Tag: teacher

  • ಶಿಕ್ಷಕರ ಪರಿಶ್ರಮದಿಂದಾಗಿ SSLC ಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸ್ತಿದೆ ದಾವಣಗೆರೆಯ ಈ ಶಾಲೆ!

    ಶಿಕ್ಷಕರ ಪರಿಶ್ರಮದಿಂದಾಗಿ SSLC ಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸ್ತಿದೆ ದಾವಣಗೆರೆಯ ಈ ಶಾಲೆ!

    ದಾವಣಗೆರೆ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಲ್ಲ. ಹಾಗಾಗಿ ಫಲಿತಾಂಶ ಕಡಿಮೆ ಬರುತ್ತೆ ಅನ್ನೋ ಕೊಂಕಿದೆ. ಆದರೆ ಜಿಲ್ಲೆಯೆ ತುರ್ಚಘಟ್ಟ ಶಾಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹಲವು ವರ್ಷಗಳಿಂದ ಶೇ.97ರಷ್ಟು ಫಲಿತಾಂಶ ದಾಖಲಾಗುತ್ತಿದೆ.

    ಹೌದು, ಈ ವಿಶೇಷ ಸಾಧನೆಗೆ ಕಾರಣ ಶಾಲೆಯ ಶಿಕ್ಷಕ ರಾಮರೆಡ್ಡಿ ಅವರ ಪರಿಶ್ರಮ. ರಾಮರೆಡ್ಡಿ ಅವರಿಂದಾಗಿ ತುರ್ಚಘಟ್ಟ ಗ್ರಾಮದ ಆಂಜನೇಯ ಸರ್ಕಾರಿ ಪ್ರೌಢಶಾಲೆ ಕಳೆದ ಹಲವಾರು ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.97ರಷ್ಟು ಫಲಿತಾಂಶ ಪಡೆಯುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಮಾದರಿ ಶಾಲೆಗಳ ಪಟ್ಟಿಗೆ ಸೇರಿದೆ.

    ತಾವು ಈ ಶಾಲೆಗೆ ಬಂದ ಮೇಲೆ ಶಾಲೆಯ ಪಾಠದ ಜೊತೆಗೆ ಮಕ್ಕಳನ್ನ ಗುಂಪುಗಳನ್ನಾಗಿ ಮಾಡಿ ಆ ಗುಂಪುಗಳನ್ನ ದತ್ತು ಪಡೆದು ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಜೊತೆಗೆ ಮನೆ ಮನೆ ಪಾಠದ ಯೋಜನೆ ಹಮ್ಮಿಕೊಂಡು ಫಲಿತಾಂಶ ಹೆಚ್ಚಿಸಿದ್ದಾರೆ.

    ವಿದ್ಯಾರ್ಥಿಗಳು ಪೋಷಕರ ಜೊತೆ ಅವರವರ ಮನೆಯಲ್ಲಿ ಸಮಾಲೋಚನಾ ಸಭೆ ನಡೆಸಿ ವಿದ್ಯಾರ್ಥಿಗಳ ಬೌದ್ಧಿಕ ದೌರ್ಬಲ್ಯತೆಗೆ ಕಾರಣ ಪತ್ತೆ ಹಚ್ಚಿ ಪರಿಹಾರ ಕೈಗೊಳ್ಳುತ್ತಾರೆ. ಜೊತೆಗೆ ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವುದಕ್ಕಿಂತ ನಿಸರ್ಗದ ಮಡಿಲಲ್ಲಿ ಪಾಠ ಮಾಡಿ ವಿದ್ಯಾರ್ಥಿಗಳ ಓದಿನ ಆಸಕ್ತಿ ಹೆಚ್ಚಿಸುತ್ತಿದ್ದಾರೆ.

    ಇವರ ಈ ಯೋಜನೆಗಳನ್ನು ಪ್ರತಿ ಸರ್ಕಾರಿ ಶಾಲೆಯಲ್ಲಿ ಅಳವಡಿಸಿಕೊಂಡರೆ ಖಾಸಗಿ ಶಾಲೆಗಿಂತಲೂ ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ಸಿಗುತ್ತೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

     

  • ವಿದ್ಯಾರ್ಥಿನಿಯ ಮೈ,ಕೈ ಮುಟ್ತಾನೆ-ತಾನೇ ದುಡ್ಡು ಕೊಟ್ಟು ಟೂರ್‍ಗೆ ಕರ್ಕೊಂಡು ಹೋಗ್ತಾನೆ

    ವಿದ್ಯಾರ್ಥಿನಿಯ ಮೈ,ಕೈ ಮುಟ್ತಾನೆ-ತಾನೇ ದುಡ್ಡು ಕೊಟ್ಟು ಟೂರ್‍ಗೆ ಕರ್ಕೊಂಡು ಹೋಗ್ತಾನೆ

    – ಎಸ್‍ಪಿ ಕಚೇರಿಗೆ ಬಂತು ಅನಾಮಧೇಯ ಪತ್ರ

    ಚಿಕ್ಕಮಗಳೂರು: ಟ್ಯೂಷನ್ ಕೊಡ್ತೀನಿ ಅಂತ ಮನೆಗೆ ಕರೆದ, ಮನೇಗೆ ಹೋದ್ಮೇಲೆ ಮೈಮೇಲೆ ಕೈ ಹಾಕ್ದ. ಸರ್, ನೀವ್ ನಮ್ಮ ಗುರುಗಳು ಅಂದಿದ್ಕೆ ನಿಮ್ಗೆ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಬರುವಂತೆ ಮಾಡ್ತೀನಿ ಎಂದ. ಟೂರ್‍ಗೆಂದು ಕೇರಳಕ್ಕೆ ಕರೆದ್ಕೊಂಡ ಹೋಗಿದ್ದ. ಹೆಣ್ಮಕ್ಕಳು ಡ್ರೆಸ್ ಚೇಂಜ್ ಮಾಡುವಾಗ ಕ್ಯಾಮರಾ ಹಿಡಿದು ಒಳಗೇ ಬಂದ. ಇದು ಚಿಕ್ಕಮಗಳೂರಿನ ಪೋಲಿ ಮೇಷ್ಟ್ರ ಸ್ಟೋರಿ.

    ಹೌದು. ಚಿಕ್ಕಮಗಳೂರಿನ ವಿಶ್ವವಿದ್ಯಾಲಯ ಪ್ರೌಢಶಾಲೆಯ ಗಣಿತ ಶಿಕ್ಷಕ ಲೋಕೇಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಶತಮಾನದ ಇತಿಹಾಸವಿರುವ ಈ ಶಾಲೆಯ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರೇ ಬರೆದ್ರೋ ಅಥವಾ ಶಿಕ್ಷಕರೇ ಬರೆದ್ರೋ ಗೊತ್ತಿಲ್ಲ. ಆದರೆ ಎಸ್ಪಿ ಕಚೇರಿಗೆ ಬಂದ ಅನಾಮಧೇಯ ದೂರಿನನ್ವಯ ವಿಚಾರಣೆ ನಡೆಸಿದಾಗ ಈ ಶಿಕ್ಷಕನ ಕಾಮಪುರಾಣ ಬಯಲಾಗಿದೆ.

    ಲೋಕೇಶ್ 6 ವಿದ್ಯಾರ್ಥಿನಿಯರನ್ನ ಮನೆಗೆ ಕರೆಸಿಕೊಂಡಿದ್ದನು. ನಿಮಗೆ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಬರುವಂತೆ ಮಾಡ್ತೀನಿ ಎಂದು ಮೈ-ಕೈ ಮುಟ್ಟುತ್ತಿದ್ದನು. ವಿದ್ಯಾರ್ಥಿನಿಯರ ಶಾಲೆ, ಟೂರ್ ಫೀಸ್‍ನ ಇವನೇ ಕಟ್ಟಿ ಕರೆದುಕೊಂಡು ಹೋಗುತ್ತಿದ್ದ. ಅಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಎನ್ನಲಾಗಿದೆ. ಶಿಕ್ಷಕನ ಈ ಪುಂಡಾಟವನ್ನ ವಿದ್ಯಾರ್ಥಿನಿಯರು ಹೆಡ್ ಮಾಸ್ಟರ್ ಗಮನಕ್ಕೆ ತಂದ್ರೂ ಅವ್ರು ನಕ್ಕು ಸುಮ್ಮನಾಗುತ್ತಿದ್ದರು ಎಂದು ಹೆಣ್ಮಕ್ಕಳು ಪೊಲೀಸರ ತನಿಖೆ ವೇಳೆ ಹೇಳಿದ್ದಾರೆ. ಈಗ ಶಾಲೆಯ ಹೆಡ್ ಮಾಸ್ಟರ್ ಶ್ರೀನಿವಾಸ್, ಹೌದು, ಶಿಕ್ಷಕ ಲೋಕೇಶ್ ತಪ್ಪು ಮಾಡಿದ್ದಾರೆ ಎಂದು ಹೇಳುತ್ತಾರೆ.

    ವಿದ್ಯಾರ್ಥಿನಿಯರನ್ನ ಟೂರ್‍ಗೆ ಕರೆದುಕೊಂಡು ಹೋಗಿ ಮೈಮೇಲೆ ಕೈ ಹಾಕಿದ್ದಾನೆ. ಅವರು ಬಟ್ಟೆ ಚೇಂಜ್ ಮಾಡುವಾಗ ಕ್ಯಾಮರಾ ಹಿಡಿದು ಹೇಳದೆ-ಕೇಳದೆ ರೂಂಗೆ ನುಗ್ಗಿದ್ದಾನೆ. ವಿಜ್ಞಾನ ವಸ್ತು ಪ್ರದರ್ಶನಕ್ಕೆಂದು ಧಾರವಾಡಕ್ಕೆ ಹೋದಾಗ ಒಬ್ಬಳೇ ವಿದ್ಯಾರ್ಥಿಯನ್ನ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಇಷ್ಟೆಲ್ಲಾ ಮಾಡಿದ ಕಾಮುಕ ಟೀಚರ್ ನಮಗೆ ಬೇಡ. ಇವನು ಇಲ್ಲೇ ಇದ್ರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಸ್ಪಿ ಕಚೇರಿಗೆ ಅನಾಮಧೇಯ ಪತ್ರ ಬಂದಿದೆ.

  • ಕೆಪಿಎಸ್‍ಸಿ ಪರೀಕ್ಷೆ ಪಾಸಾದ ಶಿಕ್ಷಕ ನೌಕರಿಗಾಗಿ 19 ಕುರಿಗಳನ್ನ ಕದ್ದ!

    ಕೆಪಿಎಸ್‍ಸಿ ಪರೀಕ್ಷೆ ಪಾಸಾದ ಶಿಕ್ಷಕ ನೌಕರಿಗಾಗಿ 19 ಕುರಿಗಳನ್ನ ಕದ್ದ!

    ಕೊಪ್ಪಳ: ಕೆಪಿಎಸ್‍ಸಿ ಪರೀಕ್ಷೆ ಪಾಸಾಗಿದದ್ದ ಶಿಕ್ಷಕನೊಬ್ಬ ನೌಕರಿ ಪಡೆಯಲು ಹಣ ಅಡಚಣೆಯಾಗಿ ಕುರಿ ಕಳ್ಳತನ ಮಾಡಿ ಜೈಲು ಪಾಲಾಗಿರೋ ಘಟನೆ ಕೊಪ್ಪಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಕೊಪ್ಪಳ ತಾಲೂಕಿನ ಜಿನ್ನಾಪುರ ತಾಂಡಾದ ಕಿರಣ ಕುಮಾರ ಎಂಬವರಿಗೆ ಸೇರಿದ ಕುರಿಗಳನ್ನ ಶಿಕ್ಷಕ ವೆಂಕಟೇಶ್ ನಾಯಕ ಸೇರಿ ಮೂವರು ಕಳ್ಳತನ ಮಾಡಿದ್ದಾರೆ. ಕಳೆದ ಆಗಸ್ಟ್ 6ರಂದು ಸೀತಮ್ಮನಕಲ್ಲು ಬಳಿಯ ಹಟ್ಟಿಯಲ್ಲಿ 19 ಕುರಿಗಳನ್ನು ಕಳ್ಳತನ ಮಾಡಿದ್ದಾರೆ. ಇದರ ಮೌಲ್ಯ 1 ಲಕ್ಷದ 29 ಸಾವಿರ ಆಗಿದೆ.

    ಆಗಸ್ಟ್ 10 ರಂದು ಕುರಿ ಕಳ್ಳತನವಾಗಿರೋ ಕುರಿತು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಕಿರಣ ಕುಮಾರ ಪ್ರಕರಣ ದಾಖಲು ಮಾಡಿದ್ದರು. ಬೊಮ್ಮಸಾಗರ ತಾಂಡಾದ ಶಿಕ್ಷಕ ವೆಂಕಟೇಶ್ ನಾಯಕನಿಗೆ ಕುರಿ ಕಳ್ಳತನ ಮಾಡಲು ಸ್ಥಳೀಯರಾದ ಗೋಪಾಲ, ಅರ್ಜುನ ಹಾಗು ಯಮನೂರ ಸಹಾಯ ಮಾಡಿದ್ದು, ವಿಚಾರಣೆ ನಡೆಸಿದ ಪೊಲೀಸರು ನಾಲ್ವರನ್ನ ಆಗಸ್ಟ್ 12ರಂದು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

  • ನೀವು ತುಂಬಾ ನಗ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

    ನೀವು ತುಂಬಾ ನಗ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

    ವಾಷಿಂಗ್ಟನ್: ಜಾಸ್ತಿ ನಕ್ಕರೆ ಆರೋಗ್ಯಕ್ಕೆ ಒಳ್ಳೆಯದು, ಆಯಸ್ಸು ಹೆಚ್ಚುತ್ತೆ ಅಂತ ಎಲ್ಲರೂ ಹೇಳುತ್ತಾರೆ. ಆದರೆ ಆ ನಗುವೇ ನಿಮ್ಮನ್ನು ಮೃತ್ಯು ಕೂಪಕ್ಕೆ ತಳ್ಳಬಹುದು ಎಂದರೆ ನೀವು ನಂಬಲು ಸಾಧ್ಯವೇ ಇಲ್ಲ ಅಲ್ವ. ಹಾಗಾದರೆ ನೀವು ಈ ಸ್ಟೋರಿಯನ್ನೊಮ್ಮೆ ಓದಿ.

    ಹೌದು. ಅಮೆರಿಕಾದ ಮೆಕ್ಸಿಕೋ ನಗರದಲ್ಲಿ ಶಿಕ್ಷಕಿಯೊಬ್ಬರು ಜೋರಾಗಿ ನಗುತ್ತಾ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಚಾರ್ಲ್ಸ್ ಎ ಹುಸ್ಟನ್ ಮಿಡ್ಲೆ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿರುವ ಶಾರೋನ್ ರೆಗೋಲಿ ಸಿಫೆರ್ನೋ(50) ಸಾವನ್ನಪ್ಪಿದ ಶಿಕ್ಷಕಿ.

    ಶಾರೋನ್ ಮೆಕ್ಸಿಕೋ ನಗರದ ಸ್ನೇಹಿತರ ಮನೆಗೆ ತನ್ನ ಮಗಳೊಂದಿಗೆ ಹೋಗಿದ್ದರು. ಈ ವೇಳೆ ಕಟ್ಟಡದ ಮೇಲೆ ನಿಂತು ಜೋರಾಗಿ ನಗುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ದೇಹ ಮತ್ತು ಮೆದುಳಿಗೆ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಶರೋನ್ ಕೊನೆಯುಸಿರೆಳೆದರು. ಸಾವಿಗೆ ಬರೀ ಮದ್ಯಪಾನ ಮಾಡಿರುವುದು ಕಾರಣವಲ್ಲ. ಬಿಲ್ಡಿಂಗ್‍ನ ಅಂಚಿಗೆ ಹೋದಾಗ ಆಯತಪ್ಪಿ ಬಿದ್ದಳು. ಶಾರೋನಳನ್ನು ಕಳೆದುಕೊಂಡಿರುವುದರಿಂದ ನಮ್ಮ ಕುಟುಂಬದಲ್ಲಿ ದುಃಖ ಆವರಿಸಿದೆ ಎಂದು ಆಕೆಯ ಸಹೋದರ ಡೇವಿಡ್ ರೆಗೋಲಿ ದುಃಖ ವ್ಯಕ್ತಪಡಿಸಿದರು.

    ತಮ್ಮ ನೆಚ್ಚಿನ ಶಿಕ್ಷಕಿಯ ಸಾವಿನ ವಿಷಯ ತಿಳಿದ ಮಕ್ಕಳು ರಜೆಯಿದ್ದರೂ ಸಹ ಶಾಲೆಗೆ ಬಂದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದರು. ಶಾರೋನ್ ಅವರು ಪತಿ ರೆಗೋಲಿ ಸಿಫೆರ್ನೋ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

  • ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಶಿಕ್ಷಕಿ

    ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಶಿಕ್ಷಕಿ

    ಬೆಂಗಳೂರು: ಪತಿಯ ಕಿರುಕುಳ ತಾಳಲಾರದೇ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮಾಗಡಿಯಲ್ಲಿ ನಡೆದಿದೆ.

    ತೇಜಾವತಿ ಆತ್ಮಹತ್ಯೆಗೆ ಶರಣಾದ ಗೃಹಿಣಿ. ತೇಜಾವತಿ ಪತಿ ರಮೇಶ್ ನ ಕಿರುಕುಳ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಮೇಶ್ ಹಾಗೂ ತೇಜಾವತಿ ದಂಪತಿ ಮದುವೆಯಾಗಿ 12 ವರ್ಷ ಕಳೆದಿದ್ದು, ಒಂದು ಮುದ್ದಾದ ಮಗುವಿದೆ. ಗಂಡ ಹೆಂಡತಿ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು.

    ಗಂಡ ರಮೇಶನಿಗೆ ಅನೈತಿಕ ಸಂಬಂಧವಿದೆ ಎಂದು ದಂಪತಿ ನಡುವೆ ಬೆಳಗ್ಗೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದರಿಂದ ತೇಜಾವತಿ ವಿಷ ಸೇವನೆ ಮಾಡಿದ್ದಾರೆ. ಕೂಡಲೇ ತೇಜಾವತಿಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತೇಜಾವತಿ ಮೃತಪಟ್ಟಿದ್ದಾರೆ.

    ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ತೇಜಾವತಿಯ ಗಂಡ ರಮೇಶ್‍ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಪೊಲೀಸ್ ಠಾಣೆಯಿಂದ ಬಂದ ಗೃಹಿಣಿ ಆತ್ಮಹತ್ಯೆಗೆ ಶರಣು

  • ಶತಮಾನದ ಶಾಲೆಗೆ ಹೊಸರೂಪ, ಸಾಧಕರ ಕಲಾಕೃತಿ ಜೊತೆ ಪಾಠ ಮಾಡೋ ಹಾವೇರಿಯ ಕೃಷ್ಣಪ್ಪ

    ಶತಮಾನದ ಶಾಲೆಗೆ ಹೊಸರೂಪ, ಸಾಧಕರ ಕಲಾಕೃತಿ ಜೊತೆ ಪಾಠ ಮಾಡೋ ಹಾವೇರಿಯ ಕೃಷ್ಣಪ್ಪ

    ಹಾವೇರಿ: ಸರ್ಕಾರಿ ಶಾಲೆ ಅಂದ್ರೆ ಮೂಗುಮರಿಯೋ ಜನರೇ ಹೆಚ್ಚು. ಆದ್ರೆ ಇಂಥ ಮಾತನ್ನ ಸುಳ್ಳು ಮಾಡಿರೋ ಹಲವು ಶಾಲೆಗಳು, ಶಿಕ್ಷಕರ ಬಗ್ಗೆ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ತೋರಿಸಿದ್ದೀವಿ. ಇವತ್ತು ಅಂಥದ್ದೇ ಸ್ಟೋರಿ. ಮಕ್ಕಳನ್ನ ಸೆಳೆಯೋಕೆ, ಅವರಲ್ಲಿ ಹೆಚ್ಚಿನ ಜ್ಞಾನ ತುಂಬೋಕೆ ಹಾವೇರಿಯ ರಾಣೇಬೆನ್ನೂರಿನ ಅರೇಮಲ್ಲಾಪುರ ಗ್ರಾಮದ ಶಿಕ್ಷಕ ಕಾರ್ಯ ಶ್ಲಾಘನೀಯ.

    ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈ ರೀತಿ ನಿರ್ಮಾಣಗೊಂಡಿರುವ ಸುಂದರ ಕಲಾಕೃತಿಗಳು ಮತ್ತು ಅದನ್ನ ತೋರಿಸಿ ಪಾಠ ಮಾಡುತ್ತಿರುವ ಶಿಕ್ಷಕ ಕೃಷ್ಣಪ್ಪ ದುರ್ಗದ ಅವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ

    1904ರಲ್ಲಿ ಪ್ರಾರಂಭವಾದ ಶಾಲೆ ಶತಮಾನೋತ್ಸ ಕಂಡಿದೆ. ಆದ್ರೆ ಎಲ್ಲಾ ಶಾಲೆಗಳಂತಿದ್ದ ಈ ಶಾಲೆಗೆ ನಾಲ್ಕು ವರ್ಷದಿಂದ ಶಿಕ್ಷಕ ಕೃಷ್ಣಪ್ಪ ದುರ್ಗದ ಅವರ ವಿಶೇಷ ಆಸಕ್ತಿಯಿಂದ ಹೊಸರೂಪ ಬಂದಿದೆ. ಶಾಲೆಯ ಆವರಣದಲ್ಲಿ ಹೋರಾಟಗಾರರು, ದಾರ್ಶನಿಕರು, ಸಾಹಿತಿಗಳು, ಮಹಾನ್ ವ್ಯಕ್ತಿಗಳ ಕಲಾಕೃತಿಯನ್ನ ಸಿಮೆಂಟ್‍ನಲ್ಲಿ ನಿರ್ಮಿಸಿದ್ದಾರೆ.

    ಅರೇಮಲ್ಲಾಪುರ ಶಾಲೆಯಲ್ಲಿ ಮೊದಲಿಗೆ ಮಕ್ಕಳ ಕೊರತೆ ಇತ್ತು. ಆದ್ರೆ ಶಾಲೆಗೆ ಹೊಸ ಮೆರುಗು ನೀಡಿದ್ದು, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇರೋದ್ರಿಂದ ಈಗ 400ಕ್ಕೆ ಏರಿದೆ. ಶಿಕ್ಷಕ ಕೃಷ್ಣಪ್ಪ ಕಾರ್ಯದ ಬಗ್ಗೆ ಗ್ರಾಮಸ್ಥರು ಕೊಂಡಾಡುತ್ತಾರೆ.

    ಇದಕ್ಕಾಗಿ ಶಿಕ್ಷಕ ಕೃಷ್ಣಪ್ಪ ಮೊದಲಿಗೆ ತಾವೇ ಖರ್ಚು ಮಾಡಿದ್ದು, ನಂತರ ಗ್ರಾಮದ ದಾನಿಗಳಿಂದ ನೆರವು ಸಿಕ್ಕಿದೆ. ಕೃಷ್ಣಪ್ಪ ಅವರ ಕಾರ್ಯಕ್ಕೆ ಶಾಲೆಯ ಶಿಕ್ಷಕ ವೃಂದ ಕೂಡ ಸಾಥ್ ನೀಡಿದೆ.

  • ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗಿನ ಅಶ್ಲೀಲ ಫೋಟೋ ಅಪ್‍ಲೋಡ್ ಮಾಡಿದ ಕಾಮುಕ ಶಿಕ್ಷಕ

    ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗಿನ ಅಶ್ಲೀಲ ಫೋಟೋ ಅಪ್‍ಲೋಡ್ ಮಾಡಿದ ಕಾಮುಕ ಶಿಕ್ಷಕ

    ಡಿಸ್ಪುರ: ಅಸ್ಸಾಂನ ಪುಟ್ಟ ಗ್ರಾಮವೊಂದರಲ್ಲಿ ಕಾಮುಕ ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗೆ ವಿವಿಧ ಭಂಗಿಯಲ್ಲಿ ಫೋಟೋ ತೆಗೆಸಿಕೊಂಡು ಅದನ್ನು ಆನ್‍ಲೈನ್‍ನಲ್ಲಿ ಹಂಚಿಕೊಂಡಿರುವ ಬಗ್ಗೆ ವರದಿಯಾಗಿದೆ.

    ಇಲ್ಲಿನ ಹೈಲಾಕಂಡಿ ಜಿಲ್ಲೆಯ ಕಟ್ಲಿಚೆರ್ರಾ ಎಂಬ ಪುಟ್ಟ ಗ್ರಾಮ ಈ ಘಟನೆಗೆ ಸಾಕ್ಷಿಯಾಗಿದೆ. ಶಿಕ್ಷಕನಾದ ಫೈಜುದ್ದಿನ್ ಲಸ್ಕರ್ ತನ್ನ ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲವಾಗಿ ಫೋಟೋ ತೆಗೆಸಿಕೊಂಡಿದ್ದಲ್ಲದೆ ಅವುಗಳನ್ನ ಆನ್‍ಲೈನ್‍ನಲ್ಲಿ ಹಂಚಿಕೊಂಡಿದ್ದಾನೆ. ಈತ ಕಟ್ಲಿಚೆರಾದ ಮಾಡೆಲ್ ಹೈ ಸ್ಕೂಲ್‍ನಲ್ಲಿ ಕಲಸ ಮಾಡ್ತಿದ್ದು, ಈ ಹಿಂದೆಯೂ ಇಂತಹ ಸಾಕಷ್ಟು ಅಪರಾಧಗಳನ್ನ ಎಸಗಿದ್ದಾನೆ ಎಂದು ವರದಿಯಾಗಿದೆ.

    ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ ಈ ಹಿಂದೆ ಫೈಜುದ್ದೀನ್ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಸಿಕ್ಕಿಬಿದ್ದಾಗ ಜನರ ಗುಂಪು ಆತನ ಬೆರಳನ್ನೇ ಕತ್ತರಿಸಿದ್ರು ಎನ್ನಲಾಗಿದೆ.

    ಫೈಜುದ್ದಿನ್ ಈ ಫೋಟೋಗಳನ್ನ ಅಪ್ಲೋಡ್ ಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಆದ್ರೆ ಇಷ್ಟೆಲ್ಲಾ ಮಾಡಿದ್ರೂ ಪೊಲೀಸರು ಮಾತ್ರ ಶಿಕ್ಷಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

    ಫೋಟೋಗಳು ವೈರಲ್ ಆದ ಬಳಿಕ ಬಾಲಕಿಯಯೊಬ್ಬಳ ಪೋಷಕರು ಶಿಕ್ಷಕನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಆದ್ರೆ ಪೊಲೀಸರು ಶಿಕ್ಷಕನನ್ನು ಈ ಬಗ್ಗೆ ವಿಚಾರಣೆಗೊಳಪಡಿಸಿದ್ದಾರೆ ಹೊರತು ಬಂಧನ ಮಾಡಿಲ್ಲ.

  • ಕ್ಲಾಸ್‍ನಲ್ಲಿ ನಿದ್ದೆ ಮಾಡ್ತಿದ್ದ ಟೀಚರ್ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸ್ದ- ಮುಂದೇನಾಯ್ತು ಅನ್ನೋದು ಶಾಕಿಂಗ್

    ಕ್ಲಾಸ್‍ನಲ್ಲಿ ನಿದ್ದೆ ಮಾಡ್ತಿದ್ದ ಟೀಚರ್ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸ್ದ- ಮುಂದೇನಾಯ್ತು ಅನ್ನೋದು ಶಾಕಿಂಗ್

    ಹೈದರಾಬಾದ್: 10ನೇ ತರಗತಿ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ನಿದ್ದೆ ಮಾಡ್ತಿದ್ದ ಶಿಕ್ಷಕರ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸಿದ್ದ. ಆದ್ರೆ ಆತ ಮಾಡಿದ ಈ ಕೆಲಸಕ್ಕೆ ಕಂಬಕ್ಕೆ ಕಟ್ಟಿ ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಇಲ್ಲಿನ ಮಹಬೂಬ್‍ನಗರದಲ್ಲಿ ಶನಿವಾರದಂದು ಈ ಘಟನೆ ನಡೆದಿದೆ. ಬಾಲಕ ತನ್ನ ತರಗತಿಯಲ್ಲಿ ನಿದ್ರಿಸುತ್ತಿದ್ದ ಗಣಿತ ಶಿಕ್ಷಕರ ಫೋಟೋ ಕ್ಲಿಕ್ಕಿಸಿ ಅದನ್ನ ವಾಟ್ಸಪ್‍ನಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಕಳಿಸಿದ್ದ ಎನ್ನಲಾಗಿದೆ. ಬಳಿಕ ಆ ಶಿಕ್ಷಕರನ್ನು ಅಮಾನತು ಮಾಡಲಾಗಿತ್ತು. ಇದರಿಂದ ಕೆರಳಿದ ಶಾಲೆಯ ಇತರೆ ಶಿಕ್ಷಕರು ಶನಿವಾರದಂದು ಪೊಲೀಸರನ್ನ ಸಂಪರ್ಕಿಸಿದ್ದರು.

    ನಾನು ಸ್ನೇಹಿತರ ಜೊತೆ ಕುಳಿತು ತಂಪು ಪಾನೀಯ ಕುಡಿಯುತ್ತಿದ್ದೆ. ಆಗ ನನ್ನನ್ನು ಹಿಡಿದು ಶಾಲೆಯ ಗ್ರೌಂಡ್‍ನಲ್ಲಿರುವ ಕಂಬಕ್ಕೆ ಕಟ್ಟಿ ಥಳಿಸಿದ್ರು. ಇಬ್ಬರು ಪೊಲೀಸರು ಕೋಲಿನಿಂದ ಹೊಡೆಯುತ್ತಿದ್ರೆ ಶಿಕ್ಷಕರು ನಿಂತು ನೋಡ್ತಿದ್ರು ಎಂದು ಬಾಲಕ ಆರೋಪಿಸಿದ್ದಾನೆ. ಬಾಲಕನ ಮೈಮೇಲೆ ಗಾಯಗಳಾಗಿದ್ದು, ತನ್ನ ಸ್ನೇಹಹಿತರು ಹೇಗೋ ಅಲ್ಲಿಂದ ಓಡಿ ಹೋದ್ರು ಎಂದು ಹೇಳಿದ್ದಾನೆ.

    ಆದ್ರೆ ಈ ಆರೋಪವನ್ನ ತಳ್ಳಿಹಾಕಿರೋ ಪೊಲೀಸರು ಆತ ಶಾಲೆಯ ಆವರಣದಲ್ಲಿ ಮದ್ಯಪಾನ ಮಾಡುತ್ತಾ ಸಿಕ್ಕಿಬಿದ್ದಿದ್ದ ಎಂದಿದ್ದಾರೆ.

  • 16ರ ಪೋರನೊಂದಿಗೆ ಸೆಕ್ಸ್ ಮಾಡಿದ್ದ 27 ವರ್ಷದ ಟೀಚರ್‍ಗೆ ಶಿಕ್ಷೆ ಪ್ರಕಟ

    16ರ ಪೋರನೊಂದಿಗೆ ಸೆಕ್ಸ್ ಮಾಡಿದ್ದ 27 ವರ್ಷದ ಟೀಚರ್‍ಗೆ ಶಿಕ್ಷೆ ಪ್ರಕಟ

    ವಾಷಿಂಗ್ಟನ್: 16ರ ಪೋರನೊಂದಿಗೆ ಸೆಕ್ಸ್ ಮಾಡಿದ್ದ 27 ವರ್ಷದ ಶಿಕ್ಷಕಿಗೆ ಕೋರ್ಟ್ 9 ತಿಂಗಳು ಜೈಲು ಶಿಕ್ಷೆ ಮತ್ತು 2 ವರ್ಷದವರೆಗೆ ವೃತ್ತಿಯ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

    ಫೆಬ್ರವರಿ ತಿಂಗಳಲ್ಲಿ ನೇಬ್ರಾಸ್ಕಾ ಸಿಟಿಯ 27 ವರ್ಷದ ಇಮಿಲಿ ಲೋಫಿಂಗ್ ತನ್ನ 16 ವರ್ಷದ ವಿದ್ಯಾರ್ಥಿಯೊಂದಿಗೆ ಸೆಕ್ಸ್ ಮಾಡಿದ್ದಳು. ವಿದ್ಯಾರ್ಥಿಯ ತಾಯಿ ನನ್ನ 16 ವರ್ಷದ ಮಗ ಆತನ ಶಾಲೆಯ ಲೋಫಿಯಾ ಎಂಬ ಶಿಕ್ಷಕಿಯ ಜೊತೆ ಲೈಂಗಿಕ ಸಂಪರ್ಕದಲ್ಲಿದ್ದಾನೆ ಎಂದು ವೀಪಿಂಗ್ ವಾಟರ್ ಸ್ಕೂಲ್‍ಗೆ ಮೇಲ್ ಮಾಡಿದ್ರು. ಮೇಲ್ ಬಳಿಕ ಲೋಫಿಯಾಳ ಕಾಮ ಪುರಾಣ ಬೆಳಕಿಗೆ ಬಂದಿತ್ತು.

    ಲೋಫಿಯಾಗೆ ಈಗಾಗಲೇ ಮದುವೆಯಾಗಿದ್ರು, ಚಿಕ್ಕ ಬಾಲಕನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಳು. ಲೋಫಿಯಾ ನೆಬ್ರಾಸ್ಕ ಸಿಟಿಯ ಮಿಡಲ್ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದಳು. ತನ್ನ ರಾಸಲೀಲೆಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲೋಫಿಯಾ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಳು.

    https://twitter.com/BrandonWOWT/status/836423346350866433?ref_src=twsrc%5Etfw&ref_url=http%3A%2F%2Fwww.foxnews.com%2Fus%2F2017%2F07%2F17%2Fjail-for-married-english-teacher-27-who-arranged-tryst-with-16-year-old-boy-for-purpose-sexual-penetration.html

  • ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ- ಸಹಶಿಕ್ಷಕಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನ

    ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ- ಸಹಶಿಕ್ಷಕಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನ

    ಕೊಪ್ಪಳ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಅಂತ ಆರೋಪಿಸಿ ಸಹಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ಜಂಗಮರ ಕಲ್ಗೂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಮುದಿಗೌಡ ಸಹಶಿಕ್ಷಕಿ ಭಾಗ್ಯಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದ್ರಿಂದ ನೊಂದ ಶಿಕ್ಷಕಿ ಜುಲೈ 13 ರಂದು 14 ಪುಟದ ಡೆತ್ ನೋಟ್ ಬರೆದು ಫಿನಾಯಿಲ್ ಕುಡಿದು ಆತ್ಮಹತ್ಯೆ ಯತ್ನ ಮಾಡಿದ್ದಾರೆ. ಬಳಿಕ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮುಖ್ಯ ಆರೋಪಿ ಮಂಜುನಾಥ ಸದ್ಯ ತಲೆಮರೆಸಿಕೊಂಡಿದ್ದಾನೆ. ಶಾಲೆಯ ಮೇಲ್ಗಡೆಯಿರೋ ಕೊಠಡಿಯೊಳಗೆ ಇರುವಾಗ ಮಂಜುನಾಥ ನನ್ನ ಮೈ ಮುಟ್ಟೋದು, ಅಸಭ್ಯವಾಗಿ ವರ್ತಿಸೋದು ಮಾಡಿದ್ದಾನೆ. ಈ ವಿಷಯವನ್ನ ನಿನ್ನ ಪತಿಗೆ ಯಾಕೆ ಹೇಳಿದ್ಯಾ ಅಂತ ಮಾನಸಿಕವಾಗಿ ಚಾಂದಪಾಷಾ, ಹಾಗೂ ಶಂಕರಪ್ಪ ಅನ್ನೋವ್ರು ತುಂಬಾ ತೊಂದ್ರೆ ಕೊಡ್ತಿದ್ರು ಅಂತ ನೊಂದ ಶಿಕ್ಷಕಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಆದ್ರೆ ಈ ಆರೋಪವನ್ನ ಆರೋಪಿತರು ತಳ್ಳಿ ಹಾಕ್ತಿದ್ದಾರೆ. ನಾವು ಆ ರೀತಿಯಾಗಿ ಸಹ ಶಿಕ್ಷಕಿಗೆ ಕಿರುಕುಳ ನೀಡಿಲ್ಲವೆಂದು ವಾದಿಸಿದ್ದಾರೆ.

    ಸದ್ಯ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಮುಖ್ಯ ಶಿಕ್ಷಕ ಮಂಜುನಾಥ, ಇನ್ನೊರ್ವ ಮುಖ್ಯ ಶಿಕ್ಷಕ ಚಾಂದಪಾಷಾ, ಇಸಿಒ ಶಂಕರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.