Tag: T20 World Cup

  • ಅಂದು ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟ ಹೀರೋ, ಈಗ ನೆರೆ ಸಂತ್ರಸ್ತರ ಪಾಲಿನ ಆಪದ್ಬಾಂಧವ!

    ಅಂದು ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟ ಹೀರೋ, ಈಗ ನೆರೆ ಸಂತ್ರಸ್ತರ ಪಾಲಿನ ಆಪದ್ಬಾಂಧವ!

    ಮುಂಬೈ: ಅಂದು ಭಾರತ ಎಂ.ಎಸ್‌ ಧೋನಿ (MS Dhoni) ನಾಯಕತ್ವದಲ್ಲಿ ಟಿ20 ವಿಶ್ವಕಪ್‌ ಗೆದ್ದಾಗ ಟೀಂ ಇಂಡಿಯಾ (Team India) ಪ್ರಮುಖ‌ ರೂವಾರಿಯಾಗಿದ್ದ ವೇಗಿ ಜೋಗಿಂದರ್‌ ಶರ್ಮಾ (Joginder Sharma) ಇದೀಗ ಡಿಎಸ್‌ಪಿ ಆಗಿ ನೆರೆ ಸಂತ್ರಸ್ತರ ಆಪದ್ಬಾಂಧವನಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

    ಟಿ20 ವಿಶ್ವಕಪ್‌ ಚೊಚ್ಚಲ ಆವೃತ್ತಿಯಲ್ಲೇ (2007 T20 World Cup) ಟೀಂ ಇಂಡಿಯಾ ರೋಚಕ ಗೆಲುವು ದಾಖಲಿಸಿದ್ದನ್ನು ಪ್ರತಿಯೊಬ್ಬ ಭಾರತೀಯನೂ ಮರೆಯುವಂತಿಲ್ಲ. ಅಂದಿನ ಟೀಂ ಇಂಡಿಯಾ ನಾಯಕ ಎಂ.ಎಸ್‌ ಧೋನಿ ಅವರ ಶ್ರೇಷ್ಠ ಪಯಣದ ಆರಂಭವು ಇದಾಗಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕ್‌ ತಂಡವನ್ನ ಬಗ್ಗು ಬಡಿದು ಭಾರತ ರೋಚಕ ಜಯ ಸಾಧಿಸಿತ್ತು. ಇದನ್ನೂ ಓದಿ: Wimbledon 2023ː ಮಹಿಳಾ ಸಿಂಗಲ್ಸ್‌ ಗೆದ್ದು ಇತಿಹಾಸ ಬರೆದ ವಾಂಡ್ರೊಸೊವಾ

    20 ಓವರ್‌ಗಳಲ್ಲಿ 157 ರನ್‌ ಗಳಿಸಿದ್ದ ಭಾರತ ಪಾಕ್‌ಗೆ 158 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತ್ತು. ಡೆತ್‌ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ಪಾಕ್‌ ಗೆಲ್ಲುವ ಸನಿಹಕ್ಕೆ ಬಂದಿತ್ತು. ಕೊನೆಯ ಓವರ್‌ನಲ್ಲಿ 13 ರನ್‌ಗಳ ಅಗತ್ಯವಿದ್ದಾಗ ಜೋಗಿಂದರ್‌ ಶರ್ಮಾ ಬೌಲಿಂಗ್‌ಗೆ ಬಂದರು. ಕ್ರೀಸ್‌ನಲ್ಲಿದ್ದ ಪಾಕ್‌ ಬ್ಯಾಟ್ಸ್‌ಮ್ಯಾನ್‌ ಮಿಸ್ಬಾ ಉಲ್‌ ಹಕ್‌ ಮೊದಲ ಎಸೆತದಲ್ಲಿ 2 ರನ್‌ ತೆಗೆದುಕೊಂಡರೆ 2ನೇ ಎಸೆತವನ್ನು ಸಿಕ್ಸರ್‌ ಬಾರಿಸಿದರು. ಕೊನೆಯ 4 ಎಸೆತಗಳಲ್ಲಿ 5 ರನ್‌ ಬೇಕಿತ್ತು. ಇದರಿಂದ ಭಾರತ ಸೋಲುವುದು ಖಚಿತವೆಂದೇ ಭಾವಿಸಲಾಗಿತ್ತು. ಇದನ್ನೂ ಓದಿ: Asian Games 2023ಗೆ ಟೀಂ ಇಂಡಿಯಾ ರೆಡಿ – ರಿಂಕುಗೆ ಕೊನೆಗೂ ಸಿಕ್ತು ಚಾನ್ಸ್, ಫಸ್ಟ್ ರಿಯಾಕ್ಷನ್ ಏನು?

    ಈ ವೇಳೆ 3ನೇ ಎಸೆತವನ್ನ ಬ್ಯಾಕ್‌ ಬೌಂಡರಿಗೆ ತಳ್ಳಲು ಯತ್ನಿಸಿದಾಗ ಮಿಸ್ಬಾ ಕ್ಯಾಚ್‌ ಆಗಿ ಔಟಾದರು. ಟೀಂ ಇಂಡಿಯಾ ಜೊತೆಗೆ ಅಂದು ಇಡೀ ದೇಶವೇ ಕ್ರಿಕೆಟಿಗರನ್ನ ಕೊಂಡಾಡಿತ್ತು. ಅಂದು ಕೊನೆಯ ಓವರ್‌ ಬೌಲಿಂಗ್‌ ಮಾಡಿ ಟೀಂ ಇಂಡಿಯಾ ಪಾಲಿಗೆ ಗೆಲುವು ತಂದುಕೊಟ್ಟಿದ್ದ ಹೀರೋ ಇಂದು ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.

    ಜೋಗಿಂದರ್‌ ಶರ್ಮಾ ಇದೀಗ ಹರಿಯಾಣದಲ್ಲಿ ಡಿಎಸ್ಪಿ ಆಗಿದ್ದಾರೆ. ಇತ್ತೀಚೆಗೆ ಅಂಬಾಲಾದಲ್ಲಿ ಪ್ರವಾಹ ಸಂಭವಿಸಿದ ವೇಳೆ ಸಹಾಯಕ್ಕೆ ಧಾವಿಸಿದ್ದರು. ಈ ಕುರಿತ ಚಿತ್ರಗಳನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರವಾಹದೋಪಾದಿಯಲ್ಲಿ ಮಳೆಯಾಗುತ್ತಿದ್ದು, ಡಿಎಸ್‌ಪಿ ಆಗಿರುವ ಜೋಗಿಂದರ್‌ ಶರ್ಮಾ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

    2007ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 2008ರಲ್ಲಿ ಐಪಿಎಲ್‌ ಟೂರ್ನಿ ಆರಂಭಗೊಂಡ ನಂತರ ಭಾರತ ಐಸಿಸಿ ಟ್ರೋಫಿಗಳನ್ನ ಗೆಲ್ಲುವಲ್ಲಿ ಹಿಂದುಳಿದಿದೆ. ಕೊನೆಯದ್ದಾಗಿ ಎಂ.ಎಸ್‌ ಧೋನಿ ನಾಯಕತ್ವದಲ್ಲಿ 2011ರಲ್ಲಿ ಏಕದಿನ ವಿಶ್ವಕಪ್‌ ಹಾಗೂ 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದೇ ಭಾರತಕ್ಕೆ ಹೆಮ್ಮೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೀಪ್ತಿ ಶರ್ಮಾ ದಾಖಲೆ- ಭಾರತಕ್ಕೆ 6 ವಿಕೆಟ್‌ಗಳ ಸುಲಭ ಜಯ

    ದೀಪ್ತಿ ಶರ್ಮಾ ದಾಖಲೆ- ಭಾರತಕ್ಕೆ 6 ವಿಕೆಟ್‌ಗಳ ಸುಲಭ ಜಯ

    ಕೇಪ್‌ಟೌನ್‌: ಟಿ20 ವಿಶ್ವಕಪ್‌ (T20 Cricket) ಟೂರ್ನಿಯ ಎರಡನೇ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ (West Indies) ವಿರುದ್ಧ ಭಾರತ (Team India) 6 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.

    ಗೆಲ್ಲಲು 118 ರನ್‌ಗಳ ಗುರಿಯನ್ನು ಪಡೆದ ಭಾರತ 18.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 119 ರನ್‌ ಹೊಡೆಯುವ ಮೂಲಕ ಸತತ ಎರಡನೇ ಜಯ ಗಳಿಸಿತು.

    ವಿಕೆಟ್‌ ನಷ್ಟವಿಲ್ಲದೇ 32 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ 43 ರನ್‌ಗಳಿಸುವಷ್ಟರಲ್ಲಿ ಮೊದಲ ಮೂರು ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಮತ್ತು ರಿಚಾ ಘೋಷ್‌ (Richa Ghosh) 4ನೇ ವಿಕೆಟಿಗೆ 65 ಎಸೆತಗಳಲ್ಲಿ 72 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನದ ದಡಕ್ಕೆ ತಂದರು. ಇದನ್ನೂ ಓದಿ: WPL Auction 2023 ಹರಾಜು ನಡೆಸಿಕೊಟ್ಟ ಮಲ್ಲಿಕಾಗೆ ಬೇಷ್ ಎಂದ ಡಿಕೆ

    ಹರ್ಮನ್‌ ಪ್ರೀತ್‌ ಕೌರ್‌ 33 ರನ್‌(42 ಎಸೆತ, 3 ಬೌಂಡರಿ) ರಿಚಾ ಘೋಷ್‌ ಔಟಾಗದೇ 44 ರನ್‌(32 ಎಸೆತ, 5 ಬೌಂಡರಿ) ಹೊಡೆದರು. ಶಫಾಲಿ ವರ್ಮಾ 28 ರನ್‌, ಸ್ಮೃತಿ ಮಂಧಾನ 10 ರನ್‌ ಹೊಡೆದು ಔಟಾದರು.

    ವಿಂಡೀಸ್‌ ಪರ ಸ್ಟಾಫಾನಿ ಟೇಲರ್ 42 ರನ್‌, ಶೆಮೈನ್ ಕ್ಯಾಂಪ್ಬೆಲ್ಲೆ 30 ರನ್‌ ಹೊಡೆದು ಔಟಾದರು. ದೀಪ್ತಿ ಶರ್ಮಾ (Deepti Sharma) 3 ವಿಕೆಟ್‌ ಕಿತ್ತರೆ ರೇಣುಕಾ ಸಿಂಗ್‌ ಮತ್ತು ಪೂಜಾ ವಸ್ತ್ರಕರ್‌ ತಲಾ ಒಂದೊಂದು ವಿಕೆಟ್‌ ಪಡೆದರು.ಈ ಪಂದ್ಯದ ಮೂಲಕ ದೀಪ್ತಿ ಶರ್ಮಾ 100 ವಿಕೆಟ್‌ ಸಾಧನೆ ಮಾಡಿದರು. ಮಹಿಳೆಯರ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ ಕಿತ್ತ ಏಕೈಕ ಬೌಲರ್‌ ಎಂಂಬ ಹೆಗ್ಗಳಿಕೆಗೆ ದೀಪ್ತಿ ಶರ್ಮಾ ಪಾತ್ರರಾಗಿದ್ದಾರೆ.

    ಗ್ರೂಪ್‌ 2 ಅಂಕಪಟ್ಟಿಯಲ್ಲಿ 2 ಜಯ, 2.497 ನೆಟ್‌ ರನ್‌ ರೇಟ್‌ನೊಂದಿಗೆ 4 ಅಂಕ ಪಡೆದಿರುವ ಇಂಗ್ಲೆಂಡ್‌ ಮೊದಲ ಸ್ಥಾನದಲ್ಲಿದ್ದರೆ 2 ಜಯ, 0.590 ನೆಟ್‌ ರನ್‌ ರೇಟ್‌, 4 ಅಂಕದೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನಕ್ಕೆ 24 ಮೊಟ್ಟೆ ತಿಂತೀನಿ – ಡಯಟ್ ರಹಸ್ಯ ಬಿಚ್ಚಿಟ್ಟ ಹ್ಯಾರಿಸ್ ರೌಫ್

    ದಿನಕ್ಕೆ 24 ಮೊಟ್ಟೆ ತಿಂತೀನಿ – ಡಯಟ್ ರಹಸ್ಯ ಬಿಚ್ಚಿಟ್ಟ ಹ್ಯಾರಿಸ್ ರೌಫ್

    ಇಸ್ಲಾಮಾಬಾದ್: ಡಯಟ್ ಮಾಡಲು ನಾನು ಪ್ರತಿದಿನ 24 ಮೊಟ್ಟೆ ತಿನ್ನುತ್ತೇನೆ ಎಂದು ಪಾಕಿಸ್ತಾನ (Pakistan) ಕ್ರಿಕೆಟಿಗ ಹ್ಯಾರಿಸ್ ರೌಫ್ (Haris Rauf) ಹೇಳಿದ್ದಾರೆ.

    2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಪದಾರ್ಪಣೆ ಮಾಡಿದ 29 ವರ್ಷದ ಹ್ಯಾರಿಸ್ ರೌಫ್ 16 ಏಕದಿನ ಪಂದ್ಯಗಳಲ್ಲಿ 29 ವಿಕೆಟ್ ಹಾಗೂ 57 ಟಿ20 ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಅವರು ತಮ್ಮ ಕ್ರಿಕೆಟ್ ಜರ್ನಿ ಕುರಿತು ಖಾಸಗಿ ವಾಹಿನಿಯಲ್ಲಿ ನಡೆಯುತ್ತಿದ್ದ ಸಂದರ್ಶನದ ವೇಳೆ ತಮ್ಮ ಡಯಟ್ ರಹಸ್ಯವನ್ನ ಹೇಳಿಕೊಂಡಿದ್ದಾರೆ.

    ಮೊಟ್ಟೆ (EGG) ಮೇಲಿನ ಪ್ರೀತಿಯನ್ನು ಬಹಿರಂಗಪಡಿಸುತ್ತಾ, ದೇಹದ ತೂಕವನ್ನು ಸಮತೋಲನದಲ್ಲಿ ಹೆಚ್ಚಿಸಿಕೊಳ್ಳಲು ಆಹಾರ ಕ್ರಮ ಹೇಗಿತ್ತು ಎಂಬುದನ್ನ ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಪ್ರಿಟೋರಿಯಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

    `ನಾನು ದಿನಕ್ಕೆ ದಿನಕ್ಕೆ 24 ಮೊಟ್ಟೆಗಳನ್ನ ತಿನ್ನುತ್ತೇನೆ. ಪಾಕ್ ಕ್ರಿಕೆಟ್ ತಂಡದ ಕೋಚ್ ಅಕೀಬ್ ಜಾವೇದ್ ನನಗೆ ಡಯಟ್ ಪ್ಲಾನ್ ಹೇಳಿಕೊಟ್ಟರು. ಉಪಾಹಾರಕ್ಕೆ 8, ಮಧ್ಯಾಹ್ನ ಊಟಕ್ಕೆ 8 ಹಾಗೂ ರಾತ್ರಿಯ ಊಟಕ್ಕೆ 8 ಮೊಟ್ಟೆ ಸೇವಿಸುವಂತೆ ಪ್ಲ್ಯಾನ್ ಕೊಟ್ಟರು. ನಾನು ಮೊದಲ ಬಾರಿ ಕ್ರಿಕೆಟ್ ಅಕಾಡೆಮಿಗೆ ಹೋದಾಗ ಮೊಟ್ಟೆಯ ಕ್ರೇಟ್‌ಗಳ ರಾಶಿಯನ್ನೇ ಹಾಕಲಾಗಿತ್ತು. ಒಂದು ಕ್ಷಣ ಯಾವುದೋ ಕೋಳಿ ಫಾರ್ಮ್‌ಗೆ ತರಿಸಿದಂತೆ ಭಾಸವಾಗಿತ್ತು’ ಎಂದು ಹಾಸ್ಯ ಮಾಡಿದ್ದಾರೆ.

    ನಾನು ಮೊದಲು 72 ಕೆ.ಜಿ ಇದ್ದೆ, ಆದ್ರೆ ಅಕೀಬ್ ಭಾಯ್ ನಿನ್ನ ಎತ್ತರಕ್ಕೆ 82-83 ಕೆಜಿ ಇದ್ರೆ ಸೂಕ್ತ ಅಂತಾ ಹೇಳಿದ್ರು. ಅದರಂತೆ ಡಯಟ್ ಯೋಜನೆ ರೋಪಿಸಿಕೊಂಡೆ. ಈಗ ನಾನು 82 ಕೆ.ಜಿ ಇದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಿಸ್ಕ್ ತೆಗೆದುಕೊಳ್ಳಲು ಮುಂದಾಗದ ಬಿಸಿಸಿಐ – ಬುಮ್ರಾಗೆ ವಿಶ್ರಾಂತಿ ಮುಂದುವರಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟಿ20 ನಾಯಕತ್ವದಿಂದ ರೋಹಿತ್‌ಗೆ ಗೇಟ್‌ ಪಾಸ್‌!

    ಟಿ20 ನಾಯಕತ್ವದಿಂದ ರೋಹಿತ್‌ಗೆ ಗೇಟ್‌ ಪಾಸ್‌!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?

    ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?

    ಮುಂಬೈ: 2024ರ ಟಿ20 ವಿಶ್ವಕಪ್ (T20 WorldCup) ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ (BCCI) ಭಾರತ ತಂಡದಲ್ಲಿ (Team India) ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಅದಕ್ಕಾಗಿ ಭಾರತ ತಂಡದಲ್ಲಿ ಕನಿಷ್ಠ 6 ಅಥವಾ 7 ಹಿರಿಯ ಆಟಗಾರರಿಗೆ ಬ್ರೇಕ್ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

    ರೋಹಿತ್ ಶರ್ಮಾ (Rohit Sharma)), ವಿರಾಟ್ ಕೊಹ್ಲಿ (Virat Kohli), ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ದಿನೇಶ್ ಕಾರ್ತಿಕ್ ಹಾಗೂ ಆರ್.ಅಶ್ವಿನ್‌ಗೆ ಇನ್ನು ಮುಂದೆ ತಮಗೆ ಟಿ20 ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎನ್ನುವ ವಿಷಯವನ್ನು ಬಿಸಿಸಿಐ ಮನವರಿಕೆ ಮಾಡಿಕೊಟ್ಟಿದೆ. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ

    ಈ 6 ಆಟ ಗಾರರ ಜೊತೆಗೆ ಕೆ.ಎಲ್.ರಾಹುಲ್ ? (KL Rahul)  ಅವರನ್ನೂ ಟಿ20 ತಂಡದಿಂದ ಹೊರಗಿಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್‌ಗೆ ಇನ್ನೂ ಕೆಲ ಅವಕಾಶಗಳನ್ನು ನೀಡಲು ಬಿಸಿಸಿಐ ಚಿಂತಿಸುತ್ತಿದೆ. ಒಂದು ವೇಳೆ ಅವರು ಅವಕಾಶಗಳನ್ನು ಬಳಸಿಕೊಂಡು ಸದುಪಯೋಗ ಮಾಡಿಕೊಳ್ಳದಿದ್ದರೇ, ಟಿ20 ತಂಡದಿಂದ ಹೊರಹಾಕಕಲಾಗುವುದು ಎಂಬ ಮಾಹಿತಿ ಹೊರಹಾಕಿದೆ. ಆದರೆ ಈ ಬಗ್ಗೆ ಬಿಸಿಸಿಐ (BCCI) ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿಲ್ಲ.

    2022ರ ಟಿ20 ವಿಶ್ವಕಪ್ ಸೋಲಿನ ಬಳಿಕ ಭಾರತ ತಂಡದಲ್ಲಿ (Team India) ಹಲವು ಬದಲಾವಣೆಗಳನ್ನು ತರಲಾಗುತ್ತಿದೆ. ಈಗಾಗಲೇ ರಣಜಿಯಲ್ಲಿ ಮಿಂಚುತ್ತಿರುವ ಪ್ರಮುಖ ಆಟಗಾರರ ಮೇಲೆ ಕಣ್ಣಿಡಲಾಗಿದೆ. ಇದನ್ನೂ ಓದಿ: ದ್ವಿಶತಕ ಸಿಡಿಸಿ ಅಬ್ಬರದ ಸಂಭ್ರಮದಲ್ಲಿ ವಾರ್ನರ್ ಎಡವಟ್ಟು – ಕೈ,ಕೈ ಹಿಡಿದು ಪೆವಿಲಿಯನ್‌ಗೆ ಕರೆತಂದ ಫಿಸಿಯೋ

    ಟೀಂ ಇಂಡಿಯಾದ ಏಕದಿನ ತಂಡದ ನಾಯಕತ್ವದಲ್ಲಿ ರೋಹಿತ್ ಶರ್ಮಾ ಮುಂದುವರಿದರೆ, ಟಿ20 ತಂಡದ ನಾಯಕತ್ವ ಹಾರ್ದಿಕ್ ಪಾಂಡ್ಯ (Hardik Pandya) ಹೆಗಲಿಗೇರಿದೆ. ಆದರೆ ಭವಿಷ್ಯದ ಸ್ಟಾರ್ ಎನಿಸಿಕೊಂಡಿದ್ದ ರಿಷಭ್ ಪಂತ್ ಕಳಪೆ ಫಾರ್ಮ್‌ಗೆ ಬೆಲೆ ತೆತ್ತಿದ್ದಾರೆ. ಶ್ರೀಲಂಕಾ ಸರಣಿಯಿಂದ ಪಂತ್‌ಗೆ ಕೂಕ್ ನೀಡಲಾಗಿದೆ. ಸೂರ್ಯಕುಮಾರ್ ಯಾದವ್‌ಗೆ (Suryakumar Yadav) ಟಿ20 ತಂಡದ ಉಪನಾಯಕನ ಪಟ್ಟ ನೀಡಲಾಗಿದೆ. ಇತ್ತ ಏಕದಿನ ತಂಡದಲ್ಲಿ ಉಪನಾಯಕನಾಗಿದ್ದ ಕೆ.ಎಲ್ ರಾಹುಲ್ ಉಪನಾಯಕನ ಸ್ಥಾನ ಕಳೆದುಕೊಂಡಿದ್ದಾರೆ. ನೂತನ ಉಪನಾಯಕನ್ನಾಗಿ ಪಾಂಡ್ಯ ನೇಮಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅತ್ಯಾಚಾರ ಆರೋಪಿ ದನುಷ್ಕಗೆ ಜಾಮೀನು – 1 ಕೋಟಿ ರೂ. ಠೇವಣಿ ಇಟ್ಟು ಸಿಡ್ನಿ ಜೈಲಿನಿಂದ ಬಿಡುಗಡೆ

    ಅತ್ಯಾಚಾರ ಆರೋಪಿ ದನುಷ್ಕಗೆ ಜಾಮೀನು – 1 ಕೋಟಿ ರೂ. ಠೇವಣಿ ಇಟ್ಟು ಸಿಡ್ನಿ ಜೈಲಿನಿಂದ ಬಿಡುಗಡೆ

    ಸಿಡ್ನಿ: ಅತ್ಯಾಚಾರ ಆರೋಪದಿಂದಾಗಿ ಸಿಡ್ನಿ ಜೈಲು ಸೇರಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ (Danushka Gunathilaka)  ಅವರಿಗೆ 11 ದಿನಗಳ ಬಳಿಕ ಸಿಡ್ನಿ (Sydney)  ನ್ಯಾಯಾಲಯ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ.

    ಶ್ರೀಲಂಕಾದ ಟಿ20 ವಿಶ್ವಕಪ್ ತಂಡದಲ್ಲಿದ್ದ (T20 World Cup)  ಗುಣತಿಲಕ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ಅವರ ಬದಲಿಗೆ ಬೇರೆ ಆಟಗಾರನನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ನಂತರ ಟೀಮ್ ಮ್ಯಾನೇಜ್ ಮೆಂಟ್ ಸಲಹೆ ಮೇರೆಗೆ ಗುಣತಿಲಕ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದರು. ಈ ವೇಳೆ ದನುಷ್ಕ ಗುಣತಿಲಕ ಅವರನ್ನು ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾದ 29 ವರ್ಷದ ಮಹಿಳೆ, ಅತ್ಯಾಚಾರದ ಆರೋಪ ಹೊರಿಸಿದ್ದರು. ನಂತರ ನವೆಂಬರ್ 6 ರಂದು ಸಿಡ್ನಿಯ ಸಸೆಕ್ಸ್ ಸ್ಟ್ರೀಟ್ ಹೋಟೆಲ್‍ನಿಂದ ಪೊಲೀಸರು ಗುಣತಿಲಕರನ್ನು ಬಂಧಿಸಿದ್ದರು. ಇದನ್ನೂ ಓದಿ: ಇಂಡಿಯಾ, ನ್ಯೂಜಿಲೆಂಡ್ ಕ್ರಿಕೆಟ್ ಸರಣಿ – ಡಿ.ಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ನೇರ ಪ್ರಸಾರ

    ಬಂಧನದ ನಂತರ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಸಿಡ್ನಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಜಾಮೀನು ನಿರಾಕರಿಸಿತ್ತು. ಇದರಿಂದ ದನುಷ್ಕ ಗುಣತಿಲಕ 11 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಇಂದು ಸಿಡ್ನಿಯ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಹಕಾರದೊಂದಿಗೆ ಜಾಮೀನು ಮಂಜೂರಾಗಿದ್ದು ಸಿಡ್ನಿ ನ್ಯಾಯಾಲಯ 1 ಕೋಟಿ ರೂ. ಠೇವಣಿ ಇಟ್ಟು ಜಾಮೀನು ನೀಡಿದ್ದು, ಜೊತೆಗೆ ಟಿಂಡರ್ ಸೇರಿದಂತೆ ಯಾವುದೇ ಇತರ ಡೇಟಿಂಗ್ ಅಪ್ಲಿಕೇಶನ್‍ಗಳನ್ನು ಬಳಸದಿರುವಂತೆ ಷರತ್ತು ವಿಧಿಸಿದೆ. ಪ್ರತಿದಿನ 2 ಬಾರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಸ್‍ಪೋರ್ಟ್‍ನೊಂದಿಗೆ ಸಿಡ್ನಿ ಪೊಲೀಸ್ ಠಾಣೆಗೆ ಗುಣತಿಲಕ ಹಾಜರಾಗಬೇಕು. ಮತ್ತು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಮನೆಯಿಂದ ಹೊರ ಹೋಗದಂತೆ ನಿಷೇಧ ಹೇರಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪ – ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದನುಷ್ಕ ಅಮಾನತು

    ಜೀವಾವಧಿ ಶಿಕ್ಷೆಯ ತೂಗುಗತ್ತಿ:
    ಗುಣತಿಲಕ ಮೇಲೆ ಮಹಿಳೆ ಮಾಡಿದ್ದ ಆರೋಪವೇನಾದರೂ ಸಾಭೀತಾಗಿದ್ದರೆ, ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆ ಖಚಿತವಾಗುತ್ತಿತ್ತು. ಆದರೆ ಇದೀಗ ನ್ಯಾಯಾಲಯ ಜಾಮೀನು ನೀಡಿದೆ. ಆರೋಪ ಸಾಭೀತಾದರೆ ಮುಂದಿನ ಕ್ರಮದ ಬಗ್ಗೆ ಸಾಕಷ್ಟು ಕುತೂಹಲವಿದೆ. ಗುಣತಿಲಕರನ್ನು ಈಗಾಗಲೇ ಶ್ರೀಲಂಕಾ ಕ್ರಿಕೆಟ್‌ ಬೋರ್ಡ್‌ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ಅಮಾನತುಗೊಳಿಸಿದೆ. ಇದನ್ನೂ ಓದಿ: ರಿಟೈನ್ ಪಟ್ಟಿಯಲ್ಲಿ RCB ಗೇಮ್ ಪ್ಲಾನ್ – 10 ತಂಡಗಳ ರಿಟೈನ್-ರಿಲೀಸ್‌ ಲಿಸ್ಟ್

    Live Tv
    [brid partner=56869869 player=32851 video=960834 autoplay=true]

  • ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

    ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

    ಮೆಲ್ಬರ್ನ್‌: ಪಾಕಿಸ್ತಾನವನ್ನು (Pakistan) ಬಗ್ಗುಬಡಿದು 2022ರ ಟಿ20 ವಿಶ್ವಕಪ್ (T20 World Cup) ಮುಡಿಗೇರಿಸಿಕೊಂಡಿರುವ ಇಂಗ್ಲೆಂಡ್ (England) ತಂಡ ಸಂಭ್ರಮಾಚರಣೆ ವೇಳೆ ಆಲ್‍ರೌಂಡರ್‌ಗಳಾದ ಮೊಯಿನ್ ಅಲಿ (Moeen Ali) ಮತ್ತು ಆದಿಲ್‌ ರಶೀದ್ (Adil Rashid) ಅವರನ್ನು ನಾಯಕ ಜೋಸ್ ಬಟ್ಲರ್ (Jos Buttler) ಹೊರ ಹೋಗುವಂತೆ ಹೇಳಿದ ಪ್ರಸಂಗವೊಂದು ನಡೆದಿದೆ.

    ಪಾಕ್ ವಿರುದ್ಧ ಫೈನಲ್ ಪಂದ್ಯದಲ್ಲಿ 5 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಇಂಗ್ಲೆಂಡ್ 2ನೇ ಬಾರಿ ಟಿ20 ವಿಶ್ವಕಪ್‍ಗೆ ಮುತ್ತಿಕ್ಕಿತು. ಅಲ್ಲದೇ 12 ವರ್ಷಗಳ ಬಳಿಕ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು. ಈ ಗೆಲುವಿಗಾಗಿ ಇಂಗ್ಲೆಂಡ್ ತಂಡ ಬಹಳಷ್ಟು ಶ್ರಮಪಟ್ಟಿದೆ. ಆ ಶ್ರಮದ ಫಲವಾಗಿ ಗೆಲುವು ಇಂಗ್ಲೆಂಡ್ ತಂಡದ ಪಾಲಾಗಿದೆ. ಪ್ರತಿಯೊಬ್ಬ ಆಟಗಾರರು ಕೂಡ ಇಂಗ್ಲೆಂಡ್ ಗೆಲುವಿಗಾಗಿ ಪೂರ್ಣ ಪ್ರಮಾಣದಲ್ಲಿ ಶ್ರಮಿಸಿದ್ದರು. ಇದು ಅವರ ಸಂಭ್ರಮಾಚರಣೆ ವೇಳೆ ಕಾಣಸಿಕ್ಕಿತು. ಇದನ್ನೂ ಓದಿ: Sorry Brother ಇದೇ ಕರ್ಮ – ಅಖ್ತರ್‌ಗೆ ಡೆಡ್ಲಿ ಯಾರ್ಕರ್ ಎಸೆದ ಶಮಿ

    ಸೀಮಿತ ಓವರ್‌ಗಳ ನಾಯಕನಾಗಿದ್ದ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕ ಇಂಗ್ಲೆಂಡ್ ಬಟ್ಲರ್‌ಗೆ ನಾಯಕತ್ವದ ಪಟ್ಟ ಕಟ್ಟಿತು. ನೂತನ ನಾಯಕನೊಂದಿಗೆ ಇಂಗ್ಲೆಂಡ್ ಟಿ20 ವಿಶ್ವಕಪ್‍ಗೆ ಆಗಮಿಸಿತ್ತು. ಬಳಿಕ ಅದ್ಭುತವಾಗಿ ಆಡಿ ವಿಶ್ವಕಪ್‍ನೊಂದಿಗೆ ತೆರಳುವಂತಾಯಿತು. ಪಾಕ್ ವಿರುದ್ಧ ಗೆದ್ದ ಬಳಿಕ ಪ್ರಶಸ್ತಿ ಹಿಡಿದು ಸಂಭ್ರಮಿಸುತ್ತಿದ್ದ ವೇಳೆ ಅಲಿ ಮತ್ತು ರಶೀದ್‍ರನ್ನು ಬಟ್ಲರ್ ಹೊರ ಹೋಗುವಂತೆ ಕಳುಹಿಸಿ ಸಂಭ್ರಮಿಸಿದರು.

    ಅವರಿಬ್ಬರು ಹೊರ ಹೋಗುತ್ತಾರೆ. ಬಳಿಕ ಇಂಗ್ಲೆಂಡ್ ತಂಡ ಶಾಂಪೇನ್ ಸಂಭ್ರಮಾಚರಣೆ ಮಾಡಿತು. ಇದನ್ನು ಕಂಡ ಅಭಿಮಾನಿಗಳು ಬಟ್ಲರ್ ನಡೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಇದನ್ನೂ ಓದಿ: 2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್

    ಹೊರ ಹೋದ ಕಾರಣ:
    ಅಲಿ ಮತ್ತು ರಶೀದ್ ತಮ್ಮ ಧರ್ಮದ ಪ್ರಕಾರ ಶಾಂಪೇನ್ ಸಹಿತ ಇತರ ಮದ್ಯಗಳನ್ನು ಮುಟ್ಟುವುದಿಲ್ಲ. ಸಂಭ್ರಮಾಚರಣೆ ವೇಳೆ ಶಾಂಪೇನ್ ಚೆಲ್ಲುವ ಕಾರಣ ಬಟ್ಲರ್ ಅವರಿಬ್ಬರೊಂದಿಗೆ ಹೊರ ಹೋಗುವಂತೆ ಮನವಿಮಾಡಿಕೊಂಡಿದ್ದರು. ಬಳಿಕ ಅವರು ತಂಡದೊಂದಿಗೆ ಸೇರಿಕೊಂಡರು.

    2019ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಇಂಗ್ಲೆಂಡ್ ನಾಯಕರಾಗಿದ್ದ ಇಯಾನ್ ಮಾರ್ಗನ್ ಕೂಡ ಇದೇ ರೀತಿ ನಡೆದುಕೊಂಡಿದ್ದರು. ಇದೀಗ ಬಟ್ಲರ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ

    ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ

    ಮೆಲ್ಬರ್ನ್: ಟಿ20 ವಿಶ್ವಕಪ್‌ನ (T20 World Cup) ಸೆಮಿಫೈನಲ್ ಕದನದಲ್ಲಿ ಭಾರತ (India) ಹೀನಾಯವಾಗಿ ಸೋತು ಎರಡು ದಿನ ಕಳೆದರೂ ಅಭಿಮಾನಿಗಳಿಗೆ ಮಾತ್ರ ಸೋಲನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಬಿಸಿ-ಬಿಸಿ ಚರ್ಚೆಗಳು ನಡೆಯುತ್ತಲೇ ಇವೆ.

    ಟೀಂ ಇಂಡಿಯಾ (Team India) ಎದುರಾಳಿಗಳಿಗಳು ಭಾರತದ ಸೋಲನ್ನು ಸಂಭ್ರಮಿಸುತ್ತಿದ್ದರೆ, ತಜ್ಞರು ಇದಕ್ಕೆ ಕಾರಣಗಳನ್ನು ಹುಡುಕಿದ್ದಾರೆ. ಈ ನಡುವೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಗರು (Cricketer) ಟೀಂ ಇಂಡಿಯಾ ಸೋಲಿಗೆ ಕಾರಣಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಅದರಲ್ಲಿ ಐಪಿಎಲ್ (IPL) ಪ್ರಮುಖ ಕಾರಣ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಭಯಂಕರವಾಗಿ ಆಡಿದ್ರೂ ಭಾರತ ಸೋಲೋದಕ್ಕೆ ಅರ್ಹವಾಗಿತ್ತು- ಅಖ್ತರ್ ಟೀಕೆ

    ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ (Wasim Akram), ಶೋಯೆಬ್ ಮಲಿಕ್ (Shoaib Malik), ವಕಾರ್ ಯೂನಿಸ್ ಮೊದಲಾದವರು ಟೀಂ ಇಂಡಿಯಾ ಸೆಮಿಫೈನಲ್ ಸೋಲಿಗೆ ಕಾರಣಗಳನ್ನ ವಿಶ್ಲೇಷಣೆ ಮಾಡಿದ್ದಾರೆ. 2007ರ ಟಿ20 ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲೇ ಟೀಂ ಇಂಡಿಯಾ ಕೊನೆಯದಾಗಿ ಟಿ20 ವಿಶ್ವಕಪ್ ಗೆದ್ದಿತ್ತು. ಇದಾದ ಮರು ವರ್ಷದಲ್ಲಿ ಅಂದರೆ 2008 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾಯಿತು. ಅಂದಿನಿಂದಲೂ ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿದೆ. 2011ರಲ್ಲಿ ಮಾತ್ರ ಏಕದಿನ ವಿಶ್ವಕಪ್ ಗೆದ್ದಿತು. ಆಗ ಎಂ.ಎಸ್‌.ಧೋನಿ (MS Dhoni) ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿದ್ದರು ಎಂದು ಹೇಳಿದ್ದಾರೆ.

    ಭಾರತ ಮತ್ತು ಇತರ ತಂಡಗಳ ನಡುವೆ ದೊಡ್ಡ ವ್ಯತ್ಯಾಸವೆಂದರೆ ಅದು ಐಪಿಎಲ್ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಐಪಿಎಲ್ ಆರಂಭವಾದ ನಂತರ ಟಿಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಹೀನಾಯ ಸೋಲಿನ ಬಳಿಕ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರೋಹಿತ್‌ ಶರ್ಮಾ

    ಇದೇ ಸಂದರ್ಭದಲ್ಲಿ ಐಪಿಎಲ್ ಜೊತೆಗೆ ಹೆಚ್ಚುವರಿ ಫ್ಯಾಂಚೈಸಿ ಲೀಗ್ ಆಡುವುದು ಭಾರತಕ್ಕೆ ಸಹಾಯ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಶೋಯೆಬ್ ಮಲ್ಲಿಕ್, ಖಂಡಿತಾ ಹೌದು. ಯುವ ಆಟಗಾರರಿಗೆ ಮಾನ್ಯತೆ ಪಡೆಯಲು ಐಪಿಎಲ್ ಒಂದು ದೊಡ್ಡ ವೇದಿಕೆ. ಈ ಲೀಗ್‌ಗಳು ಆಟಗಾರರಿಗೆ ಪರಿಸ್ಥಿತಿಗಳನ್ನು ಹೆಚ್ಚು ನಿಖರವಾಗಿ ನಿರ್ಣಯಿಸಲು ಸಹಾಯ ಮಾಡುತ್ತವೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವ ವ್ಯತ್ಯಾಗಳ ಬಗ್ಗೆ ತಿಳಿಸುತ್ತದೆ. ಹೆಚ್ಚುವರಿ ಜವಾಬ್ದಾರಿಗಳು, ನಿಮ್ಮ ಪ್ರದರ್ಶನ ಹೇಗಿರಬೇಕು ಅನ್ನೋ ಮಾರ್ಕ್ ಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ವಿಶ್ವವಿಖ್ಯಾತಿ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುತ್ತಾರೆ. ಈ ಎಲ್ಲ ಪಾಠಗಳು ಐಪಿಎಲ್ ಕಲಿಸುತ್ತದೆ ಎಂದು ಮಲಿಕ್ ಸಲಹೆ ನೀಡಿದ್ದಾರೆ.

    2008ರಲ್ಲಿ ಐಪಿಎಲ್ ಆರಂಭವಾಯಿತು. ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇತ್ತೀಚಿನ ಐಪಿಎಲ್ ಆವೃತ್ತಿಗಳಲ್ಲಿ ಬಹುಪಾಲು ತಂಡಗಳಿಗೆ ಟೀಂ ಇಂಡಿಯಾ ಆಟಗಾರರೇ ನಾಯಕರಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬ್ಯಾಟಿಂಗ್‍ನಲ್ಲಿ ಅಟ್ಟರ್ ಫ್ಲಾಪ್‌ – ರೋಹಿತ್ ಪ್ರದರ್ಶನಕ್ಕೆ ಅಭಿಮಾನಿಗಳು ಗರಂ

    ಬ್ಯಾಟಿಂಗ್‍ನಲ್ಲಿ ಅಟ್ಟರ್ ಫ್ಲಾಪ್‌ – ರೋಹಿತ್ ಪ್ರದರ್ಶನಕ್ಕೆ ಅಭಿಮಾನಿಗಳು ಗರಂ

    ಮುಂಬೈ: 140 ಕೋಟಿ ಭಾರತೀಯರ ಟಿ20 ವಿಶ್ವಕಪ್ (T20 World Cup) ಗೆಲುವಿನ ಕನಸು ನಿನ್ನೆ ಭಾರತ (India), ಇಂಗ್ಲೆಂಡ್ (England) ವಿರುದ್ಧ ಸೋಲುವುದರೊಂದಿಗೆ ಕೊನೆಗೊಂಡಿದೆ. ಈ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ಪರ್ಫಾಮೆನ್ಸ್ ಕಂಡು ಅಭಿಮಾನಿಗಳು ಕಿಡಿಕಾರಿದ್ದಾರೆ.

    ಐಪಿಎಲ್‍ನ (IPL) ಯಶಸ್ವಿ ನಾಯಕ ಈ ಬಾರಿ ಐಸಿಸಿ ಟ್ರೋಫಿ ಗೆದ್ದು ಭಾರತಕ್ಕೆ ಮತ್ತೊಂದು ಟಿ20 ವಿಶ್ವಕಪ್ ತಂದುಕೊಡುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದರು. ಆದರೆ ಭಾರತ ಸೆಮಿಫೈನಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡು ಬರಿಗೈಯಲ್ಲಿ ಮರಳುವಂತಾಗಿದೆ. ಇದೀಗ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಕುರಿತಾಗಿ ಟೀಕೆಗಳು ಕೇಳಿ ಬರುತ್ತಿದೆ. ಅದರಲ್ಲೂ ನಾಯಕ ರೋಹಿತ್ ಶರ್ಮಾ ಪ್ರದರ್ಶನ ಕಂಡಿರುವ ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್ ಸೋಲಿನ ಬಳಿಕ ದ್ರಾವಿಡ್‌ಗೆ ವಿಶ್ರಾಂತಿ – ಲಕ್ಷ್ಮಣ್‌ ಕೋಚ್

    ಟೂರ್ನಿಯುದ್ದಕ್ಕೂ ಬ್ಯಾಟಿಂಗ್‍ನಲ್ಲಿ ಫ್ಲಾಪ್‌ ಶೋ ಮುಂದುವರಿಸಿದ್ದ ರೋಹಿತ್, ಸೆಮಿಫೈನಲ್ ಪಂದ್ಯದಲ್ಲಾದರೂ ಅಬ್ಬರಿಸುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಇಲ್ಲೂ ಕೂಡ ರೋಹಿತ್ ವಿಫಲರಾದರು. ಮಹತ್ವದ ಪಂದ್ಯದಲ್ಲಿ ರೋಹಿತ್ ಬ್ಯಾಟಿಂಗ್‍ನಲ್ಲಿ ಹರಿದು ಬಂದ ರನ್ 27 ಅದಕ್ಕಾಗಿ ಎದುರಿಸಿದ್ದು 28 ಎಸೆತ, ಹೊಡೆದದ್ದು 4 ಬೌಂಡರಿ ಮಾತ್ರ. ಈ ಆಮೆಗತಿಯ ಬ್ಯಾಟಿಂಗ್‍ನಿಂದಾಗಿ ಪವರ್ ಪ್ಲೇನಲ್ಲಿ ರನ್ ಬರಲಿಲ್ಲ. ಹೀಗಾಗಿ ಭಾರತಕ್ಕೆ ಹಿನ್ನಡೆಯಾಯಿತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

    ರೋಹಿತ್ ಶರ್ಮಾ ಆರಂಭಿಕರಾಗಿ ಬಂದು ಅಬ್ಬರಿಸುತ್ತಿದ್ದ ಈ ಹಿಂದಿನ ಲಯ ಕ್ಯಾಪ್ಟನ್ ಆದ ಬಳಿಕ ಕಂಡುಬರುತ್ತಿಲ್ಲ. ರನ್ ಗಳಿಸಲು ರೋಹಿತ್ ಒದ್ದಾಡುತ್ತಿದ್ದಾರೆ. ಟಿ20 ವಿಶ್ವಕಪ್‍ನಲ್ಲಿ ಒಟ್ಟು 6 ಪಂದ್ಯಗಳಿಂದ ರೋಹಿತ್ ಬ್ಯಾಟ್‍ನಿಂದ ಸಿಡಿದಿದ್ದು ಕೇವಲ 116 ರನ್. ಸ್ಟ್ರೈಕ್‍ರೇಟ್ 106.42 ಈ 6 ಇನ್ನಿಂಗ್ಸ್‌ನಲ್ಲಿ ಒಂದು ಅರ್ಧಶತಕ ಮಾತ್ರ ಸಿಡಿಸಲು ರೋಹಿತ್ ಸಫಲರಾಗಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಪಾಕಿಸ್ತಾನದ ಗೆಲುವು ಸಂಭ್ರಮಿಸಿದ ಕಿಡಿಗೇಡಿಗಳು – ನಾಲ್ವರು ವಶಕ್ಕೆ

    ಪಾಕಿಸ್ತಾನ ವಿರುದ್ಧ 4 ರನ್ (7 ಎಸೆತ), ನೆದರ್‌ಲ್ಯಾಂಡ್‌ ವಿರುದ್ಧ 53 ರನ್ (39 ಎಸೆತ), ದಕ್ಷಿಣ ಅಫ್ರಿಕಾ ವಿರುದ್ಧ 15 ರನ್ (14 ಎಸೆತ), ಬಾಂಗ್ಲಾದೇಶ ವಿರುದ್ಧ 2 ರನ್ (8 ಎಸೆತ), ಜಿಂಬಾಬ್ವೆ ವಿರುದ್ಧ 15 ರನ್ (13 ಎಸೆತ), ಇಂಗ್ಲೆಂಡ್ ವಿರುದ್ಧ 27 ರನ್ (28 ಎಸೆತ) ಈ ಪ್ರದರ್ಶನ ನೋಡಿದಾಗ ರೋಹಿತ್ ಶರ್ಮಾ ಬ್ಯಾಟಿಂಗ್‍ನಲ್ಲಿ ವಿಫಲವಾಗಿರುವುದು ಸ್ಪಷ್ಟವಾಗುತ್ತಿದೆ. ಈ ಬಗ್ಗೆ ಮಾಜಿ ಆಟಗಾರರು ಸಹಿತ ಕ್ರಿಕೆಟ್ ಪಂಡಿತರು ರೋಹಿತ್ ನಾಯಕತ್ವದಿಂದಾಗಿ ಈ ರೀತಿ ಪ್ರದರ್ಶನ ನೀಡುತ್ತಿದ್ದಾರೆ. ರೋಹಿತ್‍ಗೆ ನಾಯಕತ್ವ ಹೊರೆಯಾಗುತ್ತಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಂಡ್ಯ ವ್ಯರ್ಥ ಹೋರಾಟ – ಭಾರತಕ್ಕೆ ಹೀನಾಯ ಸೋಲು, ಇಂಗ್ಲೆಂಡ್ ಫೈನಲ್‍ಗೆ

    ಪಾಂಡ್ಯ ವ್ಯರ್ಥ ಹೋರಾಟ – ಭಾರತಕ್ಕೆ ಹೀನಾಯ ಸೋಲು, ಇಂಗ್ಲೆಂಡ್ ಫೈನಲ್‍ಗೆ

    ಆಡಿಲೇಡ್: ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ (England) ಓಪನರ್‌ಗಳ ಸಿಡಿಲಬ್ಬರದ ಬ್ಯಾಟಿಂಗ್‍ಗೆ ಭಾರತ (India) ಮಂಕಾಗಿ ಸೋಲುಂಡಿದೆ. ಇಂಗ್ಲೆಂಡ್ 10 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ 3ನೇ ಬಾರಿ ಫೈನಲ್ ಪ್ರವೇಶಿಸಿದೆ.

    ಭಾರತ ನೀಡಿದ 169 ರನ್‍ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‍ಗೆ ಮುಂದಾಗಿ ವಿಕೆಟ್‌ ನಷ್ಟವಿಲ್ಲದೇ 16 ಓವರ್‌ಗಲ್ಲಿ 170 ರನ್ ಸಿಡಿಸಿ 10 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಫೈನಲ್‍ಗೆ ಲಗ್ಗೆ ಇಟ್ಟಿದೆ. ಈ ಜಯದೊಂದಿಗೆ ನ.13 ರಂದು ಫೈನಲ್‍ನಲ್ಲಿ ಪಾಕಿಸ್ತಾನವನ್ನು (Pakistan) ಇಂಗ್ಲೆಂಡ್ ಎದುರಿಸಲಿದೆ. ಇತ್ತ ಈ ಸೋಲಿನೊಂದಿಗೆ ಭಾರತ ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

    ಇಂಗ್ಲೆಂಡ್ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಭಾರತ ಬೌಲರ್‌ಗಳನ್ನು ಮೊದಲ ಓವರ್‌ನಿಂದಲೇ ದಂಡಿಸಲು ಆರಂಭಿಸಿದರು. ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ, ಸಿಕ್ಸ್‌ಗಳ ಮೂಲಕ ಮನಮೋಹಕವಾಗಿ ಆಡಿದ ಈ ಜೋಡಿ ಅಜೇಯ 170 ರನ್‌ (96 ಎಸೆತ) ಜೊತೆಯಾಟದ ಮೂಲಕ ಅಬ್ಬರಿಸಿ ಬೊಬ್ಬಿರಿಯಿತು. ಬಟ್ಲರ್ 80 ರನ್ (49 ಎಸೆತ, 9 ಬೌಂಡರಿ, 3 ಸಿಕ್ಸ್‌) ಮತ್ತು ಹೇಲ್ಸ್ 86 ರನ್‌ (47 ಎಸೆತ, 4 ಬೌಂಡರಿ, 7 ಸಿಕ್ಸ್‌) ಸಿಡಿಸಿ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ಪರಿಣಾಮ ಇನ್ನೂ 24 ಎಸೆತ ಬಾಕಿ ಇರುವಂತೆ ಇಂಗ್ಲೆಂಡ್‍ ಜಯ ಗಳಿಸಿ ಸಂಭ್ರಮಿಸಿತು.

    ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಭಾರತವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಇತ್ತ ಭಾರತ ಮಹತ್ವದ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕೆ.ಎಲ್ ರಾಹುಲ್ 5 ರನ್ (5 ಎಸೆತ, 1 ಬೌಂಡರಿ) ಸಿಡಿಸಿ ಸೈಲೆಂಟ್ ಆಗಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಇದನ್ನೂ ಓದಿ: ಜಡೇಜಾ ಪತ್ನಿಗೆ ಗುಜರಾತ್‍ನ ಜಾಮ್‌ನಗರ ಉತ್ತರದಿಂದ ಬಿಜೆಪಿ ಟಿಕೆಟ್

    ಆ ಬಳಿಕ ರೋಹಿತ್ ಜೊತೆ ಸೇರಿಕೊಂಡ ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾರತಕ್ಕೆ ಆಸರೆಯಾದರು. ರೋಹಿತ್ ಶರ್ಮಾ ನಿಧಾನವಾಗಿ ಬ್ಯಾಟ್‍ಬೀಸುತ್ತಿದ್ದರೆ, ಕೊಹ್ಲಿ ಇತ್ತ ಸೂಪರ್ ಡೂಪರ್ ಹೊಡೆತಗಳ ಮೂಲಕ ರನ್ ಏರಿಸುವ ಹೊಣೆ ಹೊತ್ತರು. ಈ ಜೋಡಿ ಎರಡನೇ ವಿಕೆಟ್‍ಗೆ 47 ರನ್ (43 ಎಸೆತ) ಒಟ್ಟುಗೂಡಿಸಿ ಬೇರ್ಪಟ್ಟಿತು. ರೋಹಿತ್ ಆಟ 27 ರನ್ (28 ಎಸೆತ, 4 ಬೌಂಡರಿಗೆ) ಅಂತ್ಯವಾಯಿತು.

    ಬಳಿಕ ಬಂದ ಸೂರ್ಯಕುಮಾರ್ ಯಾದವ್ ಒಂದು ಫೋರ್, ಒಂದು ಸಿಕ್ಸ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದರೂ ಅವರನ್ನು 14 ರನ್ (10 ಎಸೆತ, 1 ಬೌಂಡರಿ, 1 ಸಿಕ್ಸ್) ಕಟ್ಟಿ ಹಾಕುವಲ್ಲಿ ರಶೀದ್ ಯಶಸ್ವಿಯಾದರು. ಇದನ್ನೂ ಓದಿ: ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ವಿಚ್ಛೇದನ? – ಒಂದು ಪೋಸ್ಟ್‌ನಿಂದ ಬಿಸಿ ಬಿಸಿ ಚರ್ಚೆ

    ಕೊಹ್ಲಿ, ಪಾಂಡ್ಯ ಪಾಟ್ನರ್‌ಶಿಪ್:
    ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ, ಇನ್ನೊಂದೆಡೆ ರನ್ ವೇಗ ಹೆಚ್ಚಿಸಲಾಗದೆ ಭಾರತ ಅಲ್ಪ ಮೊತ್ತದತ್ತ ಮುನ್ನುಗ್ಗುತ್ತಿತ್ತು. ಈ ವೇಳೆ ಅಸಲಿ ಅಟ ಆರಂಭಿಸಿದ ಈ ಜೋಡಿ ಇಂಗ್ಲೆಂಡ್ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದರು.

    ಬೌಂಡರಿ, ಸಿಕ್ಸರ್‌ಗಳೊಂದಿಗೆ ಕೊಹ್ಲಿ, ಪಾಂಡ್ಯ ಅಬ್ಬರಿಸಿದ ಪರಿಣಾಮ ಭಾರತ ಪೈಪೋಟಿಯ ಮೊತ್ತ ಪೇರಿಸುವ ಭರವಸೆ ಮೂಡಿತು. ಇತ್ತ ಕೊಹ್ಲಿ 50 ರನ್ (40 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಕ್ಯಾಚ್ ನೀಡಿ ಔಟ್ ಆದರು. ಈ ಮೊದಲು ಪಾಂಡ್ಯ ಜೊತೆ 4 ವಿಕೆಟ್‍ಗೆ 61 ರನ್ (40 ಎಸೆತ) ಜೊತೆಯಾಟವಾಡಿ ತಂಡಕ್ಕೆ ಆಧಾರವಾದರು. ಆದರೆ ಇತ್ತ ಪಾಂಡ್ಯ ಮಾತ್ರ ತಮ್ಮ ಅಬ್ಬರದಾಟ ಮುಂದುವರಿಸಿದರು. ಸಿಕ್ಸರ್‌ಗಳ ಮಳೆ ಸುರಿಸಿದ ಪಾಂಡ್ಯ ಬ್ಯಾಟ್ ಬೌಲರ್‌ಗಳಿಗೆ ಅಷ್ಟದಿಕ್ಕುಗಳನ್ನು ಪರಿಚಯಿಸಿದಂತಿತ್ತು.

    ಕೊನೆಯ 5 ಓವರ್‌ಗಳಲ್ಲಿ 68 ರನ್:
    ಪಾಂಡ್ಯ ಹೋರಾಟದ ಫಲವಾಗಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಪೇರಿಸಿದ್ದ ಭಾರತ ಮುಂದಿನ ಹತ್ತು ಓವರ್‌ಗಳಲ್ಲಿ 106 ಚಚ್ಚಿ ತಂಡದ ಮೊತ್ತ 160ರ ಗಡಿ ದಾಟುವಂತೆ ನೊಡಿಕೊಂಡರು. ಅಲ್ಲದೇ ಕೊನೆಯ 5 ಓವರ್‌ಗಳಲ್ಲಿ 68 ರನ್ ಹರಿದುಬಂತು. ಪಾಂಡ್ಯ 63 ರನ್ (33 ಎಸೆತ, 4 ಬೌಂಡರಿ, 5 ಸಿಕ್ಸ್) ಚಚ್ಚಿ ಕೊನೆಯ ಎಸೆತದಲ್ಲಿ ಹಿಟ್‍ವಿಕೆಟ್ ಆಗಿ ಔಟ್ ಆದರು. ಇದರೊಂದಿಗೆ ಭಾರತ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 168 ರನ್ ಪೇರಿಸಿತು. ಇಂಗ್ಲೆಂಡ್ ಪರ ಜೋರ್ಡನ್ 3 ವಿಕೆಟ್ ಪಡೆದು ಮಿಂಚಿದರು.

    ರನ್ ಏರಿದ್ದು ಹೇಗೆ:
    50 ರನ್ 47 ಎಸೆತ
    100 ರನ್ 90 ಎಸೆತ
    150 ರನ್ 113 ಎಸೆತ
    168 ರನ್ 120 ಎಸೆತ

    Live Tv
    [brid partner=56869869 player=32851 video=960834 autoplay=true]