Tag: Taekwondo

  • ಟೇಕ್ವಾಂಡೋ ಸ್ಪರ್ಧೆಯಲ್ಲಿ 2 ಚಿನ್ನ ಗೆದ್ದ ಕನ್ನಡಿಗ ದಕ್ಷಿಣ್‌ ಸೂರ್ಯ

    ಟೇಕ್ವಾಂಡೋ ಸ್ಪರ್ಧೆಯಲ್ಲಿ 2 ಚಿನ್ನ ಗೆದ್ದ ಕನ್ನಡಿಗ ದಕ್ಷಿಣ್‌ ಸೂರ್ಯ

    ಕೌಲಾಲಂಪುರ್: ಮಲೇಷ್ಯಾದ ಪ್ಯಾನಸೋನಿಕ್‍ನಲ್ಲಿ ಅಂತಾರಾಷ್ಟ್ರೀಯ ಟೇಕ್ವಾಂಡೋ (Taekwondo) ಸ್ಪರ್ಧೆಯಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಬೆಂಗಳೂರಿನ (Bengaluru) ದಕ್ಷಿಣ್ ಸೂರ್ಯ, 2 ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದು ಅಸಾಧಾರಣ ಸಾಧನೆ ಮಾಡಿದ್ದಾರೆ.

    15ರಿಂದ 17 ವರ್ಷದೊಳಗಿನ ವಯೋಮಿತಿಯಲ್ಲಿ 62 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ದಕ್ಷಿಣ್‌ ಸೂರ್ಯ ಸ್ಪರ್ಧಿಸಿದ್ದ 4 ವಿಭಾಗಗಳಲ್ಲೂ ಪದಕಗಳ ಬೇಟೆಯಾಡಿರೋದು ವಿಶೇಷವಾಗಿದೆ. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ಗೆ ಕಿಂಗ್‌ ಕೊಹ್ಲಿ ಗುಡ್‌ಬೈ

    ಸ್ಪಾರಿಂಗ್ ವಿಭಾಗದಲ್ಲಿ 1 ಚಿನ್ನ, ಪ್ಯಾಟರ್ನ್ ವಿಭಾಗದಲ್ಲಿ 1 ಚಿನ್ನ, ವಾರಿಯರ್ ಸ್ಪಾರಿಂಗ್ ವಿಭಾಗದಲ್ಲಿ 1 ಬೆಳ್ಳಿ ಹಾಗೂ ವಾರಿಯರ್ ಪ್ಯಾಟರ್ನ್ ವಿಭಾಗದಲ್ಲಿ 1 ಕಂಚಿನ ಪದಕವನ್ನು ದಕ್ಷಿಣ್ ಸೂರ್ಯ (Dakshin Surya) ಗಳಿಸಿದ್ದಾರೆ. ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶ, ಮ್ಯಾನ್ಮಾರ್, ಸಿರಿಯಾ, ಮಲೇಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳ 1000ಕ್ಕೂ ಹೆಚ್ಚು ಪ್ರತಿನಿಧಿಗಳು ಈ ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸಿದ್ದರು. ಭಾರತ ತಂಡದಿಂದ ಸುಮಾರು 65ಕ್ಕೂ ಹೆಚ್ಚು ಕ್ರೀಡಾಕೂಟಗಳು ಭಾಗಿಯಾಗಿದ್ದು ವಿಶೇಷ.  ಇದನ್ನೂ ಓದಿ: ಇನ್ನು ಮುಂದೆ ನಾನು ಪಾಕ್‌ಗೆ ಹೋಗಲ್ಲ: ಡೇರಿಲ್ ಮಿಚೆಲ್

    ಬೆಂಗಳೂರಿನ ಹೆಬ್ಬಾಳದಲ್ಲಿರೋ ಎನ್‍ಎಫ್‍ಸಿ (NFC) ತರಬೇತಿದಾರ ಕೆ. ಪವನ್ ಗರಡಿಯಲ್ಲಿ ದಕ್ಷಿಣ್ ಸೂರ್ಯ ಪಳಗಿದ್ದು, ಎನ್‍ಎಫ್‍ಸಿ ವತಿಯಿಂದ 14 ಸ್ಪರ್ಧಿಗಳು ಸ್ಪರ್ಧಿಸಿದ್ದರು. ವೆಂಕಟೇಶ್, ಅಮೃತ, ಹಸೀನಿ ಗೌಡ, ವರ್ಷ ಕುಮಾರ್, ಗರ್ಗಿ ಕೆ. ನಾಯರ್, ಪ್ರಕೃತಿ ಎನ್. ಬಾಣವಾರ, ಪ್ರಣ್ಮಯ ಎನ್. ಬಾಣವಾರ, ಇಕ್‍ಶ್ವಾ ರೆಬ್ಬಾ, ಪ್ರೀತ್, ಹರ್ಷಿತ್ ಸಿಂಗ್, ಅನ್ಯಾ ಸಾಗರ್, ಡಿ.ಸಿ ಸಿದ್ದೇಶ್ ಸ್ಪರ್ಧಿಸಿದ್ದರು. ಎನ್‍ಎಫ್‍ಸಿಯಿಂದಲೇ ಸ್ಪರ್ಧಿಸಿದ್ದ 14 ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ 25 ಚಿನ್ನ, 11 ಬೆಳ್ಳಿ ಹಾಗೂ 10 ಕಂಚಿನ ಪದಕ ಗಳಿಸಿರೋದು ವಿಶೇಷ.  ಇದನ್ನೂ ಓದಿ: ಮುಂದಿನ ವಾರದಿಂದ ಐಪಿಎಲ್‌ 2025 ಟೂರ್ನಿ ಪುನರಾರಂಭ?

    ಬೆಂಗಳೂರಿನ ಇಂದಿರಾನಗರದಲ್ಲಿರೋ ಸೆವೆನ್ ಸೆನ್ಸ್ ಮಾಂಟೇಸ್ಸರಿ (Seventh Sense Montessori) ವಿದ್ಯಾರ್ಥಿಯಾದ ದಕ್ಷಿಣ್ ಸೂರ್ಯ ಪ್ರತಿಭೆಯನ್ನು ಗುರುತಿಸಿದ್ದು ಪ್ರಿನ್ಸಿಪಾಲ್ ರಾಜೇಶ್ವರಿ. ಕಳೆದ 12 ವರ್ಷಗಳಿಂದ ಟೇಕ್ವಾಂಡೋ ತರಬೇತುದಾರರಾಗಿರೋ ಕೆ. ಪವನ್ ಮೂಲಕ ಶಾಲೆಯ ವಿದ್ಯಾರ್ಥಿಗಳಿಗೆ ಟೇಕ್ವಾಂಡೋ ತರಬೇತಿ ಕೊಡಿಸಿ, ಇವತ್ತಿನ ಯಶಸ್ಸಿಗೆ ಕಾರಣವಾಗಿದ್ದಾರೆ.  ಇದನ್ನೂ ಓದಿ: ಸ್ಕೇಟಿಂಗ್ ಸ್ಪರ್ಧೆ – ಮಂಗಳೂರಿನ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ಗೆ 29 ಪದಕಗಳು

    ದಕ್ಷಿಣ್‌ ಸೂರ್ಯ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೇಕ್ವಾಂಡೋಗೆ ಆಯ್ಕೆಯಾಗಿದ್ದು, ಈ ಹಿಂದೆ ಚೆನ್ನೈ, ಹೈದ್ರಾಬಾದ್, ಕೇರಳ, ಗೋವಾದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಚಿನ್ನ ಹಾಗೂ ಬೆಳ್ಳಿಯ ಪದಕ ಗಳಿಸಿದ್ದಾರೆ.  ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರೋ ಭಾರತೀಯ ವೀರ ಯೋಧರಿಗೆ ಜೋಶ್ ಹ್ಯಾಜಲ್‌ವುಡ್ ಸೆಲ್ಯೂಟ್

    ಇದು ಹರ್ಷದ ಸಂಗತಿ
    ಇನ್ನೂ ದಕ್ಷಿಣ್‌ ಸೂರ್ಯ ಚಿನ್ನಗೆದ್ದ ಸಾಧನೆ ಕುರಿತು ಎನ್‍ಎಫ್‍ಸಿ ಕೋಚ್ ಕೆ. ಪವನ್‌ ಮಾತನಾಡಿ, ಮಲೇಷ್ಯಾದಲ್ಲಿ ಎನ್‍ಎಫ್‍ಸಿ ಟೀಂ ಸಾಧನೆ ಖುಷಿ ತಂದಿದೆ. 12 ವರ್ಷಗಳ ಸುದೀರ್ಘ ತರಬೇತಿಯ ಶ್ರಮ ಫಲಿಸಿದೆ. ಪುರುಷ ಕ್ರೀಡಾಪಟುಗಳ ಜೊತೆಗೆ ಮಹಿಳಾ ಪಟುಗಳ ಸಾಧನೆ ಹೆಚ್ಚು ಹರ್ಷ. ಪ್ರತಿಯೊಬ್ಬರೂ ಈ ಗೌರವಕ್ಕೆ ಅರ್ಹರು ಅಂತ ಶ್ಲಾಘಿಸಿದ್ದಾರೆ.

    ನಮ್ ಶಾಲೆಗೆ ಖುಷಿ ಸಂಗತಿ
    ಸೆವೆನ್ಸ್ ಸೆನ್ಸ್ ಮಾಂಟೇಸ್ಸರಿ ಪ್ರಿನ್ಸಿಪಾಲ್ ರಾಜೇಶ್ವರಿ ಮಾತನಾಡಿ, ದಕ್ಷಿಣ್ ಸೂರ್ಯ ಸಾಧನೆ ನಮ್ಮ ಶಾಲೆಗೆ ಹರ್ಷ ತಂದಿದೆ. ದಕ್ಷಿಣ್ ಈ ಗೌರವಕ್ಕೆ ಅರ್ಹ ವಿದ್ಯಾರ್ಥಿ. ಅವನ ಹಾರ್ಡ್ ವರ್ಕ್ ಫಲ ನೀಡಿದೆ, ಅವನು ಇನ್ನಷ್ಟು ಪದಕಗಳನ್ನು ಗೆಲ್ಲುವಂತಾಗಲಿ ಎಂದು ಹಾರೈಸಿದ್ದಾರೆ.

  • ಟೆಕ್ವಾಂಡೋ: ರಾಷ್ಟ್ರಮಟ್ಟಕ್ಕೆ ಕಾಸರಗೋಡಿನ ಗಣ್ಯ – ಕೇರಳದಲ್ಲಿ ಅಗ್ರʻಗಣ್ಯʼಚಿನ್ನದ ಪದಕ..!

    ಟೆಕ್ವಾಂಡೋ: ರಾಷ್ಟ್ರಮಟ್ಟಕ್ಕೆ ಕಾಸರಗೋಡಿನ ಗಣ್ಯ – ಕೇರಳದಲ್ಲಿ ಅಗ್ರʻಗಣ್ಯʼಚಿನ್ನದ ಪದಕ..!

    ಕಾಸರಗೋಡು: ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಟೆಕ್ವಾಂಡೋದಲ್ಲಿ ಚಿನ್ನದ ಪದಕ ಗೆದ್ದು, (Taekwondo) ಕನ್ನಡತಿ ಎನ್.‌ ಗಣ್ಯ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

    ಕಾಸರಗೋಡು (Kasaragod) ಜಿಲ್ಲೆಯ ಎಡನೀರು ಸ್ವಾಮೀಜಿಸ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‌ ಒನ್‌ ವಿದ್ಯಾರ್ಥಿನಿಯಾಗಿರುವ ಗಣ್ಯ, 17 ವರ್ಷದೊಳಗಿನ ಬಾಲಕಿಯರ 50-65 ಕೆಜಿ ವಿಭಾಗದಲ್ಲಿ ಮಿಂಚಿದರು. ಗಣ್ಯ ಸಾಧನೆಯಿಂದಾಗಿ ಕಾಸರಗೋಡು ಜಿಲ್ಲೆ ಸೀನಿಯರ್‌ ಹಾಗೂ ಜೂನಿಯರ್‌ ಟೆಕ್ವಾಂಡೋ (Junior Taekwondo) ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದಿದೆ.

    ಆರ್‌ಎಸ್‌ಸಿ ಎರ್ನಾಕುಳಂನಲ್ಲಿ (Ernakulam) ನಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಗೆಲುವಿನೊಂದಿಗೆ ಗಣ್ಯ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಇದನ್ನೂ ಓದಿ: ಧೋನಿಯ ನಂ.7 ಜೆರ್ಸಿಗೆ ನಿವೃತ್ತಿ; ಶರ್ಟ್‌ ಆಯ್ಕೆ ಮಾಡದಂತೆ ಆಟಗಾರರಿಗೆ BCCI ಸೂಚನೆ

    ಪ್ಲಸ್‌ ಒನ್‌ ವಿಜ್ಞಾನ ವಿಭಾಗದಲ್ಲಿ (PCMB) ವಿದ್ಯಾಭ್ಯಾಸ ಮಾಡುತ್ತಿರುವ ಗಣ್ಯ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು, ಯೋಗಾಭ್ಯಾಸದಲ್ಲೂ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಸರಗೋಡು ಯೋಧ ಟೆಕ್ವಾಂಡೋ ಅಕಾಡೆಮಿಯಲ್ಲಿ ಜಯನ್ ಪೊಯಿನಾಚಿ ಅವರಿಂದ ಗಣ್ಯ ತರಬೇತಿ ಪಡೆದಿದ್ದಾರೆ.

    ಖಾಸಗಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿರುವ ಬಿ.ನವೀನ್ ಕುಮಾರ್ ಮತ್ತು ಕಾಸರಗೋಡು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಫ್ರಂಟ್ ಆಫೀಸ್ ಮ್ಯಾನೇಜರ್ ಆಗಿರುವ ರಾಜೇಶ್ವರಿ ದಂಪತಿಯ ಪುತ್ರಿ ಗಣ್ಯ. ಇವರ ಪುತ್ರ ಘನಶ್ಯಾಂ ಯೋಗಾಸನದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಎರಡು ಬಾರಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ಸೂರ್ಯ ಬೆಂಕಿ ಆಟ, ಕುಲ್ದೀಪ್‌ ಮಾರಕ ಬೌಲಿಂಗ್‌ಗೆ ಆಫ್ರಿಕಾ ಬರ್ನ್‌ – ಸರಣಿ 1-1 ರಲ್ಲಿ ಸಮ

    ಅ`ಗಣ್ಯʼ ಸಾಧನೆ..!: ಟ್ವೆಕಾಂಡೋ ಮಾತ್ರವಲ್ಲ ಗಣ್ಯಗೆ ಇತರೆ ಕ್ರೀಡೆಗಳಲ್ಲೂ ಆಸಕ್ತಿ ಇದೆ. ಗಣ್ಯಳ ಸಾಧನೆಯ ಕಿರುವಿವರ ಇಲ್ಲಿದೆ ನೋಡಿ.

    • 2022ರಲ್ಲಿ ಕಾಸರಗೋಡು ಜಿಲ್ಲೆಯ ಪಡನ್ನಕ್ಕಾಡ್‌ನಲ್ಲಿ ನಡೆದ 23ನೇ ಕಾಸರಗೋಡು ಜಿಲ್ಲಾ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ
    • 2018ರಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಟ್ವೆಕಾಂಡೋ ಸಬ್‌ ಜೂನಿಯರ್‌ ಚಾಂಪಿಯನ್‌ಶಿಪ್‌ (38 ವರ್ಷದೊಳಗಿನ ವಿಭಾಗ) – ಕ್ಯೊರೂಗಿ (Sparring) – ಬೆಳ್ಳಿ ಪದಕ
    • 2019ರಲ್ಲಿ ಕಾಸರಗೋಡು ಜಿಲ್ಲಾಮಟ್ಟದ ಟ್ವೆಕಾಂಡೋ ಸಬ್‌ ಜೂನಿಯರ್‌ (48 ಕೆಜಿಯೊಳಗಿನ ವಿಭಾಗ) – ಚಿನ್ನದ ಪದಕ
    • 2018ರಲ್ಲಿ ಕರ್ನಾಟಕದ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಂತರ್‌ ಶಾಲಾ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ
    • 2019ರಲ್ಲಿ ಕರ್ನಾಟಕದ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಂತರ್‌ ಶಾಲಾ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ – ಕಂಚಿನ ಪದಕ
    • 2022-23ನೇ ಶೈಕ್ಷಣಿಕ ವರ್ಷದಲ್ಲಿ ಪಾಲಕ್ಕಾಡ್‌ನಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
    • 2019-2020ನೇ ಶೈಕ್ಷಣಿಕ ವರ್ಷದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 800 ಮೀಟರ್‌ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ
    • 2022-23ನೇ ಸಾಲಿನ ಕಾಸರಗೋಡು ಜಿಲ್ಲಾ ಮಟ್ಟದ ಯೋಗ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ.
    • 2018-19ರಲ್ಲಿ ಪಾಲಕ್ಕಾಡ್‌ನಲ್ಲಿ ನಡೆದ ರಾಜ್ಯಮಟ್ಟದ ಶಾಸ್ತ್ರಮೇಳದಲ್ಲಿ ನಂಬರ್‌ ಚಾರ್ಟ್‌ಗೆ ತೃತೀಯ ಸ್ಥಾನ.
    • 2019-20ರಲ್ಲಿ ಜಿಲ್ಲಾ ಮಟ್ಟದ ವೇದಿಕ್‌ ಮ್ಯಾಥ್ಸ್‌ ಪೇಪರ್‌ ಪ್ರೆಸೆಂಟೇಷನ್‌ – ಪ್ರಥಮ ಸ್ಥಾನ
    • ರಾಜ್ಯ ಮಟ್ಟದ ಗಣಿತ ಶಾಸ್ತ್ರ ಮೇಳದಲ್ಲಿ ಗಣಿತ ಪೇಪರ್‌ ಪ್ರೆಸೆಂಟೇಷನ್‌ – ಎ ಗ್ರೇಡ್‌
    • 2019-20ರಲ್ಲಿ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಇಂಗ್ಲಿಷ್‌ ವಾಚನ – ಫಸ್ಟ್‌ ಎ ಗ್ರೇಡ್‌, ಹಿಂದಿ ವಾಚನದಲ್ಲಿ ಎ ಗ್ರೇಡ್.‌