Tag: Tattoo

  • ಅಭಿಮಾನಿ ಮೈ ಮೇಲೆ ನಟ ದರ್ಶನ್

    ಅಭಿಮಾನಿ ಮೈ ಮೇಲೆ ನಟ ದರ್ಶನ್

    ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟ ಹೆಸರು ಅಥವಾ ಮೊದಲ ಅಕ್ಷರವನ್ನು ತಮ್ಮ ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾವಚಿತ್ರವನ್ನೇ ತನ್ನ ಮೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಆನಂದ ರಾಮ್ ನಟ ದರ್ಶನ್ ಅವರ ಭಾವಚಿತ್ರವನ್ನು ತನ್ನ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಮೂಲಕ ಆನಂದ್ ರಾವ್ ದರ್ಶನ್ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ನಟ ದರ್ಶನ್ ಹುಟ್ಟುಹಬ್ಬ ಮುಂದಿನ ತಿಂಗಳು 16 ರಂದು ಇದೆ. ಆದರೆ ಅಭಿಮಾನಿ ಆನಂದ್ ರಾಮ್ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ದರ್ಶನ್ ಅವರಿಗೆ ಈಗಲೇ ಉಡುಗೊರೆ ನೀಡಿದ್ದಾರೆ. ದರ್ಶನ್ ಅಭಿನಯಿಸಿದ್ದ ಸಿನಿಮಾವೊಂದರಲ್ಲಿ ಬೀಡಿ ಸೇದುತ್ತಿದ್ದ ಫೋಟೋವನ್ನು ಅಭಿಮಾನಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೊನೆಯಲ್ಲಿ ‘ಯಜಮಾನ್ರು’ ಎಂಬ ಅಡಿ ಬರಹವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಆನಂದ್ ‘ಕರುನಾಡ ಕುಲದೀಪ ದರ್ಶನ್ ತೂಗುದೀಪ ಅಭಿಮಾನಿ’ ಸಂಘದ ಅಧ್ಯಕ್ಷರಾಗಿದ್ದು, ಈ ಸಂಘದ ಮೂಲಕ ಆನಂದ್ ದರ್ಶನ್ ಅಭಿಮಾನಿಗಳೊಂದಿಗೆ ನಟನಿಗಾಗಿ ಕೆಲಸಗಳನ್ನು ಮಾಡುತ್ತಾರೆ. ಆನಂದ್ ರಾವ್ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದರ್ಶನ್ ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಶೇರ್ ಮಾಡುತ್ತಿದ್ದಾರೆ.

    ಟ್ಯಾಟೂ ಹಾಕಿಸಿಕೊಂಡಿರುವ ಆನಂದ್ ಜೊತೆ ಟ್ಯಾಟೂ ಹಾಕಿರುವ ಶಿವರಾಜ್ ಕೂಡ ದರ್ಶನ್ ಅಭಿಮಾನಿಯಾಗಿದ್ದಾರೆ. ಅಭಿಮಾನಿ ಹಾಕಿಸಿಕೊಂಡಿದ್ದ ದರ್ಶನ್ ಟ್ಯಾಟೂ ನೋಡಿ ನಟ ಅಭಿಷೇಕ್ ಕೂಡ ಆಶ್ಚರ್ಯ ಪಟ್ಟಿದ್ದಾರೆ. ಈ ಟ್ಯಾಟೂ ಸುಮಾರು 1.5 ಫೀಟ್ ಉದ್ದ, 1.5 ಅಗಲ ಇದೆ.

    https://twitter.com/CSDSK1/status/1090099525383901184

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಟ್ಯಾಟೂ ಮೂಲಕ 21 ದಿನದ ಬಳಿಕ ಆರೋಪಿಗಳು ಅಂದರ್

    ಟ್ಯಾಟೂ ಮೂಲಕ 21 ದಿನದ ಬಳಿಕ ಆರೋಪಿಗಳು ಅಂದರ್

                  ಹನುಮಂತಪ್ಪ                                  ತಿಪ್ಪೇಸ್ವಾಮಿ                                           ರಂಗಸ್ವಾಮಿ

    ದಾವಣಗೆರೆ: ಜಿಲ್ಲೆಯ ಶಿರಮಗೊಂಡನಹಳ್ಳಿ ಬಳಿ ಮಾನಸಿಕ ಅಸ್ವಸ್ಥನನ್ನು ಕುಟುಂಬದವರೇ ಕೊಲೆ ಮಾಡಿ ಭದ್ರ ನಾಲೆಗೆ ಎಸೆದಿದ್ದು, ಕೊಲೆ ಮಾಡಿದ್ದ 21 ದಿನಗಳ ಬಳಿಕ ಟ್ಯಾಟೂ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ತೋಪೆನಹಳ್ಳಿಯ ಜಗದೀಶ್ ಕೊಲೆಯಾದ ದುರ್ದೈವಿ. ಇದೇ ತಿಂಗಳ 2ರಂದು ಕೊಲೆ ಮಾಡಲಾಗಿತ್ತು. ಆದರೆ 20 ರಂದು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಬಳಿ ಮೃತ ದೇಹ ಪತ್ತೆಯಾಗಿತ್ತು. ಇಂದು ತನಿಖೆಯ ನಂತರ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.

     ಕೊಲೆಯಾದ ಜಗದೀಶ್

    ಏನಿದು ಪ್ರಕರಣ?
    ಅಕ್ಟೋಬರ್ 20ರಂದು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಬಳಿ ಕೈ ಕಟ್ಟಿದ ಮೃತ ದೇಹ ಪತ್ತೆಯಾಗಿತ್ತು. ವಿದ್ಯಾನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಮೃತ ವ್ಯಕ್ತಿಯ ಎರಡು ಕೈಗಳ ತೋಳಿನ ಮೇಲೆ ಅರ್ಜುನ್, ಬಾಲಾಜಿ ಎಂಬ ಹೆಸರಿನ ಹಚ್ಚೆ ಪತ್ತೆಯಾಗಿದೆ. ಬಳಿಕ ಜಗದೀಶ್ ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿತ್ತು.

    ಟ್ಯಾಟೂ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ನಡೆಸಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯಾದವ ಮಾನಸಿಕ ಅಸ್ವಸ್ಥನಾಗಿದ್ದು, ಕುಟುಂಬದವರ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ತಂದೆ ಹನುಮಂತಪ್ಪ, ಅಣ್ಣ ರಂಗಸ್ವಾಮಿ, ಬಾಮೈದ ತಿಪ್ಪೇಸ್ವಾಮಿ ಕೊಲೆ ಮಾಡಿ ಭದ್ರಾ ನಾಲೆಗೆ ಎಸೆದಿದ್ದಾರೆ. ತನಿಖೆ ನಡೆಸಿದಾಗ ಕೊಲೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    ಮೃತ ಜಗದೀಶ್ ತನ್ನ ಮಕ್ಕಳ ಹೆಸರಾದ ಬಾಲಾಜಿ ಮತ್ತು ಅರ್ಜುನ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ತನಿಖೆ ನಡೆಸಿ ಕೊಲೆ ಅರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟ್ಯಾಟೂಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ಭೂಪ

    ಟ್ಯಾಟೂಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ಭೂಪ

    ಲಂಡನ್: ವಿದೇಶಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಟ್ರೆಂಡ್. 25 ರಿಂದ 39 ವಯಸ್ಸಿನ ಶೇ.30ರಷ್ಟು ಜನರು ಸಾಮನ್ಯವಾಗಿ ಒಂದೆರೆಡು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ ಎಂದು ದತ್ತಾಂಶಗಳು ಹೇಳುತ್ತವೆ. ಕ್ರಿಸ್ ಡಾಲ್ಜೆಲ್ಲ್ ಎಂಬಾತ ಟ್ಯಾಟೂ ಹಾಕಿಸಿಕೊಳ್ಳುವುದಕ್ಕಾಗಿ 28,000 (27 ಲಕ್ಷ ರೂ.) ಖರ್ಚು ಮಾಡಿದ್ದಾರೆ.

    33 ವರ್ಷದ ಕ್ರಿಸ್ ಇದೂವರೆಗೂ 600 ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ. ಅಂದರೆ ಒಂದೇ ಸಾರಿ ಎಲ್ಲ ಟ್ಯಾಟೂ ಹಾಕಿಕೊಂಡಿಲ್ಲ. ತಮ್ಮ 16ನೇಯ ವಯಸ್ಸಿನಿಂದ ಇಂದಿನವರೆಗೂ ಮುಖ, ಕಣ್ಣು, ತಲೆ ಸೇರಿದಂತೆ ದೇಹದ ಇತರೆ ಭಾಗಗಳಲ್ಲಿ ಭಿನ್ನ ಭಿನ್ನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈಗಾಗಲೇ ಟ್ಯಾಟೂ ಸಂಖ್ಯೆ 600ಕ್ಕೂ ತಲುಪಿದರೂ, ಮುಂದಿನ ವಾರ ಮತ್ತೊಂದು ಹಚ್ಚೆ ಹಾಕಿಸಿಕೊಳ್ಳಲಿದ್ದೇನೆ ಅಂತಾ ಕ್ರಿಸ್ ಹೇಳಿದ್ದಾರೆ.

    ಬಾಣಸಿಗನಾಗಿ ಕೆಲಸ ಮಾಡಿಕೊಂಡಿರುವ ಕ್ರಿಸ್‍ಗೆ ಇಡೀ ದೇಹವನ್ನು ಟ್ಯಾಟೂಗಳಿಂದ ಮುಚ್ಚಬೇಕು ಎಂಬ ಆಸೆ. ದೇಹದಲ್ಲಿ ಚರ್ಮ ಖಾಲಿಯಾಗಿ ಉಳಿದುಕೊಂಡಿದ್ದನ್ನು ಕಂಡ ಕೂಡಲೇ ವಿಭಿನ್ನ ಟ್ಯಾಟೂ ಹಾಕಿಕೊಳ್ಳುವುದರ ಕುರಿತು ಆಲೋಚಿಸುತ್ತಾರಂತೆ.

    ಜನರು ನನ್ನ ಟ್ಯಾಟೂಗಳನ್ನು ನೋಡಿ ಏನು ಅಂದುಕೊಳ್ಳುತ್ತಾರೆ ಎಂಬ ಚಿಂತೆ ನನಗಿಲ್ಲ. ದೇಹದ ತುಂಬ ಟ್ಯಾಟೂ ಹಾಕಿಸಿಕೊಳ್ಳುವುದು ನನ್ನ ಆಸೆ. ರಸ್ತೆಯಲ್ಲಿ ನಾನು ನಡೆದು ಹೋಗುವಾಗ ಜನರು, ಏ.. ಅವನ ಮುಖದ ಮೇಲಿನ ಟ್ಯಾಟೂ ನೋಡು ಅಂತಾ ಟೀಕೆ ಟಿಪ್ಪಣಿಗಳನ್ನು ಮಾಡಲು ಆರಂಭಿಸುತ್ತಾರೆ. ಕಣ್ಣಿನ ರಪ್ಪೆಗಳ ಮೇಲೆ ಹಚ್ಚೆ ಹಾಕಿಸಿಕೊಂಡಾಗ ಮೂರು ದಿನ ನಾನು ಅಂಧನಾಗಿ ಬದುಕಿದ್ದೇನೆ. ಟ್ಯಾಟೂ ಹಾಕಿಸಿಕೊಳ್ಳುವಾಗಿನ ನೋವು ಏನು ಎಂಬುದರ ನನಗೆ ಮಾತ್ರ ಗೊತ್ತು. ಹಾಗಾಗಿ ಜನರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕ್ರಿಸ್ ಹೇಳುತ್ತಾರೆ.

    ಮುಂದೆ ನನ್ನ ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ನನ್ನ ಟ್ಯಾಟೂಗಳಿಂದ ತೊಂದರೆಯಾದ್ರೆ, ಎಲ್ಲ ಹಚ್ಚೆಗಳನ್ನು ಲೇಸರ್ ಚಿಕಿತ್ಸೆಯಿಂದ ತೆಗೆದುಕೊಳ್ಳುತ್ತೇನೆ ಎಂದು ಕ್ರಿಸ್ ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮೂಲ್ಯ ಬೆನ್ನೇರಿದ ಹೊಸ ಖುಷಿ!

    ಅಮೂಲ್ಯ ಬೆನ್ನೇರಿದ ಹೊಸ ಖುಷಿ!

    ಬೆಂಗಳೂರು: ಮದುವೆಯಾದ ನಂತರ ಅಮೂಲ್ಯ ಚಿತ್ರರಂಗದಿಂದ ದೂರ ನಿಂತಿದ್ದರೂ ನಾನಾ ಕಾರಣಗಳಿಂದ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗಷ್ಟೇ ಪತಿಯೊಂದಿಗೆ ವಿದೇಶ ಸಂಚಾರವನ್ನೂ ಮಾಡಿ ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಹಂಚಿಕೊಂಡಿದ್ದವರು ಅಮೂಲ್ಯ. ಇದೀಗ ಮತ್ತೊಂದು ಖುಷಿ ಅವರ ಬೆನ್ನೇರಿಕೊಂಡಿದೆ!

    ಅಮೂಲ್ಯ ಹೊಸಾದೊಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಬೆನ್ನಿನ ಮೇಲೆ ಇತ್ತೀಚೆಗಷ್ಟೇ ಹಾಕಿಸಿಕೊಂಡಿರೋ ಈ ಆಂಕರ್ ಟ್ಯಾಟೂ ಫೋಟೋವನ್ನು ಇನ್ ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಮುಂದೆ ಪ್ರದರ್ಶಿಸಿ ಅಮೂಲ್ಯ ಸಂಭ್ರಮಿಸಿದ್ದಾರೆ.

     

    ಇಂಥಾ ಖುಷಿಗಳ ಮೂಲಕವೇ ಅಮೂಲ್ಯ ಮತ್ತೆ ಚಿತ್ರರಂಗದತ್ತಲೂ ಮುಖ ಮಾಡಿದ್ದಾರೆ. ದರ್ಶನ್ ಅವರ ಚಿತ್ರದಲ್ಲಿ ತಂಗಿಯಾಗಿ ನಟಿಸೋ ಮೂಲಕ ಅಮಾಲ್ಯಾ ನಟನೆಗೆ ಮರಳೋ ಸೂಚನೆಗಳಿವೆ. ಮದುವೆಯಾದ ನಂತರ ಒಂದಷ್ಟು ಕಾಲದ ಬಳಿಕವಾದರೂ ಅಮೂಲ್ಯ ನಟಿಸಲು ಶುರು ಮಾಡುತ್ತಾರೆಂಬ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ಆದರೆ ಅದಾಗಲೇ ಚುನಾವಣೆ ಬಂದಿದ್ದರಿಂದ ಮಾವನ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದ ಅವರು ಇದೀಗ ಪತಿಯೊಂದಿಗೆ ಜಾಲಿ ಟ್ರಿಪ್ಪನ್ನೂ ಮುಗಿಸಿಕೊಂಡು ನಟಿಸಲು ಮನಸು ಮಾಡಿದ್ದಾರೆ.

    ಆದರೆ ಅಮೂಲ್ಯ ಅಭಿಮಾನಿಗಳದ್ದು ಅವರು ಮತ್ತೆ ನಾಯಕಿಯಾಗಿ ಮಿಂಚಬೇಕೆಂಬ ಆಸೆ. ಅಮೂಲ್ಯ ಇದನ್ನು ಮನಗಂಡು ಸಾಕಾರಗೊಳಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bm0LZ3mAkql/?hl=en&taken-by=amulya_moulya

  • ರಾಜ್ಯದಲ್ಲೇ ಮೊದಲು- ಮೋದಿ ಭಾವಚಿತ್ರವನ್ನು ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ!

    ರಾಜ್ಯದಲ್ಲೇ ಮೊದಲು- ಮೋದಿ ಭಾವಚಿತ್ರವನ್ನು ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ!

    ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗ್ತಿದೆ. ರಾಷ್ಟ್ರೀಯ ಪಕ್ಷದ ನಾಯಕರು ರಾಜ್ಯದ ಕಡೆ ಮುಖ ಮಾಡಿದ್ದಾರೆ. ಈ ಮಧ್ಯೆ ಅಭಿಮಾನಿಯೊಬ್ಬರು ಮೋದಿ ಮೇಲಿನ ಅಭಿಮಾನವನ್ನು ತೋರಿಸಲು ರೆಡಿಯಾಗಿದ್ದು, ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿಯವರನ್ನು ವಿಭಿನ್ನವಾಗಿ ಸ್ವಾಗತಿಸಲು ಸಿದ್ಧರಾಗಿದ್ದಾರೆ.

    ಇಲ್ಲಿಯವರೆಗೂ ತಮ್ಮ ನೆಚ್ಚಿನ ಫಿಲ್ಮ್ ಹೀರೋ ಅಥವಾ ಕ್ರಿಕೆಟ್ ತಾರೆಯರ ಟ್ಯಾಟೂವನ್ನು ಹಾಕಿಸಿಕೊಂಡಿರೋದನ್ನು ಕೇಳಿದ್ದೀರಿ, ನೋಡಿದ್ದೀರಿ. ಆದರೆ ಈ ವ್ಯಕ್ತಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಟ್ಯಾಟೂವನ್ನು ಬೆನ್ನಮೇಲೆ ಹಾಕಿಸಿಕೊಂಡಿದ್ದಾರೆ. ಇದು ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೋದಿ ಅವರ ಭಾವಚಿತ್ರವನ್ನ ಬೆನ್ನ ಮೇಲೆ ಹಾಕಿಸಿಕೊಳ್ಳುತ್ತಿರೋದಂತೆ.

    ಮೂಲತಃ ರಾಯಚೂರಿನ ದೇವರಾಯದುರ್ಗದ ನಿವಾಸಿಯಾಗಿರೋ ಬಸವರಾಜ್ ಮಡಿವಾಳ ಅವರು ಈ ರೀತಿ ಮೋದಿ ಅವರ ಟ್ಯಾಟೂವನ್ನು ಹಾಕಿಸಿಕೊಂಡಿರೋ ಅಭಿಮಾನಿ. ಕಲಾವಿದ ಶಂಕರ್ ಸತತ 15 ತಾಸು ಈ ಮೋದಿ ಟ್ಯಾಟೂವನ್ನು ಬಿಡಿಸಲು ತೆಗೆದುಕೊಂಡಿದ್ದಾರೆ. ಅವರು ಮೋದಿ ಪ್ರಧಾನಿಯಾದ ಮೇಲೆ ನಮ್ಮ ದೇಶದ ಭದ್ರತೆ ಹೆಚ್ಚಾಗಿದ್ದು, ಜೊತೆಗೆ ಇಡೀ ವಿಶ್ವ ನಮ್ಮ ದೇಶದ ಕಡೆ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ನಮ್ಮ ಮೋದಿ. ಅದಕ್ಕಾಗಿ ಅವರ ಟ್ಯಾಟೂವನ್ನು ಹಾಕಿಸಿಕೊಂಡಿದ್ದೇನೆ ಎಂದು ಬಸವರಾಜ್ ತಿಳಿಸಿದ್ದಾರೆ.

    ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರ ಮಾಡಲು ಯಾವೆಲ್ಲಾ ಜಿಲ್ಲೆಗಳಿಗೆ ಹೋಗುತ್ತಾರೋ ಆ ಎಲ್ಲ ಜಿಲ್ಲೆಗಳಿಗೆ ನಾನು ಹೋಗಿ ನನ್ನ ಟ್ಯಾಟೂವನ್ನು ಜನರಿಗೆ ತೋರಿಸಿ ಮೋದಿ ಹಾಗೂ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ. ನಾನು ನನ್ನ ಟ್ಯಾಟೂವನ್ನು ಮೋದಿಗೆ ತೋರಿಸಬೇಕು ಅವರನ್ನು ಒಮ್ಮೆ ಭೇಟಿಯಾಗಬೇಕು ಎನ್ನುವ ಆಸೆ ಇದೆ ಎಂದು ಅಂತ ಅವರು ಆಶಯ ವ್ಯಕ್ತಪಡಿಸಿದ್ದಾರೆ.

    ಈಗ ಚುನಾವಣೆ ಹತ್ತಿರ ಆಗುತ್ತಿರೋದ್ರಿಂದ ರಾಜಕೀಯ ನಾಯಕರ ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಳ್ಳೋಕೆ ಬರುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮೋದಿ ಅವರ ಟ್ಯಾಟೂವನ್ನು ಬೆನ್ನ ಮೇಲೆ ಹಾಕುತ್ತಿರೋದು. ನನಗೂ ಬಹಳ ಸಂತೋಷವಾಗ್ತಿದೆ ಅಂತಾ ಟ್ಯಾಟೂ ಶಂಕರ್ ತಮ್ಮ ಸಂತಸವನ್ನು ಹೊರಹಾಕಿದ್ದಾರೆ.

    ಸದ್ಯ ಚುನಾವಣೆ ಸಮೀಪವಾಗುತ್ತಿದಂತೆ ಪ್ರಚಾರ ಕಾರ್ಯನೂ ಜೋರಾಗುತ್ತಿದ್ದು, ಮೋದಿ ರಾಜ್ಯಕ್ಕೆ ಬಂದಾಗ ತನ್ನ ಟ್ಯಾಟೂ ಮೂಲಕ ಜನರನ್ನು ಸೆಳೆಯಲು ಬಸವರಾಜ್ ರೆಡಿಯಾಗಿದ್ದಾರೆ.

  • ಎದೆ ಮೇಲೆ ನೆಚ್ಚಿನ ರಾಜಕಾರಣಿಯ ಟ್ಯಾಟೂ ಹಾಕಿಸಿದ ಅಭಿಮಾನಿ!

    ಎದೆ ಮೇಲೆ ನೆಚ್ಚಿನ ರಾಜಕಾರಣಿಯ ಟ್ಯಾಟೂ ಹಾಕಿಸಿದ ಅಭಿಮಾನಿ!

    ವಿಜಯಪುರ: ನೆಚ್ಚಿನ ನಾಯಕ ನಟ ಹಾಗೂ ನಟಿಯರ ಟ್ಯಾಟೂ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಅಭಿಮಾನಿ ತಮ್ಮ ನೆಚ್ಚಿನ ರಾಜಕಾರಣಿಯ ಶಾಶ್ವತ ಹಚ್ಚೆ ಹಾಕಿಕೊಂಡಿದ್ದಾರೆ.

    ವಿಜಯಪುರ ನಗರದ ಗ್ಯಾಂಗಬಾವಡಿ ನಿವಾಸಿ ಪಪ್ಪು ಪವಾರ ಎಂಬಾತ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿಯ ಭಾವಚಿತ್ರವನ್ನು ತನ್ನ ಎದೆಯ ಮೇಲೆ ಹಾಕಿಸಿಕೊಂಡಿದ್ದಾರೆ. ಇನ್ನು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಅಪ್ಪು ಪಟ್ಟಣಶೆಟ್ಟಿಗೆ ಟಿಕೆಟ್ ನೀಡಬೇಕೆಂದು ಅಭಿಮಾನಿ ಪಪ್ಪುನ ಒತ್ತಾಯ.

    ಅಲ್ಲದೇ ಯುವಕರಿಗೆ ಆದರ್ಶವಾಗಿರುವ ಅಪ್ಪು ಪಟ್ಟಣಶೆಟ್ಟಿ ಜನಸಾಮಾನ್ಯರೊಂದಿಗೆ ಬೆರೆಯುವ ಮನಸ್ಸಿನವರು. ಅಲ್ಲದೇ ನೇರ ಸಂಪರ್ಕಕ್ಕೆ ಸುಲಭವಾಗಿ ಸಿಗುತ್ತಾರೆ. ಜನ ಸಾಮಾನ್ಯರೊಂದಿಗೆ ಬೆರೆಯುವ ನಾಯಕರಾದ ಅಪ್ಪು ಪಟ್ಟಣಶೆಟ್ಟಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಬೇಕೆಂದು ಅಭಿಮಾನಿಯ ಆಶಯ ವ್ಯಕ್ತಪಡಿಸಿದ್ದಾರೆ.

    ಇನ್ನು ಪಪ್ಪು ಎಸ್.ಎಸ್.ಎಲ್.ಸಿವರೆಗೆ ಓದಿದ್ದು, ಸದ್ಯ ಪೇಂಟಿಂಗ್ ಕೆಲಸ ಮಾಡುತ್ತಾರೆ. ನಮ್ಮ ಮೆಚ್ಚಿನ ಹೀರೋಗಾಗಿ ಸುಮಾರು 3000 ರೂಪಾಯಿ ಖರ್ಚು ಮಾಡಿ ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆಂದು ಹೇಳಿದ್ದಾರೆ.

  • ರಣ್‍ಬೀರ್ ಕಪೂರ್ ಟ್ಯಾಟೂ ಮೇಲೆ ಬ್ಯಾಂಡೇಜ್ ಹಾಕಿಕೊಂಡ್ರಾ ದೀಪಿಕಾ!- ಇಲ್ಲಿದೆ ಅಸಲಿ ಸತ್ಯ

    ರಣ್‍ಬೀರ್ ಕಪೂರ್ ಟ್ಯಾಟೂ ಮೇಲೆ ಬ್ಯಾಂಡೇಜ್ ಹಾಕಿಕೊಂಡ್ರಾ ದೀಪಿಕಾ!- ಇಲ್ಲಿದೆ ಅಸಲಿ ಸತ್ಯ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ‘ಆರ್ ಕೆ’ ಟ್ಯಾಟೂ ಮೇಲೆ ಬ್ಯಾಂಡೇಜ್ ಹಾಕಿಕೊಂಡಿದ್ದಾರೆ. ದೀಪಿಕಾ ಮುಂಬೈ ವಿಮಾನ ನಿಲ್ದಾಣನಿಂದ ಹೈದರಾಬಾದ್‍ಗೆ ತೆರಳುತ್ತಿದ್ದಾಗ ಅವರ ಕುತ್ತಿಗೆಗೆ ಬ್ಯಾಂಡೇಜ್ ಹಾಕಿದ್ದು ಕಂಡುಬಂದಿದೆ.

    ಮುಂಬೈನ ವಿಮಾನ ನಿಲ್ದಾಣದಲ್ಲಿ ದೀಪಿಕಾ ಗ್ರೇ ಕ್ರಾಪ್ ಟಾಪ್ ಹಾಕಿ ಅದಕ್ಕೆ ಬಿಳಿ ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶೂ ಧರಿಸಿ, ಕುತ್ತಿಗೆ ಮೇಲೆ ಇದ್ದ ‘ಆರ್ ಕೆ’ ಟ್ಯಾಟೂ ಮೇಲೆ ಬ್ಯಾಂಡೇಜ್ ಹಾಕಿದ್ದ ಫೋಟೋ ಮಾಧ್ಯಮಗಳಿಗೆ ಸಿಕ್ಕಿದೆ.

    ದೀಪಿಕಾ ಬಾಲಿವುಡ್‍ಗೆ ಎಂಟ್ರಿ ಕೊಟ್ಟಾಗ ನಟ ರಣ್‍ಬೀರ್ ಕಪೂರ್ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದರು. ಅಷ್ಟೇ ಅಲ್ಲದೇ ತಮ್ಮ ಕುತ್ತಿಗೆ ಮೇಲೆ ‘ಆರ್ ಕೆ’ ಎಂದು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು. ರಣ್‍ಬೀರ್ ಕಪೂರ್ ಜೊತೆ ಬ್ರೇಕ್ ಅಪ್ ಆದ ನಂತರ ಕಳೆದ ವರ್ಷ ನಡೆದ ಬ್ರ್ಯಾಂಡ್ ಫೋಟೋಶೂಟ್‍ಗಾಗಿ ದೀಪಿಕಾ ಆ ಟ್ಯಾಟೂವನ್ನು ತೆಗೆಸಿದ್ದರು ಎಂದು ಹೇಳಲಾಗಿತ್ತು.

    ದೀಪಿಕಾ ಹಾಕಿರುವ ಬ್ಯಾಂಡೇಜ್ ಬೆನ್ನು ನೋವಿಗೆ ಹಾಕಿಕೊಳ್ಳುವ ಬ್ಯಾಂಡೇಜ್ ಆಗಿದ್ದು ರಣ್‍ಬೀರ್ ಕಪೂರ್ ಟ್ಯಾಟೂ ಮತ್ತು ಬ್ಯಾಂಡೇಜ್‍ಗೂ ಯಾವುದೇ ಸಂಬಂಧವಿಲ್ಲ.

    ರಣ್‍ಬೀರ್ ಹಾಗೂ ದೀಪಿಕಾ ಬಾಲಿವುಡ್‍ನಲ್ಲಿ ಹತ್ತು ವರ್ಷಗಳಿಂದ ಇದ್ದು, ಇಬ್ಬರು ಒಟ್ಟಿಗೆ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದಾರೆ. ಮೊದಲು ಒಬ್ಬರಿಗೊಬ್ಬರೂ ಪ್ರೀತಿಸುತ್ತಿದ್ದರು. ಆದರೆ ಅವರ ಬ್ರೇಕ್ ಅಪ್ ಆದ ನಂತರ ಇಬ್ಬರು ಒಳ್ಳೆಯ ಸ್ನೇಹಿತರಾಗಿ ಒಟ್ಟಿಗೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

    ಕೆಲವು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮದ ಸಂರ್ದಶನವೊಂದರಲ್ಲಿ ದೀಪಿಕಾ ಯಾವ ಗುಣ ನಿಮಗೆ ಇಷ್ಟವಿಲ್ಲ ಎಂದು ಕೇಳಿದ ಪ್ರಶ್ನೆಗೆ ರಣ್‍ಬೀರ್ “ದೀಪಿಕಾ ತುಂಬಾ ಶ್ರಮಪಟ್ಟು ಕೆಲಸ ಮಾಡುತ್ತಾಳೆ. ಇದು ಅವಳ ಆರೋಗ್ಯಕ್ಕೆ ಸರಿಯಿಲ್ಲ. ಆಕೆ ಕೆಲವು ದಿನಗಳ ಕಾಲ ಕೆಲಸದಿಂದ ದೂರವಿದ್ದು, ರಜೆ ತೆಗೆದುಕೊಳ್ಳಬೇಕು. ಆಕೆಗಾಗಿ ಕೊಂಚ ಸಮಯವಾದ್ದರೂ ಆಕೆ ತೆಗೆದುಕೊಳ್ಳಬೇಕು” ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಈ ಟ್ಯಾಟೂಯಿಂದಾಗಿ ನಡೀತಿಲ್ಲ ರಣ್‍ವೀರ್-ದೀಪಿಕಾ ಮದ್ವೆ!

  • ಅರ್ಧ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

    ಅರ್ಧ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

    ಮುಂಬೈ: ಇಲ್ಲಿನ ಇರ್ಲಾ ನುಲ್ಲಾದಲ್ಲಿ ಭಾನುವಾರದಂದು 30 ವರ್ಷದ ಅಪರಿಚಿತ ವ್ಯಕ್ತಿಯ ಅರ್ಧ ಕೊಳೆತ ಮೃತದೇಹ ಪತ್ತೆಯಗಿದೆ. ಜುಹು ನಿವಾಸಿಗಳಾದ ದಂಪತಿ ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು, ಶವವನ್ನ ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಭಾನುವಾರ ಬೆಳಗ್ಗೆ 11.30ರ ವೇಳೆಯಲ್ಲಿ ಕೆಲವು ಸ್ಥಳೀಯರು ಜುಹು ಪೊಲೀಸ್ ಠಾಣೆಗೆ ಕರೆ ಮಾಡಿ ಮೃತದೇಹದ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಪ್ರಕಾರ ಮೃತ ವ್ಯಕ್ತಿ ಸುಮಾರು 25 ರಿಂದ 35 ವರ್ಷ ಮಧ್ಯದ ವಯಸ್ಸಿನವರದಾಗಿದ್ದು, ಉದ್ದ ಕೂದಲು ಹಾಗೂ ಗಡ್ಡ ಹೊಂದಿದ್ದರು. ದೇಹದ ಮೇಲೆ 4 ಟ್ಯಾಟೂಗಳು ಕೂಡ ಇದ್ದು, ಇದರ ಆಧಾರದ ಮೇಲೆ ಆ ವ್ಯಕ್ತಿಯ ಗುರುತು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಈ ವ್ಯಕ್ತಿ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಮೃತ ವ್ಯಕ್ತಿಯ ಕೈ ಮೇಲೆ ಹೃದಯದ ಆಕಾರದಲ್ಲಿರುವ ಒಂದು ಟ್ಯಾಟೂ ಇದ್ದು, ಬಲಗೈ ತೋಳಿನಲ್ಲಿ ಅವತಾರ್ ಎಂದು ಬರೆದಿರುವ ಟ್ಯಾಟೂ ಇದೆ. ಜೊತೆಗೆ ಎದೆಯ ಮೇಲೆ ಪ್ರವೀಣ್, ಪರ್ವೀನ್ ಎಂಬ ಹೆಸರಿನ ಟ್ಯಾಟೂಗಳಿವೆ. ವ್ಯಕ್ತಿಯ ಬಲಗೈನಲ್ಲಿ ಸ್ಟೀಲ್ ಕಡಗ, ಕಪ್ಪು ದಾರಕ್ಕೆ ಕಟ್ಟಿರೋ ಸ್ಟೀಲ್ ಪೆಂಡೆಂಟ್ ಹಾಗೂ ಬಲಗಾಲಿನಲ್ಲಿ ಕಪ್ಪು ದಾರ ಕೂಡ ಪತ್ತೆಯಾಗಿದೆ.

    ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಲು ಕಾಣೆಯಾಗಿರುವವರ ಕುರಿತ ದಾಖಲೆಗಳನ್ನ ಕೂಡ ಪರಿಶೀಲಿಸುತ್ತಿದ್ದೇವೆ. ಐಪಿಸಿ ಸೆಕ್ಷನ್ 302 ಹಾಗೂ 201ರ ಅಡಿ ಪ್ರಕರಣ ದಾಖಲಾಗಿದೆ. ಮೃತವ್ಯಕ್ತಿಯ ತಲೆ ಮೇಲೆ ಗಾಯಗಳಾಗಿರುವುದರಿಂದ ಅವರನ್ನು ಹೊಡೆದು ಕೊಂದಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ ಮೊದಲೇ ಕೊಲೆ ಮಾಡಿ ನುಲ್ಲಾದಲ್ಲಿ ಹಾಕಿರಬಹುದು ಎಂಬ ಅನುಮಾನ ಮೂಡಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಟ್ಯಾಟೂ ವೀರನನ್ನ ಭೇಟಿಯಾದ ಉಪ್ಪಿ- ಅಭಿಮಾನಿಗೆ ಸೂಪರ್ ಸ್ಟಾರ್ ಸನ್ಮಾನ

    ಟ್ಯಾಟೂ ವೀರನನ್ನ ಭೇಟಿಯಾದ ಉಪ್ಪಿ- ಅಭಿಮಾನಿಗೆ ಸೂಪರ್ ಸ್ಟಾರ್ ಸನ್ಮಾನ

    ಬೆಂಗಳೂರು: ಉಪೇಂದ್ರ ಅವ್ರನ್ನ ನೋಡಬೇಕು ಅಂತ ಬೆನ್ನ ತುಂಬಾ ಉಪ್ಪಿ ಮುಖವನ್ನ ಟ್ಯಾಟೂ ಹಾಕಿಸಿಕೊಂಡಿದ್ದ ಸ್ಟೋರಿಯನ್ನ ಪಬ್ಲಿಕ್ ಟಿವಿ ಬಿತ್ತರಿಸಿತ್ತು. ವರದಿ ನೋಡಿದ ಉಪೇಂದ್ರ ತಮ್ಮ ಅಭಿಮಾನಿಯನ್ನ ಮನೆಗೆ ಕರೆದು ಉಪಚರಿಸಿದ್ದಾರೆ. ರಿಯಲ್ ಸ್ಟಾರನ್ನ ರಿಯಲ್ ಆಗಿ ನೋಡಿದ ಫ್ಯಾನ್ ಫುಲ್ ಖುಷಿಯಾಗಿದ್ದಾರೆ.

    ಪ್ರಜಾಕಾರಣದಲ್ಲಿ ಉಪ್ಪಿಗೆ ಯಶಸ್ಸು ಸಿಗಬೇಕು ಅಂತ ಅಭಿಮಾನಿ ಅರ್ಜುನ್, ಬೆನ್ನ ತುಂಬಾ ಉಪೇಂದ್ರ ಮುಖವನ್ನ ಟ್ಯಾಟೂ ಹಾಕಿಸಿಕೊಂಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿದ ನಂತರ ಉಪೇಂದ್ರ, ಅರ್ಜುನ್ ಹಾಗೂ ಟ್ಯಾಟೂ ಹಾಕಿದ ಶಂಕರ್‍ರನ್ನು ಭೇಟಿ ಮಾಡಿ ಸುಮಾರು 20 ನಿಮಿಷ ಮಾತನಾಡಿದ್ದಾರೆ.

    ಟ್ಯಾಟೂ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಲ್ಲದೇ ಅಭಿಮಾನಿಗೆ ಸನ್ಮಾನ ಮಾಡಿ ಕಳಿಸಿದ್ದಾರೆ. ಜೊತೆಗೆ ಒಂದು ಪುಸ್ತಕವನ್ನ ಗಿಫ್ಟ್ ಆಗಿ ನೀಡಿದ್ದಾರೆ.

    ಉಪೇಂದ್ರ ಹಾಗೂ ಆಭಿಮಾನಿಯ ನಡುವೆ ಸೇತುವೆಯಾದ ಪಬ್ಲಿಕ್ ಟಿವಿಗೆ ಶಂಕರ್ ಥ್ಯಾಂಕ್ಸ್ ಹೇಳಿದ್ದಾರೆ. ಪ್ರಜಾಕೀಯದ ಬ್ಯುಸಿಯಲ್ಲೂ ಉಪೇಂದ್ರ ತಮ್ಮ ಅಭಿಮಾನಿಗಳನ್ನ ಮೀಟ್ ಮಾಡಿ ಸಮಯ ಕಳೆದಿದ್ದು ಮೆಚ್ಚುವ ವಿಚಾರವೇ ಸರಿ.

  • ರಾಯಚೂರು ಗ್ರಾಮೀಣ ಯುವಕರಲ್ಲಿ ಹುಚ್ಚು ಹಿಡಿಸಿದ ಟ್ಯಾಟೂ ಆರ್ಟ್

    ರಾಯಚೂರು ಗ್ರಾಮೀಣ ಯುವಕರಲ್ಲಿ ಹುಚ್ಚು ಹಿಡಿಸಿದ ಟ್ಯಾಟೂ ಆರ್ಟ್

    ರಾಯಚೂರು: ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಸಂಸ್ಕೃತಿಯ ಒಂದು ಭಾಗವಾಗಿ ಹಿಂದಿನಿಂದಲೂ ಬೆಳೆದು ಬಂದಿದೆ. ಆದರೆ ಈಗ ಆಧುನಿಕ ಯುಗದಲ್ಲಿ ಟ್ಯಾಟೂ ಕಲೆ ಜನರಲ್ಲಿ ಹುಚ್ಚು ಹಿಡಿಸಿದೆ.

    ಮೊದಲು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದರು. ಆದರೆ ಈಗ ಗ್ರಾಮೀಣ ಭಾಗಕ್ಕೂ ಲಗ್ಗೆ ಇಟ್ಟಿದೆ. ರಾಯಚೂರಿನಲ್ಲಿ ಟ್ಯಾಟೂ ಜನರಿಗೆ ಬಹಳ ಇಷ್ಟವಾಗಿದೆ. ಯುವಕರೊಬ್ಬರು ಶಿವಾಜಿ ಮಹಾರಾಜ್ ಚಿತ್ರವನ್ನ ತನ್ನ ಸಂಪೂರ್ಣ ಬೆನ್ನಿನ ಮೇಲೆ ಹಾಕಿಸಿಕೊಂಡಿದ್ದಾರೆ.

    ಭಾವನಾತ್ಮಕ ಸಂಬಂಧಗಳನ್ನ ಮೈಮೇಲೆ ಕೊನೆವರೆಗೂ ಉಳಿಸಿಕೊಳ್ಳಲು ಯುವಜನತೆ ಈಗ ಟ್ಯಾಟೂಗೆ ಮೊರೆ ಹೋಗುತ್ತಿದ್ದಾರೆ. ತಮ್ಮ ನೆಚ್ಚಿನ ಸಿನೆಮಾ ನಟರು, ಅಪ್ಪ, ಅಮ್ಮ, ಸಹೋದರ, ಸಹೋದರಿ, ಸ್ನೇಹಿತರ ಚಿತ್ರದ ಟ್ಯಾಟೂಗಳನ್ನ ಮೈಮೇಲೆ ಹಾಕಿಸಿಕೊಳ್ಳುತ್ತಿದ್ದಾರೆ. ಯುವಕರು ಮಾತ್ರವಲ್ಲದೇ ವಯಸ್ಕರು ಸಹ ಟ್ಯಾಟೂ ಹಾಕಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.

    ಅಂದಹಾಗೇ ಈ ಟ್ಯಾಟೂಗಳನ್ನ ನೋಡಿ ಗೋವಾ, ಮುಂಬೈ, ಬೆಂಗಳೂರಿನ ಕಲಾವಿದರ ಚಿತ್ರಗಳು ಇರಬೇಕು ಅನ್ಕೋಬೇಡಿ. ಇದು ರಾಯಚೂರಿನ ಸಿಂಧನೂರಿನ ಕಲಾವಿದ ಶಂಕರ್ ಬದಿಯ ಕೈಚಳಕ. ಶಿವಾಜಿ ಅಭಿಮಾನಿ ತನ್ನ ಸಂಪೂರ್ಣ ಬೆನ್ನ ಮೇಲೆ ಶಿವಾಜಿ ಟ್ಯಾಟೂವನ್ನ ಇವರ ಕೈಯಲ್ಲಿ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ಪೂರ್ಣಗೊಳ್ಳಲು ಸುಮಾರು 12 ಗಂಟೆಗಳ ಕಾಲ ಹಿಡಿದಿದೆ. ರಾಯಚೂರಿನಂತ ಹಿಂದುಳಿದ ಪ್ರದೇಶದಲ್ಲೂ ಜನ ಫ್ಯಾಷನ್ ಅಂತಲೋ, ಕ್ರೇಜ್‍ಗೋ ಗೊತ್ತಿಲ್ಲಾ ಟ್ಯಾಟೂ ಕಲೆಗೆ ಮಾರು ಹೋಗುತ್ತಿದ್ದಾರೆ

    ಸಿಂಧನೂರು ಪಟ್ಟಣದಲ್ಲೇ ವಾಸವಿರುವ ಟ್ಯಾಟೂ ಕಲಾವಿದ ಶಂಕರ್ ಬದಿ ಕಳೆದ ಎರಡು ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ಟ್ಯಾಟೂ ಹಾಕಿದ್ದಾರೆ. ಗ್ರಾಮೀಣ ಭಾಗದ ಜನರಲ್ಲೂ ಟ್ಯಾಟೂ ಆಸಕ್ತಿ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಅನ್ನೋದು ಇಲ್ಲೇ ತಿಳಿಯುತ್ತದೆ.

    ಯಾವುದೇ ಅಡ್ಡ ಪರಿಣಾಮಗಳು ಆಗದಂತೆ ಹೈಜನಿಕ್ ಆಗಿ ಟ್ಯಾಟೂ ಬಿಡಿಸುವ ಶಂಕರ್ ತಮ್ಮ ಕಲೆಯಿಂದ ರಾಯಚೂರಿನಲ್ಲಿ ಟ್ಯಾಟೂ ಶಂಕರ್ ಅಂತಲೇ ಹೆಸರು ಮಾಡಿದ್ದಾರೆ. ಟ್ಯಾಟೂ ಆಸಕ್ತಿ ಜನರಲ್ಲಿ ಹೆಚ್ಚಾಗುತ್ತಿದ್ದ ಹಾಗೆಯೇ ಜಿಲ್ಲೆಯಲ್ಲಿ ಟ್ಯಾಟೂ ಕಲಾವಿದರ ಸಂಖ್ಯೆಯೂ ಕೂಡ ಹೆಚ್ಚಳವಾಗುತ್ತಿದೆ. ಅದೇನೇ ಇದ್ದರೂ ಮೈಮೇಲೆ ಚಿತ್ರ ಬಿಡಿಸಿಕೊಂಡು ಓಡಾಡೋ ಜನ ಈಗ ರಾಯಚೂರು ಜಿಲ್ಲೆಯ ಹಳ್ಳಿಹಳ್ಳಿಯಲ್ಲೂ ಕಾಣಸಿಗುತ್ತಿರುವುದಂತೂ ನಿಜ.