Tag: Swimmers

  • ಮಾಂಜ್ರಾನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

    ಮಾಂಜ್ರಾನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

    ಬೀದರ್: ಸ್ನೇಹಿತರ ಜೊತೆ ಈಜಲು ಹೋಗಿ ಮಾಂಜ್ರಾನದಿ ಪಾಲಾಗಿದ್ದ ಯುವಕನ ಮೃತದೇಹ ತಡರಾತ್ರಿ ಪತ್ತೆಯಾಗಿದೆ.

    ಪರಮೇಶ್ವರ್ ಬೋರಾಳೆ (22) ಈಜಲು ಹೋಗಿದ್ದ ಯುವಕ. ನೀರಿನಲ್ಲಿ ಮುಳಗಿ ನಿನ್ನೆ ನಾಪತ್ತೆಯಾಗಿದ್ದು ತಡರಾತ್ರಿ ಮೃತದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜುಗಾರರು ಹಲವು ಗಂಟೆಗಳಿಂದ ಸತತವಾಗಿ ಶೋಧ ಕಾರ್ಯ ಮಾಡಿದ್ದು, ತಡರಾತ್ರಿ ಯುವಕನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್: ದೂರು ದಾಖಲು

    ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ ಎಂ ಗ್ರಾಮದಲ್ಲಿ ಘಟನೆ ನಡೆದಿದೆ. ಒಂದು ವೇಳೆ ಮೃತದೇಹ ಸಿಗದೆ ಇದ್ದಿದ್ದರೆ, ಯುವಕನ ಹುಡುಕಾಟಕ್ಕೆ ಇಂದು ಎನ್.ಡಿ.ಆರ್.ಎಫ್ ತಂಡ ಭಾಲ್ಕಿಗೆ ಬರುವ ಸಾಧ್ಯತೆ ಇತ್ತು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್: ದೂರು ದಾಖಲು

    ಈ ಕುರಿತು ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತತ ಶೋಧ ಕಾರ್ಯ ಮಾಡಿ ಯುವಕನ ಮೃತದೇಹ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಬೆಂಗಳೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ – ನಾಲ್ವರು ಈಜುಪಟುಗಳು ಅರೆಸ್ಟ್

    ಬೆಂಗಳೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ – ನಾಲ್ವರು ಈಜುಪಟುಗಳು ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯ ಕಾಮುಕರ ಗ್ಯಾಂಗ್ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಾರ್ಚ್ 24 ರಾತ್ರಿ ಅತ್ಯಾಚಾರ ನಡೆದಿದ್ದು,  ಸಂತ್ರಸ್ತ ಯುವತಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ದೆಹಲಿ ಮೂಲದ ನಾಲ್ವರು ಕಾಮುಕರನ್ನು ಬಂಧಿಸಿದ್ದಾರೆ.

    ರಜತ್, ಶಿವರಾಣ್, ದೇವ್ ಸರೋಯಿ ಹಾಗೂ ಯೋಗೇಶ್ ಕುಮಾರ್ ಬಂಧಿತ ಆರೋಪಿಗಳು. ಬೆಂಗಳೂರಿನಲ್ಲಿ ಸಂತ್ರಸ್ತೆ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದರು. ಡೇಟಿಂಗ್ ಆ್ಯಪ್‌ನಲ್ಲಿ ಯುವತಿಗೆ ಆರೋಪಿ ರಜತ್ ಪರಿಚಯವಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರು ನಂಬರ್‌ಗಳನ್ನು ಶೇರ್ ಮಾಡಿಕೊಂಡು ಸಂಪರ್ಕದಲ್ಲಿದ್ದರು. ಇದನ್ನೂ ಓದಿ: ಬ್ಯಾಂಕ್, ಎಟಿಎಂ ಬಾಗಿಲಿನಲ್ಲಿ ಮಲ ವಿಸರ್ಜನೆ ಮಾಡಿ ವಿಕೃತಿ

     

    STOP RAPE

    ಕಳೆದ ವಾರ ರಜತ್ ಯುವತಿಗೆ ಊಟಕ್ಕೆಂದು ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿದ್ದ. ಬಳಿಕ ಹತ್ತಿರದಲ್ಲಿದ್ದ ತನ್ನ ರೂಂ ಗೂ ಕರೆದುಕೊಂಡು ಹೋಗಿದ್ದಾನೆ. ರೂಂನಲ್ಲಿ ರಜತ್ ಸ್ನೇಹಿತರು ಸೇರಿ ಎಲ್ಲರು ಕುಡಿದು ಊಟ ಮಾಡಿದ್ದರು. ಕುಡಿದ ಅಮಲಿನಲ್ಲಿ ರಜತ್ ಮೊದಲು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ರಜತ್ ಸ್ನೇಹಿತರು ಕೂಡ ಯುವತಿ ಮೇಲೆ ಒಬ್ಬರ ನಂತರ ಒಬ್ಬರು ಅತ್ಯಾಚಾರ ಎಸಗಿದ್ದಾರೆ.

    ಸಂತ್ರಸ್ತೆ ಘಟನೆಯ ಬಗ್ಗೆ ದೂರು ಕೊಡುವುದಾಗಿ ಆರೋಪಿಗಳಿಗೆ ಖಾತ್ರಿಯಾಗುತ್ತಿದ್ದಂತೆ ದೂರು ಕೊಡದಂತೆ ಮನವೊಲಿಸಿದ್ದಾರೆ. ಯುವತಿ ಆರೋಪಿಗಳ ಮಾತಿಗೆ ಮನ್ನಣೆ ಕೊಡದೆ ದೂರು ಕೊಟ್ಟಿದ್ದಾಳೆ. ಈ ವಿಚಾರ ತಿಳಿದು ಆರೋಪಿಗಳು ದಿಕ್ಕಾಪಾಲಾಗಿದ್ದಾರೆ.

    ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಂತೆ ಆರೋಪಿಗಳು ದೆಹಲಿಗೆ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಕಾರ್ಯಪ್ರವೃತ್ತರಾಗಿ ಬೆಂಗಳೂರಿನ ಉಪ್ಪಾರ್ ಪೇಟೆ ಲಾಡ್ಜ್ ಹಾಗೂ ಏರ್ಪೋರ್ಟ್ನಲ್ಲಿ ಅಡಗಿದ್ದವರನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೈದಿ

    ಆರೋಪಿಗಳಾದ ರಜತ್, ಶಿವರಾಣ್, ದೇವ್ ಸರೋಯಿ ಹಾಗೂ ಯೊಗೇಶ್ ಕುಮಾರ್ ರಾಷ್ಟ್ರೀಯ ಈಜುಪಟುಗಳಾಗಿದ್ದು, ರಜತ್ ಕಳೆದ ಮೂರು ತಿಂಗಳಿಂದ ಟ್ರೈನಿಂಗ್‌ಗಾಗಿ ಸಂಜಯ್ ನಗರದಲ್ಲಿ ಉಳಿದುಕೊಂಡಿದ್ದ. ಉಳಿದ ಮೂವರು ಆರೋಪಿಗಳು 25 ದಿನಗಳ ಹಿಂದೆಯಷ್ಟೇ ಈಜು ತರಬೇತಿಗೆ ಬೆಂಗಳೂರಿಗೆ ಬಂದು ರಜತ್ ಜೊತೆ ವಾಸವಾಗಿದ್ದರು.

    ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಆರೋಪಿಗಳು ಅತ್ಯಾಚಾರ ಎಸಗಿರುವ ಬಗ್ಗೆ ತಪ್ಪೋಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

  • ಬಾಗಲಕೋಟೆಯಲ್ಲಿ ರೆಡಿಯಾಗ್ತಿದೆ ಅಂತಾರಾಷ್ಟ್ರೀಯ ಈಜುಕೊಳ – ಈಜು ಪ್ರಿಯರಲ್ಲಿ ಸಂತಸ

    ಬಾಗಲಕೋಟೆಯಲ್ಲಿ ರೆಡಿಯಾಗ್ತಿದೆ ಅಂತಾರಾಷ್ಟ್ರೀಯ ಈಜುಕೊಳ – ಈಜು ಪ್ರಿಯರಲ್ಲಿ ಸಂತಸ

    -ಗುಣಮಟ್ಟದ ಈಜುಕೊಳಕ್ಕೆ ನವೀಕರಣ ಭಾಗ್ಯ

    ಬಾಗಲಕೋಟೆ: ಬೆಂಗಳೂರು ಬಿಟ್ಟರೆ ಬಾಗಲಕೋಟೆ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಿಸಲಾಗಿತ್ತು. ನಿರ್ವಹಣೆ ಕೊರತೆಯಿಂದ ಬಂದ್ ಆಗಿದ್ದ ಈಜುಕೊಳಕ್ಕೆ ಇದೀಗ ನವೀಕರಣ ಭಾಗ್ಯ ದೊರೆತಿದ್ದು, ಈಜುಪ್ರಿಯರಲ್ಲಿ ಸಂತಸ ಮೂಡಿಸಿದೆ.

    ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ 2006ರಲ್ಲಿ 1 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಿಸಲಾಗಿತ್ತು. ಬಾಗಲಕೋಟೆಯಲ್ಲಿನ ಈಜುಕೊಳ ನಿರ್ವಹಣೆ ಇಲ್ಲದೆ ಹಾಗೂ ಅತೀ ಆಳವಿರುವುದರಿಂದ ಬಂದ್ ಆಗಿತ್ತು. ಈಜುಕೊಳದಲ್ಲಿ ನೀರು ಸೋರಿಕೆ, ಜೊತೆಗೆ 38 ಲಕ್ಷ ಲೀಟರ್ ನೀರು ಬೇಕಾಗುತ್ತಿತ್ತು. ಇದರಿಂದ ಈಜುಕೊಳ ಬಂದ್ ಮಾಡಲಾಗಿತ್ತು. ಈಜುಕೊಳ ದುರಸ್ಥಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಇದನ್ನೂ ಓದಿ:ಮಳೆನೀರು ಕೊಯ್ಲು ಅಳವಡಿಸಿಕೊಳ್ಳದಿದ್ರೆ ಭವಿಷ್ಯವಿಲ್ಲ: ಜಲತಜ್ಞ ಜೋಸೆಫ್ ರೆಬೆಲ್ಲೋ

    ಬಿಟಿಡಿಎ ಅಧ್ಯಕ್ಷರಾಗಿರುವ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಸ್ಪಂದಿಸಿ ಈಜುಕೊಳ ದುರಸ್ಥಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಈಜುಕೊಳಕ್ಕೆ ಕಾಯಕಲ್ಪ ನೀಡಲಾಗುತ್ತಿದ್ದು, ಈಜುಕೊಳ ಆಳ ಕಡಿಮೆ ಮಾಡಿ, ಪ್ರತ್ಯೇಕವಾಗಿ ಚಿಕ್ಕ ಮಕ್ಕಳಿಗಾಗಿ ಈಜುಕೊಳ ನಿರ್ಮಾಣವಾಗುತ್ತಿದೆ. ಗ್ಯಾಲರಿ ನಿರ್ಮಿಸಿದ್ದು, ಈಜುಕೊಳದಲ್ಲಿ ಮಿಂದೆದ್ದ ಬಳಿಕ ಬಟ್ಟೆ ಬದಲಾಯಿಸಲು ಸ್ತ್ರೀಯರು, ಪುರುಷರಿಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಲಾಗುತ್ತಿದೆ. ನಿರ್ಮಿತಿ ಕೇಂದ್ರದ ಅಧಿಕಾರಿಗಳು ನವೀಕರಣ ಕಾಮಗಾರಿ ಆರಂಭಿಸಿದ್ದಾರೆ.

    ಕ್ರೀಡಾಪಟುಗಳು ಫಿಟ್ನೆಸ್‍ಗಾಗಿ ಈಜುವುದು, ಜೊತೆಗೆ ಈಜುಪ್ರಿಯರಿಗೆ ಈಜುಗೊಳ ಅನುಕೂಲವಾಗಲಿದೆ. ಇನ್ನೂ ಬಾಗಲಕೋಟೆ ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈಜುಗೊಳ ದುರಸ್ಥಿ ಸಂಬಂಧ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದೆ. ಬರುವ ಬೇಸಿಗೆಯಲ್ಲಿ ಈಜುಪ್ರಿಯರಿಗೆ, ಕ್ರೀಡಾಪಟುಗಳಿಗೆ ಈಜುಕೊಳದಲ್ಲಿ ಈಜುವುದಕ್ಕೆ ಅವಕಾಶ ಸಿಗಲಿದೆ. ಈಜು ಪ್ರಿಯರು, ಕ್ರೀಡಾಪಟುಗಳು ಬಾಗಲಕೋಟೆಯಲ್ಲಿನ ಖಾಸಗಿ ಈಜುಕೊಳಕ್ಕೆ ಹೋಗುತ್ತಿದ್ದರು. ಇನ್ಮುಂದೆ ಬರುವ ಬೇಸಿಗೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಈಜುಕೊಳ ಎಂಜಾಯ್ ಮಾಡುವುದಕ್ಕೆ ಮುಕ್ತ ಅವಕಾಶ ಸಿಗಲಿದೆ. ಇದರಿಂದ ಈಜು ಪ್ರಿಯರು ಕ್ರೀಡಾಪಟುಗಳಲ್ಲಿ ಸಂತಸ ಮೂಡಿಸಿದೆ.ಇದನ್ನೂ ಓದಿ:ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ನಮ್ಮ ಜವಾಬ್ದಾರಿ: ಶಶಿಕಲಾ ಜೊಲ್ಲೆ