Tag: Tablighi Jamaat

  • ತಬ್ಲಿಘಿ ಬಗ್ಗೆ ಪೋಸ್ಟ್ ಶೇರ್ ಮಾಡಿದ್ರೆ ತಪ್ಪೇನು – ಸಿಟಿ ರವಿ

    ತಬ್ಲಿಘಿ ಬಗ್ಗೆ ಪೋಸ್ಟ್ ಶೇರ್ ಮಾಡಿದ್ರೆ ತಪ್ಪೇನು – ಸಿಟಿ ರವಿ

    – ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಿ

    ಬೆಂಗಳೂರು: ಕೊರೊನಾ ಸಂಬಂಧ ತಬ್ಲಿಘಿ ಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು ಎಂದು ಕನ್ನಡ ಮತ್ತು ಸಂಸ್ಕøತಿ ಖಾತೆಯ ಸಚಿವ ಸಿಟಿ ರವಿ ಪ್ರಶ್ನಿಸಿದ್ದಾರೆ.

    ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ ವಿಚಾರಕ್ಕೆ, ಕೊರೊನಾ ಸಂಬಂಧ ತಬ್ಲಿಘಿ ಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು? ಇದಕ್ಕಾಗಿ ಬೇಲೂರಿನ ನಮ್ಮ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ ಅವರ ಮೇಲೆ ಕೇಸ್ ಹಾಕಿದ್ದಾರೆ. ಈ ವಿಷಯದಲ್ಲಿ ಅತಿರೇಕದ ವರ್ತನೆ ತೋರಿಸಿದ ಅರೇಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನನ್ನ ಸಹೋದ್ಯೋಗಿಗಳಾದ ಬಸವರಾಜ ಬೊಮ್ಮಾಯಿ ಅವರಲ್ಲಿ ವಿನಂತಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ತಬ್ಲಿಘಿಗಳ ವರ್ತನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅವರ ವಿರುದ್ಧ ಮಾತನಾಡಿದ ಕಾರ್ಯಕರ್ತರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ಇದೆ ನನ್ನ ಪ್ರಥಮ ಆದ್ಯತೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಏ.9 ರಂದು ಟ್ವೀಟ್ ಮಾಡಿದ್ದರು.

  • ನಾಪತ್ತೆಯಾಗಿರುವ ತಬ್ಲಿಘಿಗಳ ಮಾಹಿತಿ ನೀಡಿದ್ರೆ ಸಿಗುತ್ತೆ ನಗದು ಬಹುಮಾನ

    ನಾಪತ್ತೆಯಾಗಿರುವ ತಬ್ಲಿಘಿಗಳ ಮಾಹಿತಿ ನೀಡಿದ್ರೆ ಸಿಗುತ್ತೆ ನಗದು ಬಹುಮಾನ

    – ಸಿಗಲಿದೆ 5 ಸಾವಿರ ರೂ. ಬಹುಮಾನ
    – ಮಾಹಿತಿ ನೀಡಿದವರ ಹೆಸರ ಗೌಪ್ಯ

    ಲಕ್ನೋ: ತಬ್ಲಿಘಿ ಜಮಾತ್‍ಗೆ ತೆರಳಿ ಇನ್ನೂ ಪತ್ತೆಯಾಗದವರನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ಉತ್ತರ ಪ್ರದೇಶದ ಪೊಲೀಸರು ಪ್ರಕಟಿಸಿದ್ದಾರೆ.

    ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಸದಸ್ಯರು ಕೂಡಲೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ನಡೆಸಬೇಕೆಂದು ಎಲ್ಲ ಸರ್ಕಾರಗಳು ಸೂಚನೆ ನೀಡುತ್ತಿವೆ. ಆದರೂ ಈ ಕಾರ್ಯಕ್ರಮಕ್ಕೆ ತೆರಳಿದ ಹಲವು ಮಂದಿ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಜಂಗಢದ ಪೊಲೀಸರು ನಾಪತ್ತೆಯಾದ ವ್ಯಕ್ತಿಗಳನ್ನು ಪತ್ತೆ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.

    ಬಹಳ ಸಂಖ್ಯೆಯಲ್ಲಿ ಜಮಾತ್ ಸದಸ್ಯರು ತಲೆ ಮರೆಸಿಕೊಂಡಿದ್ದಾರೆ. ಹೀಗಾಗಿ ಈಗಲೂ ನಾವು ಸಂಬಂಧಪಟ್ಟವರ ಮುಂದೆ ಹಾಜರಾಗಿ ಎಂದು ಮನವಿ ಮಾಡುತ್ತಿದ್ದೇವೆ. ಒಂದು ವೇಳೆ ಬೇರೆ ವ್ಯಕ್ತಿಗಳಿಂದ ಇವರ ಬಗ್ಗೆ ಮಾಹಿತಿ ಸಿಕ್ಕಿದ್ದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಜಂಗಢದ ಎಸ್‍ಪಿ ತ್ರಿವೇಣಿ ಸಿಂಗ್ ಹೇಳಿದ್ದಾರೆ.

    ತಬ್ಲಿಘಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಅಷ್ಟೇ ಅಲ್ಲದೆ ಮಾಹಿತಿ ತಿಳಿಸಿದ ವ್ಯಕ್ತಿಗಳ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ. ಅಜಂಗಢದಲ್ಲಿ 4 ಪಾಸಿಟಿವ್ ಪ್ರಕರಣ ಬಂದಿದ್ದು ಎಲ್ಲ ತಬ್ಲಿಘಿ ಕಾರ್ಯಕ್ರಮಕ್ಕೆ ತೆರಳಿದವರೇ ಆಗಿದ್ದಾರೆ.

    ಶನಿವಾರದವರೆಗೆ ಒಟ್ಟು ಉತ್ತರ ಪ್ರದೇಶದಲ್ಲಿ 448 ಮಂದಿಗೆ ಕೊರೊನಾ ಬಂದಿದೆ. ಈ ಪೈಕಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ 254 ಮಂದಿಗೆ ಪಾಸಿಟಿವ್ ಬಂದಿದೆ. ಇದನ್ನೂ ಓದಿ: 21 ತಬ್ಲಿಘಿಗಳನ್ನು ಪತ್ತೆಹಚ್ಚಿದ್ದ ಇನ್ಸ್‌ಪೆಕ್ಟರ್‌ಗೆ ಕೊರೊನಾ

    ಕೊರೊನಾ ವಿರುದ್ಧ ಸಮರ ಸಾರಿರುವ ಭಾರತಕ್ಕೆ ದೆಹಲಿಯ ನಿಜಾಮುದ್ದೀನ್ ಪ್ರಕರಣವೇ ಕಂಟಕವಾಗಿದೆ. ಲಾಕ್‍ಡೌನ್ ಮಧ್ಯೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ತಬ್ಲಿಘಿಗಳಿಂದಲೇ ಎಲ್ಲ ಕಡೆ ವ್ಯಾಪಿಸಿದೆ. ಜಮಾತ್‍ಗೆ ಹೋಗಿ ಬಂದವರ ಪೈಕಿ ಹಲವು ಮಂದಿಯ ಸುಳಿವೇ ಸಿಕ್ಕಿಲ್ಲ. ಇವತ್ತು ಪ್ರಧಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದ್ದು, ತಬ್ಲಿಘಿ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ. ತಬ್ಲಿಘಿ ಪ್ರಕರಣ ಇಲ್ಲದಿದ್ದರೆ, ಕೊರೊನಾ ಹಿಡಿತದಲ್ಲಿ ಇರುತ್ತಿತ್ತು ಅಂತಲೂ ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ.

    ಕರ್ನಾಟಕಕ್ಕೂ ಕಂಟಕ:
    ಕರ್ನಾಟಕದಿಂದ 1,300 ಮಂದಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ್ದು, 50 ಮಂದಿಗೆ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ 269 ಮಂದಿ, ಇತರ ಜಿಲ್ಲೆಗಳಲ್ಲಿ 472 ಮಂದಿ ಸೇರಿ ಒಟ್ಟು 801 ಮಂದಿ ಕ್ವಾರಂಟೈನ್‍ನಲ್ಲಿದ್ದು 581 ಮಂದಿ ಇನ್ನೂ ಪತ್ತೆಯಾಗಿಲ್ಲ. 50 ವಿದೇಶಿ ತಬ್ಲಿಘಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

    ತಮಿಳುನಾಡಿನಲ್ಲಿ ಒಟ್ಟು 969 ಮಂದಿಗೆ ಸೋಂಕು ಬಂದಿದ್ದು, 833 ಮಂದಿ ಜಮಾತ್‍ಗೆ ತೆರಳಿದ್ದರು. ದೆಹಲಿಯಲ್ಲಿ 903 ಮಂದಿಗೆ ಕೊರೊನಾ ಬಂದಿದ್ದು ಈ ಪೈಕಿ 584 ಮಂದಿ ದೆಹಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಈ ಸಂಬಂಧ ಶುಕ್ರವಾರ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಟ್ವೀಟ್ ಮಾಡಿ, ದೇಶದ ಕೊರೊನಾ ಪ್ರಕರಣಗಳ ಪೈಕಿ ಶೇ.63 ರಷ್ಟು ಪ್ರಕರಣಗಳು ತಬ್ಲಿಘಿ ಜಮಾತ್‍ಗೆ ಸಂಬಂಧಿಸಿದವು ಎಂದು ಹೇಳಿದ್ದಾರೆ.

  • ಕರ್ನಾಟಕದಲ್ಲಿ ಏ.30ರವರೆಗೆ ಲಾಕ್‍ಡೌನ್ ವಿಸ್ತರಣೆ

    ಕರ್ನಾಟಕದಲ್ಲಿ ಏ.30ರವರೆಗೆ ಲಾಕ್‍ಡೌನ್ ವಿಸ್ತರಣೆ

    ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಿಸುವ ಸಂಬಂಧ ಏಪ್ರಿಲ್ 30ರವರೆಗೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿಯಲಿದೆ.

    ದೇಶಾದ್ಯಂತ ಹೇರಲಾಗಿರುವ 21 ದಿನಗಳ ಲಾಕ್‍ಡೌನ್ ಏ.14ಕ್ಕೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

    ಈ ಸಂದರ್ಭದಲ್ಲಿ ಲಾಕ್‍ಡೌನ್ ವಿಧಿಸಿದ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಏ.30ರವರೆಗೆ ಲಾಕ್‍ಡೌನ್ ವಿಸ್ತರಿಸಬೇಕೆಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು.

    ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಯಡಿಯೂರಪ್ಪ ಏ.30ರವರೆಗೆ ಲಾಕ್‍ಡೌನ್ ವಿಸ್ತರಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದರು.

  • 21 ತಬ್ಲಿಘಿಗಳನ್ನು ಪತ್ತೆಹಚ್ಚಿದ್ದ ಇನ್ಸ್‌ಪೆಕ್ಟರ್‌ಗೆ ಕೊರೊನಾ

    21 ತಬ್ಲಿಘಿಗಳನ್ನು ಪತ್ತೆಹಚ್ಚಿದ್ದ ಇನ್ಸ್‌ಪೆಕ್ಟರ್‌ಗೆ ಕೊರೊನಾ

    ಮುಂಬೈ: 21 ತಬ್ಲಿಘಿಗಳನ್ನು ಪತ್ತೆ ಹಚ್ಚಿದ್ದ ಮುಂಬೈ ನಗರದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ ವ್ಯಕ್ತಿಗಳು ಕಡ್ಡಾಯವಾಗಿ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆ ನಡೆಸಬೇಕೆಂದು ಸೂಚಿಸಲಾಗಿತ್ತು. ಆದರೆ ವಿದೇಶದಿಂದ ಆಗಮಿಸಿದ ವ್ಯಕ್ತಿಗಳು ಪರೀಕ್ಷೆ ನಡೆಸದೇ ಮಸೀದಿ ಮತ್ತು ಕೆಲ ಶಿಕ್ಷಣ ಸಂಸ್ಥೆಯಲ್ಲಿ ಅವಿತುಕೊಂಡಿದ್ದರು.

    ತಮಿಳುನಾಡಿನಿಂದ ಮಹಾರಾಷ್ಟ್ರಕ್ಕೆ ಆಗಮಿಸಿದ ಈ ವ್ಯಕ್ತಿಗಳು ಮುಂಬೈ ಕೆಲ ಸ್ಥಳಗಳಲ್ಲಿ ಅವಿತುಕೊಂಡಿದ್ದಾರೆ ಎನ್ನುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.

    ಖಚಿತ ಮಾಹಿತಿ ಪಡೆದು ಮಸೀದಿ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಇನ್ಸ್‌ಪೆಕ್ಟರ್‌ 13 ಬಾಂಗ್ಲಾದೇಶ ಮತ್ತು 8 ಮಂದಿ ಮಲೇಷ್ಯಾದ ಪ್ರಜೆಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಕೇಂದ್ರಕ್ಕೆ ಹಾಕಿದ್ದರು.

    ಕ್ವಾರಂಟೈನ್ ಕೇಂದ್ರಕ್ಕೆ ದಾಖಲಾದ 21 ವಿದೇಶಿ ಪ್ರಜೆಗಳು ಮತ್ತು ಆಶ್ರಯ ನೀಡಿದ್ದ ಟ್ರಸ್ಟಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಈ ಘಟನೆ ನಡೆದ ಕೆಲ ದಿನಗಳ ಬಳಿಕ ಇನ್ಸ್‌ಪೆಕ್ಟರ್‌ಗೆ ಅವರಿಗೆ ಕೋವಿಡ್-19 ಲಕ್ಷಣಗಳು ಕಾಣಿಸಿದೆ. ಬಳಿಕ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದ್ದು ಶುಕ್ರವಾರ ಪಾಸಿಟಿವ್ ಬಂದಿದೆ. ಈಗ ಇನ್ಸ್‌ಪೆಕ್ಟರ್‌ ಅವರನ್ನು ನಾಸಿಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಕ್ರಮವಾಗಿ ವಿದೇಶಿ ಪ್ರಜೆಗಳನ್ನು ಬಚ್ಚಿಟ್ಟಿದ್ದಕ್ಕೆ ಮಸೀದಿ ಮತ್ತು ಶಿಕ್ಷಣ ಸಂಸ್ಥೆಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

  • ಮೈಸೂರು, ಮಂಡ್ಯ ಆಯ್ತು – ಈಗ ರಾಮನಗರಕ್ಕೆ ಎದುರಾಯ್ತು ಟೆನ್ಷನ್

    ಮೈಸೂರು, ಮಂಡ್ಯ ಆಯ್ತು – ಈಗ ರಾಮನಗರಕ್ಕೆ ಎದುರಾಯ್ತು ಟೆನ್ಷನ್

    ರಾಮನಗರ: ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಇಲ್ಲದೇ ನಿರ್ಭಿತಿಯಿಂದಿದ್ದ ರಾಮನಗರಕ್ಕೆ ಇದೀಗ ಕೊರೊನಾ ಟೆನ್ಷನ್ ಶುರುವಾಗಿದೆ. ತಬ್ಲಿಘಿ ಸಮಾವೇಶಕ್ಕೆ ತೆರಳಿದ್ದ ವ್ಯಕ್ತಿಯೊರ್ವ ಚನ್ನಪಟ್ಟಣಕ್ಕೆ ಬಂದು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ.

    ಚನ್ನಪಟ್ಟಣಕ್ಕೆ ಬಂದು ಹೋಗಿದ್ದ ಆ ವ್ಯಕ್ತಿಗೆ ಈಗಾಗಲೇ ಸೊಂಕು ದೃಢಪಟ್ಟಿದ್ದು, ಆತನ ಪೋಷಕರನ್ನು ಇದೀಗ ಕ್ವಾರಂಟೈನ್‍ಗೆ ಶಿಫ್ಟ್ ಮಾಡಲಾಗಿದೆ. ಇದು ಜಿಲ್ಲೆಯ ಜನರಲ್ಲಿ ಸಾಕಷ್ಟು ಭಯದ ಜೊತೆಗೆ ಟೆನ್ಷನ್ ಸಹ ಹೆಚ್ಚಿಸಿದೆ.

    ದೆಹಲಿಯ ತಬ್ಲಿಘಿ ಸಮಾವೇಶ ಇಡೀ ದೇಶಕ್ಕೆ ಕಂಟಕ ಆಗಿದೆ. ಬೆಂಗಳೂರಿನ ನೆರೆಯ ಜಿಲ್ಲೆ ರಾಮನಗರದಲ್ಲಿ ಇದುವರೆಗೂ ಕೊರೊನಾ ಕಂಟಕ ಎದುರಾಗಿರಲಿಲ್ಲ. ಆದರೆ ರೋಗಿ ನಂಬರ್ 163ನಿಂದ ಇದೀಗ ರಾಮನಗರ ಜಿಲ್ಲೆ ಕೊರೊನಾ ವೈರಸ್ ಭೀತಿಗೆ ಒಳಗಾಗಿದೆ.

    ಈ ಸೋಂಕಿತ ವ್ಯಕ್ತಿ ತಬ್ಲಿಘಿ ಸಮಾವೇಶದಿಂದ ವಾಪಸ್ಸಾದ ಬಳಿಕ ಚನ್ನಪಟ್ಟಣದ ತನ್ನ ಪೋಷಕರ ಜೊತೆ ಒಂದೂವರೆ ದಿನ ಇದ್ದು, ನಂತರ ಹೊಸಕೋಟೆಗೆ ವಾಪಸ್ ತೆರಳಿದ್ದಾನೆ. ಇದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಪೋಷಕರು ಹಾಗೂ ಸಂಬಂಧಿಗಳನ್ನು ಕ್ವಾರಂಟೈನ್ ಶಿಬಿರಕ್ಕೆ ಶಿಫ್ಟ್ ಮಾಡಿದ್ದಾರೆ.

    ರೋಗಿ ನಂಬರ್ 163 ಸೋಂಕಿತ ರಾಮನಗರ ಜಿಲ್ಲೆಗೆ ಕಾಲಿಡುವ ಮೂಲಕ ಜಿಲ್ಲೆಯ ಜನರಲ್ಲಿ ಸಾಕಷ್ಟು ಆತಂಕವನ್ನುಂಟು ಮಾಡಿದ್ದಾನೆ.

  • ತಬ್ಲಿಘಿ ಜಮಾತ್ ಉಗ್ರ ಸಂಘಟನೆ, ದೇಶಾದ್ಯಂತ ಸೋಂಕು ಹರಡಿಸಿದ್ದಾರೆ -ಅನಂತ್‍ಕುಮಾರ್ ಹೆಗ್ಡೆ

    ತಬ್ಲಿಘಿ ಜಮಾತ್ ಉಗ್ರ ಸಂಘಟನೆ, ದೇಶಾದ್ಯಂತ ಸೋಂಕು ಹರಡಿಸಿದ್ದಾರೆ -ಅನಂತ್‍ಕುಮಾರ್ ಹೆಗ್ಡೆ

    – ಹಲವು ಉಗ್ರರಿಗೂ ಸಂಘಟನೆಗೂ ಸಂಬಂಧ
    – ಲಾಕ್‍ಡೌನ್ ವಿಫಲಗೊಳಿಸಲೆಂದೇ ದೇಶದೆಲ್ಲೆಡೆ ಓಡಾಟ
    – ಇಸ್ಲಾಮಿಕ್ ಮೂಲಭೂತವಾದಿಗಳ ಕೈಯಲ್ಲಿ ವೈರಾಣು ಅಸ್ತ್ರವಾಯಿತೇ?

    ಕಾರವಾರ: ಸದಾ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್‍ಕುಮಾರ್ ಹೆಗ್ಡೆ ತಮ್ಮ ಫೇಸ್‍ಬುಕ್ ನಲ್ಲಿ ತಬ್ಲಿಘಿ ಜಮಾತ್ ಕುರಿತು ಸುದೀರ್ಘ ಲೇಖನ ಬರೆದು, ಅದೊಂದು ಉಗ್ರ ಸಂಘಟನೆ ಎಂದು ಬಿಂಬಿಸಿದ್ದಾರೆ.

    ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ರಹಸ್ಯ ಸಂಘಟನೆ – ತಬ್ಲಿಘಿ ಜಮಾತ್ ಒಳಸುಳಿಗಳು ಎಂದು ಶೀರ್ಷಿಕೆಯಡಿ ಲೇಖನವನ್ನು ತಮ್ಮ ಫೇಸ್‍ಬುಕ್ ಹಾಗೂ ಬ್ಲಾಗ್ ನಲ್ಲಿ ಇಂದು ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ ಅನಂತ್‍ಕುಮಾರ್ ಅವರು ತಬ್ಲಿಘಿ ಇಸಹಾಸವೇನು? ಭಾರತ ಮೂಲದ ಇಸ್ಲಾಂ ಧರ್ಮ ಪ್ರಚಾರದ ಸಂಸ್ಥೆ ವಿಶ್ವವ್ಯಾಪಿ ಬೆಳೆದಿದ್ದು ಹೇಗೆ? ತಬ್ಲಿಘಿಗೂ ಉಗ್ರಸಂಘನೆಗೂ ಹೇಗೆ ನಂಟು? ಧರ್ಮ ಪ್ರಚಾರದಕ್ಕೆ ತಬ್ಲಿಘಿ ಜಮಾತ್ ಸದಸ್ಯರನ್ನು ಹೇಗೆ ಬಳಸಿಕೊಂಡಿತು? ರಷ್ಯಾ- ಅಫ್ಘಾನಿಸ್ತಾನ್‍ನ ವಿವಾದವೇನು? ಕೊರೊನಾ ವೈರಸ್ ಹಾಗೂ ತಬ್ಲಿಘಿ ಜಮಾತ್ ನಂಟಿನ ಬಗ್ಗೆ ಉಲ್ಲೇಖಿಸಿದ್ದಾರೆ.

    “ಇಸ್ಲಾಮ್ ರಾಜಕಾರಣ” ಎಂಬ ತಲೆಬರಹ ನೀಡಿ ಅನಂತ್‍ಕುಮಾರ್ ಬರೆದ ಯಥಾವತ್ ಬರಹವನ್ನು ಇಲ್ಲಿ ನೀಡಲಾಗಿದೆ.

    ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ರಹಸ್ಯ ಸಂಘಟನೆ – ತಬ್ಲೀಘಿ ಜಮಾತ್ ಒಳಗಿನ ಒಳಸುಳಿಗಳು.
    ಪ್ರಪಂಚದ ಅಷ್ಟೂ ದೇಶಗಳ ಅದೆಷ್ಟೋ ಮಂದಿ ಪ್ರಚಂಡ ವಿಜ್ಞಾನಿಗಳಿಗೂ ಸವಾಲಾಗಿರುವ, ಎಲ್ಲಾ ವೈದ್ಯರಿಗೂ ಕಗ್ಗಂಟಾಗಿರುವ, ಜಗತ್ತಿನ ಅಷ್ಟೂ ಬಲಾಢ್ಯ ದೇಶಗಳೇ ಬೆಚ್ಚಿಬಿದ್ದಿರುವ, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಭಯಭೀತರಾಗಿರುವ ಕೊರೊನಾ ಎಂಬ ಮಹಾಮಾರಿಯಂಥ ವೈರಸ್ಸು ಎಲ್ಲ ಕಡೆ ಹಬ್ಬುತ್ತಿದೆ. ಈ ಮಾರಣಾಂತಿಕ ಸೋಂಕು ವ್ಯಾಪಕವಾಗಿ ಯಾರೂ ಊಹಿಸದಷ್ಟು ವೇಗದಲ್ಲಿ ಹರಡುತ್ತಿದೆ. ಅದು ಪ್ರಸರಣವಾದೆಡೆಯಲ್ಲೆಲ್ಲಾ ಮರಣ ತಾಂಡವವಾಡುತ್ತಿದೆ. ಬರಿಗಣ್ಣಿಗೆ ಕಾಣಿಸದ ಈ ಭೀಕರ ಹೆಮ್ಮಾರಿಯನ್ನು ಮಣಿಸುವುದು ಹೇಗೆಂಬ ಉಪಾಯಗಾಣದೆ ಆಧುನಿಕ ಮನುಷ್ಯ ತಲ್ಲಣಿಸಿ ಮನೆಯೊಳಗೇ ಅವಿತುಕುಳಿತಿದ್ದಾನೆ. ತೀರಾ ಅಸಹಾಯಕನಾಗಿದ್ದಾನೆ.

    ನಾವು ಬುದ್ಧಿವಂತ ಮನುಷ್ಯರು ಕಟ್ಟಿಕೊಂಡಿರುವ ಆ ಅತ್ಯಾಧುನಿಕ ಜಗತ್ತಿಗೆ ಇಂಥದ್ದೊಂದು ಗಂಡಾಂತರ ಬರಬಹುದು, ಅದರಲ್ಲೂ ಕಣ್ಣಿಗೆ ಕಾಣಿಸದ ಒಂದು ಯಕಶ್ಚಿತ್ ವೈರಸ್ಸಿನ ಎದುರು ಹೀಗೆ ಮಾನವ ಜನಾಂಗವೇ ಮರಣಭಯದಿಂದ ಶರಣಾಗಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ.

    ಅದೇ ರೀತಿ ಕೊರೊನಾ ಎಂಬ ಮಾಹಾಮಾರಿ ವೈರಾಣುವನ್ನು ಮಣಿಸಲು, ಅದು ಹರಡುವುದನ್ನು ತಡೆಗಟ್ಟಲು ಇಡೀ ದೇಶವೇ ಒಗ್ಗಟ್ಟಾಗಿ ಹೋರಾಡಿ, ಪ್ರಪಂಚದ ಬೇರೆಲ್ಲಾ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಬಹಳಷ್ಟು ಯಶಸ್ಸುಗಳಿಸಿ, ಅತ್ಯಂತ ಕಡಿಮೆ ಸಂಖ್ಯೆಯ ಸೋಂಕಿತರನ್ನು ಹೊಂದಿ ಇನ್ನೇನು ಈ ಯುದ್ಧದಲ್ಲಿ ನಾವು ನಿಶ್ಚಿತವಾಗಿಯೂ ಜಯಗಳಿಸುತ್ತೇವೆ ಎಂಬ ದೃಢನಂಬಿಕೆಯಲ್ಲಿರುವಾಗಲೇ ಇಂಥಾದ್ದೊಂದು ದೇಶ ದ್ರೋಹದ ಕೆಲಸ ನಡೆಯಬಹುದು, ಗಂಭೀರ ಮಾರಣಾಂತಿಕ ಕಾಯಿಲೆಯೊಂದನ್ನು ದೇವರ ಹೆಸರಿನಲ್ಲಿ, ನಂಬಿಕೆಯ ಹೆಸರಿನಲ್ಲಿ ದೇಶದ ಮೂಲೆ ಮೂಲೆಗೂ ಹರಡಬಹುದು. ಆ ಮೂಲಕ ಭಾರತದ ಕೋಟ್ಯಂತರ ಪ್ರಜೆಗಳಿಗೆ ಗಂಡಾಂತರ ಉಂಟುಮಾಡಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ.

    ಕೊರೊನಾ ಎಂಬ ನಿಗೂಢ ವೈರಸ್ಸಿನಿಂದ ಉಂಟಾಗಬಹುದಾದ ಅಪಾಯದ ಅರಿವೇ ಇಲ್ಲದೆ, ಅದನ್ನು ಅರ್ಥ ಮಾಡಿಕೊಳ್ಳಲಾಗದೆ ಜಗತ್ತಿನ ಅತ್ಯಂತ ಮುಂದುವರಿದ ದೇಶಗಳ ವಿಜ್ಞಾನಿಗಳು, ವೈದ್ಯರು ಹೇಗೆ ಸೋತು ಹೋದರೋ, ಅದೇ ರೀತಿ ತಬ್ಲಿಘಿ ಜಮಾತ್ ಎಂಬ ರಹಸ್ಯ ಸಂಘಟನೆ ಮತ್ತು ಇಸ್ಲಾಮ್ ಎಂಬ ಅಪಾಯಕಾರಿ ಮತವನ್ನು, ಅದು ಇಡೀ ಮಾನವಜನಾಂಗಕ್ಕೆ ತಂದೊಡ್ಡಲಿರುವ ಗಂಡಾಂತರವನ್ನು ಅಂದಾಜಿಸುವಲ್ಲಿ ಇಡೀ ಪ್ರಪಂಚದ ಅಷ್ಟೂ ರಾಜಕಾರಣಿಗಳು, ರಾಜತಂತ್ರಜ್ಞರು, ಮುತ್ಸದ್ದಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಅಂತ ಅನಿಸುತ್ತಿದೆ. ಒಂದರ್ಥದಲ್ಲಿ ವೇಗವಾಗಿ ವೃದ್ಧಿಗೊಳ್ಳುತ್ತಾ ಜಗತ್ತಿನಾದ್ಯಂತ ತನ್ನ ಕರಾಳ ಹಸ್ತವನ್ನು ಪಸರಿಸುತ್ತಾ ಮಾರಣಹೋಮ ಎಸಗುತ್ತಿರುವ ಕೊರೊನಾ ವೈರಸ್ ಮತ್ತು ಅದೇ ರೀತಿ ವೇಗವಾಗಿ ವೃದ್ಧಿಗೊಳ್ಳುತ್ತಾ, ಜಗತ್ತಿನಾದ್ಯಂತ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳ ಮೂಲಕ ಮನುಕುಲಕ್ಕೇ ಗಂಡಾಂತರ ತಂದೊಡ್ಡುತ್ತಿರುವ ಇಸ್ಲಾಮ್, ಈ ಎರಡಕ್ಕೂ ಒಂದು ರೀತಿಯ ಹೋಲಿಕೆ ಇದೆ.

    ತಬ್ಲೀಘಿ ಜಮಾತ್, ಭಾರತದಲ್ಲೇ ಹುಟ್ಟಿ ಇವತ್ತು ವಿಶ್ವದೆಲ್ಲೆಡೆ ಬೇರುಬಿಟ್ಟು ಹರಡಿಕೊಂಡು ಕೋಟ್ಯಂತರ ಸದಸ್ಯರನ್ನು ಹೊಂದಿರುವ ಒಂದು ಖಟ್ಟರ್ ಮೂಲಭೂತವಾದಿ ಇಸ್ಲಾಮಿಕ್ ಸಂಸ್ಥೆ. ಇದು ಮೂಲತಃ ಭಾರತದ್ದೇ ಇನ್ನೊಂದು ಇಸ್ಲಾಮಿಕ್ ಸಂಸ್ಥೆ ದಾರುಲ್ ಉಲೂಮ್ ದೇವ್ ಬಂದ್ ನ ಒಂದು ಶಾಖೆಯಾಗಿ ಪ್ರಾರಂಭವಾಯಿತು. ಇದರ ಮೂಲ ಉದ್ದೇಶ ಇಸ್ಲಾಮ್ ಪ್ರಚಾರ. ಅದರಲ್ಲೂ ಪ್ರವಾದಿ ಮೊಹಮ್ಮದರ ಕಾಲದಲ್ಲಿದ್ದಂತೆಯೇ ಕಟ್ಟುನಿಟ್ಟಿನ ಜೀವನ ಪದ್ಧತಿ ರೂಢಿಸಿಕೊಳ್ಳಲು ಮುಸ್ಲಿಮರನ್ನೇ ಪ್ರೇರೇಪಿಸುವುದು ಇದರ ಆಶಯ. ದಾರಿ ತಪ್ಪಿರುವ, ಇಸ್ಲಾಮ್ ಧರ್ಮವನ್ನು ಸರಿಯಾಗಿ ಪಾಲಿಸದ ಮುಸ್ಲಿಮರೇ ಈ ಸಂಸ್ಥೆಯ ಗುರಿ. ಖುರಾನ್ ಹದೀಸ್, ಸುನ್ನಾಹ್‍ವನ್ನೇ ಭೋಧಿಸುವ, ಮತಪ್ರಚಾರದ ಕೆಲಸ ಬಿಟ್ಟರೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲದ ಸಂಘಟನೆ ಅಂತ ಹೇಳಿಕೊಂಡಿದ್ದ ತಬ್ಲಿಘಿ ಜಮಾತ್ ನ ಪ್ರವರ್ತಕ ಮೌಲಾನಾ ಮೊಹಮ್ಮದ್ ಇಲ್ಯಾಸ್ ಖಾಂಡಾಲವಿ. ರಾಜಕೀಯ ಉದ್ದೇಶ ಇಲ್ಲದ ಸಂಘಟನೆಯಾದುದರಿಂದ ಭಾರತವನ್ನಾಳುತ್ತಿದ್ದ ಬ್ರಿಟಿಷರೂ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಹೀಗೆ 1928ರಲ್ಲಿ ಪ್ರಾರಂಭವಾದ ತಬ್ಲಿಘಿ ಜಮಾತ್‍ಗೆ ಇದ್ದ ಮೂಲ ಉದ್ದೇಶವೇ ಮತಾಂತರ.

    ಹೌದು. ಅದಕ್ಕೊಂದು ಐತಿಹಾಸಿಕ ಹಿನ್ನೆಲೆಯೂ ಇದೆ. ಮರಾಠರ ಆಕ್ರಮಣದಿಂದ ಮುಘಲರು ಸೋತುಹೋದ ಬಳಿಕ ಭಾರತದ, ಅದರಲ್ಲೂ ದೆಹಲಿಯ ಅಧಿಕಾರ ಗದ್ದುಗೆ ಮುಸ್ಲಿಮರ ಕೈ ತಪ್ಪಿ ಹೋಗಿತ್ತು. ಮುಘಲರ ಕಾಲದಲ್ಲಿ ಲಕ್ಷಾಂತರ ರಾಜಪೂತರು ಇಸ್ಲಾಮಿಗೆ ಬಲವಂತದ ಮತಾಂತರವಾಗಿದ್ದರು. ಇವರಲ್ಲಿ ಹೆಚ್ಚಿನವರು ಮೇವಾರಿ ಭಾಷೆ ಮಾತಾಡುತ್ತಿದ್ದ ಮೀಯೋ ಮುಸ್ಲಿಮರಾಗಿದ್ದರು. ಯಾವಾಗ ದೆಹಲಿಯಲ್ಲಿ ಮುಸ್ಲಿಮರ ಪ್ರಭಾವ ಕಡಿಮೆಯಾಯಿತೋ ಆಗ ಈ ಮುಸ್ಲಿಂ ರಾಜಪೂತರೆಲ್ಲಾ ಮರಳಿ ಹಿಂದೂ ಧರ್ಮಕ್ಕೆ ಮತಾಂತರವಾಗತೊಡಗಿದರು. ಅದಕ್ಕೆಂದೇ ಸ್ವಾಮೀ ದಯಾನಂದ ಸರಸ್ವತಿ ಮತ್ತವರ ಆರ್ಯ ಸಮಾಜ “ಶುದ್ಧೀಕರಣ” ಎಂಬ ಕಾರ್ಯಕ್ರಮ ರೂಪಿಸಿದರು. ದಯಾನಂದರ ಬಳಿಕ ಅವರ ಶಿಷ್ಯ ಸ್ವಾಮೀ ಶ್ರದ್ಧಾನಂದ 1923 ರಲ್ಲಿ “ಭಾರತೀಯ ಹಿಂದೂ ಶುದ್ಧಿ ಮಹಾಸಭಾ” ಎಂಬ ಹೊಸ ಸಂಘಟನೆಯನ್ನೇ ಶುರುಮಾಡಿ. ಬಲವಂತವಾಗಿ ಇಸ್ಲಾಮಿಗೆ ಮತಾಂತರವಾಗಿದ್ದವರನ್ನೆಲ್ಲ ಮರಳಿ ಮಾತೃಧರ್ಮಕ್ಕೆ ಕರೆತರುವ ಕೆಲಸವನ್ನು ದೊಡ್ಡಮಟ್ಟದಲ್ಲೇ ಶುರುಮಾಡಿದರು. ಇದಕ್ಕೆ ಪ್ರತಿಯಾಗಿ ಎರಡೇ ವರ್ಷ ಕಳೆಯುವಷ್ಟರಲ್ಲಿ ಮೌಲಾನಾ ಮೊಹಮ್ಮದ್ ಇಲ್ಯಾಸ್ ಖಾಂಡಾಲವಿ ತಬ್ಲಿಘಿ ಜಮಾತ್ ಶುರುಮಾಡಿದ್ದ. ಅದಕ್ಕೆ ಬ್ರಿಟಿಷರ ಕೃಪಾಶೀರ್ವಾದ ಕೂಡ ದೊರಕಿತು.

    ತಬ್ಲಿಘಿ ಜಮಾತ್ ಅಲ್ಪ ಕಾಲದಲ್ಲೇ ದೇಶದಾದ್ಯಂತ ಪಸರಿಸಿತು. ಪ್ರವಾದಿಯ ಕಾಲದಲ್ಲಿ ಅನುಸರಿಸಲಾಗುತ್ತಿತ್ತೆಂದು ಹೇಳಲಾದ ಖಟ್ಟರ್ ಇಸ್ಲಾಮನ್ನು ಬೋಧನೆ ಮಾಡುತ್ತಿದ್ದ ತಬ್ಲಿಘಿ ಜಮಾತ್, ತನ್ನ ರೀತಿಯ ಧರ್ಮ ಪ್ರಚಾರದ ಉದ್ದೇಶಕ್ಕೆಂದೇ ಮುಹಮ್ಮದ್ ಝಕಾರಿಯಾ ಖಾಂಡಾಲವಿ ಬರೆದ ‘ತಬ್ಲಿಘಿ ನಿಸಾಬ್’ ಎಂಬ ಪುಸ್ತಕವನ್ನು ಪಠ್ಯ ಪುಸ್ತಕದಂತೆ ಉಪಯೋಗಿಸುತ್ತಿತ್ತು. ಇದು ಹಲವಾರು ಪುಸ್ತಕಗಳ ಕಂತೆ. ಇದರಲ್ಲಿ ಕಾಲಾಂತರದಲ್ಲಿ ಸೌಮ್ಯವಾದಿ ಸೂಫಿ ಪಂಥದ ಕತೆಗಳೂ ಸೇರಿಕೊಂಡವು. ಆದರೆ ಬಳಿಕ ಇವುಗಳನ್ನೆಲ್ಲ ಪರಿಷ್ಕರಿಸಿ ಖಟ್ಟರ್ ಇಸ್ಲಾಮಿನ ಬೋಧನೆಗಳಷ್ಟನ್ನೇ ಉಳಿಸಿ ‘ಸಹೀಹ್ ಫಝಯ್ಲ್ ಎ ಅಮಾಲ್’ ಎಂಬ ಪುಸ್ತಕವನ್ನು ಪ್ರಕಟಿಸಲಾಯಿತು. ಇದರೊಂದಿಗೆ ತಬ್ಲಿಘಿ ಜಮಾತ್ ಅನ್ನುವುದು ಖಟ್ಟರ್ ಮೂಲಭೂತವಾದಿ ಇಸ್ಲಾಮನ್ನು ಭೋಧನೆ ಮಾಡುವ ಬೃಹತ್ ಸಂಸ್ಥೆಯಾಗಿ ಬೆಳೆಯಿತು.

    ತಬ್ಲಿಘಿ ಜಮಾತ್‍ಗೆ ಒಂದು ದೊಡ್ಡ ತಿರುವು ಸಿಕ್ಕಿದ್ದು ದೇಶ ವಿಭಜನೆಯಾಗಿ ಪಾಕಿಸ್ತಾನ ರಚನೆಯಾದಾಗ. ಪಾಕಿಸ್ತಾನದ ರಾಯ್‍ವಿಂಡ್‍ನಲ್ಲಿ ತಬ್ಲಿಘಿ ಜಮಾತ್ ನ ಬೃಹತ್ ಶಾಖೆಯೊಂದು ಪ್ರಾರಂಭವಾಯಿತು ಮತ್ತು ಇದಕ್ಕೆ ಪಾಕಿಸ್ತಾನ ಸರ್ಕಾರದ ಸಂಪೂರ್ಣ ಬೆಂಬಲ ದೊರಕಿತು. ಮೌಲಾನಾ ಇಲ್ಯಾಸನ ಮಗ ಮೌಲಾನಾ ಮೊಹಮ್ಮದ್ ಯೂಸುಫ್ ಮತ್ತು ಆತನ ಉತ್ತರಾಧಿಕಾರಿ ಮೌಲಾನಾ ಇನಾಮುಲ್ ಹಸನ್ ಅವಧಿಯಲ್ಲಿ ತಬ್ಲಿಘಿ ಜಮಾತ್ ಗೆ ಪಾಕಿಸ್ತಾನದಲ್ಲೂ, ಭಾರತದಲ್ಲೂ ಭಾರೀ ರಾಜಕೀಯ ಮತ್ತು ಹಣಕಾಸಿನ ಬೆಂಬಲ ದೊರಕಿ ಅದು ಅಂತಾರಾಷ್ಟ್ರೀಯ ಸಂಘಟನೆಯಾಗಿ ಬೆಳೆಯಿತು. ಅರವತ್ತರ ದಶಕದಲ್ಲಿ ತಬ್ಲಿಘಿ ಜಮಾತ್ ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ತಳ ಊರಿತ್ತು. ಎಪ್ಪತ್ತರ ದಶಕದಲ್ಲಿ ಸೌದಿಯ ವಹಾಬಿಗಳ ಸಹಕಾರ ಮೊಟ್ಟಮೊದಲ ಬಾರಿಗೆ ತಬ್ಲಿಘಿ ಜಮಾತ್ ಗೆ ದೊರೆಯಿತು. ಆಗಿನ ಕಾಲದ ಪ್ರಮುಖ ವಹಾಬೀ ಧರ್ಮಗುರು ಶೇಖ್ ಅಬ್ದ್ ಅಲ್ ಇಬ್ನ್ ಬಾಜ್ ತಬ್ಲಿಘಿ ಜಮಾತ್ ಅನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು ಮಾತ್ರವಲ್ಲ ತಬ್ಲಿಘಿ ಜಮಾತ್ ನ ಧರ್ಮಪ್ರಚಾರಕ ಮೌಲ್ವಿಗಳ ಜೊತೆಗೆ ತಮ್ಮ ವಹಾಬೀ ಪ್ರಚಾರಕರನ್ನೂ ಕಳುಹಿಸಿಕೊಡಲು ಉತ್ತೇಜಿಸಿದರು. ಇದು ತಬ್ಲಿಘಿನ ಇನ್ನೊಂದು ಟರ್ನಿಂಗ್ ಪಾಯಿಂಟ್. ಅಷ್ಟರಲ್ಲಾಗಲೇ ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ತಮ್ಮ ಧರ್ಮ ಪ್ರಚಾರದ ನೆಟ್ ವರ್ಕ್ ಸ್ಥಾಪಿಸಿದ್ದ ತಬ್ಲಿಘಿನ ಜೊತೆಗೆ ಸೌದಿಯ ವಹಾಬಿಗಳು ಕೈಜೋಡಿಸಿ ತಮ್ಮ ಜಾಲವನ್ನು ಬಲಪಡಿಸಿಕೊಳ್ಳುವ ಪ್ಲಾನ್ ಹಾಕಿಕೊಂಡಿದ್ದರು. ಮತ್ತು ಅದರಲ್ಲಿ ಯಶಸ್ವಿಯೂ ಆದರು. ತಬ್ಲಿಘಿಗೆ ಸೌದಿಯಿಂದ ಹಣದ ನೆರವು ಕೂಡಾ ಯಥೇಚ್ಛವಾಗಿ ಹರಿದು ಬಂತು. ಸೌದಿ ಮೂಲದ “ವರ್ಲ್ಡ್ ಮುಸ್ಲಿಂ ಲೀಗ್” ಪ್ರಧಾನ ಪೋಷಕನಾಗಿ ತಬ್ಲಿಘಿಗೆ ಸಹಾಯ ಮಾಡಿತು. ವಾಸ್ತವವಾಗಿ ತಬ್ಲಿಘಿ ಜಮಾತ್ ನ ಪ್ರಚಾರಕರು ಸ್ವಯಂ ಸೇವಕರು, ಮತ್ತು ತಮ್ಮ ಕೈಯಿಂದಲೇ ಖರ್ಚು ಮಾಡಿಕೊಂಡು ಪ್ರಯಾಣಿಸುತ್ತಾ ಊರೂರು ತಿರುಗಿ ಧರ್ಮ ಪ್ರಚಾರ ಮತ್ತು ಮತಾಂತರ ಮಾಡುತ್ತಿದ್ದರು. ಆದರೆ ಕಾಲಾಂತರದಲ್ಲಿ ಸೌದಿಯ ಹಣ ಹರಿದುಬಂದಂತೆಲ್ಲ ತಬ್ಲಿಘಿನ ಪ್ರಚಾರಕರ ಪ್ರಯಾಣದ ಖರ್ಚಿಗೆ ಈ ಹಣ ಬಳಕೆಯಾಗತೊಡಗಿತು.

    ಸೌದಿ ಮೂಲದ ವರ್ಲ್ಡ್ ಮುಸ್ಲಿಂ ಲೀಗ್ 1978ರಷ್ಟು ಹಿಂದೆಯೇ ಇಂಗ್ಲೆಂಡಿನ ಡ್ರ್ಯುಸ್ ಬರಿಯಲ್ಲಿ ಭಾರೀ ದೊಡ್ಡ ಕಟ್ಟಡವೊಂದನ್ನು ತಬ್ಲಿಘಿ ಜಮಾತ್ ಗೆ ಮಸೀದಿಗಾಗಿ ನೀಡಿತು. ಅವತ್ತಿನಿಂದ ಈ ಕಟ್ಟಡ ಪೂರ್ತಿ ಯುರೋಪಿಗೆ ತಬ್ಲಿಘಿ ಜಮಾತ್ ನ ಹೆಡ್ ಕ್ವಾರ್ಟರ್ಸ್ ಆಗಿ ಬದಲಾಯಿತು. ತಬ್ಲಿಘಿ ಧರ್ಮ ಪ್ರಚಾರಕರು ಆಫ್ರಿಕಾದಲ್ಲಿ ಅವಿರತವಾಗಿ ಕೆಲಸ ನಿರ್ವಹಿಸಿದರು. ಈ ಕೆಲಸಕ್ಕಾಗಿ ಅವರಿಗೆ ವರ್ಲ್ಡ್ ಮುಸ್ಲಿಂ ಲೀಗ್ ನಿಂದ್ ಭರ್ಜರಿ ಸಂಬಳ ಸಿಗತೊಡಗಿತು. ನಿಧಾನವಾಗಿ ಭಾರತೀಯ ಮೂಲದ ಈ ತಬ್ಲಿಘಿ ಜಮಾತ್ ವಿಶ್ವದಲ್ಲೇ ಅತೀದೊಡ್ಡ ಧರ್ಮ ಪ್ರಚಾರಕ ಸಂಸ್ಥೆಯಾಗಿ ಸದ್ದಿಲ್ಲದೆಯೇ ಬೆಳೆದುಬಿಟ್ಟಿತು. ಆದರೆ ಈ ಸಂಘಟನೆಯ ಇಮೇಜ್ ಅನ್ನು ಬಹಳ ಎಚ್ಚರಿಕೆಯಿಂದ ಕಾಪಾಡಲಾಯಿತು. ತಬ್ಲಿಘಿ ಜಮಾತ್ ಯಾವುದೇ ಕಾರಣಕ್ಕೂ ರಾಜಕೀಯ ವಿಚಾರಕ್ಕೆ ತಲೆತೂರಿಸಲೇ ಇಲ್ಲ. ತನ್ನದು ರಾಜಕೀಯರಹಿತವಾದ ಕೇವಲ ಧರ್ಮ ಪ್ರಚಾರದ ಕೆಲಸ ಅಂತ ವ್ಯವಸ್ಥಿತವಾಗಿ ರಹಸ್ಯವಾಗಿಯೇ ಪ್ರಚಾರ ಕೂಡ ಮಾಡಿಕೊಂಡಿತು. ಹಾಗಾಗಿ ಮೂಲಭೂತವಾದಿ ಇಸ್ಲಾಮಿನ ಬಗ್ಗೆ, ಅದರ ವಿವಿಧ ಸಂಘಟನೆಗಳ ಕಾರ್ಯ ಚಟುವಟಿಕೆಯ ಮೇಲೆ ಕಣ್ಣಿಡುವ ಬೇರೆ ಬೇರೆ ದೇಶಗಳ ಗುಪ್ತಚರ ಇಲಾಖೆಗಳ ತಜ್ಞರಿಗೂ ತಬ್ಲಿಘಿ ಜಮಾತ್ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡಲಾಯಿತು. ಹಾಗಾಗಿ ತಬ್ಲಿಘಿನ ಮೇಲೆ ಅದರ ಕಾರ್ಯ ಚಟುವಟಿಕೆಯ ಮೇಲೆ, ಅದು ಪ್ರಚಾರ ಮಾಡುವ ಮೂಲಭೂತವಾದಿ ಸಿದ್ಧಾಂತಗಳ ಬಗ್ಗೆ ಯಾರಿಗೂ ಸುಳಿವು ಸಿಗಲೇ ಇಲ್ಲ. ಆದರೆ ತಬ್ಲಿಘಿ ಜಮಾತ್‍ನ ವಿಶಾಲ ನೆಟ್ ವರ್ಕ್ ಅನ್ನು ಇತರ ಮೂಲಭೂತವಾದಿ ಸಂಘಟನೆಗಳು ಚೆನ್ನಾಗಿಯೇ ಬಳಸಿಕೊಂಡವು.

    ತಬ್ಲಿಘಿ ಜಮಾತ್ ನ ಪ್ರಚಾರಕರು ತಮ್ಮ ಜಾಲದಲ್ಲಿನ ಎಲ್ಲಾ ಸುನ್ನೀ ಮಸೀದಿಗಳಿಗೂ ಭೇಟಿ ನೀಡಿ ತಮ್ಮ ಮತಾಂತರ ಕಾರ್ಯಕ್ರಮವಾದ “ದಾವಾ” ಗಳಲ್ಲಿ ಅಲ್ಲಿನ ಹುಡುಗರು ಭಾಗವಹಿಸುವಂತೆ ಮಾಡುತ್ತಾರೆ. ಬಳಿಕ ನಿಧಾನವಾಗಿ ಇಸ್ಲಾಮಿನ ಉನ್ನತ ಶಿಕ್ಷಣದ ಆಮಿಷವೊಡ್ಡಿ ತಮ್ಮ ಕೇಂದ್ರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಳಿಸಿಕೊಡುತ್ತಾರೆ. ಪಾಕಿಸ್ತಾನದ ರಾಯ್‍ವಿಂಡ್‍ನಲ್ಲಿನ ತಬ್ಲಿಘಿ ಜಮಾತ್ ಕಚೇರಿಯಲ್ಲಿ ವಿದ್ಯಾರ್ಥಿಗಳ ಸಂದರ್ಶನ ನಡೆಸಿ ಸೂಕ್ತ ವಿದ್ಯಾರ್ಥಿಗಳನ್ನು ಉಗ್ರಸಂಘಟನೆಗೆ ರಿಕ್ರೂಟ್ ಮಾಡುವ ಕೆಲಸ ಎಂಭತ್ತರ ದಶಕದಲ್ಲೇ ಪ್ರಾರಂಭವಾಗಿತ್ತು. 1980 ರಲ್ಲಿ ಅಫ್ಘಾನಿಸ್ತಾನದಲ್ಲಿ ರಷ್ಯಾ ವಿರುದ್ಧ ಹೋರಾಡಲು ಪಾಕಿಸ್ತಾನದಲ್ಲಿ ಹುಟ್ಟಿಕೊಂಡ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮ್ ನಲ್ಲಿ ತಬ್ಲಿಘಿ ಜಮಾತ್ ನ ಸದಸ್ಯರ ಪಾತ್ರ ಇತ್ತು. ಆ ಬಳಿಕ ಹುಟ್ಟಿಕೊಂಡ ಹರ್ಕತ್ ಉಲ್ ಮುಜಾಹಿದೀನ್ ಉಗ್ರ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಹಲವಾರು ಮಂದಿ ತಬ್ಲಿಘಿ ನ ಸದಸ್ಯರೇ ಆಗಿದ್ದರು. 1998ರಲ್ಲಿ ಏರ್ ಇಂಡಿಯಾ ವಿಮಾನವನ್ನು ಅಪಹರಿಸಿ ಮೌಲಾನಾ ಮಸೂದ್ ಅಝರ್ ಮತ್ತವನ ಸಂಗಡಿಗರನ್ನು ಭಾರತದ ಸೆರೆಯಿಂದ ಬಿಡಿಸಿಕೊಂಡ ಪ್ರಕರಣದಲ್ಲಿ ಮತ್ತು 2002ರಲ್ಲಿ ಕರಾಚಿಯಲ್ಲಿ ಫ್ರೆಂಚ್ ಇಂಜಿನಿಯರ್ ಗಳಿದ್ದ ವಾಹನ ಸ್ಫೋಟಿಸಿದ ಪ್ರಕರಣದಲ್ಲಿ ಭಾಗಿಯಾದ ಹರ್ಕತ್ ಉಲ್ ಮುಜಾಹಿದೀನ್ ನ ಉಗ್ರರು ತಬ್ಲಿಘಿ ಜಮಾತ್ ನ ಸದಸ್ಯರೇ ಆಗಿದ್ದರು. ಸುಮಾರು ಆರು ಸಾವಿರಕ್ಕೂ ತಬ್ಲಿಘಿ ಜಮಾತ್ ಸದಸ್ಯರು ಹರ್ಕತ್ ಉಲ್ ಮುಜಾಹಿದ್ದೀನ್ ನ ಕ್ಯಾಂಪ್ ಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದರು. ಇವರೆಲ್ಲಾ ತಾಲಿಬಾನ್ ಸಂಘಟನೆ ಸೇರಿ ರಷ್ಯಾ ವಿರುದ್ಧ ಹೋರಾಡಿದ್ದರು ಮತ್ತು ರಷ್ಯಾ ಅಫ್ಘಾನಿಸ್ತಾನದಿಂದ ಕಾಲ್ತೆಗೆದ ಮೇಲೆ ಇವರ ಪೈಕಿ ಬಹುತೇಕ ಮಂದಿ ಅಲ್ ಖಾಯ್ದಾ ಸೇರಿದ್ದರು.

    1994ರಲ್ಲಿ ಪ್ಯಾರಿಸ್ ನಲ್ಲಿ ಮತ್ತು ಮೊರಾಕೊ ದಲ್ಲಿ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗವಹಿಸಿದ್ದಕ್ಕಾಗಿ ತಬ್ಲಿಘಿ ಜಮಾತ್ ನ ಸದಸ್ಯರಿಗೆ ಶಿಕ್ಷೆ ಆಗಿದೆ. ಮೊರಾಕೋದ ಮಾರಾಕೆಶ್ ನ ಅಟ್ಲಾಸ್ ಅಸ್ನಿ ಹೋಟೆಲಿನಲ್ಲಿ ಗುಂಡಿನ ದಾಳಿ ನಡೆಸಿ ಇಬ್ಬರು ಸ್ಪ್ಯಾನಿಷ್ ಯಾತ್ರಿಕರ ಸಾವಿಗೆ ಕಾರಣರಾಗಿದ್ದ ಸ್ಟೆಫಾನೀ ಐಟ್ ಇದಿರ್ ಎಂಬ ಆಲ್ಜೀರಿಯಾ ಮೂಲದ ಫ್ರೆಂಚ್ ಪ್ರಜೆ ಮತ್ತು ರೆಡೊಯೆನ್ ಹಮ್ಮದೀ ಎಂಬ ಮೊರಾಕೊ ಪ್ರಜೆಗೆ ಈ ಪ್ರಕರಣದಲ್ಲಿ ಶಿಕ್ಷೆ ಆಗಿದೆ. ಅವರಿಬ್ಬರಿಗೂ ತಬ್ಲಿಘಿ ಜಮಾತ್ ಸಂಪರ್ಕ ಇತ್ತು. ಇತ್ತೀಚೆಗೆ ಮೊರಾಕೋದ ಅತ್ ತಫ್ಕೀರ್ ವಲ್ ಹಿಜ್ರಾಹ್ ಎಂಬ ಉಗ್ರ ಸಂಘಟನೆಯ ಸದಸ್ಯ ಯೂಸೆಫ್ ಫಿಕ್ರೀ ಎಂಬಾತನಿಗೆ 2003ರಲ್ಲಿ ನಲವತ್ತಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಕ್ಯಾಸಬ್ಲ್ಯಾಂಕ ದಲ್ಲಿ ನಡೆದ ಯಹೂದಿ ಚರ್ಚ್ ಮೇಲಿನ ದಾಳಿಗೆ ಸಂಬಂಧಿಸಿ ಮರಣದಂಡನೆ ವಿಧಿಸಲಾಗಿದೆ. ಈತ ಕೂಡಾ ತಬ್ಲಿಘಿ ಜಮಾತ್ ಸದಸ್ಯ ಆಗಿದ್ದ. ಇಷ್ಟಲ್ಲದೆ ತಬ್ಲಿಘಿ ಜಮಾತ್ ಗಿರುವ ಸೌಮ್ಯ ರೂಪದ ಧರ್ಮ ಪ್ರಚಾರದ ಸಂಘಟನೆ ಎಂಬ ಹೆಸರನ್ನೇ ಬಳಸಿಕೊಂಡು ಇತರ ಹಲವು ಭಯೋತ್ಪಾದನಾ ಕೃತ್ಯಗಳಿಗೆ ಸಹಾಯ ಮಾಡಲಾಗಿದೆ. ಪ್ರವಾಸ ಮತ್ತು ಪ್ರವೇಶ ದಾಖಲಾತಿಗಳನ್ನು ಪಡೆದದ್ದು ಸಾಬೀತಾಗಿದೆ. ಮೊರಾಕೋದ ಅಲ್ ಸಲಫಿಯಾಹ್ ಅಲ್ ಜಿಹಾದಿಯಾ ಎಂಬ ಉಗ್ರ ಸಂಘಟನೆ ತನ್ನ ಕರಪತ್ರದಲ್ಲಿ ತನ್ನ ಸದಸ್ಯರಿಗೆ ತಬ್ಲೀಘಿ ಜಮಾತ್ ನ ಸದಸ್ಯರಾಗುವಂತೆ ಕೇಳಿಕೊಂಡಿತ್ತು, ಪಾಕಿಸ್ತಾನದ ಭಯೋತ್ಪಾದನಾ ವೆಬ್ ಸೈಟ್ ಒಂದು ಆದಷ್ಟು ಜನ ಯುವಕರು ತಬ್ಲಿಘಿ ಜಮಾತ್ ಗೆ ಸೇರಿಕೊಳ್ಳಿ, ಅವರ ಮತೀಯ ಶಿಕ್ಷಣ ಪಡೆದರೆ ಸುಲಭವಾಗಿ ಜಿಹಾದಿಗಳಾಗಬಹುದು ಅಂತ ಬಹಿರಂಗವಾಗಿಯೇ ಪ್ರಕಟಿಸಿತ್ತು.

    ಫಿಲಿಪೀನ್ಸ್ ನಲ್ಲಿ ತಬ್ಲಿಘಿ ಜಮಾತ್ ನ ಹನ್ನೊಂದು ಸಾವಿರ ಜನ ಸದಸ್ಯರಿದ್ದಾರೆ. ಫಿಲಿಪೀನ್ಸ್ ಸರಕಾರದ ಪ್ರಕಾರ ತಬ್ಲಿಘಿ ಜಮಾತ್ ಮೂಲಕವೇ ಉಗ್ರ ಚಟುವಟಿಕೆಗಳಿಗೆ ಸೌದಿ ಮೂಲದ ಹಣ ಪೂರೈಕೆಯಾಗುತ್ತಿದೆ. ತಬ್ಲಿಘಿಗಳು ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಆಶ್ರಯ ಕೂಡಾ ನೀಡುತ್ತಿದ್ದಾರೆ ಎಂದು ಅಲ್ಲಿನ ಸರಕಾರದ ಆರೋಪ. ಇದಲ್ಲದೆ ತಬ್ಲಿಘಿ ಜಮಾತ್ ನೇರವಾಗಿಯೇ ಉಗ್ರರನ್ನು ರಿಕ್ರೂಟ್ ಮಾಡಿಕೊಂಡು ತರಬೇತಿ ನೀಡುತ್ತಿದೆ ಎಂಬ ಆರೋಪ 1980 ದಶಕದಲ್ಲೇ ಕೇಳಿಬಂದಿತ್ತು. ಪಾಕಿಸ್ತಾನ ಮತ್ತು ಅಲ್ಜೀರಿಯಾದಿಂದ ಪ್ರತೀ ವರ್ಷವೂ ಅಂದಾಜು ಒಂಭೈನೂರು ಜನರನ್ನು ಉಗ್ರತರಬೇತಿ ಪಡೆಯಲು ಜಮಾತ್ ಸ್ಪಾನ್ಸರ್ ಮಾಡುತ್ತಿದೆ ಎಂಬ ಆರೋಪದ ಜೊತೆಗೆಯೇ ತಬ್ಲಿಘಿ ಜಮಾತ್ ತನ್ನ ದೇಶದ 400 ಕ್ಕೂ ಹೆಚ್ಚು ಯುವಕರನ್ನು ಉಗ್ರತರಬೇತಿಗೆ ಕಳಿಸಿತ್ತು ಅಂತ ಉಜ್ಬೇಕಿಸ್ತಾನ್ ಆಪಾದನೆ ಮಾಡಿತ್ತು.

    ಅಮೆರಿಕಾದಲ್ಲಿ ತಬ್ಲಿಘಿ ಜಮಾತ್ ಬಹಳ ದೊಡ್ಡ ಜಾಲವನ್ನೇ ಹೊಂದಿದೆ. ಅಲ್ಲಿನ ವಲಸಿಗ ಮುಸ್ಲಿಮರೇ ಜಮಾತ್ ಗೆ ದೊಡ್ಡ ಆಸ್ತಿ. ಅಮೆರಿಕಾದ ಮೊತ್ತ ಮೊದಲ ತಾಲಿಬಾನಿ ಜಾನ್ ವಾಕರ್ ಲಿಂದ್ ಅಲಯಾಸ್ ಸುಲೇಮಾನ್ ಅಲ್ ಫಾರಿಸ್ 2001ರಲ್ಲಿ ಅಮೆರಿಕಾ ಪಡೆಗಳಿಗೆ ಅಫ್ಘಾಅನಿಸ್ತಾನದಲ್ಲಿ ಸೆರೆಸಿಕ್ಕಿದ. ಅವನ ಕತೆ ರೋಚಕ. ಕ್ಯಾಲಿಫೋರ್ನಿಯಾದಲ್ಲಿದ್ದ ಆತನನ್ನು ಹದಿನಾರನೆಯ ವಯಸ್ಸಿಗೇ ಇಸ್ಲಾಮಿಗೆ ಮತಾಂತರಗೊಳಿಸಲಾಗಿತ್ತು. ನಂತರ ಆತ ಯೆಮೆನ್ ಗೆ ಅರಾಬಿಕ್ ಕಲಿಯಲೆಂದು ತೆರಳಿದ. ಅಲ್ಲಿಂದ ಬಳಿಕ ಆತ ಪಾಕಿಸ್ತಾನಕ್ಕೆ ತೆರಳಿ ಹರ್ಕತ್ ಉಲ್ ಮುಜಾಹಿದೀನ್ ಬಳಿ ತರಬೇತಿ ಪಡೆದು ಬಳಿಕ ಅಫ್ಘಾನಿಸ್ತಾನಕ್ಕೆ ತೆರಳಿ ತಾಲಿಬಾನಿಗೆ ಸೇರಿದ.ಆತನನ್ನು ಮತಾಂತರಗೊಳಿಸಿದ್ದು, ಉಗ್ರತರಬೇತಿ ನೀಡಿಸಿದ್ದೆಲ್ಲಾ ತಬ್ಲಿಘಿ ಜಮಾತ್ ನವರೇ. ನ್ಯೂಯಾರ್ಕ್ ನ ಲಾಖವಾನಾ ಎಂಬ ಪಟ್ಟಣದಲ್ಲಿದ್ದ ಆರು ಯೆಮೆನಿ ಯುವಕರು ಅಲ್ ಖಾಯ್ದಾಗೆ ಸಹಾಯ ಮಾಡಿದ್ದರಿಂದ ಸಿಕ್ಕಿಬಿದ್ದು ಜೈಲುಪಾಲಾದರು. ಅವರು ಕೂಡಾ ತಬ್ಲಿಘಿ ಜಮಾತ್ ನ ಸಂಪರ್ಕ ಹೊಂದಿದ್ದರು. ರಿಚರ್ಡ್ ಕಾಲ್ವಿನ್ ರೀಡ್ ಎಂಬಾತ ಸಣ್ಣಪುಟ್ಟ ಕಳ್ಳತನಮಾಡಿ ಜೈಲುಪಾಲಾಗಿದ್ದ. ಜೈಲಿನಲ್ಲೇ ಆತನನ್ನು ಇಸ್ಲಾಮಿಗೆ ಮತಾಂತರ ಮಾಡಲಾಯಿತು. ಮುಂದೆ ಆತ ಪಾಕಿಸ್ತಾನದಲ್ಲಿ ಉಗ್ರತರಬೇತಿ ಪಡೆದು ಅಲ್ ಖಾಯ್ದಾ ಸೇರಿಕೊಂಡ. 2001ರಲ್ಲಿ ಪ್ಯಾರಿಸ್ಸಿನಿಂದ ಮಿಯಾಮಿಗೆ ಹೋಗುವ ಅಮೆರಿಕಾದ ವಿಮಾನ ಹತ್ತಿಕೊಂಡ. ತಾನು ಧರಿಸಿದ ಶೂವಿನಲ್ಲೇ ಬಾಂಬ್ ಹುದುಗಿಸಿ ವಿಮಾನವನ್ನೇ ಸ್ಫೋಟಿಸಲು ಹೊರಟ. ಆದರೆ ಸ್ಫೋಟ ವಿಫಲವಾಗಿ ಸೆರೆಯಾದ. ಈತನಿಗೂ ತಬ್ಲಿಘಿ ಜಮಾತ್ ಸಂಪರ್ಕ ಇತ್ತು. ಜೋಸ್ ಪಾಡಿಲ್ಲಾ ಅಲಯಾಸ್ ಅಬ್ದುಲ್ಲಾಹ್ ಅಲ್ ಮುಹಾಜಿರ್ ಚಿಕಾಗೋದಲ್ಲಿ ವಿಕಿರಣ ಇರುವಂಥ ಬಾಂಬ್ ಸ್ಫೋಟಿಸುವ ಸಂಚು ಮಾಡಿದ್ದ. 2002ರಲ್ಲಿ ಆತನನ್ನು ಬಂಧಿಸಿ ಸೆರೆಮನೆಗಟ್ಟಲಾಯಿತು ಈತನಿಗೂ ತಬ್ಲಿಘಿ ಜಮಾತ್ ನ ಸಂಪರ್ಕ ಇತ್ತು. ಲೈಮನ್ ಫಾರಿಸ್ ಅಲಯಾಸ್ ಮೊಹಮ್ಮದ್ ರಾವೂಫ್ ಮೂಲತಃ ಪಾಕಿಸ್ತಾನದಾತ. ಈತ ಬ್ರೂಕ್ಲಿನ್ ಸೇತುವೆಯನ್ನು ಸ್ಫೋಟಿಸುವ ಅಲ್ ಖೈದಾ ಯೋಜನೆಗೆ ಸಹಾಯ ಮಾಡಿ ಸಿಕ್ಕಿ ಬಿದ್ದು ಜೈಲುಪಾಲಾದ. ಆತನಿಗೂ ತಬ್ಲಿಘಿ ಜಮಾತ್ ನದ್ದೇ ಸಂಪರ್ಕ. ಹೀಗೆ ಅಮೆರಿಕಾದ ತುಂಬಾ ತನ್ನ ಜಾಲ ಹರಡಿಕೊಂಡಿರುವ ತಬ್ಲಿಘಿ ಜಮಾತ್ ಮತಪ್ರಚಾರದ ಹೆಸರಿನಲ್ಲಿ ಬೋಧಿಸುವುದು ಮತಾಂಧತೆಯನ್ನೇ. ಅಲ್ ಖಾಯ್ದಾ ದ ಕ್ರೇಜ್ ತುತ್ತತುದಿ ತಲುಪಿದ್ದ 1990ರ ಸಮಯದಲ್ಲಿ ಒಸಾಮಾ ಬಿನ್ ಲಾಡೆನ್ ಆಕರ್ಷಣೆಗೆ ಒಳಗಾಗಿ ಅಮೇರಿಕ ಒಂದರಿಂದಲೇ ಸುಮಾರು ಒಂದರಿಂದ ಎರಡು ಸಾವಿರ ಯುವಕ ಯುವತಿಯರು ದೇಶ ತೊರೆದು ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದು ಅಫ್ಘಾನಿಸ್ತಾನಕ್ಕೆ ಹೋಗಿ ಅಲ್ ಖೈದಾ ಸೇರಿಕೊಂಡಿದ್ದರು. ಇವರೆಲ್ಲರ ಹಿಂದೆಯೂ ಢಾಳಾಗಿ ಕಾಣಿಸುತ್ತಾ ಇದ್ದದ್ದು ತಬ್ಲಿಘಿ ಜಮಾತ್ ನ ನೆರಳೇ. ಇದೆಲ್ಲದ್ದಕ್ಕೆ ಪೂರಕವಾಗಿ ಸ್ವತಃ ಪಾಕಿಸ್ತಾನದ ಗುಪ್ತಚರ ಇಲಾಖೆಯೇ ನೀಡಿದ್ದ ರಹಸ್ಯ ವರದಿಯಲ್ಲಿ 1989ರಿಂದ ಅಮೆರಿಕಾದ ಸುಮಾರು 400 ಕ್ಕೂ ಮಿಕ್ಕಿದ ತಬ್ಲೀಘಿ ಜಮಾತ್ ಸದಸ್ಯರು ಪಾಕಿಸ್ತಾನಕ್ಕೆ ಬಂದು ಉಗ್ರತರಬೇತಿ ಪಡೆದ ಬಗ್ಗೆ ವಿವರಣೆಯಿದೆ.

    ಕಳೆದೊಂದು ದಶಕದಿಂದ ನ್ಯೂ ಯಾರ್ಕ್ ನ ಕ್ವೀನ್ಸ್ ನಲ್ಲಿರುವ ಅಲ್ ಫಲಾಹ್ ಮಸೀದಿಯೇ ತಬ್ಲೀಘಿ ಜಮಾತ್ ನ ಹೆಡ್ ಕ್ವಾರ್ಟರ್ಸ್. ಸೌದಿಯಿಂದ ನಿಯಂತ್ರಿತವಾಗಿರುವ ವಲ್ರ್ಡ್ ಮುಸ್ಲಿಂ ಲೀಗ್, ವಲ್ರ್ಡ್ ಅಸ್ಸೆಂಬ್ಲೀ ಆಫ್ ಮುಸ್ಲಿಂ ಯೂಥ್, ಹರಮೈನ್ ಫೌಂಡೇಶನ್, ಇಂಟರ್ ನ್ಯಾಷನಲ್ ಇಸ್ಲಾಮಿಕ್ ರಿಲೀಫ್ ಫಂಡ್ ಮುಂತಾದ ಸಂಘಟನೆಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಹರಿದು ಬರುತ್ತಿದ್ದು ತಬ್ಲಿಘಿ ಜಮಾತ್ ತನ್ನ ಮತಾಂತರದ ಚಟುವಟಿಕೆಗಳನ್ನು ಬಹಳ ದೊಡ್ಡಮಟ್ಟದಲ್ಲಿ ಮಾಡುತ್ತಿದೆ. ಅಮೆರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಆಫ್ರಿಕಾ ಮೂಲದ ಕರಿಯ ಅಮೆರಿಕನ್ನರನ್ನು ತಬ್ಲಿಘಿ ಜಮಾತ್ ವ್ಯವಸ್ಥಿತವಾಗಿ ಟಾರ್ಗೆಟ್ ಮಾಡುತ್ತಿದೆ. ಅಮೆರಿಕಾದ ಕರಿಯ ಸಮುದಾಯವನ್ನು ತನ್ನತ್ತ ಸೆಳೆದುಕೊಂಡು ಬಿಟ್ಟರೆ ಆಗ ಪೂರ್ತಿ ಅಮೆರಿಕಾದ ಅಧಿಕಾರದ ಚುಕ್ಕಾಣಿ ಹಿಡಿಯುವ, ಆ ಮೂಲಕ ಅಮೆರಿಕಾವನ್ನೇ ಇಸ್ಲಾಮಿಕ್ ರಾಷ್ಟ್ರ ಮಾಡುವ ಭಾರೀ ಯೋಜನೆಯನ್ನೇ ಹಾಕಿಕೊಳ್ಳಲಾಗಿದೆ. ಇವತ್ತು ಅಮೆರಿಕಾದ ಮುಸ್ಲಿಮರ ಪೈಕಿ ಶೇಕಡಾ 30 ರಿಂದ 40 ಶೇಕಡಾ ಮುಸ್ಲಿಮರು ಕರಿಯರೇ. ಅಮೆರಿಕಾದ ಜೈಲುಗಳನ್ನೇ ತಬ್ಲಿಘಿ ಜಮಾತ್ ಸಂಸ್ಥೆ ಗುರಿಯಾಗಿಸಿಕೊಂಡಿದೆ. ಜೈಲುಗಳಲ್ಲಿರುವ ಕರಿಯ ಖೈದಿಗಳನ್ನು ಮನವೊಲಿಸಿ ಇಸ್ಲಾಮಿಗೆ ಮತಾಂತರಿಸುವ ಕೆಲಸ ಸದ್ದಿಲ್ಲದೆಯೇ ನಡೀತಿದೆ. ಈಗ ಪ್ರತೀ ವರ್ಷವೂ ಅಂದಾಜು ಮೂವತ್ತು ಸಾವಿರ ಕರಿಯ ಖೈದಿಗಳು ಇಸ್ಲಾಮಿಗೆ ಮತಾಂತರವಾಗುತ್ತಿದ್ದಾರೆ. ಹೀಗೆ ಅಮೆರಿಕಾದ ಮೇಲೆಯೇ ಒಂದು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಮತ್ತು ಈ ಭಾರೀ ಷಡ್ಯಂತ್ರದ ಹಿಂದೆ ತಬ್ಲಿಘಿ ಜಮಾತ್ ಇದೆ.

    ಭಾರತದಲ್ಲಿ ಮೂಲವನ್ನು ಹೊಂದಿರುವ ತಬ್ಲಿಘಿ ಜಮಾತ್ ಇವತ್ತು ಪಾಕಿಸ್ತಾನದಲ್ಲಿ, ಬಾಂಗ್ಲಾದೇಶದಲ್ಲಿ ಮಲೇಷ್ಯಾದಲ್ಲಿ, ಇಂಡೋನೇಷ್ಯಾದಲ್ಲಿ, ಫಿಲಿಪೀನ್ಸ್ ನಲ್ಲಿ ಇಂಗ್ಲೆಂಡಿನಲ್ಲಿ, ಯುರೋಪಿನಲ್ಲಿ, ಅಮೆರಿಕಾ ಖಂಡದಲ್ಲಿ ಹಿಂದಿನ ಸೋವಿಯತ್ ರಷ್ಯಾ ದ ಹಲವಾರು ದೇಶಗಳಲ್ಲಿ, ಹೀಗೆ ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ಹಬ್ಬಿ ನಿಂತಿದೆ.

    ತಬ್ಲಿಘಿ ಜಮಾತ್ ಸಂಘಟನೆ ಸಂಪೂರ್ಣ ಧಾರ್ಮಿಕ ಸಂಘಟನೆ ಮತ್ತು ಸಂಪೂರ್ಣ ರಾಜಕೀಯೇತರ ಸಂಘಟನೆ ಅಂತಲೇ ಹೇಳಲಾಗುತ್ತಿದೆ. ಆದರೆ ಪಾಕಿಸ್ತಾನದಲ್ಲಿ ತಬ್ಲಿಘಿ ಜಮಾತ್ ಗೆ ಅಲ್ಲಿನ ರಾಜಕೀಯ ಪಕ್ಷಗಳು, ಅಲ್ಲಿನ ಮಂತ್ರಿಗಳು, ಅಲ್ಲಿನ ಸರಕಾರಗಳು ಸಂಪೂರ್ಣ ಬೆಂಬಲ ನೀಡಿವೆ ಮತ್ತು ಮೂಲಭೂತವಾದೀ ಇಸ್ಲಾಮನ್ನು ಪ್ರಚುರ ಪಡಿಸಲು ಯಥೇಚ್ಛ ಹಣಕಾಸಿನ ಮತ್ತು ಆಡಳಿತಾತ್ಮಕ ನೆರವು ನೀಡಿದೆ. ಪಾಕಿಸ್ತಾನವನ್ನು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವನ್ನಾಗಿಸಿದ್ದ ಜಿಯಾ ಉಲ್ ಹಕ್ ತಬ್ಲಿಘಿ ಜಮಾತ್ ಗೆ ಮತಪ್ರಚಾರಕ್ಕೆ ಬೇಕಾದ ಎಲ್ಲ ನೆರವು ಸೌಲಭ್ಯಗಳನ್ನು ಒದಗಿಸಿದ್ದ. ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ನ ಅಪ್ಪ ಮುಹಮ್ಮದ್ ಷರೀಫ್ ತಬ್ಲಿಘಿ ಜಮಾತ್ ಗೆ ದೊಡ್ಡ ಫೈನಾನ್ಷಿಯರ್ ಆಗಿದ್ದರು. ಆತನ ಮಗ ಪ್ರಧಾನಿ ಆದ ಮೇಲೆ ಜಮಾತ್ ಸದಸ್ಯರಿಗೆ ಪಾಕಿಸ್ತಾನ ಸರಕಾರದ ಉನ್ನತ ಹುದ್ದೆಗಳು ಲಭಿಸಿದ್ದವು ಪಾಕಿಸ್ತಾನದ ಒಂಭತ್ತನೇ ರಾಷ್ಟ್ರಪತಿಯಾಗಿದ್ದ ಮುಹಮ್ಮದ್ ರಫೀಕ್ ತರಾರ್ ಮತ್ತು ಐ ಎಸ್ ಐ ಮುಖ್ಯಸ್ಥ ಜಾವೇದ್ ನಾಸಿರ್ ತಬ್ಲಿಘಿ ಜಮಾತ್ ನ ಕ್ಯಾಂಡಿಡೇಟುಗಳಾಗಿದ್ದರು. ಬೆನಜಿರ್ ಭುಟ್ಟೋ ಸರಕಾರವನ್ನು ಕಿತ್ತೊಗೆಯುವ ಸಂಚಿನಲ್ಲೂ ತಬ್ಲಿಘಿ ಜಮಾತ್ ಪಾತ್ರ ಇತ್ತು.

    ಈಗ ಇದೆ ತಬ್ಲಿಘಿ ಜಮಾತ್ ಭಾರತಕ್ಕೇ ಗಂಡಾಂತರ ಉಂಟುಮಾಡುವ ಭಾರೀ ಸಂಚು ನಡೆಸಿದ ಆರೋಪ ಎದುರಿಸುತ್ತಿದೆ. ಕೊರೋನಾ ವೈರಸ್ ಭಯಾನಕ ಸಾಂಕ್ರಾಮಿಕವಾಗಿ ಹರಡುತ್ತಿರುವ ಹೊತ್ತಿನಲ್ಲೇ ದೆಹಲಿಯ ನಿಜಾಮುದ್ದೀನ್ ನ ತಮ್ಮ ಹೆಡ್ ಕ್ವಾರ್ಟರ್ಸ್ ನಲ್ಲಿ ಸಾವಿರಾರು ಮತಪ್ರಚಾರಕರನ್ನು ಸೇರಿಸಿಕೊಂಡು ಸೋಂಕನ್ನು ದೇಶಾದಾದ್ಯಂತ ಹರಡುವ ಒಂದು ವಿಕೃತ ಸಂಚು ನಡೆಸಲಾಯಿತೇ? ಮೇಲ್ನೋಟಕ್ಕೆ ಸಂಚು ನಿಜ ಅಂತಲೇ ಅನ್ನಿಸುತ್ತದೆ. ಯಾಕೆಂದರೆ ಈ ಸಭೆಯಲ್ಲಿ ಹಲವಾರು ವಿದೇಶೀ ಮತಪ್ರಚಾರಕರಿದ್ದರು. ಅವರಿಗಿದ್ದ ವೈರಸ್ಸಿನ ಸೋಂಕು ಇತರರಿಗೂ ಹರಡಿದ್ದು, ಹಾಗೆ ಸೋಂಕಿತರಾದ ತಬ್ಲೀಘಿ ಜಮಾತ್ ಸದಸ್ಯರು ಎಲ್ಲೆಂದರಲ್ಲಿ ದೇಶಪೂರ್ತಿ ಓಡಾಡಿದ್ದಾರೆ ತಮ್ಮಲ್ಲಿರುವ ಸೋಂಕನ್ನು ಎಲ್ಲೆಲ್ಲಿಗೋ ಹರಡಿಬಿಟ್ಟಿದ್ದಾರೆ. ಆ ಮೂಲಕ ಭಾರತ ಸರಕಾರ ದೇಶವನ್ನೇ ಸಂಪೂರ್ಣ ಲಾಕ್ ಡೌನ್ ಮಾಡಿ ವೈರಾಣುವಿನ ಹರಡುವಿಕೆಗೆ ಕಡಿವಾಣ ಹಾಕಲು ಮಾಡಿದ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.

    ಅಷ್ಟೇ ಅಲ್ಲ, ತಬ್ಲಿಘಿ ಜಮಾತ್ ನ ಅಧ್ಯಕ್ಷನನ್ನು ಸೇರಿಸಿ ಅದೆಷ್ಟೋ ಮಂದಿ ತಲೆತಪ್ಪಿಸಿ ಎಲ್ಲೆಲ್ಲೋ ಮಸೀದಿಗಳಲ್ಲಿ ಅವಿತು ಕುಳಿತಿದ್ದಾರೆ. ಎಷ್ಟೇ ವಿನಂತಿ ಮಾಡಿಕೊಂಡರೂ ಇವರ್ಯಾರೂ ಕೊರೋನಾ ವೈರಸ್ ತಪಾಸಣೆಗೆ ಒಪ್ಪುತ್ತಿಲ್ಲ ಅದಕ್ಕಿಂತಲೂ ಹೀನವೆಂದರೆ ಈಗಾಗಲೇ ಕೊರೋನಾಗೆ ತುತ್ತಾಗಿರುವ ತಬ್ಲಿಘಿ ಜಮಾತ್ ಸದಸ್ಯರು ಆಸ್ಪತ್ರೆಗಳಲ್ಲಿ ದುರ್ವರ್ತನೆ ತೋರುತ್ತಿದ್ದಾರೆ, ವೈದ್ಯರ ಮೇಲೆ ದಾದಿಯರ ಮೇಲೆ ಉಗುಳುತ್ತಿದ್ದಾರೆ, ನಗ್ನವಾಗಿ ಓಡಾಡುತ್ತ ಮುಜುಗರ ಸೃಷ್ಟಿಸುತ್ತಿದ್ದಾರೆ. ಚಿಕಿತ್ಸೆಗೆ ಸಹಕಾರ ನೀಡುತ್ತಿಲ್ಲ. ತಮಗೆ ಯಾವುದೇ ವೈರಸ್ ಸೋಂಕೂ ಇಲ್ಲವೆಂದೇ ಹಠಹಿಡಿಯುತ್ತಿದ್ದಾರೆ. ಇದೆಲ್ಲವೂ ಒಂದು ವ್ಯವಸ್ಥಿತ ಸಂಚು ಅಂತಲೇ ಅನ್ನಿಸತೊಡಗಿದೆ.

    ಇವತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ತುಂಬಾ, ದೇಶದ ಉದ್ದಗಲಕ್ಕೂ ಸುಮಾರು ಹದಿನೈದು ಸಾವಿರ ತಬ್ಲೀಘಿ ಜಮಾತ್ ಮತಪ್ರಚಾರಕರು ಕಾರ್ಯಾಚರಿಸುತ್ತಿದ್ದಾರೆ. ಅದೇ ಹೊತ್ತಿಗೆ ಕಾಕತಾಳೀಯವಾಗಿ ಕೊರೋನಾ ವೈರಸ್ ಸೋಂಕಿನ ಪ್ರಮಾಣ ತೀವ್ರವಾಗಿ ಹೆಚ್ಚಿ ಅಮೆರಿಕಾ ಈಗ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸೋಂಕಿತರನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ. ಹಾಗಾಗಿ ಭಾರತದಲ್ಲಿ ಮಾಡಿದ ರೀತಿಯ ಸಂಚನ್ನೇ ತಬ್ಲಿಘಿ ಜಮಾತ್ ಅಮೆರಿಕಾದಲ್ಲಿಯೂ ಮಾಡಿತೇ? ಜಗತ್ತನ್ನೇ ಇಸ್ಲಾಮೀಕರಣಗೊಳಿಸುವ ಬೃಹತ್ ಷಡ್ಯಂತ್ರದ ಭಾಗವಾಗಿಯೇ ಇದೆಲ್ಲವೂ ನಡೆಯುತ್ತಿದೆಯೇ? ಇಸ್ಲಾಮಿಕ್ ಮೂಲಭೂತವಾದಿಗಳ ಕೈಯಲ್ಲಿ ಕೊರೋನಾದಂಥಾ ಅಪಾಯಕಾರೀ ವೈರಾಣು ಕೂಡಾ ಒಂದು ಅಸ್ತ್ರವಾಯಿತೇ?

    ಕೊರೋನಾ ವೈರಸ್ಸನ್ನು ಮತ್ತು ಅದು ಮಾಡಬಹುದಾದ ಅಪಾಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಜ್ಞಾನಿಗಳು ಮತ್ತು ವೈದ್ಯರು ವಿಫಲರಾದ ರೀತಿಯಲ್ಲೇ ಜಗತ್ತಿನ ಘಟಾನುಘಟಿ ರಾಜಕಾರಣಿಗಳು, ಮುತ್ಸದ್ಧಿಗಳು, ಇಸ್ಲಾಮಿನ ಅಪಾಯವನ್ನು ಅಂದಾಜಿಸುವಲ್ಲಿ ಸಂಪೂರ್ಣ ವಿಫಲರಾದರೇ? ಮುಂದುವರಿಯುವುದು…. ಎಂದು ಬರೆದು ಅನಂತ್‍ಕುಮಾರ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ತಬ್ಲಿಘಿ ಜಮಾತ್‍ಗೆ ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ಭಾಗಿ – ಸಿಎಂ ಮಾಹಿತಿ

    ತಬ್ಲಿಘಿ ಜಮಾತ್‍ಗೆ ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ಭಾಗಿ – ಸಿಎಂ ಮಾಹಿತಿ

    ಬೆಂಗಳೂರು: ದೆಹಲಿಯ ನಿಜಾಮುದ್ದೀನ್‍ನಲ್ಲಿ ತಬ್ಲಿಘಿ ಜಮಾತ್‍ನ ಪ್ರಾರ್ಥನಾ ಸಭೆಯಲ್ಲಿ ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ತೆರಳಿದ್ದರು ಎಂದು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

    ಸಿಎಂ ಯಡಿಯೂರಪ್ಪ ಅವರು ದೆಹಲಿ ಜಮಾತ್ ಕಾರ್ಯಕ್ರಮಕ್ಕೆ ಹೋದವರ ಕುರಿತು ಟ್ಟಿಟ್ಟರಿನಲ್ಲಿ ಮಾಹಿತಿ ನೀಡಿದ್ದಾರೆ. “ದೆಹಲಿಯ ನಿಜಾಮುದ್ದೀನ್‍ನ ತಬ್ಲಿಘಿ ಜಮಾತ್‍ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದವರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತು ಸಹ ಮಾಹಿತಿ ಸಂಗ್ರಹಿಸಲಾಗಿದೆ” ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಎಷ್ಟು ಮಂದಿ ಜಮಾತ್‍ನಲ್ಲಿ ಭಾಗಿಯಾಗಿದ್ದರು, ಯಾವ ಜಿಲ್ಲೆಯಿಂದ ಎಷ್ಟು ಮಂದಿ ಹೋಗಿದ್ದರು ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ದೆಹಲಿಯ ನಿಜಾಮುದ್ದೀನ್‍ನಲ್ಲಿ ತಬ್ಲಿಘಿ ಜಮಾತ್‍ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ತೆರಳಿದ್ದು, ಅವರೆಲ್ಲರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅವರಲ್ಲಿ ಬೆಂಗಳೂರಿನಲ್ಲಿ 276 ಹಾಗೂ ಇತರ ಜಿಲ್ಲೆಗಳಲ್ಲಿ 482 ಕಾರ್ಯಕರ್ತರನ್ನು ಗುರುತಿಸಿ, ಕ್ವಾರಂಟೈನ್‍ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತು ಸಹ ಮಾಹಿತಿ ಸಂಗ್ರಹಿಸಿ, ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಭಾರತೀಯರನ್ನು ಹೊರತುಪಡಿಸಿ ಬೇರೆ ಬೇರೆ ರಾಷ್ಟ್ರೀಯತೆಯ 57 ತಬ್ಲಿಘಿ ಜಮಾತ್ ಕಾರ್ಯಕರ್ತರನ್ನು ಕರ್ನಾಟಕದ ಬೀದರಿನಲ್ಲಿ 8 ಜನರು, ಬೆಳಗಾವಿಯಲ್ಲಿ 10 ಮಂದಿ, ತುಮಕೂರಿನಲ್ಲಿ 8 ಜನರು ಹಾಗೂ ಬೆಂಗಳೂರಿನಲ್ಲಿ 31 ಮಂದಿಯನ್ನ ಗುರುತಿಸಿ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದರು.

    ಅಲ್ಲದೇ ಭಾರತಕ್ಕೆ ಬರಲು ನೀಡುವ ವೀಸಾ ಪ್ರಕ್ರಿಯೆಯಲ್ಲಿ ಇವರನ್ನು ಕಪ್ಪುಪಟ್ಟಿಗೆ ಸೇರಿಸುವ ಸೂಚನೆಯೊಂದಿಗೆ 57 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅವರ ಪೈಕಿ 20 ಇಂಡೋನೇಷ್ಯಾ, 1 ಇಂಗ್ಲೆಂಡ್, 4 ದಕ್ಷಿಣ ಆಫ್ರಿಕಾ, 3 ಗ್ಯಾಂಬಿಯಾ, 19 ಕಿರ್ಗಿಸ್ತಾನ್, 1 ಯುಎಸ್‍ಎ, 1 ಫ್ರಾನ್ಸ್, 1 ಕೀನ್ಯಾ ಮತ್ತು ಏಳು ಮಂದಿ ಬಾಂಗ್ಲಾದೇಶದವರಾಗಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

    ನಿರ್ಣಾಯಕ ಅವಧಿಯಲ್ಲಿ ಹಾಟ್ ಸ್ಪಾಟ್‍ನ ಸಮೀಪದಲ್ಲಿದ್ದ 276 ತಬ್ಲಿಘಿ ಜಮಾತ್ ಕಾರ್ಯಕರ್ತರನ್ನು ಬೆಂಗಳೂರಿನಲ್ಲಿ ಗುರುತಿಸಲಾಗಿದ್ದು, ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇದೇ ರೀತಿಯ ಹಿನ್ನೆಲೆ ಹೊಂದಿರುವ 482 ಜಮಾತ್ ಕಾರ್ಯಕರ್ತರನ್ನು ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಗುರುತಿಸಲಾಗಿದೆ. ಆದ್ದರಿಂದ ಕರ್ನಾಟಕದಲ್ಲಿ 808 ಜಮಾತ್ ಕಾರ್ಯಕರ್ತರನ್ನು ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿರಿಸಿ ಪರೀಕ್ಷಿಸಲಾಗಿದೆ ಎಂದಿದ್ದಾರೆ.

    ಇತರ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುವ ತಬ್ಲಿಘಿ ಜಮಾತ್‍ಗೆ ಸೇರಿದ 581 ಕಾರ್ಯಕರ್ತರ ಹೆಸರುಗಳಿವೆ. ನಾವು ಸಂಬಂಧಪಟ್ಟ ಎಲ್ಲ ರಾಜ್ಯಗಳಿಗೂ ಮಾಹಿತಿ ರವಾನಿಸಿದ್ದೇವೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

  • ಜಮಾತ್‍ಗೆ ತೆರಳಿದ್ದ ವಿಷಯ ಮುಚ್ಚಿಟ್ಟ – ತಾಯಿಯ ಜೊತೆ ಮಗನೂ ಸೋಂಕಿಗೆ ಬಲಿ

    ಜಮಾತ್‍ಗೆ ತೆರಳಿದ್ದ ವಿಷಯ ಮುಚ್ಚಿಟ್ಟ – ತಾಯಿಯ ಜೊತೆ ಮಗನೂ ಸೋಂಕಿಗೆ ಬಲಿ

    – ಕುಟುಂಬದ 8 ಮಂದಿಗೆ ಕೊರೊನಾ ಸೋಂಕು

    ಭೋಪಾಲ್: ದೆಹಲಿಯ ನಿಜ್ಜಾಮುದ್ದೀನ್‍ಲ್ಲಿರುವ ತಬ್ಲಿಘಿ ಮರ್ಕಜ್ ಜಮಾತ್‍ನಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬ ತನ್ನ ಪ್ರಯಾಣ ಮಾಹಿತಿ ಗೌಪ್ಯವಾಗಿಟ್ಟು, ತನ್ನ ಜೊತೆ ಹೆತ್ತ ತಾಯಿಯನ್ನೇ ಬಲಿ ಪಡೆದುಕೊಂಡಿದ್ದಾನೆ.

    ಮಧ್ಯಪ್ರದೇಶದ ಖಾರ್ಗೊನ್‍ನಲ್ಲಿ ಈ ಘಟನೆ ನಡೆದಿದೆ. ಜಮಾತ್‍ನಲ್ಲಿ ಭಾಗಿಯಾಗಿದ್ದ ವ್ಯಕ್ತಿ ವಿಷಯ ಮುಚ್ಚಿಟ್ಟ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ತಾಯಿಯೂ ಸೇರಿ ಕುಟುಂಬದ ಎಂಟು ಮಂದಿ ಸದಸ್ಯರಿಗೆ ಈಗ ಸೋಂಕು ತಗುಲಿದೆ. ಇಡೀ ಕುಟುಂಬ ಈಗ ಕೊರೊನಾ ಸೋಂಕಿನಿಂದ ಬಳಲುತ್ತಿದೆ.

    ಕಳೆದ ತಿಂಗಳು ಖಾರ್ಗೊನ್ ಮೂಲದ ವ್ಯಕ್ತಿ ಜಮಾತ್‍ನಲ್ಲಿ ಭಾಗಿಯಾಗಿ ಸ್ವ-ಗ್ರಾಮಕ್ಕೆ ವಾಪಸ್ ಆಗಿದ್ದ. ನಿಜ್ಜಾಮುದ್ದೀನ್ ಮರ್ಕಜ್ ಪ್ರಕರಣ ಬೆಳಕಿಗೆ ಬಂದ ಬಳಿಕವೂ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಲಿಲ್ಲ. ಅಲ್ಲದೇ ಕ್ವಾರಂಟೈನ್ ನಿಯಮಗಳನ್ನು ಪಾಲಿಸದೆ ತನ್ನ ಕುಟುಂಬ ಸದಸ್ಯರ ಜೊತೆ ವಾಸಿಸುತ್ತಿದ್ದ. ಪರಿಣಾಮ ಕುಟುಂಬದ ಎಲ್ಲ ಸದಸ್ಯರಿಗೆ ಸೋಂಕು ಹರಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಈ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಯಾಂಪಲ್ ಪಡೆದು ಲ್ಯಾಬ್ ವರದಿಗಳನ್ನು ಗಮನಿಸಿದಾಗ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ವ್ಯಕ್ತಿಯ ಪ್ರಯಾಣ ಹಿನ್ನೆಲೆಯಲ್ಲಿ ತಬ್ಲಿಘಿ ಜಮಾತ್‍ನಲ್ಲಿ ಭಾಗಿಯಾಗಿದ್ದು ಸ್ಪಷ್ಟವಾಗಿತ್ತು.

    ಸೋಂಕು ಕಂಡ ಬಂದ ಬೆನ್ನಲ್ಲೇ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಿ ಟೆಸ್ಟ್ ಮಾಡಲಾಗಿತ್ತು. ಸೋಂಕಿತ ವ್ಯಕ್ತಿಯೂ ಸೇರಿ ಎಂಟು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ವೇಳೆಗೆ ಸೋಂಕಿತ ವ್ಯಕ್ತಿ ಹಾಗೂ ಅವನ ತಾಯಿ ಇಬ್ಬರು ಮಾರಕ ವೈರಸ್‍ಗೆ ಬಲಿಯಾಗಿದ್ದಾರೆ.

  • ತಬ್ಲಿಘಿಗೆ ಹೋಗಿ ಆಸ್ಪತ್ರೆಗೆ ದಾಖಲಾಗದವರು ದೇಶದ್ರೋಹಿಗಳು, ಗುಂಡಿಟ್ಟು ಕೊಲ್ಲಿ – ರೇಣುಕಾಚಾರ್ಯ

    ತಬ್ಲಿಘಿಗೆ ಹೋಗಿ ಆಸ್ಪತ್ರೆಗೆ ದಾಖಲಾಗದವರು ದೇಶದ್ರೋಹಿಗಳು, ಗುಂಡಿಟ್ಟು ಕೊಲ್ಲಿ – ರೇಣುಕಾಚಾರ್ಯ

    ದಾವಣಗೆರೆ: ವೈರಸ್ ಹರಡುತ್ತಿರುವುದು ಒಂದು ರೀತಿಯ ಭಯೋತ್ಪಾದನೆ ಇದ್ದಂತೆ, ಅವರೆಲ್ಲ ದೇಶದ್ರೋಹಿಗಳು. ಹೀಗಾಗಿ ತಬ್ಲಿಘಿ ಸಮಾವೇಶಕ್ಕೆ ಹೋಗಿ ಚಿಕಿತ್ಸೆ ಪಡೆಯವದವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

    ನಗರದಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು, ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು ಆಸ್ಪತ್ರೆಗೆ ಬನ್ನಿ ಎಂದು ಪ್ರಧಾನಿ ಮಂತ್ರಿ, ಮುಖ್ಯಮಂತ್ರಿಗಳು ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ಈ ರೀತಿಯಾಗಿ ಮಾಡಿದ್ದಾರೆ. ಲಾಕ್‍ಡೌನ್‍ನಿಂದ ಕೊರೊನಾ ವೈರಸ್ ಕಡಿಯೆಯಾಗುತ್ತಿತ್ತು. ಆದರೆ ಅಲ್ಲಿಂದ ಬಂದವರು ನೇರವಾಗಿ ವೈದ್ಯರ ಬಳಿ ಹೋಗಿದ್ದರೆ ಈ ರೀತಿಯ ಸಮಸ್ಯೆಯಾಗುತ್ತಿರಲಿಲ್ಲ. ಕೆಲವರು ಒಂದು ರೀತಿ ದೇಶದ್ರೋಹದ ಕೆಲಸವನ್ನು ಮಾಡುತ್ತಾರೆ ಎಂದು ಗರಂ ಆಗಿದ್ದಾರೆ.

    ತಬ್ಲಿಘಿ ಸಮಾವೇಶಕ್ಕೆ ಹೋಗಿ ಬಂದವರು ಚಿಕಿತ್ಸೆ ಪಡೆಯದೇ ಎಸ್ಕೇಪ್ ಆಗುತ್ತಿದ್ದರೋ ಅವರನ್ನು ಯಾರೂ ರಕ್ಷಣೆ ಮಾಡಬಾರದು. ಅವರನ್ನು ಗುಂಡಿಟ್ಟು ಕೊಲೆ ಮಾಡಿದರೂ ತಪ್ಪಿಲ್ಲ. ಎಲ್ಲಾ ಅಲ್ಪಸಂಖ್ಯಾತರು ಭಯೋತ್ಪಾದಕರಲ್ಲ, ದೇಶದ್ರೋಹಿಗಳು ಅಲ್ಲ. ಆದರೆ ಒಬ್ಬರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಆಸ್ಪತ್ರೆಗೆ ದಾಖಲಾಗದ ತಬ್ಲಿಘಿಗಳ ಮೇಲೆ ರೇಣುಕಾಚಾರ್ಯ ಹರಿಹಾಯ್ದರು.

    ಒಬ್ಬನಿಂದ ಇಡೀ ದೇಶಕ್ಕೆ ವೈರಸ್ ಹರಡುತ್ತಿದೆ. ಚೀನಾದಲ್ಲಿ ಒಬ್ಬನಿಂದ ಇಡೀ ವಿಶ್ವಕ್ಕೆ ಕೊರೊನಾ ಬಂದಿರುವುದು. ಹೀಗಾದರೂ ದೆಹಲಿಗೆ ಯಾರು ಹೋಗಿದ್ದಾರೋ ಅವರು ಚಿಕಿತ್ಸೆ ಪಡೆಯಲು ಮುಂದೆ ಬರಲಿ ಎಂದು ಮನವಿ ಮಾಡಿಕೊಂಡರು.

    ಯಾರು ಈ ವೈರಸ್ ಹರಡುತ್ತಾರೋ ಅವರನ್ನು ಭಯೋತ್ಪಾದಕರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರಿಂದ ದೇಶಕ್ಕೆ ಸುಮಾರು 36 ಸಾವಿರ ಕೋಟಿ ಆರ್ಥಿಕ ನಷ್ಟವಾಗಿದೆ. ಪ್ರಧಾನಿ, ಮುಖ್ಯಮಂತ್ರಿ ತುಂಬಾ ಕೆಲಸ ಮಾಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಎಲ್ಲರೂ ಮನೆಯಲ್ಲಿ ಇರಬೇಕು. ದೇಶ ದ್ರೋಹದ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಅವರನ್ನು ನಾನು ನೇರವಾಗಿ ದೇಶದ್ರೋಹಿಗಳು ಎಂದು ಹೇಳುತ್ತೇನೆ ಎಂದರು.

  • ಮತ್ತೆ ತಬ್ಲಿಘಿಗಳ ಹುಚ್ಚಾಟ – ಗಾಜಿಯಾಬಾದ್ ಬಳಿಕ ಕಾನ್ಪುರ, ಲಕ್ನೋದಿಂದ ದೂರು

    ಮತ್ತೆ ತಬ್ಲಿಘಿಗಳ ಹುಚ್ಚಾಟ – ಗಾಜಿಯಾಬಾದ್ ಬಳಿಕ ಕಾನ್ಪುರ, ಲಕ್ನೋದಿಂದ ದೂರು

    ಲಕ್ನೋ: ಕ್ಯಾರೆಂಟೈನ್‍ನಲ್ಲಿ ಇರಿಸಲಾಗಿರುವ ತಬ್ಲಿಘಿ ಜಮಾತ್‍ನ ಜನರು ದುರ್ವತೆ ಕೈಬಿಡುವಂತೆ ಕಾಣುತ್ತಿಲ್ಲ. ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ಅವರು ಕೆಟ್ಟದಾಗಿ ವರ್ತಿಸಿ, ಅಶ್ಲೀಲತೆ ಮೆರೆದಿದ್ದರು. ಇದರಿಂದಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತಬ್ಲಿಘಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಇಷ್ಟಾದರೂ ತಬ್ಲಿಘಿಗಳು ತಮ್ಮ ಕೆಟ್ಟ ಚಾಳಿಯನ್ನು ಮುಂದುರಿಸಿದ್ದು, ಗಾಜಿಯಾಬಾದ್ ಬೆನ್ನಲ್ಲೇ ಲಕ್ನೋ ಮತ್ತು ಕಾನ್ಪುರದಿಂದ ಇದೇ ರೀತಿಯ ದೂರುಗಳು ಬಂದಿವೆ ಎಂದು ವರದಿಯಾಗಿದೆ.

    ಕಾನ್ಪುರ:
    ಕಾನ್ಪುರದ ಲಾಲಾ ಲಜಪತ್ ರೈ ಆಸ್ಪತ್ರೆಯಲ್ಲಿ ತಬ್ಲಿಘಿ ಜಮಾತ್‍ನ 22 ಮಂದಿಯನ್ನು ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ. ಆಸ್ಪತ್ರೆಯು ಗಣೇಶ್ ಶಂಕರ್ ವಿದ್ಯಾ ವೈದ್ಯಕೀಯ ಕಾಲೇಜಿನ ಅಡಿ ಬರುತ್ತದೆ. ಕಾಲೇಜಿನ ಪ್ರಾಂಶುಪಾಲರಾದ ಆರತಿ ಲಾಲ್ ಚಂದಾನಿ, `ತಬ್ಲಿಘಿ ಜಮಾತ್‍ನಲ್ಲಿ ಭಾಗವಹಿಸಿದ್ದ 22 ಜನರನ್ನು ಕ್ಯಾರೆಂಟೈನ್ ವಾರ್ಡಿಗೆ ದಾಖಲಿಸಲಾಗಿದೆ. ಆದರೆ ಅವರು ವೈದ್ಯಕೀಯ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಬಲರಾಂಪುರ:
    ಲಕ್ನೋದ ಮಸೀದಿಯಲ್ಲಿ ಸಹರಾನ್‍ಪುರದ 12 ಜನರು ಸೋಂಕಿಗೆ ಒಳಗಾಗಿದ್ದಾರೆ. ಅವರನ್ನು ಬಲರಾಂಪುರ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇಲ್ಲಿಯೂ ಅವರು ಅಸಭ್ಯ ವರ್ತನೆ, ನೌಕರರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡುವುದು, ಸಿಬ್ಬಂದಿಯನ್ನು ನಿಂದಿಸುವುದನ್ನು ಮಾಡುತ್ತಿದ್ದಾರೆ. ಸೋಂಕಿತರು ಸಿಬ್ಬಂದಿ, ರೋಗಿಗಳನ್ನು ತಬ್ಬಿಕೊಳ್ಳುತ್ತಿದ್ದಾರೆ. ಆಹಾರ ಮತ್ತು ಕುಡಿಯುವ ನೀರನ್ನು ಮಿತಿಯಿಲ್ಲದೆ ಕೇಳುತ್ತಿದ್ದಾರೆ. ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದ್ದರಿಂದ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಜೊತೆಗೆ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಕುಶಿನಗರ:
    ಉತ್ತರ ಪ್ರದೇಶದ ಕುಶಿನಗರದ ಜಮೀನಿನಲ್ಲಿ ಅಡಗಿ ಕುಳಿತಿದ್ದ 14 ಮಂದಿ ತಬ್ಲಿಘಿಗಳನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ನೇಪಾಳಕ್ಕೆ ಪಲಾಯನ ಬೆಳೆಸುವ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರು ಎಲ್ಲರನ್ನೂ ಕ್ವಾರಂಟೈನ್‍ಗೆ ಕಳುಹಿಸಿದ್ದಾರೆ.

    ಮುಸ್ಲಿಂ ಧರ್ಮಗುರು ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹ್ಲಿ ಮತ್ತು ಶಿಯಾ ಧರ್ಮಗುರು ಮೌಲಾನಾ ಸೈಫ್ ರಿಜ್ವಿ ಅವರು ನಿಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಿ ಎಂದು ತಬ್ಲಿಘಿ ಜಮಾತ್ ಜನರಿಗೆ ಸಲಹೆ ನೀಡಿದ್ದರು. ಮೌಲಾನಾ ಖಾಲಿದ್ ರಶೀದ್ ಶನಿವಾರ ವಿಡಿಯೋ ಬಿಡುಗಡೆ ಮಾಡಿ, ‘ನಿಮ್ಮ ನಡವಳಿಕೆಯಿಂದ ಮುಸ್ಲಿಂ ಸಮುದಾಯದ ಹೆಸರನ್ನು ಕಳಂಕಿತಗೊಳಿಸಲಾಗುತ್ತಿದೆ. ಸಮಾಜದಲ್ಲಿ ಕೊರೊನಾದ ಅಪಾಯ ಹೆಚ್ಚುತ್ತಿದೆ. ಶಿಸ್ತಿನಿಂದ ಸರ್ಕಾರದ ಆದೇಶಗಳನ್ನು ಪಾಲಿಸಿ’ ಎಂದು ಕೇಳಿಕೊಂಡಿದ್ದರು.