Tag: Tailoring Machine

  • ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಮಹಿಳಾ‌ ಮೋರ್ಚಾದಿಂದ ಉಚಿತ‌ ಹೊಲಿಗೆ ಯಂತ್ರ ವಿತರಣೆ

    ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಮಹಿಳಾ‌ ಮೋರ್ಚಾದಿಂದ ಉಚಿತ‌ ಹೊಲಿಗೆ ಯಂತ್ರ ವಿತರಣೆ

    ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನ ಹಾಗೂ ಪುಣ್ಯಸ್ಮರಣೆಯ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವ ದೃಷ್ಟಿಯಿಂದ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. (Tailoring Machine Free Distribution)

    Mangaluru-BJP-Mahila-Morcha-Tailoring-Machine

    ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ (Vedavyasa Kamat) ಅವರು, ಮಹಿಳಾ ಮೋರ್ಚಾದವರು ದಾನಿಗಳ ಸಹಾಯದಿಂದ ನಡೆಸುತ್ತಿರುವ ಈ ಕಾರ್ಯ ಶ್ಲಾಘನೀಯವಾದುದು. ಮಹಿಳೆಯರು ಆರ್ಥಿಕವಾಗಿ ಸದೃಢಗೊಳ್ಳಲು ಹೊಲಿಗೆ ಯಂತ್ರದ ಕೊಡುಗೆ ಬಹಳ. ಅವರು ತಮ್ಮ ಮನೆಯ ನಿರ್ವಹಣೆಯಲ್ಲದೇ ಸಾಮಾಜಿಕವಾಗಿಯೂ ಹೆಚ್ಚು ಜವಾಬ್ದಾರಿ ಹಾಗೂ ಕಳಕಳಿ ಹೊಂದಿರುವವರು. ಕೋವಿಡ್ ಸಂಕಷ್ಟದ ಸಮಯದಲ್ಲಿ ನಮ್ಮ ಜಿಲ್ಲೆಯ ಇಂತಹದೇ ಮಹಿಳೆಯರು ಮನೆಯಲ್ಲೇ ಕೂತು ಕೋವಿಡ್ ವಾರಿಯರ್ ಗಳಿಗೆ ಸಾವಿರಾರು ಮಾಸ್ಕ್ ಗಳನ್ನು ತಯಾರಿಸಿ ಕೊಟ್ಟಿದ್ದರು. ಅವರ ಈ ಕಾರ್ಯವನ್ನು ನಾನಂತೂ ಎಂದಿಗೂ ಮರೆಯುವುದಿಲ್ಲ. ಇಂತಹ ಸ್ವಾವಲಂಬಿ ತಾಯಂದಿರ ಸಂಖ್ಯೆ ಹೆಚ್ಚಾಗಲಿ ಎಂದು ಹಾರೈಸಿದರು. ಇದನ್ನೂ ಓದಿ: ಎಲ್.ಕೆ ಅಡ್ವಾಣಿ ಆರೋಗ್ಯ ಸ್ಥಿರ – ಆಸ್ಪತ್ರೆಯಿಂದ ಡಿಸ್ಚಾರ್ಜ್

    ರಮೇಶ್ ಕಂಡೆಟ್ಟು, ಪೂರ್ಣಿಮಾ, ವಿಜಯ್ ಕುಮಾರ್ ಶೆಟ್ಟಿ, ಪೂರ್ಣಿಮಾ ರಾವ್, ರವಿಶಂಕರ್ ಮಿಜಾರ್, ಅಜಯ್ ಕುಲಶೇಖರ, ಹರೀಶ್ ರೈ, ಶಬರಿ, ಕಮಲಾಕ್ಷಿ, ಸಂಧ್ಯಾ ವೆಂಕಟೇಶ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಇದನ್ನೂ ಓದಿ: ಜು.23 ರಂದು ʼಮೋದಿ 3.0ʼ ಬಜೆಟ್‌ ಮಂಡನೆ 

  • ಅಂಧನಾದ್ರೂ ಕಾಯಕ ಮರೆತಿಲ್ಲ-ಪತಿಯ ಕೆಲಸಕ್ಕೆ ಸಾಥ್ ನೀಡ್ತಿರೋ ಪತ್ನಿಗೆ ಬೇಕಿದೆ ಹೊಲಿಗೆ ಯಂತ್ರ

    ಅಂಧನಾದ್ರೂ ಕಾಯಕ ಮರೆತಿಲ್ಲ-ಪತಿಯ ಕೆಲಸಕ್ಕೆ ಸಾಥ್ ನೀಡ್ತಿರೋ ಪತ್ನಿಗೆ ಬೇಕಿದೆ ಹೊಲಿಗೆ ಯಂತ್ರ

    ಧಾರವಾಡ: ಅಂಧನಾದರೂ ಮನೆಯಲ್ಲಿ ಪತ್ನಿ ಹಾಗೂ ಮಗುವಿಗೆ ಸಾಕಲು ಸಾಕಷ್ಟು ಪರದಾಟ ನಡೆಸಿದವರು. ಕಣ್ಣಿದ್ರೆ ಏನಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದಿತ್ತು ಎಂದು ಚಿಂತೆ ಕಾಡುತ್ತಿದೆ. ಸದ್ಯ ಆ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ಆ ವ್ಯಕ್ತಿ ಪಬ್ಲಿಕ್ ಟಿವಿ ಮೊರೆ ಬಂದಿದ್ದಾರೆ.

    35 ವರ್ಷದ ಶಿವಪ್ಪ ಆನಿ 11ನೇ ವಯಸ್ಸಿನಲ್ಲಿ ಎಮ್ಮೆ ಮೇಯಿಸಲು ಹೋಗಿ ಬಿರು ಬಿಸಿಲಿನ ಹೊಡೆತಕ್ಕೆ ಕಣ್ಣು ಕಳೆದುಕೊಂಡ ದುರ್ದೈವಿ. ಶಿವಪ್ಪ ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಹರವಿ ಗರುಡಹೊನ್ನಳ್ಳಿ ಗ್ರಾಮದ ನಿವಾಸಿ. ಸದ್ಯ ಮಾಡುವ ಕೆಲಸವನ್ನು ಕಳೆದುಕೊಂಡ ಶಿವಪ್ಪ ದಿಕ್ಕು ತೋಚದಂತಾಗಿದೆ. ಆದ್ರೆ ಪತ್ನಿ ಟೈಲರಿಂಗ್ ಕೆಲಸ ಮಾಡುತ್ತಾ ಕುಟುಂಬಕ್ಕೆ ಆಧಾರವಾಗಿದ್ದಾರೆ.

    ಮನೆಯವರು ಪುಟ್ಟರಾಜು ಗವಾಯಿಗಳ ಸಂಗೀತ ಶಾಲೆಗೆ ಕಳುಹಿಸಿದ್ದರು. ಆದರೆ ಸಂಗೀತದ ವಿದ್ಯೆ ಇವರಿಗೆ ತಲೆಗೆ ಹತ್ತಲಿಲ್ಲ. ಧೃತಿಗೆಡದ ಶಿವಪ್ಪ ಆನಿ ಕುರ್ಚಿಗೆ ವಾಯರ್ ಹೆಣೆಯುವ ಕೆಲಸ ಕಲಿತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕರ ಸೀಟ್ ಹೆಣೆಯುತ್ತ ಜೀವನ ಸಾಗಿಸುತ್ತಿದ್ದರು. 5 ವರ್ಷದ ಹಿಂದೆ ಮನೆಯವರು ಸೇರಿ ವಿವಾಹವನ್ನು ಮಾಡಿದ್ರು ಜೀವನವೂ ಸುಖಕರವಾಗಿತ್ತು.

    ಸಾರಿಗೆ ಸಂಸ್ಥೆಯ ಚಾಲಕರಿಗೆ ವಾಯರ್ ರಹಿತ ಸೀಟು ತಯಾರಾಗಿದ್ದು, ವಾಯರ್ ಹೆಣೆಯುವ ಕಾಯಕಕ್ಕೆ ಕತ್ತರಿ ಬಿದ್ದಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಶಿವಪ್ಪರ ಪತ್ನಿ ಗಂಗವ್ವ ಬಟ್ಟೆ ಹೊಲಿಗೆ ಕೆಲಸ ಕಲಿತ್ತಿದ್ದು ಅನ್ಯರಿಂದ ಹೊಲಿಗೆ ಯಂತ್ರವನ್ನು ಪಡೆದು ಅಷ್ಟಿಷ್ಟು ಮನೆಗೆ ಬರುವ ಬಟ್ಟೆಗಳನ್ನ ಹೊಲೆದು ಜೀವನ ನಡೆಸುತ್ತಿದ್ದಾರೆ.

    ಪತ್ನಿಯ ಪರಿಶ್ರಮವನ್ನು ಕಂಡು ಶಿವಪ್ಪ ಪತ್ನಿಯ ಕೆಲಸಕ್ಕೆ, ಮಗುವಿನ ವಿದ್ಯಾಭ್ಯಾಸ ಹಾಗೂ ಕುಟುಂಬಕ್ಕೆ ಆಧಾರಸ್ತಂಭವಾಗಿ ನಿಲ್ಲಬೇಕೆಂದು ಸ್ವಾಭಿಮಾನದಿಂದ ಬದುಕುವ ಛಲ ತೊಟ್ಟಿದ್ದಾರೆ. ಸ್ವಂತ ಹೊಲಿಗೆ ಯಂತ್ರ ಇದ್ರೆ ಬಟ್ಟೆ ಹೊಲೆದು ಜೀವನ ನಡೆಸಲು ಅನುಕೂಲವಾಗುತ್ತೆ. ಯಾರಾದ್ರೂ ದಾನಿಗಳು ಟೈಲರಿಂಗ್ ಮಿಷಿನ್ ದಾನ ಮಾಡಿದ್ರೆ ನೆಮ್ಮದಿ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗುತ್ತೆ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಕೇಳಿಕೊಳ್ಳುತ್ತಿದ್ದಾರೆ.

    https://www.youtube.com/watch?v=H3jwMMgjcMY