ಪಾಕಿಸ್ತಾನ ಮತ್ತು ಬ್ರಿಟನ್‍ನಲ್ಲಿ ವ್ಯವಹಾರ ಹೊಂದಿರುವ ಉದ್ಯಮಿ ಪುತ್ರಿಯನ್ನು ಮದುವೆಯಾಗಿದ್ದಾನೆ. ಅಲ್ಲದೇ ಮೋಯಿನ್ ಸಹೋದರಿ ಮಹ್ರುಕ್ 2006 ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಜಾವೇದ್ ಮಿಯಾಂದದ್ ಪುತ್ರನನ್ನು ಮದುವೆಯಾಗಿದ್ದಾಳೆ. ಮತ್ತೊಬ್ಬ ದಾವೂದ್ ಪುತ್ರಿ ಮಹ್ರೀನ್, ಅಮೆರಿಕದ ಮೂಲದ ಉದ್ಯಮಿಯನ್ನು ವರಿಸಿದ್ದಾಳೆ.

    ಈ ಹಿಂದೆ ಪೊಲೀಸ್ ವಿಚಾರಣೆ ವೇಳೆ ಇಬ್ರಾಹಿಂ ಕಸ್ಕರ್, ದಾವೂದ್ ಆರೋಗ್ಯವಾಗಿದ್ದು, ಪಾಕಿಸ್ತಾನಿ ಏಜೆನ್ಸಿಗಳ ರಕ್ಷಣೆಯಲ್ಲಿ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಿಕೆ ನೀಡಿದ್ದ. ಆದರೆ ದಾವೂದ್ ಸಹೋದರರ ಪೈಕಿ ಕೆಲವರು ಮೃತಪಟ್ಟಿದ್ದು, ಮತ್ತೊಬ್ಬ ಸಹೋದರ ಅನೀಸ್ ಇಬ್ರಾಹಿಂ ಕಸ್ಕರ್ ಗೆ ವಯಸ್ಸಾಗಿದೆ. ಇನ್ನು ದಾವೂದ್ ತನ್ನ ವ್ಯವಹಾರಗಳನ್ನು ನೋಡಿಕೊಳ್ಳಲು ಹತ್ತಿರದ ಸಂಬಂಧಿಗಳ ಬಗ್ಗೆ ವಿಶ್ವಾಸ ಹೊಂದಿಲ್ಲ ಎಂದು ತಿಳಿದುಬಂದಿದೆ.

    ಇಬ್ರಾಹಿಂ ಕಸ್ಕರ್ ವಿಚಾರಣೆಯನ್ನು ಮುಂದುವರೆಸಿರುವ ಪೊಲೀಸರು, ಮುಂಬರುವ ದಿನಗಳಲ್ಲಿ ದಾವೂದ್ ಕುಟುಂಬ ಹಾಗೂ ಆತನ ಭವಿಷ್ಯದ ಚಟುವಟಿಕೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದ್ದಾರೆ.

  • ಚಡ್ಡಿ ಹಾಕೊಂಡು ಪಾಸ್‍ಪೋರ್ಟ್ ವೆರಿಫಿಕೇಷನ್‍ಗೆ ಬಂದ ವ್ಯಕ್ತಿಯನ್ನ ಠಾಣೆಯಿಂದ ಹೊರಕಳಿಸಿದ ಪೊಲೀಸರು

    ಚಡ್ಡಿ ಹಾಕೊಂಡು ಪಾಸ್‍ಪೋರ್ಟ್ ವೆರಿಫಿಕೇಷನ್‍ಗೆ ಬಂದ ವ್ಯಕ್ತಿಯನ್ನ ಠಾಣೆಯಿಂದ ಹೊರಕಳಿಸಿದ ಪೊಲೀಸರು

    ಥಾಣೆ: ಶನಿವಾರ ಸಂಜೆ ಮಹಾರಾಷ್ಟ್ರದ ಕಲ್ಯಾಣ್ ನಿವಾಸಿಯಾದ ಮಂಗೇಶ್ ದೇಸಲೆ ಪಾಸ್‍ಪೋರ್ಟ್ ವೆರಿಫಿಕೇಷನ್‍ಗಾಗಿ ಇಲ್ಲಿನ ಖಡಕ್‍ಪಾದಾ ಪೊಲೀಸ್ ಠಾಣೆಗೆ ಹೋಗಿದ್ರು. ಆದ್ರೆ ಅವರನ್ನ ಪೊಲೀಸರು ಠಾಣೆಯಿಂದ ಹೊರಗಟ್ಟಿದ್ರು ಎಂದು ಹೇಳಿದ್ದಾರೆ. ಅವರು ಮಾಡಿದ ಅಪರಾಧವಾದ್ರೂ ಏನು ಅಂದ್ರಾ? ಚಡ್ಡಿ ಹಾಕೊಂಡು ಠಾಣೆಗೆ ಹೋಗಿದ್ದು.

    ಈ ಬಗ್ಗೆ ಮಂಗೇಶ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ತಾನು ಹಾಕಿದ ಬಟ್ಟೆಗೆ ಪೊಲೀಸರು ಅವಮಾನ ಮಾಡಿದ್ರು ಎಂದಿದ್ದಾರೆ. ನಾನು ಚಡ್ಡಿ ಹಾಕಿದ್ದೆ. ಅದಕ್ಕೆ ಅವರು ನನ್ನ ಮೇಲೆ ಕೂಗಾಡಲು ಶುರು ಮಾಡಿದ್ರು. ಪೊಲೀಸ್ ಠಾಣೆಗೆ ಬರಲು ಇಂತದ್ದೇ ಬಟ್ಟೆ ತೊಡಬೇಕೆಂಬ ನಿಯಮವೇನಾದ್ರೂ ಇದೆಯಾ ಎಂದು ಕೇಳಿದೆ. ಅವರು ನನಗೆ ಯಾವ ನಿಯಮವನ್ನೂ ತೋರಿಸಲಿಲ್ಲ. ಆದ್ರೆ ಇದು ಭಾರತ, ಅಮೆರಿಕ ಅಲ್ಲ ಎಂದು ಹೇಳಿದ್ರು ಅಂತ ಫೇಸ್‍ಬುಕ್‍ನಲ್ಲಿ ಮಂಗೇಶ್ ಬರೆದುಕೊಂಡಿದ್ದಾರೆ. ಇದರ ಜೊತೆ ಎರಡು ವಿಡಿಯೋಗಳನ್ನೂ ಹಾಕಿದ್ದಾರೆ.

    ಮಂಗೇಶ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಮೊದಲನೇ ವಿಡಿಯೋದಲ್ಲಿ ಪೊಲೀಸರೊಬ್ಬರು ಮಂಗೇಶ್‍ಗೆ ಸರಿಯಾದ ಉಡುಪು ಧರಿಸಿ. ಠಾಣೆಗೆ ಮಹಿಳೆಯರು, ಮಕ್ಕಳು ಕೂಡ ಬರುತ್ತಾರೆ ಎಂದು ಹೇಳಿದ್ದಾರೆ.

    ತನ್ನನ್ನು ಪೊಲೀಸ್ ಠಾಣೆಯಿಂದ ಬಲವಂತವಾಗಿ ಹೊರಹಾಕಲಾಯ್ತು. ಕೇಸ್ ಹಾಕ್ತೀವೆಂದು ಬೆದರಿಸಿದ್ರು ಅಂತ ಮಂಗೇಶ್ ಹೇಳಿದ್ದಾರೆ.

    ವಿಡಿಯೋ ಬಗ್ಗೆ ವಿಚಾರಿಸಿದ್ದಕ್ಕೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಬಾಳಾ ಸಹೇಬ್ ಕದಮ್, ಪೊಲೀಸ್ ಠಾಣೆಗೆ ಬರುವಾಗ ಸರಿಯಾದ ಬಟ್ಟೆ ಹಾಕಿಕೊಂಡು ಬರಲು ನಮ್ಮ ಅಧಿಕಾರಿಗಳು ಅವರಿಗೆ ಹೇಳಿದ್ದಾರಷ್ಟೆ. ಠಾಣೆಗೆ ಮಹಿಳೆಯರೂ ಬರುತ್ತಾರೆ. ಚಡ್ಡಿ ಚೆನ್ನಾಗಿ ಕಾಣೋದಿಲ್ಲ. ಅವರು ಎಂಜಿನಿಯರ್, ಅವರಿಗೆ ಒಳ್ಳೆ ನಡವಳಿಕೆ ಹಾಗೂ ಪೊಲೀಸ್ ಠಾಣೆಗೆ ಬರುವಾಗ ಹೇಗಿರಬೇಕು ಅನ್ನೋದು ತಿಳಿದಿರಬೇಕು ಎಂದು ಹೇಳಿದ್ದಾರೆ.

    ಫೇಸ್‍ಬುಕ್‍ನಲ್ಲಿ ಹಂಚಿಕೊಂಡಾಗಿನಿಂದ ಈವರೆಗೆ ಮಂಗೇಶ್ ಅವರ ವಿಡಿಯೋ 1700ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಮತ್ತೊಂದು ಕಡೆ ಸಾಕಷ್ಟು ಜನ ಮಂಗೇಶ್ ಅವರು ಪೊಲೀಸ್ ಠಾಣೆಗೆ ಚಡ್ಡಿ ಹಾಕಿಕೊಂಡು ಹೋಗಿದ್ದಕ್ಕೆ ಅವರನ್ನ ಟೀಕಿಸಿದ್ದಾರೆ.

    https://www.facebook.com/mangesh.desale/videos/pcb.10213002560631602/10213002511350370/?type=3&theater

    https://www.facebook.com/mangesh.desale/videos/pcb.10213002560631602/10213002486989761/?type=3&theater

  • ಹೆಂಡ್ತಿಗೆ ಪತ್ರ ಬರೆದಿಟ್ಟು ಕಾರಿನೊಳಗೇ ಶೂಟೌಟ್ ಮಾಡ್ಕೊಂಡ..!

    ಹೆಂಡ್ತಿಗೆ ಪತ್ರ ಬರೆದಿಟ್ಟು ಕಾರಿನೊಳಗೇ ಶೂಟೌಟ್ ಮಾಡ್ಕೊಂಡ..!

    ಥಾಣೆ: ಪತ್ನಿಗೆ ಪತ್ರ ಬರೆದಿಟ್ಟು 36 ವರ್ಷದ ವ್ಯಕ್ತಿಯೊಬ್ಬರು ತನ್ನ ಕಾರೊಳಗೆಯೇ ಶೂಟೌಟ್ ಮಾಡ್ಕೊಂಡ ಆಘಾತಕಾರಿ ಘಟನೆಯೊಂದು ಥಾಣೆಯಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ಸಂಜೆ ನಡೆದಿದೆ. ಶೂಟೌಟ್ ಮಾಡ್ಕೊಂಡ ವ್ಯಕ್ತಿಯನ್ನು ಸಂಕೇತ್ ಹನುಮಂತ್ ಜಾಧವ್ ಎಂದು ಗುರುತಿಸಲಾಗಿದ್ದು, ಇವರು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರು. ಲೈಸನ್ಸ್ ಹೊಂದಿರುವ ಗನ್ ನಿಂದಲೇ ಜಾಧವ್ ಈ ಕೃತ್ಯ ಎಸಗಿಕೊಂಡಿದ್ದಾರೆ.

    ಏನಿದು ಪ್ರಕರಣ?: ಭಾನುವಾರ ಮಧ್ಯಾಹ್ನದ ಬಳಿಕ ಜಾಧವ್ ಕೆಲಸವಿದೆ ಅಂತ ತನ್ನ ಕಾರು ತೆಗೆದುಕೊಂಡು ಮನೆಯಿಂದ ಹೊರಟಿದ್ದರು. ಅಂತೆಯೇ ಮೀರಾ ರಸ್ತೆಯಿಂದ ನಂಗ್ಲಾ ಚೌಕಿ ಮಧ್ಯೆ ರಸ್ತೆ ಪಕ್ಕ ಜಾಧವ್ ಒಳಗಡೆಯಿಂದ ಲಾಕ್ ಮಾಡಿ ಕಾರು ನಿಲ್ಲಿಸಿದ್ದಾರೆ. ಬಳಿಕ ತನ್ನ ಬಳಿಯಿದ್ದ ಗನ್ ನಿಂದ ಎದೆಗೆ ಗುರಿಯಿಟ್ಟುಕೊಂಡಿದ್ದಾರೆ.

    ರಸ್ತೆ ಬದಿಯಲ್ಲಿ ತುಂಬಾ ಹೊತ್ತು ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಕಾರಿನ ಹಿಂದಿನ ಗ್ಲಾಸನ್ನು ಒಡೆದಿದ್ದಾರೆ. ಈ ವೇಳೆ ಕಾರಿನ ಒಳಗೆ ಡ್ರೈವರ್ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಅಲ್ಲದೇ ವ್ಯಕ್ತಿಯ ಕೈಯಲ್ಲಿ ಗನ್ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ವ್ಯಕ್ತಿ ತನ್ನ ಕೈಯಿಂದ್ಲೇ ಶೂಟ್ ಮಾಡ್ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಕಂಟ್ರಿವಡಾವಿಲ್ಲ ಠಾಣೆಯ ಪೊಲೀಸರು ಶಂಕಿಸಿದ್ದಾರೆ.

    ಪತ್ರದಲ್ಲೇನಿದೆ?: ಮೃತ ವ್ಯಕ್ತಿ ಕುಳಿತಿದ್ದ ಪಕ್ಕದಲ್ಲಿಯೇ ಡೆತ್ ನೋಟ್ ಬಿದ್ದಿದ್ದು ಅದರಲ್ಲಿ, `ಪ್ರತಿ ದಿನದ ಕೆಲಸದಿಂದ ಬಳಲಿದ್ದೇನೆ.. ಕೆಲಸದ ಒತ್ತಡದಿಂದ ನನ್ನ ಖಾಸಗಿ ಜೀವನಕ್ಕೆ ಸಮಯ ಸಿಗುತ್ತಿಲ್ಲ.. ನಿನ್ನೊಂದಿಗೆ ಕಾಲ ಕಳೆಯಲು ನನಗೂ ಸಮಯವಿಲ್ಲ. ಹೀಗಾಗಿ ತುಂಬಾ ನೊಂದಿದ್ದೇನೆ.. ಅಪಾರ್ಥ ಮಾಡಿಕೊಳ್ಳಬೇಡ.. ಕ್ಷಮಿಸಿಬಿಡು ನನ್ನ ಜೀವನವನ್ನು ಕೊನೆಯಾಗಿಸುತ್ತಿದ್ದೇನೆ’ ಅಂತ ಬರೆದಿದ್ದರು.

    ಥಾಣೆ ಪುರಸಭಾ ಕಾರ್ಪೋರೇಷನ್ ನಲ್ಲಿ ಗುತ್ತಿಗೆದಾರನಾಗಿ ಜಾಧವ್ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು. 8 ವರ್ಷದ ಹಿಂದೆ ಮದುವೆಯಾಗಿರೋ ಜಾಧವ್ ಅವರಿಗೆ 5ವರ್ಷದ ಮಗನಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

  • ಬಾರ್‍ನಲ್ಲಿ ಗಲಾಟೆ-ಗೆಳೆಯನನ್ನು ರಕ್ಷಿಸಲು ಹೋಗಿ ಯುವಕ ದುರ್ಮರಣ

    ಬಾರ್‍ನಲ್ಲಿ ಗಲಾಟೆ-ಗೆಳೆಯನನ್ನು ರಕ್ಷಿಸಲು ಹೋಗಿ ಯುವಕ ದುರ್ಮರಣ

    ಥಾಣೆ: ಬಾರ್ ಗಲಾಟೆಯಲ್ಲಿ ತನ್ನ ಗೆಳೆಯನನ್ನು ರಕ್ಷಿಸಲು ಹೋಗಿ 26 ವರ್ಷದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ.

    ಥಾಣೆಯ ಮಿರಾ ರಸ್ತೆಯಲ್ಲಿರೋ ಬಾರ್ ಸಮೀಪ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಯುವಕನನ್ನು 26 ವರ್ಷದ ನೊವೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?: ದಾಹಿಸರ್ ಪೂರ್ವದ ಅನುಪಮ್ ಬಿಲ್ಡಿಂಗ್ ನಿವಾಸಿಯಾದ ನೊವೇಶ್ ಗುರುವಾರ ರಾತ್ರಿ ತನ್ನ ಗೆಳೆಯರಾದ ನಿಖಿಲ್ ಹಾಗೂ ನೀಲೆಶ್‍ರೊಂದಿಗೆ ಮೀರಾ ರೋಡ್‍ನ ಬಾರ್‍ಗೆ ಬಂದು ಮತ್ತೊಬ್ಬ ಗೆಳೆಯನಿಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಹೊರಗಡೆ ಏನೋ ಜಗಳವಾಗ್ತಿರೋದು ಕೇಳಿಸಿತ್ತು. ಆಗ ಈ ಮೂವರು ಅಲ್ಲಿಗೆ ಹೋಗಿ ನೋಡಿದಾಗ ಅವರ ಗೆಳೆಯ ಕಾರ್ತಿಕ್, ಆರೋಪಿ ಸುಜಿತ್ ಮಿಶ್ರಾ ಹಾಗೂ ಮತ್ತಿಬ್ಬರೊಂದಿಗೆ ಜೋರಾಗಿ ವಾಗ್ವಾದ ನಡೆಸುತ್ತಿದ್ದ.

    ಈ ನಡುವೆ ನೊವೇಶ್ ಶೆಟ್ಟಿ ಗೆಳೆಯನ ಜಗಳ ಬಿಡಿಸಲೆಂದು ಮಧ್ಯೆ ಹೋಗಿದ್ದ. ಆಗ ಸುಜಿತ್ ನೊವೇಶ್‍ನನ್ನು ತಳ್ಳಿದ್ದಾನೆ. ಇದರಿಂದ ಸಿಟ್ಟುಗೊಂಡ ನೊವೇಶ್‍ನ ಗೆಳೆಯ ನಿಖಿಲ್ ಸುಜಿತ್ ಗೆ ಹೊಡೆದಿದ್ದಾನೆ.

    ನಂತರ ಜಗಳ ತಾರಕಕ್ಕೇರಿದ್ದು, ಕಾರ್ತಿಕ್‍ನನ್ನು ಸುಜಿತ್ ನಿಂದಿಸಿದ್ದಾನೆ. ಬಳಿಕ ಕಾರ್ತಿಕ್ ಹತ್ತಿರದ ಪೆಟ್ರೋಲ್ ಬಂಕ್‍ನ ಕಿಟಕಿ ಗಾಜಿನ ಮೇಲೆ ಬಿದ್ದಿದ್ದಾನೆ. ಈ ವೇಳೆ ಸುಜಿತ್ ಗಾಜಿನ ಪೀಸ್ ತೆಗೆದುಕೊಂಡು ನಿಖಿಲ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹಲ್ಲೆಯನ್ನು ತಡೆಯಲು ನೊವೇಶ್ ಅಡ್ಡ ಬಂದಿದ್ದು, ಗಾಜಿನ ಪೀಸ್ ಆತನ ಕುತ್ತಿಗೆಗೆ ಇರಿದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನನಪ್ಪಿದ್ದಾನೆ.

    ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ನೊವೇಶ್ ಮೂರು ದಿನಗಳ ಹಿಂದೆಯಷ್ಟೇ ಮುಂಬೈಗೆ ತೆರಳಿದ್ದ ಅಂತ ಪೊಲೀಸ್ ಮೂಲಗಳು ತಿಳಿಸಿವೆ.

    ಸದ್ಯ ನೊವೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದೇವೆ ಅಂತ ಕಾಶಿಮಿರಾ ಪೊಲೀಸ್ ಠಾಣೆಯ ಎಸ್‍ಐ ಸುರೇಶ್ ಖೆಡೆಕರ್ ಹೇಳಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಿಖಿಲ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಲಿಫ್ಟ್ ಗೆ ಸಿಲುಕಿ ಎಡಗೈ ಕಟ್ ಆದ್ರೂ 1 ಕಿ.ಮೀ ಓಡಿಕೊಂಡು ಮನೆಗೆ ಬಂದ ಬಾಲಕಿ

    ಲಿಫ್ಟ್ ಗೆ ಸಿಲುಕಿ ಎಡಗೈ ಕಟ್ ಆದ್ರೂ 1 ಕಿ.ಮೀ ಓಡಿಕೊಂಡು ಮನೆಗೆ ಬಂದ ಬಾಲಕಿ

    ಥಾಣೆ: ಬಾಲಕಿಯೊಬ್ಬಳ ಎಡಗೈ ಲಿಫ್ಟ್ ಗೆ ಸಿಲುಕಿ ತುಂಡಾಗಿದ್ದರೂ ಆಕೆ 1 ಕಿ.ಮೀ ದೂರ ಓಡಿಕೊಂಡು ಮನೆಗೆ ವಾಪಸ್ ಬಂದ ಘಟನೆ ಥಾಣೆಯಲ್ಲಿ ನಡೆದಿದೆ.

    ಮಂಗಳವಾರ ಸಂಜೆ 8 ವರ್ಷದ ಬಾಲಕಿ ಅರ್ಚನಾಳ ತಾಯಿ ಮನೆ ಬಾಗಿಲು ತೆಗೆದು ನೋಡಿದಾಗ ಮಗಳ ಮೈಮೇಲೆಲ್ಲಾ ರಕ್ತ ಇದ್ದಿದ್ದು ಕಂಡು ಶಾಕ್ ಆಗಿದ್ರು. ಅಲ್ಲದೆ ಆಕೆಯ ಎಡಗೈ ಕೂಡ ಕಾಣಿಸುತ್ತಿರಲಿಲ್ಲ. ಅರ್ಚನಾ ಅಳುತ್ತಿರಲಿಲ್ಲ. ಬದಲಿಗೆ ಶಾಂತವಾಗಿಯೇ ನಡೆದಿದ್ದನ್ನು ಅಮ್ಮನಿಗೆ ವಿವರಿಸಿದ್ದಳು. ಅರ್ಚನಾ ಟ್ಯೂಷನ್ ಕ್ಲಾಸ್‍ಗೆ ಹೋಗುವ ಥಾಣೆಯ ಕಾಸರವಡಾವ್ಲಿಯ ಕಟ್ಟಡದಲ್ಲಿ ಲಿಫ್ಟ್ ನ ಬಾಗಿಲಿಗೆ ಸಿಲುಕಿ ಕೈ ಕಟ್ ಆಗಿತ್ತು.

    ಈ ವಿಷಯವನ್ನ ತಾಯಿಗೆ ತಿಳಿಸಲು ಆಕೆ 1 ಕಿ.ಮೀ ದೂರ ಓಡಿಕೊಂಡು ಮನೆಗೆ ವಾಪಸ್ ಬಂದಿದ್ದಾಳೆ. ಆಸ್ಪತ್ರೆಯಲ್ಲಿ ವೈದ್ಯರು ಕಟ್ ಆದ ಕೈ ಎಲ್ಲಿ ಎಂದು ಕೇಳಿದ ನಂತರವಷ್ಟೇ ಪೋಷಕರು ಕಟ್ಟಡದ ಲಿಫ್ಟ್ ಬಳಿ ಹುಡುಕಲು ಹೋಗಿದ್ದಾರೆ. ದುರಾದೃಷ್ಟವೆಂಬಂತೆ ಅರ್ಚನಾಳ ನರಗಳು ಹಾಗೂ ರಕ್ತನಾಳಗಳಿಗೆ ಗಂಭೀರ ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಕೈ ಮರುಜೋಡಣೆ ಮಾಡಲು ಅಸಾಧ್ಯವಾಗಿದೆ. ಅರ್ಚನಾ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದು, ಥಾಣೆಯ ಆದರ್ಶ ವಿದ್ಯಾ ಮಂದಿರದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

    ಲಿಫ್ಟ್ ನಲ್ಲಿ ಶೂ ಸಿಕ್ಕಿಹಾಕೊಂಡಿತ್ತು: ಅರ್ಚನಾ ಇತ್ತೀಚೆಗಷ್ಟೇ ಟ್ಯೂಷನ್‍ಗೆ ಸೇರಿಕೊಂಡಿದ್ದಳು. ಲಿಫ್ಟ್ ನ ಸಂದಿಯಲ್ಲಿ ಆಕೆಯ ಪಾದರಕ್ಷೆ ಸಿಲುಕಿಕೊಂಡಿದ್ದು, ಅದನ್ನ ಬಿಡಿಸಿಕೊಳ್ಳಲು ಯತ್ನಿಸಿದಾಗ ಲಿಫ್ಟ್ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಎಡಗೈ ಸಿಲುಕಿಕೊಳ್ತು ಎಂದು ನಮಗೆ ಹೇಳಿದಳು ಅಂತ ಅರ್ಚನಾಳ ಸಂಬಂಧಿ ನವಿತ್ ಹೇಳಿದ್ದಾರೆ.

    ಇಷ್ಟಾದರೂ ಅರ್ಚನಾ ಗಾಬರಿಯಾಗದೇ, ಶಾಂತ ರೀತಿಯಲ್ಲೇ ಘಟನೆಯನ್ನ ವಿವರಿಸಿದ್ದು ನೋಡಿ ಕುಟುಂಬಕ್ಕೆ ಶಾಕ್ ಆಗಿದೆ. ಗೋಧ್‍ಬುಂದರ್ ರಸ್ತೆಯಿಂದ ಕೆಇಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಆಕೆ ಎಚ್ಚರವಾಗೇ ಇದ್ದಳು. ನಮ್ಮೊಂದಿಗೆ ಮಾತಾಡುತ್ತಿದ್ದಳು. ವೈದ್ಯರು ಕೇಳಿದ ನಂತರವಷ್ಟೇ ನಮಗೆ ಆಕೆಯ ಕಟ್ ಆಗಿದ್ದ ಎಡಗೈ ನಮ್ಮ ಬಳಿ ಇಲ್ಲದಿರುವುದು ಗೊತ್ತಾಯಿತು. ಥಾಣೆಯ ನರ್ಸಿಂಗ್ ಹೋಮ್‍ವೊಂದರಲ್ಲಿ ಡ್ರೆಸ್ಸಿಂಗ್ ಮಾಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಹೇಳಿದ್ರು ಎಂದು ನವಿತ್ ಹೇಳಿದ್ದಾರೆ.

    ಅರ್ಚನಾಳ ಎಡಗೈಯಲ್ಲಿ ಮೊಣಕೈಯಿಂದ ಮೇಲ್ಭಾಗಕ್ಕೆ ಆಂಪ್ಯುಟೇಷನ್ ಚಿಕಿತ್ಸೆ ನೀಡಲಾಗಿದೆ. ಈಗ ಆಕೆಯ ಸ್ಥಿತಿ ಸಹಜವಾಗಿದೆ. ಆರ್ಥೋಪೆಡಿಕ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವೈದ್ಯರಾದ ಡಾ. ಅವಿನಾಶ್ ಸುಪೆ ಹೇಳಿದ್ದಾರೆ.

    ಕಾಸರವಡಾವ್ಲಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಡಿಎಸ್ ಧೋಲೆ ಈ ಬಗ್ಗೆ ಮಾತನಾಡಿ, ದೂರು ದಾಖಲಿಸಲು ಬಯಸುತ್ತೀರಾ ಎಂದು ನಾವು ಅವರ ಕುಟುಂಬಕ್ಕೆ ಕೇಳಿದೆವು. ಆದ್ರೆ ಅವರು ನಿರಾಕರಿಸಿದ್ರು. ಇದು ಬಾಲಕಿಯ ತಪ್ಪೇ ಇರಬಹುದು ಎಂದು ಹೇಳಿದ್ರು. ಆದ್ರೆ ನಾವು ಬಾಲಕಿಯ ಹೇಳಿಕೆ ಪಡೆಯಲು ನಮ್ಮ ಅಧಿಕಾರಿಗಳನ್ನ ಆಸ್ಪತ್ರೆಗೆ ಕಳಿಸಿದ್ದೇವೆ ಅಂದ್ರು.

    ಕೈ ದಾನ: ಈ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಬಾಲಕಿಯ ಮುರಿದ ಕೈಯನ್ನ ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ. ಬಾಲಕಿಯ ಕೈನ ರಕ್ತನಾಳಗಳಿಗೆ ತೀವ್ರವಾದ ಗಾಯವಾಗಿದ್ರಿಂದ ಅದನ್ನು ಮರುಜೋಡಣೆ ಮಾಡಲು ಸಾಧ್ಯವಿಲ್ಲ. ಆದ್ರೆ ಕಟ್ ಆಗಿರೋ ಕೈಯನ್ನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಬಹುದು. ಮೂಳೆ ಮತ್ತು ಸ್ನಾಯುಗಳು ಉಪಯೋಗಕ್ಕೆ ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾಗಿ ಅರ್ಚನಾ ಸಂಬಂಧಿ ಹೇಳಿದ್ದಾರೆ. ಶೀಘ್ರದಲ್ಲೇ ನಾವು ಕೈ ದಾನದ ಎಲ್ಲಾ ಪ್ರಕ್ರಿಯೆ ಮುಗಿಸಲಿದ್ದೇವೆ ಎಂದಿದ್ದಾರೆ.

  • ಪತಿಯ ಸ್ನೇಹಿತರಿಂದಲೇ ಮಹಿಳೆ ಮೇಲೆ ಗ್ಯಾಂಗ್‍ರೇಪ್!

    ಪತಿಯ ಸ್ನೇಹಿತರಿಂದಲೇ ಮಹಿಳೆ ಮೇಲೆ ಗ್ಯಾಂಗ್‍ರೇಪ್!

    ಥಾಣೆ: ಪತಿಯ ಇಬ್ಬರು ಸ್ನೇಹಿತರು ಸೇರಿ ಗ್ಯಾಂಗ್‍ರೇಪ್ ಮಾಡಿರುವ ಬಗ್ಗೆ 36 ವರ್ಷದ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.

    ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ಪತಿ ಜೈಲಿನಲ್ಲಿದ್ದು, ಈ ಸಂದರ್ಭವನ್ನು ಉಪಯೋಗಿಸಿಕೊಂಡ ಆರೋಪಿಗಳು ಸಂತ್ರಸ್ತೆಗೆ ನಿನ್ನ ಗಂಡನನ್ನು ಜೈಲಿನಿಂದ ಬಿಡಿಸಲು ನಾವು ಸಹಾಯ ಮಾಡುತ್ತೇವೆ ಎಂದು ಹೇಳಿ ಅತ್ಯಾಚಾರ ಎಸಗಿದ್ದಾರೆ ಎಂದು ತುಲಿಂಜ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    sಶುಕ್ರವಾರ ಜಿಲ್ಲೆಯ ನಲ್ಲ ಸೋಪಾರ ಪ್ರದೇಶದ ಚಾವಲ್‍ನಲ್ಲಿರುವ ಸಂತ್ರಸ್ತೆಯ ಮನೆಗೆ ಬಂದ ಇಬ್ಬರು ಆರೋಪಿಗಳು ಅತ್ಯಾಚಾರ ಮಾಡಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

    ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376ಡಿ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾಐ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.

  • ಮೊದಲ ಮಗುವಿನ ಹೆರಿಗೆ ಆಟೋದಲ್ಲಿ, 2ನೇ ಮಗುವಿಗೆ ರೈಲ್ವೇ ಸ್ಟೇಷನ್‍ನಲ್ಲಿ ಜನ್ಮ ನೀಡಿದ ಮಹಿಳೆ

    ಮೊದಲ ಮಗುವಿನ ಹೆರಿಗೆ ಆಟೋದಲ್ಲಿ, 2ನೇ ಮಗುವಿಗೆ ರೈಲ್ವೇ ಸ್ಟೇಷನ್‍ನಲ್ಲಿ ಜನ್ಮ ನೀಡಿದ ಮಹಿಳೆ

    ಥಾಣೆ: ರೈಲ್ವೇ ಸ್ಟೇಷನ್ ನಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಥಾಣೆಯಲ್ಲಿ ನಡೆದಿದೆ.

    ಮೀನಾಕ್ಷಿ ಎಂಬವರು ಥಾಣೆ ರೈಲ್ವೆ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ್ದು, ರೈಲ್ವೇ ಭದ್ರತಾ ಪಡೆಯ ಮಹಿಳಾ ಪೇದೆಯೊಬ್ಬರು ಇವರಿಗೆ ಸಹಾಯ ಮಾಡಿದ್ದಾರೆ.

    ನಿಲ್ದಾಣದಲ್ಲಿ ಸ್ಕ್ಯಾನಿಂಗ್ ಮಷೀನ್ ನೋಡಿಕೊಳ್ಳೋ ಮಹಿಳಾ ಪೇದೆ ಶೋಭಾ ಮೊಟೆ, ಮೀನಾಕ್ಷಿ ಎಂಬವರಿಗೆ ಸಹಾಯ ಮಾಡಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ತಾಯಿ ಮಗು ಇಬ್ಬರನ್ನೂ ಥಾಣೆಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

    ಏನಿದು ಘಟನೆ?: ಶೋಭಾ ಮೋಟೆ ಅವರು ರೈಲ್ವೇ ನಿಲ್ದಾಣದಲ್ಲಿ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಫ್ಲಾಟ್‍ಫಾರಂನಲ್ಲಿ ಮಹಿಳೆಯೊಬ್ಬರು ನರಳಾಡುತ್ತಿರುವುದು ಕೇಳಿತ್ತು. ಕೂಡಲೇ ಶೋಭಾ ಸ್ಥಳಕ್ಕೆ ತೆರಳಿದಾಗ ಗರ್ಭಿಣಿಯೊಬ್ಬರು ಪ್ರಸವ ವೇದನೆಯಿಂದ ನರಳಾಡುತ್ತಿದ್ದರು. ಇದನ್ನು ಕಂಡ ಶೋಭಾ ಅವರಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆಯ ಕಿಟ್ ಹಾಗೂ ಒಂದು ಕಂಬಳಿ ತರಿಸಿ ಮಹಿಳೆಗೆ ಸಹಾಯ ಮಾಡಿ ಹೆರಿಗೆ ಮಾಡಿಸಿದ್ದಾರೆ.

    ಗರ್ಭಿಣಿಯಾಗಿದ್ದ 24 ವರ್ಷದ ಮೀನಾಕ್ಷಿ ಸಂದೇಶ್ ಜಾಧವ್ ಬದ್ಲಾಪುರ್ ನಿವಾಸಿಯಾಗಿದ್ದು ಅವರ ಹೆಸರನ್ನು ಪತಿ ಸಂದೇಶ್ ಘಾಟ್ಕೋಪರ್ ಮೂಲದ ರಾಜವಾಡಿ ಆಸ್ಪತ್ರೆಯಲ್ಲಿ ನೊಂದಾಯಿಸಿದ್ದರು. ಮೀನಾಕ್ಷಿ ಅವರ ಹೆರಿಗೆಗೆ ಇನ್ನೂ 25 ದಿನಗಳ ಸಮಯವಿತ್ತು.

    ನನ್ನ ಸಹೋದರಿಯೊಬ್ಬಳು ಘೋಟ್ಕೋಪರ್ ನಲ್ಲಿ ನೆಲೆಸಿದ್ದು, ನಾವು ಕೂಡ ಅಲ್ಲಿಗೆ ಹೋಗಲು ನಿರ್ಧರಿಸಿದ್ದೆವು. ಆದ್ರೆ ಕಳೆದ ಸಂಜೆ ಮೀನಾಕ್ಷಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆಕೆಯನ್ನು ಥಾಣೆಗೆ ಕರೆದುಕೊಂಡು ಬರಲು ತಾಯಿಗೆ ಹೇಳಿದ್ದೆ. ಅಲ್ಲಿಂದ ಕಾರ್‍ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದ್ದೆ ಅಂತಾ ಸಂದೇಶ್ ಹೇಳಿದ್ದಾರೆ. ಮೀನಾಕ್ಷಿ ಅವರಿಗೆ ಈ ಮಗು ಎರಡನೆಯದಾಗಿದ್ದು, ಮೊದಲ ಮಗುವಿನ ಹೆರಿಗೆ ಆಟೋ ರಿಕ್ಷಾದಲ್ಲಿ ಆಗಿತ್ತು ಅಂತಾ ಸಂದೇಶ್ ಹೇಳಿದ್ದಾರೆ.

  • ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ಪ್ರೇಮಿ

    ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ಪ್ರೇಮಿ

    ಥಾಣೆ: ಪ್ರೇಮ ವೈಫಲ್ಯದಿಂದ ಬೇಸತ್ತು ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ಆಕೆಯ ಕಣ್ಣೆದುರೇ ಆತ್ಮಹತ್ಯೆಗೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಹನಿ ಅಸ್ವಾನಿ (26) ಆತ್ಮಹತ್ಯೆಗೆ ಶರಣಾದ ಯುವಕ. ಮೇ 21ರಂದು ಉಲ್ಲಾಸನಗರದಲ್ಲಿರುವ ತಮ್ಮ ನಿವಾಸದಲ್ಲಿ ಹನಿ ಅಸ್ವಾನಿ ನೇಣಿಗೆ ಶರಣಾಗಿದ್ದು, ಈಗ ಆತನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಏನಿದು ಲವ್ ಸ್ಟೋರಿ?
    ಅಸ್ವಾನಿ ತನ್ನ ಕಾಲೇಜಿನ ಯುವತಿಯನ್ನು 6 ವರ್ಷದಿಂದ ಪ್ರೀತಿಮಾಡುತ್ತಿದ್ದ. ಯುವತಿ ಕೂಡ ಈತನನ್ನು ತುಂಬಾ ಪ್ರೀತಿಸುತ್ತಿದ್ದಳು. ಏನೋ ಒಂದು ಕಾರಣಕ್ಕೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಲವ್ ಬ್ರೇಕಪ್ ಆಗಿತ್ತು.

    ಬ್ರೇಕಪ್ ಆಗಿದ್ದರೂ ಅಸ್ವಾನಿ ಪ್ರೀತಿ ಮಾಡಿದ ತನ್ನ ಹಳೇ ಪ್ರೇಯಸಿಯನ್ನು ಮರೆತಿರಲಿಲ್ಲ. ಮೇ 21 ರಂದು ಹನಿ ಅಸ್ವಾನಿ ಮತ್ತೆ ತನ್ನ ಮಾಜಿ ಪ್ರೇಯಸಿಯನ್ನು ಭೇಟಿಯಾಗಿದ್ದ. ಆ ವೇಳೆ ಇಬ್ಬರ ಮಧ್ಯೆ ಸಣ್ಣ ಜಗಳವಾಗಿತ್ತು. ಆತ ಇದರಿಂದ ನೊಂದು ತನ್ನ ಮನೆಗೆ ಬಂದು ತನ್ನ ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮುಖಾಂತರ ಮಾತನಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ವಿಡಿಯೋ ಈಗ ಸಿಕ್ಕಿತು:
    ಹನಿ ನೇಣಿಗೆ ಶರಣಾಗುತ್ತಿರುವ ವಿಡಿಯೋ ಆತನ ಪೋಷಕರಿಗೆ ಕೆಲ ದಿನಗಳ ಹಿಂದೆ ಸಿಕ್ಕಿದೆ. ಈ ವಿಡಿಯೋವನ್ನು ಪೊಲೀಸರಿಗೆ ಜೂನ್ 18ರಂದು ತೋರಿಸಿ ದೂರು ನೀಡಿದ್ದಾರೆ. ಪೊಲೀಸರು ಹನಿ ಅಸ್ವಾನಿಯ ಮಾಜಿ ಪ್ರೇಯಸಿ ವಿರುದ್ಧ ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.