Tag: Swimming

  • ಉಕ್ಕಿಹರಿಯುತ್ತಿರೋ ಕಪಿಲಾ ನದಿಯಲ್ಲಿ ಯುವಕರ ಸ್ವಿಮ್ಮಿಂಗ್ – ಇತ್ತ ಇಳಿವಯಸ್ಸಲ್ಲೂ ನೀರಿಗೆ ಧುಮುಕಿದ ವೃದ್ಧ

    ಉಕ್ಕಿಹರಿಯುತ್ತಿರೋ ಕಪಿಲಾ ನದಿಯಲ್ಲಿ ಯುವಕರ ಸ್ವಿಮ್ಮಿಂಗ್ – ಇತ್ತ ಇಳಿವಯಸ್ಸಲ್ಲೂ ನೀರಿಗೆ ಧುಮುಕಿದ ವೃದ್ಧ

    -ಮೈಸೂರಲ್ಲಿ ಪ್ರವಾಹ ಪರಿಸ್ಥಿತಿ

    ಮೈಸೂರು: ಭಾರೀ ಮಳೆಗೆ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ನದಿಗೆ ಇಳಿಯದಂತೆ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಯ ಬಳಿಕವೂ ನೀರಿನಲ್ಲಿ ಈಜಾಡುವ ಮೂಲಕ ಯುವಕನೊಬ್ಬ ದುಸ್ಸಾಹಸ ಮಾಡಿದ್ದಾನೆ.

    ಉಕ್ಕಿ ಹರಿಯುತ್ತಿರುವ ನಂಜನಗೂಡಿನ ಸೇತುವೆ ಬಳಿ ಕಪಿಲಾ ನದಿಗೆ ಜಿಗಿದು ಯುವಕನೊಬ್ಬ ಈಜಾಡಿದ್ದು, ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ವೃದ್ಧರೊಬ್ಬರು ನಂಜನಗೂಡಿನ ಮಲ್ಲನಮೂಲೆ ಮಠದ ಬಳಿ ನದಿಗೆ ಧುಮುಕಿ ಈಜಾಡಿದ್ದಾರೆ.

    ಈಗಾಗಲೇ ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಪೊಲೀಸರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ವೃದ್ಧ ಯಾವುದೇ ಎಚ್ಚರಿಕೆಗೂ ಮುಲಾಜು ನೀಡದೆ ಈಜಾಡಿದ್ದಾರೆ. ಬೆಳಗ್ಗೆ ಅಷ್ಟೇ ಇದೇ ಸ್ಥಳದಲ್ಲಿ ಇಬ್ಬರು ಯುವಕರು ಸೆಲ್ಫಿ ತೆಗೆದುಕೊಳ್ಳಲು ರೈಲ್ವೇ ಸೇತುವೆ ನಿಷೇಧಿತ ಪ್ರದೇಶಕ್ಕೆ ತೆರಳಿದ್ದರು. ಈ ಕುರಿತು ಸಹ ಮುನ್ನೇಚ್ಚರಿಕೆ ನೀಡಲಾಗಿತ್ತು.

    ಕಳೆದ ಕೆಲ ದಿನಗಳ ಹಿಂದೆ ನದಿಗೆ ನೀರು ಬಿಟ್ಟಿದ ವೇಳೆಯೂ ಕಪಿಲಾ ನದಿಯಲ್ಲಿ ಈಜಾಲು ತೆರಳಿದ್ದ ವೇಳೆ ಯುವನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ಕಪಿಲಾ ನದಿಯಲ್ಲಿ 3 ಮೂವರು ಯುವಕು ನೀರು ಪಾಲಾಗಿದ್ದರು ಈ ಘಟನೆ ಮಾಸುವ ಮುನ್ನವೇ ಯುವಕರು ದುಸ್ಸಾಹಸ ತೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • 100 ರೂ.ಗಾಗಿ ಯಮುನಾ ನದಿಗೆ ಹಾರಿ ಪ್ರಾಣಬಿಟ್ಟರು!

    100 ರೂ.ಗಾಗಿ ಯಮುನಾ ನದಿಗೆ ಹಾರಿ ಪ್ರಾಣಬಿಟ್ಟರು!

    ಚಂಡೀಗಢ್: ಸ್ನೇಹಿತನೊಂದಿಗೆ ಕೇವಲ 100 ರೂ. ಬೆಟ್ ಕಟ್ಟಿ, ಯಮುನಾ ನದಿಗೆ ಹಾರಿ ಯುವಕರಿಬ್ಬರು ಮೃತಪಟ್ಟ ಘಟನೆ ಹರಿಯಾಣದ ಬಲ್ಲಭಗಢ್ (ವಲ್ಲಭಗಢ್) ನಡೆದಿದೆ.

    ಕೃಷ್ಣ ಹಾಗೂ ರಾಹುಲ್ ಮೃತಪಟ್ಟ ಯುವಕರು. ಗುರುವಾರ ಸಂಜೆ ಇಬ್ಬರು ಸ್ನೇಹಿತ ಕಟ್ಟಿದ್ದ ಬೆಟ್‍ನಿಂದಾಗಿ, ರಭಸವಾಗಿ ಹರಿಯುತ್ತಿದ್ದ ಯಮುನಾ ನದಿಗೆ ಹಾರಿದ್ದರು. ನದಿಯ ರಭಸಕ್ಕೆ ಮೇಲೆ ಏಳಲು ಆಗದೆ ಮುಳುಗಿ, ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರು.

    ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ, ಎನ್‌ಡಿಆರ್‌ಎಫ್‌ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಎನ್‍ಡಿಆರ್‍ಎಫ್ ತಂಡ ಯುವಕರ ಮೃತ ದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಗುರುವಾರ ರಾತ್ರಿ ಕಾರ್ಯಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.

    ಶುಕ್ರವಾರ ರಾಹುಲ್ ಮೃತದೇಹವು ಪಲ್ವಲ್ ಎಂಬಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಚಿಕ್ಕಮಗಳೂರಿನ ತರೀಕೆರೆಯಲ್ಲಿ ಈಜಾಡಿದ ಗಜರಾಜ: ವಿಡಿಯೋ ವೈರಲ್

    ಚಿಕ್ಕಮಗಳೂರಿನ ತರೀಕೆರೆಯಲ್ಲಿ ಈಜಾಡಿದ ಗಜರಾಜ: ವಿಡಿಯೋ ವೈರಲ್

    ಚಿಕ್ಕಮಗಳೂರು: ಆನೆ ಈಜೋದನ್ನ ಅಷ್ಟಾಗಿ ಯಾರು ನೋಡಿರಲ್ಲ. ನೋಡಿದ್ರು ಕೂಡ ದಡದಲ್ಲಿ ನಿಂತು ಸೊಂಡಿಲಿನಿಂದ ಮೈಮೇಲೆ ನೀರು ಉಗ್ಗಿಕೊಳ್ಳೋದ್ನಷ್ಟೇ ನೋಡಿರ್ತಿರಾ. ಆದರೆ ಗಜರಾಜ ಅಷ್ಟು ದೊಡ್ಡ ಗಾತ್ರದ ದೇಹವನ್ನ ಸಂಪೂರ್ಣ ನೀರಿನಲ್ಲಿ ಮುಳುಗಿಸಿ ಈಜುತ್ತಾ ಮುಂದೆ ಹೋಗೋದ್ನ ನೋಡಸಿಗೋದು ತೀರಾ ವಿರಳ.

    ಅಂತಹಾ ಅಪರೂಪದ ವಿಡಿಯೋ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೆಲೇನಹಳ್ಳಿ ಹುಡುಗರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಹೌದು ಇಷ್ಟು ದಿನ ಮಲೆನಾಡಿನ ಕಾಡಂಚಿನ ಗ್ರಾಮಗಳಿಗೆ ಬರ್ತಿದ್ದ ಗಜರಾಜ ಇದೀಗ ಬಯಲು ಸೀಮೆಯ ಭತ್ತದ ಗದ್ದೆಗಳಿಗೆ ಬರೋದಕ್ಕೆ ಶುರುವಿಟ್ಟಿದ್ದಾನೆ.

    ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೇಲೆನಹಳ್ಳಿ ಗ್ರಾಮದಂಚಿಗೆ ಭದ್ರಾ ಸಂರಕ್ಷಿತ ಅರಣ್ಯದಿಂದ ಬಂದ ಒಂಟಿ ಸಲಗ ಇಡೀ ರಾತ್ರಿ ಗ್ರಾಮದಂಚಿನಲ್ಲೇ ಬೀಡು ಬಿಟ್ಟಿದ್ದಾನೆ. ರಾತ್ರಿ ಬೆಲೇನಹಳ್ಳಿಯಲ್ಲಿ ಕಾಲ ಕಳೆದ ಗಜೇಂದ್ರ ಬೆಳಗಾಗುತ್ತಿದ್ದಂತೆ ಸಮೀಪದ ಕೆರೆಯಲ್ಲಿ ಫ್ರೆಶ್ ಆಗಿ ಹುರುಳುಹಳ್ಳಿ, ಹಿರೇಕಾತೂರಿನ ಜಮೀನುಗಳಲ್ಲೂ ಓಡಾಟ ನಡೆಸಿದೆ.

    ಐರಾವತನಿಂದ ಹೊಲ-ಗದ್ದೆ-ತೋಟಗಳು ನಾಶವಾಗಿದ್ದು, ಇದನ್ನೆಲ್ಲಾ ಕಂಡ ರೈತರು ಜೀವಭಯದಿಂದ ಹೊಲ ಗದ್ದೆಗಳಲ್ಲಿ ಕೆಲಸ ಮಾಡೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಸ್ಥಳಕ್ಕೆ ಬಂದ ತರೀಕೆರೆ ಅರಣ್ಯಾಧಿಕಾರಿಗಳು ಆನೆಯನ್ನ ಓಡಿಸಲು ಹರಸಾಹಸ ಪಟ್ಟಿದ್ದಾರೆ.

    https://www.youtube.com/watch?v=xw-t4if4uPo&feature=youtu.be

  • ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರ ದುಸ್ಸಾಹಸ – ಕೊಚ್ಚಿ ಹೋದ ಯುವಕ

    ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರ ದುಸ್ಸಾಹಸ – ಕೊಚ್ಚಿ ಹೋದ ಯುವಕ

    ಮೈಸೂರು: ಜಿಲ್ಲೆಯ ನಂಜನಗೂಡಿನ ಹತ್ತಿರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರು ಯುವಕರು ನದಿಯಲ್ಲಿ ಸ್ವಿಮ್ಮಿಂಗ್ ಮಾಡುವ ದುಸ್ಸಾಹಸಕ್ಕೆ ಇಳಿದಿದ್ದರು. ಆದರೆ ಅವರಲ್ಲಿ ಒಬ್ಬ ಯುವಕ ನಾಪತ್ತೆಯಾಗಿದ್ದಾನೆ.

    ಎಚ್.ಡಿ ಕೋಟೆ ತಾಲೋಕಿನ ಮಾದಾಪುರ ಸೇತುವೆ ಬಳಿ ಈ ಘಟನೆ ನಡೆದಿದೆ. ಸೇತುವೆ ಮೇಲೆ ಹರಿಯುತ್ತಿರುವ ನೀರಿಗೆ ಮೂವರು ಬಿದ್ದಿದ್ದರು. ಆದರೆ 24 ವರ್ಷದ ಉಮೇಶ್ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾನೆ. ಜೊತೆಯಲ್ಲಿದ್ದ ಚಿಕ್ಕನಾಯ್ಕ, ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಉಮೇಶ್‍ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರ ದುಸ್ಸಾಹಸ!

    ಭೋರ್ಗರೆದು ಹರಿಯುತ್ತಿರುವ ನೀರಿನಲ್ಲಿ ಯುವಕರು ಸ್ವಿಮ್ಮಿಂಗ್ ಮಾಡಲು ಪ್ರಾಣಾಪಾಯವನ್ನು ಲೆಕ್ಕಿಸದೇ ಇಂತಹ ದುಸ್ಸಾಹಸಕ್ಕೆ ಇಳಿದಿದ್ದರು. ಜಲಾಶಯ ತುಂಬಿದ್ದ ಪರಿಣಾಮ ಕಪಿಲಾ ನದಿಗೆ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿತ್ತು.

    ಎಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರ ದುಸ್ಸಾಹಸ!

    ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರ ದುಸ್ಸಾಹಸ!

    ಮೈಸೂರು: ಜಿಲ್ಲೆಯ ನಂಜನಗೂಡಿನ ಹತ್ತಿರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರು ನದಿಯಲ್ಲಿ ಸ್ವಿಮ್ಮಿಂಗ್ ಮಾಡುವ ದುಸ್ಸಾಹಸಕ್ಕೆ ಇಳಿದಿದ್ದಾರೆ.

    ಭೋರ್ಗರೆದು ಹರಿಯುತ್ತಿರುವ ನೀರಿನಲ್ಲಿ ಯುವಕರು ಸ್ವಿಮ್ಮಿಂಗ್ ಮಾಡುತ್ತಿದ್ದು, ಪ್ರಾಣಾಪಾಯವನ್ನು ಲೆಕ್ಕಿಸದೇ ಇಂತಹ ದುಸ್ಸಾಹಸಕ್ಕೆ ಇಳಿದಿದ್ದಾರೆ. ಜಲಾಶಯ ತುಂಬಿದ್ದ ಪರಿಣಾಮ ಕಪಿಲಾ ನದಿಗೆ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ.

    ಬುಧವಾರ ಇದೇ ರೀತಿ ಕಪಿಲ ನದಿಯಲ್ಲಿ ಈಜಲು ತೆರಳಿದ್ದ ಓರ್ವ ಯುವಕ ಜಲಸಮಾಧಿಯಾಗಿದ್ದ. ಇಂತಹ ಅವಘಡಗಳು ಸಂಭವಿಸುತ್ತಿದ್ದರೂ, ಯುವ ಜನತೆ ಎಚ್ಚರಗೊಳ್ಳದೆ, ಕೇವಲ ಕ್ರೇಜ್ ಗಾಗಿ ತಮ್ಮ ಜೀವವನ್ನೆ ಕಳೆದುಕೊಳ್ಳುತ್ತಿದ್ದಾರೆ. ಇಂದು ಪುನಃ ಯುವಕರು ಈಜಲು ನೀರಿಗೆ ಧುಮುಕಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ಜನರೇ ಎಚ್ಚರ!

    ಸಿಲಿಕಾನ್ ಸಿಟಿಯಲ್ಲಿ ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ಜನರೇ ಎಚ್ಚರ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ಜನರೇ ಎಚ್ಚರವಾಗಿರಿ. ಸ್ವಿಮ್ಮಿಂಗ್ ಮಾಡುತ್ತಿರುವಾಗಲೇ ಮೊಬೈಲ್ ಮತ್ತು ಪರ್ಸ್ ಕಳ್ಳತನ ಮಾಡುತ್ತಿದ್ದಾರೆ.

    ವಿಜಯನಗರದ ಈಜುಕೊಳದಲ್ಲಿ ಕಳೆದ ಕೆಲ ದಿನಗಳಿಂದ ಮೊಬೈಲ್ ಮತ್ತು ಹಣವನ್ನು ಕಳ್ಳತನ ಮಾಡುತ್ತಿದ್ದಾರೆ. ಎಷ್ಟು ಜನ ಸ್ವಿಮ್ಮಿಂಗ್ ಪೂಲ್ ಹೋಗುತ್ತಾರೆ. ಯಾರು ಕಾರಿನಲ್ಲಿ ಬಂದಿದ್ದಾರೆ. ಯಾರ್ ಯಾರ್ ಮೊಬೈಲ್ ತಂದಿದ್ದಾರೆ ಎಂದು ಕಳ್ಳರು ಮೊದಲೇ ಗಮನಿಸುತ್ತಾರೆ. ಬಳಿಕ ಟಿಕೆಟ್ ಪಡೆದು ಸ್ವಿಮ್ಮಿಂಗ್ ಪೂಲ್ ಒಳಗೆ ಕಳ್ಳರ ಗ್ಯಾಂಗ್ ಹೋಗುತ್ತದೆ.

    ಸ್ವಿಮ್ಮಿಂಗ್ ಮಾಡಲು ಬಂದವರು ತಮ್ಮ ಉಡುಪುಗಳನ್ನು ಕಳಚಿ ಸ್ವಿಮ್ಮಿಂಗ್ ಮಾಡಲು ಹೋಗುತ್ತಾರೆ. ಆದರೆ ಅವರು ಸ್ವಿಮ್ಮಿಂಗ್ ಮುಗಿಸಿ ವಾಪಸ್ ಬರುವಷ್ಟರಲ್ಲಿ ಕಳ್ಳರು ಮೊಬೈಲ್ ಮತ್ತು ಹಣವನ್ನು ಎಗರಿಸಿ ಪರಾರಿಯಾಗುತ್ತಿದ್ದರು. ಹಣ, ಮೊಬೈಲೆ ಕಳೆದುಕೊಂಡವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಮಪ್ತಿಯಲ್ಲಿ ಪೊಲೀಸರು ಸ್ವಿಮ್ಮಿಂಗ್ ಪೂಲ್ ಗೆ ಬಂದು ಕಾರ್ಯಾಚರಣೆ ನಡೆಸಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

    ಗ್ಯಾಂಗ್ ಲಿಡರ್ ಅಬ್ಬರ್. ಈತ ತನ್ನ ಮಗನನ್ನು ನೋಡಲು ಮನೆ ಬಳಿ ಬರುತ್ತಿದ್ದ ಮಗನ ಸ್ನೇಹಿತರನ್ನು ಕಳ್ಳತನಕ್ಕೆ ಕರೆದುಕೊಂಡು ಹೋಗಿ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

    ಈ ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 1 ಗಂಟೆಗೂ ಹೆಚ್ಚು ಕಾಲ ನೀರಿನ ಮೇಲೆ ಕದಲದೆ ತೇಲಾಡುವ 4 ವರ್ಷದ ಪೋರಿ..!

    1 ಗಂಟೆಗೂ ಹೆಚ್ಚು ಕಾಲ ನೀರಿನ ಮೇಲೆ ಕದಲದೆ ತೇಲಾಡುವ 4 ವರ್ಷದ ಪೋರಿ..!

    ಚಿಕ್ಕಬಳ್ಳಾಪುರ: ನೀರಿನ ಮೇಲೆ ತೇಲಾಡೋಕೆ ಸಾಧ್ಯ ಅನ್ನೋದಾದರೂ ಅದೊಂದು ಕಠಿಣ ಅಭ್ಯಾಸ, ನಿರಂತರ ಪರಿಶ್ರಮದಿಂದಷ್ಟೇ ಅದು ಸಾಧ್ಯ. ಆದರೆ ಸತತ ಯೋಗಭ್ಯಾಸದ ಮೂಲಕ ಕೇವಲ 4 ವರ್ಷದ 8 ತಿಂಗಳ ಪುಟಾಣಿ ಪೋರಿಯೊಬ್ಬಳು ಕೇವಲ 30 ದಿನದಲ್ಲೇ, ನೀರಿನ ಮೇಲೆ ನಿರಾಯಾಸವಾಗಿ ತೇಲಾಡುವ ಮೂಲಕ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದ್ದಾಳೆ.

    ಪುಟಾಣಿಯ ಹೆಸರು ಅದಿತಿ. ವಯಸ್ಸು ಕೇವಲ 4 ವರ್ಷದ 8 ತಿಂಗಳು. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ರಾಮು-ಅನುಷಾ ದಂಪತಿಯ ಮಗಳು. ತಂದೆ ರಾಮು ಕಂಪೆನಿಯೊಂದರಲ್ಲಿ ಎಚ್.ಆರ್. ಆಗಿದ್ದು, ತಾಯಿ ಅನುಷಾ ಬ್ಯಾಂಕ್ ಎಂಪ್ಲಾಯ್ ಆಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಆದರೆ ಬೇಸಿಗೆ ರಜೆಗೆ ಅಂತ ಅಜ್ಜಿ ಮನೆಗೆ ಬಂದಿದ್ದ ಈ ಅದಿತಿ ಕೇವಲ ಒಂದೇ ತಿಂಗಳಲ್ಲಿ ಈಜುವ ಕಲೆಯನ್ನ ಕರಗತ ಮಾಡಿಕೊಂಡಿದ್ದಾಳೆ.

    ಚಿಂತಾಮಣಿ ನಗರದ ಯೋಗ ಗುರು ಗೋವಿಂದ್ ಬಳಿ ಕೇವಲ ಒಂದೇ ತಿಂಗಳಲ್ಲಿ ಕಠಿಣ ಪರಿಶ್ರಮದಿಂದ ಈಜುವ ಕಲೆಯನ್ನು ಕಲಿತ್ತಿದ್ದಾಳೆ. ಜೊತೆಗೆ ಯೋಗಾಭ್ಯಾಸದ ಮೂಲಕ ಕಠಿಣವಾದ ನೀರಿನ ಮೇಲೆ ತೇಲಾಡುವ ಶವಾಸಾನ ಭಂಗಿಯನ್ನ ಕಲಿತು ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದ್ದಾಳೆ. ಸುಮಾರು 30 ಅಡಿ ಆಳದ ಬೃಹಾದಾಕರಾದ ಬಾವಿಯಲ್ಲಿ ಯಾವುದೇ ಆಳಕು ಅಂಜಿಕೆಯಿಲ್ಲದೆ, ಒಂದು ಚೂರು ಅಲುಗಾಡದೆ, ಕದಲದೆ ನೀರಿನ ಮೇಲೆ ತೇಲಾಡುತ್ತಾಳೆ. ಮತ್ತೊಂದೆಡೆ ಬಾವಿಯ ಶೆಡ್ ನ ಮೇಲಿಂದ ಡೈ ಹೊಡಿತಾಳೆ.

    ಎಲ್ಲ ಮಕ್ಕಳಿಗಿಂತ ಬಹುಬೇಗ ಈಜು ಕಲಿತ ಅದಿತಿ, ಬ್ಯಾಕ್ ಸ್ವಿಮ್ಮಿಂಗ್, ಪ್ಲೋಟಿಂಗ್, ಹೈಟ್ ಜಂಪಿಂಗ್ ಸೇರಿದಂತೆ ಈಜಿನಲ್ಲಿ ನಾನಾ ಭಂಗಿಗಳನ್ನ ಪ್ರದರ್ಶಿಸುವ ಮೂಲಕ ಗಮನ ಸೆಳೆಯುತ್ತಿದ್ದಾಳೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಯ ತೇಲಾಡುವ ಮೂಲಕ ಅದಿತಿ ಲಿಮ್ಕಾ ಸಾಧನೆ ಮಾಡಲಿದ್ದಾಳೆ ಎಂದು ಈಜು-ಯೋಗ ಗುರು ಗೋವಿಂದ್ ಹೇಳಿದ್ದಾರೆ.

  • ಸಮುದ್ರಕ್ಕೆ ಇಳಿದವರನ್ನು ಹೊತ್ತೊಯ್ದ ಅಲೆ- ಮುರುಡೇಶ್ವರ ಕಿನಾರೆಯಲ್ಲಿ ತಪ್ಪಿದ ದುರಂತ

    ಸಮುದ್ರಕ್ಕೆ ಇಳಿದವರನ್ನು ಹೊತ್ತೊಯ್ದ ಅಲೆ- ಮುರುಡೇಶ್ವರ ಕಿನಾರೆಯಲ್ಲಿ ತಪ್ಪಿದ ದುರಂತ

    ಕಾರವಾರ: ಪ್ರವಾಸಕ್ಕೆಂದು ತೆರಳಿ ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರು ನಿರುಪಾಲಾಗುತ್ತಿದ್ದಂತೆಯೇ ಅಲ್ಲೇ ಇದ್ದ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಹುಬ್ಬಳ್ಳಿ ಮೂಲದ ಮಂಜು ಹಿರೇಮಠ್(23) ರಾಜು (21) ರಕ್ಷೆಣೆಗೊಳಗಾದವರು. ಭಾನುವಾರ ರಜೆ ಇದ್ದುದರಿಂದ ಹುಬ್ಬಳ್ಳಿಯಿಂದ ಸ್ನೇಹಿತರೊಂದಿಗೆ ಮುರಡೇಶ್ವರಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭ ಈಜಲೆಂದು ಸಮುದ್ರಕ್ಕೆ ಇಳಿದಾಗ ದೊಡ್ಡ ಅಲೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು ಲೈಫ್ ಗಾರ್ಡ್ ಸುಬ್ರಹ್ಮಣ್ಯ ಹರಿಕಾಂತ್ ರಕ್ಷಣೆ ಮಾಡಿದ್ದಾರೆ.

  • ಈಜಲು ಹೋಗಿ ಮೂವರು ಬಾಲಕರು ನೀರುಪಾಲು

    ಈಜಲು ಹೋಗಿ ಮೂವರು ಬಾಲಕರು ನೀರುಪಾಲು

    ಚಿತ್ರದುರ್ಗ: ಈಜಲು ಕೆರೆಗೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ.

    ಹೆಗ್ಗೆರೆ ಗ್ರಾಮದ ಕೆಂಪರಾಜ್ (14), ಕಾಂತರಾಜ್ (14) ಹಾಗು ಮಹಾಂತೇಶ್ ನೀರುಪಾಲಾದ ಬಾಲಕರು. ಶುಕ್ರವಾರ ಮಧ್ಯಾಹ್ನ ಈಜಲು ತೆರಳಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಅಗ್ನಿಶಾಮಕದಳ ಹಾಗೂ ಹೊಸದುರ್ಗ ಪೊಲೀಸರು ಶವಗಳಿಗೆ ಶೋಧಕಾರ್ಯ ನಡೆಸಿದ್ದು, ಇಂದು ಬೆಳಗ್ಗೆ ಮೂವರು ಬಾಲಕರ ಶವ ಪತ್ತೆಯಾಗಿವೆ. ಕೆರೆಯ ಅಂಗಳದಲ್ಲಿ  ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.

    ಈ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

  • ಕೈ, ಕಾಲು ಇಲ್ಲದಿದ್ರೂ ಸೂಪರ್ ಸ್ವಿಮ್ಮರ್- ರಷ್ಯಾದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ತಿಪ್ಪಣ್ಣ

    ಕೈ, ಕಾಲು ಇಲ್ಲದಿದ್ರೂ ಸೂಪರ್ ಸ್ವಿಮ್ಮರ್- ರಷ್ಯಾದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ತಿಪ್ಪಣ್ಣ

    ಬಳ್ಳಾರಿ: ದೇಹದ ಎಲ್ಲಾ ಅಂಗಗಳು ಸರಿಯಾಗಿದ್ರೂ ಕೂಡ ಕೆಲವರಿಗೆ ಹತ್ತು ನಿಮಿಷ ಈಜಾಡೋದು ಕಷ್ಟ. ಆದ್ರೆ ಇಲ್ಲೊಬ್ಬರು ಕೈ ಕಾಲು ಇಲ್ಲದಿದ್ರೂ ಒಂದು ಗಂಟೆಗೂ ಹೆಚ್ಚು ಕಾಲ ಈಜಾಡ್ತಾರೆ. ಈ ವಿಕಲಚೇತನ ಈಜುಪಟು ರಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

    ಹೌದು. ಇವರ ಹೆಸರು ತಿಪ್ಪಣ್ಣ. ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನವರು. ಜೆಸ್ಕಾಂನಲ್ಲಿ ಲೈನ್‍ಮನ್ ಆಗಿದ್ದಾರೆ. ಹೆಂಡತಿ ಹಾಗೂ ಇಬ್ಬರು ಮಕ್ಕಳ ಸಂಸಾರವಿದೆ. 7 ವರ್ಷಗಳ ಹಿಂದೆ ಕೆಲಸ ಮಾಡುವಾಗ ವಿದ್ಯುತ್ ಅವಘಡದಲ್ಲಿ ಎರಡೂ ಕಾಲು ಮತ್ತು ಒಂದು ಕೈ ಕಳೆದುಕೊಂಡ್ರು. ಮತ್ತೊಂದು ಕೈಯನ್ನು ಜೋಡಿಸಿದ್ದಾರೆ. ಆದ್ರೆ ಅದು ಶಕ್ತಿಹೀನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಿಪ್ಪಣ್ಣ ಅವರು ಎದೆಗುಂದದೇ ದೊಡ್ಡ ಈಜುಪಟುವಾಗಿ ಬೆಳೆದಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಬನಶಂಕರಿ ಬಳಿಯ ಜ್ಯೋತಿ ಕೇಂದ್ರಿಯ ಶಾಲೆಯಲ್ಲಿ ಈಜು ತರಬೇತಿ ಪಡೆಯುತ್ತಿದ್ದಾರೆ. 2015ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವ ವಿಕಲಚೇತನರ ಈಜು ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿ ಕಂಚಿನ ಪದಕ ಗೆದ್ದಿದ್ದಾರೆ.

    ತಿಪ್ಪಣ್ಣ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಈ ವರ್ಷ ನಡೆಯಲಿರುವ ವಿಶ್ವ ವಿಕಲಚೇತನರ ಕ್ರೀಡಾ ಸ್ಪರ್ಧೆಯಲ್ಲಿ ಭಾರತದ ಪ್ಯಾರಾ ಈಜುಪಟುವಾಗಿ ಭಾಗವಹಿಸಲಿದ್ದಾರೆ. ತಿಪ್ಪಣ್ಣ 2020ರಲ್ಲಿ ನಡೆಯುವ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ. ಇವರ ಕನಸು ನನಸಾಗಲಿ ಅನ್ನೋದು ನಮ್ಮ ಆಶಯ.