Tag: test

  • ಪ್ರೀತಿ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ರಶ್ಮಿಕಾ

    ಪ್ರೀತಿ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ರಶ್ಮಿಕಾ

    ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಪ್ರೀತಿ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    ರಶ್ಮಿಕಾ ಮಂದಣ್ಣ ತನ್ನ ಟ್ವಿಟ್ಟರಿನಲ್ಲಿ ಪ್ರೀತಿಯ ಬಗ್ಗೆ ಎರಡು ಸಾಲುಗಳನ್ನು ಬರೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ಅವರ ಪ್ರೀತಿಯನ್ನು ಪರೀಕ್ಷೆ ಮಾಡಲಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಇದು ನಾನು ಪ್ರೀತಿಸುವ ಸಮಯ. ನಿಮ್ಮ ನಿಜವಾದ ಪ್ರೀತಿಯ ಪರೀಕ್ಷೆ ಮಾಡಿದಾಗ ನಿಮ್ಮನ್ನು ಯಾರು ನಿಜವಾಗಿ ಪ್ರೀತಿ ಮಾಡುತ್ತಾರೆ, ಕಾಳಜಿ ತೋರಿಸುತ್ತಾರೆ ಎಂದು ಗೊತ್ತಾಗುವ ಸಮಯ. ಅವರು ಈ ಪ್ರಪಂಚದಲ್ಲಿರುವ ಎಲ್ಲಾ ಪ್ರೀತಿ ಮತ್ತು ಕಾಳಜಿಗೆ ಅರ್ಹರು ಹಾಗೂ ಯಾರು ನಿನ್ನನ್ನು ಪ್ರೀತಿಸಲ್ಲವೋ ಅವರು ಕೂಡ ಸಂತೋಷವಾಗಿರಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/crushqueen_fc/status/1108000921768714244

    ರಶ್ಮಿಕಾ ಅವರ ಈ ಟ್ವೀಟ್‍ಗೆ ಅವರ ಫ್ಯಾನ್ ಕ್ಲಾಬ್, ನಿಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನೀವು ಬೆಳೆಯುತ್ತಾನೆ ಇರಬೇಕು ಟ್ವೀಟ್ ಮಾಡಿದೆ. ಮತ್ತೊಬ್ಬರು ನಿಮ್ಮ ಟ್ವೀಟ್ ಅದ್ಭುತವಾಗಿದೆ. ನೀವು ಬೆಳೆದು ಒಮ್ಮೆ ಆಕಾಶ ಮುಟ್ಟಿದ್ದಾಗ ನಿಮ್ಮ ಕಾಲುಗಳು ನೆಲದ ಮೇಲೆ ಇರಲಿ ಎಂಬುದು ನೆನಪಿರಲಿ ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸಿದ ‘ಯಜಮಾನ’ ಚಿತ್ರ ಬಿಡುಗಡೆಯಾಗಿದೆ. ಇತ್ತೀಚೆಗೆ ಅವರು ತೆಲುಗುವಿನಲ್ಲಿ ನಟ ವಿಜಯ್ ದೇವರಕೊಂಡ ಜೊತೆ ನಟಿಸಿದ ‘ಡಿಯರ್ ಕಾಮ್ರೆಡ್’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ನಲ್ಲಿ ರಶ್ಮಿಕಾ ಫುಲ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

  • ನ್ಯೂಜಿಲೆಂಡ್ ಶೂಟೌಟ್‍ಗೆ 49 ಮಂದಿ ಬಲಿ: 15 ನಿಮಿಷಗಳ ಕಾಲ ದಾಳಿ ಲೈವ್ ಮಾಡಿದ್ದ ಉಗ್ರ

    ನ್ಯೂಜಿಲೆಂಡ್ ಶೂಟೌಟ್‍ಗೆ 49 ಮಂದಿ ಬಲಿ: 15 ನಿಮಿಷಗಳ ಕಾಲ ದಾಳಿ ಲೈವ್ ಮಾಡಿದ್ದ ಉಗ್ರ

    – ವಿಡಿಯೋ ಗೇಮ್‍ನಂತೆ ಗುಂಡಿನ ದಾಳಿ
    – ಸುರಕ್ಷಿತವಾಗಿ ಪಾರಾದ ಬಾಂಗ್ಲಾ ಕ್ರಿಕೆಟ್ ತಂಡ

    ವೆಲ್ಲಿಂಗ್ಟನ್: ಮೊಬೈಲ್ ವಿಡಿಯೋ ಗೇಮ್ ಗಳಲ್ಲಿ ಗನ್ ಮೂಲಕ ವೈರಿಗಳನ್ನು ಹೀರೋ ಶೂಟ್ ಮಾಡುವಂತೆ ಉಗ್ರನೊಬ್ಬ ಮಸೀದಿಗೆ ನುಗ್ಗಿ ನ್ಯೂಜಿಲೆಂಡಿನ ಕ್ರಿಸ್ಟ್ ಚರ್ಚ್‍ನಲ್ಲಿ ಅಮಾಯಕರನ್ನು ಹತ್ಯೆ ಮಾಡಿದ್ದಾನೆ.

    ಹೌದು. ಸೈನಿಕರ ಉಡುಪು ಧರಿಸಿದ್ದ ಉಗ್ರ ಮಸೀದಿ ಪ್ರವೇಶಿಸಿ ಮನಸಿಗೆ ಬಂದಂತೆ ದಾಳಿ ಮಾಡಿದ್ದಾನೆ. ಈ ವೇಳೆ ಕೆಲವರು ದಾಳಿ ನೋಡಿ ಓಡಿ ಹೋಗಿ ರೂಮಿನ ಒಳಗೆ ಹೋಗಿದ್ದಾರೆ. ಇದನ್ನು ತಿಳಿದು ಉಗ್ರ ಕೊಠಡಿ ನುಗ್ಗಿ ಗುಂಡಿನ ಮಳೆಯನ್ನು ಸುರಿಸಿದ್ದಾನೆ. ನಡೆಯುತ್ತಿದ್ದಾಗ ಬಿದ್ದ ಮೃತ ದೇಹಗಳ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ.

    ನ್ಯೂಜಿಲೆಂಡ್ ಕ್ರಿಸ್ಟ್ ಚರ್ಚ್ ನಲ್ಲಿ ನಡೆದ ಗುಂಡಿನ ದಾಳಿಯನ್ನು ಭಯೋತ್ಪಾದಕರ ಕೃತ್ಯ ಎಂದು ನ್ಯೂಜಿಲೆಂಡ್ ಸರ್ಕಾರ ಅಧಿಕೃತವಾಗಿ ಹೇಳಿದ್ದು, ಘಟನೆಯಲ್ಲಿ 49 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಘಟನೆ ಸಂಬಂಧಿಸಿದಂತೆ 4 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯೂಜಿಲೆಂಡ್ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿ ಟ್ವೀಟ್ ಮಾಡಿದ್ದಾರೆ. ದಾಳಿ ಮಾಡಿದ ವ್ಯಕ್ತಿ ಆಸ್ಟ್ರೇಲಿಯಾ ಪೌರತ್ವವನ್ನು ಹೊಂದಿದ್ದು, ಬಲಪಂಥೀಯ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.

    ಸ್ಥಳೀಯ ಮಾಧ್ಯಮಗಳ ವರದಿ ಅನ್ವಯ, ಉಗ್ರ ತಾನು ಮಾಡಿದ್ದ ದಾಳಿಯನ್ನು ಫೇಸ್‍ಬುಕ್ ನಲ್ಲಿ ಲೈವ್ ಪ್ರಸಾರ ಮಾಡಿದ್ದ. ಅಲ್ಲದೇ ಮಿಲಿಟರಿ ಶೈಲಿಯಲ್ಲಿ ಉಡುಗೆ ತೊಟ್ಟಿದ್ದ ಎಂದು ಪ್ರತ್ಯಕ್ಷದರ್ಶಿಗಳು ಖಚಿತ ಪಡಿಸಿದ್ದು, ಆಧುನಿಕ ತಂತ್ರಜ್ಞಾನದ ರೈಫಲ್ ನೊಂದಿಗೆ ದಾಳಿ ನಡೆಸಿದ್ದ ಎಂದು ತಿಳಿಸಿದ್ದಾರೆ.

    ಇತ್ತ ಬಾಂಗ್ಲಾದೇಶ ಕ್ರಿಕೆಟ್ ತಂಡ ಘಟನೆಯಲ್ಲಿ ಸುರಕ್ಷಿತವಾಗಿ ಪಾರಾಗಿದ್ದು, ಫೈರಿಂಗ್ ಆರಂಭವಾದ ಕೂಡಲೇ ಚರ್ಚ್ ಪಾರ್ಕ್ ಬಳಿಯಿಂದ ಓಡಿ ಬಂದಿದ್ದರು ಎಂದು ಬಾಂಗ್ಲಾ ಪತ್ರಕರ್ತರೊಬ್ಬರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಮಾರ್ಚ್ 15 ರಿಂದ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶದ ನಡುವೆ ಆರಂಭವಾಗಬೇಕಿದ್ದ ಅಂತಿಮ ಹಾಗೂ 3ನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ರದ್ದು ಪಡಿಸಲಾಗಿದೆ.

    ಉಗ್ರ ನಡೆಸಿರುವ ದಾಳಿಯ ವಿಡಿಯೋವನ್ನು ಅಂತರ್ಜಾಲದಿಂದ ತೆಗೆದು ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ನ್ಯೂಜಿಲೆಂಡ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಾರ್ವಜನಿಕರು ಅಂತಹ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ ಮನವಿ ಮಾಡಿದ್ದಾರೆ.

    ಈ ಹಿಂದೆ ಪಾಕಿಸ್ತಾನದಲ್ಲಿ ಉಗ್ರರು ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಸಾಗುತ್ತಿದ್ದ ಬಸ್ ಮೇಲೆ ಫೈರಿಂಗ್ ನಡೆಸಿದ್ದರು. ಈ ಘಟನೆಯಲ್ಲಿ ಪೊಲೀಸು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದರು. 6 ಮಂದಿ ಶ್ರೀಲಂಕಾ ಕ್ರಿಕೆಟ್ ಆಟಗಾರರು ಗಾಯಗೊಂಡಿದ್ದರು. ಆ ಬಳಿಕ 2002 ರಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನದ ವಿರುದ್ಧದ ಟೂರ್ನಿಯನ್ನ ರದ್ದುಪಡಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಹ್ಲಿಯನ್ನು ಎಲ್ಲರು ಏಕೆ ಇಷ್ಟ ಪಡುತ್ತಾರೆ ಎಂದು ರಿವೀಲ್ ಮಾಡಿದ್ರು ಶೇನ್ ವಾರ್ನ್

    ಕೊಹ್ಲಿಯನ್ನು ಎಲ್ಲರು ಏಕೆ ಇಷ್ಟ ಪಡುತ್ತಾರೆ ಎಂದು ರಿವೀಲ್ ಮಾಡಿದ್ರು ಶೇನ್ ವಾರ್ನ್

    ಮುಂಬೈ: ಆಸ್ಟ್ರೇಲಿಯಾ ತಂಡದ ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ನಾನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಬಹು ದೊಡ್ಡ ಅಭಿಮಾನಿ ಎಂದು ಹೇಳಿದ್ದು, ನಾನು ಮಾತ್ರವಲ್ಲ ಎಲ್ಲರೂ ಕೂಡ ಕೊಹ್ಲಿರನ್ನು ಇಷ್ಟ ಪಡುತ್ತಾರೆ ಎಂದಿದ್ದಾರೆ.

    ರಾಜಸ್ಥಾನ ರಾಯಲ್ಸ್ ತಂಡದ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಮಾಧ್ಯಮಗಳಿಗೆ ಶೇನ್ ವಾರ್ನ್ ಪ್ರತಿಕ್ರಿಯೆ ನೀಡಿದ್ದು, ಕೊಹ್ಲಿ ಅವರ ನಾಯಕತ್ವ, ಪ್ರಾಮಾಣಿಕತೆ ಮತ್ತು ಕೌಶಲ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಹ್ಲಿ ಅವರ ಬ್ಯಾಟಿಂಗ್ ನೋಡಲು ಹಾಗೂ ಅವರೊಂದಿಗೆ ಮಾತನಾಡಲು ನಾನು ಬಹಳಷ್ಟು ಇಷ್ಟ ಪಡುತ್ತೇನೆ. ಕೊಹ್ಲಿ ವಿಶ್ವ ಕ್ರಿಕೆಟ್‍ನ ಅತ್ಯುತ್ತಮ ನಾಯಕರಾಗಿದ್ದು, ಅವರು ನಂಬಿರುವ ವಿಷಯಗಳ ಬಗ್ಗೆ ಗಟ್ಟಿಯಾಗಿ ನಿಲ್ಲುತ್ತಾರೆ. ಫೀಲ್ಡ್ ನಲ್ಲಿ ಭಾವುಕರಾದರೂ ಕೂಡ ಮೋಡಿ ಮಾಡುತ್ತಾರೆ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೇ ಇದೇ ಅವರನ್ನು ಎಲ್ಲರೂ ಇಷ್ಟ ಪಡಲು ಕಾರಣ ಎಂದು ತಿಳಿಸಿದ್ದಾರೆ.

    ಸದ್ಯದ ಪರಿಸ್ಥಿತಿಯಲ್ಲಿ ಏಕದಿನ ಕ್ರಿಕೆಟ್‍ಕ್ಕಿಂತಲೂ ಟಿ20 ಕ್ರಿಕೆಟ್‍ಗೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದು, ಇದು ಕ್ರಿಕೆಟ್ ಭವಿಷ್ಯಕ್ಕೆ ಮಾರಕವಾಗಿದೆ. ಆದರೆ ಟೆಸ್ಟ್ ಕ್ರಿಕೆಟ್‍ಗೆ ಕೊಹ್ಲಿ ಸಾಕಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಇಂದಿನ ಕ್ರಿಕೆಟ್ ತಂಡದ ನಾಯಕರಲ್ಲಿ ಕೊಹ್ಲಿ ಟೆಸ್ಟ್ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಟೀಂ ಇಂಡಿಯಾ ಕೂಡ ಟೆಸ್ಟ್ ಕ್ರಿಕೆಟ್ ಬಗ್ಗೆ ಪ್ರಾಮುಖ್ಯತೆ ನೀಡುತ್ತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಕೊಹ್ಲಿ, ಸಚಿನ್ ನಡುವೆ ಯಾರು ಇಷ್ಟ ಎಂಬ ಪ್ರಶ್ನೆಗೆ ಉತ್ತರಿಸಿ, ಇಬ್ಬರು ಆಟಗಾರರು ಕೂಡ ಭಿನ್ನ ಸಮಯದಲ್ಲಿ ತಂಡದಲ್ಲಿ ಆಡಿದ್ದಾರೆ. ಇಬ್ಬರಲ್ಲಿ ಯಾರು ಇಷ್ಟ ಎಂದು ಹೇಳುವುದು ಕಷ್ಟ. ಆದರೆ ಸಚಿನ್ ಹಾಗೂ ನಮ್ಮ ಕಾಲಘಟ್ಟದಲ್ಲಿದ್ದ ಪರಿಸ್ಥಿತಿಗಳಿಗಿಂತ ಈಗಿರುವ ಸ್ಥಿತಿಗಳು ಬ್ಯಾಟ್ಸ್ ಮನ್ಸ್ ಹೆಚ್ಚು ಅನುಕೂಲಗಳಿವೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಯಿಯ ಸಾವಿನ ನೋವಿನಲ್ಲೂ ಮೈದಾನಕ್ಕಿಳಿದ ಕ್ರಿಕೆಟಿಗ

    ತಾಯಿಯ ಸಾವಿನ ನೋವಿನಲ್ಲೂ ಮೈದಾನಕ್ಕಿಳಿದ ಕ್ರಿಕೆಟಿಗ

    ಬಾರ್ಬಡೋಸ್: ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಟೂರ್ನಿಯನ್ನು ವೆಸ್ಟ್ ಇಂಡೀಸ್ 2-0 ಅಂತರದಿಂದ ಐತಿಹಾಸಿಕ ಗೆಲುವು ಪಡೆದಿದೆ. ಆದರೆ 2ನೇ ಟೆಸ್ಟ್ ಪಂದ್ಯದ ವೇಳೆ ವಿಂಡೀಸ್ ಯುವ ವೇಗಿ ಅಲ್ಜಾರಿ ಜೋಸೆಫ್ ತಾಯಿಯ ಸಾವಿನ ಸುದ್ದಿ ಕೇಳಿಯೂ ಆಟದಲ್ಲಿ ಭಾಗಿಯಾಗಿದ್ದಾರೆ.

    2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ಆರಂಭದ ವೇಳೆ ಜೋಸೆಫ್ ಅವರ ತಾಯಿ ಬ್ರೈನ್ ಟ್ಯೂಮರ್ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಆದರೆ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಜೋಸೆಫ್ 5 ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕುಸಿತಕ್ಕೆ ಕಾರಣರಗಿದ್ದರು. ಆ ಬಳಿಕವೂ 3ನೇ ದಿನದಾಟ ಮುಂದುವರಿಸಿದ ಜೋಸೆಫ್ ತಾಯಿಯ ಸಾವಿನ ನೋವಿನಲ್ಲೂ ಆಟವಾಡಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್, ಜೋಸೆಫ್ ಅವರ ಸಂದರ್ಭವನ್ನು ನಾವು ವಿವರಿಸಲು ಅಸಾಧ್ಯವಾಗಿತ್ತು. ಆದರೆ ಅವರು ಆ ಸಂದರ್ಭದಲ್ಲೂ ಮೈದಾನಕ್ಕಿಳಿದಿದ್ದು, ನಮಗೆ ಸ್ಫೂರ್ತಿ ನೀಡಿತ್ತು. ಅಲ್ಲದೇ ಈ ನಿರ್ಧಾರ ನಮಗೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಕಾರಣವಾಯಿತು. ಆದ್ದರಿಂದ ಸರಣಿ ಗೆಲುವನ್ನು ಜೋಸೆಫ್ ಅವರ ತಾಯಿಗೆ ಅರ್ಪಿಸಿತ್ತೇವೆ ಎಂದು ತಿಳಿಸಿದ್ದಾರೆ. ವಿಶೇಷವೆಂದರೆ ಪಂದ್ಯದ ವೇಳೆ ಇತ್ತಂಡಗಳ ಆಟಗಾರರು ಕೂಡ ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸಿದ್ದರು.

    22 ವರ್ಷದ ಜೋಸೆಫ್ ಅವರಗೆ ಆಟದ ನಡುವೆ ತೆರಳಲು ಅವಕಾಶ ನೀಡಲಾಗಿತ್ತು. ಆದರೆ ತಂಡದ ಗೆಲುವಿನ ಉದ್ದೇಶದಿಂದ ಜೋಸೆಫ್ ಭಾಗವಹಿಸುವುದು ಮುಖ್ಯವಾಗಿತ್ತು. ಆದ್ದರಿಂದ ಅವರು ಮನೆಗೆ ತೆರಳದೇ ಇರುವ ನಿರ್ಧಾರವನ್ನು ಕೈಗೊಂಡಿದ್ದರು. ಅಲ್ಲದೇ ಪಂದ್ಯದಲ್ಲಿ ಪ್ರಮುಖ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದರು. ಸದ್ಯ 3 ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 2-0 ಅಂತರದಲ್ಲಿ ಮುನ್ನಡೆ ಪಡೆದಿದ್ದು, 2009ರ ಬಳಿಕ ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವು ದಾಖಲಿಸಿದೆ. ಅಂತಿಮ ಟೆಸ್ಟ್ ಪಂದ್ಯ ಜನವರಿ 9 ರಿಂದ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಆಸ್ಟ್ರೇಲಿಯಾದಲ್ಲೂ ಬುಮ್ರಾ ಫಿವರ್ – ‘ಸೋ ಕ್ಯೂಟ್’ ಎಂದ ಜಸ್ಪ್ರೀತ್

    ಆಸ್ಟ್ರೇಲಿಯಾದಲ್ಲೂ ಬುಮ್ರಾ ಫಿವರ್ – ‘ಸೋ ಕ್ಯೂಟ್’ ಎಂದ ಜಸ್ಪ್ರೀತ್

    ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ತಮ್ಮ ಬೌಲಿಂಗ್ ಮೂಲಕ ಮಿಂಚಿದ್ದ ಟೀಂ ಇಂಡಿಯಾ ಪ್ರಮುಖ ವೇಗಿ ಬುಮ್ರಾ ಅವರ ಬೌಲಿಂಗ್ ಶೈಲಿ ಅಲ್ಲಿನ ಮಕ್ಕಳ ಗಮನ ಸೆಳೆದಿದೆ. ಬುಮ್ರಾರಂತೆಯೇ ಬಾಲಕನೊಬ್ಬ ಬೌಲಿಂಗ್ ಮಾಡುತ್ತಿರುವ ವಿಡಿಯೋವನ್ನು ಐಸಿಸಿ ತನ್ನ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದೆ.

    ಆಸೀಸ್ ಟೆಸ್ಟ್ ಸರಣಿಯಲ್ಲಿ ಜಂಟಿಯಾಗಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿ ಹೊಸ ಹೊಮ್ಮಿದ ಜಸ್ಪ್ರೀತ್ ಬುಮ್ರಾ 21 ವಿಕೆಟ್ ಪಡೆದು ಮಿಂಚಿದ್ದರು. ಉಳಿದಂತೆ ಆಸ್ಟ್ರೇಲಿಯಾ ನಾಥನ್ ಲಯನ್ ಅಷ್ಟೇ ವಿಕೆಟ್ ಪಡೆದಿದ್ದಾರೆ. ಆದರೆ ಬುಮ್ರಾ ಅವರ ವಿಶೇಷ ರೀತಿಯ ಬೌಲಿಂಗ್ ಶೈಲಿ ಎಲ್ಲರ ಗಮನ ಸೆಳೆದಿದ್ದು, ಬುಮ್ರಾ ಪಾದಾರ್ಪಣೆ ಪಂದ್ಯದಿಂದಲೇ ಅವರಂತೆ ಬೌಲ್ ಮಾಡಲು ಹಲವು ಮಕ್ಕಳು ಪ್ರಯತ್ನಿಸಿದ್ದನ್ನು ಕಾಣಬಹುದು. ಸದ್ಯ ಈ ಫಿವರ್ ಆಸ್ಟ್ರೇಲಿಯಾದಲ್ಲೂ ಹೆಚ್ಚಾಗಿದ್ದು, ಹಲವು ಬುಮ್ರಾ ಶೈಲಿಯನ್ನು ಅನುಕರಣೆ ಮಾಡಿ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

    ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ವ್ಯಕ್ತಿ ಆಸೀಸ್ ನ ಮುಂದಿನ ಪೀಳಿಗೆಗೆ ಬುಮ್ರಾ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ವಿಡಿಯೋ ಕಂಡು ಸಂತಸ ವ್ಯಕ್ತಪಡಿಸಿರುವ ಬುಮ್ರಾ, ಸೋ ಕ್ಯೂಟ್, ಆತನಿಗೆ ನನ್ನ ಶುಭಾಶಯ ತಿಳಿಸಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ಐಸಿಸಿ ಕೂಡ ಟ್ವೀಟ್ ಮಾಡಿ 2034ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ಫೈರ್ ಆಗಿರಲಿದೆ ಎಂದು ಬರೆದುಕೊಂಡಿದೆ.

    ಆಸೀಸ್ ಪ್ರವಾಸ ಪ್ರದರ್ಶನ ಬಳಿಕ ಬುಮ್ರಾ ಐಸಿಸಿ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲೂ ಬಡ್ತಿಯನ್ನು ಪಡೆದಿದ್ದು, 28ನೇ ಸ್ಥಾನದಿಂದ 16ನೇ ಸ್ಥಾನಕ್ಕೆ ಜಿಗಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 2018ರ ಜನವರಿಯಲ್ಲಿ ಪಾದಾರ್ಪಣೆ ಮಾಡಿದ್ದ ಬುಮ್ರಾ ಟೀಂ ಇಂಡಿಯಾ ಪಾದಾರ್ಪಣೆ ಮಾಡಿದ ವರ್ಷದಲ್ಲೇ ಅಧಿಕ ವಿಕೆಟ್ ಪಡೆದ ದಿಲೀಪ್ ದೋಶಿ ಅವರ ದಾಖಲೆ ಮುರಿದು ದಾಖಲೆ ನಿರ್ಮಿಸಿದ್ದರು. 25 ವರ್ಷದ ಬುಮ್ರಾಗೆ 2019 ವಿಶ್ವಕಪ್ ಸರಣಿಯ ಉದ್ದೇಶದಿಂದ ಮುಂದಿನ ಆಸೀಸ್ ವಿರುದ್ಧದ ಏಕದಿನ ಸರಣಿ ಹಾಗೂ ನ್ಯೂಜಿಲೆಂಡ್ ವಿರುದ್ಧ ಸಿಮೀತ ಓವರ್ ಗಳ ಟೂರ್ನಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎರಡು ಬಾರಿ ಪಾಸಾಗಿ, ಒಂದು ಬಾರಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ

    ಎರಡು ಬಾರಿ ಪಾಸಾಗಿ, ಒಂದು ಬಾರಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ

    ಚಂಡೀಗಢ: ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಜೂನಿಯರ್ ರಿಸರ್ಚ್ ಫೆಲೋಶಿಪ್ ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ರೋಹ್ಟಕ್ ನಲ್ಲಿ ನಡೆದಿದೆ.

    ರಾಖಿ ರಾಣಿ (24) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ಝಾಜ್ಜರ್ ತಲಾವ್ ಗ್ರಾಮದವಳಾಗಿದ್ದು, ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದಳು. ರಾಣಿ ಕಳೆದ ವರ್ಷ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ಭೌಗೋಳಿಕ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದಳು.

    ಶನಿವಾರ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್(ಜೆಆರ್‍ಎಫ್) ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಅದರಲ್ಲಿ ರಾಣಿ ಜೆಆರ್‍ಎಫ್ ಪರೀಕ್ಷೆಯಲ್ಲಿ ಅರ್ಹತಾ ಅಂಕಗಳನ್ನು ಪಡೆಯಲು ಸಾಧ್ಯವಾಗದೇ ಫೇಲ್ ಆಗಿದ್ದಳು. ಇದರಿಂದ ರಾಣಿ ಬೇಸರಗೊಂಡಿದ್ದಳು. ಅಷ್ಟೇ ಅಲ್ಲದೇ ಈಕೆ ಹರಿಯಾಣದಲ್ಲಿ ಶಿಕ್ಷಕ ಅರ್ಹತಾ ಪರೀಕ್ಷೆ (HTET)ಗಾಗಿ ಅಪ್ಲಿಕೇಷನ್ ಹಾಕಿದ್ದು, ಭಾನುವಾರ ಪರೀಕ್ಷೆ ಬರೆಯಬೇಕಿತ್ತು.

    ಭಾನುವಾರ ಮೃತ ರಾಣಿಯ ಗೆಳತಿ ರೀನಾ ದೇವಿಯು ಬೆಳಿಗ್ಗೆ ಅವಳನ್ನು ಎಬ್ಬಿಸಲು ರೂಮಿಗೆ ಹೋಗಿದ್ದಾಳೆ. ಆದರೆ ರಾಣಿ ಎಷ್ಟೇ ಕರೆದರೂ ಬಾಗಿಲು ತೆಗೆಯಲಿಲ್ಲ. ಕೊನೆಗೆ ದೇವಿ ರೂಮಿಗೆ ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ರೂಮಿನ ಬಾಗಿಲು ಒಳಗಡೆಯಿಂದ ಲಾಕ್ ಮಾಡಲಾಗಿತ್ತು. ನಂತರ ದೇವಿ ಕಿಟಕಿಯ ಮೂಲಕ ರೂಮಿನ ಒಳಗೆ ನೋಡಿದ್ದಾರೆ. ಆಗ ರಾಣಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

    ದೇವಿ ತಕ್ಷಣ ಎಲ್ಲರನ್ನು ಕೂಗಿದ್ದು, ಹಾಸ್ಟೆಲ್ ವಾರ್ಡನ್ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಹಾಸ್ಟೆಲ್ ಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಮೃತ ರಾಣಿ ಎರಡು ಬಾರಿ ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಜೆಆರ್‍ಎಫ್ ಪಾಸ್ ಆಗಲು ತುಂಬಾ ಕಷ್ಟಪಟ್ಟು ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

    ರಾಣಿ ಸಾವಿನ ಬಗ್ಗೆ ವಿಶ್ವವಿದ್ಯಾನಿಲಯವು ಇನ್ನೂ ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 31 ವರ್ಷಗಳ ಬಳಿಕ ತವರು ನೆಲದಲ್ಲಿ ಫಾಲೋಆನ್ ಎದುರಿಸಿದ ಆಸೀಸ್ – ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಟೀಂ ಇಂಡಿಯಾ

    31 ವರ್ಷಗಳ ಬಳಿಕ ತವರು ನೆಲದಲ್ಲಿ ಫಾಲೋಆನ್ ಎದುರಿಸಿದ ಆಸೀಸ್ – ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಟೀಂ ಇಂಡಿಯಾ

    ಸಿಡ್ನಿ: ಟೀಂ ಇಂಡಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಅಲೌಟ್ ಆಗಿರುವ ಆಸೀಸ್ ತಂಡ ಫಾಲೋಆನ್‍ಗೆ ಒಳಗಾಗಿದ್ದು, 31 ವರ್ಷಗಳ ಬಳಿಕ ತವರು ನೆಲದಲ್ಲಿ ಆಸೀಸ್ ಫಾಲೋಆನ್ ಎದುರಿಸಿದೆ.

    ಟೆಸ್ಟ್ ಪಂದ್ಯದ 4ನೇ ದಿನದಾಟದ ವೇಳೆ ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಅಲೌಟ್ ಆಯ್ತು, ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿ 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ. ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 322 ರನ್ ಗಳ ಮುನ್ನಡೆಯನ್ನು ಪಡೆದಿತ್ತು. ಈ ಮೊತ್ತ ಆಸೀಸ್ ನೆಲದಲ್ಲಿ ಇದುವರೆಗೂ ಪಡೆದ ತಂಡ ಪಡೆದಿರುವ ಬಹೃತ್ ಮುನ್ನಡೆಯಾಗಿದೆ. ಸದ್ಯ ಅಂತಿಮ ದಿನದಾಟದಲ್ಲಿ ಆಸೀಸ್ ಇನ್ನಿಂಗ್ಸ್ ಮುನ್ನಡೆಗೆ 10 ವಿಕೆಟ್ ಗಳಲ್ಲಿ 316 ರನ್ ಗಳ ಅಗತ್ಯವಿದೆ.

    ಈ ಹಿಂದೆ ಟೀಂ ಇಂಡಿಯಾ 1988 ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಫಾಲೋಆನ್ ನೀಡಿತ್ತು, ಅಂದು ಕೂಡ ಸಿಡ್ನಿ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲೇ ನಡೆದಿತ್ತು. ಅದೇ ವರ್ಷ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕೂಡ ಫಾಲೋಆನ್ ನೀಡಿತ್ತು, ಇದಾದ ಬಳಿಕ 172 ಟೆಸ್ಟ್ ಪಂದ್ಯಗಳನ್ನು ತವರು ನೆಲದಲ್ಲಿ ಆಡಿರುವ ಆಸೀಸ್ ಒಮ್ಮೆಯೂ ಫಾಲೋಆನ್ ಪಡೆದಿರಲಿಲ್ಲ.

    ಉಳಿದಂತೆ ಆಸೀಸ್ ವಿರುದ್ಧ 4 ಬಾರಿ ಮಾತ್ರ ಇಂಡಿಯಾ ಫಾಲೋಆನ್ ವಿಧಿಸಿದೆ. 1979-80 ರಲ್ಲಿ ಭಾರತದಲ್ಲಿ ನಡೆದ ಡೆಲ್ಲಿ ಮತ್ತು ಮುಂಬೈ ಟೆಸ್ಟ್ ಪಂದ್ಯಗಳ ವೇಳೆ ಇದು ಸಾಧ್ಯವಾಗಿತ್ತು. ಮುಖ್ಯವಾಗಿ 2005 ರ ಬಳಿಕ ಆಸೀಸ್ ತಂಡ ಟೆಸ್ಟ್ ಪಂದ್ಯದಲ್ಲಿ ಫಾಲೋಆನ್ ಪಡೆದಿರಲಿಲ್ಲ.

    ಟೀಂ ಇಂಡಿಯಾ ಈ ಹಿಂದೆ 1998 ರ ಈಡನ್ ಗಾರ್ಡನ್ ಟೆಸ್ಟ್ ಪಂದ್ಯದಲ್ಲಿ 400 ರನ್ ಗಳ ಮುನ್ನಡೆ ಪಡೆದಿತ್ತು. ಆಸೀಸ್ ನೆಲದಲ್ಲಿ ಪರಿಗಣಿಸುವುದಾದರೆ ಮೆಲ್ಬರ್ನ್ ಟೆಸ್ಟ್ ಪಂದ್ಯದ ವೇಳೆ 292 ರನ್ ಮುನ್ನಡೆಯೇ ಭಾರತಕ್ಕೆ ದೊರೆತ 4ನೇ ಬೃಹತ್ ಮೊತ್ತವಾಗಿದೆ. ಇದರೊಂದಿಗೆ ಈ ಬಾರಿಯ ಟೆಸ್ಟ್ ಟೂರ್ನಿಯಲ್ಲಿ 2 ಬಾರಿ ಟೀಂ ಇಂಡಿಯಾ ಬೃಹತ್ ಮುನ್ನಡೆಯಯನ್ನು ಪಡೆದಿರುವ ಸಾಧನೆ ಮಾಡಿದೆ.

    ಕುಲ್ದೀಪ್ ಯಾದವ್ 5 ವಿಕೆಟ್: ಟೀಂ ಇಂಡಿಯಾ ಚೈನಾಮನ್ ಖ್ಯಾತಿಯ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಪಂದ್ಯದಲ್ಲಿ 5/99 ವಿಕೆಟ್ ಪಡೆದ ಸಾಧನೆ ಮಾಡಿದ್ದು, ಆಡಿರುವ 6 ಟೆಸ್ಟ್ ಟೂರ್ನಿಯಲ್ಲಿ 2ನೇ ಬಾರಿ ಬಾರಿಗೆ 5 ವಿಕೆಟ್ ಪಡೆದ ಹೆಗ್ಗಳಿಕೆ ಪಡೆದಿದ್ದಾರೆ.

    ಆಸೀಸ್ ಟೆಸ್ಟ್ ನೆಲದಲ್ಲಿ 71 ವರ್ಷಗಳಿಂದ ಟೆಸ್ಟ್ ಗೆಲುವಿನ ಸವಿ ಪಡೆಯಲು ಕಾಯುತ್ತಿರುವ ಟೀಂ ಇಂಡಿಯಾ ಮೊದಲ ಬಾರಿಗೆ ಗೆಲುವಿನ ಸಿದ್ಧತೆ ನಡೆಸಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸುವುದು ನಿಚ್ಚಳವಾಗಿದೆ.

    ಆಸೀಸ್ ತಂಡದ ಆರಂಭಿಕರಾದ ಖವಾಜ 4 ರನ್ ಹಾಗೂ ಹ್ಯಾರಿಸ್ 2 ರನ್ ಗಳಿಸಿ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 5 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಜಡೇಜಾ ತಲಾ 2 ಹಾಗೂ ಬುಮ್ರಾ 1 ವಿಕೆಟ್ ಪಡೆದು ಮಿಂಚಿದ್ದಾರೆ.

    https://twitter.com/telegraph_sport/status/1081410867449733120?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಮಂದ ಬೆಳಕು, ಮಳೆ ಅಡ್ಡಿ – ಫಾಲೋಆನ್ ಭೀತಿಯಲ್ಲಿ ಆಸೀಸ್

    ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಮಂದ ಬೆಳಕು, ಮಳೆ ಅಡ್ಡಿ – ಫಾಲೋಆನ್ ಭೀತಿಯಲ್ಲಿ ಆಸೀಸ್

    ಸಿಡ್ನಿ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಟೀಂ ಇಂಡಿಯಾ ಮೈಲುಗೈ ಸಾಧಿಸಿದ್ದು, ಆದರೆ ಮಂದ ಬೆಳಕು ಹಾಗೂ ಕೆಲ ಸಮಯದ ಹಂತದಲ್ಲಿ ಸುರಿದ ಮಳೆಯ ಪರಿಣಾಮ 3ನೇ ದಿನದಾಟ ರದ್ದಾಗಿದೆ.

    ಭಾರತದ 622 ರನ್‍ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 83.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿ ಫಾಲೋಆನ್ ಎದುರಿಸುವ ಆತಂಕದಲ್ಲಿದೆ.

    10 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿ 2ನೇ ದಿನದಾಟ ಅಂತ್ಯಗೊಳಿಸಿದ್ದ ಆಸೀಸ್‍ಗೆ 3ನೇ ದಿನದಾಟದಲ್ಲಿ ಉತ್ತಮ ಆರಂಭ ಲಭಿಸಿತ್ತು. ದಿನದ ಮೊದಲ ಅವಧಿಯಲ್ಲಿ ಟೀಂ ಇಂಡಿಯಾ ಬೌಲರ್ ಗಳು ವಿಕೆಟ್ ಪಡೆಯಲು ಪರಿಣಾಮಕಾರಿಯಾಗಲಿಲ್ಲ. ಆದರೆ 2ನೇ ಅವಧಿಯಲ್ಲಿ ಕುಲ್ದೀಪ್ ಯಾದವ್, ಜಡೇಜಾ ಉತ್ತಮ ಬೌಲಿಂಗ್ ನಡೆಸಿ ಆಸೀಸ್ ಬ್ಯಾಟ್ಸ್ ಮನ್‍ಗಳ ವಿಕೆಟ್ ಪಡೆದರು.

    ಆಸೀಸ್ ಪರ ಹ್ಯಾರಿಸ್ 78 ರನ್, ಲ್ಯಾಬುಶಾನೆ 38 ರನ್, ಖುವಾಜಾ 27 ರನ್, ಹೇಡ್ 20 ರನ್ ಗಳಿಸಲಷ್ಟೇ ಶಕ್ತರಾದರು. ಆಸೀಸ್ ನೆಲದಲ್ಲಿ ಸರಣಿ ಗೆಲುವಿನ ಗುರಿ ಹೊಂದಿರುವ ಟೀಂ ಇಂಡಿಯಾ ಅಂತಿಮ ಟೆಸ್ಟ್ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಆದರೆ ಮಳೆ ಹಾಗೂ ಮಂದ ಬೆಳಕು ಪಂದ್ಯದ ಫಲಿತಾಂಶ ಮೇಲೆ ಪ್ರಭಾವ ಬೀರುವ ಆತಂಕವನ್ನು ಎದುರಿಸಿದೆ.

    3ನೇ ದಿನದಾಟದ ಅಂತ್ಯಕ್ಕೆ ಆಸೀಸ್ 386 ರನ್‍ಗಳ ಭಾರೀ ರನ್‍ಗಳ ಹಿನ್ನಡೆಯಲ್ಲಿದ್ದು, ಫಾಲೋಆನ್ ತಪ್ಪಿಸಿಕೊಳ್ಳಲು ಇನ್ನು 186 ರನ್ ಗಳಿಸಬೇಕಾದ ಅಗತ್ಯವಿದೆ. ಸದ್ಯ ಆಸೀಸ್‍ನ ಹ್ಯಾಂಡ್ಸ್ ಕೋಮ್ 28 ರನ್, ಕಮಿನ್ಸ್ 25 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ವಿಕೆಟ್ ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಭ್ರಮದಲ್ಲಿ ರಿಷಬ್ ಪಂತ್ Kip-Up – ವಿಡಿಯೋ ವೈರಲ್

    ಸಂಭ್ರಮದಲ್ಲಿ ರಿಷಬ್ ಪಂತ್ Kip-Up – ವಿಡಿಯೋ ವೈರಲ್

    ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದಿರುವ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ರಿಷಬ್ ಪಂತ್ ಆನ್ ಫೀಲ್ಡ್ ನಲ್ಲೇ ಕಿಪ್ ಅಪ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    2ನೇ ಟೆಸ್ಟ್ ಪಂದ್ಯದ ವೇಳೆ ರಿಷಬ್ ಪಂತ್ ಡ್ರಿಂಕ್ಸ್ ಬ್ರೇಕ್ ವೇಳೆ ವಿಶ್ರಾಂತಿಗಾಗಿ ಮೈದಾನದಲ್ಲೇ ಕೆಲ ಕ್ಷಣಗಳ ಕಾಲ ಮಲಗಿದ್ದರು. ಈ ವೇಳೆ ಏಕಾಏಕಿ ಕಿಪ್ ಅಪ್ ಮಾಡಿ ಎದ್ದು ನಿಂತಿದ್ದಾರೆ. ಈ ರೀತಿ ಕಿಪ್ ಅಪ್ ಮಾಡಬೇಕಾದರೆ ಅತ್ಯುತ್ತಮವಾದ ದೈಹಿಕ ಸಾಮರ್ಥ್ಯ ಹೊಂದಿದರೆ ಮಾತ್ರ ಸಾಧ್ಯವಾಗುತ್ತದೆ.

    ಪಂದ್ಯದ ಬಳಿಕ ಮಾತನಾಡಿದ ಪಂತ್, ನಾನು 90 ರನ್ ಗಳಿಸಿದ ವೇಳೆ ಕ್ಷಣ ಕಾಲ ಆತಂಕಕ್ಕೆ ಒಳಗಾಗಿದ್ದೆ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ 92, 92 ರನ್ ಗಳಿಗೆ ಔಟಾಗಿದ್ದೆ. ಆದರೆ ಇಂದಿನ ಶತಕ ನನಗೆ ಮತ್ತಷ್ಟು ಆತ್ಮವಿಶ್ವಾಸ ನೀಡಿದೆ. ಶತಕ ಸಂಭ್ರಮದ ವೇಳೆ ಆ ಕ್ಷಣದಲ್ಲಿ ಏನು ತೋಚಿದೆಯೋ ಅದನ್ನು ಮಾಡಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನು ಓದಿ: 15 ವರ್ಷಗಳ ಹಿಂದಿನ `ದಿ ವಾಲ್’ ದ್ರಾವಿಡ್ ದಾಖಲೆ ಮುರಿದ ಪೂಜಾರ

    21 ವರ್ಷದ ರಿಷಬ್ ಪಂತ್ ಅಜೇಯ 159 ರನ್ (189 ಎಸೆತ, 15 ಎಸೆತ, 1 ಸಿಕ್ಸರ್) ಸಿಡಿಸಿದ್ದು, ಈ ಮೂಲಕ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ನೆಲದಲ್ಲಿ ಭಾರತದ ಪರ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಲ್ಲದೇ ಆಸೀಸ್ ನೆಲದಲ್ಲಿ ಪ್ರವಾಸಿ ವಿಕೆಟ್ ಕೀಪರ್ ಸಿಡಿಸಿದ 2ನೇ ಅಧಿಕ ಮೊತ್ತವಾಗಿದೆ. 2012ರ ಪರ್ತ್ ಟೆಸ್ಟ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ 169 ರನ್ ಸಿಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿನಗಿನ್ನು ಬೋರ್ ಆಗಿಲ್ವಾ? ಪೂಜಾರ ಬ್ಯಾಟಿಂಗ್‍ ಕಂಡು ಲಯನ್ ಪ್ರಶ್ನಿಸಿದ್ದು ಹೀಗೆ!

    ನಿನಗಿನ್ನು ಬೋರ್ ಆಗಿಲ್ವಾ? ಪೂಜಾರ ಬ್ಯಾಟಿಂಗ್‍ ಕಂಡು ಲಯನ್ ಪ್ರಶ್ನಿಸಿದ್ದು ಹೀಗೆ!

    ಸಿಡ್ನಿ: ಟೀಂ ಇಂಡಿಯಾ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಮಹತ್ವ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದು, ಆದರೆ ಪೂಜಾರನ್ನು ಔಟ್ ಮಾಡಲು ಆಸೀಸ್ ಬೌಲರ್ ಗಳು ಪರದಾಟ ನಡೆಸಿದ್ದಾರೆ. ಈ ನಡುವೆ ಆಸೀಸ್ ಬೌಲರ್ ನಾಥನ್ ಲಯನ್ ಕೂಡ ನೇರ ಪೂಜಾರ ಬಳಿ ತೆರಳಿ ನಿನಗೆ ಇನ್ನು ಬೋರ್ ಆಗಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

    ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಲಯನ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಘಟನೆ ನಡೆದಿದ್ದು, ಮಾಧ್ಯಮವೊಂದು ಈ ಸಂಭಾಷಣೆಯನ್ನು ವರದಿ ಮಾಡಿದೆ. ನಾನ್ ಸ್ಟ್ರೈಕ್ ನಲ್ಲಿದ್ದ ಪೂಜಾರ ಶತಕ ಸಿಡಿಸಿದ ಸಂಭ್ರಮದಲ್ಲಿದ್ದರು. ಆ ವೇಳೆ ನಾಥನ್ ಲಯನ್ ಪ್ರಶ್ನೆ ಮಾಡಿದ್ದು, ಇದನ್ನು ಕೇಳಿಸಿಕೊಂಡ ಪೂಜಾರ ನಸು ನಕ್ಕು ಸುಮ್ಮನಾಗಿದ್ದಾರೆ.

    114 ಇನ್ನಿಂಗ್ಸ್ ಗಳಲ್ಲಿ ವೃತ್ತಿ ಜೀವನದ 18ನೇ ಶತಕ ಪೂರೈಸಿದ ಪೂಜಾರ ಟೀಂ ಇಂಡಿಯಾ ಪರ ವಿವಿಎಸ್ ಲಕ್ಷ್ಮಣ್ ಹಾಗೂ ದಿಲೀಪ್ ವೆಂಗ್‍ಸರ್ಕಾರ್ ದಾಖಲೆಯನ್ನು ಮುರಿದರು. ಅಲ್ಲದೇ ತಂಡದ ಪರ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದರು. ವಿವಿಎಸ್ ಲಕ್ಷ್ಮಣ್, ದಿಲೀಪ್ ವೆಂಗ್‍ಸರ್ಕಾರ್ ತಲಾ 17 ಶತಕ ಸಿಡಿಸಿದ್ದಾರೆ. ಆಸೀಸ್ ಟೂರ್ನಿಯಲ್ಲಿ ಪೂಜಾರ ಅವರ 3ನೇ ಶತಕ ಇದಾಗಿದೆ.

    1 ಸಾವಿರ ಎಸೆತ: ಪೂಜಾರ ಕೇವಲ ರನ್ ಗಳಿಸುವುದರಲ್ಲಿ ಮಾತ್ರವಲ್ಲದೇ 1 ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಆಸೀಸ್ ನೆಲದ ಟೆಸ್ಟ್ ಪಂದ್ಯದ ಸರಣಿಯಲ್ಲಿ ಎದುರಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ದಿ ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ, ವಿಜಯ್ ಹಜಾರೆ ಅವರ ಸಾಲಿಗೆ ಸೇರಿದರು.

    ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದ ಪೂಜಾರ, 3ನೇ ಟೆಸ್ಟ್ ಮೊದಲ ದಿನ ಮತ್ತೆ ಶತಕ ಸಿಡಿಸಿದ್ದರು. ಆದರೆ 2ನೇ ಇನ್ನಿಂಗ್ಸ್ ನಲ್ಲಿ ಶೂನ್ಯ ಸುತ್ತಿ ನಿರಾಸೆ ಮೂಡಿಸಿದ್ದರು. ಸದ್ಯ ಅಂತಿಮ ಟೆಸ್ಟ್ ಪಂದ್ಯದಲ್ಲಿ 130 ರನ್ ಗಳಿಸಿರುವ ಪೂಜಾರ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡು ಆಸೀಸ್ ಬೌಲರ್ ಗಳಿಗೆ ತಲೆ ನೋವಾಗಿ ಪರಿಣಾಮಿಸಿದ್ದಾರೆ.

    https://twitter.com/narangmrinal/status/1080709940405096448?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv