Tag: Sweden

  • Video Viral | ಪ್ರೆಸ್‌ ಮೀಟ್‌ ನಡೆಯುತ್ತಿದ್ದಾಗಲೇ ಕುಸಿದು ಬಿದ್ದ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ

    Video Viral | ಪ್ರೆಸ್‌ ಮೀಟ್‌ ನಡೆಯುತ್ತಿದ್ದಾಗಲೇ ಕುಸಿದು ಬಿದ್ದ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ

    – ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಘಟನೆ

    ಸ್ಟಾಕ್‌ಹೋಮ್: ಪ್ರೆಸ್‌ ಮೀಟ್‌ ನಡೆಯುತ್ತಿದ್ದ ವೇಳೆ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ (Elisabet Lann) ವೇದಿಕೆಯಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ಲ್ಯಾನ್‌ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ಸಂಭವಿಸಿದಿದೆ.

    ಸುದ್ದಿಗೋಷ್ಠಿಯಲ್ಲಿ (Press Conference) 48 ವರ್ಷದ ಎಲಿಸಬೆಟ್ ಲ್ಯಾನ್, ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಹಾಗೂ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಪಕ್ಕದಲ್ಲಿ ನಿಂತಿದ್ದರು. ಪತ್ರಕರ್ತರು ಪ್ರಶ್ನೆ ಕೇಳುತ್ತಿರುವಾಗಲೇ ವೇದಿಕೆಯಿಂದ ಗಾಜಿನ ಪೋಡಿಯಂ ಸಮೇತ ಕುಸಿದುಬಿದ್ದಿದ್ದಾರೆ. ಇದನ್ನೂ ಓದಿ: ಸ್ಪೇನ್‌ನಲ್ಲಿ ಬೀಚ್‌ಗಳನ್ನು ಬಂದ್‌ ಮಾಡಿಸಿದ ನೀಲಿ ಡ್ರ್ಯಾಗನ್‌ – ಏನಿದರ ವಿಶೇಷ? 

    16 ಸೆಕೆಂಡುಗಳ ವಿಡಿಯೋ ವೈರಲ್‌
    ಎಲಿಸಬೆಟ್ ಲ್ಯಾನ್ ನೂತನ ಆರೋಗ್ಯ ಸಚಿವೆಯಾಗಿ (Swedish New Health Minister) ಅಧಿಕಾರ ಸ್ವೀಕರಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪ್ರೆಸ್‌ಮೀಟ್‌ ಆಯೋಜನೆ ಮಾಡಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಅಧಿಕಾರಿಯೊಬ್ಬರ ಮಾತುಗಳನ್ನು ಆಲಿಸುತ್ತಿದ್ದರು. ಹಾಗೆಯೇ ಮುಂದಕ್ಕೆ ಬಾಗುತ್ತಲೇ ಪೋಡಿಯಂ ಸಮೇತ ನೆಲಕ್ಕೆ ಕುಸಿದು ಬಿದ್ದರು. ಈ ದೃಶ್ಯ 16 ಸೆಕೆಂಡುಗಳ ವಿಡಿಯೋನಲ್ಲಿ ಸೆರೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲೂ ವಿಡಿಯೋ ವೈರಲ್‌ ಆಗಿದೆ.

    ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಚಿವರನ್ನ ಸಹ ಅಧಿಕಾರಿಗಳು ಹಾಗೂ ವೇದಿಕೆ ಮುಂಭಾಗದಲ್ಲಿದ್ದ ಪತ್ರಕರ್ತರು ಆಕೆಯನ್ನ ಮೇಲೆತ್ತಿ ಕೂರಿಸಿದ್ದಾರೆ. ಸ್ವಲ್ಪ ನೀರು ಕುಡಿಸಿ ವಿಶ್ರಾಂತಿ ಕೊಡಿಸಿದ್ದಾರೆ. ಲ್ಯಾನ್ ಸ್ವಲ್ಪ ಸಮಯದ ನಂತರ ಮತ್ತೆ ಸುದ್ದಿಗೋಷ್ಠಿಗೆ ಹಾಜರಾಗಿ ಅನೇಕ ವಿಷಯ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಕತಾರ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌; ಹಮಾಸ್‌ ನಾಯಕನ ಪುತ್ರ ಸೇರಿ 6 ಮಂದಿ ಬಲಿ – ಟಾಪ್‌ ಲೀಡರ್‌ ಪಾರು

    ಸದ್ಯ ನೂತನ ಸಚಿವರು ಕುಸಿದುಬಿದ್ದ ಬಗ್ಗೆ ನಿಖರ ಕಾರಣ ತಿಳಿದಿಲ್ಲ. ಮೇಲ್ನೋಟಕ್ಕೆ ಕಡಿಮೆ ರಕ್ತದೊತ್ತಡದಿಂದ (ಲೋ ಬಿಪಿ) ಸಂಭವಿಸಿರಬಹುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು

  • ಕುರಾನ್‌ ಸುಟ್ಟು ಹಾಕಿದ್ದ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ

    ಕುರಾನ್‌ ಸುಟ್ಟು ಹಾಕಿದ್ದ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ

    ಸ್ಟಾಕ್‌ಹೋಮ್: 2023 ರಲ್ಲಿ ಸ್ವೀಡನ್‌ನಲ್ಲಿ (Sweden) ಕುರಾನ್ (Quran) ಅನ್ನು ಸುಟ್ಟುಹಾಕಿದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

    ಹಲವಾರು ಪ್ರತಿಭಟನೆಗಳಲ್ಲಿ ಕುರಾನ್‌ ಪ್ರತಿಗಳನ್ನು ಸುಟ್ಟುಹಾಕಿದ ಕ್ರಿಶ್ಚಿಯನ್ ಇರಾಕಿ ಸಲ್ವಾನ್ ಮೊಮಿಕಾ, ಜನಾಂಗೀಯ ದ್ವೇಷವನ್ನು ಪ್ರಚೋದಿಸಿದ ಆರೋಪದಲ್ಲಿ ತಪ್ಪಿತಸ್ಥನೇ ಎಂದು ಸ್ಟಾಕ್‌ಹೋಮ್ ನ್ಯಾಯಾಲಯ ಗುರುವಾರ ತೀರ್ಪು ನೀಡಬೇಕಿತ್ತು. ಇದನ್ನೂ ಓದಿ: ಚೀನಾ ಮತ್ಸ್ಯ ಕನ್ಯೆಯ ಮೇಲೆ ದೈತ್ಯ ಮೀನಿನ ದಾಳಿ!

    ಈಗ ಸಲ್ವಾನ್ ಮೊಮಿಕಾ ಮೃತಪಟ್ಟಿರುವುದರಿಂದ ತೀರ್ಪನ್ನು ಫೆ.3ಕ್ಕೆ ಮುಂದೂಡಿ ಕೋರ್ಟ್‌ ಆದೇಶ ಹೊರಡಿಸಿದೆ. ಮೊಮಿಕಾ ವಾಸಿಸುತ್ತಿದ್ದ ಸೊಡೆರ್ಟಾಲ್ಜೆ ನಗರದಲ್ಲಿ ಗುಂಡಿನ ದಾಳಿ ನಡೆಯುವ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಗುಂಡಿನ ದಾಳಿ ನಡೆದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಾಗಲೇ ಸಲ್ವಾನ್‌ ಮೃತಪಟ್ಟಿದ್ದ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ವಿಮಾನ -18 ಮಂದಿ ಸಾವು

  • ಸ್ವೀಡನ್‌ನಲ್ಲಿ ಕುರಾನ್ ದಹನದ ಬೆದರಿಕೆ – ವಾಹನಗಳಿಗೆ ಬೆಂಕಿ, ಪೊಲೀಸ್ ವಾಹನಗಳು ಧ್ವಂಸ

    ಸ್ವೀಡನ್‌ನಲ್ಲಿ ಕುರಾನ್ ದಹನದ ಬೆದರಿಕೆ – ವಾಹನಗಳಿಗೆ ಬೆಂಕಿ, ಪೊಲೀಸ್ ವಾಹನಗಳು ಧ್ವಂಸ

    ವ್ಯಾಟಿಕನ್ ಸಿಟಿ: ಮುಸ್ಲಿಂ ಪವಿತ್ರ ಗ್ರಂಥ ಕುರಾನ್‌ನ ಪ್ರತಿಗಳನ್ನು ಸಾರ್ವಜನಿಕವಾಗಿ ಸುಟ್ಟು, ಅದರ ಮೇಲೆ ಹಂದಿಯ ರಕ್ತವನ್ನು ಚೆಲ್ಲುವುದಾಗಿ ಹೇಳಿದ್ದ ಡ್ಯಾನಿಶ್ ರಾಜಕಾರಣಿಯ ಬೆದರಿಕೆಯಿಂದಾಗಿ ಕಳೆದ ನಾಲ್ಕು ದಿನಗಳಿಂದ ಸ್ವೀಡನ್‌ನ ನಗರಗಳಲ್ಲಿ ಪ್ರತಿಭಟನೆ ತೀವ್ರವಾಗಿದೆ.

    ಸ್ವಿಡನ್ ನಗರಗಳಲ್ಲಿ ಮುಸ್ಲಿಂ ವಿರೋಧಿ ಹಾಗೂ ಬಲಪಂಥೀಯ ರಾಜಕೀಯ ಪಕ್ಷ ಸ್ಟ್ರಾಮ್ ಕುರ್ಸ್ ವಿರೋಧವಾಗಿ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರಗಳಲ್ಲಿ ಕಲ್ಲು ತೂರಾಟ, ಟಯರ್, ವಾಹನ ಹಾಗೂ ಕಸಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ದಕ್ಷಿಣ ಆಫ್ರಿಕಾ ತತ್ತರ – 443ಕ್ಕೆ ಏರಿದ ಸಾವಿನ ಸಂಖ್ಯೆ

    ಭಾನುವಾರ ಸ್ವೀಡನ್‌ನ ನಾರ್ಕೋಪಿಂಗ್‌ನಲ್ಲಿ ಪೊಲೀಸರು ಗಲಭೆಕೋರರ ಮೇಲೆ ಗುಂಡು ಹಾರಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸರು 17 ಜನರನ್ನು ಬಂಧಿಸಿದ್ದಾರೆ.

    ಮಾಲ್ಮೋ ನಗರದಲ್ಲಿ ಭಾನುವಾರ ನಡೆದ ಬಲಪಂಥೀಯರ ಮೆರವಣಿಗೆ ವೇಳೆ ಬಸ್ ಹಾಗೂ ಇತರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಗಲಭೆಯನ್ನು ಪ್ರತಿಭಟಿಸಲು ಇನಾನ್ ಹಾಗೂ ಇರಾಕ್ ಸರ್ಕಾರ ಸ್ವೀಡನ್ ರಾಯಭಾರಿಗೆ ಕರೆ ನೀಡಿವೆ. ಇದನ್ನೂ ಓದಿ: 20 ಸಿಸಿ ಕ್ಯಾಮೆರಾ ನಿಷ್ಕ್ರಿಯ, 7 ನಾಪತ್ತೆ – ಪೊಲೀಸರಿಗೆ ತಲೆನೋವಾದ ಹುಬ್ಬಳ್ಳಿ ಪುಂಡರ ಪತ್ತೆ ಕಾರ್ಯ

    ಕಳೆದ 4 ದಿನಗಳಿಂದ ಮುಂದುವರಿದಿರುವ ಅಶಾಂತಿಯಿಂದಾಗಿ ಸುಮಾರು 16 ಪೊಲೀಸರು ಗಾಯಗೊಂಡಿದ್ದಾರೆ. ಹಲವಾರು ಪೊಲೀಸ್ ವಾಹನಗಳು ಧ್ವಂಸಗೊಂಡಿವೆ ಎಂದು ವರದಿಗಳು ತಿಳಿಸಿವೆ.

  • 40 ವರ್ಷಗಳ ನಂತರ ತನ್ನ ಮೂಲ ಹುಡುಕುತ್ತಾ ಬಂದ ಸ್ವೀಡನ್ ಪ್ರಜೆ!

    40 ವರ್ಷಗಳ ನಂತರ ತನ್ನ ಮೂಲ ಹುಡುಕುತ್ತಾ ಬಂದ ಸ್ವೀಡನ್ ಪ್ರಜೆ!

    ಧಾರವಾಡ: ಸ್ವೀಡನ್ ಪ್ರಜೆಯೊಬ್ಬರು ಧಾರವಾಡದಲ್ಲಿ ತನ್ನ ಮೂಲ ಹುಡುಕುತ್ತಿದ್ದಾರೆ. 40 ವರ್ಷಗಳ ಹಿಂದೆ ದತ್ತು ಹೋಗಿದ್ದ ವ್ಯಕ್ತಿ ಇದೀಗ ತನ್ನ ಮೂಲ ಕಂಡುಕೊಳ್ಳಲು ಪ್ರಯತ್ನ ನಡೆಸಿದ್ದಾರೆ.

    40 ವರ್ಷಗಳ ಹಿಂದೆ ಸ್ವೀಡನ್‍ನಿಂದ ಬಂದ ದಂಪತಿ ಅನಾಥಾಶ್ರಮದಿಂದ ದತ್ತು ವ್ಯಕ್ತಿ ಈಗ ಮೂಲ ಪಾಲಕರ ನೆನಪು ಮಾಡಿಕೊಂಡು ಧಾರವಾಡ ನನ್ನೂರು, ನಾನು ಧಾರವಾಡದವನೆಂದು ಹೇಳಿಕೊಂಡಿದ್ದಾರೆ. ಪಂತು ಜೋಹಾನ್ ಪಾಮ್ಕ್ವಿಸ್ಟ್ ಎಂಬ ವ್ಯಕ್ತಿ ಸೋಶಿಯಲ್ ಮೀಡಿಯಾ ಮೂಲಕ ತನ್ನವರಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಹಿಜಬ್ ಫೈಟ್ – ಪದವಿ ಪೂರ್ವ ಕಾಲೇಜು ನಿರ್ದೇಶಕಿ ಎತ್ತಂಗಡಿ!

    ಟ್ವೀಟರ್ ಮತ್ತು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ ಪಿಎಂ ಮತ್ತು ಸಿಎಂ ಕಚೇರಿಗೆ ಪೋಸ್ಟ್ ಟ್ಯಾಗ್ ಮಾಡಿದ್ದಾರೆ. ಈ ಹಿನ್ನೆಲೆ ಆತನ ಮೂಲ ಹುಡುಕುವಂತೆ ಧಾರವಾಡ ಎಸ್ಪಿಗೆ ಮೇಲಾಧಿಕಾರಿಗಳಿಂದ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

    ತನ್ನ ಧಾರವಾಡ ಹೆಸರು ಪಂತು ಎಂದು ಹೇಳಿಕೊಂಡಿದ್ದು, ತಾಯಿಯ ಅಸ್ಪಷ್ಟ ಮುಖ, ಎಮ್ಮೆ ಹಾಲು ಕುಡಿಯೋದು, ಓರ್ವ ವೃದ್ಧ, ಪೊಲೀಸರ ಮುಂದೆ ಅಳುತ್ತಾ ನಿಂತ ನೆನಪು ಹಂಚಿಕೊಂಡಿದ್ದಾರೆ. ಪಂತು ಸದ್ಯ ಸ್ವೀಡನ್‍ನಲ್ಲಿ ಚಿತ್ರಕಲಾವಿದನಾಗಿದ್ದಾರೆ. ಬಾಲ್ಯದ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ.

    ನನ್ನ ಬಳಿ ದಾಖಲೆಗಳಿಲ್ಲ ಇದೊಂದೇ ಫೋಟೋ ಇರೋದು ಅಂತಾ ಪ್ರಸ್ತಾಪಿಸಿದ್ದು, ನನ್ನವರು ಯಾರಾದ್ರೂ ಇದ್ರೆ ಸಹಾಯಕ್ಕೆ ಬನ್ನಿ ಅಂತಾ ಅಳಲು ತೋಡಿಕೊಂಡಿದ್ದಾರೆ. ಧಾರವಾಡದಲ್ಲಿ 1980ರಲ್ಲಿ ಪಂತು ಪಾಲಕರಿಂದ ದೂರ ಹೋಗಿದ್ದ. ಆ ವೇಳೆ ಪೊಲೀಸರಿಗೆ ಸಿಕ್ಕಿದ್ದ ಬಾಲಕ ಪಂತುನನ್ನು ಪೊಲೀಸರು ಅನಾಥಾಶ್ರಮಕ್ಕೆ ಸೇರಿಸಿದ್ದರು. ಇದನ್ನೂ ಓದಿ: ಚಹಾ ಮಾರಾಟ ಮಾಡ್ತಿದ್ದವ ಒಂದೇ ಪ್ರಯತ್ನಕ್ಕೆ NEET ಪಾಸ್ – ದೆಹಲಿಯಲ್ಲಿ AIIMS ಪ್ರವೇಶಕ್ಕೆ ಸಿದ್ಧ

    ಅನಾಥಾಶ್ರಮದಿಂದ ಸ್ವೀಡನ್ ದಂಪತಿ ಅವರನ್ನು ದತ್ತು ಪಡೆದುಕೊಂಡಿದ್ದರು. ದತ್ತು ಪಡೆದುಕೊಂಡು ಸ್ವೀಡನ್.ಗೆ ಕರೆದೊಯ್ದಿದ್ದರು. ಪಂತುಗೆ ಈಗ 43 ವರ್ಷ ವಯಸ್ಸು ನಾಲ್ಕು ದಶಕದ ಬಳಿಕ ಮೂಲ ಪಾಲಕರ ನೆನಪು ಪಂತುಗೆ ಕಾಡುತ್ತಿದೆ.

  • ಡ್ರೋನ್ ಸಹಾಯದಿಂದ ಪ್ರಾಣಾಪಾಯದಿಂದ ಪಾರಾದ 71 ವರ್ಷ ವ್ಯಕ್ತಿ

    ಡ್ರೋನ್ ಸಹಾಯದಿಂದ ಪ್ರಾಣಾಪಾಯದಿಂದ ಪಾರಾದ 71 ವರ್ಷ ವ್ಯಕ್ತಿ

    ಸ್ಟಾಕ್ಹೋಮ್: ಡ್ರೋನ್ ಸಹಾಯದಿಂದ 71 ವರ್ಷದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿ ಸುದ್ದಿಯಾಗಿದ್ದಾನೆ.

    ಸ್ವೀಡನ್‍ನ ಟ್ರೋಲ್‍ಹಟ್ಟನ್‍ನಲ್ಲಿ 71 ವರ್ಷದ ವ್ಯಕ್ತಿಯೊಬ್ಬ ಮನೆಯ ಹೊರಗೆ ಹಿಮವನ್ನು ನೂಕುತ್ತಿದ್ದಾಗ ಹೃದಯಾಘಾತವಾಗಿದೆ. ಆಗ ಅಲ್ಲೇ ಇದ್ದ ವ್ಯಕ್ತಿ ಸಹಾಯಕ್ಕೆ ಧಾವಿಸಿದರು. ನಂತರ ಅವರು ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾರೆ. ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಸಮಸ್ಯೆಗೆ ಶೀಘ್ರ ಪರಿಹಾರ: ಅಶ್ವಥ್ ನಾರಾಯಣ್ ಭರವಸೆ

    ಈ ಕರೆಯ ಆಧಾರದಲ್ಲಿ ಹತ್ತಿರದಲ್ಲಿದ್ದ ಆಸ್ಪತ್ರೆಯಲ್ಲಿ ಅಲಾರಂ ಆಗಿದೆ. ಕೂಡಲೇ ಆಸ್ಪತ್ರೆ ಸಿಬ್ಬಂದಿ ಡ್ರೋನ್ ಮೂಲಕ ಸ್ಥಳಕ್ಕೆ ಕಿಟ್ ಕಳುಹಿಸಿದ್ದಾರೆ. ಆಂಬ್ಯುಲೆನ್ಸ್ ಬರುವುದಕ್ಕೂ ಮುನ್ನ ಚಿಕಿತ್ಸೆ ಕಿಟ್ ತಲುಪಿದೆ. ಪರಿಣಾಮ ವ್ಯಕ್ತಿ ಸಾವಿನಿಂದ ಬಚಾವ್ ಆಗಿದ್ದಾನೆ.

    ಈ ಕುರಿತು ಮಾತನಾಡಿದ ಅವರು, ಹೊಸ ತಂತ್ರಜ್ಞಾನದಿಂದ ಡ್ರೋನ್ ಬಂದು ಚಿಕಿತ್ಸೆ ಕೊಟ್ಟಿದೆ. ಇದಕ್ಕೆ ನಾನು ಎಷ್ಟು ಕೃತಜ್ಞನಾಗಿದ್ದೇನೆ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಡ್ರೋನ್ ಇಲ್ಲದಿದ್ದರೆ ನಾನು ಬಹುಶಃ ಇಲ್ಲಿ ಇರುತ್ತಿರಲಿಲ್ಲ ಎಂದು ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಧಾರವಾಡ ಬೈಪಾಸ್ 6 ಪಥದ ಎಕ್ಸ್ ಪ್ರೆಸ್‌ವೇ 4 ಪಥದ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಟೆಂಡರ್: ಪ್ರಹ್ಲಾದ್ ಜೋಶಿ

    ಡಾ.ಮುಸ್ತಫಾ ಅಲಿ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ್ದು, ನಾನು ಸ್ಥಳೀಯ ಆಸ್ಪತ್ರೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ. ನಾನು ಕಾರಿನ ಕಿಟಕಿಯಿಂದ ಹೊರಗೆ ನೋಡಿದಾಗ ಒಬ್ಬ ವ್ಯಕ್ತಿ ಕುಸಿದು ಬಿದ್ದಿರುವುದನ್ನು ನೋಡಿದೆ. ಏನೋ ತೊಂದರೆಯಾಗಿದೆ ಎಂದು ನಾನು ತಕ್ಷಣ ಅರ್ಥಮಾಡಿಕೊಂಡು ಅವರ ಸಹಾಯಕ್ಕೆ ಧಾವಿಸಿದೆ ಎಂದು ವಿವರಿಸಿದರು.

  • ಸ್ವೀಡನ್ ಪ್ರಥಮ ಮಹಿಳಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಒಂದೇ ದಿನಕ್ಕೆ ರಾಜೀನಾಮೆ ನೀಡಿದ ಆ್ಯಂಡರ್ಸನ್‌

    ಸ್ವೀಡನ್ ಪ್ರಥಮ ಮಹಿಳಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಒಂದೇ ದಿನಕ್ಕೆ ರಾಜೀನಾಮೆ ನೀಡಿದ ಆ್ಯಂಡರ್ಸನ್‌

    ಸ್ಟಾಕ್‌ಹೋಮ್‌: ಸ್ವೀಡನ್‌ ದೇಶದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ ಮ್ಯಾಗ್ಡಲೀನಾ ಆ್ಯಂಡರ್ಸನ್‌ ಅಧಿಕಾರ ವಹಿಸಿಕೊಂಡ 12 ಗಂಟೆಯೊಳಗಡೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಗ್ರೀನ್ಸ್‌ ಪಕ್ಷವು ಆ್ಯಂಡರ್ಸನ್‌ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಈ ವೇಳೆ ಆಂಡರ್ಸನ್‌ ಅವರನ್ನು ನಾಯಕಿ ಎಂದು ಘೋಷಿಸಿದ ನಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಗ್ರೀನ್ಸ್‌ ಪಕ್ಷವು ಮೈತ್ರಿಯಿಂದ ಹೊರನಡೆದಿದ್ದು, ಆ್ಯಂಡರ್ಸನ್‌ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿದೆ. ಜೊತೆಗೆ ತಮ್ಮ ಬಜೆಟ್‌ ಮಂಡಿಸುವಲ್ಲಿಯೂ ವಿಫಲರಾಗಿದ್ದಾರೆ. ಇದನ್ನೂ ಓದಿ: ಕತ್ರಿನಾ, ವಿಕ್ಕಿ ಮದುವೆಯಲ್ಲಿ ಅತಿಥಿಗಳ ಮೊಬೈಲ್‌ ಬಳಕೆಗೆ ನಿಷೇಧ

    ವಲಸಿಗರ ವಿರೋಧಿ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಲಾಯಿತು. ಆದರೆ ಮಸೂದೆಗೆ ಗ್ರೀನ್ಸ್‌ ಪಕ್ಷವು ವಿರೋಧ ವ್ಯಕ್ತಪಡಿಸಿ ಮೈತ್ರಿಯಿಂದ ಹೊರನಡೆದಿದೆ ಎನ್ನಲಾಗಿದೆ. ಇದಾದ ಬಳಿಕ, “ನಾನು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ಪೀಕರ್‌ಗೆ ತಿಳಿಸಿದ್ದೇನೆ” ಎಂದು ಆ್ಯಂಡರ್ಸನ್‌ ಪ್ರತಿಕ್ರಿಯಿಸಿದ್ದಾರೆ.

    ಮೊದಲ ಬಾರಿಗೆ ಬಲಪಂಥೀಯರಿಗಾಗಿ ರೂಪಿಸಿರುವ ಮಸೂದೆ ಇದಾಗಿದೆ. ಅದಕ್ಕೆ ನಮ್ಮ ವಿರೋಧವಿದೆ ಎಂದು ಗ್ರೀನ್ಸ್‌ ಪಕ್ಷವು ತಿಳಿಸಿದೆ. ಇದನ್ನೂ ಓದಿ: ಅಮೆರಿಕ, ಭಾರತದ ತಂತ್ರಕ್ಕೆ ಒಪೆಕ್‌ ಗರಂ – ಮತ್ತೆ ಏರಿಕೆ ಆಗುತ್ತಾ ತೈಲ ಬೆಲೆ?

    ಆಂಡರ್ಸನ್‌ ಅವರು ಬುಧವಾರವಷ್ಟೇ ಪ್ರಧಾನಿಯಾಗಿ ಅಧಿಕಾರಿ ಸ್ವೀಕರಿಸಿದ್ದರು. ರಾಜಕೀಯ ಪಲ್ಲಟದಿಂದಾಗಿ ಮಾರನೇ ದಿನವೇ ರಾಜೀನಾಮೆ ನೀಡಿದ್ದಾರೆ. ಸ್ವತಂತ್ರವಾಗಿ ಸರ್ಕಾರ ರಚಿಸಿ ಮತ್ತೆ ಪ್ರಧಾನಿಯಾಗುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ. ‌

  • ಹುಬ್ಬಳ್ಳಿಯ ಮಿಸ್ಸಿಂಗ್ ಬಾಯ್ ಸ್ಪೀಡನ್ನಿನ ನಂಟು!

    ಹುಬ್ಬಳ್ಳಿಯ ಮಿಸ್ಸಿಂಗ್ ಬಾಯ್ ಸ್ಪೀಡನ್ನಿನ ನಂಟು!

    ಬೆಂಗಳೂರು: ಮನಮಿಡಿಯುವ ಸತ್ಯ ಘಟನೆಯಾಧಾರಿತ ಚಿತ್ರ ಮಿಸ್ಸಿಂಗ್ ಬಾಯ್. ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಈ ಚಿತ್ರ ನಿರ್ದೇಶಕ ರಘು ರಾಮ್ ಅವರ ಕನಸಿನ ಕೂಸು ಎಂಬುದು ಗೊತ್ತೇ ಇದೆ. ಆದ್ರೆ ಇದು ಕರ್ನಾಟಕದ ಯಾವ ಮೂಲೆಯಲ್ಲಿ ನಡೆದಿರೋ ಕಥೆ. ನಿಜಕ್ಕೂ ಇದು ಸತ್ಯ ಕಥೆಯಾ ಎಂಬೆಲ್ಲ ಗೊಂದಲಗಳು ಹಲವರಲ್ಲಿದೆ!

    ಈ ಬಗ್ಗೆ ಒಂದಷ್ಟು ಸುಳಿವುಗಳನ್ನು ನಿರ್ದೇಶಕರೇ ಬಿಟ್ಟು ಕೊಟ್ಟಿದ್ದಾರೆ. ತೊಂಭತ್ತರ ದಶಕದಲ್ಲಿ ನಡೆದಿರೋ ರಿಯಲ್ ಕಥೆಯಲ್ಲಿ ಹುಡುಗ ಮಿಸ್ ಆಗೋದು ಹುಬ್ಬಳ್ಳಿಯಿಂದ. ರಘುರಾಮ್ ಚಿತ್ರವನ್ನೂ ಕೂಡಾ ಅಲ್ಲಿಂದಲೇ ಆರಂಭಿಸಿದ್ದಾರೆ. ಹುಬ್ಬಳ್ಳಿಯ ಸುಂದರ ಲೊಕೇಷನ್ನುಗಳನ್ನೂ ಕೂಡಾ ಸೆರೆ ಹಿಡಿದಿದ್ದಾರೆ.

    ಅಚ್ಚರಿ ಅಂದರೆ, ನಮ್ಮ ಕರ್ನಾಟಕದ ಹುಬ್ಬಳ್ಳಿಗೂ ದೂರದ ದೇಶ ಸ್ವೀಡನ್ನಿಗೂ ನೇರಾ ನೇರ ಲಿಂಕಿದೆ. ಹುಬ್ಬಳ್ಳಿಯಿಂದ ಮಿಸ್ ಆದ ಆ ಪುಟ್ಟ ಹುಡುಗ ಸ್ವೀಡನ್ ದೇಶಕ್ಕೆ ಅದು ಹೇಗೆ ಹೋಗುತ್ತಾನೆ? ತನ್ನ ಹೆತ್ತವರು ಮತ್ತು ಊರ ನೆನಪನ್ನು ಎದೆಯೊಳಗಿಟ್ಟುಕೊಂಡು ಅದು ಹೇಗೆ ವಾಪಾಸಾಗ್ತಾನೆ? ಅಷ್ಟಕ್ಕೂ ಕಡೆಗೂ ಆತನಿಗೆ ಹೆತ್ತವರು ಸಿಕ್ತಾರಾ? ಇಂಥಾ ಕ್ಯೂರಿಯಾಸಿಟಿಗಳಿಗೆಲ್ಲ ಸದ್ಯದಲ್ಲೇ ಉತ್ತರ ಸಿಗಲಿದೆ.

    ಅಂತೂ ಮಾಮೂಲಿ ಚಿತ್ರಗಳಲ್ಲಿ ಸಿಗದಂಥಾ ಭಾವ ತೀವ್ರತೆ, ಪ್ರತೀ ಫ್ರೇಮಿನಲ್ಲಿಯೂ ಕಾಡುವಂಥಾ ಗುಣಗಳೊಂದಿಗೆ ಈ ಚಿತ್ರ ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರನ್ನು ಆವರಿಸಿಕೊಳ್ಳೋದಂತೂ ಗ್ಯಾರಂಟಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅನುಚಿತ ವರ್ತನೆ ತೋರಿದ್ದ ವ್ಯಕ್ತಿಯನ್ನು ತಳ್ಳಿದ್ದಕ್ಕೆ 19ರ ಯುವತಿಗೆ ಗಾಜಿನ ಬಾಟಲಿಯಿಂದ ಹೊಡ್ದ!

    ಅನುಚಿತ ವರ್ತನೆ ತೋರಿದ್ದ ವ್ಯಕ್ತಿಯನ್ನು ತಳ್ಳಿದ್ದಕ್ಕೆ 19ರ ಯುವತಿಗೆ ಗಾಜಿನ ಬಾಟಲಿಯಿಂದ ಹೊಡ್ದ!

    ಸ್ವೀಡನ್: ನೈಟ್ ಕ್ಲಬ್‍ನಲ್ಲಿ ಯುವತಿಯೊಬ್ಬಳು ಅನುಚಿತವಾಗಿ ವರ್ತನೆ ತೋರಿದ ವ್ಯಕ್ತಿಯನ್ನು ತಳ್ಳಿದ್ದಕ್ಕೆ ಬಾಟಲಿನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಸ್ವೀಡನ್ ನ ಮಾಲ್ಮೋದಲ್ಲಿ ನಡೆದಿದೆ.

    ಸೋಫಿ ಜೋಹನ್‍ಸನ್ ಹಲ್ಲೆಗೊಳ್ಳಗಾದ ಯುವತಿ. ಜನವರಿ 24ರಂದು ಸೋಫಿ ತನ್ನ ಸ್ನೇಹಿತರ ಜೊತೆ ನೈಟ್‍ಕ್ಲಬ್ ಹೋಗಿದ್ದಾಳೆ. ಅಲ್ಲಿ ಡ್ಯಾನ್ಸ್ ಮಾಡುವಾಗ ಅಪರಿಚಿತ ವ್ಯಕ್ತಿ ಆಕೆ ಹತ್ತಿರ ಅನುಚಿತವಾಗಿ ವರ್ತಿಸಿದ್ದಾನೆ. ಆಗ ಸೋಫಿ ವ್ಯಕ್ತಿಯನ್ನು ತಳ್ಳಿದ್ದಾಳೆ. ಇದ್ದರಿಂದ ಕೋಪಗೊಂಡ ವ್ಯಕ್ತಿ ತನ್ನ ಮುಷ್ಟಿಯನ್ನು ಮುಚ್ಚಿ ಆಕೆಯ ಮುಖದ ಮೇಲೆ ಹೊಡೆದಿದ್ದಾನೆ. ನಂತರ ಸೋಫಿ ಅಲ್ಲಿಂದ ಹೋಗಲು ನಿರ್ಧರಿಸುತ್ತಾಳೆ. ಆಗ ಆ ವ್ಯಕ್ತಿ ಗಾಜಿನ ಬಾಟಲಿಯನ್ನು ಆಕೆಯ ತಲೆಗೆ ಹೊಡೆದಿದ್ದಾನೆ. ಬಾಟಲ್ ಮುರಿದು ಹೋಗಿ ಸೋಫಿ ತೀವ್ರವಾಗಿ ಗಾಯಗೊಂಡಿದ್ದಾಳೆ.

    ನನಗೆ ಆತ ಹೊಡೆದಿದ್ದು, ಅನುಭವವಾಯಿತ್ತು. ಆದರೆ ಯಾವುದೇ ನೋವಾಗಲಿಲ್ಲ. ಬಾಟಲಿಯಿಂದ ಹೊಡೆದಿದ್ದಾನೆಂಬುದು ಆ ಶಬ್ಧದಿಂದ ತಿಳಿಯಿತು. ಬಾಟಲಿಯಿಂದ ಹೊಡೆದಿದ್ದಕ್ಕೆ ಅದರಲ್ಲಿದ್ದ ನೀರು ತಲೆಯ ಬೀಳುತ್ತಿದೆ ಎಂದುಕೊಂಡೆ. ಆದರೆ ಅದು ರಕ್ತ ಎಂದು ನನ್ನ ಸ್ನೇಹಿತೆ ನನಗೆ ತಿಳಿಸಿದ್ದಳು. ನನಗೆ ಆಘಾತವಾಯಿತ್ತು. ಆಗ ನನ್ನ ಮುಖ ತುಂಬಾನೇ ಕೆಟ್ಟದಾಗಿ ಕಾಣುತ್ತಿತ್ತು. ನಾನು ಆಗ ಗಾರ್ಡ್ ಬಳಿ ಹೋದೆ ಎಂದು ಸೋಫಿ ಅಲ್ಲಿನ ಮಾಧ್ಯಮವೊಂದಕ್ಕೆ ತಿಳಿಸಿದ್ದಾಳೆ.

    ನನಗೆ ಆ ವ್ಯಕ್ತಿ ಯಾರೆಂಬುದು ಸರಿಯಾಗಿ ತಿಳಿದಿಲ್ಲ. ಆದರೆ ಆತ ಹೇಗಿದ್ದಾನೆ ಎಂಬುದು ನನಗೆ ಗೊತ್ತು. ಆತ 5.10 ಅಡಿ ಎತ್ತರವಿದ್ದನು. ಡಾರ್ಕ್ ಕೂದಲನ್ನು ಹೊಂದಿದ್ದನು. ಉದ್ದನೆಯ ತೋಳಿನ ಶರ್ಟ್ ಧರಿಸಿದ್ದನು ಎಂದು ಸೋಫಿ ಹೇಳಿದ್ದಾಳೆ.

    ತೀವ್ರವಾಗಿ ಗಾಯಗೊಂಡಿದ್ದ ಸೋಫಿಯನ್ನು ಆಸ್ಪತ್ರೆಗೆ ಕಡೆದುಕೊಂಡು ಹೋಗಲಾಗಿತ್ತು. ತಲೆಯ ಮೇಲೆ ಆಗಿದ್ದ ಗಾಯಕ್ಕೆ ಹಲವು ಹೊಲಿಗೆಗಳು ಬಿದ್ದಿವೆ. ಸೋಫಿ ಒಂದು ರಾತ್ರಿ ಆಸ್ಪತ್ರೆಯಲ್ಲೇ ಕಳೆದಿದ್ದಾಳೆ ಎಂದು ಹೇಳಲಾಗಿದೆ.

  • 28 ವರ್ಷಗಳ ಬಳಿಕ ಸತ್ಯ ತಿಳಿದು ತಂದೆ-ತಾಯಿಯನ್ನ ಹುಡುಕಲು ಸ್ವೀಡನ್ ನಿಂದ ಭಾರತಕ್ಕೆ ಬಂದ ಮಹಿಳೆ

    28 ವರ್ಷಗಳ ಬಳಿಕ ಸತ್ಯ ತಿಳಿದು ತಂದೆ-ತಾಯಿಯನ್ನ ಹುಡುಕಲು ಸ್ವೀಡನ್ ನಿಂದ ಭಾರತಕ್ಕೆ ಬಂದ ಮಹಿಳೆ

    ಬೆಂಗಳೂರು: ವಿದೇಶಿ ಮಹಿಳೆಯೊಬ್ಬರು ತನ್ನ ಸ್ವಂತ ತಂದೆ-ತಾಯಿಯನ್ನ ಹುಡುಕಲು ಭಾರತಕ್ಕೆ ಬಂದಿದ್ದಾರೆ.

    ವಿದೇಶಿ ಮಹಿಳೆ ಸೋನಿ 2 ವರ್ಷದ ಮಗುವಾಗಿದ್ದಾಗ ಹುಬ್ಬಳ್ಳಿಯಲ್ಲಿ ತನ್ನ ಪೋಷಕರಿಂದ ತಪ್ಪಿಸಿಕೊಂಡಿದ್ದರು. ಅಳುತ್ತಿದ್ದ ಮಗುವನ್ನ ಕಂಡ ಬೆಂಗಳೂರಿನ ಮಾತೃಚಾಯ ಅನಾಥಾಶ್ರಮದವರು ಕರೆದುಕೊಂಡು ಹೋಗಿ ಸಾಕಿದ್ದು, ಎರಡು ವರ್ಷಗಳ ಕಾಲ ಪೋಷಿಸಿದ್ದಾರೆ. ನಂತರ ಸ್ವೀಡನ್ ಮೂಲದ ದಂಪತಿ ಈಕೆಯನ್ನು ದತ್ತು ಪಡೆದಿದ್ದು, ಸ್ವೀಡನ್‍ಗೆ ಕರೆದುಕೊಂಡು ಹೋಗಿದ್ದಾರೆ.

    ಸೋನಿ ಕಳೆದ 28 ವರ್ಷಗಳ ಕಾಲ ಅವರ ಪೋಷಣೆಯಲ್ಲಿದ್ದು, ಅವರು ಸೋನಿಗೆ ಮದುವೆ ಕೂಡ ಮಾಡಿದ್ದಾರೆ. ಆದರೆ ಸೋನಿಗೆ ತನ್ನ ನಿಜವಾದ ತಂದೆ-ತಾಯಿ ಇವರಲ್ಲ, ಅವರು ಭಾರತದಲ್ಲಿದ್ದಾರೆ ಎಂದು ತಿಳಿದಿದೆ.

    28 ವರ್ಷಗಳ ಬಳಿಕ ಸತ್ಯ ತಿಳಿದ ಸೋನಿ, ಅಪ್ಪ ಅಮ್ಮನನ್ನ ನೋಡಬೇಕೆಂಬ ಆಸೆಯಿಂದ ಭಾರತಕ್ಕೆ ಬಂದಿದ್ದು, ಹೆತ್ತ ತಂದೆತಾಯಿಯ ಹುಟುಕಾಟದಲ್ಲಿದ್ದಾರೆ. ಐಶ್ವರ್ಯ ಅಂತಸ್ತು ಎಲ್ಲಾ ಇದ್ದರು ಸೋನಿಯ ಹೆತ್ತ ತಂದೆ-ತಾಯಿ ಯಾರು ಅಂತಾ ಗೊತ್ತಿಲ್ಲದೇ ಪ್ರತಿದಿನ ನೋವಲ್ಲೇ ಕಾಲ ಕಳೆಯುತ್ತಿದ್ದಾರೆ.