Tag: tax

  • ಸಿಎಂ ಆಪ್ತ ಸಿಎಸ್ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ

    ಸಿಎಂ ಆಪ್ತ ಸಿಎಸ್ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ

    ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ, ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಮತ್ತು ಅವರ ಸಂಬಂಧಿಕರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಪುಟ್ಟರಾಜು ಸ್ವಗ್ರಾಮ ಚಿನಕುರಳಿಯಲ್ಲಿರುವ ಮನೆ ಮೇಲೆ ಬೆಳಗ್ಗೆ ಐಟಿ ದಾಳಿ ನಡೆದಿದೆ. ಮೈಸೂರಿನ ವಿಜಯನಗರದಲ್ಲಿರುವ ಪುಟ್ಟರಾಜು ಅಣ್ಣನ ಮಗ ಅಶೋಕ್ ಮನೆ ಮೇಲೆಯೂ ದಾಳಿ ನಡೆದಿದೆ. ನಸುಕಿನ ಜಾವದಿಂದ ಪುಟ್ಟರಾಜು ನಿವಾಸ, ಸಂಬಂಧಿಗಳ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

    ಬೆಂಗಳೂರಿನ ಹಲವು ಉದ್ಯಮಿಗಳ ಮನೆ ಮೇಲೆ ಬುಧವಾರ ರಾತ್ರಿ ಐಟಿ ದಾಳಿ ನಡೆದಿದೆ. 10ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿಯಾಗಿದೆ. ಬೆಂಗಳೂರು ಉದ್ಯಮಿ ಸೌತ್ ಎಂಡ್ ಸರ್ಕಲ್ ನಲ್ಲಿರುವ ಸಿದ್ದಿಕ್ ಶೇಟ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

    ಬುಧವಾರ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ, ಬಿಜೆಪಿಯ ಆಪ್ತ ಮೂಲಗಳಿಂದ ನನಗೆ ಫೋನ್ ಕರೆ ಬಂದಿದ್ದು, ಕಾಂಗ್ರೆಸ್, ಜೆಡಿಎಸ್ ಅಭಿಮಾನಿಗಳನ್ನು ಗುರಿ ಮಾಡಿ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಪಕ್ಷ ಬೆಂಬಲಿಗರ ಮೇಲೆ ದಾಳಿ ನಡೆಸಿ ಎಷ್ಟು ಹಣ ತೆಗೆದುಕೊಂಡು ಹೋಗುತ್ತಾರೆ ನೋಡುತ್ತೇನೆ. ಆದರೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರೆ ನಾನು ಕೂಡ ಪಶ್ಚಿಮ ಬಂಗಾಳ ಸಿಎಂರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಐಟಿ ದಾಳಿ ನಡೆಸಲು 300 ಕ್ಯಾಬ್ ರೆಡಿಯಾಗಿವೆ: ಸಿಎಂ

     

  • ಬೆಂಗ್ಳೂರಿಗರಿಗೆ ಇದು ನಾಚಿಕೆಯ ವಿಷ್ಯ – ಮನೆ ಟ್ಯಾಕ್ಸ್ ಬಾಕಿ ಉಳಿಸಿಕೊಂಡ 72 ಸಾವಿರ ಮಂದಿ..!

    ಬೆಂಗ್ಳೂರಿಗರಿಗೆ ಇದು ನಾಚಿಕೆಯ ವಿಷ್ಯ – ಮನೆ ಟ್ಯಾಕ್ಸ್ ಬಾಕಿ ಉಳಿಸಿಕೊಂಡ 72 ಸಾವಿರ ಮಂದಿ..!

    ಬೆಂಗಳೂರು: ನಗರದ ಶೇ.70ರಷ್ಟು ಜನರು ಮನೆ ತೆರಿಗೆಯನ್ನೇ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ. ಇದು ಸಿಲಿಕಾನ್ ಸಿಟಿಯಲ್ಲಿ ಮಂದಿ ನಾಚಿಕೆಪಡುವ ವಿಚಾರವಾಗಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಬಿಟ್ಟು ಈ ಹಿಂದೆ ತೆರಿಗೆ ಉಳಿಸಿಕೊಂಡವರ ಸಂಖ್ಯೆ ಅಧಿಕವಾಗಿದ್ದು, ಪಾಲಿಕೆಗೆ ಬರೋಬ್ಬರಿ 800 ಕೋಟಿ ರೂ. ತೆರಿಗೆ ಹಣ ಬಾಕಿ ಉಳಿದಿದೆ. ಹೀಗಾಗಿ 72 ಸಾವಿರ ಜನರಿಗೆ ಪಾಲಿಕೆ ನೋಟಿಸ್ ನೀಡಿದೆ.

    ಪಾಲಿಕೆ ನಡೆಯುವುದೇ ತೆರಿಗೆ ಹಣದಿಂದ, ವಿಪರ್ಯಾಸವೆಂದರೆ ಜನರು ತೆರಿಗೆ ಹಣವೇ ಕಟ್ಟುತ್ತಿಲ್ಲ. ಅದು ಶೇ.70 ರಷ್ಟು ಜನ ಮಲ್ಟಿಪಲ್ ಪ್ರಾಪರ್ಟಿ ಹೊಂದಿರುವವರೇ ಟ್ಯಾಕ್ಸ್ ಬಾಕಿ ಉಳಿಸಿಕೊಂಡಿದ್ದಾರೆ ಅನ್ನೋದು ಗಮನಾರ್ಹವಾಗಿದೆ. ಹೀಗಾಗಿ ತೆರಿಗೆ ಉಳಿಸಿಕೊಂಡ 72 ಸಾವಿರ ಜನಕ್ಕೆ ನೋಟಿಸ್ ನೀಡಲಾಗಿದೆ. ಜೊತೆಗೆ 15 ಸಾವಿರ ಜನಕ್ಕೆ ಜಪ್ತಿ ವಾರೆಂಟ್ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

    ಇಷ್ಟಲ್ಲದೇ ವಲಯವಾರು 100 ಜನ ತೆರಿಗೆ ವಂಚಿಸಿದವರ ಪಟ್ಟಿಯನ್ನು ಪಾಲಿಕೆ ಸಿದ್ಧಪಡಿಸಿದೆ. ಇದನ್ನು ಸಹ ವೆಬ್‍ಸೈಟ್‍ಗೆ ಹಾಕಿ ತೆರಿಗೆ ವಸೂಲಿ ಮಾಡಲು ನಿಂತಿದೆ. ನೋಟಿಸ್, ಜಪ್ತಿ ವಾರೆಂಟ್ ಹಾಗೂ ತೆರಿಗೆ ವಂಚನೆ ಪಟ್ಟಿಗೆ ಹೆದರಿಯಾದರೂ ತೆರಿಗೆ ಕಟ್ಟುತ್ತಾರ ಎಂದು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆರಿಗೆ ರಜೆಯ ಸಂಬಳದಲ್ಲಿ ಸಿಗಲಿದೆ ತೆರಿಗೆ ವಿನಾಯಿತಿ

    ಹೆರಿಗೆ ರಜೆಯ ಸಂಬಳದಲ್ಲಿ ಸಿಗಲಿದೆ ತೆರಿಗೆ ವಿನಾಯಿತಿ

    ನವದೆಹಲಿ: ಕೇಂದ್ರ ಸರ್ಕಾರವು ಫೆ. 1ರಂದು ಮಂಡನೆ ಮಾಡಲಿರುವ ಮಧ್ಯಂತರ ಬಜೆಟ್‍ನಲ್ಲಿ ಹೆರಿಗೆ ರಜೆಯಲ್ಲಿ ಪಡೆಯುವ ಸಂಬಳಕ್ಕೆ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಘೋಷಿಸಲಿದೆ. ಮಧ್ಯಂತರ ಬಜೆಟ್‍ನಲ್ಲಿ ಹೆರಿಗೆ ರಜೆಯಲ್ಲಿ ಪಡೆಯುವ ಸಂಬಳಕ್ಕೆ ತೆರಿಗೆ ವಿನಾಯಿತಿ ನೀಡುವ ಸಾಧ್ಯತೆ ಇದ್ದು, ಈ ಮೂಲಕ ಉದ್ಯೋಗಸ್ಥ ಮಹಿಳೆಯರ ಬೆಂಬಲ ಗಳಿಸಲು ಬಿಜೆಪಿ ಮುಂದಾಗಿದೆ. ಕಾರ್ವಿಕ ಸಚಿವಾಲಯ ಸಲ್ಲಿಸಿರುವ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತಿದೆ ಎಂದು ಮಧ್ಯಮವೊಂದು ವರದಿ ಪ್ರಕಟಿಸಿದೆ.

    ಹೆರಿಗೆ ಸೌಲಭ್ಯ ಕಾಯ್ದೆಯನ್ನು 2017ರಲ್ಲಿ ಸರ್ಕಾರ ತಿದ್ದುಪಡಿ ಮಾಡಿತ್ತು. ಆಗ ಉದ್ಯೋಗಸ್ಥ ಮಹಿಳೆಯರಿಗೆ ಕೊಡುವ ಸಂಬಳ ಸಹಿತ ಹೆರಿಗೆ ರಜೆಯನ್ನು 12 ವಾರದಿಂದ 26 ವಾರಕ್ಕೆ ಏರಿಸಿತ್ತು. ಈ ಹಿಂದೆ ಕಾರ್ವಿಕ ಸಚಿವಾಲಯವು ಕಡಿಮೆ ಸಂಬಳ ಪಡೆಯುವ ಮಹಿಳೆಯರಿಗೂ ಕೂಡ 26 ವಾರಗಳ ಹೆರಿಗೆ ರಜೆ ಸಿಗುವಂತೆ ಮಾಡಲು ಕೆಲವು ಕ್ರಮಗಳ ಬಗ್ಗೆ ಸರ್ಕಾರದ ಬಳಿ ಪ್ರಸ್ತಾವನೆ ಇಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಬಿಎಂಪಿ ಆಸ್ತಿ ತೆರಿಗೆ ಉಳಿಸಿಕೊಂಡ ಜಮೀರ್ ಅಹಮದ್

    ಬಿಬಿಎಂಪಿ ಆಸ್ತಿ ತೆರಿಗೆ ಉಳಿಸಿಕೊಂಡ ಜಮೀರ್ ಅಹಮದ್

    ಬೆಂಗಳೂರು: ಬಿಬಿಎಂಪಿ ಆರ್ಥಿಕವಾಗಿ ಸಬಲವಾಗಬೇಕಾದರೆ ಎಲ್ಲರೂ ಆಸ್ತಿ ತೆರಿಗೆ ಕಟ್ಟಬೇಕು. ಆದರೆ ವಿಪರ್ಯಾಸವೆಂದರೆ ಗಣ್ಯಾತಿಗಣ್ಯರು ತೆರಿಗೆ ಕಟ್ಟದ ಸುದ್ದಿ ಈಗಾಗಲೇ ಸದ್ದು ಮಾಡಿದೆ. ಈಗ ಮತ್ತೊಮ್ಮೆ ಸಚಿವ ಸಂಪುಟದ ಮಂತ್ರಿಯೊಬ್ಬರು ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ.

    ಕುಮಾರಸ್ವಾಮಿ ಸರ್ಕಾರದ ಆಹಾರ ಮತ್ತ ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಮಂತ್ರಿ ಜಮೀರ್ ಅಹಮದ್ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಕಂದಾಯ ಅಧಿಕಾರಿಗಳಲ್ಲಿ ವಿಚಾರಿಸಿದಾಗ ದಾಖಲೆಗಳ ಪ್ರಕಾರ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಖಚಿತವಾಗಿದೆ.

    ಎಷ್ಟು ಬಾಕಿ?
    ಜಮೀರ್ ಅಹಮದ್ ಓಲ್ಡ್ ತುಮಕೂರು ರಸ್ತೆಯ ರಾಜ್ ಮಹಲ್ ವಿಲಾಸ್ ಆಸ್ತಿ ತೆರಿಗೆಯನ್ನ 2011-12 ಹಣಕಾಸು ವರ್ಷದಲ್ಲಿ ಪಾವತಿಸಿದ ಬಳಿಕ ಇಲ್ಲಿಯವರೆಗೂ ತೆರಿಗೆ ಕಟ್ಟಿಲ್ಲ ಎಂಬ ಮಾಹಿತಿ ಇದೆ. ಇಷ್ಟೇ ಅಲ್ಲದೇ ಜಕ್ಕಸಂದ್ರ ವಿಲೇಜ್ ಆಸ್ತಿಯ ಪಾಲುದಾರಿಕೆ ಹೊಂದಿರುವ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ. 2016-17 ರ ಸಾಲಿನಿಂದ ತೆರಿಗೆ ಕಟ್ಡಿಲ್ಲ ಎಂಬ ಮಾಹಿತಿ ಪಾಲಿಕೆ ಬಳಿ ಇದೆ.

    ಕೋಟಿ ಕೋಟಿ ಆಸ್ತಿ ತೆರಿಗೆ ಬಾಕಿ ಇದೆ ಎಂದು ಪಾಲಿಕೆ ಲೆಕ್ಕ ತೋರಿಸುತ್ತಿದೆ. ಆದರೆ ನಿಜಕ್ಕೂ ಈ ವಿವಿಐಪಿಗಳು ಆಸ್ತಿ ತೆರಿಗೆ ಕಟ್ಟಲು ಮರೆತ್ರಾ? ಅಥವಾ ದೊಡ್ಡವರ ಬಾಕಿ ತೋರಿಸಿ ಪಾಲಿಕೆ ಕಾಲದೂಡುತ್ತಿದ್ದೇಯಾ ಎಂಬ ಪ್ರಶ್ನೆ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 100 ರೂ. ದಂಡ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 100 ರೂ. ದಂಡ

    ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 100 ರೂ. ದಂಡವನ್ನು ಬಿಬಿಎಂಪಿ ವಿಧಿಸಿದೆ.

    ಟ್ರಾಫಿಕ್ ಸಿಗ್ನಲ್ ನಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಇಲ್ಲದೇ ಕಾರು ಓಡಿಸಿದರೂ 500 ರಿಂದ 1,000 ಫೈನ್ ಹಾಕುತ್ತಾರೆ. ಆದರೆ ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡರೆ ದಂಡ ಮಾತ್ರ 100 ರೂ. ಆಗಿರುತ್ತದೆ. ನಟ ದರ್ಶನ್ ಗೆ 2017- 18 ರ ಸಾಲಿನಲ್ಲಿ 12,024 ಆಸ್ತಿ ತೆರಿಗೆ ಕಟ್ಟಬೇಕಾಗಿತ್ತು. ಇನ್ ಟೈಂ ತೆರಿಗೆ ಕಟ್ಟದೇ ಇದ್ದಿದ್ದಕ್ಕೆ 100 ರೂ. ದಂಡ ಮತ್ತು 2164 ರೂ. ಬಡ್ಡಿ ಹಾಕಿದೆ.

    ನಟ ದರ್ಶನ್ 2017-18, 2018-19 ನೇ ಸಾಲಿನ 12,024 ರೂ. ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯಲ್ಲಿ ಕಟ್ಟಬೇಕಿತ್ತು. ಆದರೆ ದರ್ಶನ್ ತಡವಾಗಿ ಕರ ಪಾವತಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಬಡ್ಡಿ ಮತ್ತು ದಂಡ ವಿಧಿಸಿತ್ತು. ದರ್ಶನ್ ಆಸ್ತಿ ತೆರಿಗೆಯನ್ನು 100 ರೂ. ದಂಡ ಪಾವತಿಸಿದ್ದಾರೆ. ಆದರೆ ಬಿಬಿಎಂಪಿ ದಂಡದ ಮೊತ್ತ ಹಾಸ್ಯಾಸ್ಪದವಾಗಿದೆ. 100 ರೂ. ದಂಡ ಹಾಕಿದರೆ ಆಸ್ತಿ ತೆರಿಗೆಯನ್ನು ಯಾರು ನಿಗದಿತ ಸಮಯದಲ್ಲಿ ಪಾವತಿ ಮಾಡುತ್ತಾರೆ ಅನ್ನೋ ಪ್ರಶ್ನೆ ಈಗ ಎದುರಾಗಿದೆ.

    ದರ್ಶನ್ ಜೊತೆಗೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾಲೀಕತ್ವದ ಬಾಪೂಜಿ ಎಜುಕೇಷನ್ ಟ್ರಸ್ಟ್ 60 ಲಕ್ಷ ರೂ. ಆಸ್ತಿ ತೆರಿಗೆಯನ್ನು ಕಟ್ಟದೆ ಬಾಕಿ ಉಳಿಸಿಕೊಂಡಿದೆ. ಇವರ ಆಸ್ತಿ ಕೂಡ ಕೂಡಾ ಆರ್.ಆರ್ ನಗರದಲ್ಲಿ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದೊಡ್ಡವರ ದೋಖಾ- ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ

    ದೊಡ್ಡವರ ದೋಖಾ- ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ

    -ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡ ನಾಯಕರ ಬಗ್ಗೆ ಪರಂ ಹೇಳಿದ್ದು ಹೀಗೆ

    ಬೆಂಗಳೂರು: ಕೂಡಲೇ ಬಾಕಿ ಉಳಿಸಿಕೊಂಡಿರುವ ತೆರಿಗೆ ವಸೂಲಿ ಮಾಡುವಂತೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯಲ್ಲಿ ದೊಡ್ಡವರ ದೋಖಾ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಡಿಸಿಎಂ, ಯಾವ ಒತ್ತಡಕ್ಕೂ ಮಣಿಯದೆ ಈ ವರ್ಷದ ಅಂತ್ಯದ ವೇಳೆಗೆ ಬಾಕಿ ಉಳಿದಿರುವ ತೆರಿಗೆಯನ್ನು ವಸೂಲಿ ಮಾಡುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

    ಒಟ್ಟು 2 ಸಾವಿರ ಕೋಟಿ ಬಾಕಿ ಅಸ್ತಿ ತೆರಿಗೆ ಇರುವ ಹಿನ್ನೆಲೆಯಲ್ಲಿ ಕೂಡಲೇ ವಸೂಲಿ ಮಾಡಿ ವರದಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡೋದಾಗಿ ಪಬ್ಲಿಕ್ ಟಿವಿಗೆ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

    ಈ ವರ್ಷಕ್ಕೆ 3 ಸಾವಿರ ಕೋಟಿ ಆಸ್ತಿ ತೆರಿಗೆಯನ್ನು ಅಂದಾಜು ಮಾಡಿದ್ದೇವೆ. ಅದರಲ್ಲಿ ಸುಮಾರು 2 ಸಾವಿರದ 31 ಕೋಟಿ ರೂ. ಸಂಗ್ರಹಿಸಿದ್ದೇವೆ. ಇನ್ನು ಮಾರ್ಚ್ ತಿಂಗಳೊಳಗೆ 3 ಸಾವಿರ ಕೋಟಿ ರೂ. ಹಣವನ್ನು ಸಂಗ್ರಹಿಸುತ್ತೇವೆ. ಕಳೆದ ವರ್ಷ ಆಸ್ತಿ ತೆರಿಗೆ ಸಂಗ್ರಹಿಸುವ ಕೆಲಸ ಬಹಳಷ್ಟು ಬಾಕಿ ಉಳಿದಿದೆ. ಸುಮಾರು 2 ಸಾವಿರ ಕೋಟಿ ರೂ ಬಾಕಿ ಉಳಿದಿದೆ ಅಂತ ಅಂದಾಜಿಸಲಾಗಿದೆ. ಹೀಗಾಗಿ ಈ ಕುರಿತು ಪ್ರತ್ಯೇಕ ಸಭೆ ಕರೆದು ಹಣಕಾಸಿನ ವ್ಯವಹಾರ ನೋಡಿಕೊಳ್ಳುವ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಅಂದ್ರು.

    ಇಂತಿಷ್ಟು ದಿವಸದೊಳಗೆ ತೆರಿಗೆ ಹಣ ಸಂಗ್ರಹಿಸಬೇಕು ಅಂತ ತಿಳಿಸಿದ್ದೇನೆ. ಕಳೆದ ಒಂದೂವರೆ ತಿಂಗಳಲ್ಲೇ 350 ಕೋಟಿ ರೂ. ಸಂಗ್ರಹಿಸಿದ್ದಾರೆ. ಆದುದರಿಂದ ಸಂಗ್ರಹಿಸುವ ಪ್ರಕ್ರಿಯೆ ನಡೀತಾ ಇದೆ. ಒಟ್ಟಿನಲ್ಲಿ ಮಾರ್ಚ್ ಒಳಗಾಗಿ ಎಲ್ಲಾ ತೆರಿಗೆ ಹಣವನ್ನು ಸಂಗ್ರಹಿಸಲಾಗುವುದು ಅಂತ ಅವರು ತಿಳಿಸಿದ್ರು.

    ಇದೇ ಸಂದರ್ಭದಲ್ಲಿ ರೈತರ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಇವತ್ತಿನ ರೈತ ಮುಖಂಡರೊಂದಿಗೆ ಸಭೆಯಲ್ಲಿ ಪರಿಹಾರ ಸಿಗುವ ವಿಶ್ವಾಸವಿದೆ. ರೈತರ ಹಿತ ನಮ್ಮ ಸರ್ಕಾರಕ್ಕೆ ಬಹಳ ಮುಖ್ಯವಾದದ್ದಾಗಿದೆ. ಬಿಜೆಪಿಯಿಂದ ರೈತರ ಬಗ್ಗೆ ಪಾಠ ಕಲಿಯಬೇಕಿಲ್ಲ. ಹಸಿರು ಕ್ರಾಂತಿ ನೀತಿ ಮಾಡಿದ್ದೇ ಕಾಂಗ್ರೆಸ್. ಯಾರೇ ಬಾಕಿ ಉಳಿಸಿಕೊಂಡಿದ್ದರೂ ರೈತರಿಗೆ ನೀಡಬೇಕಾದ ಹಣ ನೀಡಬೇಕು. ಇಲ್ಲಿ ಶಾಸಕರು ಅಂತ ನೋಡಲ್ಲ ಅವರನ್ನ ಕಾರ್ಖಾನೆಯ ಮಾಲೀಕರು ಅಂತ ನೋಡೋದು. ಬಾಕಿ ಪಾವತಿಸುವ ಬಗ್ಗೆ ಗಡುವ ನೀಡುತ್ತೇವೆ ಅದು ಅವರಿಗೂ ಅನ್ವಹಿಸುತ್ತದೆ ಅಂತ ಅವರು ನುಡಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಜನಪ್ರತಿನಿಧಿಗಳೇ ಕಟ್ತಿಲ್ಲ ಸಾವಿರಾರು ಕೋಟಿ ರೂ. ತೆರಿಗೆ!

    ಜನಪ್ರತಿನಿಧಿಗಳೇ ಕಟ್ತಿಲ್ಲ ಸಾವಿರಾರು ಕೋಟಿ ರೂ. ತೆರಿಗೆ!

    ಬೆಂಗಳೂರು: ಕಂಡಕಂಡವರಿಗೆ ನೀತಿ ಹೇಳುವ ಮಂದಿಯಿಂದ ಬಿಗ್ ದೋಖಾ ನಡೆದಿದ್ದು, ಸಾವಿರಾರು ಕೋಟಿ ರೂಪಾಯಿಗಳ ವಂಚನೆ ಮಾಡಿದ್ದಾರೆ.

    ಜನರಿಗೆ ಮಾದರಿಯಾಗಬೇಕಾದ ಜನಪ್ರತಿನಿಧಿಗಳೇ ಕೋಟಿ ಕೋಟಿ ತೆರಿಗೆ ಕಟ್ಟಿಲ್ಲ. ಜೆಡಿಎಸ್‍ನ ರಾಜ್ಯಸಭಾ ಸದಸ್ಯ ಡಿ.ಕುಪೇಂದ್ರ ರೆಡ್ಡಿ ಕೋಟಿ ಕೋಟಿ ರೂ. ತೆರಿಗೆ ಉಳಿಸಿಕೊಂಡಿದ್ದು, ರಿಯಲ್ ಎಸ್ಟೇಟ್ ಕುಬೇರ ಬರೋಬ್ಬರಿ ಕಳೆದ 8 ವರ್ಷದಿಂದ ಆಸ್ತಿ ತೆರಿಗೆ ಕಟ್ಟಿಲ್ಲ. ಕುಪೇಂದ್ರ ರೆಡ್ಡಿ ಬರೋಬ್ಬರಿ ಮೂರೂವರೆ ಕೋಟಿ ರೂಪಾಯಿ ತೆರಿಗೆ ಕಟ್ಟಬೇಕಿದೆ.

    ಮಾಜಿ ಸಚಿವ ಎಂಆರ್ ಸೀತಾರಾಮ್ ಸೋದರ 6 ಮುಕ್ಕಾಲು ಕೋಟಿ ರೂ., ರಾಮಯ್ಯ ರಸ್ತೆ ಆಸ್ತಿಯ ತೆರಿಗೆಯನ್ನು ಎಂ.ಆರ್ ಕೋದಂಡರಾಮ್ ಕಟ್ಟದೇ ಸುಮ್ಮನಿದ್ದಾರೆ. ಇತ್ತ ಮುಖೇಶ್ ಅಂಬಾನಿ ಬೀಗರ ಸಂಬಂಧಿ ಪ್ರಿಮಲ್ ಸಂಸ್ಥೆಯಿಂದಲೂ ಬಿಗ್ ದೋಖವಾಗಿದ್ದು, 9 ವರ್ಷಗಳಿಂದ 49 ಕೋಟಿ ರೂ. ತೆರಿಗೆಯನ್ನು ಪ್ರಿಮಲ್ ಸಂಸ್ಥೆ ಬಾಕಿ ಉಳಿಸಿಕೊಂಡಿದೆ.

    ಕೆ.ಜೆ ಜಾರ್ಜ್         ಡಿ.ಕುಪೇಂದ್ರ ರೆಡ್ಡಿ                 ಗರುಡಚಾರ್

    ಬರೀ ಇವರಷ್ಟೇ ಅಲ್ಲದೇ ಬಾಕಿ ಉಳಿಸಿಕೊಂಡ ದೊಡ್ಡವರ ಪಟ್ಟಿ ತುಂಬಾ ದೊಡ್ಡದಿದೆ:
    * ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ಶಾಸಕ ಎನ್‍ಎ ಹ್ಯಾರಿಸ್ 3.5 ಕೋಟಿ ರೂ. ಆಸ್ತಿ ತೆರಿಗೆ
    * ದೋಸ್ತಿ ಸರ್ಕಾರದ ಸಚಿವ ಕೆ.ಜೆ ಜಾರ್ಜ್ ಕೂಡ 54 ಲಕ್ಷ ರೂ. ಆಸ್ತಿ ತೆರಿಗೆ
    * ಎಂಬಸ್ಸಿ ಗ್ರೂಪ್‍ನ ಗಾಲ್ಫ್ ಲಿಂಕ್ಸ್ ಸಾಫ್ಟ್ ವೇರ್ ಪಾರ್ಕ್ ಆಸ್ತಿಗೆ 7 ವರ್ಷದಿಂದ ಕಟ್ಟಿಲ್ಲ ತೆರಿಗೆ
    * ಶಾಸಕ ಉದಯ್ ಗರುಡಚಾರ್ ಕಟ್ಟಬೇಕಿದೆ ಸರಿಸುಮಾರು 5 ಕೋಟಿ ರೂ. ಆಸ್ತಿ ತೆರಿಗೆ
    * ಗರುಡಾಚಾರ್ ಮಾಲೀಕತ್ವದ ಮವೇರಿಕ್ ಹೋಲ್ಡಿಂಗ್ಸ್ ಆಸ್ತಿಗೆ 7 ವರ್ಷದಿಂದ ಕಟ್ಟಿಲ್ಲ ಟ್ಯಾಕ್ಸ್
    * 6 ವರ್ಷಗಳಿಂದ 16 ಕೋಟಿ ರೂ. ಬಾಕಿ ಉಳಿಸಿಕೊಂಡ ಸಲಾರ್ ಪುರಿಯಾ ಕಂಪನಿ
    * ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆಪ್ತ ಕೃಷ್ಣನ್ ಒಡೆತನ ನುಜಿವೀಡು ಸೀಡ್ಸ್ ಉಳಿಸಿಕೊಂಡಿದೆ 12 ಕೋಟಿ ರೂ. ಬಾಕಿ
    * ದಯಾನಂದ ಸಾಗರ್ ಇನ್ಸ್ ಟಿಟ್ಯೂಟ್ ಕಟ್ಟಬೇಕಿದೆ 1 ಕೋಟಿ 85 ಲಕ್ಷ ರೂ. ಆಸ್ತಿ ತೆರಿಗೆ

    ಸರ್ಕಾರಿ ಸಂಸ್ಥೆಗಳೂ ಕೂಡ ಬಿಬಿಎಂಪಿಗೆ ತೆರಿಗೆ ಪಾವತಿಸಿಲ್ಲ:
    * ಫುಡ್ ಕಾರ್ಪೋರೆಷನ್ ಆಪ್ ಇಂಡಿಯಾದಿಂದ 51 ಲಕ್ಷ ರೂ. ಆಸ್ತಿ ತೆರಿಗೆ ಬಾಕಿ
    * ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಕಟ್ಟಬೇಕಿದೆ 1 ಕೋಟಿ ರೂ. ಆಸ್ತಿ ತೆರಿಗೆ
    * ಕೆಎಸ್‍ಆರ್‍ಟಿಸಿ 10 ವರ್ಷದಿಂದ ತೆರಿಗೆ ಕಟ್ಟಿಲ್ಲ. ಆ ಮೊತ್ತ 1 ಕೋಟಿ ರೂ.ಗೂ ಹೆಚ್ಚು
    * ಕರ್ನಾಟಕ ಕನ್ಸಲ್ಟೇಷನ್ ಎಂಡಿ ಮತ್ತು ಅಧ್ಯಕ್ಷ ವಸತಿಯ ತೆರಿಗೆ ಬಾಕಿ 1 ಕೋಟಿ 39 ಲಕ್ಷ ರೂ.
    * ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಅಂಡ್ ಕಾಮರ್ಸ್ ಕಟ್ಟಬೇಕಿದೆ 48 ಲಕ್ಷ ರೂ.

    ಬರೀ ಇಷ್ಟೇ ಅಲ್ಲದೇ ನೂರಾರು ಸರ್ಕಾರಿ ಸಂಸ್ಥೆಗಳೇ ಕೋಟಿ ಕೋಟಿ ತೆರಿಗೆ ಕಟ್ಟಿಲ್ಲ. ಇದರಿಂದ ಬಿಬಿಎಂಪಿ ಆರ್ಥಿಕವಾಗಿ ನೆಲಕಚ್ಚಲು ಕಾರಣವಾಗಿದೆ. ಇದೆಲ್ಲವನ್ನು ಬಿಬಿಎಂಪಿ ಪ್ರಶ್ನೆ ಮಾಡಿದ್ರೆ, ಅವರು ಈಗಾಗಲೇ ತರಿಗೆ ಹಣವನ್ನು ಕಟ್ಟಿದ್ದಾರೆ. ಸರಿಯಾದ ಚಲನ್ ಕೊಟ್ಟಿಲ್ಲ. ಆನ್‍ಲೈನ್‍ನಲ್ಲಿ ಕಟ್ಟಿರುವುದರಿಂದ ಸರಿಯಾದ ರೀತಿಯಲ್ಲಿ ದಾಖಲಾತಿಯನ್ನು ತೋರಿಸುತ್ತಿಲ್ಲ ಎಂದು ಕುಂಟು ನೆಪವನ್ನು ಹೇಳಿದೆ.

    ಅಧಿಕಾರಿಗಳೇ ಕೋಟಿ ಕೋಟಿ ತೆರಿಗೆಯನ್ನು ಕಟ್ಟದೇ ಉಳಿಸಿಕೊಂಡಿರುವುದರಿಂದ ಇವರು ರಾಜಕೀಯವಾಗಿ ದೊಡ್ಡವರ ಬೆಂಬಲವನ್ನು ಹೊಂದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್..!

    ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್..!

    ಬೆಂಗಳೂರು: ಅಯ್ಯಪ್ಪನ ಸನ್ನಿಧಾನದ ದರ್ಶನ ಪಡೆಯಲು ಪ್ರತಿ ವರ್ಷದಂತೆ ಈ ವರ್ಷ ತೆರಳುತ್ತಿರುವ ಕರ್ನಾಟಕದ ಭಕ್ತರಿಗೆ ಶಾಕಿಂಗ್ ಮೇಲೆ ಶಾಕಿಂಗ್ ನ್ಯೂಸ್ ಸಿಗುತ್ತಿದೆ.

    ಒಂದು ಕಡೆ ಅಯ್ಯಪ್ಪನ ಸನ್ನಿಧಾನದಲ್ಲಿ ಮಹಿಳೆಯ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯ ವಾತಾವರಣ ಇದ್ದರೆ, ಇನ್ನೊಂದಡೆ ಹಳೆ ಬಾಕಿ ಎಲ್ಲಾ ಸೇರಿಸಿ ಕೇರಳ ಸರ್ಕಾರ ರಾಜ್ಯದ ವಾಹನಗಳಿಗೆ ವಿಪರೀತ ಸುಂಕ ವಸೂಲಿಗೆ ನಿಂತುಬಿಟ್ಟಿದೆ.

    2014 ರಿಂದ ಸತತ ಮೂರು ವರ್ಷಗಳ ಕಾಲ ಕರ್ನಾಟಕಕ್ಕೆ ವಾಹನ ಸುಂಕ ವಿನಾಯಿತಿ ಇತ್ತು. ಆದರೆ ಈಗ ಏಕಾಏಕಿ ಕೋರ್ಟ್ ನಿಂದ ಆದೇಶ ಮಾಡಿಕೊಂಡು ಬಂದಿರುವ ಕೇರಳ ಸರ್ಕಾರ ಕರ್ನಾಟಕದ ಅಯ್ಯಪ್ಪ ಭಕ್ತರು ಬರುವ ವಾಹನಗಳಿಗೆ ಹಿಗ್ಗಾಮುಗ್ಗಾ ತೆರಿಗೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಅಪ್ಪಿ-ತಪ್ಪಿ ಕಳೆದ ಎರಡು ವರ್ಷಗಳ ಹಿಂದೆ ವಾಹನ ಕೇರಳಕ್ಕೆ ಹೋಗಿದ್ರೆ ಆ ವಾಹನಗಳಿಗೆ ಒಂದು ಲಕ್ಷದಿಂದ ಒಂದೂವರೆ ಲಕ್ಷದಷ್ಟು ದಂಡ ಹಾಕುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಕೇರಳ ಪೊಲೀಸರು ಈಗ ಹಳೆ ಬ್ಯಾಲೆನ್ಸ್ ವಾಹನದ ಸುಂಕವನ್ನು ವಸೂಲಿ ಮಾಡುತ್ತಿದ್ದಾರೆ. ಈಗಾಗಲೇ ಕರ್ನಾಟಕದ ವಾಹನಗಳು ದಂಡ ಕಟ್ಟಲಾರದೆ ಇದ್ದಿದ್ದಕ್ಕೆ ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

    ತೆರಿಗೆ ಭಯಕ್ಕೆ ಟೂರಿಸ್ಟ್ ವಾಹನಗಳು ಕೇರಳಕ್ಕೆ ಎಂಟ್ರಿಯಾಗೋದಕ್ಕೆ ಹಿಂದೇಟು ಹಾಕುತ್ತಿವೆ. ಇನ್ನೊಂದಡೆ ಕರ್ನಾಟಕದ ಭಕ್ತರ ಸಂಖ್ಯೆಯೂ ಇಳಿಮುಖಗೊಂಡಿದೆ. ಇತ್ತ ಬಸ್‍ಗಳು ಕೂಡ ಶಬರಿಮಲೆಗೆ ಹೋಗೋದಕ್ಕೆ ಹಿಂದೇಟು ಹಾಕುತ್ತಿವೆ ಎಂದು ದಂಡ ಕಟ್ಟಿದ್ದ ರಮೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಾರಿಗೆ ಇಲಾಖೆ ನಿರ್ಲಕ್ಷ್ಯ – ಪ್ರತಿದಿನ ಲಕ್ಷಗಟ್ಟಲೇ ಆದಾಯ ನಷ್ಟ

    ಸಾರಿಗೆ ಇಲಾಖೆ ನಿರ್ಲಕ್ಷ್ಯ – ಪ್ರತಿದಿನ ಲಕ್ಷಗಟ್ಟಲೇ ಆದಾಯ ನಷ್ಟ

    ಕಾರವಾರ: ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನಗಳು ತೆರಳಬೇಕಿದ್ದರೆ ಆಯಾ ರಾಜ್ಯದ ರಸ್ತೆ ತೆರಿಗೆಯನ್ನು ಗಡಿ ಭಾಗದಲ್ಲಿ ಕಡ್ಡಾಯವಾಗಿ ಕಟ್ಟಲೇಬೇಕು. ಆದರೆ ಕಾರವಾರ ಗಡಿಭಾಗದಲ್ಲಿ ಇದು ಫಾಲೋ ಆಗುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಬರಬೇಕಾದ ಲಕ್ಷಗಟ್ಟಲೇ ರಸ್ತೆ ತೆರಿಗೆ ವಂಚನೆಯಾಗುತ್ತಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿ ಕರ್ನಾಟಕ ಸರ್ಕಾರವು ತೆರಿಗೆ ವಸೂಲಿ, ಅನಧಿಕೃತ ಸಾಗಾಟಗಳ ತಡೆಗಾಗಿ ಅರಣ್ಯ ಇಲಾಖೆ, ಭೂ ಮತ್ತು ಗಣಿವಿಜ್ಞಾನ ಇಲಾಖೆ, ಪೊಲೀಸ್ ಹೀಗೆ ಹಲವು ಚೆಕ್‍ಪೋಸ್ಟ್ ಗಳನ್ನು ನಿರ್ಮಿಸಿದೆ. ಆದರೆ ರಸ್ತೆ ತೆರಿಗೆ ವಸೂಲಿಗಾಗಿ ಆರ್.ಟಿ.ಓ ಕಚೇರಿ ಮಾತ್ರ ಯಾವುದೇ ಕೇಂದ್ರವನ್ನು ತೆರೆದಿಲ್ಲ. ಇದರಿಂದ ಗೋವಾ ರಾಜ್ಯದಿಂದ ಬರುವ ವಾಣಿಜ್ಯ ಪ್ರವಾಸಿ ವಾಹನಗಳು ಪರ್ಮಿಟ್ ತೆಗೆದುಕೊಳ್ಳದೇ ತೆರಿಗೆ ವಂಚಿಸಿ ಕರ್ನಾಟಕ್ಕೆ ಪ್ರವೇಶ ಪಡೆಯುತ್ತಿದೆ. ಇಲ್ಲಿನ ಇಲಾಖೆ ಅಧಿಕಾರಿಗಳ ವರ್ತನೆಯಿಂದ ಕರ್ನಾಟಕ ಸರ್ಕಾರಕ್ಕೆ ಬರಬೇಕಾದ ಆದಾಯ ಕೈತಪ್ಪಿ ಹೋಗುತ್ತಿದೆ.

    ಕರ್ನಾಟಕದಿಂದ ಗೋವಾ ಗಡಿಗೆ ಯಾವುದೇ ವಾಣಿಜ್ಯ ವಾಹನಗಳು ತೆರಳಿದರೆ ತಪ್ಪದೇ ಪರ್ಮಿಟ್ ತೆಗೆದುಕೊಂಡು ಹಣ ಕಟ್ಟಬೇಕು. ಇಲ್ಲದಿದ್ದರೆ ಅಲ್ಲಿನ ಸರ್ಕಾರ ಪರ್ಮಿಟ್ ಇಲ್ಲದ ವಾಹನಗಳಿಗೆ ಐದರಿಂದ ನಲವತ್ತು ಸಾವಿರದವರೆಗೆ ದಂಡ ವಿಧಿಸುತ್ತದೆ. ಕರ್ನಾಟಕದಲ್ಲಿಯೂ ಇದೇ ನಿಯಮಗಳು ಜಾರಿಯಲ್ಲಿದೆ. ಹೊರ ರಾಜ್ಯದಿಂದ ಆಗಮಿಸುವ ಬಸ್‍ಗಳಿಗೆ ಸೀಟಿನ ಲೆಕ್ಕದಲ್ಲಿ ಪರ್ಮಿಟ್ ಪಡೆದು ಹಣ ಕಟ್ಟಬೇಕು, ಗೋವಾದ ಗಡಿಯಲ್ಲಿಯೇ ಆರ್.ಟಿ.ಓ ಕಚೇರಿ ಇದ್ದು, ದಿನದ 24 ಗಂಟೆ ತೆರೆದಿರುತ್ತದೆ. ಹೀಗಾಗಿ ಯಾರೂ ಕೂಡ ವಂಚಿಸಿ ಹೋಗಲು ಸಾಧ್ಯವಿಲ್ಲ. ಕರ್ನಾಟಕದ ಗಡಿಯಲ್ಲಿ ಆರ್.ಟಿ.ಓ ಕಚೇರಿಯಾಗಲಿ, ಸಿಬ್ಬಂದಿಯಾಗಲಿ ಇರದೇ ಇರುವುದರಿಂದ ತೆರಿಗೆ ಹಣ ವಂಚಿಸಿ ಹಲವರು ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ.

    ಉತ್ತರ ಕನ್ನಡ ಪ್ರವಾಸಿ ತಾಣವಾಗಿರುವುದರಿಂದ ಪ್ರತಿ ದಿನ ಗೋವಾ, ಮಹಾರಾಷ್ಟ ಸೇರಿ ಹಲವು ರಾಜ್ಯಗಳಿಂದ ನೂರಾರು ಬಾಡಿಗೆ ವಾಹನಗಳು ಆಗಮಿಸುತ್ತವೆ. ಬಹುತೇಕ ವಾಹನಗಳು ಪರ್ಮಿಟ್ ಪಡೆಯದೇ ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿವೆ. ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಎಚ್ಚೆತ್ತು ಹೊರರಾಜ್ಯದ ವಾಹನ ಸವಾರರಿಂದ ಆಗುತ್ತಿರುವ ತೆರಿಗೆ ವಂಚನೆಯನ್ನು ತಪ್ಪಿಸಿಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀವು ಕಟ್ತಿರೋ ಟ್ಯಾಕ್ಸ್ ಸರ್ಕಾರಕ್ಕೆ ಹೋಗ್ತಿಲ್ಲ – ಸಾವಿರ ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ

    ನೀವು ಕಟ್ತಿರೋ ಟ್ಯಾಕ್ಸ್ ಸರ್ಕಾರಕ್ಕೆ ಹೋಗ್ತಿಲ್ಲ – ಸಾವಿರ ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ

    ಬೆಂಗಳೂರು: ಅಭಿವೃದ್ಧಿ ಮಾಡಲಿ ಅಂತ ಪ್ರತಿ ವರ್ಷ ಕಟ್ಟುತ್ತಿರುವ ತೆರಿಗೆಯನ್ನ ಬಿಬಿಎಂಪಿ ಸಂಬಂಧಿಸಿದ ಇಲಾಖೆಗಳಿಗೆ ಪಾವತಿಸಿಯೇ ಇಲ್ಲ. ಆ ಮೂಲಕ ರಾಜ್ಯ ಸರ್ಕಾರ ಹಾಗೂ ಬೆಂಗಳೂರಿಗರಿಗೆ ಪಾಲಿಕೆ ವಂಚನೆ ಎಸಗಿದೆ.

    ಬೆಂಗಳೂರನ್ನ ಅಭಿವೃದ್ಧಿ ಮಾಡುವುದು ಬಿಬಿಎಂಪಿಯ ಆದ್ಯ ಕರ್ತವ್ಯ. ಇದಕ್ಕಾಗಿ ಸಾರ್ವಜನಿಕರಿಂದ ಇಂತಿಷ್ಟು ತೆರಿಗೆ ಅಂತನೂ ಸಂಗ್ರಹ ಮಾಡುತ್ತಿದೆ. ಆ ಮೂಲಕ ರಸ್ತೆ, ನೀರು, ಬೆಳಕು ನೀಡುವ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಹೆಲ್ತ್ ಸೆಸ್, ಬೆಗ್ಗರ್ ಸೆಸ್, ಲೈಬ್ರರಿ ಸೆಸ್ ಅಂತನೂ ಹಣ ಸಂಗ್ರಹಿಸುತ್ತಿದೆ. ಆದರೆ ಹೀಗೆ ಸಂಗ್ರಹ ಮಾಡಿದ ಹಣ ಸಂಬಂಧಪಟ್ಟ ಇಲಾಖೆಗೆ ನೀಡದೆ ಪಾಲಿಕೆ ವಂಚನೆ ಮಾಡಿದೆ.

    ಹೌದು ಇತ್ತೀಚೆಗೆ ಬಿಡುಗಡೆಯಾದ ಆಡಿಟ್ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದ್ದು, ಕಳೆದ ಐದು ವರ್ಷದಲ್ಲಿ ಬರೋಬ್ಬರಿ 1293 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.

    ಬಿಬಿಎಂಪಿ ಉಳಿಸಿಕೊಂಡ ತೆರಿಗೆ ಬಾಕಿ
    * ಹೆಲ್ತ್ ಸೆಸ್ – 950.79 ಕೋಟಿ
    * ಲೈಬ್ರರಿ ಸೆಸ್ – 231.42 ಕೋಟಿ
    * ಬೆಗ್ಗರ್ ಸೆಸ್ – 111.37 ಕೋಟಿ
    * ಬಾಕಿಯಿರೋ ಹಣ – 1293 ಕೋಟಿ

    ಬಿಬಿಎಂಪಿ ಕಳೆದ 5 ವರ್ಷಗಳಲ್ಲಿ ವಿವಿಧ ಇಲಾಖೆಗಳಿಗೆ ಪಾವತಿಸಬೇಕಾದ ಹಣವನ್ನ ಪಾವತಿಸಿಲ್ಲ. ಸಂಗ್ರಹ ಮಾಡಲಾಗಿರುವ 950 ಕೋಟಿ ರೂಪಾಯಿ ಹೆಲ್ತ್ ಸೆಸ್ ನಲ್ಲಿ ಒಂದೇ ಒಂದು ರೂಪಾಯಿಯನ್ನ ಆಯಾ ಇಲಾಖೆಗೆ ಪಾವತಿಸಿಲ್ಲ. ಲೈಬ್ರರಿ ಸೆಸ್ 380 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ಅದರಲ್ಲಿ 231 ಕೋಟಿ ಬಾಕಿ ಉಳಿಸಿಕೊಂಡಿದೆ. 190 ಕೋಟಿ ರೂಪಾಯಿ ಬೆಗ್ಗರ್ ಸೆಸ್ ನಲ್ಲಿ 111 ಕೋಟಿ ಪಾವತಿಸಿಲ್ಲ. ಒಟ್ಟಾರೆ ಬಿಬಿಎಂಪಿ 1,293 ಕೋಟಿಯಷ್ಟು ಹಣವನ್ನ ಸಂಬಂಧಿಸಿದ ಇಲಾಖೆಗಳಿಗೆ ಪಾವತಿಸಿಲ್ಲ ಎಂದು ಬಿಬಿಎಂಪಿ ವಿಪಕ್ಷದ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಶಿವರಾಜ್, ಅಷ್ಟೊಂದು ಹಣ ಬಾಕಿ ಉಳಿಸಿಕೊಂಡಿಲ್ಲ ಅಂತ ತೇಪೆ ಹಚ್ಚೋಕೆ ನೋಡುತ್ತಿದ್ದಾರೆ. ವರದಿ ತರಿಸಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

    ಸರ್ಕಾರಕ್ಕೆ ತೆರಿಗೆ ಕಟ್ಟುವ ಮಾತೇ ಇಲ್ಲ. ಬಿಬಿಎಂಪಿ ಸಹ ಶಾಲಾ ಕಾಲೇಜು ಹಾಗೂ ಆಸ್ಪತ್ರೆಗಳನ್ನು ನಡೆಸುತ್ತಿಲ್ಲವಾ ಅಂತ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

    ಸರ್ಕಾರದಿಂದ ಹಣ ಬಂದಿಲ್ಲ. ಹೀಗಾಗಿ ಅಭಿವೃದ್ಧಿ ಆಗುತ್ತಿಲ್ಲ ಅಂತ ಹೇಳುವ ಪಾಲಿಕೆ ಈಗಲಾದರೂ ತೆರಿಗೆದಾರರಿಂದ ಸಂಗ್ರಹಿಸಿದ ಹಣವನ್ನ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಮಾತು ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv