Tag: Sweets

  • ಮೋದಕ ಅಷ್ಟೇ ಅಲ್ಲ ಈ ಸಿಹಿ ತಿಂಡಿಗಳೂ ವಿನಾಯಕನಿಗೆ ತುಂಬಾ ಇಷ್ಟ!

    ಮೋದಕ ಅಷ್ಟೇ ಅಲ್ಲ ಈ ಸಿಹಿ ತಿಂಡಿಗಳೂ ವಿನಾಯಕನಿಗೆ ತುಂಬಾ ಇಷ್ಟ!

    ಸಾಮಾನ್ಯವಾಗಿ ಗಣೇಶ ಚತುರ್ಥಿ ಬಂತೆಂದರೆ ಸಾಕು ಗಣೇಶನಿಗೆ ಇಷ್ಟವಾಗುವ ಮೋದಕವನ್ನು ತಯಾರಿಸುತ್ತಾರೆ. ಆದರೆ ಮೋದಕದ ಹೊರತಾಗಿಯೂ ಇನ್ನು ಕೆಲವು ಸಿಹಿ ತಿಂಡಿಗಳು ವಿಘ್ನ ವಿನಾಶಕನಿಗೆ ಬಲು ಇಷ್ಟ.

    ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಈ ಗಣೇಶ ಚತುರ್ಥಿಯಂದು ಮೋದಕದ ಜೊತೆಗೆ ಈ ಕೆಲವು ಸಿಹಿ ತಿಂಡಿಗಳನ್ನು ಮಾಡಿ ವಿನಾಯಕನಿಗೆ ಅರ್ಪಿಸಿ.

    ಹೋಳಿಗೆ:
    ಗಣೇಶನಿಗೆ ಮತ್ತೊಂದು ಪ್ರಿಯವಾದ ಭೋಜನವೆಂದರೆ ಅದು ಹೋಳಿಗೆ. ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಕಡಲೆ ಬೇಳೆಯನ್ನು ಚೆನ್ನಾಗಿ ಬೇಯಿಸಿ ಅದಕ್ಕೆ ಬೆಲ್ಲವನ್ನು ಸೇರಿಸಿ ರುಬ್ಬಿಕೊಳ್ಳಲಾಗುತ್ತದೆ. ಬಳಿಕ ಚಪಾತಿ ಮಾಡುವ ಹಾಗೆ ಚಿಕ್ಕದಾಗಿ ಉಂಡೆ ಮಾಡಿಕೊಂಡು ಅದರೊಳಗೆ ಬೇಳೆ ಮಿಶ್ರಣವನ್ನು ಸೇರಿಸಿ ವೃತಾಕಾರದಲ್ಲಿ ಮಾಡಿಕೊಳ್ಳಲಾಗುತ್ತದೆ. ಬಳಿಕ ಅದನ್ನು ಕಾದ ತವೆಯ ಮೇಲೆ ಬೇಯಿಸಿಕೊಂಡರೆ ಹೋಳಿಗೆ ತಯಾರಾಗುತ್ತದೆ.

    ಮೋತಿಚೂರ್ ಲಡ್ಡು:
    ಈ ಲಡ್ಡು ಕೂಡ ಗಣೇಶನಿಗೆ ಅತ್ಯಂತ ಇಷ್ಟವಾದ ನೈವೇದ್ಯ. ಕಡಲೆ ಹಿಟ್ಟು ಅಥವಾ ಬೇಸನ್ ಹಿಟ್ಟು ಬಳಸಿ ಇದನ್ನು ತಯಾರಿಸಲಾಗುತ್ತದೆ. ಸಕ್ಕರೆ ಪಾಕದಲ್ಲಿ ಬೇಸನ್ ಅಥವಾ ಕಡಲೆ ಹಿಟ್ಟು ಹಾಕಿ, ಬಳಿಕ ರವೆಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಲಾಗುತ್ತದೆ. ಅದಕ್ಕೆ ಕೇಸರಿ ಬಣ್ಣ ಬರುವಂತೆ ಬಣ್ಣ ಹಾಕಿ ಚೆನ್ನಾಗಿ ಕಲಸಿ ಉಂಡೆ ಮಾಡಿಕೊಳ್ಳಲಾಗುತ್ತದೆ.

    ತೆಂಗಿನ ಕಾಯಿ ಲಡ್ಡು:
    ಹೆಚ್ಚಿನ ಕಡೆ ತೆಂಗಿನಕಾಯಿ ಲಡ್ಡುವನ್ನು ಗಣೇಶನಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಒಣಗಿದ ತೆಂಗಿನ ಕಾಯಿ ತುರಿ, ಏಲಕ್ಕಿ ಪುಡಿ, ತುಪ್ಪ ಹಾಗೂ ಪುಡಿ ಸಕ್ಕರೆಯನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ.

    ಶ್ರೀಖಂಡ:
    ಈ ಸಿಹಿ ಖಾದ್ಯವನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ. ಅದೊಂದು ಪ್ರಸಿದ್ಧ ಸಿಹಿ ತಿಂಡಿಯು ಹೌದು. ಮೊದಲಿಗೆ ಮೊಸರನ್ನು ಒಂದು ತೆಳುವಾದ ಬಟ್ಟೆಗೆ ಹಾಕಿ ಚೆನ್ನಾಗಿ ನೀರನ್ನು ಬೇರ್ಪಡಿಸಿಕೊಳ್ಳಬೇಕು. ಬಳಿಕ ಈ ಮೊಸರಿಗೆ ಪುಡಿ ಸಕ್ಕರೆಯನ್ನು ಹಾಕಿಕೊಳ್ಳಬೇಕು. ಅನಂತರ ಇದಕ್ಕೆ ಏಲಕ್ಕಿ ಪುಡಿ ಹಾಕಿ, ನಂತರ ಸಣ್ಣದಾಗಿ ಹೆಚ್ಚಿದ ಬಾದಾಮಿ ಹಾಗೂ ಪಾಸ್ತಾವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು. ಆಗ ಶ್ರಿಖಂಡ ತಯಾರಾಗುತ್ತದೆ.

    ತೆಂಗಿನಕಾಯಿ ಬರ್ಫಿ:
    ಹೆಸರೇ ಸೂಚಿಸುವಂತೆ ತೆಂಗಿನಕಾಯಿ ತುರಿಯನ್ನು ಬಳಸಿ ಈ ಬರ್ಫಿಯನ್ನು ತಯಾರಿಸಲಾಗುತ್ತದೆ. ಒಣಗಿದ ತೆಂಗಿನ ಕಾಯಿ ತುರಿಗೆ ಏಲಕ್ಕಿ ಪುಡಿ, ಸ್ವಲ್ಪ ರೋಜ್ ವಾಟರ್, ತುಪ್ಪ, ಸಕ್ಕರೆ ಹಾಗೂ ಕೆನೆ ಹಾಲು ಸೇರಿಸಿ ಈ ತೆಂಗಿನಕಾಯಿ ಬರ್ಫಿ ತಯಾರಿಸಲಾಗುತ್ತದೆ.

    ಇಷ್ಟೇ ಅಲ್ಲದೇ ಇನ್ನೂ ಹಲವು ಸಿಹಿ ತಿನಿಸುಗಳು ಗಣೇಶನಿಗೆ ತುಂಬಾ ಇಷ್ಟ. ಈ ಬಾರಿಯ ಗಣೇಶ ಚತುರ್ಥಿಗೆ ಈ ಸಿಹಿ ತಿಂಡಿಗಳನ್ನು ಅರ್ಪಿಸಿ, ವಿಘ್ನ ವಿನಾಶಕನಲ್ಲಿ ಭಕ್ತಿಯಿಂದ ಪಾರ್ಥಿಸಿ

  • ಮೈಸೂರು ಪಾಕ್, ಜಿಲೇಬಿ ಪ್ರಿಯರೇ ಹುಷಾರ್ – ಕ್ಯಾನ್ಸರ್, ಡಯಾಬಿಟಿಸ್‌ಗೆ ಕಾರಣವಾಗ್ತಿದ್ಯಾ ಸಿಹಿತಿಂಡಿಗಳು?

    ಮೈಸೂರು ಪಾಕ್, ಜಿಲೇಬಿ ಪ್ರಿಯರೇ ಹುಷಾರ್ – ಕ್ಯಾನ್ಸರ್, ಡಯಾಬಿಟಿಸ್‌ಗೆ ಕಾರಣವಾಗ್ತಿದ್ಯಾ ಸಿಹಿತಿಂಡಿಗಳು?

    – ಆಹಾರ ಇಲಾಖೆಯಿಂದ 10ಕ್ಕೂ ಅಧಿಕ ಸಿಹಿ ತಿಂಡಿಗಳು ಟೆಸ್ಟಿಂಗ್‌ಗೆ ರವಾನೆ

    ಬೆಂಗಳೂರು: ಗೋಬಿ, ಪಾನಿಪುರಿ, ಕಬಾಬ್, ಪನ್ನೀರ್ ಆಯ್ತು. ಇದೀಗ ಆಹಾರ ಇಲಾಖೆ ಸಿಹಿ ತಿಂಡಿಗಳನ್ನು ಪರೀಕ್ಷೆಗೊಳಪಡಿಸಿ ಏನೆಲ್ಲಾ ಕಲಬೆರಿಕೆ ಮಾಡಲಾಗುತ್ತಿದೆ ಹಾಗೂ ಕ್ಯಾನ್ಸರ್, ಡಯಾಬಿಟಿಸ್‌ಗೆ ಸಿಹಿತಿಂಡಿಗಳು ಕಾರಣವಾಗುತ್ತಿದ್ಯಾ ಎನ್ನುವುದನ್ನು ಪತ್ತೆ ಹಚ್ಚಲು ಹೊರಟಿದೆ.

    ಹೌದು, ಜನರು ಬಾಯಿ ಚಪ್ಪರಿಸಿಕೊಂಡು ತಿನ್ನುವ ಸ್ಟೀಟ್ಸ್‌ ಮೇಲೆ ಇದೀಗ ಆಹಾರ ಇಲಾಖೆ ಸಮರ ಸಾರಲು ಸಜ್ಜಾಗಿದ್ದು, 10ಕ್ಕೂ ಅಧಿಕ ಸಿಹಿ ತಿಂಡಿಗಳನ್ನು ಟೆಸ್ಟಿಂಗ್‌ಗೆ ರವಾನಿಸಿದೆ. ಯುಗಾದಿ ಹಬ್ಬ ಬಂದರೆ ಸಾಕು ಜನರು ಸಿಹಿ ತಿಂಡಿಗಳ ಖರೀದಿಗೆ ಮುಂದಾಗುತ್ತಾರೆ. ಹೀಗಾಗಿ ಹಬ್ಬ ಹತ್ತಿರವಾಗುತ್ತಿದ್ದಂತೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.ಇದನ್ನೂ ಓದಿ:ಟಾರ್ಗೆಟ್‌ ರಾಜಣ್ಣ – ಹೈಕಮಾಂಡ್‌ಗೆ ದೂರು ನೀಡಲು ಮುಂದಾದ ಸಿಎಂ ಆಪ್ತರು

    ಮೈಸೂರು ಪಾಕ್, ಮಿಕ್ಸ್ಚ್‌ರ್‌, ಕಾಜುಬರ್ಫಿ, ಜಿಲೇಬಿ, ಜಹಂಗೀರ್‌ನಲ್ಲಿ ಕಲರಿಂಗ್, ಕಲಬೆರಕೆ ಮತ್ತು ಸಕ್ಕರೆ ಪ್ರಮಾಣ ಹೆಚ್ಚಳದ ಬಗ್ಗೆ ಆಹಾರ ಸುರಕ್ಷತಾ ಇಲಾಖೆಗೆ ದೂರು ಹೋಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸುರಕ್ಷತಾ ಇಲಾಖೆ ಅಧಿಕಾರಿಗಳು ಸಿಹಿ ತಿಂಡಿಗಳ ಮಾದರಿಗಳನ್ನು ಟೆಸ್ಟ್‌ಗೆ ರವಾನಿಸಿದ್ದಾರೆ.

    ಸುಮಾರು 10ಕ್ಕೂ ಹೆಚ್ಚು ಸಿಹಿ ತಿಂಡಿಗಳನ್ನ ಟೆಸ್ಟಿಂಗ್‌ಗೆ ಕಳುಹಿಸಲಾಗಿದೆ. ಈ ಸ್ಟೀಟ್‌ಗಳಲ್ಲಿ ಕಲಬೆರಕೆ, ಕಲರಿಂಗ್ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಕ್ಯಾನ್ಸರ್, ಡಯಾಬಿಟಿಸ್‌ಗೆ ಕಾರಣ ಆಗುತ್ತಿದೆ ಎಂದು ಈ ಬಗ್ಗೆ ಆಹಾರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕಲರಿಂಗ್‌ನಿಂದ ಕ್ಯಾನ್ಸರ್, ಹೆಪಟೈಟಿಸ್ ಸಮಸ್ಯೆ ಆಗಿ ದೇಹಕ್ಕೆ ಹಾನಿಯಾಗಲಿದೆ. ಜೊತೆಗೆ ಸಕ್ಕರೆ ಪ್ರಮಾಣ ಇದ್ದರೆ ಅದು ಡಯಾಬಿಟಿಸ್‌ಗೆ ಕಾರಣ ಆಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ.

    1. ಜಿಲೇಬಿ, ಮಿಕ್ಸ್ಚ್‌ರ್‌ಗಳಲ್ಲಿ ಸನ್ ಸೆಟ್ ಯಲ್ಲೋ ಕಲರ್ ಬಳಕೆ ಮಾಡಲಾಗುತ್ತದೆ. ಇದು ಕ್ಯಾನ್ಸರ್ ಕಾರಕ.
    2. ಸಿಹಿ ತಿಂಡಿಗಳಲ್ಲೂ ಅಪಾಯಕಾರಿ ರೋಡೋಮೆನ್ ಬಿ ಅಂಶ ಇರುತ್ತದೆ
    3. ಕಾರ್ಸೋನೋಜೆನಿಕ್ ಎನ್ನುವ ಕ್ಯಾನ್ಸರ್ ಕಾರಕ ಅಪಾಯಕಾರಿ
    4. ಕೆಲ ಸ್ವೀಟ್‌ಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಳ ಇದ್ದು ಡಯಾಬಿಟಿಸ್‌ಗೆ ಕಾರಣ
    5. ಬಳಸುವ ಅಡುಗೆ ಎಣ್ಣೆ ಕೂಡ ಹೈಜೆನಿಕ್ ಇರಲ್ಲ

    ಕಲಬೆರಕೆ, ಕಲರಿಂಗ್, ಸಕ್ಕರೆ ಪ್ರಮಾಣ ಹೆಚ್ಚಳ ಸಂಬಂಧ ಆಹಾರ ಸುರಕ್ಷತಾ ಇಲಾಖೆ (Department of Food Safety) ಅಧಿಕಾರಿಗಳು 10 ಸಿಹಿತಿಂಡಿಗಳನ್ನು ಲ್ಯಾಬ್‌ಗೆ ರವಾನಿಸಿದ್ದು, ವರದಿಯಲ್ಲಿ ಏನಿರಲಿದೆ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ:ಸ್ನೇಹಿತೆಯನ್ನ ಭೇಟಿಯಾಗಲು ಬುರ್ಖಾ ಧರಿಸಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿದ ಯುವಕ

  • ಲಿಂಪಿ ವೈರಸ್ ಕಾಟ: ಹಾಲಿನ ಸಂಗ್ರಹ ಕುಸಿತ – ಸಿಹಿ ತಿಂಡಿಗಳ ಬೆಲೆ ದಿಢೀರ್ ಏರಿಕೆ

    ಲಿಂಪಿ ವೈರಸ್ ಕಾಟ: ಹಾಲಿನ ಸಂಗ್ರಹ ಕುಸಿತ – ಸಿಹಿ ತಿಂಡಿಗಳ ಬೆಲೆ ದಿಢೀರ್ ಏರಿಕೆ

    ಜೈಪುರ: ಮಾರಣಾಂತಿಕ ಲಿಂಪಿ ವೈರಸ್‌ನಿಂದಾಗಿ (Lumpy Virus Disease) ರಾಜಸ್ಥಾನದಲ್ಲಿ (Rajasthan) ಹಾಲಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹಾಲಿನಿಂದ ತಯಾರಿಸುವ ಸಿಹಿ ತಿನಿಸುಗಳ (Milk Production) ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

    ಲಿಂಪಿ ವೈರಸ್ ಚರ್ಮರೋಗದಿಂದ (Skin Diseases) ಪ್ರತಿದಿನ 600 ರಿಂದ 700 ಹಸುಗಳು ಸಾಯುತ್ತಿದ್ದು, ಇದರಿಂದ ಹಾಲಿನ ಸಂಗ್ರಹ ಪ್ರಮಾಣ ಶೇ.15 ರಿಂದ 18ರಷ್ಟು ಕಡಿಮೆಯಾಗಿದೆ.

    ಈ ಕುರಿತು ಜೈಪುರ ಡೈರಿ ಫೆಡರೇಶನ್‌ನ ಅಧ್ಯಕ್ಷ ಓಂ. ಪೂನಿಯಾ ಮಾತನಾಡಿ, ದಿನನಿತ್ಯದ ಹಾಲಿನ ಸಂಗ್ರಹ ಪ್ರಮಾಣವು 14 ಲಕ್ಷದಿಂದ 12 ಲಕ್ಷ ಲೀಟರ್‌ಗಳಿಗೆ ಇಳಿಕೆಯಾಗಿದೆ. ಸದ್ಯ ಹಾಲು ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಆದರೆ ಪ್ರಾಣಿಗಳ ಸಾವಿನ ಸಂಖ್ಯೆ ಹೀಗೇ ಮುಂದುವರಿದರೆ, ಬಿಕ್ಕಟ್ಟು ಎದುರಾಗಬಹುದು. ಕೋವಿಡ್ ಸಮಯಕ್ಕಿಂತಲೂ ಕೆಟ್ಟ ಪರಿಸ್ಥಿತಿಯನ್ನು ನಾವೀಗ ಎದುರಿಸುತ್ತಿದ್ದೇವೆ. ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದ್ದಂತೆ ಸಿಹಿ ತಿನಿಸುಗಳ ಬೆಲೆ ದುಬಾರಿಯಾಗುತ್ತಿದೆ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ 11 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಮಾರಕ ವೈರಸ್‌ಗೆ ತುತ್ತಾಗಿದ್ದು, ಈಗಾಗಲೇ 51 ಸಾವಿರ ಜಾನುವಾರುಗಳು ಮೃತಪಟ್ಟಿವೆ. ಉಳಿದವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದ್ದು, 12.32 ಲಕ್ಷ ಜಾನುವಾರುಗಳಿಗೆ ಗಾಟ್ ಪಾಕ್ಸ್ ಲಸಿಕೆ ವಿತರಣೆ ಮಾಡಲಾಗಿದೆ. ಇನ್ನೂ 16.22 ಲಕ್ಷ ಡೋಸ್ ಲಸಿಕೆಯನ್ನು ಸಂಗ್ರಹ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ

    ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ

    ಹಾಲಿನಿಂದ ಪೇಡ ತಯಾರಿಸುವುದು ಎಲ್ಲರಿಗೂ ಗೊತ್ತು. ಆದರೆ ಅದನ್ನು ಫಟಾಫಟ್ ಅಂತ ಕೇವಲ ಅರ್ಧಗಂಟೆಯಲ್ಲಿ ಮಾಡುವುದು ಹೇಗೆ ಗೊತ್ತಾ? ಇಲ್ಲಿ ಪೇಡ ತಯಾರಿಸಲು ಹಾಲಿನ ಬದಲು ಮಾರುಕಟ್ಟೆಯಲ್ಲಿ ಸಿಗುವ ಮಿಲ್ಕ್ ಮೇಡ್ ಅನ್ನು ಬಳಸಲಾಗುತ್ತದೆ. ಇದರಿಂದ ಪೇಡವನ್ನು ಅತ್ಯಂತ ಸುಲಭವಾಗಿ ಮಾಡಬಹುದು. ಸಿಹಿಯಾದ ಕೇಸರ್ ಪೇಡವನ್ನು ನೀವೂ ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 1 ಟೀಸ್ಪೂನ್
    ಮಿಲ್ಕ್ ಮೇಡ್ – 1 ಟಿನ್
    ಹಾಲಿನಪುಡಿ – ಒಂದೂವರೆ ಕಪ್
    ಕೇಸರಿ ಹಾಲು – 2 ಟೀಸ್ಪೂನ್(ಕೇಸರಿ ಎಸಳುಗಳನ್ನು ಬೆಚ್ಚಗಿನ ಹಾಲಿನಲ್ಲಿ ಸ್ವಲ್ಪ ಹೊತ್ತು ಇರಿಸಿ ಬಳಸಿ)
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಪಿಸ್ತಾ – 20 (ನಿಮಗಿಷ್ಟದ ಒಣ ಹಣ್ಣುಗಳನ್ನು ಬಳಸಬಹುದು)

    ಮಾಡುವ ವಿಧಾನ:
    * ಮೊದಲಿಗೆ ದಪ್ಪ ತಳದ ಅಥವಾ ನಾನ್ ಸ್ಟಿಕ್ ಪ್ಯಾನ್‌ನಲ್ಲಿ ತುಪ್ಪವನ್ನು ಬಿಸಿ ಮಾಡಿ.
    * ಈಗ ಮಿಲ್ಕ್ ಮೇಡ್ ಅನ್ನು ಹಾಕಿ, ಕಡಿಮೆ ಉರಿಯಲ್ಲಿ ಕಾಯಿಸಿ.
    * ಹಾಲಿನ ಪುಡಿಯನ್ನು ಸೇರಿಸಿ, ಗಂಟಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ.
    * ಮಿಶ್ರಣ ಸಂಪೂರ್ಣ ಕರಗಿ, ದಪ್ಪವಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ 2 ಟೀಸ್ಪೂನ್ ಬೆಚ್ಚಗಿನ ಹಾಲಿನಲ್ಲಿ ನೆನೆಸಿಟ್ಟಿದ್ದ ಕೇಸರಿಯನ್ನು ಹಾಕಿ.
    * ಮಿಶ್ರಣ ದಪ್ಪವಾಗುತ್ತಾ ತಳವನ್ನು ಬಿಡಲು ಪ್ರಾರಂಭಿಸುತ್ತದೆ.

    * ಸ್ವಾದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ, ಸ್ಟೌ ಆಫ್ ಮಾಡಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಹಿಟ್ಟು ಗಟ್ಟಿಯಾಗಬಹುದು. ಅದನ್ನು ಮೃದುವಾಗುವತನಕ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಹಿಟ್ಟನ್ನು ಒಂದೊಂದು ಟೀಸ್ಪೂನ್‌ನಷ್ಟು ಬೇರ್ಪಡಿಸಿ, ಉಂಡೆಗಳನ್ನಾಗಿ ಮಾಡಿ. ಕೈಗೆ ತುಪ್ಪವನ್ನು ಹಚ್ಚಿಕೊಂಡು ಉಂಡೆ ತಯಾರಿಸುವುದರಿಂದ ಬಿರುಕು ಬೀಳದಂತೆ ಮಾಡಬಹುದು.
    * ಈಗ ಉಂಡೆಯ ಮಧ್ಯದಲ್ಲಿ ಪಿಸ್ತಾ ಅಥವಾ ನಿಮಗಿಷ್ಟದ ಒಣ ಹಣ್ಣನ್ನು ಇಟ್ಟು ನಿಧಾನವಾಗಿ ಒತ್ತಿ.
    * ಇದೀಗ ಇನ್ಸ್ಟಂಟ್ ಕೇಸರಿ ಪೇಡ ತಯಾರಾಗಿದ್ದು, ಅದನ್ನು ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ ಫ್ರಿಡ್ಜ್‌ನಲ್ಲಿಟ್ಟರೆ 1 ವಾರಗಳವರೆಗೆ ಬೇಕೆಂದಾಗ ಸವಿಯಬಹುದು.

    Live Tv
    [brid partner=56869869 player=32851 video=960834 autoplay=true]

  • ದೀಪಾವಳಿಗೆ ಸ್ವೀಟ್ ಪಟಾಕಿ ತಯಾರಿಸಿದ ವ್ಯಾಪಾರಿಗಳು

    ದೀಪಾವಳಿಗೆ ಸ್ವೀಟ್ ಪಟಾಕಿ ತಯಾರಿಸಿದ ವ್ಯಾಪಾರಿಗಳು

    ಲಕ್ನೋ: ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡೆಯುವುದು ಸಾಮಾನ್ಯ. ಆದರೆ ಲಕ್ನೋದ ಬೇಕರಿ ವ್ಯಾಪಾರಿಗಳು ಪಟಾಕಿ ರೂಪದಲ್ಲೇ ಸ್ವೀಟ್‍ಗಳನ್ನು ತಯಾರಿಸಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

    ದೀಪಾವಳಿಗೆ ಹೆಚ್ಚು ಪಟಾಕಿ ಹೊಡೆಯುವುದರಿಂದ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯವಾಗುತ್ತದೆ. ಇದರ ಬದಲು ಪಟಾಕಿ ರೀತಿಯಲ್ಲೇ ಇರುವ ಈ ಸಿಹಿ ತಿನಿಸುಗಳನ್ನು ಕೊಂಡ ತಿನ್ನುವುದರಿಂದ ಪರಿಸರ ಮಾಲಿನ್ಯವನ್ನು ತಡೆಯಬಹುದು. ಇದರ ಜೊತೆಗೆ ಈ ಸಿಹಿ ತಿಂಡಿಗಳು ಆರೋಗ್ಯಕರ ಮತ್ತು ಶುಗರ್ ಫ್ರೀ ಆಗಿದ್ದು, ಎಲ್ಲರೂ ತಿನ್ನಬಹುದು ಎಂದು ವ್ಯಾಪಾರಿಗಳು ಈ ಪ್ಲಾನ್ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸ್ವೀಟ್ ವ್ಯಾಪಾರಿ ಕೃಷ್ಣ ಅಹಿರ್ವಾಲ್, ನಾವು ಈ ದೀಪಾವಳಿಗೆ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂದುಕೊಂಡಿದ್ದೇವು. ಈ ಕಾರಣದಿಂದಲೇ ಸಿಹಿ ತಿನಿಸುಗಳನ್ನು ಪಟಾಕಿಯ ರೀತಿಯಲ್ಲಿ ವಿನ್ಯಾಸ ಮಾಡಿದ್ದೇವೆ. ಕೆಲ ಗ್ರಾಹಕರು ಇದನ್ನು ನೋಡಿ ಬೇಕರಿಯಲ್ಲಿ ದೀಪಾವಳಿ ಪ್ರಯುಕ್ತ ಪಟಾಕಿ ಮಾರುತ್ತಿದ್ದಾರೆ ಎಂದು ಭಾವಿಸಿದ್ದರು. ನಂತರ ಅವು ಸ್ವೀಟ್ಸ್ ಎಂದು ತಿಳಿದಾಗ ಆಶ್ಚರ್ಯ ಪಟ್ಟರು ಎಂದು ಹೇಳಿದ್ದಾರೆ.

    ಈ ವಿಧಾನದಿಂದ ಕಾರ್ಪೊರೇಟ್ ಸಂಸ್ಥೆಯಲ್ಲಿ ನೌಕರಿಗೆ ಗಿಫ್ಟ್ ಕೊಡುವವರಿಗೆ ಉಪಯೋಗವಾಗಿದೆ. ಪಟಾಕಿ ಸಿಡಿಸಿ ಪರಿಸರವನ್ನು ಹಾಳು ಮಾಡುವ ಬದಲು ಈ ರೀತಿ ಆರೋಗ್ಯಕ್ಕೆ ಒಳ್ಳೆಯದಾಗುವ ಶುಗರ್ ಫ್ರೀ ತಿಂಡಿಗಳನ್ನು ತಿಂದರೆ ಒಳ್ಳೆಯದು. ಇದನ್ನು ಮಕ್ಕಳಿಗೂ ಕೊಡಬಹುದು ಇದರಿಂದ ಮಕ್ಕಳು ನಮಗೆ ಪಟಾಕಿ ಕೊಡಿಸಿ ಎಂದು ಹಠಮಾಡುವುದಿಲ್ಲ ಎಂದು ಅಹಿರ್ವಾಲ್ ಹೇಳಿದ್ದಾರೆ.

    ರಾಕೆಟ್ ಮತ್ತು ಬಾಂಬ್ ಸೇರಿದಂತೆ ಎಲ್ಲ ರೀತಿಯ ಪಟಾಕಿಗಳ ಮಾದರಿಯಲ್ಲಿ ತಿಂಡಿಗಳನ್ನು ವಿನ್ಯಾಸ ಮಾಡಿದ್ದೇವೆ. ಇದಕ್ಕೆ ಉತ್ತಮವಾದ ಪ್ಯಾಕಿಂಗ್ ಮಾಡಿದ್ದೇವೆ. ಈ ಎಲ್ಲವೂ ಜನರನ್ನು ಆಕರ್ಷಣೆ ಮಾಡುತ್ತಿದೆ. ಈಗ ಬಹಳ ಚೆನ್ನಾಗಿ ವ್ಯಾಪಾರವಾಗುತ್ತಿದೆ ಎಂದು ಬೇಕರಿ ಮಾಲೀಕ ಮನು ಅಗರ್ವಾಲ್ ಹೇಳಿದ್ದಾರೆ.

  • ಮತ್ತೆ ಮೋದಿ ಪ್ರಧಾನಿ – ಸಂಭ್ರಮಕ್ಕೆ ಸಿದ್ಧವಾಗುತ್ತಿದೆ 2 ಸಾವಿರ ಕೆಜಿ ಸ್ವೀಟ್

    ಮತ್ತೆ ಮೋದಿ ಪ್ರಧಾನಿ – ಸಂಭ್ರಮಕ್ಕೆ ಸಿದ್ಧವಾಗುತ್ತಿದೆ 2 ಸಾವಿರ ಕೆಜಿ ಸ್ವೀಟ್

    ಮುಂಬೈ: ಲೋಕಸಭಾ ಚುನಾವಣಾ ಫಲಿತಾಂಶ ಮೇ 23ರಂದು ಹೊರ ಬೀಳಲಿದ್ದು, ಗೆಲುವಿನ ಸಂಭ್ರಮ ಆಚರಿಸಿಕೊಳ್ಳಲು ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಇತ್ತ ಮುಂಬೈನ ಬೊರಿವಲಿ ಪ್ರದೇಶದ ಸ್ವೀಟ್‍ಮಾರ್ಟ್ ನಲ್ಲಿ ಸಿಬ್ಬಂದಿ ಮೋದಿ ಮುಖವಾಡ ಧರಿಸಿ ವಿವಿಧ ಬಗೆಯ ಸಿಹಿ ಖಾದ್ಯ ತಯಾರಿಸುತ್ತಿದ್ದಾರೆ.

    ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಅವರು 1500-2000 ಕೆ.ಜಿ. ಸಿಹಿ ಖಾದ್ಯಗಳ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸ್ವೀಟ್‍ಮಾರ್ಟ್ ಮಾಲೀಕ ತಿಳಿಸಿದ್ದಾರೆ.

    ಲೋಕಸಭಾ ಚುನಾವಣೆಗೆ ಮೇ 19 ರಂದು ನಡೆದ ಕೊನೆಯ ಹಂತದ ಮತದಾನ ನಡೆಯಿತು. ಅಂದು ಸಂಜೆ ಬಿಡುಗಡೆಯಾದ ಬಹುಪಾಲು ಎಕ್ಸಿಟ್ ಪೋಲ್‍ಗಳು ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಗೆ ಮುಂದಾಗಿದೆ ಎಂದು ತಿಳಿಸಿದ್ದವು. ಇದರಿಂದಾಗಿ ಎನ್‍ಡಿಎ ಮೈತ್ರಿ ಕೂಟದಲ್ಲಿ ಸಂತೋಷದ ಅಲೆ ಎದ್ದಿದ್ದು, ವಿರೋಧ ಪಕ್ಷಗಳು ನಿರಾಶೆಯಲ್ಲಿ ಮುಳುಗಿವೆ. ಈ ಮೂಲಕ ಬಿಜೆಪಿ ನಾಯಕರು ಮತ ಎಣಿಕೆಗೂ ಎರಡು ದಿನಗಳ ಮೊದಲೇ ಸಿಹಿತಿಂಡಿಗಳಿಗೆ ಬೇಡಿಕೆ ಇಟ್ಟಿದ್ದಾರೆ.

    ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಚಿತ್ರದ ನಟಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಉರ್ಮಿಳಾ ಮಾತೋಂಡ್ಕರ್ ಕಣಕ್ಕೆ ಇಳಿದಿದ್ದಾರೆ. ಸಮೀಕ್ಷೆಗಳ ಪ್ರಕಾರ ತಮ್ಮ ಗೆಲುವು ಖಚಿತ ಹಾಗೂ ಕೇಂದ್ರದಲ್ಲಿ ಮತ್ತೆ ಎನ್‍ಡಿಎ ಸರ್ಕಾರ ರಚನೆಯಾಗುತ್ತದೆ ಎಂಬ ಡಬಲ್ ಸಂಭ್ರಮದಲ್ಲಿರುವ ಗೋಪಾಲ್ ಶೆಟ್ಟಿ ಅವರು 2 ಸಾವಿರ ಕೆಜಿ ಸ್ವೀಟ್‍ಗೆ ಬೇಡಿಕೆ ಇಟ್ಟಿದ್ದಾರೆ.

  • ಸ್ವೀಟ್ ಆಸೆ ತೋರಿಸಿ 9ರ ಬಾಲಕಿ ಮೇಲೆ ಅತ್ಯಾಚಾರ!

    ಸ್ವೀಟ್ ಆಸೆ ತೋರಿಸಿ 9ರ ಬಾಲಕಿ ಮೇಲೆ ಅತ್ಯಾಚಾರ!

    ಹೈದರಾಬಾದ್: ಸ್ವೀಟ್ ನೀಡುವುದಾಗಿ ಆಸೆ ತೋರಿಸಿ ಯುವಕನೋರ್ವ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಸಿಂಗರೆನಿ ಕಾಲೋನಿಯಲ್ಲಿ ನಡೆದಿದೆ.

    ಸಿಂಗರೆನಿ ಕಾಲೋನಿಯ ನಿವಾಸಿ ಶ್ರೀನಿವಾಸ್(28) 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಮನೆಯ ಪಕ್ಕದ ಮನೆಯಲ್ಲಿಯೇ ಶ್ರೀನಿವಾಸ್ ವಾಸಿಸುತ್ತಿದ್ದನು. ಶುಕ್ರವಾರ ರಾತ್ರಿ ಸುಮಾರು 7.30ರ ಹೊತ್ತಿಗೆ ಬಾಲಕಿ ತನ್ನ ಸಹೋದರನ ಜೊತೆ ಮನೆಯ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಶ್ರೀನಿವಾಸ್ ಬಾಲಕಿಗೆ ಸ್ವೀಟ್ ಕೊಡುತ್ತೇನೆ ಬಾ ಎಂದು ತನ್ನೊಡನೆ ಕರೆದೋಯ್ದು ಅತ್ಯಾಚಾರ ಮಾಡಿದ್ದಾನೆ.

    ಈ ವಿಷಯವನ್ನು ಬಾಲಕಿ ಯಾರ ಬಳಿಯೂ ಹೇಳಿರಲಿಲ್ಲ. ಬಳಿಕ ಶನಿವಾರ ಬೆಳಗ್ಗೆ ಹೊಟ್ಟೆ ನೋವೆಂದು ಬಾಲಕಿ ನರಳಾಡುತ್ತಿದ್ದ ವೇಳೆ ಆಕೆಯ ತಾಯಿ ಪ್ರಶ್ನಿಸಿದಾಗ, ನಡೆದ ಘಟನೆಯನ್ನು ಬಾಲಕಿ ವಿವರಿಸಿದ್ದಾಳೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಬಾಲಕಿಯ ತಾಯಿ ನಗರದ ಸಾಯಿದಾಬಾದ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ನೀಡಿದ್ದಾರೆ.

    ಸದ್ಯ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(2) ಹಾಗೂ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv