Tag: target

  • ನನ್ನನ್ನು ಟಾರ್ಗೆಟ್ ಮಾಡಲಾಗಿದೆ: ತೊಡೆ ತಟ್ಟಿದ ನಟ ವಿಶ್ವಕ್ ಸೇನ್

    ನನ್ನನ್ನು ಟಾರ್ಗೆಟ್ ಮಾಡಲಾಗಿದೆ: ತೊಡೆ ತಟ್ಟಿದ ನಟ ವಿಶ್ವಕ್ ಸೇನ್

    ತೆಲುಗಿನ ಹೆಸರಾಂತ ನಟ ವಿಶ್ವಕ್ ಸೇನ್ (Vishwak Sen) ತಮಗಾದ ಅನ್ಯಾಯ ಮತ್ತು ನೋವುಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ತಮ್ಮ ಗಾಮಿ (Gami) ಚಿತ್ರಕ್ಕೆ ಅಡೆತಡೆ ಒಡ್ಡಿದವರ ಬಗ್ಗೆ ಆಕ್ರೋಶವನ್ನೂ  ಅವರು ಹೊರ ಹಾಕಿದ್ದಾರೆ. ಈ ರೀತಿ ಮಾಡುವುದರ ಉದ್ದೇಶ ಏನು ಎನ್ನುವುದನ್ನು ಅವರು ಹೇಳಿದ್ದಾರೆ.

    ಇತ್ತೀಚೆಗಷ್ಟೇ ವಿಶ್ವಕ್ ಸೇನ್ ನಟನೆಯ ಗಾಮಿ ಸಿನಿಮಾ ರಿಲೀಸ್ ಆಗಿತ್ತು. ಮೊದ ಮೊದಲ ಅತ್ಯುತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಬುಕ್ ಮೈ ಶೋನಲ್ಲಿ ದಿ ಬೆಸ್ಟ್ ರೇಟಿಂಗ್ ಕೂಡ ಗಳಿಸಿಕೊಂಡಿತ್ತು. ಈ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದನ್ನು ಸಹಿಸೋಕೆ ಆಗದೇ ನಿರಂತರ ಚಿತ್ರಕ್ಕೆ ತೊಂದರೆ ಕೊಟ್ಟರು ಎಂದು ಹೇಳಿಕೊಂಡಿದ್ದಾರೆ ವಿಶ್ವ‍ಕ್.

     

    ಗಾಮಿ ಚಿತ್ರಕ್ಕೆ ಸಾಕಷ್ಟು ತೊಂದರೆ ಮಾಡಲಾಯಿತು. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಿಲ್ಲ. ಆದರೆ, ನಾನು ಚಿತ್ರೋದ್ಯಮದಲ್ಲಿ ಬೆಳೆಯಬಾರದು ಎನ್ನುವ ಉದ್ದೇಶವಂತೂ ಇದರ ಹಿಂದಿದೆ. ಹಾಗಾಗಿ ಚಿತ್ರವನ್ನು ಸೋಲಿಸಲು ಅವರು ಏನೆಲ್ಲ ಕುತಂತ್ರಗಳನ್ನು ಮಾಡಿದ್ದಾರೆ ಎಂದು ಅವರು ಅಳಲು ಹಂಚಿಕೊಂಡಿದ್ದಾರೆ.

  • ದರ್ಶನ್ ಟಾರ್ಗೆಟ್: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ದರ್ಶನ್ ಟಾರ್ಗೆಟ್: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ನ್ನಡದ ಹೆಸರಾಂತ ನಟ ದರ್ಶನ್ (Darshan) ಅವರನ್ನು ಟಾರ್ಗೆಟ್ (Target) ಮಾಡಲಾಗ್ತಿದೆಯಾ? ಇಂಥದ್ದೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಕಾಟೇರ (Katera) ಸಿನಿಮಾದ ಸಕ್ಸಸ್ ಅನ್ನು ಸಹಿಸಿಕೊಳ್ಳೊಕೆ ಆಗದೇ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (RockLine Venkatesh) ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳು ಟಾರ್ಗೆಟ್ ಮಾಡ್ತಿರೋದು ಯಾರು ಎನ್ನುವ ಚರ್ಚೆ ಶುರು ಮಾಡಿದ್ದಾರೆ.

    ನಟ ದರ್ಶನ್ ನಟನೆಯ ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿ ಒಂಥರಾ ಇಡೀ ಸಿನಿಮಾ ಟೀಂಗೆ ತೊಂದರೆ ತಂದೊಡ್ಡಿತ್ತು. ಬೆಳಗಿನಜಾವದವರೆಗೂ ಪಾರ್ಟಿ ಮಾಡಿದ್ರು ಅಂತಾ‌ ನಟ ದರ್ಶನ್ ಸೇರಿ 8 ಸ್ಟಾರ್ ಗಳಿಗೆ ನೊಟೀಸ್ ನೀಡಿದ್ದ ಪೊಲೀಸರ ಮುಂದೆ ಎಂಟೂ ಸ್ಟಾರ್ ಗಳು ನಿನ್ನೆ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ರು.

    ಜನವರಿ ಮೂರನೇ ತಾರೀಖಿನ ರಾತ್ರಿ ಜೆಟ್ಲಾಗ್ ಪಬ್ ನಲ್ಲಿ ನಲ್ಲಿ ಕಾಟೇರ ಸಿನಿಮಾ‌ ತಂಡ ಸಕ್ಸಸ್ ಪಾರ್ಟಿ ಮಾಡಿತ್ತು. ಸ್ಟಾರ್ಸ್ ಗಳು  ಮುಂಜಾನೆ 3-4ಗಂಟೆವರೆಗೂ ಪಬ್ ನಲ್ಲಿದ್ರು ಅನ್ನೋ ವಿಷ್ಯ ಹೊರಗೆ ಬಂದಿತ್ತು. ಮರುದಿನ ದಾಳಿ ಮಾಡಿದ್ದ ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಾರ್ಟಿಯಲ್ಲಿದ್ದ ನಟ ದರ್ಶನ್ ಸೇರಿ ಎಂಟು ಸ್ಟಾರ್ ಗಳಿಗೆ ನೊಟೀಸ್ ನೀಡಿದ್ರು.

    ನಟ ದರ್ಶನ್, ಡಾಲಿ ಧನಂಜಯ್, ಚಿಕ್ಕಣ್ಣ, ನೀನಾಸಂ ಸತೀಶ್, ಅಭಿಶೇಕ್ ಅಂಬರೀಶ್, ನಿರ್ದೇಶಕ‌ ತರುಣ್ ಸುದೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ಹರಿಕೃಷ್ಣ ಎಂಟೂ ಜನ ನಿನ್ನೆ ಸಂಜೆ ನಾಲ್ಕು ಗಂಟೆಗೆ ಸುಬ್ರಮಣ್ಯ ನಗರ ಠಾಣೆಗೆ ಹಾಜರಾಗಿದ್ರು. ಸುಮಾರು ಒಂದುಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರ ಬಂದ್ಮೇಲೆ ಮಾತನಾಡಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ದರ್ಶನ್ ನ ಟಾರ್ಗೆಟ್ ಮಾಡಲಾಗಿದೆ ಅಂದ್ರು. ಯಾರು ಮಾಡ್ತಿದ್ದಾರೆ ಅಂತಾನು ಗೊತ್ತು. ಸಿನಿಮಾ ಸಕ್ಸೆಸ್ ಸಹಿಸಿಕೊಳ್ಳಲಾಗದೆ ಈ ರೀತಿ ಮಾಡ್ತಿದ್ದಾರೆ. ಊಟಕ್ಕೆ ಬಂದವರಿಗೆ ನೋಟಿಸ್ ಕೊಟ್ಟಿದ್ದು ಇದೇ ಮೊದಲು. ಬರೀ ಊಟಕ್ಕೆ ಹೋಗಿದ್ವೆ ಹೊರತು ತಡರಾತ್ರಿ ಪಾರ್ಟಿ ಮಾಡಿಲ್ಲ ಅಂತಾ ಆರೋಪ ತಳ್ಳಿ ಹಾಕಿದ್ರು.

     

    ಸ್ಟಾರ್ ನಟರ ಪರ ವಕೀಲ ನಾರಾಯಣಸ್ವಾಮಿ ಮಾತಾಡಿ ಪೊಲೀಸರ ವಿರುದ್ಧ ಅಸಮಧಾನ ತೋರಿದ್ರು. ದರ್ಶನ್ ರನ್ನ ಟಾರ್ಗೆಟ್ ಮಾಡಲಾಗಿದೆ. ಇವ್ರೆಲ್ಲಾ ಊಟಕ್ಕೆ ಹೋಗಿದ್ದು. ಗ್ರಾಹಕರಿಗೆ ನೊಟೀಸ್ ಕೊಡೋಹಾಗಿಲ್ಲ. ಇದು ಕಾನೂನು ವಿರುದ್ಧದ ನೊಟೀಸ್ ಅಂತಾ ಅಸಮಧಾನ ಹೊರ ಹಾಕಿದ್ರು. ಲಾಯರ್ ಮತ್ತು ರಾಕ್ ಲೈನ್ ವೆಂಕಟೇಶ್ ಆಡಿದ ಮಾತುಗಳು ಇದೀಗ ಭಾರೀ ಚರ್ಚೆಯನ್ನು ಹುಟ್ಟು ಹಾಕಿವೆ.

  • ಸಿಕ್ಸರ್, ಬೌಂಡರಿ ಸುರಿಮಳೆ – ಸ್ಟೊಯಿನಿಸ್ ಸ್ಫೋಟಕ ಆಟ, ಪಂಜಾಬ್‍ಗೆ 158 ರನ್ ಗುರಿ

    ಸಿಕ್ಸರ್, ಬೌಂಡರಿ ಸುರಿಮಳೆ – ಸ್ಟೊಯಿನಿಸ್ ಸ್ಫೋಟಕ ಆಟ, ಪಂಜಾಬ್‍ಗೆ 158 ರನ್ ಗುರಿ

    ದುಬೈ: 13 ರನ್‍ಗೆ 3 ವಿಕೆಟ್ ಪತನ, 96 ರನ್‍ಗಳಿಸುವಷ್ಟರಲ್ಲಿ 6 ವಿಕೆಟ್ ಪತನ. ಆರಂಭಿಕ ಹಿನ್ನಡೆ ಕಂಡರೂ ಸ್ಟೊಯಿನಿಸ್ ಸ್ಪೋಟಕ ಆಟದಿಂದ ಡೆಲ್ಲಿ ಕ್ಯಾಪಿಟಲ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 158 ರನ್‍ಗಳ ಗುರಿಯನ್ನು ನೀಡಿದೆ.

    ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಗ್ ಗೆದ್ದು ಕಿಂಗ್ಸ್ ಇಲೆವೆನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್‍ಗೆ ಬಂದ ದೆಹಲಿ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆದರೆ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಾರ್ಕಸ್ ಸ್ಟೊಯಿನಿಸ್ 53 ರನ್((20 ಎಸೆತ, 3 ಸಿಕ್ಸರ್ 7 ಬೌಂಡರಿ) ಭರ್ಜರಿ ಅರ್ಧ ಶತಕದ ನೆರವಿನಿಂದ ಡೆಲ್ಲಿ 157ರನ್ ಹೊಡೆಯಿತು.

    ಪಂದ್ಯದ ಆರಂಭದಲ್ಲೇ ಎಡವಿದ ಡೆಲ್ಲಿ ತಂಡದ ಆರಂಭಿಕ ಬ್ಯಾಟ್ಸ್‍ಮ್ಯಾನ್ ಶಿಖರ್ ಧವನ್ ಎರಡನೇ ಓವರ್‍ನಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಮೂರನೇ ಓವರ್‍ನಲ್ಲಿ ಶಮಿ ಬೌನ್ಸರ್ ಗೆ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರು. ಅದೇ ಓವರ್‍ನಲ್ಲಿ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಶಿಮ್ರಾನ್ ಹೆಟ್ಮಿಯರ್ ಕೂಡ ಕ್ಯಾಚ್ ಕೊಟ್ಟ ನಿರ್ಗಗಮಿಸಿದರು. ನಾಲ್ಕು ಓವರ್ ಮುಕ್ತಾಯಕ್ಕೆ 13 ರನ್‍ಗಳಿಸಿ ಡೆಲ್ಲಿ ಕ್ಯಾಪಿಟಲ್ 3 ವಿಕೆಟ್ ಕಳೆದುಕೊಂಡಿತ್ತು.

    ನಂತರ ಜೊತೆಯಾದ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಉತ್ತಮ ಜೊತೆಯಾಟವಾಡಿದರು. ಇದರ ಪರಿಣಾಮ 10 ಓವರ್ ಮುಕ್ತಾಯಕ್ಕೆ ಡೆಲ್ಲಿ 49 ಪೇರಿಸಿತು. ಈ ವೇಳೆ ಕ್ಯಾಪ್ಟನ್ ಇನ್ನಿಂಗ್ಸ್ ಆಡಿದ ಐಯ್ಯರ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಭಾರಿಸಿದರು. ಇವರಿಗೆ ರಿಷಭ್ ಪಂತ್ 31 ರನ್(29 ಎಸೆತ) ಕೂಡ ಉತ್ತಮವಾಗಿ ಸಾಥ್ ನೀಡಿದರು. ಆದರೆ 13ನೇ ಓವರಿನ ಕೊನೆಯ ಬಾಲಿನಲ್ಲಿ ರವಿ ಬಿಷ್ಣೋಯ್ ಅವರಿಗೆ ಪಂತ್ ಬೌಲ್ಡ್ ಆದರು.

    ಇದಾದ ನಂತರ 39 ರನ್ ಗಳಿಸಿ ಆಡುತ್ತಿದ್ದ ಶ್ರೇಯಸ್ ಐಯ್ಯರ್ 14ನೇ ಓವರ್‍ನಲ್ಲಿ ಶಮಿ ಬೌಲಿಂಗ್‍ಗೆ ಕ್ರಿಸ್ ಜೋರ್ಡಾನ್‍ಗೆ ಕ್ಯಾಚ್ ನೀಡಿದರು. ನಂತರ ಆಕ್ಸಾರ್ ಪಟೇಲ್ ಶೆಲ್ಡನ್ ಕಾಟ್ರೆಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಯಾವುದೇ ಆಟಗಾರ ಕ್ರಿಸ್‍ನಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಆದರೆ ಮಾರ್ಕಸ್ ಸ್ಟೊಯಿನಿಸ್ ಮಾತ್ರ ಉತ್ತಮವಾಗಿ ಬ್ಯಾಟ್ ಬೀಸಿ ತಂಡ 157 ರನ್ ಸೇರಿದುವಲ್ಲಿ ಉತ್ತಮ ಕೊಡುಗೆ ನೀಡಿದರು.

    ಸ್ಟೊಯಿನಿಸ್ ಆಟದಿಂದ 18ನೇ ಓವರ್ ನಲ್ಲಿ 13 ರನ್, 19 ನೇ ಓವರ್ ನಲ್ಲಿ 14 ರನ್, 20ನೇ ಓವರ್ ನಲ್ಲಿ 30 ರನ್ ಡೆಲ್ಲಿ ತಂಡಕ್ಕೆ ಬಂದಿತ್ತು. ಜೋರ್ಡನ್ ಎಸೆದ ಕೊನೆಯ ಓವರ್ ನಲ್ಲಿ 2 ಸಿಕ್ಸರ್, 3 ಬೌಂಡರಿಯನ್ನು ಸ್ಟೊಯಿನಿಸ್ ಚಚ್ಚಿದ್ದರು.

    ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಉತ್ತಮವಾಗಿ ಬೌಲ್ ಮಾಡಿದ ಅನುಭವಿ ವೇಗಿ ಮೊಹಮ್ಮದ್ ಶಮಿಯವರು ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು ಕೇವಲ 15 ರನ್ ನೀಡಿದರು. ಇವರಿಗೆ ಉತ್ತಮವಾಗಿ ಸಾಥ್ ಕೊಟ್ಟ ಶೆಲ್ಡನ್ ಕಾಟ್ರೆಲ್ ಅವರು ನಾಲ್ಕು ಓವರ್ ಬೌಲ್ ಮಾಡಿ 24 ರನ್ ನೀಡಿ 2 ವಿಕೆಟ್ ಪಡೆದರು. ಇದೇ ವೇಳೆ ರವಿ ಬಿಷ್ಣೋಯ್ ಅವರು ಕೂಡ ತಮ್ಮ ಚೊಚ್ಚಲ ಐಪಿಎಲ್ ವಿಕೆಟ್ ಪಡೆದರು.

  • ಕೊರೊನಾ ಸಂಕಷ್ಟದ ನಡುವೆ ವಾರಿಯರ್ಸ್‍ಗೆ ಕಿರುಕುಳ- ಟಾರ್ಗೆಟ್ ಮಿಸ್ಸಾದ್ರೆ ತಲೆದಂಡ ಫಿಕ್ಸ್!

    ಕೊರೊನಾ ಸಂಕಷ್ಟದ ನಡುವೆ ವಾರಿಯರ್ಸ್‍ಗೆ ಕಿರುಕುಳ- ಟಾರ್ಗೆಟ್ ಮಿಸ್ಸಾದ್ರೆ ತಲೆದಂಡ ಫಿಕ್ಸ್!

    ಬೆಂಗಳೂರು: ಸರ್ಕಾರ ಕೊರೊನಾ ವಾರಿಯರ್ಸ್ ಗೆ ಟೆಸ್ಟಿಂಗ್ ಟಾರ್ಗೆಟ್ ನೀಡುತ್ತಿದ್ದು, ಸರ್ಕಾರದ ಈ ಕಿರಿಕ್‍ನಿಂದ ಆರೋಗ್ಯಾಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಮೈಸೂರು ವೈದ್ಯಾಧಿಕಾರಿ ನಾಗೇಂದ್ರ ಸಾವು ಬೆನ್ನಲ್ಲೆ ಕೊರೊನಾ ವಾರಿಯರ್ಸ್ ಗೆ ಸರ್ಕಾರದ ಇಲಾಖೆಯಿಂದ ಟಾರ್ಗೆಟ್ ಟಾರ್ಚರ್ ಬಿಚ್ಚಿಕೊಳ್ಳುತ್ತಿದೆ. ಹಿರಿಯ ಅಧಿಕಾರಿಗಳು ನೀಡುತ್ತಿರುವ ಟಾರ್ಚರ್ ಕಥೆಯನ್ನು ಅಧಿಕಾರಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ 140 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದಾವೆ. ಅದರಲ್ಲಿ ಪ್ರತಿ ಕೇಂದ್ರಗಳಿಗೆ 250 ಜನರನ್ನು ಟೆಸ್ಟ್ ಮಾಡಬೇಕು ಎಂದು ಆರಂಭದಲ್ಲಿ ಟಾರ್ಗೆಟ್ ನೀಡಲಾಗಿತ್ತು, ಈಗ ಅದು 500ಕ್ಕೆ ಏರಿಕೆಯಾಗಿದೆಯಂತೆ. ಅದರಲ್ಲಿ 300 ಅಂತೂ ನಿತ್ಯವೂ ಆಗಲೇಬೇಕು ಎಂದು ಸೂಚಿಸಲಾಗಿದೆ. ಪ್ರಾಥಮಿಕ ಸಂಪರ್ಕಿತರು, ದ್ವಿತೀಯ ಸಂಪರ್ಕಿತರನ್ನು ಟೆಸ್ಟ್ ಮಾಡಬಹುದು. ಆದರೆ ಗುಣಲಕ್ಷಣಗಳು ಇಲ್ಲದೇ ಇರುವ ಜನರನ್ನು ಟೆಸ್ಟ್ ಮಾಡಿ ಅಂದರೆ ಎಲ್ಲಿ ಬರುತ್ತಾರೆ ಎಂದು ಸಿಬ್ಬಂದಿ ದೂರಿದ್ದಾರೆ.

    ಟಾರ್ಗೆಟ್ ರೀಚ್ ಆಗದೇ ಇದ್ದರೆ ತಲೆದಂಡ ಫಿಕ್ಸ್. ಈಗಾಗಲೇ ಅನೇಕ ಅಧಿಕಾರಿಗಳು ಕೊರೊನಾ ಟೆಸ್ಟಿಂಗ್ ಆಗದೇ ಇದ್ದಿದ್ದಕ್ಕೆ ಕೆಲಸವನ್ನು ಕಳಕೊಂಡಿದ್ದಾರಂತೆ. ಕ್ಯಾಂಪ್‍ಗಳನ್ನು ಮಾಡಿ ಸುಖಾಸುಮ್ಮನೆ ಜನರನ್ನು ಟೆಸ್ಟ್ ಮಾಡಿ ಟಾರ್ಗೆಟ್ ರೀಚ್ ಮಾಡುತ್ತಿದ್ದೇವೆ. ಈಗ ಬೆಂಗಳೂರಿನಲ್ಲಿ ಕ್ಯಾಂಪ್‍ಗಳನ್ನು ಮಾಡಿ ಆಟೋ ಡ್ರೈವರ್ಸ್ ತರಕಾರಿ ವ್ಯಾಪಾರಿಗಳನ್ನು ರೋಗದ ಲಕ್ಷಣ ಇಲ್ಲದೆ ಇದ್ದರೂ ಕರೆದು ಟೆಸ್ಟಿಂಗ್ ಮಾಡುತ್ತಿದ್ದೇವೆ. ಒಂದಿನಾನೂ ರಜೆಯೇ ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

    ಲ್ಯಾಬ್ ಟೆಕ್ನಿಷನ್ಸ್ ಗಳಿಗಷ್ಟೇ ವೈಜ್ಞಾನಿಕವಾಗಿ ಸ್ವಾಬ್ ಕಲೆಕ್ಷನ್ ಗೊತ್ತಿರುತ್ತೆ. ಆದರೆ ಈಗ ಸರ್ಕಾರ ಸಿಕ್ಕ ಸಿಕ್ಕವರಿಗೆ ಟ್ರೈನಿಂಗ್ ಕೊಟ್ಟು ಸ್ವಾಬ್ ಕಲೆಕ್ಷನ್ ಮಾಡಿ ಎಂದು ಕಳಿಸುತ್ತಿದ್ದಾರೆ. ಇದರಿಂದ ಪರಿಣಿತರಲ್ಲದವರು ಮೂಗಿನ ದ್ರಾವಣ ತೆಗೆಯುವಾಗ ಅನೇಕರಿಗೆ ರಕ್ತ ಬಂದಿದೆ. ಲ್ಯಾಬ್ ಟೆಕ್ನಿಷನ್ಸ್ ಕೊರತೆ ಇದ್ದರೂ ಸರ್ಕಾರದ ಟಾರ್ಚರ್ ನಿಂದ ಇಲಾಖೆಯ ಕಿರಿಕ್‍ನಿಂದ ಇಂತವರನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ ಎಂದು ಅಧಿಕಾರಿಗಳು ಅಳಲನ್ನು ತೋಡಿಕೊಂಡಿದ್ದಾರೆ.

  • ಶೈನ್, ವಾಸುಕಿಯನ್ನ ಟಾರ್ಗೆಟ್ ಮಾಡಿದ ನಾಲ್ವರು

    ಶೈನ್, ವಾಸುಕಿಯನ್ನ ಟಾರ್ಗೆಟ್ ಮಾಡಿದ ನಾಲ್ವರು

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ರಲ್ಲಿ ಶೈನ್ ಶೆಟ್ಟಿ ಮತ್ತು ವಾಸುಕಿ ಅವರನ್ನು ನಾಲ್ವರು ಟಾರ್ಗೆಟ್ ಮಾಡಿದ್ದಾರೆ.

    ಬಿಗ್‍ ಮನೆಯಲ್ಲಿರುವ ತಮ್ಮ ಟಾರ್ಗೆಟ್ ಯಾರು ಎಂಬುವುದನ್ನು ತಿಳಿಸಲು ಬಿಗ್‍ಬಾಸ್ ಒಂದು ಚಟುವಟಿಕೆಯನ್ನು ನೀಡಿದ್ದರು. ಅದೇನೆಂದರೆ ಪ್ರತಿಯೊಬ್ಬರು ಮನೆಯಲ್ಲಿರುವವರಲ್ಲಿ ತಮ್ಮ ಟಾರ್ಗೆಟ್ ಅಂದರೆ ತಮ್ಮ ಪ್ರಬಲ ಪ್ರತಿಸ್ಪರ್ಧಿ ಯಾರು ಎಂಬುದನ್ನು ತಿಳಿಸಬೇಕಿತ್ತು. ಜೊತೆಗೆ ಅದಕ್ಕೆ ಸೂಕ್ತ ಕಾರಣ ಕೊಟ್ಟು ಅವರ ಮುಖಕ್ಕೆ ಕೆಂಪು ಬಣ್ಣದಿಂದ ಮಾರ್ಕ್ ಮಾಡಬೇಕಿತ್ತು.

    ಆಗ ವಾಸುಕಿ, ಹರೀಶ್ ರಾಜ್, ಕಿಶನ್ ಮತ್ತು ಕುರಿ ಪ್ರತಾಪ್ ನಾಲ್ವರು ಶೈನ್ ಶೆಟ್ಟಿಯೇ ನಮ್ಮ ಟಾರ್ಗೆಟ್ ಎಂದು ಹೇಳಿದ್ದಾರೆ. ಈ ಮನೆಯಲ್ಲಿ ಶೈನ್ ನಮಗೆ ಸ್ನೇಹಿತನಾಗಿದ್ದರೂ ಗೇಮ್ ಎಂದು ನೋಡಿದಾಗ ಪ್ರತಿಯೊಬ್ಬರಿಗೂ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಗೇಮ್ ಮಾತ್ರವಲ್ಲದೇ, ಬುದ್ಧಿ, ಪ್ಲಾನ್ ಮಾಡುವುದಲ್ಲಿಯೂ ಇವರೇ ಮುಂದೆ ಇದ್ದಾರೆ. ಹೀಗಾಗಿ ಈ ವಾರ ನಾವು ಶೈನ್ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತಿದ್ದೇವೆ ಎಂದು ಎಲ್ಲರೂ ಕಾರಣ ಕೊಟ್ಟಿದ್ದಾರೆ.

    ಇನ್ನೂ ಚಂದನ್ ಆಚಾರ್, ಪ್ರಿಯಾಂಕಾ, ಶೈನ್ ಶೆಟ್ಟಿ ಮತ್ತು ಭೂಮಿ, ವಾಸುಕಿ ವೈಭವ್ ನಮ್ಮ ಟಾರ್ಗೆಟ್ ಎಂದು ಹೇಳಿದ್ದಾರೆ. ದೀಪಿಕಾ ಕುರಿ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡಿದ್ದರೆ, ಚಂದನಾ, ಭೂಮಿ ಶೆಟ್ಟಿಯನ್ನು ನನ್ನ ಟಾರ್ಗೆಟ್ ಎಂದು ಹೇಳಿದ್ದಾರೆ.

    ಈ ವಾರ ಬಿಗ್‍ಮನೆಯಿಂದ ಹೋರಹೋಗಲು, ಕಿಶನ್, ಹರೀಶ್ ರಾಜ್, ಚಂದನಾ, ಭೂಮಿ ಶೆಟ್ಟಿ, ದೀಪಿಕಾ ದಾಸ್ ಮತ್ತು ಚಂದನ್ ಆಚಾರ್ ನಾಮಿನೇಟ್ ಆಗಿದ್ದಾರೆ.

  • ವಿಧವೆಯರನ್ನು ಟಾರ್ಗೆಟ್ ಮಾಡಿ, ದೈಹಿಕ ಸಂಪರ್ಕ ಬೆಳೆಸಿ ವ್ಯಕ್ತಿಯಿಂದ ಮೋಸ

    ವಿಧವೆಯರನ್ನು ಟಾರ್ಗೆಟ್ ಮಾಡಿ, ದೈಹಿಕ ಸಂಪರ್ಕ ಬೆಳೆಸಿ ವ್ಯಕ್ತಿಯಿಂದ ಮೋಸ

    ಬೆಂಗಳೂರು: ವ್ಯಕ್ತಿಯೊಬ್ಬ ವಿಧವೆಯರನ್ನು ಟಾರ್ಗೆಟ್ ಮಾಡಿ ಅವರ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ವೆಂಕಟೇಶ್ ಮೋಸ ಮಾಡಿದ ವ್ಯಕ್ತಿ. ಆರೋಪಿ ವೆಂಕಟೇಶ್ ವಿಧವೆ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರ ಜೊತೆ ಸಲುಗೆಯಿಂದ ಇರುತ್ತಿದ್ದನು. ಕಣ್ಣಿಗೆ ಕಾಣುವಂತಹ ಕಂಡವರ ಫ್ಲಾಟ್‍ಗಳನ್ನು ತನ್ನದೇ ಎಂದು ತೋರಿಸಿ ಮಹಿಳೆಯರಿಗೆ ನಂಬಿಸುತ್ತಿದ್ದನು.

    ಇಷ್ಟೇ ಅಲ್ಲದೆ ವೆಂಕಟೇಶ್ ಮೊದಲೇ ನೊಂದ ಮಹಿಳೆಯರಿಗೆ ಆಮಿಷಗಳನ್ನೊಡ್ಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು. ಬಳಿಕ ಫ್ಲಾಟ್ ನಿನ್ನ ಹೆಸರಿಗೆ ಬರೆಯುವುದಾಗಿ ಮಹಿಳೆಯಿಂದ ಬರೋಬ್ಬರಿ 80 ಲಕ್ಷ ರೂ. ಹಾಗೂ ಚಿನ್ನಾಭರಣವನ್ನು ಪಡೆದಿದ್ದಾನೆ.

    ಹಣ ಹಾಗೂ ಚಿನ್ನಾಭರಣವನ್ನು ಸಿಗುತ್ತಿದ್ದಂತೆ ವೆಂಕಟೇಶ್ ಮಹಿಳೆಯ ಸಂಬಂಧ ಕಡಿತಗೊಳಿಸಿ ಪರಾರಿ ಆಗಿದ್ದಾನೆ. ಸದ್ಯ ಮೋಸ ಹೋದ ಮಹಿಳೆ ಆರೋಪಿ ವೆಂಕಟೇಶ್ ವಿರುದ್ಧ ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಲಿಫ್ಟ್‌ನಲ್ಲಿ ಸಿಗೋ ಒಂಟಿ ಮಹಿಳೆಯರೇ ಈತನ ಟಾರ್ಗೆಟ್..!

    ಲಿಫ್ಟ್‌ನಲ್ಲಿ ಸಿಗೋ ಒಂಟಿ ಮಹಿಳೆಯರೇ ಈತನ ಟಾರ್ಗೆಟ್..!

    ನವದೆಹಲಿ: ಲಿಫ್ಟ್ ನಲ್ಲಿ ಓಡಾಡುತ್ತಿದ್ದ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ರವಿಕಪೂರ್ (30) ಬಂಧಿತ ಆರೋಪಿಯಾಗಿದ್ದು, ದೆಹಲಿಯ ಗುರ್ಗಾಂವ್ ಪ್ರದೇಶದ ನಿವಾಸಿಯಾಗಿದ್ದಾನೆ. ರವಿ ವಾಸಿಸುವ ಪ್ರದೇಶದಲ್ಲಿದ್ದ ಸ್ಟಾರ್ ಟವರ್ ಕಾಂಪ್ಲೆಕ್ಸ್ ಬಳಿಯ ಲಿಫ್ಟ್ ನಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಲಿಫ್ಟ್ ನಲ್ಲಿ ಮಹಿಳೆಯರು ಒಬ್ಬರೇ ಹತ್ತಿದರೆ ಪ್ರತ್ಯಕ್ಷವಾಗುತ್ತಿದ್ದ ಈತ ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಅಲ್ಲದೇ ಮಹಿಳೆಯರ ಎದುರು ತನ್ನ ದೇಹದ ಭಾಗಗಳನ್ನು ಮುಟ್ಟಿ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

    ನಡೆದಿದ್ದು ಏನು?
    ಹಲವು ದಿನಗಳಿಂದ ಲಿಫ್ಟ್ ನಲ್ಲಿ ಓಡಾಡುವ ಒಂಟಿ ಮಹಿಳೆಯ ಟಾರ್ಗೆಟ್ ಮಾಡಿದ್ದ ಈತ ಶುಕ್ರವಾರವೂ ಲಿಫ್ಟ್ ನಲ್ಲಿ ತೆರಳಿದ್ದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಅತಂಕಗೊಂಡ ಮಹಿಳೆ ಸ್ಥಳೀಯರ ಸಹಕಾರದಿಂದ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

    ಕಾಂಪ್ಲೆಕ್ಸ್ ನಲ್ಲಿ ಆಳವಡಿಸಿದ್ದ ಸಿಸಿಟಿವಿ ದೃಶ್ಯ ಪರಿಶೀಲಿಸಿದ ವೇಳೆ ರವಿಕಪೂರ್ ಹಲವು ಬಾರಿ ಲಿಫ್ಟ್ ಬಳಕೆ ಮಾಡಿದ್ದು ದೃಢವಾಗಿದ್ದು, ಘಟನೆ ಬಳಿಕ ಅದೇ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುವ 5 ಮಹಿಳೆಯರು ಆತನ ವಿರುದ್ಧ ದೂರು ನೀಡಿದ್ದಾರೆ. ಅವರಿಗೂ ಕಾಮುಕ ರವಿಕಪೂರ್ ಇದೇ ರೀತಿ ಕಿರುಕುಳ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಆರೋಪಿ ರವಿಕಪೂರ್ ನನ್ನು ವಶಕ್ಕೆ ಪಡೆದಿರುವ ಗುರ್ಗಾಂವ್ 30ನೇ ಸೆಕ್ಟರ್ ಪೊಲೀಸರು ಕಾಮುಕನ ವಿರುದ್ಧ ಐಪಿಸಿ ಸೆಕ್ಷನ್ 295 (ಅಶ್ಲೀಲ ವರ್ತನೆ), 354-ಎ (ಲೈಂಗಿಕ ಕಿರುಕುಳ), 509 (ಮಹಿಳೆಯರಿಗೆ ಅವಮಾನ) ಮಾಡಿದ ಆರೋಪದಲ್ಲಿ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವರ ಟಾರ್ಗೆಟ್ ಬಿಟ್ಟು ಮತ್ಯಾರ ಟಾರ್ಗೆಟ್ಟಿಗೂ ನಾನು ತಲೆ ಕೆಡಿಸಿಕೊಳ್ಳಲ್ಲ- ಸಚಿವ ಪ್ರಮೋದ್ ಮಧ್ವರಾಜ್

    ದೇವರ ಟಾರ್ಗೆಟ್ ಬಿಟ್ಟು ಮತ್ಯಾರ ಟಾರ್ಗೆಟ್ಟಿಗೂ ನಾನು ತಲೆ ಕೆಡಿಸಿಕೊಳ್ಳಲ್ಲ- ಸಚಿವ ಪ್ರಮೋದ್ ಮಧ್ವರಾಜ್

    ಉಡುಪಿ: ನನ್ನನ್ನು ದೇವರು ಮಾತ್ರ ಟಾರ್ಗೆಟ್ ಮಾಡಬಹುದು. ಅದನ್ನು ಹೊರತಾಗಿ ನಾನು ಯಾವುದೇ ಟಾರ್ಗೆಟ್ಟಿಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಮೀನುಗಾರಿಕಾ- ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಉಡುಪಿಯಲ್ಲಿ ಐಟಿ ಅಧಿಕಾರಿಗಳು ಮತ್ಸ ಘಟಕಗಳ ಮೇಲೆ ಐಟಿ ದಾಳಿ ಮಾಡಿದ ವಿಚಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

    ನಾನು ಚುನಾವಣೆಗೆ ಯಾರ ಫಂಡ್ ತೆಗೆದುಕೊಂಡಿಲ್ಲ. ಕಳುಹಿಸಿದ ಫಂಡನ್ನು ಹಿಂದೆ ಕಳುಹಿಸಿದ್ದೆ. ಚುನಾವಣೆಗೆ ಫಂಡಿಂಗ್ ಮಾಡುವವರೇ ನನಗೆ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತೇನೆ- ದೇಶದ ಕಾನೂನಿನಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ಮತ್ಸೋದ್ಯಮಿಗಳ ಐಟಿ ಟಾರ್ಗೆಟ್ ವಿಚಾರಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ. ಪ್ರತಿಕ್ರಿಯೆ ಕೊಡದಿರುವುದಕ್ಕೂ ನಾನು ಕಾರಣ ಕೊಡಲ್ಲ ಅಂತ ಹೇಳಿದ್ರು.

    ನಾನು ಬಿಜೆಪಿ ಸೇರುತ್ತೇನೆ ಅಂತ ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ನ ಕಾರ್ಯಕರ್ತರೂ ಹೇಳಿಲ್ಲ. ಇದು ಪತ್ರಕರ್ತರ ಸದಾ ಫೇವರೇಟ್ ಪ್ರಶ್ನೆ. ನಿಮಗೆ ಪ್ರಶ್ನೆ ಕೇಳುವ ಮತ್ತು ವಿಮರ್ಶಿಸುವ ಅಧಿಕಾರ ಇದೆ. ನೀವು ಪ್ರಶ್ನೆ ಮಾಡಬಹುದು. ಆದ್ರೆ ನನಗ್ಯಾರೂ ಆಫರ್ ಕೊಟ್ಟಿಲ್ಲ. ನಾನೂ ಬಿಜೆಪಿ ಸೇರುತ್ತೇನೆ ಎಂದು ಹೇಳಿಲ್ಲ ಅಂದ್ರು.

    ಹಾರ್ಡ್ ಹಿಂದುತ್ವ ಅಂದ್ರೆ ಏನು? ಸಾಫ್ಟ್ ಹಿಂದುತ್ವ ಅಂದ್ರೆ ಏನು? ಕೊಲೆ ಮಾಡಿ ಪ್ರತಿಭಟನೆ ಮಾಡಿ ರಾಜಕೀಯ ಮಾಡುವುದು ಹಾರ್ಡ್ ಹಿಂದುತ್ವನಾ? ಕಾಂಗ್ರೆಸ್ಸಿಗರು ದೇವಸ್ಥಾನಕ್ಕೆ ಹೋಗ್ಬಾರ್ದಾ- ನಾವೇನು ಅಸ್ಪೃಶ್ಯರಾ? ಕಾಂಗ್ರೆಸ್ ನವರು ಹಿಂದೂಗಳಲ್ವಾ? ಕೇವಲ ಬಿಜೆಪಿಯವರು ಮಾತ್ರ ದೇವಸ್ಥಾನಗಳಿಗೆ ಹೋಗ್ಬೇಕಾ ಅಂತ ಪ್ರಮೋದ್ ಮಧ್ವರಾಜ್ ಪ್ರಶ್ನೆ ಮಾಡಿದರು. ಈ ಮೂಲಕ ರಾಹುಲ್ ಗಾಂಧಿ ಟೆಂಪಲ್ ರನ್ ಸಮರ್ಥಿಸಿಕೊಂಡರು.

    ಐಪಿಎಸ್ ಅಂದ್ರೆ ಪಕೋಡ ಸರ್ವಿಸ್ ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದು ವಿವಾದವಾಗಿದೆ. ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಪ್ರಮೋದ್ ಮಧ್ವರಾಜ್, ಶಾರ್ಟ್ ಫಾರ್ಮ್ ಗೆ ಹಲವಾರು ಅರ್ಥಗಳನ್ನು ಕಲ್ಪಿಸಬಹುದು. ಐಟಿ ಅನ್ನೋ ಶಬ್ದಕ್ಕೆ ಹಲವಾರು ಅರ್ಥ ಕಲ್ಪಿಸಬಹುದು. ಹಾಗಾಗಿ ಐಪಿಎಸ್‍ಗಳು ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಹೇಳಿದರು.

  • ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

    ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

    ಮಂಗಳೂರು: ದೀಪಕ್ ಹತ್ಯೆಯ ಬೆನ್ನಲ್ಲೇ ಆಹಾರ ಸಚಿವ ಯುಟಿ ಖಾದರ್ ಜೊತೆಗೆ ಇರುವ ಆರೋಪಿ ಇಲ್ಯಾಸ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತನ್ನ ಜೊತೆ ಊಟ ಮಾಡುತ್ತಿರುವ ಫೋಟೋದ ಬಗ್ಗೆ ಸ್ಪಷ್ಟನೆ ನೀಡಿದ ಖಾದರ್, ನಾನು ಎಲ್ಲಿಯಾದರೂ ಹೋದಾಗ ಪಕ್ಕ ಬಂದು ಹಲವು ಮಂದಿ ಊಟ ಮಾಡುತ್ತಾರೆ. ಇದಕ್ಕೆ ನಾನು ಏನು ಮಾಡಲು ಸಾಧ್ಯವಿಲ್ಲ. ಒಂದು ಫೇಸ್ ಬುಕ್ ಅಲ್ಲ 100 ಫೇಸ್ ಬುಕ್ ಗಳಲ್ಲಿ ಫೋಟೋ ಬಂದರೂ ಏನು ಮಾಡಲಾಗುವುದಿಲ್ಲ. ಖಾದರ್ ಏನು ಅಂತ ಅಲ್ಲಿನ ಜನಕ್ಕೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಬಿಜೆಪಿಯವರು ಹತ್ಯೆಗಾಗಿ ಅಲ್ಲಿ ಕಾದುಕೊಂಡು ಕುಳಿತಿದ್ದು, ಎರಡು ದಿನ ಮುಗಿದ ಬಳಿಕ ಅವರ ಮನೆ ಕಡೆ ಕೂಡ ಬಿಜೆಪಿ ತಲೆ ಹಾಕಿ ಮಲಗುವುದಿಲ್ಲ. ಚುನಾವಣೆಯಲ್ಲಿ ಸೋಲ್ತಾರೆ ಎನ್ನುವ ಭಯದಲ್ಲಿ ರಾಜಕೀಯಕ್ಕೆ ಬಿಜೆಪಿಯವರು ಮಾಡುತ್ತಿರುವ ಕೆಲಸ ಇದು ಎಂದು ಹೇಳಿದ್ದಾರೆ. ಇದನ್ನು ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ 

    ಯಾರು ಈ ಇಲ್ಯಾಸ್?
    ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಉಳ್ಳಾಲದ ನಟೋರಿಯಸ್ ಟಾರ್ಗೆಟ್ ಗ್ಯಾಂಗ್ ನಾಯಕ ಇಲ್ಯಾಸ್ ನನ್ನು 2017ರ ನವೆಂಬರ್ ನಲ್ಲಿ ಬಂಧಿಸಿದ್ದರು. ಈತನ ಮೇಲೆ ರಾಜ್ಯದ ನಾನಾ ಭಾಗಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.

    ಇಲ್ಯಾಸ್ ಈ ಹಿಂದೆ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದ. ಗಂಭೀರ ಆರೋಪಗಳಿದ್ದರೂ ಇಲ್ಯಾಸ್ ನನ್ನು ಯು.ಟಿ. ಖಾದರ್ ಉಳ್ಳಾಲ ಬ್ಲಾಕ್ ನ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದು ಹೇಗೆ ಎಂದು ಜನ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಕ್ಟೋಬರ್ ನಲ್ಲಿ ಮುಕ್ಕಚ್ಚೇರಿಯಲ್ಲಿ ನಡೆದ ಝುಬೈರ್ ಎಂಬವರ ಕೊಲೆಯಲ್ಲೂ ಟಾರ್ಗೆಟ್ ಹೆಸರು ತಳುಕು ಹಾಕಿದಾಗ ಇಲ್ಯಾಸ್ ನನ್ನು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿತ್ತು.  ಇದನ್ನು ಓದಿ: ಆಗ ಸುಮ್ಮನಿದ್ದವರು ಈಗೇನು ಮಾತನಾಡೋದು: ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ

    ಯುವತಿಯರ ಮೂಲಕ ಶ್ರೀಮಂತರನ್ನು ಖೆಡ್ಡಾಕ್ಕೆ ಬೀಳಿಸಿ, ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರುಪಾಯಿಯನ್ನು ದೋಚುವ ಕೆಲಸವನ್ನು ಈ ಟಾರ್ಗೆಟ್ ಗ್ರೂಪ್ ಮಾಡಿದೆ ಎನ್ನುವ ಆರೋಪವಿದೆ. ಅಷ್ಟೇ ಅಲ್ಲದೇ ಈ ಗ್ರೂಪಿನ ಸದಸ್ಯರು ಉಳ್ಳಾಲ ಬೀಚ್ ಗೆ ಬಂದವರನ್ನು ದೋಚಿ ಹಲ್ಲೆ ನಡೆಸುತ್ತಿದ್ದರು. ಒಂದು ವೇಳೆ ದೂರು ನೀಡಿದ್ರೆ ಖಾದರ್ ಅವರ ಜನ ಎಂದು ಪೊಲೀಸರೂ ಸಮ್ಮನಾಗುತ್ತಿದ್ದರು ಎನ್ನುವ ಆರೋಪವನ್ನು ಜನ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಟಿಪಳ್ಳದ ಸಫ್ವಾನ್ ಎಂಬ ಯುವಕನನ್ನು ಇದೇ ಟಾರ್ಗೆಟ್ ತಂಡ ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ಕೊನೆಗೆ ಕೊಲೆ ಮಾಡಿ ಚಾರ್ಮಾಡಿ ಘಾಟಿ ಯಿಂದ ಕೆಳಗೆ ಎಸೆದಿತ್ತು.

    ಈ ಫೋಟೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಅಶ್ರಫ್ ಕೊಲೆ ಕೇಸ್ ಆರೋಪಿ ಭರತ್ ಕುಂಡೆಲ್ ಕುಳಿತಿರುವ ಫೋಟೋ ವೈರಲ್ ಆಗಿದೆ. ಬಿಸಿ ರೋಡ್‍ನಲ್ಲಿ ಟಿಪ್ಪು ಜಯಂತಿಯಂದು ಅಶ್ರಫ್ ಕೊಲೆ ನಡೆದಿತ್ತು. ಇದನ್ನು ಓದಿ: Exclusive: ಪೊಲೀಸ್ ಇಲಾಖೆಯಲ್ಲಿನ ‘ಹಸ್ತ’ಕ್ಷೇಪವೇ ಕರಾವಳಿಯಲ್ಲಿ ಶಾಂತಿ ಕದಡಲು ಕಾರಣ!

  • ಪ್ಯಾಕೇಜ್ಡ್ ಸಲಾಡ್ ತಿನ್ನುವಾಗ ಸಿಕ್ತು ಕಪ್ಪೆ ಮರಿ, ಮನೆಯಲ್ಲೇ ಸಾಕಿಕೊಂಡ್ಳು!

    ಪ್ಯಾಕೇಜ್ಡ್ ಸಲಾಡ್ ತಿನ್ನುವಾಗ ಸಿಕ್ತು ಕಪ್ಪೆ ಮರಿ, ಮನೆಯಲ್ಲೇ ಸಾಕಿಕೊಂಡ್ಳು!

    ಕ್ಯಾಲಿಫೋರ್ನಿಯಾ: ಹೊರಗಡೆ ಖರೀದಿಸಿದ ಊಟದಲ್ಲಿ ಜಿರಲೆ, ಹಲ್ಲಿ ಸಿಕ್ಕಿದ ಸಾಕಷ್ಟು ಉದಾಹರಣೆಗಳಿವೆ. ಅಂಥ ಸಂದರ್ಭದಲ್ಲಿ ಅಂಗಡಿಯವರನ್ನ ಬೈದುಕೊಂಡು ಆ ಊಟವನ್ನ ಬಿಸಾಡುತ್ತೇವೆ. ಆದ್ರೆ ಇಲ್ಲೊಬ್ಬ ಮಹಿಳೆ ಸ್ಥಳೀಯ ಮಳಿಗೆಯಲ್ಲಿ ಖರೀದಿಸಿದ ಸಲಾಡ್‍ನಲ್ಲಿ ಜೀವಂತ ಕಪ್ಪೆ ಸಿಕ್ಕಿದ್ದು, ಆಕೆ ಅದನ್ನ ಮನೆಯಲ್ಲೇ ಸಾಕಿಕೊಂಡಿದ್ದಾಳೆ.

    ಅಮೆರಿಕದ ಕ್ಯಾಲಿಫೋರ್ನಿಯಾ ನಿವಾಸಿಯಾದ ಬೆಕ್ಕಿ ಗಾರ್ಫಿಂಕೆಲ್ ಸ್ಥಳೀಯ ಟಾರ್ಗೆಟ್ ಮಳಿಗೆಯಲ್ಲಿ ಸಲಾಡ್ ತೆಗೆದುಕೊಂಡಿದ್ರು. ಆಕೆ ಆಗಲೇ ಮುಕ್ಕಾಲು ಭಾಗದಷ್ಟು ಸಲಾಡ್ ತಿಂದಿದ್ರು. ಆಗ ಜೀವಂತ ಕಪ್ಪೆಯೊಂದು ಸಲಾಡ್‍ನಲ್ಲಿ ಇದ್ದಿದ್ದನ್ನು ನೋಡಿದ್ದಾರೆ.

    ನನಗೆ ತುಂಬಾ ಶಾಕ್ ಆಯ್ತು, ಕಿರುಚಾಡಿದೆ. ನಂತರ ನನಗೆ ವಾಂತಿ ಕೂಡ ಆಯ್ತು. ನಾನು ವೆಜಿಟೇರಿಯನ್. ಸಲಾಡ್‍ನಲ್ಲಿ ಕಪ್ಪೆ ಇದ್ದಿದ್ದನ್ನು ನಂಬಲಾಗಲಿಲ್ಲ ಅಂತ ಗಾರ್ಫಿಂಕೆಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ನಂತರ ಗಾರ್ಫಿಂಕೆಲ್ ಆ ಕಪ್ಪೆ ಮರಿಯನ್ನು ಸೂಕ್ಷ್ಮವಾಗಿ ನೋಡಿದಾಗ ಅದು ಅರೆಜೀವವಾಗಿದ್ದುದು ಗೊತ್ತಾಗಿದೆ. ಬಳಿಕ ಆಕೆಯ ಗಂಡ ಚೆಸ್ಟ್ ಕಂಪ್ರೆಷನ್ ಮಾಡಿ ಕಪ್ಪೆ ಮರಿಯನ್ನ ಬದುಕಿಸಿ ಅದನ್ನ ಸಾಕಿಕೊಂಡಿದ್ದಾರೆ. ಹಳೇ ಅಕ್ವೇರಿಯಂವೊಂದನ್ನ ಕಪ್ಪೆಯ ಮನೆಯನ್ನಾಗಿ ಮಾಡಿದ್ದು, ಅದಕ್ಕೆ ಲಕ್ಕಿ ಅಂತ ಹೆಸರಿಟ್ಟಿದ್ದಾರೆ.

    ಸಲಾಡ್‍ನಲ್ಲಿ ಕಪ್ಪೆ ಮರಿ ಸಿಕ್ಕ ಬಗ್ಗೆ ಗಾಫಿಂಕೆಲ್ ಟಾರ್ಗೆಟ್ ಮಳಿಗೆಯ ಫೇಸ್‍ಬುಕ್ ಪೇಜ್‍ನಲ್ಲಿ ದೂರು ನೀಡಿದ್ದಾರೆ.