Tag: swing

  • ಸೀರೆ ಜೋಕಾಲಿಯಲ್ಲಿ ಸಿಲುಕಿ ಬಾಲಕಿ ಸಾವು

    ಸೀರೆ ಜೋಕಾಲಿಯಲ್ಲಿ ಸಿಲುಕಿ ಬಾಲಕಿ ಸಾವು

    ಉಡುಪಿ: ಸೀರೆ ಜೋಕಾಲಿಯಲ್ಲಿ (Swing) ಸಿಲುಕಿ ಬಾಲಕಿ ಸಾವನ್ನಪ್ಪಿದ ಘಟನೆ ಉಡುಪಿ (Udupi) ಜಿಲ್ಲೆಯ ಕಾರ್ಕಳದಲ್ಲಿ (Karkala) ನಡೆದಿದೆ.

    ಕಾರ್ಕಳ ತಾಲೂಕು ನಿಟ್ಟೆ (Nitte) ಗ್ರಾಮ ಕೆಮ್ಮಣ್ಣುವಿನ ಲಕ್ಷ್ಮಿ ಪೂಜಾರಿ ಎಂಬವರ ಮಗಳು ಮಾನ್ವಿ (9) ಮೃತ ಬಾಲಕಿ. ಚಿಕ್ಕಪ್ಪನ ಮನೆಗೆ ಆಟವಾಡಲೆಂದು ಹೋಗಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ರೈಲಿನ ರೇಕ್ ಹರಿದು ಗುತ್ತಿಗೆ ಕಾರ್ಮಿಕ ಸಾವು

    ಸಮೀಪದ ಮನೆಯ ಮತ್ತೊಬ್ಬ ಬಾಲಕಿಯ ಜೊತೆ ಚಿಕ್ಕಪ್ಪನ ಮನೆಯಲ್ಲಿ ಸೀರೆಯಲ್ಲಿ ಜೋಕಾಲಿ ಕಟ್ಟಿ ಆಡುತ್ತಿದ್ದರು. ಈ ವೇಳೆ ಸೀರೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಅವಘಡ ಸಂಭವಿಸಿದೆ. ಸ್ಥಳದಲ್ಲಿದ್ದವರು ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ರವಾನಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ರಾಮನಾಥಪುರ ಕೆರೆಯಲ್ಲಿ ಈಜಲು ಹೋದ ನಾಲ್ವರು ಯುವಕರು ನೀರುಪಾಲು

    ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದಿದೊಯ್ದು ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶವಸಂಸ್ಕಾರದ ವೇಳೆ ಕೊಲೆ ಶಂಕೆ ಪ್ರಕರಣಕ್ಕೆ ಟ್ವಿಸ್ಟ್ – ಪತ್ನಿಯೇ ಮಾಸ್ಟರ್‌ಮೈಂಡ್

  • ರಾಮಲೀಲಾ ಜಾತ್ರೆಯಲ್ಲಿ ಉಯ್ಯಾಲೆ ಮುರಿದು 5 ಮಂದಿಗೆ ಗಾಯ

    ರಾಮಲೀಲಾ ಜಾತ್ರೆಯಲ್ಲಿ ಉಯ್ಯಾಲೆ ಮುರಿದು 5 ಮಂದಿಗೆ ಗಾಯ

    ಲಕ್ನೋ: ಗಾಜಿಯಾಬಾದ್‍ನಲ್ಲಿ (Ghaziabad) ನಡೆದ ರಾಮಲೀಲಾ ಜಾತ್ರೆಯಲ್ಲಿ (Ramleela Fair) ಉಯ್ಯಾಲೆ ಮುರಿದು ಬಿದ್ದು, ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಐವರು ಗಾಯಗೊಂಡಿದ್ದಾರೆ.

    ಬ್ರೇಕ್ ಡ್ಯಾನ್ಸ್ (Break Dance)ಎಂದು ಕರೆಯಲಾಗುವ ಉಯ್ಯಾಲೆಯೊಂದು ಮುರಿದು ದಾರಿ ಮಧ್ಯೆ ಪಲ್ಟಿಯಾದ ಪರಿಣಾಮ ಈ ಘಟನೆ ಜರುಗಿದೆ. ಘಟನೆ ವೇಳೆ ಸುಮಾರು 10 ಜನರು ಉಯ್ಯಾಲೆಯಲ್ಲಿ ಸವಾರಿ ಮಾಡುತ್ತಿದ್ದರು. ಇದನ್ನೂ ಓದಿ: ಎಣ್ಣೆ ನಶೆಯಲ್ಲಿ ಕಾರ್‌ ಚಾಲಕನ ಅವಾಂತರ – ನಡುರಸ್ತೆಯಲ್ಲೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ ಭೂಪ

    ವೀಡಿಯೋದಲ್ಲಿ ಸ್ವಿಂಗ್ ಜೋರಾಗಿ ಸುತ್ತುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಒಂದು ಉಯ್ಯಾಲೆ ಮುರಿದು ಕೆಳಗುರುಳಿ ಬಿದ್ದಿದೆ. ಈ ವೇಳೆ ಉಯ್ಯಾಲೆಯಲ್ಲಿದ್ದ ಕೆಲವರು ಕೆಳಗೆ ಬಿದ್ದಿರುವುದನ್ನು ಕಾಣಬಹುದಾಗಿದೆ. ಇದರಿಂದ ಜಾತ್ರೆಯಲ್ಲಿ ನೂಕುನುಗ್ಗಲು ಉಂಟಾಯಿತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

    ಗಾಜಿಯಾಬಾದ್ ಆಡಳಿತ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ. ನಗರದ ಮ್ಯಾಜಿಸ್ಟ್ರೇಟ್ ಪ್ರಕಾರ, ಮನರಂಜನಾ ಮತ್ತು ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ತನಿಖೆಯ ನಂತರ ಜಾತ್ರೆಯಲ್ಲಿ ಉಯ್ಯಾಲೆ ನಡೆಸಲು ಅನುಮತಿ ನೀಡಿವೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ, ಇದು ಕಾಂಗ್ರೆಸ್‍ನ ಕೊನೆಯ ಯಾತ್ರೆ: ಆನಂದ್ ಸಿಂಗ್ ವ್ಯಂಗ್ಯ

    Live Tv
    [brid partner=56869869 player=32851 video=960834 autoplay=true]

  • ಉಯ್ಯಾಲೆ ಹಗ್ಗಕ್ಕೆ ಸಿಲುಕಿ 8ರ ಬಾಲಕ ಸಾವು

    ಉಯ್ಯಾಲೆ ಹಗ್ಗಕ್ಕೆ ಸಿಲುಕಿ 8ರ ಬಾಲಕ ಸಾವು

    ಲಕ್ನೋ: ಉಯ್ಯಾಲೆಯ ಹಗ್ಗಕ್ಕೆ ಸಿಲುಕಿ ಎಂಟು ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಸ್ರೇಹಿ ಗ್ರಾಮದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಅರ್ಜುನ್ ಎಂದು ಗುರುತಿಸಲಾಗಿದೆ. ಅರ್ಜುನ್ ಮನೆಯ ಕೊಠಡಿಯೊಂದರಲ್ಲಿ ಹಗ್ಗದಲ್ಲಿ ಉಯ್ಯಾಲೆ ಮಾಡಿಕೊಂಡು ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಎಸ್‍ಎಚ್‍ಒ ಉಮಾಕಾಂತ್ ಓಜಾ ತಿಳಿಸಿದ್ದಾರೆ. ಇದನ್ನೂ ಓದಿ: ತಲೆ ಮೇಲೆ ಮದ್ಯದ ಬಾಟಲಿ ಹಿಡಿದು ನಡುರಸ್ತೆಯಲ್ಲಿ ಆಂಟಿ ಡ್ಯಾನ್ಸ್..!

    crime

    ಅರ್ಜುನ್ ಕೊಠಡಿಯಲ್ಲಿ ಕೆಲವು ಗೋಧಿ ಚೀಲಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ನಂತರ ಅದರ ಮೇಲೆ ನಿಂತು ಫ್ಯಾನ್‍ಗೆ ಹಗ್ಗವನ್ನು ನೇತು ಹಾಕಿದ್ದಾನೆ. ಬಳಿಕ ತೂಗಾಡಲು ಆರಂಭಿಸಿದಾಗ, ಕೆಳಗೆ ಇದ್ದ ಗೋಣಿಚೀಲಗಳು ಚೆಲ್ಲಾಪಿಲ್ಲಿಯಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಬಾಲಕನ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

    ನಂತರ ನೇಣು ಬಿಗಿದಂತೆ ಪತ್ತೆಯಾದ ಬಾಲಕನನ್ನು ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇದೀಗ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.  ಇದನ್ನೂ ಓದಿ: 20 ವರ್ಷದ ಹುಡುಗಿ ಅಂತ 50ರ ಆಂಟಿ ತುಂಟಾಟ – ಚಾಟ್ ಮಾಡಿ ಮೋಸ ಹೋದ ಯುವಕ

  • ಫೋಟೋ ಶೂಟ್ ಮಾಡಿಸಲು ಹೋಗಿ ನದಿಯೊಳಗೆ ಬಿದ್ದ ಮಹಿಳೆ – ವೀಡಿಯೋ ವೈರಲ್

    ಫೋಟೋ ಶೂಟ್ ಮಾಡಿಸಲು ಹೋಗಿ ನದಿಯೊಳಗೆ ಬಿದ್ದ ಮಹಿಳೆ – ವೀಡಿಯೋ ವೈರಲ್

    ದಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಹೋಗಿ ಮಹಿಳೆ ನೀರಿನೊಳಗೆ ಬಿದ್ದಿರುವ ಹಾಸ್ಯಮಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Photoshoot

    ಮಹಿಳೆಯೊಬ್ಬರು ನದಿಯ ದಡದಲ್ಲಿ ಸುಂದರವಾದ ಪಿಂಕ್ ಕಲರ್ ಲಾಂಗ್ ಡ್ರೆಸ್ ಅನ್ನು ಧರಿಸಿ, ಹೇರ್ ಸ್ಟೈಲ್ ಮಾಡಿಸಿಕೊಂಡು ತೂಗಾಡುವ ಉಯ್ಯಾಲೆಯ ಮೇಲೆ ಕುಳಿತುಕೊಂಡಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಪ್ರಾಕೃತಿಕ ವಿಕೋಪಕ್ಕೆ ಚೆನ್ನೈ ತತ್ತರ – ಹಿಂದಿಗಿಂತ 5.5 ಪಟ್ಟು ಹೆಚ್ಚು ಮಳೆ

    ಈ ಉಯ್ಯಾಲೆಯನ್ನು ಮರದ ಹಲಗೆಯಿಂದ ಸಿದ್ಧಪಡಿಸಲಾಗಿದ್ದು, ಅದನ್ನು ಹಗ್ಗದಿಂದ ನೇತಾಡುವಂತೆ ಕಟ್ಟಲಾಗಿತ್ತು. ನಂತರ ಫೋಟೋ ಶೂಟ್ ಮಾಡಿಸಲು ಮಹಿಳೆ ಉಯ್ಯಾಲೆ ಮೇಲೆ ಕುಳಿತು ಸ್ಟೈಲ್ ಆಗಿ ಕ್ಯಾಮೆರಾಗೆ ಪೋಸ್ ನೀಡುತ್ತಿರುತ್ತಾರೆ. ಅಲ್ಲದೇ ಫೋಟೋ ಸೆರೆಹಿಡಿಯುವ ವೇಳೆ ಮಹಿಳೆಯ ಲಾಂಗ್ ಡ್ರೆಸ್ ಅನ್ನು ದೂರದಿಂದ ವ್ಯಕ್ತಿಯೊಬ್ಬರು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಅಲುಗಾಡಿಸಲು ಪ್ರಯತ್ನಿಸುತ್ತಾರೆ. ಆಗ ಮಹಿಳೆಯ ತೂಕಕ್ಕೆ ಉಯ್ಯಾಲೆ ಮುರಿದು ನೀರಿನಲ್ಲಿ ಬೀಳುತ್ತದೆ. ಇದೇ ವೇಳೆ ಉಯ್ಯಾಲೆ ಜೊತೆ ನೀರಿನೊಳಗೆ ಬಿದ್ದ ಮಹಿಳೆ ನೀರಿನಿಂದ ಮೇಲಕ್ಕೆ ಎದ್ದು ಸ್ವತಃ ತಾವೇ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ – ಪಟ್ಟಣ ಪಂಚಾಯ್ತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 5,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಅನೇಕ ಲೈಕ್ಸ್ ಹಾಗೂ ಕಾಮೆಂಟ್‍ಗಳು ಹರಿದುಬಂದಿದೆ.

  • ಜೋಕಾಲಿ ಮೇಲೆ ವೃದ್ಧನ ಸ್ಟಂಟ್ – ವೀಡಿಯೋ ನೋಡಿ ಬೆರಗಾದ ನೆಟ್ಟಿಗರು

    ಜೋಕಾಲಿ ಮೇಲೆ ವೃದ್ಧನ ಸ್ಟಂಟ್ – ವೀಡಿಯೋ ನೋಡಿ ಬೆರಗಾದ ನೆಟ್ಟಿಗರು

    ಮಕ್ಕಳೊಂದಿಗೆ ವೃದ್ಧನೊಬ್ಬ ಜೋಕಾಲಿ ಆಡಿದ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಮಕ್ಕಳೊಂದಿಗೆ ಆಟವಾಡಲೆಂದು ಪಾರ್ಕ್‍ಗೆ ವೃದ್ಧ ಬರುತ್ತಾನೆ. ಈ ವೇಳೆ ಮಕ್ಕಳೆಲ್ಲ ಜೋಕಾಲಿ ಮೇಲೆ ಕುಳಿತು ಅವರ ಪಾಡಿಗೆ ಅವರು ಆಟವಾಡುತ್ತಿರುತ್ತಾರೆ. ಆಗ ವೃದ್ಧ ತಾನು ಇದೇ ಮೊದಲ ಬಾರಿಗೆ ಜೋಕಾಲಿ ಜೊತೆ ಆಟವಾಡುತ್ತಿದ್ದೇನೆ ಎಂಬಂತೆ ಕುಳಿತುಕೊಳ್ಳುತ್ತಾನೆ. ಬಳಿಕ ನಿಧಾನವಾಗಿ ಜೋಕಾಲಿ ಆಡಲು ಆರಂಭಿಸುತ್ತಾನೆ. ಈ ವೇಳೆ ನನಗೆ ಜೋಕಾಲಿ ಆಡವುದಕ್ಕೆ ಬರುವುದಿಲ್ಲ ಎಂಬಂತೆ ವೃದ್ಧ ಮೊದಲಿಗೆ ಹಿಂದಕ್ಕೆ ಬಿದ್ದು ನಾಟಕವಾಡುತ್ತಾನೆ.

    ಬಳಿಕ ಮತ್ತೆ ಜೋಕಾಲಿ ಮೇಲೆ ಕುಳಿತು ನಿಧಾನವಾಗಿ ಆಟವಾಡಲು ಆರಂಭಿಸಿದ ವೃದ್ಧ ಇದ್ದಕ್ಕಿಂದಂತೆ ವೇಗವಾಗಿ ಜೋಕಾಲಿ ಆಟವಾಡಲು ಶುರುಮಾಡುತ್ತಾನೆ. ಅಲ್ಲದೆ ಇದ್ದಕ್ಕಿದಂತೆ ಜೋಕಾಲಿ ಮೇಲೆ ಸ್ಟಂಟ್‍ನನ್ನೇ ಮಾಡುತ್ತಾನೆ. ಈ ವೇಳೆ ಪಾರ್ಕ್‍ನಲ್ಲಿ ಆಟ ವಾಡುತ್ತಿದ್ದ ಮಕ್ಕಳೆಲ್ಲರೂ ಒಂದು ಕ್ಷಣ ದಿಗ್ಭ್ರಮೆಗೊಂಡು ವೃದ್ಧನನ್ನೇ ನೋಡುತ್ತಾರೆ. ನಂತರ ವೃದ್ಧ ನಿಧಾನವಾಗಿ ಪಾದಗಳನ್ನು ಕೆಳಗೆ ಇಟ್ಟು ಜೋಕಾಲಿಯಿಂದ ಕೆಳಗೆ ಇಳಿದು ಎಲ್ಲರತ್ತ ನೋಡುತ್ತಾ ಕಿರುನಗೆ ಬೀರಿ ಹೊರಟು ಹೋಗುತ್ತಾನೆ.

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಹಳ ಕಷ್ಟಕರವಾದ ಸ್ಟಂಟ್‍ನನ್ನು ವೃದ್ಧ ಇಷ್ಟು ಸುಲಭವಾಗಿ ಮಾಡಿದ್ದಾನೆ ಎಂದು ಎಲ್ಲರೂ ಆಶ್ಚರ್ಯಗೊಂಡಿದ್ದಾರೆ. ಅಲ್ಲದೆ ಈ ವೀಡಿಯೋಗೆ ಹಲವಾರು ಕಮೆಂಟ್‍ಗಳು ಹರಿದು ಬರುತ್ತಿದೆ.

  • ಜೋಕಾಲಿ ಆಡಲು ಹೋಗಿ ಪ್ರಾಣ ಕಳೆದುಕೊಂಡ 11ರ ಬಾಲಕಿ

    ಜೋಕಾಲಿ ಆಡಲು ಹೋಗಿ ಪ್ರಾಣ ಕಳೆದುಕೊಂಡ 11ರ ಬಾಲಕಿ

    ದಾವಣಗೆರೆ: ಜೋಕಾಲಿ ಆಡುತ್ತಿರುವಾಗ ಹಗ್ಗ ಕುತ್ತಿಗೆಗೆ ಸಿಕ್ಕಿಹಾಕಿಕೊಂಡು ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ದಾವಣಗೆರೆಯ ಆಜಾದ್ ನಗರದ ಕೊರಚರಹಟ್ಟಿಯಲ್ಲಿ ನಡೆದಿದೆ.

    ನಗರದ ಮೂರ್ತಪ್ಪ ಹಾಗೂ ಶಾಂತಮ್ಮ ದಂಪತಿಯ ಮೊದಲನೇ ಮಗಳಾದ 11 ವರ್ಷದ ಸಂಜನಾ ಸಾವನ್ನಪ್ಪಿದ ಬಾಲಕಿ. ಜಗಳೂರಿನ ದೇವಿಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಓದುತ್ತಿದ್ದ ಸಂಜನಾ 2 ದಿನಗಳ ಹಿಂದೆ ದೀಪಾವಳಿ ಹಬ್ಬಕ್ಕೆ ಮನೆಗೆ ಬಂದಿದ್ದಳು.

    ಮನೆಯಲ್ಲಿ ಕೊನೆಯ ಮಗುವನ್ನು ಮಲಗಿಸಲು ಹಾಕಿದ್ದ ಜೋಕಾಲಿಯಲ್ಲಿ ಸಂಜನಾ ಆಗಾಗ ಆಟವಾಡುತ್ತಿದ್ದಳು. ಆದರೆ ದುರದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೋಕಾಲಿಯಲ್ಲಿ ಆಟವಾಡುತ್ತಿದ್ದ ಸಂಜನಾ ಕೊರಳಿಗೆ ಹಗ್ಗ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.

    ಸದ್ಯ ಬಾಲಕಿಯ ಮೃತದೇಹ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದು, ಅಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.