Tag: test

  • ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ – ರೋಚಕ ಪಂದ್ಯದಲ್ಲಿ ಭಾಗವಹಿಸಿದ ಹೆಮ್ಮೆ ಇದೆ: ವಿರಾಟ್ ಕೊಹ್ಲಿ

    ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ – ರೋಚಕ ಪಂದ್ಯದಲ್ಲಿ ಭಾಗವಹಿಸಿದ ಹೆಮ್ಮೆ ಇದೆ: ವಿರಾಟ್ ಕೊಹ್ಲಿ

    ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಸೋಲಲು ತಂಡದ ಆಟಗಾರರ ಕಳಪೆ ಬ್ಯಾಟಿಂಗ್ ಕಾರಣ. ಆದರೆ ರೋಚಕ ಪಂದ್ಯದಲ್ಲಿ ಭಾಗವಹಿಸಿದಕ್ಕೆ ಹೆಮ್ಮೆ ಇದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಪಂದ್ಯ ಬಳಿಕ ಮಾತನಾಡಿದ ಕೊಹ್ಲಿ, ಪಂದ್ಯದಲ್ಲಿ ಹಲವು ಬಾರಿ ನಾವು ಕಮ್ ಬ್ಯಾಕ್ ಮಾಡಿದರೂ ಇಂಗ್ಲೆಂಡ್ ಬೌಲರ್ ಗಳು ನಮ್ಮನ್ನು ರನ್ ಕದಿಯಲು ಬೆವರು ಹರಿಸುವಂತೆ ಮಾಡಿದರು. ಆದರೆ ನಮ್ಮ ಬ್ಯಾಟ್ಸ್ ಮನ್‍ಗಳು ಕಳಪೆ ಹೊಡೆತಗಳಿಗೆ ಕೈ ಹಾಕಿದ್ದು ಸೋಲಿಗೆ ಕಾರಣವಾಗಿದೆ. ಪಂದ್ಯದಲ್ಲಿ ಆಟಗಾರರು ತೋರಿದ ಧನಾತ್ಮಕ ಅಂಶಗಳನ್ನು ಗಮಿನಿಸಿ ಮುಂದಿನ ಪಂದ್ಯಕ್ಕೆ ಅಣಿಯಾಗಬೇಕಿದೆ ಎಂದರು.

    ಸೋಲು ಗೆಲುವಿನ ವಿಚಾರ ಹೊರತು ಪಡಿಸಿದರೆ ತಂಡದ ಆಟಗಾರರು ಟೂರ್ನಿಯನ್ನು ರೋಚಕವಾಗಿ ಆರಂಭಿಸಿದ್ದಾರೆ. ಆಟಗಾರರ ಪ್ರದರ್ಶನಕ್ಕೆ ತನಗೆ ಹೆಮ್ಮೆ ಇದೆ ಎಂದು ಹೇಳಿದರು. ಇದೇ ವೇಳೆ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಕೊಹ್ಲಿ ಇಶಾಂತ್, ಉಮೇಶ್ ಯಾದವ್ ಹೋರಾಟ ಆಟವನ್ನು ಪ್ರದರ್ಶಿಸಿದರು.

    ಬ್ಯಾಟಿಂಗ್ ನಲ್ಲಿ ಏಕಾಂಗಿ ಹೋರಾಟ ನಡೆಸಿದ ನಾಯಕ ಕೊಹ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 149 ರನ್ ಸಿಡಿಸಿ ತಂಡ ಭಾರಿ ಹಿನ್ನಡೆ ಅನುಭವಿಸುವುದನ್ನು ತಪ್ಪಿಸಿದ್ದರು. 2ನೇ ಇನ್ನಿಂಗ್ಸ್ ನಲ್ಲೂ 51 ರನ್ ಸಿಡಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡ್ಯೊದಿದ್ದರು. ಆದರೆ ತಂಡದ ಇತರೇ ಯಾವೊಬ್ಬ ಆಟಗಾರನ್ನು ಕೊಹ್ಲಿಗೆ ಸಾಥ್ ನೀಡದ ಕಾರಣ ಸೋಲಿನ ಕಹಿ ಸವಿಯಬೇಕಾಯಿತು.

    5 ಪಂದ್ಯಗಳ ಟೆಸ್ಟ್ ಟೂರ್ನಿಯ ಮೊದಲ ಪಂದ್ಯದಲ್ಲಿ 31 ರನ್ ಸೋಲುಂಡ ಟೀಂ ಇಂಡಿಯಾ ಸರಣಿಯಲ್ಲಿ 0-1 ಅಂತರದಲ್ಲಿ ಹಿನ್ನಡೆ ಅನುಭವಿದೆ. ನಾಯಕ ವಿರಾಟ್ ಕೊಹ್ಲಿ ಏಕಾಂಗಿ ದಿಟ್ಟ ಹೋರಾಟದ ಬಳಿಕವೂ ತಂಡದ ಇತರೇ ಆಟಗಾರರು ತೋರಿದ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಟೆಸ್ಟ್ ಸೋಲಿನ ಬೆನ್ನಲ್ಲೇ ಇಶಾಂತ್‍ಗೆ ದಂಡ

    ಟೆಸ್ಟ್ ಸೋಲಿನ ಬೆನ್ನಲ್ಲೇ ಇಶಾಂತ್‍ಗೆ ದಂಡ

    ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಕಹಿ ಉಂಡಿದೆ. ಇದರ ಬೆನ್ನಲ್ಲೇ ಪ್ರಮುಖ ವೇಗಿ ಇಶಾಂತ್ ಶರ್ಮಾಗೆ ಪಂದ್ಯದ 15 ರಷ್ಟು ದಂಡ ವಿಧಿಸಲಾಗಿದೆ.

    ಇಂಗ್ಲೆಂಡ್ ತಂಡದ 2ನೇ ಇನ್ನಿಂಗ್ಸ್ ವೇಳೆ ಮಲಾನ್ ವಿಕೆಟ್ ಪಡೆದ ಇಶಾಂತ್ ಶರ್ಮಾರ ಸಂಭ್ರಮಾಚರಣೆ ಉದ್ರೇಕಕಾರಿಯಾಗಿತ್ತು ಎಂದು ಪಂದ್ಯದ ರೇಫರಿ ದಂಡ ವಿಧಿಸಿದ್ದಾರೆ. ಬಿಸಿಸಿಐ ಲೆವೆಲ್ 1 ನಿಯಮವನ್ನು ಇಶಾಂತ್ ಶರ್ಮಾ ಉಲ್ಲಂಘಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ.

    ಶುಕ್ರವಾರದ ಮೊದಲ ಸೆಷನ್ ವೇಳೆ ಇಶಾಂತ್ ಶರ್ಮಾ ಬೌಲಿಂಗ್‍ನಲ್ಲಿ ಮಲಾನ್ ಔಟಾಗಿ ಪೆವಿಲಿಯನತ್ತ ನಡೆಯುತ್ತಿದ್ದರು, ಈ ವೇಳೆ ಶರ್ಮಾ ಸಂಭ್ರಮಾಚರಣೆ ನಡೆಸಿದ್ದರು. ಶರ್ಮಾರ ಈ ನಡೆ ಎದುರಾಳಿ ಆಟಗಾರರನ್ನು ಉದ್ರೇಕಿಸುವಂತಿತ್ತು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕ್ರಿಕೆಟ್ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿದ ಐಸಿಸಿ

    ದಿನದಾಟದ ಬಳಿಕ ಪಂದ್ಯದ ರೆಫರಿ ನಡೆಸಿದ ವಿಚಾರಣೆಯಲ್ಲಿ ಶರ್ಮಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಶರ್ಮಾ 5 ವಿಕೆಟ್ ಪಡೆದು ಮಿಂಚಿದ್ದರು. ಇಶಾಂತ್ ಶರ್ಮಾ ತಪ್ಪಿಗೆ ಫೀಲ್ಡ್ ಅಂಪೈರ್ ಅಲೀಮ್ ದಾರ್, ಕ್ರಿಸ್ ಗ್ಯಾಫನಿ, 3ನೇ ಅಂಪೈರ್ ಎರಸ್ಮಸ್ ಹಾಗೂ 4ನೇ ಅಂಪೈರ್ ಟಿಮ್ ರಾಬಿನ್ ಸನ್ ಅವರ ತಂಡ ಪಂದ್ಯದ 15% ರಷ್ಟು ದಂಡ ಹಾಗೂ 1 ಡಿಮೆರಿಟ್ ಅಂಕ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ  www.instagram.com/publictvnews

  • ಕೊಹ್ಲಿ ಹೋರಾಟ ವ್ಯರ್ಥ – ಐತಿಹಾಸಿಕ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ವಿರೋಚಿತ ಸೋಲು

    ಕೊಹ್ಲಿ ಹೋರಾಟ ವ್ಯರ್ಥ – ಐತಿಹಾಸಿಕ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ವಿರೋಚಿತ ಸೋಲು

    ಬರ್ಮಿಂಗ್ ಹ್ಯಾಮ್: ಇಲ್ಲಿನ ಎಜ್‍ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟದ ಬಳಿಕವೂ ಇಂಗ್ಲೆಂಡ್ 31 ರನ್ ರೋಚಕ ಗೆಲುವು ಪಡೆದಿದೆ. ಈ ಮೂಲಕ ಐತಿಹಾಸಿಕ 1000 ನೇ ಟೆಸ್ಟ್ ಪಂದ್ಯ ಗೆದ್ದು ಇಂಗ್ಲೆಂಡ್ ಡಬಲ್ ಸಂಭ್ರಮ ಆಚರಿಸಿದೆ.

    ಮೊದಲ ಟೆಸ್ಟ್ ಪಂದ್ಯದ ಆರಂಭದಿಂದಲೂ ಏಳು ಬೀಳು ಕಂಡ ವಿರಾಟ್ ಬಳಗ ಕೊನೆಗೂ ಸೋಲುಂಡು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. 110ಕ್ಕೆ 5 ವಿಕೆಟ್ ಕಳೆದು ಕೊಂಡು ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಗೆಲ್ಲಲು 84 ರನ್ ಗಳು ಮಾತ್ರ ಅಗತ್ಯವಿತ್ತು. ಆದರೆ ದಿನದಾಟದ ಆರಂಭದಲ್ಲೇ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (20) ಔಟಾಗುವ ಮೂಲಕ ಟೀಂ ಇಂಡಿಯಾ ಆಘಾತ ಎದುರಿಸಿತು.

    ಮೊದಲ ಇನ್ನಿಂಗ್ಸ್ ನಲ್ಲಿ 149 ರನ್ ಗಳಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ನಾಯಕ ವಿರಾಟ್ ಕೊಹ್ಲಿ 2ನೇ ಇನ್ನಿಂಗ್ಸ್ ನಲ್ಲೂ ದಿಟ್ಟ ಹೋರಾಟ ನಡೆಸಿ ಅರ್ಧಶತಕ ಗಳಿಸಿದ್ದರು. ಆದರೆ ಈ ವೇಳೆ 51 ಗಳಿಸಿದ್ದ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ತಂಡಕ್ಕೆ ಆಘಾತ ನೀಡಿದರು. ಕೊಹ್ಲಿ ವಿಕೆಟ್ ಕಳೆದು ಕೊಂಡ ವೇಳೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಆದರೆ ಅದೇ ಓವರ್ ನಲ್ಲಿ ಮಹಮ್ಮದ್ ಶಮಿ ವಿಕೆಟ್ ಪಡೆದ ಬೆನ್ ಸ್ಟೋಕ್ಸ್ ತಂಡಕ್ಕೆ ಡಬಲ್ ಅಘಾತ ನೀಡಿದರು.

    ಈ ಹಂತದಲ್ಲಿ ಗೆಲ್ಲಲು 53 ರನ್ ಗಳಿಸಬೇಕಿದ್ದ ಟೀಂ ಇಂಡಿಯಾಗೆ ಪಾಂಡ್ಯ ಆಸರೆಯಾಗುವ ನಿರೀಕ್ಷೆ ಇತ್ತು. ಆದರೆ ಪಾಂಡ್ಯಗೆ ಸೂಕ್ತ ಜೊತೆಯಾಟ ನೀಡದ ಶರ್ಮಾ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 31 ರನ್ ಗಳಿಸಿದ್ದ ಪಾಂಡ್ಯ ಸಹ ಸ್ಟೋಕ್ಸ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡುವ ಮೂಲಕ ಟೀಂ ಇಂಡಿಯಾ ಸೋಲನ್ನು ಖಚಿತಪಡಿಸಿದರು.

    ಇಂಗ್ಲೆಂಡ್ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಬೆನ್ ಸ್ಟೋಕ್ಸ್ 14.2 ಓವರ್ ಗಳಲ್ಲಿ 40 ರನ್ ನೀಡಿ ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಪಡೆದರು. ಉಳಿದಂತೆ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ ತಲಾ 2, ಕುರ್ರನ್ ಹಾಗೂ ರಶೀದ್ ತಲಾ 1 ವಿಕೆಟ್ ಪಡೆದರು.

    ಪಂದ್ಯದ ರೋಚಕ ಹಂತ ತಲುಪಲು ಕಾರಣರಾದ ಟೀಂ ಇಂಡಿಯಾ ನಾಯಕ ಕೊಹ್ಲಿ 51 ರನ್ (4 ಬೌಂಡರಿ) ಹೋರಾಟ ವ್ಯರ್ಥವಾಯಿತು. ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಒಟ್ಟಾರೆ 200 ರನ ಗಳಿಸಿದರು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಮೊದಲ ಗೆಲುವು ಪಡೆಯುವ ಮೂಲಕ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ. ಇದುವರೆಗೂ ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಆಡಿರುವ 58 ಪಂದ್ಯಗಳಲ್ಲಿ 31 ರಲ್ಲಿ ಸೋಲುಂಡಿದೆ.

  • ಇಶಾಂತ್, ಅಶ್ವಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ – ಟೀಂ ಇಂಡಿಯಾಗೆ 194 ರನ್ ಟಾರ್ಗೆಟ್

    ಇಶಾಂತ್, ಅಶ್ವಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ – ಟೀಂ ಇಂಡಿಯಾಗೆ 194 ರನ್ ಟಾರ್ಗೆಟ್

    ಬರ್ಮಿಂಗ್‍ಹ್ಯಾಮ್: ಟೀಂ ಇಂಡಿಯಾ ಪ್ರಮುಖ ವೇಗಿ ಇಶಾಂತ್ ಶರ್ಮಾ, ಸ್ಪಿನ್ನರ್ ಆರ್ ಅಶ್ವಿನ್ ಬೌಲಿಗ್ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್‍ಮನ್‍ಗಳು ಪೆವಿಲಿಯನ್ ಪರೇಡ್ ನಡೆಸಿದರು.

    ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಆಟಗಾರರನ್ನು 180 ರನ್ ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಗೆಲುವಿಗೆ 194 ರನ್ ಗಳ ಗುರಿಪಡೆದಿದೆ.

    ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಆರಂಭದಲ್ಲಿ ಅಶ್ವಿನ್ ದಾಳಿಗೆ ಕುಕ್ (0), ಜೋ ರೂಟ್ (14) ಹಾಗೂ ಕೇಟನ್ ಜಿನಿಂಗ್ಸ್ (8) ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಮಧ್ಯಮ ಕ್ರಮಾಂಕದ ಮೇಲೆ ತಮ್ಮ ಸ್ಪೀಡ್ ಬೌಲಿಂಗ್ ಮೂಲಕ ದಾಳಿ ನಡೆಸಿದ ಇಶಾಂತ್ ಶರ್ಮಾ 8 ರನ್ ಅಂತರದಲ್ಲಿ ಮಲಾನ್ (20), ಬೆನ್ ಸ್ಟೋಕ್ಸ್ (6), ಜಾನಿ ಬೇಸ್ಟೊ (28) ವಿಕೆಟ್ ಪಡೆದು ಮಿಂಚಿದರು. ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ 86 ರನ್‍ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿತ್ತು.

    ವಿರಾಮದ ಬಳಿಕವೂ ತಮ್ಮ ಮಿಂಚಿನ ಬೌಲಿಂಗ್ ದಾಳಿ ಮುಂದುವರಿಸಿದ ಇಶಾಂತ್ ಶರ್ಮಾ ಅನುಭವಿ ಆಟಗಾರ ಜೋಸ್ ಬಟ್ಲರ್(1) ವಿಕೆಟ್ ಪಡೆದರು. ಬಳಿಕ ಬಂದ ಸ್ಯಾಮ್ ಕರ್ರನ್ ಹಾಗೂ ಆದಿಲ್ ರಶೀದ್ ಉತ್ತಮ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಮೊದಲ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ನಲ್ಲಿ ಟೀಂ ಇಂಡಿಯಾವನ್ನು ಕಾಡಿದ ಕಾರನ್ 2ನೇ ಇನ್ನಿಗ್ಸ್ ನಲ್ಲಿ ಬ್ಯಾಟ್ ಮೂಲಕ ತಲೆನೋವಾದರು. ಈ ಜೋಡಿ 8 ನೇ ವಿಕೆಟ್ ಗೆ 48 ರನ್ ಗಳ ಉತ್ತಮ ಜೊತೆಯಾಟ ನೀಡಿತು.

    ಈ ವೇಳೆ ಯಾದವ್, 16 ರನ್ ಗಳಿಸಿದ್ದ ರಶೀದ್ ವಿಕೆಟ್ ಪಡೆದು ಇಬ್ಬರ ಜೊತೆಯಾಟವನ್ನು ಮುರಿದರು. ಬಳಿಕ ಬಂದ ಬೋರ್ಡ್ ರೊಂದಿಗೆ ಕೂಡಿಕೊಂಡ ಕರ್ರನ್ 41 ರನ್ ಜೊತೆಯಾಟವಾಡಿ ಭಾರತೀಯ ಬೌಲರ್ ಗಳನ್ನು ಕಾಡಿದರು. ಅಂತಿಮವಾಗಿ 63 ರನ್ ಕರ್ರನ್ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ದಿನೇಶ್ ಕಾರ್ತಿಕ್‍ಗೆ ಕ್ಯಾಚ್ ನೀಡಿ ಔಟಾದರು. ಇದರೊಂದಿಗೆ ಇಂಗ್ಲೆಂಡ್ 180 ರನ್ ಗಳಿಗೆ ಅಲೌಟ್ ಆಯಿತು.

    ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ 13 ಓವರ್ ಎಸೆದು 5 ವಿಕೆಟ್ ಪಡೆದರೆ, ಅಶ್ವಿನ್ 3, ಮಹಮ್ಮದ್ ಶಮಿ 2 ಹಾಗೂ ಯಾದವ್ 1 ವಿಕೆಟ್ ಪಡೆದರು. ಗೆಲ್ಲು 193 ರನ್ ಗುರಿ ಪಡೆದಿರುವ ಟೀಂ ಇಂಡಿಯಾ 27 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಅಘಾತ ಎದುರಿಸಿದೆ.

  • ಶತಕ ಸಿಡಿಸಿ ತಂಡಕ್ಕೆ ಆಸರೆಯಾದ ಕೊಹ್ಲಿ – ಟೀಂ ಇಂಡಿಯಾಗೆ ಹಿನ್ನಡೆ

    ಶತಕ ಸಿಡಿಸಿ ತಂಡಕ್ಕೆ ಆಸರೆಯಾದ ಕೊಹ್ಲಿ – ಟೀಂ ಇಂಡಿಯಾಗೆ ಹಿನ್ನಡೆ

    ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದು, ಕಡಿಮೆ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದರು.

    ಇಂಗ್ಲೆಂಡ್ ನೆಲದಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದ ಕೊಹ್ಲಿ ವೃತ್ತಿ ಜೀವನದ 22ನೇ ಶತಕ ಪೂರೈಸಿದರು. ಇದಕ್ಕೂ ಮುನ್ನ 21 ರನ್ ಗಳಿಸಿದ್ದ ವೇಳೆ ಕೊಹ್ಲಿ 2ನೇ ಸ್ಲಿಪ್ ನಲ್ಲಿದ್ದ ಮಲಾನ್ ರಿಂದ ಜೀವದಾನ ಪಡೆದಿದ್ದರು. ಒಟ್ಟಾರೆ 149 ರನ್ (22 ಬೌಂಡರಿ, 1 ಸಿಕ್ಸರ್) ಸಿಡಿಸಿದ ಕೊಹ್ಲಿ, ಕೊನೆಯವರಾಗಿ ರಶೀದ್ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಟೀಂ ಇಂಡಿಯಾ ಮೊದಲ ಇನ್ನಿಂಗ್‍ನಲ್ಲಿ 13 ರನ್ ಗಳ ಹಿನ್ನಡೆ ಅನುಭವಿಸಿ 274 ರನ್ ಗಳಿಗೆ ಅಲೌಟ್ ಆಯಿತು.

    2014 ರ ಇಂಗ್ಲೆಂಡ್ ಟೂರ್ನಿಯಲ್ಲಿ ಕೊಹ್ಲಿ 10 ಇನ್ನಿಂಗ್ಸ್ ಗಳಿಂದ ಸರಾಸರಿ 13.40 ಯಲ್ಲಿ ಕೇವಲ 134 ರನ್ ಗಳಿಸಿದ್ದರು. ಆದರೆ ಈ ಟೂರ್ನಿಯ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ. ಶತಕ ಸಂಭ್ರಮದ ವೇಳೆ ತಮ್ಮ ಮದುವೆಯ ರಿಂಗ್ ತೆಗೆದು ಮುತ್ತಿಟ್ಟ ಕೊಹ್ಲಿ ಈ ಮೂಲಕ ತಮ್ಮ ಶತಕವನ್ನು ಪತ್ನಿ ಅನುಷ್ಕಾ ಶರ್ಮಾರಿಗೆ ಆರ್ಪಿಸಿದರು.

    ಇದಕ್ಕೂ ಮುನ್ನ 2ನೇ ದಿನದಾಟ ಆರಂಭಸಿದ ಇಂಗ್ಲೆಂಡ್ 287 ರನ್ ಗಳಿಗೆ ಮೊದಲ ಇನ್ನಿಂಗ್ಸ್‍ನಲ್ಲಿ ಅಲೌಟ್ ಆಯಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭಿಕರಾದ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ ಗೆ 50 ರನ್ ಗಳ ಜೊತೆಯಾಟ ನೀಡಿದರು. ಟೀ ವಿರಾಮದ ವೇಳೆ 160 ರನ್ ಗಳಿಸಿ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ಟೀಂ ಇಂಡಿಯಾ ಪರ ವಿಜಯ್ (20), ಧವನ್ (26) ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ 4 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಬಳಿಕ ಬಂದ ರಹಾನೆ (15), ಪಾಂಡ್ಯ (22), ಅಶ್ವಿನ್ (10) ಎರಡಂಕಿ ಮೊತ್ತ ಗಳಿಸಿ ಪೆವಿಲಿಯನ್ ಸೇರಿದರು. ಉಳಿದಂತೆ ಕಾರ್ತಿಕ್ ಶೂನ್ಯ ಸುತ್ತಿದರೆ, ಶರ್ಮಾ (5), ಶಮಿ (2) ರನ್ ಗಳಿಸಿ ಔಟಾದರು.

    ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಸ್ಯಾಮ್ ಕರನ್ 4 ವಿಕೆಟ್ ಪಡೆದರೆ, ಜೇಮ್ಸ್ ಆ್ಯಂಡರ್‍ಸನ್, ರಶೀದ್, ಸ್ಟೋಕ್ಸ್ ತಲಾ 2 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್‍ನಲ್ಲಿ ಫಾಲೋ ಮಾಡಿwww.instagram.com/publictvnews 

  • ಇಂಗ್ಲೆಂಡ್ ಟೆಸ್ಟ್: ಮೊದಲ ದಿನವೇ ಅಪರೂಪದ ದಾಖಲೆ ಬರೆದ ಆರ್ ಅಶ್ವಿನ್

    ಇಂಗ್ಲೆಂಡ್ ಟೆಸ್ಟ್: ಮೊದಲ ದಿನವೇ ಅಪರೂಪದ ದಾಖಲೆ ಬರೆದ ಆರ್ ಅಶ್ವಿನ್

    ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಎದುರಾಳಿ ತಂಡದ 4 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅಪರೂಪದ ಸಾಧನೆ ಮಾಡಿದ್ದಾರೆ.

    ಹೌದು, ಇಂಗ್ಲೆಂಡ್ ವಿರುದ್ಧ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ವೇಳೆ ಅಶ್ವಿನ್ ಇಂಗ್ಲೆಂಡ್ ತಂಡದ ಕುಕ್, ಬೆನ್ ಸ್ಟೋಕ್ಸ್, ಜೊಸ್ ಬಟ್ಲರ್, ಸ್ಟುವರ್ಟ್ ಬ್ರಾಡ್ ರನ್ನು ಔಟ್ ಮಾಡುವ ಮೂಲಕ ನಾಲ್ಕು ವಿಕೆಟ್ ಪಡೆದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ದಿನವೇ 4 ವಿಕೆಟ್ ಪಡೆದ ಮೊದಲ ಟೀಂ ಇಂಡಿಯಾದ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದ 4ನೇ ಆಟಗಾರ ಎನಿಸಿಕೊಂಡರು. ಈ ಹಿಂದೆ ಟೀಂ ಇಂಡಿಯಾ ಪರ ಸ್ಪಿನ್ನರ್ ಚಂದ್ರಶೇಖರ್ (6/94), ಬಿಷನ್ ಸಿಂಗ್ ಬೇಡಿ (5/55), ಅನಿಲ್ ಕುಂಬ್ಳೆ (5/84) ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದ್ದರು.

    ಕುಕ್‍ಗೆ ಮಾರಕವಾದ ಅಶ್ವಿನ್: ಪಂದ್ಯದ ವಿಶೇಷವಾಗಿ ಅಶ್ವಿನ್ ಇಂಗ್ಲೆಂಡ್ ತಂಡದ ಕುಕ್ ರನ್ನು ತಮ್ಮ ವೃತ್ತಿ ಜೀವನಲ್ಲಿ 8 ಬಾರಿಗೆ ಬಲಿ ಪಡೆದರು. ಇದರೊಂದಿಗೆ ಅಶ್ವಿನ್ ಬೌಲಿಂಗ್ ನಲ್ಲಿ ಹೆಚ್ಚು ಬಾರಿ ಔಟಾದ 2ನೇ ಆಟಗಾರ ಎನಿಸಿಕೊಂಡರು. ಅಸೀಸ್ ಆಟಗಾರ ಡೆವಿಡ್ ವಾರ್ನರ್ 9 ಬಾರಿ ಅಶ್ವಿನ್‍ಗೆ ಬಲಿಯಾಗಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

    ಮೊದಲ ದಿನದಾಟದಲ್ಲಿ 25 ಓವರ್ ಬೌಲ್ ಮಾಡಿರುವ ಅಶ್ವಿನ್ 2.40 ಎಕಾನಮಿಯಲ್ಲಿ 60 ರನ್ ನೀಡಿ 4 ವಿಕೆಟ್ ಪಡೆದರು. ಇದರಲ್ಲಿ 7 ಓವರ್ ಮೆಡನ್ ಮಾಡಿ ಇಂಗ್ಲೆಂಡ್ ಬ್ಯಾಟ್ಸ್‍ಮನ್ ಗಳು ಪರದಾಡುವಂತೆ ಮಾಡಿದರು. ಉಳಿದಂತೆ ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 2, ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿದೆ.

  • ಟೀಂ ಇಂಡಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲೇ ಇಂಗ್ಲೆಂಡ್ ದಾಖಲೆ

    ಟೀಂ ಇಂಡಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲೇ ಇಂಗ್ಲೆಂಡ್ ದಾಖಲೆ

    – ಐತಿಹಾಸಿಕ ಪಂದ್ಯದಲ್ಲಿ ರಾಹುಲ್‍ಗೆ ಸ್ಥಾನ

    ಬರ್ಮಿಂಗ್‍ಹ್ಯಾಮ್: ಟೀಂ ಇಂಡಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಟೂರ್ನಿಯ ಮೊದಲ ಪಂದ್ಯವಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಸಾವಿರ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಹೆಗ್ಗಳಿಕೆ ಇಂಗ್ಲೆಂಡ್ ಪಾತ್ರವಾಗಿದೆ.

    ಈ ಐತಿಹಾಸಿಕ ಪಂದ್ಯಕ್ಕೆ ಇಂಗ್ಲೆಂಡ್ ನ ಬರ್ಮಿಂಗ್‍ಹ್ಯಾಮ್ ಕ್ರೀಡಾಂಗಣ ಸಾಕ್ಷಿಯಾಗಿದ್ದು, ಸಂತಸದಲ್ಲಿರುವ ಇಂಗ್ಲೆಂಡ್ ತಂಡದ ವಿರುದ್ಧ ವಿರಾಟ್ ಪಡೆ ಗೆಲುವಿನ ನಿರೀಕ್ಷೆಯಲ್ಲಿದೆ.

    ಅಂದಹಾಗೇ ಇಂಗ್ಲೆಂಡ್ 1877 ರಲ್ಲಿ ಆಸ್ಟೇಲಿಯಾ ವಿರುದ್ಧ ಮೊದಲ ಪಂದ್ಯವನ್ನಾಡಿದ್ದು, ಈವರೆಗೂ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇದುವರೆಗೂ ಇಂಗ್ಲೆಂಡ್ ಆಡಿರುವ ಪಂದ್ಯಗಳಲ್ಲಿ 357 ಪಂದ್ಯಗಳಲ್ಲಿ ಗೆಲುವು ಪಡೆದಿದ್ದು, 297 ಪಂದ್ಯಗಳಲ್ಲಿ ಸೋಲುಂಡಿದೆ. ಉಳಿದಂತೆ 345 ಪಂದ್ಯಗಳು ಡ್ರಾದಲ್ಲಿ ಅಂತ್ಯಕಂಡಿದೆ.

    ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ತನ್ನ ಈ ಹಿಂದಿನ ಇಂಗ್ಲೆಂಡ್ ವಿರುದ್ಧ ಪ್ರವಾಸಗಳಲ್ಲಿ ಹೆಚ್ಚು ಸೋಲುಂಡಿದೆ. 1932 ಜೂನ್ ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಿದ ಟೀಂ ಇಂಡಿಯಾ ಆಡಿರುವ 117 ಪಂದ್ಯಗಳಲ್ಲಿ 43 ರಲ್ಲಿ ಗೆಲುವು ಪಡೆದಿದ್ದು, 25 ರಲ್ಲಿ ಸೋಲುಂಡಿದೆ. ಇದರಲ್ಲಿ ಇಂಗ್ಲೆಂಡ್ ತವರು ನೆಲದಲ್ಲಿ 30 ಟೆಸ್ಟ್ ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ 6 ಪಂದ್ಯಗಳಲ್ಲಿ ಗೆಲುವು, 21 ಪಂದ್ಯಗಳಲ್ಲಿ ಸೋಲುಂಡಿದೆ.

    ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಜಯಗಳಿಸಿರುವ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾ ಪರ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಅವರನ್ನು ಆಡುವ 11 ಬಳಗದಿಂದ ಕೈಬಿಡಲಾಗಿದ್ದು, ಕೆಎಲ್ ರಾಹುಲ್ ಅವರಿಗೆ ಸ್ಥಾನ ನೀಡಲಾಗಿದೆ. ಉಳಿದಂತೆ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿದ್ದರೆ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ವೇಗದ ಬೌಲಿಂಗ್ ಜವಾಬ್ದಾರಿ ಹೊಂದಿದ್ದು, ಸ್ಪಿನ್ ಹೊಣೆಯನ್ನು ಅನುಭವಿ ಅಶ್ವಿನ್ ಪಡೆದಿದ್ದಾರೆ.

     

  • ಹಾಲು ಕುಡಿಯೋ ಮುನ್ನ ಎಚ್ಚರ- ನೀವು ಕುಡಿತಿರೋದು ಹಾಲಲ್ಲ ಹಾಲಾಹಲ!

    ಹಾಲು ಕುಡಿಯೋ ಮುನ್ನ ಎಚ್ಚರ- ನೀವು ಕುಡಿತಿರೋದು ಹಾಲಲ್ಲ ಹಾಲಾಹಲ!

    – ಹಾಲಲ್ಲಿ ಯೂರಿಯಾ, ಡಿಟರ್ಜೆಂಟ್, ಸರ್ಫ್‍ಪೌಡರ್ ಬಳಕೆ!

    ಬೆಂಗಳೂರು: ಹಾಲು ಅಮೃತ ಅಂತಾರೆ, ಆದರೆ ಈಗ ಹಾಲು ವಿಷ ಅನ್ನುವ ಅತಂಕಕಾರಿ ವಿಚಾರ ಆಹಾರ ಮತ್ತು ಸುರಕ್ಷತಾ ಇಲಾಖೆ ಹೊರಹಾಕಿದೆ.

    ಆರೋಗ್ಯಕ್ಕೆ ಒಳ್ಳೆದು ಅಂತಾ ಕುಡಿಯೋ ಹಾಲಲ್ಲಿ ಫ್ಯಾಟ್ ಅಂಶ ಹಾಗೂ ಹಾಲು ಕೆಡದಂತೆ ಯೂರಿಯಾ ಹಾಗೂ ಡಿಟರ್ಜೆಂಟ್ ಬಳಕೆ ಮಾಡಲಾಗುತ್ತಿದೆ ಅನ್ನುವ ಶಾಕಿಂಗ್ ಸುದ್ದಿಯನ್ನು ಇಲಾಖೆ ಹೊರಹಾಕಿದೆ.

    ಕರ್ನಾಟಕದಲ್ಲಿ ಕಲಬೆರೆಕೆ ಹಾಲು ವಿತರಣೆಯಾಗುವ ಬಗ್ಗೆ ಇಲಾಖೆಗೂ ದೂರು ಬಂದಿತ್ತು. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರ ಇಲಾಖೆಗೆ ಹಾಲಿನ ಪರೀಕ್ಷೆ ನಡೆಸಿ ಅನ್ನುವ ಸೂಚನೆಯನ್ನು ರವಾನಿಸಿದೆ. ಜೊತೆಗೆ ಹೈದರಾಬಾದ್ ಎನ್‍ಜಿಓಗೆ ಕರ್ನಾಟಕದ ಹಾಲಿನ ಕಲಬೆರೆಕೆ ಪತ್ತೆಯ ಜವಾಬ್ದಾರಿಯನ್ನು ಕೂಡ ವಹಿಸಿದೆ.

    ಬೆಂಗಳೂರು, ಮಂಗಳೂರು, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಹಾಲಿನ ಅಸಲಿಯತ್ತು ಪರೀಕ್ಷೆ ನಡೆಯಲಿದೆ. ಕೆಎಂಎಫ್ ಸೇರಿದಂತೆ ದೊಡ್ಲಾ, ಅಮೋಘ, ತಿರುಮಲ ಒಟ್ಟು ಹದಿನಾರು ವಿವಿಧ ಬ್ರ್ಯಾಂಡ್ ಹಾಲುಗಳ ಪರೀಕ್ಷೆ ಈ ವಾರದಲ್ಲಿ ನಡೆಯಲಿದೆ ಅಂತಾ ಇಲಾಖೆ ಆಯುಕ್ತರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈಗ ತುಂಬಾ ಕಲಬೆರಕೆ ಮಾಡುತ್ತಿದ್ದಾರೆ. ನಮಗೆ ಕಲಬೆರಕೆ ಹಾಲು ನೀಡುತ್ತಿದ್ದಾರೆ ಎಂದು ಸಾಕಷ್ಟು ಜನ ದೂರು ನೀಡುತ್ತಿದ್ದಾರೆ. ಕಲಬೆರಕೆಯಲ್ಲಿ ಎರಡು ರೀತಿಯ ಹಾಲುಗಳಿರುತ್ತದೆ. ಅದರಲ್ಲಿ ಮೊದಲನೇಯದು ಆರ್ ಗೈನಸರ್ ಸೆಕ್ಟರ್ ಎಂದರೆ ಟ್ಯಾಂಕರ್ಸ್‍ನಿಂದ ಹಾಲುಗಳು ಬರುತ್ತದೆ. ಅದನ್ನು ಪರೀಕ್ಷಿಸಿ ಎಂದು ಹೇಳುತ್ತಾರೆ. ಹೀಗೆ ಕಳೆದ ಎರಡು ವರ್ಷದಿಂದ ದೂರು ಬರುತ್ತಿದ್ದು, ನಾವು ಹಾಲಿನ ಸರ್ವೆ ಕೂಡ ಮಾಡಿಸಿದ್ದೀವಿ. ನಂತರ 6-10 ಲೀಗಲ್ ಸ್ಯಾಂಪಲ್ ಕೂಡ ತಗೆದುಕೊಂಡು ಪರೀಕ್ಷಿಸಿದಾಗ ಬೆಳಗಾವಿಯಲ್ಲಿ ಹಾಲಿಗೆ ಕಲಬೆರಕೆ ಮಾಡುತ್ತಿರುವುದು ತಿಳಿದು ಬಂದಿದೆ. ಹಾಗಾಗಿ ಅವರು ಮೇಲೆ ಕಾನೂನು ರೀತಿ ಮೊಕದ್ದಮ್ಮೆ ಹೂಡಿದ್ದೀವಿ ಎಂದು ಇಲಾಖೆ ಆಯುಕ್ತರಾದ ಹರ್ಷವರ್ಧನ್ ತಿಳಿಸಿದ್ದಾರೆ.

  • ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ಪರ ಬ್ಯಾಟ್ ಬೀಸಿದ ಯುವಿ

    ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ಪರ ಬ್ಯಾಟ್ ಬೀಸಿದ ಯುವಿ

    ಬೆಂಗಳೂರು: ಟೀಂ ಇಂಡಿಯಾ ಆಟಗಾರರ ಗಾಯದ ಸಮಸ್ಯೆ ಕುರಿತು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯ ವಿರುದ್ಧ ಇತ್ತೀಚೆಗೆ ಕೇಳಿಬರುತ್ತಿರುವ ಆರೋಪದ ವರದಿಗಳನ್ನು ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅಲ್ಲಗೆಳೆದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಯುವಿ, ನಾನು ಎನ್‍ಸಿಎ ಕುರಿತ ಅನುಭವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಮಾರಕ ಕ್ಯಾನ್ಸರ್ ನಿಂದ ನಾನು ಹೊರ ಬರಲು ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ಸಹಕಾರ ನೀಡಿತ್ತು. ಬಿಸಿಸಿಐ ನಿರಂತರವಾಗಿ ಆಟಗಾರರ ಗಾಯದ ಸಮಸ್ಯೆಗಳನ್ನು ಬಹುಬೇಗ ನಿವಾರಿಸಲು ಕಾರ್ಯನಿರ್ವಹಿಸುತ್ತಿದ್ದು, ದೇಶದ ಉತ್ತಮ ತರಬೇತುದಾರರು ಹಾಗೂ ವೈದ್ಯರನ್ನು ನಿಯೋಜಿಸಿದೆ ಎಂದು ಬರೆದುಕೊಂಡಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಬಹು ನಿರೀಕ್ಷಿತ ಪ್ರವಾಸದ ವೇಳೆ ಟೀಂ ಇಂಡಿಯಾ ಪ್ರಮುಖ ವೇಗಿಗಳಾದ ಮಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಸಂಪೂರ್ಣ ಫಿಟ್ ಆಗದಿರುವ ಕಾರಣ ಈ ಚರ್ಚೆ ಆರಂಭವಾಗಿತ್ತು. ಶಮಿ ಮೊದಲು ಯೋಯೋ ಟೆಸ್ಟ್ ಎದುರಿಸಿದ ವೇಳೆ ಪಾಸ್ ಮಾಡಲು ವಿಫಲರಾಗಿದ್ದು, ಸದ್ಯ 2ನೇ ಬಾರಿ ಯೋಯೋ ಟೆಸ್ಟ್ ಎದುರಿಸಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಿಗೆ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಭುವನೇಶ್ವರ್ ಬೆನ್ನು ನೋವಿನ ಸಮಸ್ಯೆಯಿಂದ ಆರಂಭದ 3 ಟೆಸ್ಟ್ ಪಂದ್ಯಗಳಿಂದ ಹೊರ ನಡೆದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್‍ಗೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹ ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದು, ಈ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಆಯ್ಕೆ ಆಗಿದ್ದಾರೆ. ಇನ್ನು ಕುಲ್ ದೀಪ್ ಯಾದವ್, ಆರ್ ಆಶ್ವಿನ್, ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ.

  • ತಂದೆ ದಾರಿಯನ್ನೇ ತುಳಿದ ಪುತ್ರ ಅರ್ಜುನ್ ತೆಂಡೂಲ್ಕರ್

    ತಂದೆ ದಾರಿಯನ್ನೇ ತುಳಿದ ಪುತ್ರ ಅರ್ಜುನ್ ತೆಂಡೂಲ್ಕರ್

    ನವದೆಹಲಿ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಅಂಡರ್ 19 ಯೂತ್ ಟೆಸ್ಟ್ ಪಂದ್ಯದ ಬ್ಯಾಂಟಿಂಗ್ ಅರ್ಜುನ್ ಕೂಡ ರನ್ ಖಾತೆ ತೆಗೆಯಲು ವಿಫಲರಾಗಿದ್ದು, ತಂದೆ ಸಚಿನ್ ತೆಂಡೂಲ್ಕರ್ ರಂತೆ ತಮ್ಮ ವೃತ್ತಿ ಜೀವನದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.

    ಕೊಲಂಬೊದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಬೌಲರ್ ಶಶಿಕಾ ದುಲ್ಶನ್ ಬೌಲಿಂಗ್ ನಲ್ಲಿ ಅರ್ಜುನ್ ಶೂನ್ಯಕ್ಕೆ ಔಟಾದರು. ಇದಕ್ಕೂ ಮುನ್ನ ಅರ್ಜುನ್ 11 ಎಸೆತಗಳನ್ನು ಎದುರಿಸಿದರೂ ಸಹ ರನ್ ಖಾತೆ ತೆಗೆಯಲು ವಿಫಲರಾಗಿ ನಿರಾಸೆ ಮೂಡಿಸಿದರು.

    ಈ ಪಂದ್ಯದಲ್ಲೇ ಅರ್ಜುನ್ ತಮ್ಮ ಮೊದಲ ವಿಕೆಟ್ ಪಡೆದ ಸಾಧನೆಯನ್ನು ಮಾಡಿರುವ ಅರ್ಜುನ್, ತಮ್ಮ ಬೌಲಿಂಗ್ ನ 12 ಎಸೆತಗಳಲ್ಲಿ ಶ್ರೀಲಂಕಾ ಆಟಗಾರ ಕಮಿಲ್ ಮಿಶ್ರಾರನ್ನು ಎಲ್‍ಬಿ ಬಲೆಗೆ ಕೆಡವಿ ಮೊದಲ ವಿಕೆಟ್ ಪಡೆದು ಮಿಂಚಿದ್ದರು. ಇದಕ್ಕೂ ಮುನ್ನ ತಮ್ಮ ಮೊದಲ ಎಸೆತದ ರನ್ ಆಫ್ ಮಾಡುವ ವೇಳೆ ಅರ್ಜುನ್ ಎಡವಿದ್ದರು. ಅಂದಹಾಗೇ ಅರ್ಜುನ್ ಎಡಗೈ ವೇಗಿಯಾಗಿದ್ದು, ಇನ್ ಸ್ವೀಂಗ್ ಮಾಡುವ ಕೌಶಲ್ಯ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 11 ಓವರ್ ಬೌಲ್ ಮಾಡಿರುವ ಅರ್ಜುನ್ 33 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 2 ಮೆಡಿನ್ ಓವರ್ ಗಳು ಸಹ ಸೇರಿದೆ.

    1989 ರ ವೇಳೆ 16 ವರ್ಷದ ಸಚಿನ್ ಕೂಡ ತಮ್ಮ ಏಕದಿನ ಪಂದ್ಯದ ಪಾದಾರ್ಪಣೆ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದರು. ಪಾಕ್ ಬೌಲರ್ ವಕಾರ್ ಯೂನಿಸ್ ಬೌಲಿಂಗ್ ನಲ್ಲಿ ಸಚಿನ್ ವಿಕೆಟ್ ಒಪ್ಪಿಸಿದ್ದರು.

    ಟೀಂ ಇಂಡಿಯಾ ಅಂಡರ್ 19 ತಂಡದಲ್ಲಿ 18 ವರ್ಷದ ಅರ್ಜನ್ ಮೊದಲ ಬಾರಿಗೆ ಸ್ಥಾನ ಪಡೆದಿದ್ದರು. ಬಳಿಕ ಶ್ರೀಲಂಕಾ ಸರಣಿ ತರಬೇತಿ ಶಿಬಿರಕ್ಕೆ ಹಾಜರಾಗಿದ್ದರು. ಟೀಂ ಇಂಡಿಯಾ ಸದ್ಯ ಶ್ರೀಲಂಕಾ ವಿರುದ್ಧ ಯೂತ್ ಟೆಸ್ಟ್ ಟೂರ್ನಿಯಲ್ಲಿ 2 ಪಂದ್ಯಗಳನ್ನು ಆಡಲಿದೆ. ಬಳಿಕ 2 ಪಂದ್ಯಗಳ ಏಕದಿನ ಟೂರ್ನಿಯಲ್ಲಿ ಭಾಗವಹಿಸಲಿದೆ.

    https://twitter.com/KSKishore537/status/1019143288685776896?