Tag: teacher

  • ಮದುವೆ ದಿನವೇ ಶಿಕ್ಷಕ ಜೋಡಿ ಕೆಲಸದಿಂದ ವಜಾ- ಅವರ ‘ರೊಮ್ಯಾನ್ಸ್’ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ ಎಂದ ಶಾಲೆ

    ಮದುವೆ ದಿನವೇ ಶಿಕ್ಷಕ ಜೋಡಿ ಕೆಲಸದಿಂದ ವಜಾ- ಅವರ ‘ರೊಮ್ಯಾನ್ಸ್’ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ ಎಂದ ಶಾಲೆ

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡ್ತಿದ್ದ ನವವಿವಾಹಿತ ದಂಪತಿಯನ್ನ ಮದುವೆಯ ದಿನವೇ ಕೆಲಸದಿಂದ ವಜಾ ಮಾಡಲಾಗಿದೆ. ಈ ಜೋಡಿಯ ರೊಮ್ಯಾನ್ಸ್ ನಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಶಾಲೆಯವರು ಹೇಳಿಕೆ ನೀಡಿದ್ದಾರೆ.

    ಪುಲ್ವಾಮಾದ ಟ್ರಾಲ್ ಟೌನ್‍ನವರಾದ ರಾತಿಖ್ ಭಟ್ ಹಾಗೂ ಸುಮಾಯಾ ಬಶೀರ್ ಕೆಲಸದಿಂದ ವಜಾಗೊಂಡಿರೋ ದಂಪತಿ. ಈ ಇಬ್ಬರೂ ಕಳೆದ ಹಲವು ವರ್ಷಗಳಿಂದ ಪಾಂಫೋರ್ ಮುಸ್ಲಿಂ ಎಜಿಕೇಷನಲ್ ಇನ್ಸ್‍ಟಿಟ್ಯೂಟ್‍ನಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ಕೆಲಸ ಮಾಡುತ್ತಿದ್ದರು. ಆದ್ರೆ ಇದ್ದಕ್ಕಿದ್ದಂತೆ ನವೆಂಬರ್ 30 ರಂದು ನಮ್ಮ ಮದುವೆ ನಡೆದ ದಿನವೇ ಶಾಲೆಯವರು ನಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆಂದು ದಂಪತಿ ಹೇಳಿದ್ದಾರೆ.

    ಈ ಬಗ್ಗೆ ಶಾಲೆಯ ಪ್ರಿನ್ಸಿಪಲ್ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಶಾಲೆಯ ಅಧ್ಯಕ್ಷರಾದ ಬಶೀರ್ ಮಸೂದಿ ಪ್ರತಿಕ್ರಿಯೆ ನೀಡಿದ್ದು, ಇವರಿಬ್ಬರೂ ಮದುವೆಗೆ ಮುಂಚೆ ರೊಮ್ಯಾಂಟಿಕ್ ರಿಲೇಷನ್‍ಶಿಪ್‍ನಲ್ಲಿ ಇದ್ದ ಕಾರಣ ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಿದ್ದಾರೆ. ಶಾಲೆಯಲ್ಲಿ 2 ಸಾವಿರ ಮಕ್ಕಳಿದ್ದು, 200 ಸಿಬ್ಬಂದಿ ಕೆಲಸ ಮಾಡುತ್ತಾರೆ. ಈ ಜೋಡಿಯ ರೊಮ್ಯಾನ್ಸ್‍ನಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮಸೂದಿ ಹೇಳಿದ್ದಾರೆ.

    ಆದ್ರೆ ದಂಪತಿ ತಮ್ಮ ಮದುವೆ ಹಿರಿಯರು ನಿಶ್ಚಯಿಸಿದ್ದು ಎಂದು ಹೇಳಿದ್ದಾರೆ. ನಮ್ಮದು ಅರೇಂಜ್ಡ್ ಮ್ಯಾರೇಜ್. ಕೆಲವು ತಿಂಗಳ ಹಿಂದೆಯಷ್ಟೇ ನಮ್ಮ ನಿಶ್ಚಿತಾರ್ಥವಾಗಿತ್ತು. ನಂತರ ಸುಮಾಯಾ ಶಾಲಾ ಸಿಬ್ಬಂದಿಗೆ ಪಾರ್ಟಿ ಕೊಟ್ಟಿದ್ದರಿಂದ ಈ ವಿಷಯ ಶಾಲೆಯ ಎಲ್ಲಾ ಆಡಳಿತ ಮಂಡಳಿವರಿಗೆ ಗೊತ್ತಿತ್ತು ಎಂದು ರಾತಿಖ್ ಭಟ್ ಹೇಳಿದ್ದಾರೆ. ಒಂದು ವೇಳೆ ನಮ್ಮ ಸಂಬಂಧದಿಂದ ಈ ರೀತಿ ಆಗುತ್ತಿದೆ ಎಂದಾದರೆ ಆ ಬಗ್ಗೆ ವಿವರಣೆ ನೀಡಲು ಶಾಲೆಯವರು ಯಾಕೆ ಅವಕಾಶ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಮದುವೆಗಾಗಿ ಒಂದು ತಿಂಗಳ ಹಿಂದೆಯೇ ರಜೆ ಕೋರಿದ್ದೆವು. ರಜೆಯನ್ನು ಮಂಜೂರು ಮಾಡಿದ್ದರು. ಒಂದು ವೇಳೆ ಅವರು ಹೇಳಿದಂತೆ ನಾವು ರೊಮ್ಯಾಂಟಿಕ್ ಸಂಬಂಧದಲ್ಲಿ ಇದ್ದಿದ್ದಾದ್ರೆ ಮದುವೆ ಬಗ್ಗೆ ಘೋಷಿಸಿದ ಮೇಲೆ ಅವರಿಗೆ ಇದು ಗೊತ್ತಾಯ್ತಾ? ಎಂದು ಹೇಳಿದ್ದಾರೆ. ಶಾಲೆಯವರು ನಮ್ಮ ಘನತೆಗೆ ಧಕ್ಕೆ ತಂದಿದ್ದಾರೆಂದು ದಂಪತಿ ಆರೋಪಿಸಿದ್ದಾರೆ. ನಾವು ಮದುವೆಯಾಗಿದ್ದೀವಿ. ಯಾವುದೇ ಪಾಪ ಅಥವಾ ಅಪರಾಧ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

  • ಕುಡಿಯಲು ನೀರು ಕೇಳಿದ್ರೆ ಎಣ್ಣೆ ಕೊಟ್ರು ಮೇಷ್ಟ್ರು- ವಾಂತಿ ಮಾಡಿ ಸುಸ್ತಾದ ಹೈಸ್ಕೂಲ್ ಮಕ್ಕಳು

    ಕುಡಿಯಲು ನೀರು ಕೇಳಿದ್ರೆ ಎಣ್ಣೆ ಕೊಟ್ರು ಮೇಷ್ಟ್ರು- ವಾಂತಿ ಮಾಡಿ ಸುಸ್ತಾದ ಹೈಸ್ಕೂಲ್ ಮಕ್ಕಳು

    ತುಮಕೂರು: ಶಾಲಾ ಮಕ್ಕಳು ಕುಡಿಯಲು ನೀರು ಕೇಳಿದರೆ ಮದ್ಯವನ್ನ ನೀಡಿ, ಅವರಿಗೂ ಮದ್ಯಪಾನ ಮಾಡಿಸಿರುವ ಗಂಭೀರ ಆರೋಪವೊಂದು ಶಾಲಾ ಶಿಕ್ಷಕರ ಮೇಲೆ ಕೇಳಿಬಂದಿದೆ.

    ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೊಮ್ಮಲದೇವಿಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೂವರು ಶಿಕ್ಷಕರ ಮೇಲೆ ಈ ಆರೋಪ ಕೇಳಿ ಬಂದಿದೆ. ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಶೈಕ್ಷಣಿಕ ಪ್ರವಾಸ ಹೋಗಿದ್ದರು. ಇದೇ ವೇಳೆ ಪ್ರವಾಸ ಮುಗಿಸಿಕೊಂಡು ಭಾನುವಾರ ರಾತ್ರಿ ವಾಪಸ್ಸಾಗುವಾಗ ಮಕ್ಕಳು ಮನೋರಂಜನೆಗಾಗಿ ಬಸ್ ನಲ್ಲಿ ಡ್ಯಾನ್ಸ್ ಮಾಡಿದ್ದರು. ಈ ಸಂದರ್ಭದಲ್ಲಿ ದಣಿದಿದ್ದ 9 ಹಾಗೂ 10ನೇ ತರಗತಿಯ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಶಿಕ್ಷಕರ ಬಳಿ ಕುಡಿಯಲು ನೀರು ಕೇಳಿದ್ದಾರೆ. ಪ್ರವಾಸದುದ್ದಕ್ಕೂ ಮದ್ಯ ಸೇವಿಸಿ, ಮದ್ಯದೊಂದಿಗೆ ಬೆರಸಿದ್ದ ನೀರಿನ ಬಾಟಲಿಯನ್ನು ಬಸ್ ನಲ್ಲಿ ಇಟ್ಟುಕೊಂಡಿದ್ದ ಶಿಕ್ಷಕರು ಅದೇ ಬಾಟಲಿಯನ್ನು ನೀರು ಎಂದು ಮಕ್ಕಳಿಗೆ ಕೊಟ್ಟು ಕುಡಿಸಿದ್ದಾರೆ ಎಂದು ಶಾಲಾ ಮಕ್ಕಳು ಆರೋಪಿಸಿದ್ದಾರೆ.

    ಮುಖ್ಯಶಿಕ್ಷಕ ಸಚ್ಚಿದಾನಂದ್, ಸಹಶಿಕ್ಷಕರಾದ ಶೇಕ್ ಮುಜಾಮಿಲ್ ಹಾಗೂ ರಾಥೋಡ್ ಎನ್ನುವವರ ಮೇಲೆ ಈ ಆರೋಪ ಕೇಳಿಬಂದಿದೆ. ಧರ್ಮಸ್ಥಳ, ಹೊರನಾಡು ಹಾಗೂ ದಕ್ಷಿಣಕನ್ನಡದ ಕೆಲವೆಡೆ ಪ್ರವಾಸ ತೆರಳಿದ್ದು, ಪ್ರವಾಸದಿಂದ ವಾಪಸ್ಸಾಗುವ ಮಾರ್ಗ ಮಧ್ಯೆ ಹಾಸನದ ಬೇಲೂರು ಬಳಿ ಟೀ ಕುಡಿಯಲು ಬಸ್ ನಿಲ್ಲಿಸಿದ್ದ ವೇಳೆ ಮದ್ಯ ತುಂಬಿದ್ದ ನೀರಿನ ಬಾಯಲಿಯನ್ನು ಶಿಕ್ಷಕರು ಮಕ್ಕಳಿಗೆ ಕುಡಿಯಲು ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

    ಇದೇ ವೇಳೆ ಕೆಲ ವಿದ್ಯಾರ್ಥಿಗಳು ಜ್ಞಾನ ತಪ್ಪಿದ್ದು, ನಿದ್ರೆಗೆ ಜಾರಿದ್ದಾರೆ. ಇನ್ನೂ ಕೆಲವರು ವಾಂತಿ ಮಾಡಿಕೊಂಡು ಸುಸ್ತಾಗಿದ್ದಾರೆ. ಮಕ್ಕಳು ಇಷ್ಟೆಲ್ಲಾ ಹೇಳಿದರೂ ನಾವು ಯಾವ ತಪ್ಪು ಮಾಡಿಲ್ಲ. ಬೇಕಿದ್ದರೆ ದೇವರ ಮೇಲೆ ಪ್ರಮಾಣ ಮಾಡುತ್ತೀವಿ ಎಂದು ಶಿಕ್ಷಕ ಶೇಕ್ ಮುಜಾಮಿಲ್ ಪ್ರತಿಕ್ರಿಯೆ ನೀಡಿದ್ದಾರೆ. ವಿಷಯ ತಿಳಿದ ಪೋಷಕರು ಶಾಲೆಯ ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    +

  • ಟ್ಯೂಷನ್ ಶಿಕ್ಷಕಿಯಿಂದಲೇ ಅಪ್ರಾಪ್ತ ಬಾಲಕಿಯ ಅಪಹರಣ

    ಟ್ಯೂಷನ್ ಶಿಕ್ಷಕಿಯಿಂದಲೇ ಅಪ್ರಾಪ್ತ ಬಾಲಕಿಯ ಅಪಹರಣ

    ಮಂಡ್ಯ: ಟ್ಯೂಷನ್ ಮಾಡುತ್ತಿದ್ದ ಶಿಕ್ಷಕಿಯೇ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿರುವ ಘಟನೆ ಜಿಲ್ಲೆಯ ಕೀಲಾರ ಗ್ರಾಮದಲ್ಲಿ ನಡೆದಿದೆ.

    ಲಕ್ಷ್ಮಿ ಮತ್ತು ವಿಜಿ ದಂಪತಿಯ ಪುತ್ರಿಯಾದ 13 ವರ್ಷದ ಮಹಾಲಕ್ಷ್ಮಿ ಕಿಡ್ನಾಪ್ ಆಗಿರೋ ಬಾಲಕಿ. ಈ ದಂಪತಿ ಬೆಂಗಳೂರಿನಲ್ಲಿ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದು, ತಮ್ಮ ಮಗಳನ್ನು ಅಜ್ಜಿ ಮನೆಯಲ್ಲಿ ಬಿಟ್ಟು ಓದಿಸುತ್ತಿದ್ದರು. ಇದೀಗ ಟ್ಯೂಷನ್ ಮಾಡುತ್ತಿದ್ದ ಪೂಜಾ ಎಂಬ ಶಿಕ್ಷಕಿಯೇ ಬಾಲಕಿಯನ್ನ ಅಪಹರಿಸಿದ್ದಾಳೆ.

    20 ದಿನಗಳ ಹಿಂದೆ ಕೀಲಾರ ಗ್ರಾಮಕ್ಕೆ ಆಗಮಿಸಿದ್ದ ಪೂಜಾ, ತನ್ನ ಗಂಡ ಯೋಗೇಶ್ ಮತ್ತು ಸುನೀಲ್ ಎಂಬ ಯುವಕನೊಂದಿಗೆ ಬಾಡಿಗೆ ಮನೆ ಪಡೆದು ವಾಸವಿದ್ದಳು. ಮಹಾಲಕ್ಷ್ಮಿ ಎಂಟನೇ ತರಗತಿ ಓದುತ್ತಿದ್ದು, ಇತ್ತೀಚೆಗೆ ಗ್ರಾಮಕ್ಕೆ ಬಂದಿದ್ದ ಪೂಜಾ ಬಳಿ ಟ್ಯೂಷನ್‍ಗೆ ಹೋಗುತ್ತಿದ್ದಳು. ಕಳೆದ ನವೆಂಬರ್ 19 ರಂದು ಮಹಾಲಕ್ಷ್ಮಿಯನ್ನು ತನ್ನ ಜೊತೆ ಕರೆದುಕೊಂಡು ಹೋದ ಪೂಜಾ ನಾಪತ್ತೆಯಾಗಿದ್ದಾಳೆ.

    ಪೂಜಾಳ ಜೊತೆ ಆಕೆಯ ಗಂಡ ಯೋಗೇಶ್ ಮತ್ತು ಸುನೀಲ್‍ಕುಮಾರ್ ಕೂಡ ನಾಪತ್ತೆಯಾಗಿದ್ದಾರೆ. ಇದರಿಂದ ಆತಂಕಗೊಂಡ ಬಾಲಕಿಯ ಪೋಷಕರು ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹೇಗಾದರೂ ಮಾಡಿ ನಮ್ಮ ಮಗಳನ್ನು ಹುಡುಕಿಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

  • ಕೈಯಲ್ಲಿ ರಕ್ತ ಬರುವಂತೆ ವಿದ್ಯಾರ್ಥಿನಿಗೆ ಟೀಚರ್ ಥಳಿತ

    ಕೈಯಲ್ಲಿ ರಕ್ತ ಬರುವಂತೆ ವಿದ್ಯಾರ್ಥಿನಿಗೆ ಟೀಚರ್ ಥಳಿತ

    ಮೈಸೂರು: ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಾಲಾ ಶಿಕ್ಷಕಿ ವಿದ್ಯಾರ್ಥಿನಿಗೆ ತೀವ್ರವಾಗಿ ಥಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ಎನ್‍ಆರ್ ಮೊಹಲ್ಲದ ಸೆಂಟ್ ಆನ್ಸ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಬಾಲಕಿಗೆ ಶಿಕ್ಷಕಿ ಜವೀರಿಯಾ ಥಳಿಸಿದ್ದಾರೆ.

    ಕೈ ಯಲ್ಲಿ ರಕ್ತ ಬರುವ ರೀತಿಯಲ್ಲಿ ಶಿಕ್ಷಕಿ ಥಳಿಸಿರುವ ಕಾರಣ ಗಾಯಗೊಂಡ ವಿದ್ಯಾರ್ಥಿನಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಥಳಿತವನ್ನು ಪ್ರಶ್ನಿಸಿದ್ದ ಪೋಷಕರಿಗೆ ನಿಮ್ಮ ಮಗಳೆ ಬಿದ್ದಿದ್ದು ಎಂಬು ಸಬೂಬು ನೀಡಿದ್ದಾರೆ. ಹೀಗಾಗಿ ಬಾಲಕಿ ತಂದೆ ಅಸ್ಗರ್ ಎನ್ ಆರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ಪಾಠ ಮಾಡೋದು ಬಿಟ್ಟು ಪೋಲಿ ಕೆಲ್ಸ – ವಿದ್ಯಾರ್ಥಿಗಳಿಗೆ ಬ್ಲೂ ಫಿಲ್ಮ್ ತೋರಿಸಿದ ಶಿಕ್ಷಕನಿಗೆ ಬಿತ್ತು ಗೂಸಾ

    ಪಾಠ ಮಾಡೋದು ಬಿಟ್ಟು ಪೋಲಿ ಕೆಲ್ಸ – ವಿದ್ಯಾರ್ಥಿಗಳಿಗೆ ಬ್ಲೂ ಫಿಲ್ಮ್ ತೋರಿಸಿದ ಶಿಕ್ಷಕನಿಗೆ ಬಿತ್ತು ಗೂಸಾ

    ತುಮಕೂರು: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅಶ್ಲೀಲ ದೃಶ್ಯಗಳನ್ನು ತೋರಿಸಿ ವಿಕೃತಿ ಮೆರೆದ ಕಾಮುಕ ಶಿಕ್ಷಕನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಇಲ್ಲಿನ ಕುಣಿಗಲ್ ತಾಲೂಕಿನ ವಡ್ಡರಕುಪ್ಪೆ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಮುಕ ಶಿಕ್ಷಕನಿಗೆ ಗ್ರಾಮಸ್ಥರು ಪಾಠ ಕಲಿಸಿದ್ದಾರೆ. ಶಿಕ್ಷಕ ದಯಾನಂದ್ ಮಕ್ಕಳಿಗೆ ತನ್ನ ಮೊಬೈಲ್ ನಲ್ಲಿದ್ದ ಅಶ್ಲೀಲ ದೃಶ್ಯಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ವಿಚಾರವನ್ನು ಮಕ್ಕಳು ಶಾಲೆಯ ಇತರೆ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ತಮ್ಮ ಪೋಷಕರಿಗೂ ಮೆಷ್ಟ್ರು ದಯಾನಂದ್ ನ ಕಿರುಕುಳದ ಬಗ್ಗೆ ದೂರು ಹೇಳಿದ್ದಾರೆ.

    ಇಂದು ಬೆಳಗ್ಗೆ ಶಾಲೆಗೆ ಆಗಮಿಸಿದ ಪೋಷಕರು ಶಿಕ್ಷಕ ದಯಾನಂದ್ ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡು ಚೆನ್ನಾಗಿ ಬುದ್ಧಿ ಹೇಳಿದ್ರು. ಇಷ್ಟಾದ್ರೂ ತನ್ನ ತಪ್ಪು ಒಪ್ಪಿಕೊಳ್ಳದೆ ಭಂಡಾಟ ತೋರಿದ ಶಿಕ್ಷಕನಿಗೆ ಒಂದೆರಡು ಗೂಸಾ ಕೊಟ್ಟು ಕುಣಿಗಲ್ ಪೊಲೀಸರಿಗೆ ಒಪ್ಪಿಸಿದರು.

    ಇದನ್ನೂ ಓದಿ: ವಿದ್ಯಾರ್ಥಿ ಜೊತೆ ಕ್ಯಾಂಡಲ್ ಲೈಟ್ ಸೆಕ್ಸ್ ಗೆ ಸಿದ್ಧತೆ ನಡೆಸ್ತಿದ್ದ ಶಿಕ್ಷಕಿ ಅರೆಸ್ಟ್

  • ವಿದ್ಯಾರ್ಥಿ ಜೊತೆ ಕ್ಯಾಂಡಲ್ ಲೈಟ್ ಸೆಕ್ಸ್ ಗೆ ಸಿದ್ಧತೆ ನಡೆಸ್ತಿದ್ದ ಶಿಕ್ಷಕಿ ಅರೆಸ್ಟ್

    ವಿದ್ಯಾರ್ಥಿ ಜೊತೆ ಕ್ಯಾಂಡಲ್ ಲೈಟ್ ಸೆಕ್ಸ್ ಗೆ ಸಿದ್ಧತೆ ನಡೆಸ್ತಿದ್ದ ಶಿಕ್ಷಕಿ ಅರೆಸ್ಟ್

    ವಾಷಿಂಗ್ಟನ್: ವಿದ್ಯಾರ್ಥಿಯ ಜೊತೆ `ಕ್ಯಾಂಡಲ್ ಲೈಟ್ ಸೆಕ್ಸ್’ ನಡೆಸಲು ಸಿದ್ಧತೆ ನಡೆಸುತ್ತಿದ್ದ ಅಮೆರಿಕದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

    ವಿದ್ಯಾರ್ಥಿಯ ಪೋಷಕರು ಮಗನ ಫೋನಿನಲ್ಲಿ ಶಿಕ್ಷಕಿ ಕಳುಹಿಸಿರುವ ಕೆಲವು ನಗ್ನ ಫೋಟೋ ಮತ್ತು ಮೆಸೇಜ್ ಗಳನ್ನು ನೋಡಿದ್ದಾರೆ. ನಂತರ ಪೊಲೀಸರಿಗೆ ಶಿಕ್ಷಕಿಯ ವಿರುದ್ಧ ದೂರು ನೀಡಿದ್ದಾರೆ.

    ಪೋಷಕರ ದೂರಿನ ಆಧಾರದ ಮೇರೆಗೆ ಬುಧವಾರ ಒಕ್ಲಹೋಮಾದಲ್ಲಿ ಶಿಕ್ಷಕಿಯ ಮನೆಗೆ ತೆರಳಿದ್ದಾಗ ಆಕೆ ಮನೆಯಲ್ಲಿ ಲೈಟ್‍ಗಳನ್ನು ಆಫ್ ಮಾಡಿ ಕ್ಯಾಂಡಲ್ ಲೈಟ್ ಹಚ್ಚಿಕೊಂಡು ನೆಲದ ಮೇಲೆ ಕುಳಿತಿದ್ದಳು. ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ನಾನು 22 ವರ್ಷದ ಶಿಕ್ಷಕಿ ನಾನು ವಿದ್ಯಾರ್ಥಿ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾಳೆ. ವಿದ್ಯಾರ್ಥಿಯ ಪೋಷಕರು ಮಗನ ಫೋನ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ನಡೆಸುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ.

    ಈ ಘಟನೆ ನಿಜಕ್ಕೂ ಸಾರ್ವಜನಿಕರ ವಿಶ್ವಾಸದ ಉಲ್ಲಂಘನೆಯಾಗಿದೆ ಎಂದು ಕೆನಾಡಿಯನ್ ಕೌಂಟಿ ಶೆರಿಫ್ ಕ್ರಿಸ್ ವೆಸ್ಟ್ ಅವರು ಫೇಸ್‍ಬುಕ್‍ನಲ್ಲಿ ಫೋಸ್ಟ್ ಮಾಡಿ ತಿಳಿಸಿದ್ದಾರೆ. ಶಾಲಾ ಶಿಕ್ಷಕರು ನಮ್ಮ ಮಕ್ಕಳನ್ನು ರಕ್ಷಿಸಬೇಕು ಹಾಗೂ ಶಿಕ್ಷಣ ನೀಡಬೇಕು. ಅದು ಬಿಟ್ಟು ಈ ರೀತಿಯ ಕಾನೂನುಬಾಹೀರವಾಗಿ ಲೈಂಗಿಕ ಸಂಪರ್ಕವನ್ನು ಹೊಂದುವುದಲ್ಲ ಎಂದು ಕ್ರಿಸ್ ವೆಸ್ಟ್ ತಿಳಿಸಿದ್ದಾರೆ.

     

  • 5 ವರ್ಷದ ಬಾಲಕನಿಗೆ ಬಾಸುಂಡೆ ಬರುವಂತೆ ಹೊಡೆದ ಟೀಚರ್ ಬಂಧನ

    5 ವರ್ಷದ ಬಾಲಕನಿಗೆ ಬಾಸುಂಡೆ ಬರುವಂತೆ ಹೊಡೆದ ಟೀಚರ್ ಬಂಧನ

    ಹೈದರಾಬಾದ್: ಇಲ್ಲಿನ ಟರ್ನಾಕಾದಲ್ಲಿರೋ ಸೇಕ್ರೆಡ್ ಹಾರ್ಟ್ ಶಾಲೆಯ 5 ವರ್ಷದ ಬಾಲಕನಿಗೆ ಚಡಿ ಏಟು ಕೊಟ್ಟ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಯುಕೆಜಿ ಓದುತ್ತಿದ್ದ ಮೊಹಮ್ಮದ್ ಖಾಜಾ ಲತೀಫ್ ಟೀಚರ್ ಕೈಯಿಂದ ಹೊಡೆತ ತಿಂದ ಬಾಲಕ. ಶಿಕ್ಷಕಿಯನ್ನು ಕುಮುಧಿನಿ ಎಂದು ಗುರುತಿಸಲಾಗಿದ್ದು, ಸದ್ಯ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಶಾಲೆಯಲ್ಲಿ ಟೀಚರ್ ಕೈಯಿಂದ ಹೊಡೆತ ತಿಂದ ಪರಿಣಾಮ ಬಾಲಕನ ಬೆನ್ನಲ್ಲಿ ಗಾಯಗಳಾಗಿದ್ದು, ಮನೆಗೆ ಬಂದು ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಮಗನ ದೂರನ್ನು ಆಲಿಸಿದ ಪೋಷಕರು ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಇನ್ಸ್ ಪೆಕ್ಟರ್ ವಿ.ಅಶೋಕ್ ರೆಡ್ಡಿ ತಿಳಿಸಿದ್ದಾರೆ.

    ಬೆಳಗ್ಗೆ ತರಗತಿ ನಡೆಯುತ್ತಿದ್ದ ವೇಳೆ ಬಾಲಕ ಲತೀಫ್ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸಹಪಾಠಿ ಜೊತೆ ಗಲಾಟೆ ಮಾಡಿದ್ದಾನೆ. ಅಲ್ಲದೆ ಆತನಿಗೆ ಕಚ್ಚಿದ್ದಾನೆ. ಹೀಗಾಗಿ ಶಿಕ್ಷಕಿ ಕುಮುಧಿನಿ ಕೋಲಿನಿಂದ ಬಾಲಕನಿಗೆ ಹೊಡೆದಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ.

    ಆದ್ರೆ ಬಾಲಕನ ವಿರುದ್ಧ ಶಿಕ್ಷಕಿಯ ಕ್ರೂರ ವರ್ತನೆಗೆ ಶಿಕ್ಷೆಯಾಗಬೇಕು ಎಂದು ಮಕ್ಕಳ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರೋ ಎನ್‍ ಜಿಒವೊಂದು ಪಟ್ಟು ಹಿಡಿದಿದೆ.

    ಸದ್ಯ ಬಾಲಕನ ತಾಯಿ ನೀಡಿದ ದೂರಿನನ್ವಯ ಐಪಿಸಿಯ ಸೂಕ್ತ ಸೆಕ್ಷನ್‍ಗಳಡಿ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಶಿಕ್ಷಕಿ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

  • ತರಗತಿಯಲ್ಲೇ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಶಿಕ್ಷಕಿಯಿಂದ ಹಣಕ್ಕಾಗಿ ಹುಡುಕಾಟ!

    ತರಗತಿಯಲ್ಲೇ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಶಿಕ್ಷಕಿಯಿಂದ ಹಣಕ್ಕಾಗಿ ಹುಡುಕಾಟ!

    ಭೋಪಾಲ್: ಹತ್ತನೆ ತರಗತಿಯ ವಿದ್ಯಾರ್ಥಿಯೊಬ್ಬಳು ತರಗತಿಯಲ್ಲಿ ಕಳೆದುಕೊಂಡಿದ್ದ 70 ರೂ ಹಣವನ್ನು ಪರಿಶೀಲಿಸಲು ಶಾಲೆಯ ಶಿಕ್ಷಕಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಘಟನೆ ಮಧ್ಯ ಪ್ರದೇಶದ ದಮೋಹ ಶಾಲೆಯಲ್ಲಿ ನಡೆದಿದೆ.

    ತರಗತಿಯ ವಿದ್ಯಾರ್ಥಿನಿಯೊಬ್ಬಳು 70 ರೂ. ಕಳೆದು ಕೊಂಡಿರುವ ಕುರಿತು ಶಿಕ್ಷಕಿಗೆ ದೂರು ನೀಡಿದ್ದು, ಇದರಿಂದ ಕೋಪಗೊಂಡ ಶಿಕ್ಷಕಿ ದೂರು ನೀಡಿದ ವಿದ್ಯಾರ್ಥಿ ಪಕ್ಕ ಕುಳಿತಿದ್ದ ಮತ್ತೊಬ್ಬ ವಿದ್ಯಾರ್ಥಿನಿಯ ಬಳಿ ಹಣ ಇದೆ ಎಂದು ತಿಳಿದು ಆಕೆಯನ್ನು ತರಗತಿಯಲ್ಲೇ ವಿವಸ್ತ್ರಗೊಳಿಸಿದ್ದಾರೆ.

    ಶಾಲೆಯ ಅವಧಿ ಮುಕ್ತಾಯದ ನಂತರ ವಿದ್ಯಾರ್ಥಿನಿ ಶಿಕ್ಷಕಿ ಮಾಡಿದ ಕೃತ್ಯದ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕಿಯ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯೇ ನೀಡಿರುವ ಜಿಲ್ಲಾ ಶಿಕ್ಷಣ ಅಧಿಕಾರಿ ಪಿ.ಪಿ ಸಿಂಗ್, ಘಟನೆ ಶುಕ್ರವಾರ ನಡೆದಿರುವ ಕುರಿತು ಮಾಹಿತಿ ಲಭಿಸಿದ್ದು, ಈ ಕುರಿತು ಶಿಕ್ಷಕಿ ಜ್ಯೋತಿ ಗುಪ್ತಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಘಟನೆ ಕುರಿತು ತನಿಕೆ ಕೈಗೊಂಡ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಘಟನೆ ಕುರಿತು ಸ್ಪಷ್ಟನೆಯನ್ನು ನೀಡಿರುವ ಶಿಕ್ಷಕಿ ಜ್ಯೋತಿ ಗುಪ್ತಾ, ನಾನು 17 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ರೀತಿಯ ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಬಳಿ ಪರಿಶೀಲನೆ ನಡೆಸಿದ್ದು ನಿಜ, ಆದರೆ ಈ ಸಂದರ್ಭದಲ್ಲಿ ತರಗತಿಯಲ್ಲಿ ಇತರೇ ವಿದ್ಯಾರ್ಥಿಗಳು ಇರಲಿಲ್ಲ ಎಂದು ಹೇಳಿದ್ದಾರೆ.

     

  • ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಸಾರ್ವಜನಿಕರಿಂದಲೇ ಧರ್ಮದೇಟು

    ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಸಾರ್ವಜನಿಕರಿಂದಲೇ ಧರ್ಮದೇಟು

    ಧಾರವಾಡ: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರೇ ಧರ್ಮದೇಟು ನೀಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಗಣಿತ ಶಿಕ್ಷಕ ಗಂಡು ಮಕ್ಕಳನ್ನು ತರಗತಿಯಿಂದ ಹೊರಗೆ ಕಳುಹಿಸಿ, ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಲ್ಲದೇ ತನ್ನ ಕೃತ್ಯವನ್ನು ಪೋಷಕರಿಗೆ ತಿಳಿಸಿದರೆ ಅವರನ್ನು ಕೊಲೆ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.

    ಶಿಕ್ಷಕ ವಿದ್ಯಾರ್ಥಿನಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಕೃತ್ಯದ ಬಗ್ಗೆ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದರೂ ಪ್ರಯೋಜನ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಂಗೆಟ್ಟ ಪೋಷಕರು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದರೆ ಆಡಳಿತ ಮಂಡಳಿ ಅಧ್ಯಕ್ಷರು ಗಂಭೀರವಾಗಿ ಪರಿಗಣಿಸದೇ ಶಿಕ್ಷಕನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಇದರಿಂದ ರೋಸಿ ಹೋದ ಸಾರ್ವಜನಿಕರು ಇದ್ದಕ್ಕಿದ್ದಂತೆ ಶಾಲೆಗೆ ಬಂದು ಶಿಕ್ಷಕನಿಗೆ ಗೂಸಾ ಕೊಟ್ಟಿದ್ದಾರೆ.

    ಈ ವೇಳೆ ಶಿಕ್ಷಕ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ತನ್ನ ತಪ್ಪಿನ ಕುರಿತು ಶಾಲಾ ಆಡಳಿತ ಮಂಡಳಿಗೆ ಲಿಖಿತ ರೂಪದಲ್ಲಿ ಪತ್ರ ಬರೆದುಕೊಟ್ಟಿದ್ದಾನೆ. ಶಾಲಾ ಆಡಳಿತ ಮಂಡಳಿಯು ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದೆ.

  • ಕಡಿಮೆ ಅಂಕ ಪಡೆದಿದ್ದಕ್ಕೆ ಬೈದರೆಂದು ಶಿಕ್ಷಕರ ಮೇಲೆಯೇ ಹಲ್ಲೆಗೈದ ವಿದ್ಯಾರ್ಥಿ!

    ಕಡಿಮೆ ಅಂಕ ಪಡೆದಿದ್ದಕ್ಕೆ ಬೈದರೆಂದು ಶಿಕ್ಷಕರ ಮೇಲೆಯೇ ಹಲ್ಲೆಗೈದ ವಿದ್ಯಾರ್ಥಿ!

    ಚಂಡೀಗಢ: 12ನೇ ತರಗತಿ ವಿದ್ಯಾರ್ಥಿಯೊಬ್ಬ ಗಣಿತ ಶಿಕ್ಷಕರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಹರಿಯಾಣ ರಾಜ್ಯದ ಝಜ್ಜರ್ ಜಿಲ್ಲೆಯ ಬಹದ್ದೂರ್‍ಗಢ ಪಟ್ಟಣದ ಖಾಸಗಿ ಶಾಲೆಯಲ್ಲಿ ನಡೆದಿದೆ.

    ಹಿಮಾಂಶು ಗಾರ್ಗ್ ಎಂಬಾತನೇ ಶಿಕ್ಷಕ ರವೀಂದ್ರ ಅವರ ಮೇಲೆ ಹಲ್ಲೆಗೈದ ವಿದ್ಯಾರ್ಥಿ. ಬಹದ್ದೂರ್‍ಗಢ ಪಟ್ಟಣದ ಹರ್‍ದಯಾಳ್ ಪಬ್ಲಿಕ್ ಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ. ಹಿಮಾಂಶು ಗಣಿತದಲ್ಲಿ ಕಡಿಮೆ ಅಂಕ ಪಡೆದಿದ್ದನು. ಇದನ್ನು ಶಿಕ್ಷಕ ರವೀಂದ್ರ ಪ್ರಶ್ನಿಸಿದ್ದಾರೆ. ಈ ವೇಳೆ ಸಿಟ್ಟುಗೊಂಡ ವಿದ್ಯಾರ್ಥಿ ಹಿಮಾಂಶು, ರವೀಂದ್ರ ಅವರ ಮೇಲೆ ಹರಿತವಾದ ವಸ್ತುವಿನಿಂದ 10ಕ್ಕೂ ಹೆಚ್ಚು ಬಾರಿ ಕುತ್ತಿಗೆ, ತಲೆ ಮತ್ತು ಮುಖದ ಮೇಲೆಲ್ಲಾ ಹಲ್ಲೆ ಮಾಡಿದ್ದಾನೆ. ಹಿಮಾಂಶು ಶಾಲಾ ಕೊಠಡಿಯಲ್ಲಿಯೇ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದು, ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ವಿಡಿಯೋದಲ್ಲಿ ಏನಿದೆ?
    ಕ್ಲಾಸ್ ರೂಮ್‍ನಲ್ಲಿ ಮುಂದಿನ ಬೆಂಚ್ ನಲ್ಲಿ ಗಣಿತ ಶಿಕ್ಷಕ ರವೀಂದ್ರ ಪೇಪರ್ ಗಳನ್ನು ಚೆಕ್ ಮಾಡುತ್ತಿರುತ್ತಾರೆ. ಹಿಂದುಗಡೆ ಕುಳಿತಿರುವ ಹಿಮಾಂಶು ತನ್ನ ಬ್ಯಾಗ್ ನಿಂದ ಹರಿತವಾದ ವಸ್ತುವಿನಿಂದ ಶಿಕ್ಷಕರ ಮೇಲೆ ಹಲ್ಲೆ ನಡೆಸುತ್ತಾನೆ. ವಿದ್ಯಾರ್ಥಿ ಹಲ್ಲೆ ಮಾಡುತ್ತಾ ಶಾಲೆಯ ಕಾರಿಡರ್ ವರೆಗೂ ಬಂದಿದ್ದಾನೆ. ಕೂಡಲೇ ಇನ್ನೊಬ್ಬ ಶಿಕ್ಷಕರು ಹಿಮಾಂಶುನನ್ನು ತಡೆದಿದ್ದಾರೆ.

    ಕ್ಲಾಸ್ ರೂಮ್‍ನಲ್ಲಿ ಗಣಿತ ವಿಷಯದಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಕ್ಕೆ, ಶಿಕ್ಷಕ ರವೀಂದ್ರ ಎಲ್ಲರ ಮುಂದೆಯೇ ನನ್ನನ್ನು ಅವಮಾನಿಸಿದ್ದರು. ಈ ವೇಳೆ ಶಿಕ್ಷಕರು ನನ್ನ ಪೋಷಕರಿಗೆ ಈ ವಿಷಯವನ್ನು ತಿಳಿಸುವುದಾಗಿ ಅಂತಾ ಹೇಳಿದ್ದರು. ಹೀಗಾಗಿ ಅವರಿಗೆ ಬುದ್ದಿ ಕಲಿಸಲು ಅವರ ಮೇಲೆ ಹಲ್ಲೆ ಮಾಡಿದೆ ಎಂದು ಹಿಮಾಂಶು ಹೇಳಿದ್ದಾನೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪಾಂಶುಪಾಲರು, ಈ ಬಗ್ಗೆ ಪೇರೆಂಟ್ಸ್ ಮೀಟಿಂಗ್ ಕರೆಯಲಾಗಿದ್ದು, ವಿದ್ಯಾರ್ಥಿಗಳ ಈ ತರಹದ ಭಯಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

    ಹಲ್ಲೆಗೈದ ಹಿಮಾಂಶುನನ್ನು ಮತ್ತು ಆತನಿಗೆ ಹರಿತವಾದ ವಸ್ತುವನ್ನು ನೀಡಿದ್ದ ಆತನ ಗೆಳಯನನ್ನು ಬಂಧಿಸಲಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕ ರವೀಂದ್ರರನ್ನು ಶಾಲಾ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ರವೀಂದ್ರರ ತಲೆಯ ಭಾಗಕ್ಕೆ ತೀವ್ರಪೆಟ್ಟು ಬಿದ್ದಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    https://www.youtube.com/watch?time_continue=27&v=b6BZd2FLq08