Tag: Telugu Desam Party

  • ವಿಧಾನಸಭೆಯಿಂದ ಟಿಡಿಪಿ ಪಕ್ಷದ 11 ಶಾಸಕರು ಅಮಾನತು

    ವಿಧಾನಸಭೆಯಿಂದ ಟಿಡಿಪಿ ಪಕ್ಷದ 11 ಶಾಸಕರು ಅಮಾನತು

    ಹೈದರಾಬಾದ್: ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಡಿ ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ ಪ್ರಮುಖ 11 ಸದಸ್ಯರನ್ನು ಇಂದು ಆಂಧ್ರಪ್ರದೇಶ ವಿಧಾನಸಭೆಯಿಂದ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

    ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಟಿಡಿಪಿ ಶಾಸಕರ ಮೇಲೆ ವಾಗ್ದಾಳಿ ನಡೆಸಿ, ನಾಗರಿಕರ ರೀತಿಯಲ್ಲಿ ವರ್ತಿಸುವಂತೆ ಮತ್ತು ಸದನದಲ್ಲಿ ತಮಗೆ ಮಾತನಾಡಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡರು. ಆದರೆ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ 11 ಜನರ ವಿಚಾರವಾಗಿ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರು ಘೋಷಣೆಯನ್ನು ಕೂಗಿದಾಗ, ಶಾಸಕಾಂಗ ವ್ಯವಹಾರಗಳ ಸಚಿವ ಬುಗ್ಗನ ರಾಜೇಂದ್ರನಾಥ್ ಟಿಡಿಪಿ ಶಾಸಕರ ಅಮಾನತು ಪ್ರಸ್ತಾಪವನ್ನು ಮಂಡಿಸಿದರು. ಅಮಾನತುಗೊಂಡ ಸದಸ್ಯರು ಸದನದಿಂದ ನಿರ್ಗಮಿಸಿದ ನಂತರ ಧ್ವನಿ ಮತದ ಮೂಲಕ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು.

    ಸೋಮವಾರ ಕೂಡ ಇದೇ ವಿಚಾರವಾಗಿ ಬಜೆಟ್ ಅಧಿವೇಶನದ ವೇಳೆ ಗಲಾಟೆ ಮಾಡಿದ ಐದು ಟಿಡಿಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿತು. ಅಲ್ಲದೇ ಈ ಕುರಿತಂತೆ ಮಂಗಳವಾರ ಮತ್ತೊಮ್ಮೆ ಸದನದಲ್ಲಿ ಮಾತನಾಡಿದ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು, ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿ ಗುಡೆಮ್‍ನಲ್ಲಿ ಸಂಭವಿಸಿದ ಸಾವುಗಳು ಆಕಸ್ಮಿಕ ಕಾರಣಗಳಿಂದ ಸಂಭವಿಸಿವೆಯೇ ಹೊರತು ಟಿಡಿಪಿ ಆರೋಪಿಸಿದಂತೆ ಅಕ್ರಮ ಕಳ್ಳಬಟ್ಟಿಯಿಂದಲ್ಲ ಎಂದು ಸ್ಪಷ್ಟನೆ ನೀಡಿದರು. ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು: ಬಿ.ಸಿ. ನಾಗೇಶ್

    ಈಗಾಗಲೇ ಹಲವು ಶವಗಳನ್ನು ಸುಟ್ಟು ಹಾಕಲಾಗಿದ್ದು, ಇಲ್ಲಿಯವರೆಗೂ ಈ ವಿಚಾರವಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಒಂದು ಪ್ರಕರಣದಲ್ಲಿ ಕೆಲವು ಅನುಮಾನ ವ್ಯಕ್ತವಾಗಿದ್ದರಿಂದ ಅಧಿಕಾರಿಗಳು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು. ಏನಾದರೂ ತಪ್ಪಾಗಿದ್ದರೆ ನಾವೇಕೆ ಹಾಗೆ ಮಾಡುತ್ತೇವೆ ಎಂದು ಪ್ರಶ್ನಿಸಿದರು.

    ಪೊಲೀಸ್ ಠಾಣೆ, ವಾರ್ಡ್ ಸೆಕ್ರೆಟರಿಯೇಟ್ ಮತ್ತು ಮಹಿಳಾ ಪೊಲೀಸರಿರುವ ಅಂತಹ ಸ್ಥಳದಲ್ಲಿ ಅಕ್ರಮವಾಗಿ ಅರಕ್ ಭಟ್ಟಿ ಇಳಿಸಲು ಸಾಧ್ಯವೇ? ನಿಮ್ಮ ಮೆದುಳನ್ನು ಬಳಸಿ ಮತ್ತು ತಾರ್ಕಿಕವಾಗಿ ಯೋಚಿಸಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಫಿಟ್, ಆರೋಗ್ಯವಾಗಿರಲು ಕುದುರೆ ಸವಾರಿ ಮಾಡುತ್ತಾ ಆಫೀಸ್‍ಗೆ ತೆರಳ್ತಿದ್ದಾರೆ ಈ ವ್ಯಕ್ತಿ!

  • ಟಿಡಿಪಿ ಮುಖಂಡನ ಬರ್ಬರ ಹತ್ಯೆ – ಆರೋಪಿಗಳಿಗಾಗಿ ಪೊಲೀಸರ ಶೋಧ

    ಟಿಡಿಪಿ ಮುಖಂಡನ ಬರ್ಬರ ಹತ್ಯೆ – ಆರೋಪಿಗಳಿಗಾಗಿ ಪೊಲೀಸರ ಶೋಧ

    ಹೈದರಾಬಾದ್: ತೆಲುಗು ದೇಶಂ ಪಕ್ಷದ ಮುಖಂಡನನ್ನು ಅಪರಿಚಿತ ವ್ಯಕ್ತಿಗಳು ಕೊಂದಿರುವ ಘಟನೆ ತೆಲಂಗಾಣದ ಜಂಗಾಂವ್ ನಲ್ಲಿ ನಡೆದಿದೆ. ಜಂಗಾಂವ್ ಹೈದರಾಬಾದ್ ನಿಂದ 85 ಕಿ.ಮೀ ದೂರದಲ್ಲಿದೆ.

     

    ಮೃತಪಟ್ಟ ವ್ಯಕ್ತಿ ಜಂಗಾಂವ್ ಪುರಸಭೆಯ ಮಾಜಿ ಕೌನ್ಸಿಲರ್ ಪುಲಿ ಸ್ವಾಮಿ(53) ಎಂದು ಗುರುತಿಸಲಾಗಿದೆ. ಮುಂಜಾನೆ ಹೈದರಾಬಾದ್-ವಾರಂಗಲ್ ಹೆದ್ದಾರಿಯಲ್ಲಿರುವ ಸಮಾಜ ಕಲ್ಯಾಣ ವಸತಿ ಶಾಲೆಯ ಬಳಿ ವಾಕಿಂಗ್ ಮಾಡುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಕೊಡಲಿಯಿಂದ ಪುಲಿ ಸ್ವಾಮಿಯವರ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ವರದಿ ಪ್ರಕಾರ ಭೂ ವಿವಾದಕ್ಕೆ ಸಂಬಂಧಿಸಿದಂತೆ ಹಳೆಯ ದ್ವೇಷ ಹಿನ್ನೆಲೆ ಪುಲಿ ಸ್ವಾಮಿಯನ್ನು ಆರೋಪಿಗಳು ಕೊಂದಿದ್ದಾರೆ ಎಂದು ಶಂಕಿಸಲಾಗುತ್ತಿದೆ. ಅಲ್ಲದೆ ಇತ್ತೀಚೆಗಷ್ಟೇ ಇದೇ ವಿಚಾರವಾಗಿ ಸ್ಥಳೀಯ ನ್ಯಾಯಾಲಯ ಟಿಡಿಪಿ ನಾಯಕರ ಪರವಾಗಿ ತೀರ್ಮಾನ ನೀಡಿತ್ತು.

    ಈ ವಿಚಾರವಾಗಿ ಮಾತನಾಡಿದ ಸಹಾಯಕ ಪೊಲೀಸ್ ಆಯುಕ್ತ ನಿನೋದ್ ಕುಮಾರ್, ಆರೋಪಿಗಳು ಕೊಲೆ ಮಾಡಿ ತಕ್ಷಣ ಹೊರಡಲು ಬೈಸಿಕಲ್ ನಲ್ಲಿ ಹಿಂದಿರುಗಲು ಸ್ಟಾರ್ಟ್ ಮಾಡಿದ್ದಾರೆ. ಆದರೆ ಬೈಸಿಕಲ್ ಸ್ಟಾರ್ಟ್ ಆಗದ ಕಾರಣ ಗಾಡಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ವಾಹನದ ಮಾಲೀಕರನ ಹುಡುಕಾಡುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಕೂಡ ಬಂಧಿಸಲಾಗುತ್ತದೆ ಎಂದು ತಿಳಿಸಿದರು

  • ತಂಪು ಪಾನೀಯ ನೀಡಿ ಅತ್ಯಾಚಾರ: 14ರ ಬಾಲೆ ಈಗ 3 ತಿಂಗಳ ಗರ್ಭಿಣಿ

    ತಂಪು ಪಾನೀಯ ನೀಡಿ ಅತ್ಯಾಚಾರ: 14ರ ಬಾಲೆ ಈಗ 3 ತಿಂಗಳ ಗರ್ಭಿಣಿ

    ಹೈದರಾಬಾದ್: ತೆಲಗು ದೇಶಂ ಪಾರ್ಟಿ (ಟಿಡಿಪಿ) ಕಾರ್ಯಕರ್ತನೊಬ್ಬ 14 ವರ್ಷದ ಬಾಲಕಿಗೆ ತಂಪು ಪಾನೀಯದ ಆಮಿಷ ಒಡ್ಡಿ ನಿರಂತರ ಅತ್ಯಾಚಾರ ಎಸಗಿದ್ದು, ಸದ್ಯ ಆಕೆ ಈಗ ಮೂರು ತಿಂಗಳು ಗರ್ಭಿಣಿಯಾಗಿರುವ ಪ್ರಕರಣ ಆಂಧ್ರಪ್ರದೇಶದ ಗುಂಟೂರ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಅತ್ಯಾಚಾರ ಸಂತ್ರಸ್ತ ಬಾಲಕಿಯು ಕೆಲವು ದಿನಗಳಿಂದ ಪ್ರಜ್ಞೆ ತಪ್ಪಿ ಬೀಳುತ್ತಿದ್ದಳು. ಅನುಮಾನ ಬಂದ ಹಿನ್ನೆಲೆಯಲ್ಲಿ ಪೋಷಕರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

    ಪೋಷಕರು ಆಕೆಯನ್ನು ವಿಚಾರಿಸಿದಾಗ, ಟಿಡಿಪಿ ಕಾರ್ಯಕರ್ತನೊಬ್ಬ ಅತ್ಯಾಚಾರ ಮಾಡಿ 100 ರೂಪಾಯಿ ನೀಡಿ, ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದ ಎಂದು ಬಾಯಿಬಿಟ್ಟಿದ್ದಾಳೆ.

    ಆರೋಪಿಯು ಮಾಬುಬ್ ವಾಲಿ(43) ಆಗಿದ್ದು, ಬಾಲಕಿಯ ನೆರೆಮನೆಯವನು. ಅತ್ಯಾಚಾರ ಮಾಡಿದ ನಂತರ, ನಿತ್ಯವೂ ಆಕೆಗೆ ತಂಪು ಪಾನೀಯ ಆಮಿಷ ಒಡ್ಡಿ ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗುತಿದ್ದ.

    ಆರೋಪಿಯು ಸ್ಥಳೀಯ ಸಂಸ್ಥೆಯ ಮುಖ್ಯಸ್ಥನಾಗಿದ್ದು, ಹೆಂಡತಿಯಿಂದ ವಿಚ್ಛೇದನ ಪಡೆದಿದ್ದಾನೆ. ಅವನಿಗೆ ಮಕ್ಕಳು ಮೊಮ್ಮಕ್ಕಳಿದ್ದಾರೆ. ಕೆಲವು ದಿನಗಳ ಹಿಂದೆ ನಮ್ಮ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ. ಆದರೆ ಇಂತಾ ಹೀನ ಕೃತ್ಯ ಎಸಗುತ್ತಾನೆಂದು ನಮಗೆ ತಿಳಿದಿರಲಿಲ್ಲ ಎಂದು ಸಂತ್ರಸ್ತೆಯ ಅಕ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

    ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಅತ್ಯಾಚಾರಿಯನ್ನು ಸಾರ್ವಜನಿಕರ ಮುಂದೆ ನೇಣು ಹಾಕಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರತಿಕ್ರಿಯೆ ನೀಡಿದ್ದಾರೆ.

    ಸದ್ಯ ಬಾಲಕಿಗೆ ಗುರಾಜಾಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯಬಿದ್ದರೆ ಆಕೆಯನ್ನು ಗುಂಟೂರು ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.