Tag: Tenple

  • ಇಂದಿರಾ ಕ್ಯಾಂಟಿನ್‍ಗೂ ತಟ್ಟಿದೆ ಸುಳ್ವಾಡಿ ದುರಂತದ ಎಫೆಕ್ಟ್

    ಇಂದಿರಾ ಕ್ಯಾಂಟಿನ್‍ಗೂ ತಟ್ಟಿದೆ ಸುಳ್ವಾಡಿ ದುರಂತದ ಎಫೆಕ್ಟ್

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದ ಎಫೆಕ್ಟ್ ಇದೀಗ ಇಂದಿರಾ ಕ್ಯಾಂಟಿನ್‍ಗೂ ತಟ್ಟಿದೆ.

    ಸುಳ್ವಾಡಿ ಪ್ರಕರಣದಿಂದ ಎಚ್ಚೆತ್ತಿರುವ ಚಾಮರಾಜನಗರ ಜಿಲ್ಲಾಡಳಿತ ಇದೀಗ ಇಂದಿರಾ ಕ್ಯಾಂಟಿನ್‍ಗಳಿಗೆ ಸಿಸಿಟಿವಿಗಳನ್ನು ಅಳವಡಿಕೆ ಮಾಡಿದೆ. ಜಿಲ್ಲೆಯ ಮೂರು ಇಂದಿರಾ ಕ್ಯಾಂಟಿನ್‍ಗಳಿಗೆ ಸಿಸಿಟಿವಿಗಳನ್ನು ಈಗಾಗಲೇ ಅಳಡಿಕೆ ಮಾಡಲಾಗಿದೆ.

    ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದಲ್ಲಿರುವ ಇಂದಿರಾ ಕ್ಯಾಂಟಿನ್‍ಗಳಿಗೆ ತಲಾ 4 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಅಡುಗೆ ಮನೆಯಲ್ಲಿ ಎರಡು ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಕೆ ಮಾಡಿದರೆ, ಡೈನಿಂಗ್ ಹಾಲ್ ಮತ್ತು ಕ್ಯಾಂಟಿನ್‍ನ ಹೊರ ಭಾಗಕ್ಕೆ ಒಂದೊಂದು ಸಿಸಿಟಿವಿಯನ್ನು ಅಳವಡಿಸಲಾಗಿದೆ. ಇದಲ್ಲದೇ ಅಡುಗೆ ಮನೆಗೆ ಅಡುಗೆ ಭಟ್ಟರನ್ನು ಬಿಟ್ಟು ಯಾರು ಹೋಗದಂತೆ ಈಗಾಗಲೇ ಆದೇಶ ಮಾಡಲಾಗಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ನೀಡಿದ ವಿಷಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv