Tag: tanisha kuppanda

  • ‘ಬಿಗ್ ಬಾಸ್’ ಮನೆಯಲ್ಲಿ ಅವಘಡ: ಹೊರಕ್ಕೆ ಬಂದ ತನಿಷಾ

    ‘ಬಿಗ್ ಬಾಸ್’ ಮನೆಯಲ್ಲಿ ಅವಘಡ: ಹೊರಕ್ಕೆ ಬಂದ ತನಿಷಾ

    ಟಾಸ್ಕ್ ಆಡುತ್ತಿದ್ದಾಗ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಅವಘಡ ಸಂಭವಿಸಿದೆ. ಈ ಕಾರಣದಿಂದಾಗಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿರುವ ತನಿಷಾ ಕುಪ್ಪಂಡ (Tanisha Kuppanda) ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಟಾಸ್ಕ್ ಆಡುವಾಗ ಅವರಿಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ (Treatment) ಅವರನ್ನು ಮನೆಯಿಂದ ಕಳುಹಿಸಲಾಗಿದೆ ಎನ್ನುವ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬಿಗ್ ಬಾಸ್ ಆಟದಲ್ಲಿ ಎಂದಿನಂತೆ ಟಾಸ್ಕ್ ಆಡಲು ಎರಡು ತಂಡಗಳಾಗಿ ವಿಂಗಡಿಸಿದ್ದರು. ಮನೆಯವರ ವೋಟ್ ಮೇರೆಗೆ ಡ್ರೋನ್ ಪ್ರತಾಪ್ ಮತ್ತು ಮೈಕಲ್ ಅವರನ್ನ ಕ್ಯಾಪ್ಟನ್ ಆಗಿ ಕಣಕ್ಕೆ ಬಿಡಲಾಯಿತು. ಎರಡು ಟೀಮ್‌ನ ಜಟಾಪಟಿ ನಂತರ ಗೆದ್ದಿರುವ ತಂಡ ಕ್ಯಾಪ್ಟನ್ ರೇಸ್‌ಗೆ ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು

    ಡ್ರೋನ್ ತಂಡದಲ್ಲಿ ಪವಿ, ತುಕಾಲಿ, ನಮ್ರತಾ, ವರ್ತೂರು, ಸಿರಿ, ಆಟ ಆಡಿದ್ರೆ, ಮೈಕಲ್ ಟೀಮ್‌ನಲ್ಲಿ ತನಿಷಾ, ವಿನಯ್, ಸ್ನೇಹಿತ್, ಸಂಗೀತಾ, ಅವಿನಾಶ್ ಶೆಟ್ಟಿ ತಂಡವಾಗಿ ರೂಪುಗೊಂಡಿದ್ದಾರೆ. ಎರಡು ತಂಡ ಟಾಸ್ಕ್ವೊಂದರಲ್ಲಿ ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ತುಂಬಾ ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ.

    ಬಿಗ್ ಬಾಸ್ ಟೀಮ್ ಕಡೆಯಿಂದ ಬಂದು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ. ಹೆಚ್ಚಿನ ಚಿಕಿತ್ಸೆ ಬೇಕಿದ್ರೆ ಮತ್ತೆ ಬಿಗ್ ಬಾಸ್‌ಗೆ ಬರೋದು ಅನುಮಾನವೇ ಸರಿ ಎಂದು ಹೇಳಲಾಗುತ್ತಿದೆ.

    ದೊಡ್ಮನೆಗೆ ಕಾಲಿಟ್ಟ ಮೊದಲ ದಿನದಿಂದಲೂ ಗಟ್ಟಿ ಸ್ಪರ್ಧಿಯಾಗಿ ತನಿಷಾ ಸೆಡ್ಡು ಹೊಡೆದಿದ್ದಾರೆ. ಎದುರಾಳಿಗೆ ಮಸ್ತ್ ಠಕ್ಕರ್ ಕೊಟ್ಟಿದ್ದಾರೆ. ಸದ್ಯ ತನಿಷಾ ಮನೆಯಿಂದ ಹೊರಹೋಗಿರೋದು ಬಿಗ್ ಬಾಸ್ ಮನೆಮಂದಿಗೂ ಬೇಸರ ಮೂಡಿಸಿದೆ. ತಮ್ಮ ನೆಚ್ಚಿನ ನಟಿಯು ಬೇಗ ಗುಣಮುಖರಾಗಿ ಮತ್ತೆ ಬಿಗ್ ಬಾಸ್ ಮನೆಗೆ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

  • ತನಿಷಾ ಆಟಕ್ಕೆ ಸಂಗೀತಾ ಎದುರೇಟು- ‘ಬಿಗ್‌’ ಮನೆಯಲ್ಲಿ ಖಾರದ ಘಾಟು

    ತನಿಷಾ ಆಟಕ್ಕೆ ಸಂಗೀತಾ ಎದುರೇಟು- ‘ಬಿಗ್‌’ ಮನೆಯಲ್ಲಿ ಖಾರದ ಘಾಟು

    ದೊಡ್ಮನೆಯಲ್ಲಿ ಮೊದಲು ಇದ್ದ ಸ್ನೇಹ, ಪ್ರೀತಿ ಈಗ ದ್ವೇಷಕ್ಕೆ ತಿರುಗಿದೆ. ತನಿಷಾ, ಕಾರ್ತಿಕ್ (Karthik Mahesh) ಜೊತೆಗಿನ ಸಂಗೀತಾ ಮುನಿಸು ಆಟದಲ್ಲೂ ಮುಂದುವರೆದಿದೆ. ಸವಾಲು ಎಸೆಯೋ ಟಾಸ್ಕ್‌ವೊಂದರಲ್ಲಿ ವರ್ತೂರುಗೆ ಮತ್ತು ತನಿಷಾ (Tanisha Kuppanda) ಹಸಿಮೆಣಸಿನಕಾಯಿ ತಿನ್ನಿಸಿ ಬೆವರಿಳಿಸಿದ್ದಾರೆ.

    ದೊಡ್ಮನೆಯಲ್ಲಿ ವೈಯಕ್ತಿಕ ದ್ವೇಷಗಳು ಈಗ ಆಟದಲ್ಲೂ ಎದ್ದು ಕಾಣ್ತಿದೆ. ತನಿಷಾ (Tanisha) ಮತ್ತು ಕಾರ್ತಿಕ್‌ಗೆ ಕೈ ಕೊಟ್ಟು ಈಗ ಚಮಚ ನಮ್ರತಾ ಜೊತೆ ಸಂಗೀತಾ (Sangeetha Sringeri) ಸೇರಿಕೊಂಡಿದ್ದಾರೆ. ಕಿಚ್ಚನ ಬುದ್ಧಿ ಮಾತಿಗೂ ಮಣಿಯದ ಸಂಗೀತಾ ಕಾರ್ತಿಕ್‌ ಟೀಮ್‌ ಬಿಟ್ಟು ವಿನಯ್‌ ಜೊತೆ ಸೇರಿಕೊಂಡಿದ್ದಾರೆ. ಇದೆಲ್ಲದರ ನಡುವೆ ಹೊಸ ಟಾಸ್ಕ್‌ವೊಂದನ್ನ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡಿದ್ದಾರೆ. ಇದನ್ನೂ ಓದಿ:ಶೆಟ್ರು ಹುಡುಗಿಯ ಹಾಟ್ ಪೋಸ್‌ಗೆ ಬೋಲ್ಡ್ ಆದ ಪಡ್ಡೆಹುಡುಗರು

    ಟಾಸ್ಕ್‌ಗಾಗಿ ಮತ್ತೆ 2 ತಂಡಗಳಾಗಿ ಬಿಗ್ ಬಾಸ್ ವಿಂಗಡಿಸಿದ್ದಾರೆ. ಟೀಮ್ ಗಜಕೇಸರಿ ಮತ್ತು ಟೀಮ್ ಸಂಪತ್ತಿಗೆ ಸವಾಲ್ ಎಂದು ತಂಡಗಳನ್ನ ಮಾಡಲಾಗಿದೆ. ಎದುರಾಳಿ ತಂಡಕ್ಕೆ ಟಾಸ್ಕ್ ನೀಡಿ ಸವಾಲು ಎಸೆಯಬೇಕು. ಅದನ್ನ ಪೂರ್ಣ ಮಾಡದಿದ್ದರೆ ಎದುರಿರುವ ತಂಡಕ್ಕೆ ವಿಶೇಷ ಅಧಿಕಾರ ಸಿಗಲಿದೆ. ಈ ಅನುಸಾರ, ಟಾಸ್ಕ್‌ವೊಂದರಲ್ಲಿ ಗೆದ್ದಿದ್ದಕ್ಕೆ ಎದುರಾಳಿ ಟೀಮ್‌ಗೆ ಸಂಗೀತಾ ತಲೆ ಬೊಳಿಸಬೇಕು ಎಂದು ಹೇಳಿದ್ದರು.

    ಅದರಂತೆ ತಂಡಕ್ಕಾಗಿ ತುಕಾಲಿ ಸಂತೂ ಮತ್ತು ಕಾರ್ತಿಕ್ ತಲೆ ಬೊಳಿಸಿದ್ದಾರೆ. ಇದೀಗ ಮತ್ತೆ 2ನೇ ಬಾರಿ ಕಾರ್ತಿಕ್‌ ತಂಡಕ್ಕೆ ಸವಾಲು ಎಸಗಿದೆ. ಇದರ ಅನುಸಾರ ಎದುರಾಳಿ ತಂಡದದ ತನಿಷಾ-ವರ್ತೂರು 20 ಹಸಿಮೆಣಸಿನಕಾಯಿ ತಿನ್ನಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದನ್ನ ಪೂರ್ಣಗೊಳಿಸಿದರೆ ತನಿಷಾ ತಂಡಕ್ಕೆ ವಿಶೇಷ ಅಧಿಕಾರ ಸಿಗಲಿದೆ.

    ಸಂಗೀತಾ ಸವಾಲನ್ನ ತನಿಷಾ-ವರ್ತೂರು ಕೊಂಚ ಸಿರಿಯಸ್ ಆಗಿಯೇ ತೆಗೆದುಕೊಂಡಿದ್ದರು. ಆಗಲ್ಲ ಅಂದರೆ ಬಿಡಿ ಪರ್ವಾಗಿಲ್ಲ ಎಂದು ತಂಡದವರು ಹೇಳಿದ್ರೂ ಕೂಡ ಕ್ಯಾರೆ ಎನ್ನದೇ ತನಿಷಾ ಮೆಣಸಿಕಾಯಿ ತಿಂದಿದ್ದಾರೆ. ಖಾರ ನೇತಿಗೆ ಏರಿದ್ರೂ ಆಟ ಬಿಟ್ಟು ಕೊಡದೇ ತನಿಷಾ ಸೈ ಎನಿಸಿಕೊಂಡಿದ್ದಾರೆ.

    ಈ ಎಲ್ಲಾ ಹೊಸ ಟಾಸ್ಕ್‌ಗಳು ಬ್ರಹ್ಮಾಂಡ ಗುರೂಜಿ ನೇತೃತ್ವದಲ್ಲಿ ನಡೆದಿದೆ. ನಾಮಿನೇಷನ್ ಬಿಸಿ ನಡುವೆ ತಾ ಮುಂದೂ ನಾ ಮುಂದೂ ಎಂದು ಎಲ್ಲರೂ ಆಟ ಆಡಿದ್ದಾರೆ. ಅಂದಹಾಗೆ, ಈ ವಾರ ನಮ್ರತಾ, ವಿನಯ್, ತನಿಷಾ, ಸ್ನೇಹಿತ್, ಡ್ರೋನ್ ಪ್ರತಾಪ್, ನೀತೂ, ತುಕಾಲಿ ಸಂತೂ, ಸಿರಿ, ಸಂಗೀತಾ ಎಲಿಮಿನೇಷನ್ ಹಾಟ್ ಸೀಟ್‌ನಲ್ಲಿದ್ದಾರೆ.

  • ತನಿಷಾ ಕಳಪೆ ಎಂದು ಜೈಲಿಗಟ್ಟಿದ ಮನೆಮಂದಿ

    ತನಿಷಾ ಕಳಪೆ ಎಂದು ಜೈಲಿಗಟ್ಟಿದ ಮನೆಮಂದಿ

    ದೊಡ್ಮನೆಯ ಆಟ 6 ವಾರಗಳನ್ನ ಪೂರೈಸಿದೆ. ದಿನದಿಂದ ದಿನಕ್ಕೆ ರೋಚಕ ಹಂತಗಳನ್ನ ತಲುಪುತ್ತಿದೆ. ಇನ್ನೂ ಪ್ರತಿ ವಾರದಂತೆ ಈ ವಾರವೂ ಕೂಡ ಕಳಪೆ ಯಾರೆಂದು ತೀರ್ಮಾನಿಸಿ ಮನೆಮಂದಿ ಜೈಲಿಗಟ್ಟಿದ್ದಾರೆ. ನಟಿ ತನಿಷಾ ಕುಪ್ಪಂಡಗೆ (Tanisha Kuppanda) ಜೈಲೂಟ ಫಿಕ್ಸ್‌ ಆಗಿದೆ.

    ದೊಡ್ಮನೆಯ ಆಟ ಜದರ್‌ದಸ್ತ್ ಆಗಿ ಮೂಡಿ ಬರುತ್ತಿದೆ. ಬಿಗ್ ಮನೆಯ (Bigg Boss House) ಡ್ರಾಮಾ ನೋಡೋಕೆ ಅಭಿಮಾನಿಗಳು ಪ್ರತಿ ದಿನ ಹಾಜರಿ ಹಾಕ್ತಿದ್ದಾರೆ. ಹೀಗಿರುವಾಗ ಮನೆಯ ಬಹುಮತದೊಂದಿಗೆ ಜೈಲಿಗೆ ಹೋಗಿದ್ದಾರೆ ತನಿಷಾ. ಇದನ್ನೂ ಓದಿ:ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟ್ರೈಲರ್‌ ಔಟ್‌

    ಇಡೀ ವಾರದ ಟಾಸ್ಕ್, ಆ್ಯಕ್ಟಿವಿಟಿ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ತನಿಷಾಗೆ ಕಳಪೆ ಹಣೆಪಟ್ಟಿ ಹೋಗಿದೆ. ಟಾಸ್ಕ್‌ವೊಂದರಲ್ಲಿ ನಿಧಾನವಾಗಿ ಆಟ ಆಡಿದ್ರು ಅನ್ನೋದನ್ನೇ ಕಾರಣ ಇಟ್ಟುಕೊಂಡು ವಿನಯ್, ನಮ್ರತಾ ಕಳಪೆ ಕೊಟ್ಟರು. ಅದಕ್ಕಾಗಿ ಮೂವರ ಪತ್ರ ಮಿಸ್ ಆಯ್ತು ಎಂದು ತನಿಷಾಗೆ ಟಾರ್ಗೆಟ್ ಮಾಡಿದ್ದಾರೆ ಮನೆಮಂದಿ. ಇದನ್ನೂ ಓದಿ:ನನ್ನ ರಕ್ತಹೀರಿಕೊಂಡು ಬಿಟ್ಟಿದ್ದಾರೆ- ಸಂಗೀತಾಗೆ ರೇಗಿಸಿದ ಕಾರ್ತಿಕ್‌

    ಸಂಗೀತಾ (Sangeetha Sringeri) ಜೊತೆಗಿನ ಜಗಳ, ಟಾಸ್ಕ್‌ನಲ್ಲಿ ಯಡವಟ್ಟು, ಇವೆಲ್ಲವೂ ಸೇರಿ ತನಿಷಾ ವಿರುದ್ಧ ಮನೆಮಂದಿ ನಿಂತಿದ್ದರು. ಮನೆಮಂದಿಯ ಬಹುಮತ ವೋಟ್‌ನಿಂದ ತನಿಷಾ ಜೈಲಿಗೆ ಹೋದರು. ಈ ವೇಳೆ, ತನಿಷಾ ಗಳಗಳನೇ ಅತ್ತಿದ್ದಾರೆ.

  • ಬಿಗ್ ಬಾಸ್ ಸ್ಪರ್ಧಿ ತನಿಷಾ ಪ್ರಕರಣ : ವರದಿಗಾಗಿ ಕಾಯುತ್ತಿದ್ದಾರೆ ಪೊಲೀಸರು

    ಬಿಗ್ ಬಾಸ್ ಸ್ಪರ್ಧಿ ತನಿಷಾ ಪ್ರಕರಣ : ವರದಿಗಾಗಿ ಕಾಯುತ್ತಿದ್ದಾರೆ ಪೊಲೀಸರು

    ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಷಾ ಮೇಲಿನ ಪ್ರಕರಣದ ತನಿಖೆಯನ್ನು ಮಾಗಡಿ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಪ್ರಕರಣದ ಕುರಿತಂತೆ ರಾಮನಗರ ಎಸ್ಪಿ ಮಾತನಾಡಿ, ‘ತನಿಷಾ ಅವರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವನ್ನು ಎಫ್.ಎಸ್.ಎಲ್ (FSL)ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಮಾಗಡಿ ಡಿವೈಎಸ್‍್ಪಿ ಪ್ರವೀಣ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

    ಈ ನಡುವೆ ತನಿಷಾ ಕುಪ್ಪಂಡ (Tanisha Kuppanda) ವಿರುದ್ಧ ಮತ್ತೊಂದು ದೂರು (Complaint) ದಾಖಲಾಗಿದೆ. ಸದ್ಯ ಬಿಗ್ ಬಾಸ್ (Big Boss Kannada) ಮನೆಯಲ್ಲಿರುವ ನಟಿ ಮೇಲೆ ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ. ಈ ಹಿಂದೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ನಟಿ ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ನವೆಂಬರ್ 11ರಂದು ದೂರು ದಾಖಲಾಗಿದ್ದು, ನವೆಂಬರ್‌ 12 ದೂರಿನ ಆಧಾರದ ಮೇಲೆ‌ ಕುಂಬಳಗೋಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಬಗ್ಗೆ ತನಿಷಾ ವಿರುದ್ಧ ಆರೋಪ ಎದುರಾಗಿತ್ತು.

     

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಕುಂಬಳಗೋಡು ಪೊಲೀಸರು (Police) ಬಿಗ್ ಬಾಸ್ ಮನೆಗೆ ತೆರಳಿ, ನಟಿಯ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

  • ಸಂತೋಷ್‌ ಜೊತೆ ಮದುವೆ ನಂತರ ನಿಮ್ಮ ಪರಿಸ್ಥಿತಿ ಏನು? ತನಿಷಾಗೆ ಕಾಲೆಳೆದ ನಮ್ರತಾ

    ಸಂತೋಷ್‌ ಜೊತೆ ಮದುವೆ ನಂತರ ನಿಮ್ಮ ಪರಿಸ್ಥಿತಿ ಏನು? ತನಿಷಾಗೆ ಕಾಲೆಳೆದ ನಮ್ರತಾ

    ರ್ತೂರು ಸಂತೋಷ್ ಮದುವೆ ಆಗಿರುವ ಪ್ರಸಂಗ ಮನೆ ಹೊರಗೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ರೆ, ಇತ್ತ ಮನೆಯೊಳಗೆ ತನಿಷಾ- ಸಂತೋಷ್ ಲವ್ವಿ ಡವ್ವಿ ಜೋರಾಗಿ ನಡೆಯುತ್ತಿದೆ. ನಮ್ಮಿಬ್ಬರ ನಡುವೆ ಅಂತಹದ್ದೇನು ಇಲ್ಲ ಕಣ್ರೋ ಅಂದ್ರು ನಮ್ರತಾ ಬಿಟ್ಟು ಬಿಡದೇ ವರ್ತೂರು ಸಂತೋಷ್ (Varthur Santhosh) ಹೆಸರು ಹೇಳಿ ತನಿಷಾರ (Tanisha Kuppanda) ಕಾಲೆಳೆದಿದ್ದಾರೆ.

    ದೊಡ್ಮನೆಗೆ ನಿನ್ನೆ ಸಂತೋಷ್ ಅವರ ತಾಯಿ ಎಂಟ್ರಿ ಕೊಟ್ಟಿದ್ದರು. ಆಗ ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತೀನಿ ಎಂದು ಪಟ್ಟು ಹಿಡಿದಿದ್ದ ಸಂತೋಷ್‌ಗೆ ಬುದ್ಧಿ ಹೇಳಿ ಮನವಿ ಮಾಡಿದ್ದರು. ಈ ವೇಳೆ, ಅವರ ಸಂಭಾಷನೆ ಕೇಳಿ ನಮ್ರತಾ (Namratha Gowda) ಅಚ್ಚರಿ ಪಟ್ಟಿದ್ದಾರೆ. ಯಾವ ಭಾಷೆ ಇದು ಅರ್ಥನೇ ಆಗ್ತಿಲ್ಲ ಕೇಳೋಕೆ ವಿಚಿತ್ರವಾಗಿದೆ ಎಂದು ತನಿಷಾ ಬಳಿ ಹೇಳಿದ್ದಾರೆ.

    ಅದಕ್ಕೆ ತನಿಷಾ, ಅದು ಅವರ ಆಡು ಭಾಷೆ ಕನ್ನಡ, ತೆಲುಗು, ತಮಿಳು ಮಿಕ್ಸ್ ಆಗಿದೆ ಎಂದಿದ್ದಾರೆ. ಅದಕ್ಕೆ ಅದು ಅರ್ಥವೇ ಆಗೋದಿಲ್ಲ ಎಂದು ಮಾತನಾಡಿದ್ದಾರೆ. ಅದಕ್ಕೆ, ಹೀಗಾದ್ರೆ ಮುಂದೆ ಹೇಗೆ? ಮದುವೆ ಆಗಿ ಅವರ ಮನೆಗೆ ಹೋದರೆ ಪರಿಸ್ಥಿತಿ ಏನು ಎಂದು ತನಿಷಾಗೆ ಕಾಲೆಳೆದಿದ್ದಾರೆ ನಮ್ರತಾ. ಯೇ ಹೋಗೇ ಎಂದಷ್ಟೇ ಹೇಳಿ ನಕ್ಕಿದ್ದಾರೆ. ಇದನ್ನೂ ಓದಿ:ನಟಿ ರಶ್ಮಿಕಾ ಡೀಪ್‍ಫೇಕ್ ವೀಡಿಯೋ ಪ್ರಕರಣ – ಯುವಕನ ವಿಚಾರಣೆ

    ಮೊದಲಿಗೆ ತಮಾಷೆಯಿಂದ ಕೂಡಿರೋ ಈ ಮಾತುಗಳು ಮುಂದಿನ ದಿನಗಳಲ್ಲಿ ನಿಜ ಆಗುತ್ತಾ? ನೋ ಎಂದವರೇ ಆಮೇಲೆ ಜೋಡಿಯಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿರೋದು ಇದೆ. ವರ್ತೂರು ಸಂತೋಷ್- ತನಿಷಾ ಗಾಸಿಪ್‌ಗೆ ಸೀಮಿತವಾಗದೇ ಜೊತೆಯಾಗುತ್ತಾರಾ? ಕಾಯಬೇಕಿದೆ.

  • ತನಿಷಾ ಕುಪ್ಪಂಡ ವಿರುದ್ಧ ಮತ್ತೊಂದು ದೂರು

    ತನಿಷಾ ಕುಪ್ಪಂಡ ವಿರುದ್ಧ ಮತ್ತೊಂದು ದೂರು

    ಬಿಗ್ ಬಾಸ್ (Bigg Boss Kannada) ಸ್ಪರ್ಧಿ, ನಟಿ ತನಿಷಾ ಕುಪ್ಪಂಡ (Tanisha Kuppanda) ವಿರುದ್ಧ ಮತ್ತೊಂದು ದೂರು (Complaint) ದಾಖಲಾಗಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ನಟಿ ಮೇಲೆ ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ. ಈ ಹಿಂದೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ನಟಿ ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ನವೆಂಬರ್ 11ರಂದು ದೂರು ದಾಖಲಾಗಿದ್ದು, ನವೆಂಬರ್‌ 12 ದೂರಿನ ಆಧಾರದ ಮೇಲೆ‌ ಕುಂಬಳಗೋಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಬಗ್ಗೆ ತನಿಷಾ ವಿರುದ್ಧ ಆರೋಪ ಎದುರಾಗಿತ್ತು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಕುಂಬಳಗೋಡು ಪೊಲೀಸರು (Police) ಬಿಗ್ ಬಾಸ್ ಮನೆಗೆ ತೆರಳಿ, ನಟಿಯ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

     

    ಬಿಗ್ ಬಾಸ್ ಆಡಳಿತ ಮಂಡಳಿಗೂ ಪೊಲೀಸರು ನೋಟಿಸ್ ನೀಡಿದ್ದು, ಪ್ರೋಮೊದ ಓರಿಜನಲ್ ಫುಟೇಜ್ ಕೊಡಲು ಸೂಚಿಸಿದ್ದಾರೆ. ಪ್ರೋಮೋ ವಿಡಿಯೋ ಜೊತೆಗೆ ಒರಿಜಿನಲ್ ವೀಡಿಯೋವನ್ನು ಇಂದು ಪೊಲೀಸರು ಸಂಜೆ ಎಫ್.ಎಸ್.ಎಲ್ ಗೆ ಕಳುಹಿಸುವ ಸಾಧ್ಯತೆ ಇದ್ದು, ವರದಿ ಬಂದ ನಂತರ ತನಿಷಾ ಅವರ ವಿಚಾರಣೆಯನ್ನು ಪೊಲೀಸರು ಮುಂದುವರೆಸಲಿದ್ದಾರೆ.

  • ತನಿಷಾ ಕುಪ್ಪಂಡ ಕೇಸ್: ಒರಿಜನಲ್ ವಿಡಿಯೋ ಕೇಳಿದ ಪೊಲೀಸ್

    ತನಿಷಾ ಕುಪ್ಪಂಡ ಕೇಸ್: ಒರಿಜನಲ್ ವಿಡಿಯೋ ಕೇಳಿದ ಪೊಲೀಸ್

    ಬಿಗ್ ಬಾಸ್ ಮನಯೆಲ್ಲಿ ನಟಿ ತನಿಷಾ ಕುಪ್ಪಂಡ (Tanisha Kuppanda) ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದ್ದಂತೆ ನಿನ್ನೆ ಕುಂಬಳಗೋಡು ಪೊಲೀಸರು ಬಿಗ್ ಬಾಸ್ ಮನೆಗೆ ತೆರಳಿ, ನಟಿಯ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

    ಬಿಗ್ ಬಾಸ್ ಆಡಳಿತ ಮಂಡಳಿಗೂ ಪೊಲೀಸರು ನೋಟಿಸ್ ನೀಡಿದ್ದು, ಪ್ರೊಮೋದ ಓರಿಜನಲ್ ಫುಟೇಜ್ ಕೊಡಲು ಸೂಚಿಸಿದ್ದಾರೆ. ಪ್ರೋಮೋ ವಿಡಿಯೋ ಜೊತೆಗೆ ಒರಿಜಿನಲ್ ವಿಡಿಯೋವನ್ನು ಇಂದು ಪೊಲೀಸರು ಸಂಜೆ ಎಫ್.ಎಸ್.ಎಲ್ ಗೆ ಕಳುಹಿಸುವ ಸಾಧ್ಯತೆ ಇದ್ದು, ವರದಿ ಬಂದ ನಂತರ ತನಿಷಾ ಅವರ ವಿಚಾರಣೆಯನ್ನು ಪೊಲೀಸರು ಮುಂದುವರೆಸಲಿದ್ದಾರೆ.

    ಏನಿದು ಪ್ರಕರಣ?

    ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ನಟಿ ತನಿಷಾ ಕುಪ್ಪಂಡ ಅವರ ಮೇಲೆ ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಟಿ ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ನವೆಂಬರ್ 11ರಂದು ದೂರು ದಾಖಲಾಗಿದ್ದು, ನವೆಂಬರ್‌ 12 ದೂರಿನ ಆಧಾರದ ಮೇಲೆ‌ ಕುಂಬಳಗೂಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಬಗ್ಗೆ ತನಿಷಾ ವಿರುದ್ಧ ಆರೋಪ ಎದುರಾಗಿದೆ.

     

    ಡ್ರೋನ್ ಪ್ರತಾಪ್‌ಗೆ ಮಾತನಾಡುವ ಭರದಲ್ಲಿ ಪದಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರು ದಾಖಲಾಗಿದೆ. ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು ಎಂದು ಆಗ್ರಹಿಸಿ ಎಸ್‌ಸಿಎಸ್ಟಿ ಕಾಯ್ದೆಯಡಿ ದೂರು ದಾಖಲಾಗಿದೆ. ವರ್ತೂರು ಸಂತೋಷ್ ನಂತರ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಜೈಲು ಸೇರುತ್ತಾರಾ? ಕಾಯಬೇಕಿದೆ.

  • Bigg Boss ಸೆಟ್‌ನಲ್ಲಿಯೇ ತನಿಷಾ, ಪ್ರತಾಪ್‌ಗೆ ಪೊಲೀಸರ ವಿಚಾರಣೆ

    Bigg Boss ಸೆಟ್‌ನಲ್ಲಿಯೇ ತನಿಷಾ, ಪ್ರತಾಪ್‌ಗೆ ಪೊಲೀಸರ ವಿಚಾರಣೆ

    ಬಿಗ್ ಬಾಸ್ (Bigg Boss Kannada 10) ಸ್ಪರ್ಧಿ ತನಿಷಾ (Tanisha Kuppanda) ವಿರುದ್ಧ ಜಾತಿನಿಂದನೆ ದೂರು ದಾಖಲಾದ ಬೆನ್ನಲ್ಲೇ ಬಿಗ್ ಬಾಸ್ ಸ್ಟುಡಿಯೋಗೆ ಕುಂಬಳಗೋಡು ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ- ಪ್ರತಾಪ್ ಇಬ್ಬರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ:ಒಟಿಟಿಗೆ ಎಂಟ್ರಿ ಕೊಡ್ತಿದೆ ಶಿವಣ್ಣನ ‘ಘೋಸ್ಟ್’

    ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಾದ ಬೆನ್ನಲ್ಲೇ ಬಿಗ್ ಬಾಸ್ ಸೆಟ್‌ಗೆ ತೆರಳಿ ಕುಂಬಳಗೋಡು ಪೊಲೀಸರಿಂದ ವಿಚಾರಣೆ ಮಾಡಲಾಗಿದ್ದು, ತನಿಷಾ ಧ್ವನಿ ಸ್ಯಾಂಪಲ್ ತೆಗೆದುಕೊಳ್ಳಲಾಗಿದೆ. ಪ್ರೋಮೋದಲ್ಲಿರುವ ಧ್ವನಿಗೂ, ಹಾಗೂ ದೂರುದಾರರು ನೀಡಿರುವ ಧ್ವನಿ ಬಗ್ಗೆ ಪರಿಶೀಲನೆ ಮಾಡಲಾಗಿದೆ.

    ಇದೀಗ ಎರಡೂ ಮುದ್ರಿತ ಧ್ವನಿ ಕಲೆಕ್ಟ್ ಮಾಡಿರೋ ಪೊಲೀಸರು, ಈ ಸಂಭಾಷಣೆ ಕುರಿತಂತೆ ಪ್ರತಾಪ್‌ಗೂ ವಿಚಾರಣೆ ಮಾಡಲಾಗಿದೆ. ತನಿಷಾ ಮತ್ತು ಪ್ರತಾಪ್ ಹೇಳಿಕೆ ಪಡೆದಿರೋ ಪೊಲೀಸರ ಮುಂದಿನ ನಡೆಯೇನು? ಎಂದು ಕಾದುನೋಡಬೇಕಿದೆ.

    ಅಷ್ಟಕ್ಕೂ ಆಗಿದ್ದೇನು?

    ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ನವೆಂಬರ್ 12ರಂದು ಎಫ್‌ಐಆರ್ ದಾಖಲಿಸಿದ್ದರು. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಬಗ್ಗೆ ತನಿಷಾ ವಿರುದ್ಧ ಆರೋಪ ಎದುರಾಗಿತ್ತು.

    ಡ್ರೋನ್ ಪ್ರತಾಪ್‌ಗೆ (Drone Prathap) ಮಾತನಾಡುವ ಭರದಲ್ಲಿ ಪದಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರು ದಾಖಲಾಗಿದ್ದು, ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು ಎಂದು ಆಗ್ರಹಿಸಿ ಎಸ್‌ಸಿಎಸ್ಟಿ ಕಾಯ್ದೆಯಡಿ ದೂರು ದಾಖಲಿಸಿದ್ದರು.

  • Bigg Boss: ತನಿಷಾ ಕುಪ್ಪಂಡ ವಿರುದ್ಧ ಜಾತಿ ನಿಂದನೆ ಕೇಸ್

    Bigg Boss: ತನಿಷಾ ಕುಪ್ಪಂಡ ವಿರುದ್ಧ ಜಾತಿ ನಿಂದನೆ ಕೇಸ್

    ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ (Varthur Santhosh) ನಂತರ ತನಿಷಾಗೆ (Tanisha Kuppanda) ಸಂಕಷ್ಟವೊಂದು ಎದುರಾಗಿದೆ. ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣರ ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್

    ನಟಿ ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ನವೆಂಬರ್ 11ರಂದು ದೂರು ದಾಖಲಾಗಿದ್ದು, ನವೆಂಬರ್‌ 12 ದೂರಿನ ಆಧಾರದ ಮೇಲೆ‌ ಕುಂಬಳಗೂಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಬಗ್ಗೆ ತನಿಷಾ ವಿರುದ್ಧ ಆರೋಪ ಎದುರಾಗಿದೆ.

    ಡ್ರೋನ್ ಪ್ರತಾಪ್‌ಗೆ ಮಾತನಾಡುವ ಭರದಲ್ಲಿ ಪದಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರು ದಾಖಲಾಗಿದೆ. ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು ಎಂದು ಆಗ್ರಹಿಸಿ ಎಸ್‌ಸಿಎಸ್ಟಿ ಕಾಯ್ದೆಯಡಿ ದೂರು ದಾಖಲಾಗಿದೆ. ವರ್ತೂರು ಸಂತೋಷ್ ನಂತರ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಜೈಲು ಸೇರುತ್ತಾರಾ? ಕಾಯಬೇಕಿದೆ.

  • Bigg Boss: ನಮ್ಮ ಹುಡುಗಿ ನಿನ್ನ ಲವ್‌ನಲ್ಲಿ ಬೀಳಲ್ಲ- ಕಾರ್ತಿಕ್‌ಗೆ ತನಿಷಾ ಎಚ್ಚರಿಕೆ

    Bigg Boss: ನಮ್ಮ ಹುಡುಗಿ ನಿನ್ನ ಲವ್‌ನಲ್ಲಿ ಬೀಳಲ್ಲ- ಕಾರ್ತಿಕ್‌ಗೆ ತನಿಷಾ ಎಚ್ಚರಿಕೆ

    ಬಿಗ್ ಬಾಸ್ ಮನೆಯಲ್ಲಿ (Bigg Boss House 10) ಪ್ರತಿ ಬಾರಿಯಂತೆ ಈ ಸಲ ಕೂಡ ಲವ್ ಸ್ಟೋರಿಗಳ ಹಾವಳಿ ಜೋರಾಗಿದೆ. ಅದರಲ್ಲಿ ಸಂಗೀತಾ- ಕಾರ್ತಿಕ್ ಒಡನಾಟ ಹೈಲೆಟ್ ಆಗಿದೆ. ಇದೀಗ ‘ಸೂಪರ್ ಸಂಡೇ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಕಾರ್ತಿಕ್‌ಗೆ ಕಿವಿಮಾತೊಂದನ್ನ ತನಿಷಾ ಹೇಳಿದ್ದಾರೆ. ಕಾರ್ತಿಕ್‌ಗೆ ನಮ್ಮ ಹುಡುಗಿ ನಿನ್ನ ಲವ್‌ನಲ್ಲಿ ಬೀಳಲ್ಲ, ವ್ಯರ್ಥ ಪ್ರಯತ್ನ ಅಂತ ತನಿಷಾ ಎಚ್ಚರಿಕೆ ನೀಡಿದ್ದಾರೆ.‌

    ವೀಕೆಂಡ್ ಮಾತುಕತೆಯಲ್ಲಿ ಸುದೀಪ್, ಸಹಸ್ಪರ್ಧಿಗೆ ಬಲೂನ್ ಹೊಡೆದು ತಮ್ಮ ಅನಿಸಿಕೆಯನ್ನ ಹೇಳುವ ಅವಕಾಶ ಪ್ರತಿಯೊಬ್ಬರಿಗೂ ನೀಡಿದ್ದರು. ಆಗ ಎಲ್ಲರಂತೆ ತನಿಷಾ (Tanisha) ಕೂಡ, ಕಾರ್ತಿಕ್ (Karthik Mahesh) ಕುರಿತು ಮಾತನಾಡಿದ್ದಾರೆ. ನಿನ್ನ ನಿರ್ಧಾರಗಳೆಲ್ಲವೂ ಯಾವಾಗಲೂ ಸರಿ ಅಂದುಕೊಳ್ಳುತ್ತಿಯಾ ಆದರೆ ಅದು ಸುಳ್ಳು ಎಂದು ಬಲೂನ್ ಬ್ಲ್ಯಾಸ್ಟ್ ಮಾಡಿದ್ದಾರೆ. ಬಳಿಕ ನಮ್ಮ ಹುಡುಗಿ ಸಂಗೀತಾ ನಿನ್ನ ಲವ್‌ನಲ್ಲಿ ಬೀಳಲ್ಲ. ಅದು ನಿಮ್ಮ ಪ್ರಯತ್ನ ವ್ಯರ್ಥ ಎಂದಿದ್ದಾರೆ. ಇದನ್ನೂ ಓದಿ:ಒಟಿಟಿಗೆ ಬಂತು ‘ಲಿಯೋ’: ಹೊಸ ಸಿನಿಮಾದಲ್ಲಿ ವಿಜಯ್ ಬ್ಯೂಸಿ

    ಇನ್ನೂ ಬಿಗ್ ಬಾಸ್ ಮನೆಯಲ್ಲಿ (Bigg Boss House) ಪರಿಚಯವಾದ ಸಹೋದರಿಯರ ಜೊತೆ ಡ್ರೋನ್ ಪ್ರತಾಪ್ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಸಂಗೀತಾ (Sangeetha Sringeri) ಜೊತೆಗಿನ ಪ್ರತಾಪ್ ಡ್ಯಾನ್ಸ್ ನೋಡಿ ಕಾರ್ತಿಕ್ ನೋಟ ಬೇರೇ ತರಹನೇ ಇತ್ತು. ಶಾಕ್ ಆಗಿ ಇಬ್ಬರೂ ಡ್ಯಾನ್ಸ್ ನೋಡುತ್ತಿದ್ದರು. ಕಾರ್ತಿಕ್ ನಡೆಗೆ ಸುದೀಪ್ ಸೇರಿದಂತೆ ಸಹಸ್ಪರ್ಧಿಗಳು ಕೂಡ ಕಾಲೆಳೆದಿದ್ದಾರೆ.

    ಬಿಗ್ ಮನೆಗೆ ಕಾಲಿಟ್ಟ ಕೆಲವೇ ದಿನಕ್ಕೆ ಇಶಾನಿ ನನ್ನ ಗರ್ಲ್‌ಫ್ರೆಂಡ್ ಎಂದು ಮೈಕಲ್ ಘೋಷಿಸಿದ್ದರು. ಸಂಗೀತಾ-ಕಾರ್ತಿಕ್ ನಡುವೆ ಗೆಳೆತನವಿದೆ. ಆದರೆ ಸಮ್‌ಥಿಂಗ್ ಸಮ್‌ಥಿಂಗ್ ಶುರುವಾಗಿದ್ಯಾ? ಮುಂದಿನ ದಿನಗಳಲ್ಲಿ ಮೈಕಲ್ ಅವರಂತೆಯೇ ಬ್ರೇಕಿಂಗ್ ನ್ಯೂಸ್ ಕೊಡುತ್ತಾರಾ ಕಾಯಬೇಕಿದೆ.