Tag: thamilnadu

  • 1 ಲಕ್ಷ ರೂ. ಸಾಲ ತೀರಿಸಲು 6 ತಿಂಗಳ ಮಗು ಮಾರಿದ ಅಪ್ಪ

    1 ಲಕ್ಷ ರೂ. ಸಾಲ ತೀರಿಸಲು 6 ತಿಂಗಳ ಮಗು ಮಾರಿದ ಅಪ್ಪ

    – ಪೊಲೀಸರಿಗೆ ದೂರು ನೀಡಿದ ಸಂಬಂಧಿಗಳು
    – ಮೂವರಿಗೆ ನ್ಯಾಯಾಂಗ ಬಂಧನ

    ಚೆನ್ನೈ: ಸಾಲ ತೀರಿಸಲು ಹಣವಿಲ್ಲದೆ 6 ತಿಂಗಳ ಮಗುವನ್ನು ತಂದೆ 1 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಸೇಲಂನ ಲಿನೆಮೇಡನಲ್ಲಿ ನಡೆದಿದೆ.

    ಸಾಲ ತೀರಿಸಲು ಹಣವಿಲ್ಲದೆ ಇರುವಾಗ ತಂದೆಯೇ ತನ್ನ 6 ತಿಂಗಳ ಮಗುವನ್ನು ಒಂದು ಲಕ್ಷರೂಪಾಯಿಗೆ ಮಾರಿದ್ದಾನೆ. ಆರೋಪಿ ತಂದೆಯನ್ನು ಸೌಕತ್ ಆಲಿ ಎಂದು ಗುರುತಿಸಲಾಗಿದೆ. ಈತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಸೌಕತ್‍ನ ಗೆಳೆಯ ಸೆಡ್ಡು ಹಾಗೂ ಮಗುವನ್ನು ಖರೀದಿಸಿದ ಸುಂದರಮ್ ಮಗು ಮಾರಾಟದಲ್ಲಿ ಶಾಮಿಲಾಗಿದ್ದಾರೆ.

    ಮಗುವನ್ನು ಮಾರಾಟ ಮಾಡಿದ್ದು ಯಾಕೆ..?:
    6 ತಿಂಗಳ ಹಿಂದೆ ಸೌಕತ್ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಪತ್ನಿಯ ಕುಟುಂಬದವರು ಮಗುವನ್ನು ನೋಡಲು ಮನೆಗೆ ಬಂದಿದ್ದರು. ಆದರೆ ಮಗು ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಸೌಕತ್ ಆಲಿಯ ಬಳಿ ಸಂಬಂಧಿಕರು ಪ್ರಶ್ನೆ ಮಾಡಿದ್ದಾರೆ. ಈತ ಮಗು ತೀರಿ ಹೋಗಿದೆ ಎಂದು ಕಥೆಯನ್ನು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಸಂಬಂಧಿಗಳು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸೌಕತ್ ಆಲಿಯನ್ನು ವಿಚಾರಣೆ ಮಾಡಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಆಲಿಗೆ ಯಾವುದೇ ಕೆಲಸ ಇರಲಿಲ್ಲ. ಹಾಗಾಗಿ ಸಾಲ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದನು. ಆಗ ಸೌಕತ್ ಮಕ್ಕಳಿಲ್ಲದ ಸುಂದರಮ್ ಎಂಬವರಿಗೆ 1ಕ್ಷ ರೂ.ಗೆ ಮಗುವನ್ನು ಮಾರಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.

    ಮಗುವನ್ನು ಪೊಲೀಸರು ಸುಂದರಂ ಮನೆಯಿಂದ ವಶಪಡಿಸಿಕೊಂಡು ಆಲಿಯ ಪತ್ನಿಗೆ ಹಸ್ತಾಂತರಿಸಿದ್ದಾರೆ. ಮಗುವಿನ ಮಾರಾಟದಲ್ಲಿ ಶಾಮಿಲಾಗಿರುವ ಮೂವರು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಕೆಆರ್‍ಎಸ್‍ನಿಂದ ಇದಕ್ಕಿದ್ದಂತೆ ನೀರು ಬಿಟ್ರು- ನಡುನೀರಲ್ಲಿ ಸಿಲುಕಿದ್ದ 10 ಪ್ರವಾಸಿಗರನ್ನ ಕಾಪಾಡಿದ ಸ್ಥಳೀಯರು

    ಕೆಆರ್‍ಎಸ್‍ನಿಂದ ಇದಕ್ಕಿದ್ದಂತೆ ನೀರು ಬಿಟ್ರು- ನಡುನೀರಲ್ಲಿ ಸಿಲುಕಿದ್ದ 10 ಪ್ರವಾಸಿಗರನ್ನ ಕಾಪಾಡಿದ ಸ್ಥಳೀಯರು

    ಚಾಮರಾಜನಗರ: ಕೆಆರ್‍ಎಸ್ ನಿಂದ ತಮಿಳುನಾಡಿಗೆ ದಿಢೀರನೆ ನೀರು ಹರಿಸಿರುವ ಹಿನ್ನೆಲೆಯಲ್ಲಿ 10 ಮಂದಿ ಪ್ರವಾಸಿಗರು ಸಿಲುಕಿ ಕೊನೆಗೂ ಪ್ರಾಣಾಪಾಯಾದಿಂದ ಪಾರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಸತ್ತೆಗಾಲದಲ್ಲಿ ನಡೆದಿದೆ.

    ಸತ್ತೆಗಾಲದ ಬಳಿ ಕಾವೇರಿ ನದಿಯಲ್ಲಿ ಪ್ರವಾಸಿಗರು ಆಟ ಆಡುತ್ತಿದ್ದ ವೇಳೆ ಈ ಘಟನೆ ಜರುಗಿದೆ. ಪ್ರವಾಸಿಗರು ನೀರಿಗಿಳಿಯುವ ವೇಳೆ ನೀರಿನ ಪ್ರಮಾಣ ಕಡಿಮೆಯಿತ್ತು. ಹೀಗಾಗಿ ಅವರು ನೀರಿನಲ್ಲಿ ಆಟವಾಡುತ್ತಿದ್ದರು. ಇದೇ ವೇಳೆ ದೀಢರನೇ ನೀರಿನ ಪ್ರಮಾಣ ಹೆಚ್ಚಾಗಿದೆ. ನೀರಿನ ರಭಸ ನೋಡಿ ಪ್ರವಾಸಿಗರು ಬಂಡೆಯ ಮೇಲೆ ಹತ್ತಿದ್ದಾರೆ.

    ನೀರು ರಭಸದಿಂದ ಬರುತ್ತಿರುವುದನ್ನ ಕಂಡ ಪ್ರವಾಸಿಗರು ಗಾಬರಿಗೊಂಡು ಕಿರುಚಿದ್ದಾರೆ. ಇದನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಬಂದು ಉದ್ದವಾದ ಏಣಿಯನ್ನು ಸೇತುವೆ ರೀತಿಯಲ್ಲಿ ಮಾಡಿ ಒಂದು ಬಂಡೆಯಿಂದ ಇನ್ನೊಂದು ಬಂಡೆಗೆ ದಾಟಿಸುವ ಮೂಲಕ ಹರಸಹಾಸಪಟ್ಟು ಪ್ರವಾಸಿಗರನ್ನ ಕಾಪಾಡಿದ್ದಾರೆ.

    ಕೆಆರ್‍ಎಸ್ ನಿಂದ ಮುನ್ನೆಚ್ಚರಿಕೆ ಕ್ರಮ ಇಲ್ಲದೇ ತಮಿಳುನಾಡಿಗೆ ನೀರು ಹರಿಸಿದ್ದೆ ಈ ಘಟನೆಗೆ ಕಾರಣವಾಗಿದೆ. ಆದರೂ ಕೂದಲೆಳೆ ಅಂತರದಲ್ಲಿ 10 ಮಂದಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಇದೀಗ ಮುನ್ನೆಚ್ಚರಿಕೆ ಕ್ರಮ ಇಲ್ಲದೆ ನೀರು ಹರಿಸಿರುವ ಅಧಿಕಾರಿಗಳ ವಿರುದ್ಧ ನದಿ ಪಾತ್ರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=906YhsN2yDM

  • ಪನ್ನೀರ್ ಸೆಲ್ವಂಗೆ ಹೆಚ್ಚಿದ ಸಂಸದರ ಬಲ- ಮಾಧ್ಯಮಗಳ ಮುಂದೆ ಶಶಿಕಲಾ ಶಾಸಕರ ಪರೇಡ್

    ಚೆನ್ನೈ: ಕಳೆದೊಂದು ವಾರದಿಂದ ತಮಿಳುನಾಡು ರಾಜಕೀಯದಲ್ಲಿ ಎದ್ದಿರುವವ ಅಸ್ಥಿರತೆ ಮುಂದುವರಿದಿದೆ. ಎಐಎಡಿಎಂಕೆ ಮಧ್ಯಂತರ ಕಾರ್ಯದರ್ಶಿ ಶಶಿಕಲಾ ನಟರಾಜನ್‍ಗೆ ದಿನದಿಂದ ದಿನಕ್ಕೆ ಬೆಂಬಲ ಕಡಿಮೆಯಾಗುತ್ತಿದೆ. ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಬಣದಲ್ಲೀಗ 9 ಮಂದಿ ಲೋಕಸಭಾ ಸದಸ್ಯರು ಮತ್ತು ಇಬ್ಬರು ರಾಜ್ಯಸಭಾ ಸಂಸದರು ಸೇರಿ 11 ಮಂದಿ ಕಾಣಿಸಿಕೊಂಡಿದ್ದಾರೆ. ಆದರೆ ಶಾಸಕರ ಸಂಖ್ಯೆ ಏಳರಲ್ಲೇ ಇದೆ.

    ಇತ್ತ ಯಾರನ್ನೂ ಕೂಡಿಹಾಕಿಲ್ಲ ಎಂದು ಸ್ಪಷ್ಟಪಡಿಸಿರುವ ಶಶಿಕಲಾ ಭಾನುವಾರ ರಾತ್ರಿ ಮಾಧ್ಯಮಗಳ ಮುಂದೆ ಚೆನ್ನೈನ ಗೋಲ್ಡನ್ ಬೇ ರೆಸಾರ್ಟ್‍ನಲ್ಲಿರುವ ಶಾಸಕರ ಪರೇಡ್ ನಡೆಸಿದ್ರು. ಆದ್ರೆ ಅವರಿಗ್ಯಾರಿಗೂ ಮಾಧ್ಯಮಗಳ ಮುಂದೆ ಮಾತಾಡಲು ಅವಕಾಶ ಮಾಡಿಕೊಟ್ಟಿಲ್ಲ. ಈ ವೇಳೆ ಮಾತಾಡಿದ ಶಶಿಕಲಾ ತಮಗೆ ಇನ್ನೂ 129 ಶಾಸಕರ ಬೆಂಬಲವಿದೆ ಅಂತಾ ಹೇಳಿಕೊಂಡಿದ್ದಾರೆ.

    ಇತ್ತ ಚುನಾಯಿತ ಸರ್ಕಾರದ ಹಣೆಬರಹ ವಿಧಾನಸಭೆಯಲ್ಲೇ ನಿರ್ಧಾರವಾಗಬೇಕೆಂದು ಪ್ರಸಿದ್ಧ ಬೊಮ್ಮಾಯಿ ತೀರ್ಪು ನೀಡಿದ್ದ ಸಂವಿಧಾನಿಕ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿ ಪಿವಿ ಸಾವಂತ್ ತಮಿಳುನಾಡು ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶಶಿಕಲಾ ನಟರಾಜನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಬರುವವರೆಗೆ ರಾಜ್ಯಪಾಲರು ಕಾಯಬಹುದು. ಆದರೆ ಆದಷ್ಟು ಬೇಗ ಏನಾದರೊಂದು ನಿರ್ಧಾರ ಕೈಗೊಳ್ಳಬೇಕೆಂದು ಬೊಮ್ಮಾಯಿ ತೀರ್ಪು ನೀಡಿದ್ದ ಒಂಭತ್ತು ಸದಸ್ಯರ ಸಂವಿಧಾನಿಕ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿ ಸಾವಂತ್ ಹೇಳಿದ್ದಾರೆ. ಆದಷ್ಟು ಬೇಗ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಸೂಚಿಸಬಹುದು. ಅದೊಂದಷ್ಟೇ ರಾಜ್ಯಪಾಲರ ಮುಂದಿರುವ ಆಯ್ಕೆ. ಈ ವೇಳೆ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂಗೆ ಮೊದಲ ಅವಕಾಶ ನೀಡಬಹುದು ಎಂದು ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.

    ಮೂಲಗಳ ಪ್ರಕಾರ ಬುಧವಾರ ಅಥವಾ ಗುರುವಾರ ವಿಶ್ವಾಸಮತ ಸಾಬೀತಿಗೆ ಸೂಚಿಸುವ ಸಾಧ್ಯತೆ ಇದೆ. 235 ಸದಸ್ಯ ಬಲದ ವಿಧಾನಸಭೆಯಲ್ಲಿ ಎಐಎಡಿಎಂಕೆ 134 ಶಾಸಕರನ್ನು ಹೊಂದಿದೆ. ಡಿಎಂಕೆ 9 ಮತ್ತು ಕಾಂಗ್ರೆಸ್ 8 ಶಾಸಕರನ್ನು ಹೊಂದಿದೆ. ಬಹುಮತಕ್ಕೆ ಬೇಕಾಗಿರುವ ಅಗತ್ಯ ಶಾಸಕರ ಸಂಖ್ಯೆ 118. ಒಂದು ವೇಳೆ ಶಶಿಕಲಾ ಬಣದಲ್ಲಿರುವ 20 ರಿಂದ 30 ಶಾಸಕರು ಪನ್ನೀರ್ ಬಣಕ್ಕೆ ಸೇರ್ಪಡೆಗೊಂಡರೂ ಶಶಿಕಲಾ ಸಿಎಂ ಪಟ್ಟಕ್ಕೆ ಏರುವ ಕನಸು ಭಗ್ನವಾಗಲಿದೆ.

  • ತಮಿಳುನಾಡು ಸಿಎಂ ಆಗಲು ಚಿನ್ನಮ್ಮ ಶಶಿಕಲಾ ಸಿದ್ಧತೆ

    ಚೆನ್ನೈ: ಜಯಲಲಿತಾ ಅಕಾಲಿಕ ನಿಧನದ ಬಳಿಕ ತಮಿಳುನಾಡಿನ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಲೇ ಇದೆ. ಸದ್ಯ ಎಐಎಡಿಎಂಕೆ ಪಕ್ಷದ ಸುಪ್ರೀಮೋ, ಪ್ರಧಾನ ಕಾರ್ಯದರ್ಶಿಯಾಗಿರುವ ಚಿನ್ನಮ್ಮ ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಕುರ್ಚಿಗೇರೋದು ನಿಶ್ಚಿತವಾಗ್ತಿದೆ.

    ಇಂದು ಎಐಎಡಿಎಂಕೆಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಹಾಲಿ ಸಿಎಂ ಪನ್ನೀರ್ ಸೇಲ್ವಂ ಬದಲಿಗೆ ಶಶಿಕಲಾ ಅವರನ್ನ ನೂತನ ನಾಯಕಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಜಯಾಗೆ ಆಪ್ತ ಅಧಿಕಾರಿಯಾಗಿದ್ದ ರಾಜ್ಯ ಸರ್ಕಾರದ ಮುಖ್ಯ ಸಲಹೆಗಾರ್ತಿ ಶೀಲಾ ಬಾಲಕೃಷ್ಣನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಇನ್ನಿಬ್ಬರು ಉನ್ನಾತಾಧಿಕಾರಿಗಳಿಗೆ ರಾಜೀನಾಮೆಗೆ ಸೂಚಿಸಿದ್ದಾರೆ.

    ಇತ್ತ ಚುನಾವಣಾ ಆಯೋಗದಿಂದ ಶಶಿಕಲಾಗೆ ಆಘಾತ ಎದುರಾಗಿದೆ. ಪಕ್ಷದ ಪ್ರಧಾನ ಕಾರ್ಯದಶಿಯಾಗಿ ಶಶಿಕಲಾ ನೇಮಕ ಸರಿಯಿಲ್ಲ ಎಂದು ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪಾ ಚುನಾವಣಾ ಆಯೋಗದ ಮೆಟ್ಟಿಲೇರಿದ್ರು. ಈ ಅರ್ಜಿಯನ್ನು ಪರಿಗಣಿಸಿದ ಆಯೋಗ, ವಿವರ ಕೋರಿ ನೋಟೀಸ್ ನೀಡಿದೆ.