Tag: Television Actress

  • ಮ್ಯೂಸಿಕ್ ವಿಡಿಯೋಗಾಗಿ ಬೆತ್ತಲಾಗಿ ಟ್ರೋಲ್ ಆದ ಕಿರುತೆರೆ ನಟಿ

    ಮ್ಯೂಸಿಕ್ ವಿಡಿಯೋಗಾಗಿ ಬೆತ್ತಲಾಗಿ ಟ್ರೋಲ್ ಆದ ಕಿರುತೆರೆ ನಟಿ

    ಮುಂಬೈ: ಮ್ಯೂಸಿಕ್ ವಿಡಿಯೋಗಾಗಿ ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾರಾ ಖಾನ್ ಬೆತ್ತಲಾಗಿದ್ದಕ್ಕೆ ಟ್ರೋಲ್ ಆಗಿದ್ದಾರೆ.

    ‘ಬಿದಾಯಿ’ ಧಾರಾವಾಹಿಯಿಂದ ಖ್ಯಾತರಾಗಿರುವ ಸಾರಾ ಖಾನ್ ತಮ್ಮ ಹೊಸ ಮ್ಯೂಸಿಕ್ ಆಲ್ಬಂ ಹಾಡನ್ನು ರಿಲೀಸ್ ಮಾಡಿದ್ದರು. ಈ ಆಲ್ಬಂನ ಹೆಸರು ಬ್ಲ್ಯಾಕ್ ಹಾರ್ಟ್ ಆಗಿದ್ದು, ಸಾರಾ ಖಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

    ಸ್ಲೇಶ್ ಪ್ರೊಡಕ್ಷನ್ ಜೊತೆ ಸೇರಿಕೊಂಡು ಸಾರಾ ಖಾನ್ ಸ್ವತಃ ಈ ಹಾಡನ್ನು ನಿರ್ಮಿಸಿದ್ದರು. ಈ ಹಾಡಿನಲ್ಲಿ ಸಾರಾ ತುಂಬಾ ಬೋಲ್ಡ್ ಆಗಿದ್ದರು. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಮುಸ್ಲಿಂ ಸಮುದಾಯದವರಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಾರಾ ನೀನು ನಿನ್ನ ಧರ್ಮವನ್ನು ಏಕೆ ಬದಲಾಯಿಸುವುದಿಲ್ಲ. ನಿಮ್ಮಂತಹ ನಟಿಯರು ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತೀರಾ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು ಸಾರಾ ಅವರನ್ನು ರಾಖಿ ಸಾವಂತ್ ಅವರಿಗೆ ಹೋಲಿಸಿ, ನಿನಗಿಂತ ರಾಖಿ ಎಷ್ಟೋ ಮೇಲೂ. ಆಕೆ ನಿನ್ನ ರೀತಿ ನಗ್ನಳಾಗುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

    ಈ ಹಿಂದೆ ಸಾರಾ ಖಾನ್ ತನ್ನ ಸಹೋದರಿ ಜೊತೆ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಸಹೋದರಿಯರಿಬ್ಬರು ಕಾಲ ಕಳೆಯುತ್ತಾ ಬಾತ್‍ಟಬ್‍ನಲ್ಲಿ ಶವರ್ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಸಾರಾ ಸಹೋದರಿ ಆರ್ಯ ತನ್ನ ಸಹೋದರಿ ಸಂಪೂರ್ಣ ನಗ್ನವಾಗಿರುವ ವಿಡಿಯೋವನ್ನು ತನ್ನ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

    ಈ ಕುರಿತು ಪ್ರತಿಕ್ರಿಯಿಸಿರುವ ಸಾರಾ, ಇದೆಲ್ಲ ಹೇಗಾಯಿತೋ ಎಂಬುದು ನನಗೆ ತಿಳಿದ್ದಿಲ್ಲ. ಎಲ್ಲವೂ ತಪ್ಪಾಗಿ ಹೋಗಿದೆ. ನನ್ನ ಸಹೋದರಿ ತಮಾಷೆಗಾಗಿ ಈ ವಿಡಿಯೋವನ್ನು ಮಾಡಿದ್ದಳು. ನಂತರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆ ಈ ವಿಡಿಯೋವನ್ನು ಡಿಲೀಟ್ ಮಾಡಿದ್ದಳು. ವಿಡಿಯೋ ಅಪ್ಲೋಡ್ ಮಾಡುವ ಸಮಯದಲ್ಲಿ ನನ್ನ ಸಹೋದರಿ ಮದ್ಯ ಸೇವಿಸಿದ್ದಳು. ನಾವು ತಮಾಷೆ ಮಾಡುತ್ತಾ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೇವು. ಆ ಸಮಯದಲ್ಲಿ ಈ ರೀತಿ ಆಯಿತು ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡೋದಾಗಿ ಹೇಳಿ ನಟಿಗೆ ಲಕ್ಷಾಂತರ ರೂ. ವಂಚನೆ

    ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡೋದಾಗಿ ಹೇಳಿ ನಟಿಗೆ ಲಕ್ಷಾಂತರ ರೂ. ವಂಚನೆ

    ಬೆಂಗಳೂರು: ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡುವುದಾಗಿ ಹೇಳಿ ಕಿರುತೆರೆ ನಟಿಗೆ ಲಕ್ಷಾಂತರ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ರಘು ಚಂದ್ರಪ್ಪ ಹಾಗೂ ಸಂಗೀತಾ ಹಣ ಪಡೆದು ವಂಚಿಸಿದ್ದು, ಸುಶ್ಮಿತಾ ಅಧ್ಯಕ್ಷ ಗಾದಿಗೆ ಆಸೆ ಬಿದ್ದು ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಸುಶ್ಮಿತಾ ಕನ್ನಡದ ಹಲವು ಧಾರವಾಹಿಗಳಲ್ಲಿ ಸಹ ನಟಿಯಾಗಿ ನಟಿಸಿದ್ದಾರೆ. ಸುಶ್ಮಿತಾ ಅಲ್ಲದೇ ಸರೋಜ ಎನ್ನುವವರಿಗೂ ವಂಚನೆಯಾಗಿದೆ.

    ರಘು ಹಾಗೂ ಸಂಗೀತಾ ಆದಿ ಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಧ್ಯಕ್ಷೆಯಾಗಿ ಮಾಡುವುದಾಗಿ ಹೇಳಿ ಸುಶ್ಮಿತಾ ಅವರಿಗೆ ವಂಚಿಸಿದ್ದಾರೆ. ಹಣ ಕೇಳಿದರೆ ರಘು ನಟಿ ಸುಶ್ಮಿತಾ ಹಾಗೂ ಸರೋಜ ಇಬ್ಬರಿಗೂ ಜೀವ ಬೆದರಿಕೆ ಹಾಕುತ್ತಿದ್ದಾನೆ. ಸದ್ಯ ಸರೋಜ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ 420, 418, ಹಾಗೂ 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ದೂರಿನಲ್ಲಿ ಏನಿದೆ?
    ನನಗೆ ನನ್ನ ಚಿಕ್ಕಮ್ಮನ ಮಗಳ ಕಡೆಯಿಂದ ಪರಿಚಯವಾದ ರಘು ಚಂದ್ರಪ್ಪ ನನ್ನನ್ನು ಹಾಗೂ ನನ್ನ ಸ್ನೇಹಿತೆ ಸುಶ್ಮಿತಾ ಗೆ ಆದಿಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಾಧ್ಯಾಕ್ಷರನ್ನಾಗಿ ಮಾಡುತ್ತೇನೆಂದು ನಂಬಿಸಿದ್ದಾನೆ. ಅಲ್ಲದೇ ನನ್ನ ಬಳಿ 1 ಲಕ್ಷ ರೂ. ಹಣವನ್ನು ಪಡೆದು, ಸುಶ್ಮಿತಾ ಅವರಿಂದ 3,50,000 ರೂ. ಹಣವನ್ನು ಪಡೆದು ಹಿಂದಿರುಗಿಸದೇ ನಂಬಿಸಿ ಮೋಸ ಮಾಡಿದ್ದಾನೆ. ಸಶನಿವಾರ ರಘು ಬಿಡಿಎ ಕಾಂಪ್ಲೆಕ್ಸ್ ಬಳಿ ಬರಲು ಹೇಳಿದ್ದನು. ಆಗ ನಾನು ಹಾಗೂ ನನ್ನ ಸ್ನೇಹಿತೆ ಸುಶ್ಮಿತಾ ಹೋದಾಗ ಬಿಡಿಎ ಕಾಂಪ್ಲೆಕ್ಸ್ ಬಳಿ ಇದ್ದ ರಘು ಹಾಗೂ ಆತನ ಸ್ನೇಹಿತೆ ಸಂಗೀತ ಇಬ್ಬರು ಹಣ ನೀಡದೇ ಪ್ರಾಣ ಬೆದರಿಕೆ ಹಾಕಿದ್ದಾರೆ. ಸದ್ಯ ರಘು ಹಾಗೂ ಸಂಗೀತ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv