Tag: teacher

  • ಕಲಿಕೆಗೆ ವಯಸ್ಸಿನ ಹಂಗಿಲ್ಲ – 91ರ ಇಳಿ ವಯಸ್ಸಿನಲ್ಲಿ ಬರೆದ್ರು ಪಿಎಚ್‍ಡಿ ಎಂಟ್ರೆನ್ಸ್ ಎಕ್ಸಾಂ

    ಕಲಿಕೆಗೆ ವಯಸ್ಸಿನ ಹಂಗಿಲ್ಲ – 91ರ ಇಳಿ ವಯಸ್ಸಿನಲ್ಲಿ ಬರೆದ್ರು ಪಿಎಚ್‍ಡಿ ಎಂಟ್ರೆನ್ಸ್ ಎಕ್ಸಾಂ

    ಕೊಪ್ಪಳ: ಕಲಿಕೆಗೆ ವಯಸ್ಸಿನ ಹಂಗಿಲ್ಲ. ಹೀಗಾಗಿಯೇ ಅಕ್ಷರದ ಮೇಲಿನ ಪ್ರೀತಿಯುಳ್ಳವರು ನಿರಂತರವಾಗಿ ವಿದ್ಯಾರ್ಥಿಗಳಾಗಿರುತ್ತಾರೆ ಎಂಬುದಕ್ಕೆ ಇಲ್ಲೊಬ್ಬರು ವಯೋವೃದ್ಧ ನಿವೃತ್ತ ಶಿಕ್ಷಕರು ಉದಾಹರಣೆಯಾಗುತ್ತಾರೆ.

    91 ರ ಇಳಿ ವಯಸ್ಸಿನಲ್ಲೂ ಅವರು ಪಿಎಚ್‍ಡಿ ಪದವಿಗೆ ಪ್ರವೇಶಕ್ಕೆ ಅರ್ಹತಾ ಪರೀಕ್ಷೆ ಬರೆದು ಬಂದು ಯುವಸಮೂಹ ನಾಚುವಂತೆ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಶರಣಬಸವರಾಜ ಬಿಸರಹಳ್ಳಿ ಅವರು ತಮ್ಮ 91 ನೇ ವಯಸ್ಸಿನಲ್ಲಿಯೂ ಹಂಪಿ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಪದವಿಗಾಗಿ ಅರ್ಜಿ ಸಲ್ಲಿಸಿದ್ದರು.

    ಇದಕ್ಕೂ ಮುನ್ನ ಧಾರವಾಡದ ಕೆಯುಡಿಯಲ್ಲಿ ಎಂಎ ಪದವಿ ಪಡೆದು ಪಿಎಚ್‍ಡಿಗೆ ಅರ್ಜಿ ಸಲ್ಲಿಸಿದ್ದರು. ಪಿಎಚ್‍ಡಿ ಪದವಿ ಪ್ರವೇಶಕ್ಕೆ ಬೇಕಾದ ಶೇಕಡಾ 55 ರಷ್ಟು ಅಂಕ ಬಂದಿರಲಿಲ್ಲ. ಮತ್ತೆ ಕಳೆದ ವರ್ಷ ಹಂಪಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ 60 ರಷ್ಟು ಅಂಕ ಗಳಿಸಿ ಈ ಬಾರಿ ಪಿಎಚ್‍ಡಿ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದರು.

    ಹಂಪಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ವಚನ ಸಾಹಿತ್ಯಕ್ಕೆ ಪಿಎಚ್‍ಡಿ ಎಂಟ್ರೆನ್ಸ್ ಎಕ್ಸಾಂ ಬರೆದಿದ್ದಾರೆ. ಪರೀಕ್ಷೆಯ ಫಲಿತಾಂಶ ಬಂದರೆ ಮುಂದೆ ಪಿಎಚ್‍ಡಿ ಮಾಡಲು ಶರಣಬಸವರಾಜ ಬಿಸರಹಳ್ಳಿ ಅವರು ಮುಂದಾಗಿದ್ದಾರೆ. ಬಿಸರಹಳ್ಳಿ ಅವರು 1991-92 ನೇ ಸಾಲಿನಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತವಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿಕ್ಷಕಿಯಾಗಿ ಸ್ಲಂ ಮಕ್ಕಳಿಗೆ ವಿದ್ಯೆ ಕಲಿಸಬೇಕೆಂಬ ಕನಸು ಕಂಡಿರುವ ಯುವತಿಗೆ ಬೇಕಿದೆ ಸಹಾಯ

    ಶಿಕ್ಷಕಿಯಾಗಿ ಸ್ಲಂ ಮಕ್ಕಳಿಗೆ ವಿದ್ಯೆ ಕಲಿಸಬೇಕೆಂಬ ಕನಸು ಕಂಡಿರುವ ಯುವತಿಗೆ ಬೇಕಿದೆ ಸಹಾಯ

    ಬೆಳಗಾವಿ: ಕೊಳಚೆ ಪ್ರದೇಶದಲ್ಲಿ ವಾಸಮಾಡುತ್ತಿದ್ದರು, ಉನ್ನತ ವ್ಯಾಸಂಗ ಪಡೆದು ತನ್ನಂತೆ ಸ್ಲಂನಲ್ಲಿ ವಾಸಿಸುವ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಬೆಳಗಾವಿಯ ವಿದ್ಯಾರ್ಥಿನಿ ಕನಸಿಗೆ ಬಡತನ ಅಡ್ಡಿಯಾಗಿದೆ.

    ಮನೆಯಲ್ಲಿ ಬಡತನವಿದ್ದರೂ ಅಂಜಲಿ ಕೊಂಡುರ್ ತನ್ನ ಕಷ್ಟಗಳನ್ನ ಬದಿಗಿರಿಸಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 78.88% ಹಾಗೂ ಪಿಯುಸಿ ಕಲಾ ವಿಭಾಗದಲ್ಲಿ ಶೇಕಡಾ 82.66% ಅಂಕ ಪಡೆದು ಇಡೀ ಕಾಲೇಜಿಗೆ ಫಸ್ಟ್ ರ‍್ಯಾಂಕ್‌ ಪಡೆದು ಕೀರ್ತಿ ತಂದುಕೊಟ್ಟಿದ್ದಾಳೆ.

    ಬೆಳಗಾವಿಯ ಕಣಬರ್ಗಿಯ ಸ್ಲಂನ ಸಣ್ಣ ಗುಡಿಸಲು ಮನೆಯಲ್ಲಿ ಇಬ್ಬರು ಸಹೋದರರು ಮತ್ತು ತಾಯಿ ಜೊತೆ ಅಂಜಲಿ ವಾಸವಿದ್ದಾಳೆ. ಎಲ್ಲರಂತೆ ಶಾಲೆಗೆ ತೆರಳಿ ಉತ್ತಮ ಶಿಕ್ಷಣ ಪಡೆಯಬೇಕೆಂಬ ಮಗಳ ಕನಸಿಗೆ ತಾಯಿ ರೇಣುಕಾ ಬೆಂಬಲ ನೀಡಿದ ಪರಿಣಾಮ ಶಿಕ್ಷಣ ಈಗ ಕಷ್ಟದಲ್ಲಿ ಸಾಗಿಕೊಂಡು ಬಂದಿದೆ.

    10 ವರ್ಷಗಳ ಹಿಂದೆ ತಂದೆ ಮಹೇಶ್ ಕುಡಿತದ ಚಟಕ್ಕೆ ಬಿದ್ದು ತೀರಿಹೋಗಿದ್ದು, ಇಡೀ ಸಂಸಾರದ ಜವಾಬ್ದಾರಿಯನ್ನು ತಾಯಿ ರೇಣುಕಾ ನೋಡಿಕೊಳ್ಳುತ್ತಿದ್ದಾರೆ. ಊರೂರು ತೆರಳಿ ವಾಲೆ, ಬಳೆ, ಪುಸ್ತಕ ಮಾರಾಟ ಮಾಡಿ ಬಂದ ಹಣದಿಂದ ಮೂರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.

    ಸ್ಲಂನಲ್ಲಿ ಯಾರೂ ಓದದೇ ಇದ್ದರೂ ಛಲದಿಂದ ಓದಿ ಸಾಧಿಸಿ ತೋರಿಸಿರುವ ಪ್ರತಿಭೆಯಾಗಿರುವ ಅಂಜಲಿ ಮುಂದೆ ಓದಿ ಟೀಚರ್ ಆಗಿ ಸ್ಲಂನ ಮಕ್ಕಳಿಗೆ ವಿದ್ಯೆ ಕಲಿಸಬೇಕೆಂಬ ಕನಸು ಕಂಡಿದ್ದಾಳೆ. ಆದರೆ ಉನ್ನತ ವ್ಯಾಸಂಗ ಪಡೆಯಲು ಬಡತನ ಅಡ್ಡಿಯಾಗಿದೆ. ಮೂರು ಮಕ್ಕಳನ್ನು ಕಷ್ಟ ಪಟ್ಟು ಓದಿಸುತ್ತಿರುವ ತಾಯಿ, ಅಂಜಲಿಯ ಮುಂದಿನ ವಿದ್ಯಾಭ್ಯಾಸಕ್ಕೆ ಹಣ ಒದಗಿಸಲಾಗದೇ ಓದನ್ನು ನಿಲ್ಲಿಸಿದ್ದಾಳೆ.

    ಅಂಜಲಿಗೆ ಶಿಕ್ಷಕಿಯಾಗಬೇಕೆಂಬ ಕನಸು ಇದ್ದು, ಯಾರಾದರು ದಾನಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ತಾಯಿ ರೇಣುಕಾ ಕೇಳಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=N7Wztkxi_tU

  • ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ-ಸಂಬಳದ ಅರ್ಧ ಹಣ ಶಾಲೆಗೆ ಮೀಸಲಿಟ್ಟ ಶಿಕ್ಷಕ

    ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ-ಸಂಬಳದ ಅರ್ಧ ಹಣ ಶಾಲೆಗೆ ಮೀಸಲಿಟ್ಟ ಶಿಕ್ಷಕ

    ಗದಗ: ಅನೇಕ ಶಿಕ್ಷಕರು ಬಿಲ್ ಮತ್ತು ಬೆಲ್‍ಗೆ ಸೀಮಿತರಾಗಿದ್ದಾರೆ ಅನ್ನೋ ಆರೋಪ ಇದೆ. ಆದರೆ ಗದಗನ ನರೇಗಲ್ ಶಾಲೆಯ ಶಿಕ್ಷಕ ಡಿ.ಎಚ್.ಪರಂಗಿ ಅವರು ತಮ್ಮ ಆದಾಯದ ಅರ್ಧದಷ್ಟು ಹಣವನ್ನು ಬಡಮಕ್ಕಳ ಶಿಕ್ಷಣ, ಪರಿಸರ, ಸಾಮಾಜಿಕ ಕಾರ್ಯಕ್ಕೆ ಖರ್ಚು ಮಾಡುತ್ತಿದ್ದಾರೆ.

    ಪರಂಗಿಯವರು ತಾವೇ ಶಿಕ್ಷಕರನ್ನು ನೇಮಿಸಿಕೊಂಡು ಇಂಗ್ಲಿಷ್ ಮೀಡಿಯಮ್‍ನ ಎಲ್‍ಕೆಜಿ, ಯುಕೆಜಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿದ್ದಾರೆ. ಶಾಲೆಯ ಎಲ್ಲ ಮಕ್ಕಳಿಗೆ ಬಟ್ಟೆ, ಟೈ, ಶೂ, ಬ್ಯಾಗ್ ಹಾಗೂ ನೋಟ್‍ಬುಕ್ ಹಾಗೂ ಸಿಬ್ಬಂದಿಗೆ ತಮ್ಮ ಸ್ವಂತ ಹಣದಲ್ಲಿ ವೇತನ ನೀಡುತ್ತಿದ್ದಾರೆ. ಲ್ಯಾಪ್‍ಟಾಪ್, ಪ್ರೊಜೆಕ್ಟರ್, ಬ್ಲೂಟೂತ್, ಟಿವಿ ಖರೀದಿಸಿ 5 ರಿಂದ 7 ನೇ ತರಗತಿ ಮಕ್ಕಳಿಗೆ ಪಾಠ ಮಾಡುವ ವ್ಯವಸ್ಥೆ ಕಲ್ಪಿಸಿದ್ದಾರೆ.

    ಭಿಕ್ಷೆ ಬೇಡುವ ಮಕ್ಕಳನ್ನ ಶಾಲೆಗೆ ಕರೆತಂದು, ಅಕ್ಷರ ಪಾತ್ರೆ ನೀಡಿದ್ದಾರೆ. ಗುಳೆ ಹೋಗುವ ಕುಟುಂಬದ ಮಕ್ಕಳನ್ನ ಶಾಲೆಗೆ ಸೇರಿಸುವ ನಿರಂತರ ಪ್ರಯತ್ನ ಮಾಡಿದ್ದಾರೆ. ಪ್ರತಿವರ್ಷ ಹತ್ತಾರು ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಅವರ ಶಿಕ್ಷಣದ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಗುರುವಿನ ಪದಕ್ಕೆ ನಿಜವಾದ ಅರ್ಥ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=OJTqI8zOGMc

  • ಕಾಸರಗೋಡಿನಲ್ಲಿ ಮಲೆಯಾಳಂ ಶಿಕ್ಷಕನ ವಿರುದ್ಧ ಉಗ್ರ ಹೋರಾಟ ನಡೆಸಲು ತೀರ್ಮಾನ

    ಕಾಸರಗೋಡಿನಲ್ಲಿ ಮಲೆಯಾಳಂ ಶಿಕ್ಷಕನ ವಿರುದ್ಧ ಉಗ್ರ ಹೋರಾಟ ನಡೆಸಲು ತೀರ್ಮಾನ

    ಕಾಸರಗೋಡು: `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಕನ್ನಡ ಶಾಲೆ ದುಸ್ಥಿತಿಯ ಬಗ್ಗೆ ಚರ್ಚೆಯಾಗುತ್ತಿರುವಾಗಲೇ, ಈಗ ಕೇರಳದ ಶಾಲೆಯೊಂದರಲ್ಲಿ ಕನ್ನಡ ತರಗತಿಗೆ ಮಲೆಯಾಳಂ ಅಧ್ಯಾಪಕನ ನೇಮಕಾತಿ ಖಂಡಿಸಿ ಉಗ್ರ ಹೋರಾಟ ನಡೆಸಲು ಗಡಿಯಲ್ಲಿರುವ ಭಾಷಾಭಿಮಾನಿಗಳು ತೀರ್ಮಾನಿಸಿದ್ದಾರೆ.

    ಕಾಸರಗೋಡು ಜಿಲ್ಲೆಯ ಉಪ್ಪಳದ ಮಂಗಲ್ಪಾಡಿ ಸರ್ಕಾರಿ ಹೈಸ್ಕೂಲ್(ಕುಕ್ಕಾರು)ನಲ್ಲಿರುವ ಶಾಲೆಯಲ್ಲಿ ಕನ್ನಡ ತರಗತಿಯ ಗಣಿತ ವಿಭಾಗಕ್ಕೆ ಮಲೆಯಾಳಂ ಅಧ್ಯಾಪಕನ ನೇಮಕಾತಿಯ ಮಾಡಲು ಮುಂದಾಗಿತ್ತು. ಬಳಿಕ ಈ ಬಗ್ಗೆ ಮಲೆಯಾಳ ಅಧ್ಯಾಪಕನ ನೇಮಕಾತಿ ಬೇಡ ಎಂದು ಕನ್ನಡ ಭಾಷಾಮಾನಿಗಳು ಹೋರಾಟ ಮಾಡಿದ್ದರು. ಇದನ್ನೂ ಓದಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ – ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ

    ಈ ಬಗ್ಗೆ ನಡೆದ ಹೋರಾಟ ಅಷ್ಟೇನು ತೀವ್ರವಾಗಿ ಪರಿಣಮಿಸಿರಲಿಲ್ಲ. ಆದರೆ ಇತ್ತೀಚೆಗೆ `ಸ.ಹಿ.ಪ್ರಾ. ಶಾಲೆ ಕಾಸಗೋಡು’ ಸಿನಿಮಾ ಬಿಡುಗಡೆಗೊಂಡ ನಂತರ ಆ ಸಿನಿಮಾದಲ್ಲಿ ಕನ್ನಡ ಶಾಲೆಯನ್ನು ಉಳಿಸಲು ನಡೆಸಿದ ಹೋರಾಟದ ಪ್ರಭಾವದಿಂದ ಮಲೆಯಾಳಂ ಪ್ರಧ್ಯಾಪಕನ ನೇಮಕಾತಿಯ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಪೋಷಕರು ಶಿಕ್ಷಕರ ಸಂಘ(ಪಿಟಿಎ) ಹಾಗೂ ಕನ್ನಡ ಭಾಷಾಭಿಮಾನಿಗಳ ಸಭೆಯಲ್ಲಿ ತೀರ್ಮಾನ ನಡೆಸಲಾಗಿದೆ.

    ಈ ಸಂಬಂಧ ಮಂಗಲ್ಪಾಡಿ ಶಾಲಾ ಪರಿಸರದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ ಸಮಸ್ಯೆ ಇತ್ಯರ್ಥವಾಗುವ ತನಕ ಹೋರಾಟ ತೀವ್ರವಾಗಿ ನಡೆಸಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ಓಣಂ ರಜೆ ಮುಗಿದ ನಂತರ ಮಲೆಯಾಳಂ ಅಧ್ಯಾಪಕ ಶಾಲೆಗೆ ಬಂದರೆ ವಿದ್ಯಾರ್ಥಿಗಳ ಪೋಷಕರ ಮೂಲಕ ದಿಗ್ಬಂಧನ ನಡಸಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಅಧ್ಯಾಪಕ ಶಾಲಿ ಮಾಸ್ಟರ್ ಸಮಸ್ಯೆಗಳ ಬಗ್ಗೆ ಕುರಿತು ವಿವರಿಸಿದ್ದರು.

    ಈ ಸಭೆಯಲ್ಲಿ ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಕಾಸರಗೋಡು, ಶಾಲಾ ಮಾತೃ ಸಮಿತಿಯ ಯಶೋಧ ಶೆಟ್ಟಿ, ಸಾಮಾಜಿಕ ಮುಂದಾಳು ದಿನೆಶ್ ಚೆರುಗೋಳಿ, ಚಂದ್ರ ಕುಬಣುರು ಅವರು ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಸಭೆಯಲ್ಲಿ ಪಿಟಿಎ ಅಧ್ಯಕ್ಷ ಬಾಲಕೃಷ್ಣ ಅಂಬಾರು ಅಧ್ಯಕ್ಷತೆ ವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ!

    ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ!

    ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಶಿಕ್ಷಕಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೆ ಪಿ ನಗರದ ಶಾಕಾಂಬರಿನಗರದಲ್ಲಿ ನಡೆದಿದೆ.

    ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದು, ದೇವಿಕಾ(32) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಬನಶಂಕರಿಯಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಗಂಡ ಸುನೀಲ್ ಕುಮಾರ್ (38)ಕೂಡ ಅದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಈ ವೇಳೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಈ ನಡುವೆ ಗಂಡ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದನು. ಈ ಬಗ್ಗೆ ದೇವಿಕಾ ಪ್ರಶ್ನಿಸಿ ಜಗಳ ಮಾಡಿದ್ದರು. ಆದರೆ ಕಳೆದ ರಾತ್ರಿ 12 ಗಂಟೆ ಸುಮಾರಿಗೆ ತನ್ನ ಸಾವಿಗೆ ಗಂಡನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ದೇವಿಕಾ ಮೃತದೇಹ ರವಾನೆ ಮಾಡಲಾಗಿದ್ದು, ಘಟನೆಗೆ ಸಂಬಂಧಪಟ್ಟಂತೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

    ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

    ಹುಬ್ಬಳ್ಳಿ: ಅಮ್ಮ ಬೇಕು ಅಮ್ಮ ಎಂದು ಹಠಹಿಡಿದಿದ್ದ 4 ವರ್ಷದ ಮಗುವಿನ ಬೆನ್ನಿಗೆ ನರ್ಸರಿ ಶಾಲೆಯ ಶಿಕ್ಷಕ ಹಾಗೂ ಆಯಾ ಬರೆ ಎಳೆದ ಅಮಾನವೀಯ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಹೆಗ್ಗೇರಿ ಪ್ರದೇಶದ ಬಾಲಾಜಿ ನರ್ಸರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನನಗೆ ಅಮ್ಮ ಬೇಕು ಎಂದು ಹಠ ಮಾಡಿದ್ದಕ್ಕೆ ಶಾಲೆಯ ಶಿಕ್ಷಕ ಹಾಗೂ ಆಯಾ ನನ್ನ ಮಗನ ಬೆನ್ನ ಮೇಲೆ ಬರೆ ಎಳೆದಿದ್ದಾರೆ ಎಂದು ಮಗುವಿನ ತಾಯಿ ಕಾವೇರಿ ಆರೋಪಿಸಿದ್ದಾರೆ.

    ಹೆಗ್ಗೇರಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಸತೀಶ್ ನಾಯ್ಡು ಈ ನರ್ಸರಿ ಶಾಲೆಯನ್ನು ಆರಂಭಿಸಿದ್ದು, 35ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅಲ್ಲದೇ ಕಾವೇರಿ ಅವರು ಈಗಷ್ಟೇ ಒಂದು ವಾರದ ಹಿಂದೆ ತನ್ನ ಮಗನನ್ನು ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ ಪ್ರತಿನಿತ್ಯ ಆಗಮಿಸುವ ಬಾಲಕ ಪ್ರತಿದಿನ ಅಮ್ಮ ಬೇಕು ಅಮ್ಮ ಬೇಕು ಅಂತ ಹಠ ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಶಾಲೆಯ ಆಯಾ ಬಾಲಕನ ಬೆನ್ನಿಗೆ ಬರೆ ಎಳೆದು ಗಾಯಗೊಳಿಸಿದ್ದಾಳೆ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಬಂದಿರುವ ಆರೋಪವನ್ನು ಶಿಕ್ಷಕ ಸತೀಶ್ ನಾಯ್ಡು ಅಲ್ಲಗಳೆದಿದ್ದು, ಆ ರೀತಿ ನಡೆದುಕೊಂಡಿಲ್ಲ ಎಂದಿದ್ದಾರೆ. ಆದರೆ ಈ ಕುರಿತಂತೆ ಮಗುವಿನ ತಾಯಿ ಕಾವೇರಿ, ಶಿಕ್ಷಕ ಸತೀಶ ಹಾಗೂ ಆಯಾ ಮೇಲೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐವರು ಮಕ್ಕಳಿದ್ದರೂ ಅನಾಥ – ಆಶ್ರಯವಿಲ್ಲದೆ ಅಪ್ಪನಿಗೆ ಬಸ್ ನಿಲ್ದಾಣವೇ ಆಶ್ರಮ

    ಐವರು ಮಕ್ಕಳಿದ್ದರೂ ಅನಾಥ – ಆಶ್ರಯವಿಲ್ಲದೆ ಅಪ್ಪನಿಗೆ ಬಸ್ ನಿಲ್ದಾಣವೇ ಆಶ್ರಮ

    -ಮಗ-ಸೊಸೆ ಶಿಕ್ಷಕರಾದ್ರೂ ತಂದೆ ಮಾತ್ರ ಬೀದಿಪಾಲು

    ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವಲಬಾಪುರದ ನಿವಾಸಿಯಾದ 63 ವರ್ಷದ ಸಂಗಯ್ಯ ಸೊಪ್ಪಿನಮಠ ಎಂಬವರ ಕರುಣಾಜನಕ ಕಥೆ. ಸಂಗಯ್ಯ ಅವರಿಗೆ ಮೂರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಇಂದು ಯಾವ ಮಕ್ಕಳ ಆಶ್ರಯ ಸಿಗದೇ ಬಸ್ ನಿಲ್ದಾಣದಲ್ಲಿ ವಾಸವಾಗಿದ್ದಾರೆ. ಸಂಗಯ್ಯರ ಹಿರಿಯ ಮಗ ಜಗದೀಶ್ ವ್ಯಾಪಾರಿ, ಪರಮೇಶ್ವರಯ್ಯ ವೃತ್ತಿಯಲ್ಲಿ ಶಿಕ್ಷಕ, ಮತ್ತೊಬ್ಬ ಮಗ ಹೇಮಯ್ಯ ಖಾಸಗಿ ಕಂಪೆನಿ ಉದ್ಯೋಗಿ ಹಾಗೂ ಎರಡು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ.

    ತುಂಬು ಕುಟುಂಬದಲ್ಲಿ ನೆಮ್ಮದಿಯಾಗಿದ್ದ ವೃದ್ಧ ತಂದೆ ಸಂಗಯ್ಯ ಅನ್ಯೋನ್ಯವಾಗಿದ್ದರು. ಆದ್ರೆ ಕೆಲವು ದಿನಗಳ ಹಿಂದೆ ಸಂಗಯ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆಸ್ಪತ್ರೆ ವೆಚ್ಚಕ್ಕಾಗಿ ಇದ್ದ ಸೈಟ್ ಮಾರಿ ಬಂದ ಹಣದಿಂದ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಹೀಗಾಗಿ ನಮಗೆ ಆಸ್ತಿ ಮಾಡಲಿಲ್ಲ, ಇದ್ದ ಸೈಟ್‍ನ್ನು ಮಾರಿಕೊಂಡಿದ್ದಾರೆಂದು ಮಕ್ಕಳು ಮನೆಯಿಂದ ದೂರ ತಳ್ಳಿದ್ದಾರೆ.

    ಎಲ್ಲರೂ ಇದ್ದೂ ಯಾರೂ ಇಲ್ಲದಂತೆ ಅನಾಥವಾಗಿರುವ ಸಂಗಯ್ಯನವರು ಗ್ರಾಮದಲ್ಲಿ ಅವರಿವರು ನೀಡುವ ಊಟವನ್ನು ಮಾಡುತ್ತಾರೆ. ಕತ್ತಲಾಗುತ್ತಿದ್ದಂತೆ ಬಸ್ ನಿಲ್ದಾಣಕ್ಕೆ ಬಂದು ಕೊರೆಯುವ ಚಳಿಯಲ್ಲಿ ರಾತ್ರಿ ಕಳೆಯುತ್ತಿದ್ದಾರೆ.

    ಸುಮಾರು 10 ವರ್ಷಗಳಿಂದ ಹೀಗೆ ಜೀವನ ಮಾಡುತ್ತಿರುವ ಸಂಗಯ್ಯನವರು ನನಗೆ ಮಕ್ಕಳ ಆಶ್ರಯ ಬೇಕು ಅಂತ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ. ನ್ಯಾಯಾಲಯ ತಂದೆಗೆ ಆಶ್ರಯ ನೀಡಲು ಸೂಚಿಸಿದೆ. ಹಾಗಾಗಿ ಒಬ್ಬ ಮಗ 2 ಸಾವಿರ, ಇನ್ನೊಬ್ಬ ಮಗ 1 ಸಾವಿರ ರೂ. ಕೊಡುವುದಾಗಿ ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ವೃದ್ಧ ತಂದೆಯ ಜೀವನ ನಿರ್ವಹಣೆಗೆ ಮಕ್ಕಳು ಹಣ ನೀಡದೇ, ಮನೆಯಲ್ಲಿ ಆಶ್ರಯವನ್ನೂ ನೀಡದೇ ಬೀದಿ ಪಾಲು ಮಾಡಿದ್ದಾರೆ.

    ಮಕ್ಕಳಿಗೆ ಆಸ್ತಿ ಮಾಡಲಿಲ್ಲ, ಮಕ್ಕಳಿಗಾಗಿ ಆಸ್ತಿ ಉಳಿಸಲಿಲ್ಲವೆಂದು ಹೆತ್ತ ತಂದೆಯನ್ನ ದೂರ ಮಾಡಿ ಅನಾಥ ಮಾಡಿರೋ ಮಕ್ಕಳ ವರ್ತನೆ ನಿಜಕ್ಕೂ ದುರಂತ. ಕರುಳ ಬಳ್ಳಿಗಳ ಬದುಕಿಗಾಗಿ ತಮ್ಮ ಜೀವವನ್ನೆ ಮುಡಿಪಿಡುವ ಹೆತ್ತವರನ್ನು ಮಕ್ಕಳು ಕನಿಷ್ಠ ಸೌಜನ್ಯದಿಂದ ನೋಡಿಕೊಳ್ಳಲಿ ಎಂಬವುದೇ ಬೆಳಕು ಕಾರ್ಯಕ್ರಮದ ಉದ್ದೇಶ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=4zIbqnSClTo

  • ತರಗತಿಯಲ್ಲೇ ನೇಣು ಬಿಗಿದು ದಾವಣಗೆರೆಯ ಮುಖ್ಯ ಶಿಕ್ಷಕ ಆತ್ಮಹತ್ಯೆ

    ತರಗತಿಯಲ್ಲೇ ನೇಣು ಬಿಗಿದು ದಾವಣಗೆರೆಯ ಮುಖ್ಯ ಶಿಕ್ಷಕ ಆತ್ಮಹತ್ಯೆ

    ದಾವಣಗೆರೆ: ಶಾಲಾ ಮುಖ್ಯ ಶಿಕ್ಷಕರೊಬ್ಬರು ತರಗತಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹರಪ್ಪನಹಳ್ಳಿ ತಾಲೂಕಿನ ಕಮ್ಮತಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಲ್ಲೇಶಪ್ಪ(56) ಎಂಬವರು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಹರಪ್ಪನಹಳ್ಳಿ ತಾಲೂಕಿನ ಕಮ್ಮತಹಳ್ಳಿ ಗ್ರಾಮದ ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಎಂದಿನಂತೆ ಬೆಳಗ್ಗೆ ಮುಖ್ಯ ಶಿಕ್ಷಕ ಮಲ್ಲೇಶಪ್ಪ ಅವರು ಶಾಲೆಗೆ ಬಂದಿದ್ದರು. ಈ ವೇಳೆ ಸಹ ಶಿಕ್ಷಕರೊಬ್ಬರು ಬಂದು ನೋಡಿದಾಗ ತರಗತಿಯಲ್ಲೇ ನೇಣಿಗೆ ಶರಣಾನಾಗಿದ್ದಾರೆ. ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ ಎನ್ನುವ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಅರಸೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಂತ ಖರ್ಚಿನಲ್ಲಿ 120 ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಪ್ರತಿದಿನ ಉಪಹಾರ!

    ಸ್ವಂತ ಖರ್ಚಿನಲ್ಲಿ 120 ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಪ್ರತಿದಿನ ಉಪಹಾರ!

    ಚೆನ್ನೈ: ಗುರುಗಳು ತಮ್ಮ ವಿದ್ಯಾರ್ಥಿಗಳು ಕಲಿತು ದೇಶದಲ್ಲಿ ಉತ್ತಮ ಪ್ರಜೆಯಾಗಬೇಕೆಂದು ಅವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಶಿಕ್ಷಕರೊಬ್ಬರು ಪ್ರತಿದಿನ ತಮ್ಮ ಸ್ವಂತ ಹಣದಲ್ಲಿ 120 ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರವನ್ನು ಒದಗಿಸುತ್ತಿದ್ದಾರೆ.

    ಕೊಡುಂಗಾಯೂರಿನಲ್ಲಿರುವ ಚೆನ್ನೈ ಹೈಸ್ಕೂಲಿನ ಶಿಕ್ಷಕ ಪಿ.ಕೆ. ಇಲಾಮಾರನ್ ಅವರು ಪ್ರತಿದಿನ 120 ಮಕ್ಕಳಿಗೆ ಬೆಳಗ್ಗಿನ ಉಪಹಾರವನ್ನು ನೀಡುತ್ತಿದ್ದಾರೆ. ಮುಂಜಾನೆ ಶಾಲೆಗೆ ಬರುವ ಆತುರದಲ್ಲಿ ವಿದ್ಯಾರ್ಥಿಗಳು ತಿಂಡಿ ತಿನ್ನದೇ ಬರುವುದು ಅಥವಾ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದೇ ಬೆಳಗ್ಗೆ ಖಾಲಿ ಹೊಟ್ಟೆಯಿಂದ ಬರೋದನ್ನು ಕಂಡು ಇಲಾಮಾರನ್ ಈ ಕೆಲಸಕ್ಕೆ ಮುಂದಾಗಿದ್ದಾರೆ. ಇಲಾಮಾರನ್ ಅವರು ಸುಮಾರು 2 ವರ್ಷದಿಂದ ವಿದ್ಯಾರ್ಥಿಗಳಿಗೆ ಉಪಹಾರ ನೀಡುತ್ತಿದ್ದಾರೆ.

    ಮುಂಜಾನೆ ವಿದ್ಯಾರ್ಥಿಗಳಿಗೆ ತಿಂಡಿ ಬಡಿಸುವಾಗ ಅವರ ಜೊತೆ ಇದ್ದು ಸ್ವಲ್ಪ ಸಮಯ ಕಳೆಯುತ್ತೇನೆ. ಇದು ನನಗೆ ತುಂಬಾ ಖುಷಿ ತಂದಿದೆ. ಶಾಲೆಯ ಸಮೀಪದ ಅಂಗಡಿಯಿಂದ ಪ್ರತಿದಿನ ಇಡ್ಲಿ ಮತ್ತು ಪೊಂಗಲ್ ತಿಂಡಿಯನ್ನು ತಂದು ಬಡಿಸುತ್ತೇವೆ ಎಂದು ಇಲಾಮಾರನ್ ಹೇಳಿದ್ದಾರೆ.

    ಶಿಕ್ಷಕ ಇಲಾಮಾರನ್ 7 ಮತ್ತು 9ನೇ ತರಗತಿಗೆ ಪಾಠ ಮಾಡುತ್ತಿದ್ದು, ಇವರು ಶಿಕ್ಷಕರ ಸಂಘದ ಅಧ್ಯಕ್ಷರು ಆಗಿದ್ದಾರೆ. ಆದರೆ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಮಕ್ಕಳಿಗೆ ಉಚಿತ ಉಪಹಾರ ನೀಡುತ್ತಾರೆ. ಬೆಳಗ್ಗೆ 7.30 ರಿಂದ 8 ಗಂಟೆಯವರೆಗೆ 10 ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಉಪಹಾರ ನೀಡಿದರೆ, ಉಳಿದ ವಿದ್ಯಾರ್ಥಿಗಳಿಗೆ 8.20 ರಿಂದ 8.50 ರ ವರೆಗೂ ನೀಡುತ್ತಾರೆ. ಇದು ಶಾಲೆ ಮತ್ತು ಅಲ್ಲಿನ ಶಿಕ್ಷಕರು ಅನುಸರಿಸುವ ಅನೇಕ ಉಪಕ್ರಮಗಳಲ್ಲಿ ಒಂದಾಗಿದೆ.

    ನಾನು ಈ ಶಾಲೆಗೆ ಸೇರಿಕೊಂಡಾಗ ಕೇವಲ 370 ವಿದ್ಯಾರ್ಥಿಗಳು ಮಾತ್ರ ಇದ್ದರು. ಆದರೆ ನಾಲ್ಕು ವರ್ಷದಲ್ಲಿ ಈ ಸಂಖ್ಯೆ 270 ರಿಂದ 980ಕ್ಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರ ಸಂಖ್ಯೆಯೂ ಅಧಿಕವಾಗಿದ್ದು, 11 ರಿಂದ 35ಕ್ಕೆ ಏರಿದೆ ಎಂದು ಶಾಲೆಯ ಪ್ರಿನ್ಸಿಪಾಲ್ ಮುನಿರಾಮಯ್ಯ ಹೇಳಿದ್ದಾರೆ.

    ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಪ್ಲಾನ್ ಹಾಕಿಕೊಂಡಿರುವ ಇವರು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ನೀಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ಆಡಳಿತ ಮಂಡಳಿ ಸಹಾಯದಿಂದ ಶಾಲೆಯ ಎಂಟು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶಿಕ್ಷಕ ಮತ್ತು ವಿದ್ಯಾರ್ಥಿ ಹಾಜರಾತಿಗಳನ್ನು ಮೇಲ್ವಿಚಾರಣೆ ಮಾಡಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಬಳಸುವ ಏಕೈಕ ಸರ್ಕಾರಿ ಶಾಲೆ ನಮ್ಮದಾಗಿದೆ ಎಂದ ಮುನಿರಾಮಯ್ಯ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿಕ್ಷಕಿಯೊಂದಿಗೆ ಫ್ಲರ್ಟ್ ಮಾಡಿದ್ದೆ- ಸಲ್ಮಾನ್ ಖಾನ್

    ಶಿಕ್ಷಕಿಯೊಂದಿಗೆ ಫ್ಲರ್ಟ್ ಮಾಡಿದ್ದೆ- ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ರವರು ಶಾಲಾ ದಿನಗಳಲ್ಲಿ ಶಿಕ್ಷಕಿಯೊಂದಿಗೆ ಫ್ಲರ್ಟ್ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

    ವೀಕೆಂಡ್‍ಗಳಲ್ಲಿ ಬರುವ ದುಸ್ ಕಾ ದುಮ್- ದುಮ್ಡಾರ್ ನ ಚಿತ್ರಿಕರಣದ ವೇಳೆ ಸಲ್ಲು ತನ್ನ ಫ್ಲರ್ಟಿಂಗ್ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ. ನಿಮಗೆ ಮೊದಲ ಬಾರಿಗೆ ಶಾಲಾ ಶಿಕ್ಷಕಿ ಜೊತೆ ಪ್ರೀತಿಯ ಬಲೆಗೆ ಸಿಲಿಕಿಕೊಂಡಿದ್ದಿರಾ ಎಂದು ಇಂಡಿಯನ್ಸ್ ಕಾರ್ಯಕ್ರಮದಲ್ಲಿ ಕೇಳಿದಾಗ ಸಲ್ಲು, ತನ್ನ ಶಾಲೆಯಲ್ಲಿ ಒಬ್ಬರು ಶಿಕ್ಷಕಿ ಮೇಲೆ ಪ್ರೀತಿ ಹುಟ್ಟಿತ್ತು. ಅಷ್ಟೇ ಅಲ್ಲದೆ ಅವರನ್ನು ನಾನು ತನ್ನ ಸೈಕಲ್‍ನಲ್ಲಿ ಮನೆವರಗೂ ಡ್ರಾಪ್ ಮಾಡುತ್ತಿದ್ದೆ. ಈ ಮೂಲಕ ಅವರು ನನ್ನ ಮುಂದೆ ಕುಳಿತುಕೊಳ್ಳುವಂತೆ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

    ಯಾರೊಬ್ಬರು ಶಾಲೆಯಲ್ಲಿ ಶಿಕ್ಷಕಿಯ ಜೊತೆ ಪ್ರೀತಿಯಲ್ಲಿ ಬೀಳದೆ ಇರಲು ಸಾಧ್ಯವಿಲ್ಲ. ಅದನ್ನು ಹೆಚ್ಚು ಜನರು ಒಪ್ಪಿಕೊಳ್ಳುವುದಿಲ್ಲ. ಆದರೆ ನಾನು ನನ್ನ ಶಿಕ್ಷಕಿ ಜೊತೆ ತುಂಬಾ ಫ್ಲರ್ಟ್ ಮಾಡುತ್ತಿದ್ದೆ ಎಂದು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.

    ಸದ್ಯ ಸಲ್ಲು ದುಸ್ ಕಾ ದುಮ್- ದುಮ್ಡಾರ್ ವಿಕೆಂಡ್ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದು, ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv