Tag: tamilnadu

  • ಜಯಾ ಸಾವಿನ ತನಿಖೆಗೆ ಡಿಎಂಕೆ ಬೆಂಬಲ

    ಜಯಾ ಸಾವಿನ ತನಿಖೆಗೆ ಡಿಎಂಕೆ ಬೆಂಬಲ

    ಚೆನ್ನೈ: ತಮಿಳುನಾಡು ಮಾಜಿ ಸಿಎಂ ಮೃತ ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಯಬೇಕೆಂಬ ಓ ಪನ್ನೀರ್ ಸೆಲ್ವಂ ಅವರ ಒತ್ತಾಯಕ್ಕೆ ಡಿಎಂಕೆ ಬೆಂಬಲ ನೀಡಿದೆ.

    ಈ ಬಗ್ಗೆ ಟ್ವೀಟ್ ಮಾಡಿದ್ದ ಪನ್ನೀರ್ ಸೆಲ್ವಂ, ನಾನು ಸಿಎಂ ಆಗಿದ್ದಾಗ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಆರಂಭಿಸಲಾಗಿತ್ತು. ಆದರೆ ನಂತರ ಎಲ್ಲಾ ತಲೆಕೆಳಗಾಯಿತು ಎಂದು ಹೇಳಿದ್ದರು.

    ಶುಕ್ರವಾರದಂದು ಜಯಲಲಿತಾ ಅವರ 69ನೇ ಜನ್ಮವಾರ್ಷಿಕೋತ್ಸವದ ಪ್ರಯುಕ್ತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪನ್ನೀರ್‍ಸೆಲ್ವಂ, ಅಮ್ಮನ ಹೋರಾಟದಿಂದಲೇ ನಾವು ಇವತ್ತು ಇಲ್ಲಿದ್ದೀವಿ. ಅಮ್ಮನ ಸಾವಿನ ಬಗ್ಗೆ ನಮಗೆ ಉತ್ತರ ಬೇಕು ಅಂದ್ರು.

    ಈ ಬಗ್ಗೆ ಮಾತನಾಡಿರೋ ಡಿಎಂಕೆ ವಕ್ತಾರರಾದ ಸರವಣನ್, ನಮ್ಮ ನಾಯಕ ಎಂಕೆ ಸ್ಟ್ಯಾಲಿನ್ ಕೂಡ ಜಯಾ ಸಾವಿನ ತನಿಖೆಗೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಜಯಾ ಸಾವಿನ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಹೇಳಿದ್ದರು. ಇದರಲ್ಲಿ ಏಮ್ಸ್‍ನ ವೈದ್ಯರು ಕೂಡ ಇರುವುದರಿಂದ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಹೇಳಿದ್ದರು. ಇದೀಗ ಪನ್ನೀರ್ ಸೆಲ್ವಂ ಕೂಡ ಜಯಾ ಸಾವಿನ ತನಿಖೆ ಆಗಬೇಕು ಎಂದಿದ್ದು ನಮ್ಮ ನಾಯಕ ಹೇಳಿದ ವಿಚಾರಕ್ಕೆ ಪುಷ್ಠಿ ನೀಡಿದೆ ಅಂತ ಹೇಳಿದ್ರು.

    ಈ ನಡುವೆ ಶುಕ್ರವಾರದಂದು ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ವರದಿಗಾರರೊಂದಿಗೆ ಮಾತನಾಡಿ, ಜಯಲಲಿತಾ ಸಾವಿನ ಕುರಿತು ಯಾವುದೇ ರಹಸ್ಯಗಳಿಲ್ಲ ಎಂದು ಹೇಳಿದ್ದಾರೆ. ಕೆಲವರು ಆರೋಪ ಮಾಡುತ್ತಿರುವಂತೆ ಜಯಲಲಿತಾ ಸಾವಿನ ಹಿಂದೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.

    ಕಳೆದ ವರ್ಷ ಸುಮಾರು ಎರಡು ತಿಂಗಳ ಕಾಲ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಡಿಎಂಬರ್ 5ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ರು.

  • ನಾಡಿನೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ -ಪ್ರಧಾನಿಯಿಂದ ಅತಿದೊಡ್ಡ ಈಶ್ವರ ಮೂರ್ತಿ ಲೋಕಾರ್ಪಣೆ

    ನಾಡಿನೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ -ಪ್ರಧಾನಿಯಿಂದ ಅತಿದೊಡ್ಡ ಈಶ್ವರ ಮೂರ್ತಿ ಲೋಕಾರ್ಪಣೆ

    ನವದೆಹಲಿ: ಇಂದು ಹಿಂದೂಗಳಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಹಬ್ಬದ ಸಂಭ್ರಮ. ಶುಭ ಶುಕ್ರವಾರವಾದ ಇವತ್ತು ಶಿವನ ಹಬ್ಬ ಬಂದಿದೆ. ನಾಡಿನ ಎಲ್ಲಾ ಶಿವನ ದೇಗುಲಗಳಲ್ಲಿ ವಿಶೇಷ ಪೂಜೆಗಳು ಬೆಳಗ್ಗಿನಿಂದಲೇ ಆರಂಭವಾಗಿದೆ.

    ಭಕ್ತರು ಬೆಳ್ಳಂಬೆಳಗ್ಗೆಯೇ ಆದಿದೇವನ ದರುಶನಕ್ಕೆ ಸಾಲುಗಟ್ಟಿದ್ದಾರೆ. ಈ ನಡುವೆ, ತಮಿಳುನಾಡಿನ ಕೋಯಮತ್ತೂರಿನ ವೆಲ್ಲಯಂಗಿರಿ ಪರ್ವತದ ಸಮೀಪದಲ್ಲಿ 112 ಅಡಿ ಎತ್ತರದ ಬೃಹತ್ ಶಿವನ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಇದನ್ನು ಇಂದು ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ತಮಿಳುನಾಡು-ಕೇರಳ ಗಡಿಯಲ್ಲಿ ಈ ಕಾರ್ಯಕ್ರಮವಿರುವುದರಿಂದ ಐದು ಹಂತಗಳಲ್ಲಿ ಬಿಗಿ ಭದ್ರೆತೆಯನ್ನು ಕೈಗೊಳ್ಳಲಾಗಿದೆ.

    ಪ್ರಸಿದ್ಧ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ನೇತೃತ್ವದ ಇಷಾ ಫೌಂಡೇಷನ್ ಈ ವಿಗ್ರಹವನ್ನು ನಿರ್ಮಿಸಿದೆ. ಈ ಶಿವನ ವಿಗ್ರಹ ತೂಕ ಬರೋಬ್ಬರಿ 500 ಟನ್ ಇದ್ದು, ಭೂಮಿಯ ಮೇಲಿನ ವಿಗ್ರಹಗಳಲ್ಲಿ ಅತಿ ದೊಡ್ಡ ಮುಖವಿರುವ ವಿಗ್ರಹ ಇದಾಗಿದೆ. ಈ ಬೃಹತ್ ವಿಗ್ರಹವನ್ನು ಸಂಪೂರ್ಣವಾಗಿ ಸ್ಟೀಲ್‍ನಿಂದ ನಿರ್ಮಿಸಲಾಗಿದೆ. ಇಂತಹ ಮೂರ್ತಿಗಳನ್ನು ದೇಶದ ನಾಲ್ಕು ದಿಕ್ಕುಗಳಲ್ಲಿಯೂ ನಿರ್ಮಿಸಲು ಇಷಾ ಫೌಂಡೇಷನ್ ಉದ್ದೇಶಿಸಿದೆ.

  • ಶಶಿಕಲಾನ ಬೆಂಗ್ಳೂರಿಂದ ತಮಿಳುನಾಡು ಜೈಲಿಗೆ ಶಿಫ್ಟ್ ಮಾಡಲು ರಣತಂತ್ರ!

    ಶಶಿಕಲಾನ ಬೆಂಗ್ಳೂರಿಂದ ತಮಿಳುನಾಡು ಜೈಲಿಗೆ ಶಿಫ್ಟ್ ಮಾಡಲು ರಣತಂತ್ರ!

    ಬೆಂಗಳೂರು: ತಮಿಳುನಾಡಿನಲ್ಲಿ ಪಳನಿಸ್ವಾಮಿ ವಿಶ್ವಾಸಮತ ಗೆದ್ದ ಬೆನ್ನಲ್ಲೇ ಇತ್ತ ಶಶಿಕಲಾರಲ್ಲಿ ಹೊಸ ಉತ್ಸಾಹ ಮೂಡಿಬಂದಿದ್ದು, ಬೆಂಗಳೂರು ಜೈಲಿಂದ ತಮಿಳುನಾಡಿನ ಜೈಲಿಗೆ ಶಿಫ್ಟ್ ಮಾಡಿಸಿಕೊಳ್ಳಲು ಹೊಸ ಸರ್ಕಾರ ರಣತಂತ್ರ ಹೂಡಿದೆ.

    ಶಶಿಕಲಾ ಪರವಾಗಿ ಕರ್ನಾಟಕ ಹೈಕೋರ್ಟ್‍ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲು ಕಸರತ್ತು ನಡೆದಿದೆ. ಮಧುಮೇಹ, ಮೊಣಕಾಲು ನೋವಿನ ಕಾರಣ ನೀಡಿ ಚೆನ್ನೈ ಅಥವಾ ವೇಲೂರು ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಲು ನಿರ್ಧರಿಸಲಾಗಿದೆ.

    ಬೆಂಗಳೂರು ಜೈಲಿನಲ್ಲಿ ಯಾವುದೇ ವಿಐಪಿ ಸೌಲಭ್ಯ ನೀಡದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲು ತಯಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾರನ್ನು ಇಬ್ಬರು ವಕೀಲರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಅಣ್ಣಾಡಿಎಂಕೆ ಅಧಿನಾಯಕಿ ಶಶಿಕಲಾ, ಪಳನಿ ಸ್ವಾಮಿ ಸರ್ಕಾರದ ಈ ಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

  • ಭಾರೀ ಹೈಡ್ರಾಮದ ಬಳಿಕ ವಿಶ್ವಾಸ ಮತಯಾಚನೆಯಲ್ಲಿ ಗೆದ್ದಿತು ಶಶಿಕಲಾ ಬಣ

    ಭಾರೀ ಹೈಡ್ರಾಮದ ಬಳಿಕ ವಿಶ್ವಾಸ ಮತಯಾಚನೆಯಲ್ಲಿ ಗೆದ್ದಿತು ಶಶಿಕಲಾ ಬಣ

    ಚೆನ್ನೈ: ಗದ್ದಲ, ಕೋಲಾಹಲ ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿದ್ದ ತಮಿಳುನಾಡು ವಿಶೇಷ ಅಧಿವೇಶನದಲ್ಲಿ ಕೊನೆಗೂ ಶಶಿಕಲಾ ಬಣ ಗೆದ್ದಿದೆ. ಸಿಎಂ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ಪರೀಕ್ಷೆಯಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

    ಕಾಂಗ್ರೆಸ್, ಡಿಎಂಕೆ ಶಾಸಕರ ಅನುಪಸ್ಥಿತಿಯಲ್ಲಿ ಸರ್ಕಾರದ ಪರವಾಗಿ 122 ಶಾಸಕರು ಮತವನ್ನು ಚಲಾಯಿಸಿದ್ದರೆ ವಿರುದ್ಧವಾಗಿ 11 ಮತಗಳು ಬಿದ್ದಿದೆ. ಈ ಮೂಲಕ ಅಧಿಕೃತವಾಗಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿದೆ.

    ಭಾರೀ ಹೈಡ್ರಾಮ: ಕರ್ನಾಟಕದ ವಿಧಾನಸಭೆಯಲ್ಲಿ ಈ ಹಿಂದೆ ನಡೆದ ಇತಿಹಾಸ ತಮಿಳುನಾಡಿನಲ್ಲಿ ಮರುಕಳಿಸಿತ್ತು. ಶನಿವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಆರಂಭವಾದ ಕೂಡಲೇ ಸಿಎಂ ಪಳನಿ ಸ್ವಾಮಿ ವಿಶ್ವಾಸಮತಯಾಚನೆ ನಿರ್ಣಯ ಮಂಡಿಸಿದ ಬಳಿಕ ಡಿಎಂಕೆ ನಾಯಕ ಸ್ಟಾಲಿನ್ ರಹಸ್ಯ ಮತದಾನಕ್ಕೆ ಆಗ್ರಹಿಸಿದರು. ಸ್ಟಾಲಿನ್‍ಗೆ ಪನ್ನೀರ್ ಸೆಲ್ವಂ ಬಣದ ಶಾಸಕರು ರಹಸ್ಯ ಮತದಾನ ನಡೆಸುವಂತೆ ಸ್ಪೀಕರ್ ಅವರನ್ನು ಒತ್ತಾಯಿಸಿದರು.

    ಕಲಾಪದಲ್ಲಿ ಮಾತನಾಡಿದ ಸ್ಟಾಲಿನ್, ವಿಶ್ವಾಸಮತಯಾಚನೆಗೆ ಪೊಲೀಸ್ ರಕ್ಷಣೆಯಲ್ಲಿ ಶಾಸಕರನ್ನು ಕರೆ ತರಲಾಗಿದೆ. ಇದರಿಂದಾಗಿ ಶಾಸಕರಿಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಹಸ್ಯ ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.

    ಪನ್ನೀರ್ ಸೆಲ್ವಂ ಬಣದ ಮುಖ್ಯ ಸಚೇತಕ ಮತ್ತು ಶಾಸಕ ಸೆಮ್ಮೈಲೈ ಮಾತನಾಡಿ, ಎಐಎಡಿಎಂಕೆ ಶಾಸಕರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಅವರನ್ನು ರಕ್ಷಿಸಿ ಎಂದು ಹೇಳಿದರು. ಆದರೆ ಸ್ಪೀಕರ್ ಧನ್‍ಪಾಲ್ ಅವರು, ವಿಶ್ವಾಸಮತಯಾಚನೆ ಹೇಗೆ ನಡೆಸಬೇಕು ಎನ್ನುವುದು ನನಗೆ ಬಿಟ್ಟ ವಿಚಾರ. ಮತದಾನ ಹೇಗೆ ನಡೆಸಬೇಕು ಎನ್ನುವುದು ನನಗೆ ತಿಳಿದಿದೆ. ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಮತದಾನಕ್ಕೆ ಅವಕಾಶ ನೀಡಿದರು.

    ಹೈಡ್ರಾಮ ಹೀಗಿತ್ತು: ರಹಸ್ಯ ಮತದಾನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಡಿಎಂಎಕೆ, ಕಾಂಗ್ರೆಸ್, ಪನ್ನೀರ್ ಸೆಲ್ವಂ ಬಣದ ಶಾಸಕರು ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಡಿಎಂಕೆ ಶಾಸಕರು ಸ್ಪೀಕರ್ ಮುಂದುಗಡೆ ಇರುವ ಮೈಕ್ ಮತ್ತು ಟೇಬಲ್ ಕುರ್ಚಿಗಳು ಒಡೆದು ಹಾಕಿದರು. ಅಷ್ಟೇ ಅಲ್ಲದೇ ಸ್ಪೀಕರ್ ಧನ್ ಪಾಲ್ ಮೇಲೆ ಫೈಲ್ ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಡಿಎಂಕೆಯ ಕೆಲ ಶಾಸಕರು ಸ್ಪೀಕರ್ ಧನ್‍ಪಾಲ್ ಶರ್ಟ್ ಎಳೆದ ಪ್ರಸಂಗ ನಡೆಯಿತು. ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಪೀಕರ್ ಸದನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.

    ಸದನ ಮತ್ತೆ ಆರಂಭವಾದ ಕೂಡಲೇ ಡಿಎಂಕೆ ಶಾಸಕರ ಮತ್ತೆ ಪ್ರತಿಭಟನೆ ನಡೆಸಿದರು. ಈ ವೇಳೆ ಶರ್ಟ್ ಹಿಡಿದು ಎಳೆದಾಡಿದಕ್ಕೆ ಡಿಎಂಕೆಯ ಎಲ್ಲ ಶಾಸಕರನ್ನು ಸ್ಪೀಕರ್ ಸದನದಿಂದ ಹೊರಗಡೆ ಹಾಕುವಂತೆ ಮಾರ್ಷಲ್‍ಗಳಿಗೆ ಸೂಚಿಸಿದರು. ಮಾರ್ಷಲ್‍ಗಳು ಬಲವಂತವಾಗಿ ಶಾಸಕರನ್ನು ಹೊರಕ್ಕೆ ಹಾಕಿದರು. ಸ್ಪೀಕರ್ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಶಾಸಕರು ಸಭಾ ತ್ಯಾಗ ಮಾಡಿದರು. ಈ ಎಲ್ಲ ಹೈಡ್ರಾಮದ ಬಳಿಕ ಕೊನೆಗೆ ಮೂರು ಗಂಟೆಗೆ ನಡೆದ ಕಲಾಪದಲ್ಲಿ ಒಟ್ಟು 123 ಮತಗಳನ್ನು ಪಡೆಯುವ ಮೂಲಕ ಪಳನಿಸ್ವಾಮಿ ಬಹುಮತವನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾದರು.

    ರಾಜ್ಯಪಾಲರಿಗೆ ದೂರು: ಹರಿದ ಬಟ್ಟೆಯಲ್ಲಿ ವಿಧಾನಸಭೆಯಿಂದ ಹೊರಬಂದ ಡಿಎಂಕೆ ನಾಯಕ ಸ್ಟಾಲಿನ್ ಅದೇ ಬಟ್ಟೆಯಲ್ಲಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ.

    ಸಮಾಧಿಗೆ ಭೇಟಿ: ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ಬಳಿಕ ಸಿಎಂ ಪಳನಿಸ್ವಾಮಿ ಚೆನ್ನೈನ ಮರೀನಾ ಬೀಚ್ ಸಮೀಪ  ಇರುವ ಜಯಾ ಸಮಾಧಿಗೆ ತಮ್ಮ ಶಾಸಕರ ಜೊತೆ ತೆರಳಿ ನಮನ ಸಲ್ಲಿಸಿದರು.

    ಶರ್ಟ್ ಬಿಚ್ಚಿದ್ದ ಗೂಳಿಹಟ್ಟಿ ಚಂದ್ರಶೇಖರ್: 2010ರ ಅಕ್ಟೋಬರ್‍ನಲ್ಲಿ ಬಿಎಸ್‍ಯಡಿಯೂರಪ್ಪ ವಿಶ್ವಾಸ ಮತಯಾಚನೆ ವೇಳೆ ಶಾಸಕಾರ ಮಾರಾಮಾರಿ ನಡೆದಿತ್ತು. ಈ ವೇಳೆ ಮಾರ್ಷಲ್‍ಗಳು ಗೂಳಿಹಟ್ಟಿ ಚಂದ್ರಶೇಖರ್ ಅವರನ್ನು ಹೊರಹಾಕಲು ಮುಂದಾದಾಗ ಅವರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು.

  • ತಮಿಳುನಾಡು ಅಸೆಂಬ್ಲಿಯಲ್ಲಿ ಹೈಡ್ರಾಮ: ಮೈಕ್, ಟೇಬಲ್ ಕುರ್ಚಿ ಒಡೆದು ಹಾಕಿದ ಶಾಸಕರು

    ತಮಿಳುನಾಡು ಅಸೆಂಬ್ಲಿಯಲ್ಲಿ ಹೈಡ್ರಾಮ: ಮೈಕ್, ಟೇಬಲ್ ಕುರ್ಚಿ ಒಡೆದು ಹಾಕಿದ ಶಾಸಕರು

    ಚೆನ್ನೈ:ಕರ್ನಾಟಕದ ವಿಧಾನಸಭೆಯಲ್ಲಿ ಈ ಹಿಂದೆ ನಡೆದ ಇತಿಹಾಸ ಈಗ ತಮಿಳುನಾಡಿನಲ್ಲಿ ಮರುಕಳಿಸಿದೆ. ಪಳನಿಸ್ವಾಮಿ ವಿಶ್ವಾಸ ಮತಯಾಚನೆ ವೇಳೆ ಡಿಎಂಕೆ ಶಾಸಕರು ಫೈಲ್‍ಗಳನ್ನು ಸ್ಪೀಕರ್ ಮೇಲೆ ಎಸೆದು ಕೋಲಾಹಲ ಸೃಷ್ಟಿಸಿದ್ದಾರೆ.

    ಶನಿವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಆರಂಭವಾದ ಕೂಡಲೇ ಸಿಎಂ ಪಳನಿ ಸ್ವಾಮಿ ವಿಶ್ವಾಸಮತಯಾಚನೆ ನಿರ್ಣಯ ಮಂಡಿಸಿದ ಬಳಿಕ ಡಿಎಂಕೆ ನಾಯಕ ಸ್ಟಾಲಿನ್ ರಹಸ್ಯ ಮತದಾನಕ್ಕೆ ಆಗ್ರಹಿಸಿದರು. ಸ್ಟಾಲಿನ್‍ಗೆ ಪನ್ನೀರ್ ಸೆಲ್ವಂ ಬಣದ ಶಾಸಕರು ಬೆಂಬಲ ವ್ಯಕ್ತಪಡಿಸಿದರು.

    ಕಲಾಪದಲ್ಲಿ ಮಾತನಾಡಿದ ಸ್ಟಾಲಿನ್, ವಿಶ್ವಾಸಮತಯಾಚನೆಗೆ ಪೊಲೀಸ್ ರಕ್ಷಣೆಯಲ್ಲಿ ಶಾಸಕರನ್ನು ಕರೆ ತರಲಾಗಿದೆ. ಇದರಿಂದಾಗಿ ಶಾಸಕರಿಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಹಸ್ಯ ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.

    ಪನ್ನೀರ್ ಸೆಲ್ವಂ ಬಣದ ಮುಖ್ಯ ಸಚೇತಕ ಮತ್ತು ಶಾಸಕ ಸೆಮ್ಮೈಲೈ ಮಾತನಾಡಿ, ಎಐಎಡಿಎಂಕೆ ಶಾಸಕರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಅವರನ್ನು ರಕ್ಷಿಸಿ ಎಂದು ಹೇಳಿದರು. ಆದರೆ ಸ್ಪೀಕರ್ ಧನ್‍ಪಾಲ್ ಅವರು, ವಿಶ್ವಾಸಮತಯಾಚನೆ ಹೇಗೆ ನಡೆಸಬೇಕು ಎನ್ನುವುದು ನನಗೆ ಬಿಟ್ಟ ವಿಚಾರ. ಮತದಾನ ಹೇಗೆ ನಡೆಸಬೇಕು ಎನ್ನುವುದು ನನಗೆ ತಿಳಿದಿದೆ. ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಮತದಾನಕ್ಕೆ ಅವಕಾಶ ನೀಡಿದರು.

    ರಹಸ್ಯ ಮತದಾನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಡಿಎಂಎಕೆ, ಕಾಂಗ್ರೆಸ್, ಪನ್ನೀರ್ ಸೆಲ್ವಂ ಬಣದ ಶಾಸಕರು ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಡಿಎಂಕೆ ಶಾಸಕರು ಸ್ಪೀಕರ್ ಮುಂದುಗಡೆ ಇರುವ ಮೈಕ್ ಮತ್ತು ಟೇಬಲ್ ಕುರ್ಚಿಗಳು ಒಡೆದು ಹಾಕಿದರು. ಅಷ್ಟೇ ಅಲ್ಲದೇ ಸ್ಪೀಕರ್ ಧನ್ ಪಾಲ್ ಮೇಲೆ ಫೈಲ್ ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಪೀಕರ್ ಸದನದವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.

    ಶರ್ಟ್ ಬಿಚ್ಚಿದ್ದ ಗೂಳಿಹಟ್ಟಿ ಚಂದ್ರಶೇಖರ್: 2010ರ ಅಕ್ಟೋಬರ್‍ನಲ್ಲಿ ಬಿಎಸ್‍ಯಡಿಯೂರಪ್ಪ ವಿಶ್ವಾಸ ಮತಯಾಚನೆ ವೇಳೆ ಶಾಸಕರ ಮಾರಾಮಾರಿ ನಡೆದಿತ್ತು. ಈ ವೇಳೆ ಮಾರ್ಷಲ್‍ಗಳು ಗೂಳಿಹಟ್ಟಿ ಚಂದ್ರಶೇಖರ್ ಅವರನ್ನು ಹೊರಹಾಕಲು ಮುಂದಾದಾಗ ಅವರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು.

  • ವಿಧಾನಸಭೆಯಲ್ಲಿ ಇಂದೇ ವಿಶ್ವಾಸಮತ ಯಾಚನೆ – ರೆಸಾರ್ಟ್‍ನಲ್ಲೇ ಬೀಡುಬಿಟ್ಟ ಸಿಎಂ ಪಳನಿಸ್ವಾಮಿ

    ವಿಧಾನಸಭೆಯಲ್ಲಿ ಇಂದೇ ವಿಶ್ವಾಸಮತ ಯಾಚನೆ – ರೆಸಾರ್ಟ್‍ನಲ್ಲೇ ಬೀಡುಬಿಟ್ಟ ಸಿಎಂ ಪಳನಿಸ್ವಾಮಿ

    ಚೆನ್ನೈ: ತಮಿಳುನಾಡು ರಾಜಕೀಯ ಬೆಳವಣಿಗೆಯಲ್ಲಿ ಗುರುವಾರ ಸಿಎಂ ಪಟ್ಟಕ್ಕೇರಿರೋ ಪಳನಿಸ್ವಾಮಿಗೆ ಇಂದು ಅಗ್ನಿಪರೀಕ್ಷೆ ಎದುರಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಪಳನಿಸ್ವಾಮಿ ಬಹುಮತ ಸಾಬೀತು ಪಡಿಸಬೇಕಿದೆ. ಹೀಗಾಗಿ ಪಳನಿಸ್ವಾಮಿ ಬಣದ ಶಾಸಕರು ರೆಸಾರ್ಟ್‍ನಲ್ಲಿ ಬೀಡುಬಿಟ್ಟಿದ್ದಾರೆ.

    ಸಂಖ್ಯಾ ಬಲ ಈಗ ಅತಿಮುಖ್ಯವಾಗಿರುವ ಕಾರಣ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಪಳನಿಸ್ವಾಮಿ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪಳನಿಸ್ವಾಮಿ ಬಳಿ 123 ಶಾಸಕರ ಬೆಂಬಲ ಇದೆ ಅಂತ ಹೇಳಲಾಗ್ತಿದೆ. ನಿನ್ನೆಯಷ್ಟೇ ಶಾಸಕ ಮೈಲಾಪುರ ಶಾಸಕ ನಟರಾಜನ್, ಸಿಎಂ ಪಳನಿಸ್ವಾಮಿ ಕ್ಯಾಂಪ್ ತೊರೆದು ಸೆಲ್ವಂ ಬಣ ಸೇರಿದ್ದಾರೆ. ಇನ್ನೂ 30 ಮಂದಿ ಸೆಲ್ವಂಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

    ಇದೇ ಏನಾದ್ರೂ ನಿಜವಾದಲ್ಲಿ ವಿಶ್ವಾಸ ಮತಯಾಚನೆಯಲ್ಲಿ ಪಳನಿಸ್ವಾಮಿಗೆ ಸೋಲುಂಟಾಗೋದು ಖಚಿತ. ಈ ನಡುವೆ, ವಿಶ್ವಾಸಯಾಚನೆ ವಿರುದ್ಧ ಮತ ಚಲಾಯಿಸಿ ಅಮ್ಮನಿಗೆ ನಿಷ್ಠೆ ತೋರಿಸಬೇಕೆಂದು ಪನ್ನೀರ್ ಸೆಲ್ವಂ ಶಾಸಕರಿಗೆ ಕರೆ ನೀಡಿದ್ದಾರೆ. ಕುಟುಂಬ ರಾಜಕಾರಣಕ್ಕೆ ಜಯಾ ವಿರೋಧಿ.. ಈಗ ನೀವೂ ವಿರೋಧಿಸಿ ಎನ್ನುತ್ತಿದ್ದಾರೆ. ಈ ನಡುವೆ, ಪಳನಿಸ್ವಾಮಿಗೆ ವಿರುದ್ಧ ಮತ ಹಾಕಲು ಡಿಎಂಕೆ ನಿರ್ಧರಿಸಿದೆ. ಆದ್ರೆ, ಕಾಂಗ್ರೆಸ್ ಮಾತ್ರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೈಕಮಾಂಡ್ ಆದೇಶಕ್ಕೆ ಬದ್ಧ ಎಂದಿದೆ.

    ಇಂದು ಬಹುಮತ ಸಾಬೀತು ಮಾಡಬೇಕಿರುವ ಬೆನ್ನಲ್ಲೇ ಅಣ್ಣಾ ಡಿಎಂಕೆಯಿಂದ ಸಿಎಂ ಪಳನಿಸ್ವಾಮಿ, ಶಶಿಕಲಾ ಸಂಬಂಧಿಗಳಾದ ದಿನಕರನ್, ವೆಂಕಟೇಶನ್ ಸೇರಿದಂತೆ 16 ಮಂದಿಯನ್ನು ಪನ್ನೀರ್ ಸೆಲ್ವಂ ಬಣ ಪಕ್ಷದಿಂದ ಉಚ್ಛಾಟಿಸಿದೆ. ಅಲ್ಲದೆ, ಸೆಲ್ವಂ ಬಣದ ಕೆಲ ಶಾಸಕರು ಸ್ಪೀಕರ್ ಭೇಟಿಯಾಗಿ ಮಾತುಕತೆ ನಡೆಸಿ ರಹಸ್ಯ ಮತದಾನಕ್ಕೆ ಒತ್ತಾಯಿಸಿದ್ದಾರೆ. ಇನ್ನು ನಿನ್ನೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮತ್ತು ಸಚಿವರ ತಂಡ ಇವತ್ತು ಪರಪ್ಪನ ಅಗ್ರಹಾರಕ್ಕೆ ಭೇಟಿಕೊಟ್ಟು ಶಶಿಕಲಾರನ್ನ ಭೇಟಿಯಾಗ್ಬೇಕಿತ್ತು. ಆದ್ರೆ ಯಾವ ಸಚಿವರು ಜೈಲಿಗೆ ಭೇಟಿ ಕೊಡ್ಲಿಲ್ಲ. ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಿ, ಸಿಹಿಸುದ್ದಿ ಜೊತೆ ಬರೋದಕ್ಕೆ ಪಳಿನಿಸ್ವಾಮಿ ಕಾಯ್ತಿದ್ದಾರೆ. ಈ ಮಧ್ಯೆ ಜೈಲಲ್ಲಿರೋ ಶಶಿಕಲಾ ಪಳಿನಿಸ್ವಾಮಿಯವ್ರು ಬಂದಾಗ ಚರ್ಚೆ ಮಾಡೋದಕ್ಕೆ ವಿಶೇಷವಾದ ಕೊಠಡಿ ನೀಡಿ ಅಂತ ಮನವಿ ಮಾಡಿದ್ದಾರೆ. ಆದ್ರೆ ಪೊಲೀಸರು ಇನ್ನು ನಿರ್ಧಾರ ಮಾಡಿಲ್ಲ.

  • ಜಯಲಲಿತಾ, ಶಶಿಕಲಾ ಸಂಬಂಧದ ಸಿನಿಮಾ ಮಾಡ್ತಾರಂತೆ ಆರ್‍ಜಿವಿ!

    ಜಯಲಲಿತಾ, ಶಶಿಕಲಾ ಸಂಬಂಧದ ಸಿನಿಮಾ ಮಾಡ್ತಾರಂತೆ ಆರ್‍ಜಿವಿ!

    ಚೆನ್ನೈ: ತಮಿಳುನಾಡಲ್ಲಿ ದಿನದಿಂದ ದಿನಕ್ಕೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ದೇಶಾದ್ಯಂತ ಸುದ್ದಿ ಮಾಡ್ತಿದೆ. ಈ ನಡುವೆ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಹೊಸ ಚಿತ್ರ ಮಾಡಲು ಹೊರಟಿದ್ದಾರೆ.

    ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜಯಲಲಿತಾ ಹಾಗೂ ಶಶಿಕಲಾ ಸಂಬಂಧವನ್ನಿಟ್ಟುಕೊಂಡು ರಾಮಗೋಪಾಲ್ ವರ್ಮಾ ಚಿತ್ರ ಮಾಡಲು ರೆಡಿಯಾಗಿದ್ದಾರೆ. ಚಿತ್ರಕ್ಕೆ `ಶಶಿಕಲಾ’ ಅಂತಾ ಟೈಟಲ್ ಇಡಲು ತೀರ್ಮಾನಿಸಲಾಗಿದ್ದು, ಚಿತ್ರ ಸಂಪೂರ್ಣವಾಗಿ ಕಾಲ್ಪನಿಕವಾಗಿದೆಯಂತೆ. ದಿವಂಗತ ಜಯಲಲಿತಾರ ಬಗ್ಗೆ ನನಗೆ ಅಪಾರ ಗೌರವವಿದೆ. ಅದಕ್ಕಿಂತಲೂ ಹೆಚ್ಚಾಗಿ ಶಶಿಕಲಾರ ಪ್ರಾಮಾಣಿಕತೆ ಬಗ್ಗೆ ನನಗೆ ಹೆಚ್ಚು ಗೌರವ ಇದೆ. ಹಾಗಾಗಿ ನಾನು ಚಿತ್ರಕ್ಕೆ ಶಶಿಕಲಾ ಅಂತಾ ಹೆಸರಿಟ್ಟಿದ್ದೇನೆ ಅಂತಾ ರಾಮ್‍ಗೋಪಾಲ್ ವರ್ಮಾ ಹೇಳಿದ್ದಾರೆ.

    ಈ ಚಿತ್ರಕ್ಕೆ ರಾಜಕೀಯದ ಟಚ್ ಇಲ್ಲ. ಶಶಿಕಲಾ ತಮಿಳಿಗರ ಪಾಲಿಗೆ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದಾರೆ. ಹಾಗಾಗಿ ಚಿತ್ರ ರಾಜಕೀಯೇತರವಾಗಿದ್ದು ಕಾಲ್ಪನಿಕ ಕಥೆ ಒಳಗೊಂಡಿದೆ ಅಂತಾ ನಿರ್ಮಾಪಕ ರಾಮ್‍ಗೋಪಾಲ್ ವರ್ಮಾ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಕೂಡ ವರ್ಮಾ ರಕ್ತಚರಿತ, ಕಿಲ್ಲಿಂಗ್ ವೀರಪ್ಪನ್, 26/11ರ ಮುಂಬೈ ದಾಳಿ ಕುರಿತ ಚಿತ್ರ್ರಗಳನ್ನು ಮಾಡಿದ್ದರು.

  • ಮೇಕೆದಾಟು ಯೋಜನೆಗೆ ರಾಜ್ಯ ಸಂಪುಟ ಒಪ್ಪಿಗೆ: ತಮಿಳುನಾಡು ವಿರೋಧ

    ಮೇಕೆದಾಟು ಯೋಜನೆಗೆ ರಾಜ್ಯ ಸಂಪುಟ ಒಪ್ಪಿಗೆ: ತಮಿಳುನಾಡು ವಿರೋಧ

    ನವದೆಹಲಿ: ಮೇಕೆದಾಟು ಯೋಜನೆಗೆ ಕರ್ನಾಟಕ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದ್ದನ್ನು ತಮಿಳುನಾಡು ವಿರೋಧಿಸಿದೆ.

    ದೆಹಲಿಯ ಶ್ರಮ ಶಕ್ತಿ ಭವನದಲ್ಲಿ ಇಂದು ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ತಮಿಳುನಾಡಿನ ಕಾವೇರಿ ಸೆಲ್ ಚೇರ್ಮನ್ ಎಸ್.ಕೆ. ಪ್ರಭಾಕರನ್ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಅಂತಾ ಆತಂಕ ವ್ಯಕ್ತಪಡಿಸಿದರು.

    ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಕಾವೇರಿ ಮೆಲಸ್ತುವಾರಿ ಸಭೆಯಲ್ಲಿ ಇಂದು ಕಾವೇರಿ ನೀರು ಹಂಚಿಕೆಯ ಬಗ್ಗೆಯೂ ಮಾತುಕತೆ ನಡೆಯಿತು. ಸುಪ್ರೀಂ ಕೋರ್ಟ್‍ನ ಮಧ್ಯಂತರ ಆದೇಶವನ್ನು ಪಾಲಿಸಬೇಕು, ಬಾಕಿ ಉಳಿಸಿಕೊಂಡಿರುವ ನೀರನ್ನು ಬಿಡಬೇಕು ಅಂತಾ ವಾದಿಸಿತು. ಜೊತೆಗೆ ಮುಂದಿನ ಕಾವೇರಿ ವಿಚಾರಣೆ ಒಳಗೆ ಮತ್ತೊಂದು ಸಭೆ ಸೇರಲು ತೀರ್ಮಾನ ಕೈಗೊಳ್ಳಲಾಗಿದ್ದು ಬಿಕ್ಕಟ್ಟಿನ ಸಂದರ್ಭದಲ್ಲಿ ನೀರು ಹಂಚಿಕೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಜಲತಜ್ಞರ ಸಲಹೆ ಪಡೆಯಲು ಸಮಿತಿ ರಚನೆ ಮಾಡಲು ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅಮರ್‍ಜಿತ್ ಸಿಂಗ್ ಒಪ್ಪಿಗೆ ಸೂಚಿಸಿದರು. ಈ ಹಿನ್ನಲೆಯಲ್ಲಿ ನಾಲ್ಕು ರಾಜ್ಯಗಳಿಗೂ ಆಯಾ ರಾಜ್ಯದ ಜಲ ತಜ್ಞರ ಹೆಸರು ಸೂಚಿಸುವಂತೆ ಸೂಚನೆ ನೀಡಿದ್ದು ಎಲ್ಲ ರಾಜ್ಯಗಳು ಹೆಸರು ಸೂಚಿಸಲು ಒಂದು ತಿಂಗಳ ಗಡುವು ನೀಡಲಾಗಿದೆ.

    ಮುಖ್ಯವಾಗಿ ಮೇಕೆದಾಟು ಯೋಜನೆಗೆ ತಮಿಳುನಾಡಿನ ವಿರೋಧ ತಳ್ಳಿ ಹಾಕಿದ ಅಮರ್‍ಜಿತ್ ಸಿಂಗ್ ನೀವೂ ಮುಂಚಿತವಾಗಿ ವಿರೋಧಿಸುವುದು ಸರಿಯಲ್ಲ. ಕ್ಯಾಬಿನೆಟ್ ಒಪ್ಪಿಗೆ ಅಂತ್ಯವಲ್ಲ, ಮೇಕೆದಾಟು ಯೋಜನೆಗೆ ಕೇಂದ್ರ ಪರಿಸರ ಮತ್ತು ಜಲಸಂಪನ್ಮೂಲ ಇಲಾಖೆಯ ಒಪ್ಪಿಗೆ ಸಿಗಬೇಕಿದೆ ಅಂತಾ ತಮಿಳುನಾಡಿಗೆ ಬಿಸಿ ಮುಟ್ಟಿಸಿದ್ರು. ಈ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಮತ್ತು ರಾಜ್ಯ ಜಲಸಂಪನ್ಮೂಲ ಕಾರ್ಯದರ್ಶಿ ರಾಕೇಶ್ ಸಿಂಗ್ ಭಾಗವಹಿಸಿದ್ರು.

  • ಎಐಎಡಿಎಂಕೆಯಿಂದ ಶಶಿಕಲಾ ವಜಾ!

    ಎಐಎಡಿಎಂಕೆಯಿಂದ ಶಶಿಕಲಾ ವಜಾ!

    ಚೆನ್ನೈ: ತಮಿಳುನಾಡು ರಾಜಕೀಯದ ಹೈಡ್ರಾಮಾ ಇಂದು ಕೂಡಾ ಮುಂದುವರೆದಿದೆ. ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಿಕೆ ಶಶಿಕಲಾ ಅವರನ್ನು ಉಚ್ಛಾಟಿಸಿ ಅಣ್ಣಾಡಿಎಂಕೆ ಪಕ್ಷದ ಗೌರವಾಧ್ಯಕ್ಷ ಹಾಗೂ ಪನ್ನೀರ್‍ಸೆಲ್ವಂ ಬಣದಲ್ಲಿ ಗುರುತಿಸಿಕೊಂಡಿರುವ ಇ.ಮಧುಸೂದನನ್ ಆದೇಶ ಹೊರಡಿಸಿದ್ದಾರೆ. ಇವರ ಜೊತೆಗೆ ಶಶಿಕಲಾ ಸಂಬಂಧಿಕರಾದ ಟಿಟಿವಿ ದಿನಕರನ್ ಹಾಗೂ ಎಸ್.ವೆಂಕಟೇಶ್ ಅವರನ್ನೂ ವಜಾಗೊಳಿಸಲಾಗಿದೆ.

    ಸುಪ್ರೀಂ ಕೋರ್ಟ್ 4 ವರ್ಷ ಶಿಕ್ಷೆಯ ತೀರ್ಪು ಪ್ರಕಟಿಸಿದ ನಂತರ ಜೈಲಿಗೆ ಹೋಗುವ ಮುನ್ನ ಶಶಿಕಲಾ ನಟರಾಜನ್ ದಿನಕರನ್‍ಗೆ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಿದ್ದರು. ನಾಳೆ ಎಡಪಾಡಿ ಪಳನಿಸ್ವಾಮಿ ಅವರು ವಿಶ್ವಾಸ ಮತ ಯಾಚಿಸಲಿರುವ ಮುನ್ನವೇ ಪನ್ನೀರ್‍ಸೆಲ್ವಂ ಕ್ಯಾಂಪ್‍ನಿಂದ ಆಗಿರುವ ಉಚ್ಛಾಟನೆ ತಂತ್ರ ತೀವ್ರ ಕುತೂಹಲ ಮೂಡಿಸಿದೆ.

    ಕಳೆದ ವಾರವಷ್ಟೇ ಮಧುಸೂದನನ್ ಅವರು ಒ.ಪನ್ನೀರ್‍ಸೆಲ್ವಂ ಕ್ಯಾಂಪ್‍ಗೆ ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಮಧುಸೂದನನ್ ಅವರನ್ನು ಶಶಿಕಲಾ ವಜಾಗೊಳಿಸಿದ್ದರು. ಪಕ್ಷದ ತತ್ವ ಸಿದ್ಧಾಂತಗಳನ್ನು ಮಧುಸೂದನನ್ ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಹುದ್ದೆ ಹಾಗೂ ಎಐಎಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿರುವುದಾಗಿ ಹೇಳಿದ್ದರು.

    ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೋರ್ಟ್‍ಗೆ ಶರಣಾಗಿರುವ ಶಶಿಕಲಾ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

  • ಪೆರೋಲ್ ಮೇಲೆ ರಿಲೀಸ್‍ಗೆ ಶಶಿಕಲಾ ಪ್ಲಾನ್

    ಪೆರೋಲ್ ಮೇಲೆ ರಿಲೀಸ್‍ಗೆ ಶಶಿಕಲಾ ಪ್ಲಾನ್

    ಬೆಂಗಳೂರು: ಹಾಗೂ ಹೀಗೂ ತನ್ನ ಬಂಟನನ್ನ ಅಧಿಕಾರಕ್ಕೆ ತಂದ ಶಶಿಕಲಾ ಅಲಿಯಾಸ್ ಚಿನ್ನಮ್ಮ ತನ್ನಾಸೆಯಂತೆಯೇ ತನ್ನ ಮುಂದೆಯೇ ಅನಧಿಕೃತವಾಗಿಯಾದ್ರೂ ಸಚಿವ ಸಂಪುಟ ಸಭೆ ನಡೆಸೋ ಪ್ಲಾನ್ ಮಾಡಿದ್ದಾರೆ. ಆದ್ರೆ, ಸಿಎಂ ಆಗೋ ಕನಸು ಅರಳುವ ಮುನ್ನವೇ ಕಮರಿ ಹೋಗಿರೊದ್ರಿಂದ ಚಿನ್ನಮ್ಮ ಮತ್ತೊಂದು ಪ್ಲಾನ್ ಮಾಡಿದ್ದಾರೆ. ಅದು ಬೇರೇನೂ ಅಲ್ಲ ಪೆರೋಲ್ ಪ್ಲಾನ್.

    ಮೊನ್ನೆಯಷ್ಟೇ ಜೈಲು ಸೇರಿರೋ ಶಶಿಕಲಾ ರಾಜಕೀಯ ದಾಳವನ್ನ ಜೈಲಿನಲ್ಲಿಯೇ ಕುಳಿತು ಉರುಳಿಸ್ತಾ ಇದ್ದಾರೆ. ಇನ್ನು ಪಗಡೆಯಾಗಿರೋ ಪಳನಿಸ್ವಾಮಿ ಅಂಡ್ ಗ್ಯಾಂಗ್ ಚಿನ್ನಮ್ಮನ ಮಾತನ್ನ ಕೇಳಿಯೇ ಸರ್ಕಾರ ನಡೆಸೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಶಶಿಕಲಾ ಜೈಲಿನಲ್ಲಿಯೇ ಕುಳಿತು ಆಟ ಆಡೋದಕ್ಕೆ ಇಷ್ಟ ಪಟ್ಟಂತಿಲ್ಲ. ಕಣ್ಣ ಮುಂದೆಯೇ ಸರ್ಕಾರ ನಡೆಸಬೇಕು ಅಂದುಕೊಂಡಿರೋದ್ರಿಂದ ಶಶಿಕಲಾ ಹತ್ತು ದಿನ ಕಳೆದ ಬಳಿಕ ಅನಾರೋಗ್ಯದ ನೆಪ ಹೇಳಿ ಜೈಲಾಧಿಕಾರಿಯ ಮುಂದೆ ಪೆರೋಲ್ ಕೇಳುವ ಎಲ್ಲಾ ಲಕ್ಷಣಗಳೂ ಇದೆ.

    ಸಂಜಯ್ ದತ್ತ್ ಪ್ಲಾನ್ ಫಾಲೋ?!: ಸುಪ್ರೀಂ ಕೋರ್ಟ್ ಅನಿರೀಕ್ಷಿತವಾಗಿ ಆದೇಶವನ್ನು ನೀಡ್ತು. ಮೊದ್ಲೇ ನಾನು ಅನಾರೋಗ್ಯದಲ್ಲಿ ಇದ್ದೆ. ತಯಾರಿ ಮಾಡಿಕೊಳ್ಳುವ ಸಲುವಾಗಿ ನಾಲ್ಕು ವಾರ ಗಡವು ಕೇಳಿದ್ರೂ ಕೋರ್ಟ್ ನಿರಾಕರಣೆ ಮಾಡಿದ್ರಿಂದ ಪೆರೋಲ್ ನೀಡುವಂತೆ ಜೈಲಾಧಿಕಾರಿಗೆ ಚಿನ್ನಮ್ಮ ಮನವಿ ಮಾಡಿಕೊಳ್ಳಲಿದ್ದಾರೆ. ಜೈಲಾಧಿಕಾರಿಗಳು ಚೆನ್ನೈನ ಜಿಲ್ಲಾಧಿಕಾರಿಗೆ ಪತ್ರ ಬರೆದು ಶಶಿಕಲಾಗೆ ಪೆರೋಲ್ ನೀಡೋದ್ರಿಂದ ತೊಂದರೆಯಾಗೋಲ್ವಾ ಅಂತ ವರದಿಯನ್ನು ತರಿಸಿಕೊಂಡು ಬಳಿಕ ಶಶಿಕಲಾಗೆ ಪೆರೋಲ್ ನೀಡುವ ಸಾಧ್ಯತೆಗಳಿವೆ. ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಕಾರಣ ಜೈಲು ಪಾಲಾಗಿದ್ದ ಸಂಜಯ್ ದತ್ ಕೂಡ ಇದೇ ಪ್ಲಾನ್ ಮಾಡಿ ಜೈಲಿನಿಂದ ಹೊರಬಂದಿದ್ರು.

    ಜೈಲಿಗೆ ಬರೋವಾಗ ರೋಡ್ ಶೋ ಮಾಡಿ ಬಂದ ಶಶಿಕಲಾ ಪೆರೋಲ್ ಸಿಕ್ರೆ ಈ ಎಲ್ಲಾ ಅವಕಾಶಗಳಿಗೂ ಬ್ರೇಕ್ ಹಾಕಿ ವಿಶೇಷ ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಬೆಳಸೋ ಸಾಧ್ಯತೆಗಳಿವೆ. ಇನ್ನೊಂದು ಹತ್ತು ದಿನದ ಒಳಗೆ ಶಶಿಕಲಾ ತನ್ನ ಕಣ್ಣು ಮುಂದೆಯೇ ಅಧಿಕಾರ ನಡೆಸೋ ಎಲ್ಲಾ ಪ್ಲಾನ್ ಮಾಡಿಕೊಂಡಿದ್ದಾರೆ.