Tag: swamiji

  • ಸ್ವಾಮೀಜಿ ಕಾರು ಅಪಘಾತ – ಪ್ರಾಣಾಪಾಯದಿಂದ ಶ್ರೀಗಳು ಪಾರು

    ಸ್ವಾಮೀಜಿ ಕಾರು ಅಪಘಾತ – ಪ್ರಾಣಾಪಾಯದಿಂದ ಶ್ರೀಗಳು ಪಾರು

    ದಾವಣಗೆರೆ: ಬಳ್ಳಾರಿ ಜಿಲ್ಲೆಯ ಕೊಟ್ಟೂರು ನುಗ್ಗೆಹಳ್ಳಿ ಅಯ್ಯನಹಳ್ಳಿ ಹಿರೇಮಠದ ಶ್ರೀ ಮಹೇಶ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಶ್ರೀ ಮಹೇಶ ಶಿವಾಚಾರ್ಯ ಸ್ವಾಮೀಜಿ ಇಂದು ಕಾರ್ಯಕ್ರಮ ನಿಮಿತ್ತ ಬಾತಿ ತಪೋವನದಲ್ಲಿರುವ ಶ್ರೀ ಶೈಲ ಜಗದ್ಗುರುಗಳ ದರ್ಶನಕ್ಕೆ ಇನ್ನೋವಾ ಕಾರಿನಲ್ಲಿ ಹೊರಟಿದ್ದರು. ಆದರೆ ದಾವಣಗೆರೆಯ ಬಾತಿ ಕೆರೆ ಬಳಿ ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕೆಎಸ್ಆರ್‌ಟಿಸಿ ಬಸ್ ಹಿಂದಿನಿಂದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.

    ಡಿಕ್ಕಿಯ ರಭಸಕ್ಕೆ ಇನ್ನೋವಾ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಸ್ವಾಮೀಜಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಬೇರೊಂದು ವಾಹನದಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಈ ಸಂಬಂಧ ದಾವಣಗೆರೆ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕನಕಪುರದಲ್ಲಿ ಜಾಗೃತಿಗಾಗಿ ವಾಕ್ ಫಾರ್ ಫಿಟ್ ಇಂಡಿಯಾ ವಾಕಥಾನ್

    ಕನಕಪುರದಲ್ಲಿ ಜಾಗೃತಿಗಾಗಿ ವಾಕ್ ಫಾರ್ ಫಿಟ್ ಇಂಡಿಯಾ ವಾಕಥಾನ್

    ರಾಮನಗರ: ವಾಕ್ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ನಗರದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕನಕಪುರದ ಶ್ರೀದೇಗುಲ ಮಠದ ಎಸ್.ಎನ್ ಪಬ್ಲಿಕ್ ಸ್ಕೂಲ್ ವತಿಯಿಂದ ಆಯೋಜನೆ ಮಾಡಿತ್ತು. ಕನಕಪುರದ ದೇಗುಲ ಮಠದ ಆವರಣದಿಂದ ಮೂರು ಕಿಲೋಮೀಟರ್ ದೂರದಲ್ಲಿನ ಕರಡಿಗುಡ್ಡೆಯ ಎಸ್ ಎನ್ ಪಬ್ಲಿಕ್ ಸ್ಕೂಲ್ ವರೆಗೆ ವಾಕಥಾನ್ ಅನ್ನು ಆಯೋಜನೆ ಮಾಡಲಾಗಿತ್ತು.

    ಕನಕಪುರ ಶ್ರೀ ದೇಗುಲದಿಂದ ಕರಡಿಗುಡ್ಡದ ಎಸ್. ಎನ್. ಪಬ್ಲಿಕ್ ಶಾಲೆಯ ಆವರಣದವರೆಗೆ ಜಾಗೃತಿ ವಾಕ್ ಫಾರ್ ಫಿಟ್ ಇಂಡಿಯಾ ವಾಕಥಾನ್ ಗೆ ದೇಗುಲ ಮಠದ ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು. ಜಾಗೃತಿ ವಾಕಥಾನ್ ನಲ್ಲಿ ಎರಡು ವಿಭಾಗದಲ್ಲಿ ವಾಕಥಾನ್ ನಡಿಗೆ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. 10 ವರ್ಷದಿಂದ 18 ವರ್ಷದೊಳಗಿನ ಮಕ್ಕಳು, ಬಾಲಕ-ಬಾಲಕಿಯರಿಗೆ ಒಂದು ಹಂತ ಹಾಗೂ 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರು, ವಯಸ್ಕರಿಗೆ ಮತ್ತೊಂದು ವಿಭಾಗದಲ್ಲಿ ವಾಕಥಾನ್ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು.

    ಇನ್ನೂ ಎರಡು ಹಂತದಲ್ಲೂ ಸಹ ಸಾಕಷ್ಟು ಯುವ ಪಡೆ, ಮಕ್ಕಳು ಪಾಲ್ಗೊಂಡಿದ್ರು. ವಾಕಥಾನ್ ನಲ್ಲಿ ಮೊದಲು ಸ್ಥಾನಗಳಿಸಿದ ಸ್ಪರ್ಧಿಗಳಿಗೆ ಆಕರ್ಷಕ ಟ್ರೋಪಿ ಹಾಗು ಪ್ರಮಾಣ ಪತ್ರವನ್ನು ನೀಡಲಾಯಿತು. ಅಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಸಹ ಪ್ರಮಾಣ ಪತ್ರ ನೀಡುವ ಮೂಲಕ ವಾಕಥಾನ್ ನಲ್ಲಿ ಭಾಗವಹಿಸಿದವರಿಗೆ ಪ್ರೋತ್ಸಾಹಿಸಲಾಯಿತು.

    ಇದೇ ವೇಳೆ ಮಾತನಾಡಿದ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಮಾನವ ಯಾವಾಗಲೂ ಸಹ ಆರೋಗ್ಯವಂತ ನಾಗಿ ಉತ್ಸುಕನಾಗಿರಬೇಕು. ಆರೋಗ್ಯವಂತನಾಗಿರಲು ದೈಹಿಕ ವ್ಯಾಯಾಮ ಅತ್ಯಗತ್ಯ. ಆದರೆ ಇತ್ತೀಚಿನ ತು ಸಮುದಾಯ ದೈಹಿಕ ವ್ಯಾಯಾಮದ ಬದಲು ಅನಾರೋಗ್ಯಕ್ಕೆ ಎಡೆಮಾಡಿಕೊಡುವ ಅನಾರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯ ಓಡಾಟ ಅಗತ್ತಾ?, ಓಡಾಟದಿಂದ ದೇಹದ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ತಿಳಿಸಿದರು.

  • ವಾಮಾಚಾರಕ್ಕೆ ಮಹಿಳೆ ತತ್ತರ – ಬಾಯಿಂದ ಬೀಳುತ್ತಿವೆ ಕೂದಲು, ಮಣ್ಣಿನ ಗೊಂಬೆ, ಅನ್ನದ ಬುತ್ತಿ

    ವಾಮಾಚಾರಕ್ಕೆ ಮಹಿಳೆ ತತ್ತರ – ಬಾಯಿಂದ ಬೀಳುತ್ತಿವೆ ಕೂದಲು, ಮಣ್ಣಿನ ಗೊಂಬೆ, ಅನ್ನದ ಬುತ್ತಿ

    ಹಾವೇರಿ: ಕಳೆದ ನಾಲ್ಕು ತಿಂಗಳಿನಿಂದ ಮಹಿಳೆಯೊಬ್ಬಳು ವಾಮಾಚಾರಕ್ಕೆ ತತ್ತರಿಸಿ ಹೋಗಿದ್ದಾರೆ. ಮಹಿಳೆ ಬಾಯಿಂದ ಕೂದಲು, ಮಣ್ಣಿನ ಗೊಂಬೆಗಳು ಹಾಗೂ ಅನ್ನದ ಬುತ್ತಿ ಬೀಳುತ್ತಿರುವ ವಿಚಿತ್ರ ಘಟನೆ ಹಾವೇರಿ ಜಿಲ್ಲೆ ತಿಳುವಳ್ಳಿ ಗ್ರಾಮದಲ್ಲಿ ನಡೆದಿದೆ.

    ಸುನಂದಾ ಗೋಂದ್ಕರ (45) ತೊಂದರೆ ಅನುಭವಿಸುತ್ತಿರುವ ಮಹಿಳೆ. ಸುನಂದಾ ಬಾಯಿಂದ ಪ್ರತಿನಿತ್ಯ ವಸ್ತುಗಳು ಬರುತ್ತಿವೆ. ಸುನಂದಾ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದ ನಿವಾಸಿವಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಈ ತೊಂದರೆ ಅನುಭವಿಸುತ್ತಿದ್ದಾರೆ. ಮನೆಯಲ್ಲಿದ್ದಾಗ ಬಾಯಿಯಿಂದ ನಿಂಬೆಹಣ್ಣು, ಕಬ್ಬಿಣದ ಮೊಳೆ, ಕೂದಲು, ಮಣ್ಣಿನ ಗೊಂಬೆಗಳು ಪ್ರತಿನಿತ್ಯ ಬೀಳುತ್ತಿದ್ದವು. ಆಗ ಜಿಲ್ಲೆಯ ಎಲ್ಲಾ ಆಸ್ಪತ್ರೆಗೆ ತೋರಿಸಿದ್ದಾರೆ.

    ವೈದ್ಯರು ಸ್ಕ್ಯಾನ್ ಮಾಡಿ ನೋಡಿದಾಗ ನಾರ್ಮಲ್ ಎಂದು ಬಂದಿತ್ತು. ಏನೋ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದರು. ಮತ್ತೆ ಮನೆಗೆ ಹೋದ ಮೇಲೆ ಬಾಯಿಯಿಂದ ವಸ್ತುಗಳು ಬರುತ್ತೆವೆ. ಇದರಿಂದ ಮಹಿಳೆ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೊನೆಗೆ ತೊಂದರೆ ನಿವಾರಣೆಗಾಗಿ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಿವಾಲಿಬಸವೇಶ್ವರ ಮಠದ ಮೂಕಪ್ಪ ಸ್ವಾಮೀಜಿಗಳ ಮೊರೆ ಬಂದಿದ್ದಾರೆ.

    ಕಳೆದ ಏಳು ದಿನಗಳಿಂದ ಮಠದಲ್ಲಿ ಆಶ್ರಯ ಪಡೆದ ಮೇಲೆ ಮಹಿಳೆಗೆ ತೊಂದರೆ ಕಡಿಮೆಯಾಗುತ್ತಿದೆ. ಸದ್ಯ ಪ್ರತಿದಿನ ಮಠದಲ್ಲಿ ಒಂದು ಅಥವಾ ಎರಡು ಬಾರಿ ಬಾಯಿಯಿಂದ ಕೂದಲು ಬರುತ್ತಿವೆ. ಮಹಿಳೆ ಬಾಯಿಯಿಂದ ಬರುತ್ತಿರುವ ವಸ್ತುಗಳನ್ನು ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆ ಯಾರೋ ವಾಮಾಚಾರ ಅಥವಾ ಬಾನಾಮತಿ ಮಾಡಿಸಿದ್ದಾರೆ. ಪತಿಯ ಮನೆಯವರು ವರದಕ್ಷಿಣೆಗಾಗಿ ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

  • ನಾಮಪತ್ರ ವಾಪಸ್ ಪಡೆದ ಅಥಣಿ, ಹಿರೇಕೆರೂರು ಜೆಡಿಎಸ್ ಅಭ್ಯರ್ಥಿಗಳು

    ನಾಮಪತ್ರ ವಾಪಸ್ ಪಡೆದ ಅಥಣಿ, ಹಿರೇಕೆರೂರು ಜೆಡಿಎಸ್ ಅಭ್ಯರ್ಥಿಗಳು

    ಬೆಳಗಾವಿ/ಹಾವೇರಿ: ಅಥಣಿ ಮತ್ತು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಇಬ್ಬರನ್ನು ಕಣಕ್ಕಿಳಿಸಿ ಬಿಜೆಪಿಗೆ ಮಾಜಿ ಸಿಎಂ ಕುಮಾರಸ್ವಾಮಿ ಶಾಕ್ ನೀಡಿದ್ದರು. ಇಂದು ಬಿಜೆಪಿ ಕೊನೆಯ ಹಂತದ ತಂತ್ರ ಫಲಿಸಿದ್ದು, ಅಭ್ಯರ್ಥಿಗಳು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.

    ಹಿರೇಕೆರೂರು ಜೆಡಿಎಸ್ ಅಭ್ಯರ್ಥಿ ಶಿವಾಚಾರ್ಯ ಸ್ವಾಮೀಜಿ ಮತ್ತು ಅಥಣಿಯಲ್ಲಿ ಗುರು ದಾಶ್ಯಾಳ್ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಇದೀಗ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಇನ್ನು ಹೊಸಕೋಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಪಕ್ಷೇತರ ಶರತ್ ಬಚ್ಚೇಗೌಡರಿಗೆ ಬೆಂಬಲ ಸೂಚಿಸಿದೆ. 15ರಲ್ಲಿ 12 ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿಗಳು ಚುನವಣಾ ಕಣದಲ್ಲಿದ್ದಾರೆ.

    ಹಿರೇಕೆರೂರಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸ್ವಾಮೀಜಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಥಣಿಯಲ್ಲಿ ಬಿಜೆಪಿ ವಿರುದ್ಧ ಬಂಡಾಯ ಸಾರಿ ಜೆಡಿಎಸ್ ಸೇರ್ಪಡೆಗೊಂಡು ಗುರು ದಾಶ್ಯಾಳ ನಾಮಪತ್ರ ಸಲ್ಲಿದಿದ್ದರು. ಡಿಸಿಎಂ ಲಕ್ಷ್ಮಣ ಸವದಿ ಅವರ ಆಪ್ತ ವಲಯದಲ್ಲಿ ಗುರು ದಾಶ್ಯಾಳ ಗುರುತಿಸಿಕೊಂಡಿದ್ದಾರೆ.

  • ಸ್ವಾಮೀಜಿಗೆ ಟಿಕೆಟ್, ಕೌರವನಿಗೆ ಶಾಕ್ ಕೊಡಲು ಜೆಡಿಎಸ್ ನಿರ್ಧಾರ

    ಸ್ವಾಮೀಜಿಗೆ ಟಿಕೆಟ್, ಕೌರವನಿಗೆ ಶಾಕ್ ಕೊಡಲು ಜೆಡಿಎಸ್ ನಿರ್ಧಾರ

    ಹಾವೇರಿ: ಕಳೆದ ಎರಡು ದಿನಗಳ ಹಿಂದೆ ಚುನಾವಣೆಗೆ ನಿಲ್ಲದಿರಲು ನಿರ್ಧರಿಸಿದ್ದ ಸ್ವಾಮೀಜಿ ಈಗ ರಾತ್ರೋರಾತ್ರಿ ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

    ಹಾವೇರಿ ಜಿಲ್ಲೆ ರಟ್ಟೀಹಳ್ಳಿಯ ಪಟ್ಟಣದ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಜೆಡಿಎಸ್ ಪಕ್ಷದಿಂದ ರಾಜಕೀಯ ಅಕಾಡಕ್ಕೆ ಎಂಟ್ರಿ ಕೊಡಲಿದ್ದಾರೆ. ರಾತ್ರೋರಾತ್ರಿ ಜೆಡಿಎಸ್‍ನಿಂದ ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿದ್ದಾರೆ.

    ಎರಡು ದಿನಗಳ ಹಿಂದೆ ಭಕ್ತರ ಸಭೆ ನಡೆಸಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಒಲ್ಲೆ ಎಂದಿದ್ದಾರೆ. ಈಗ ರಾತ್ರೋರಾತ್ರಿ ಜೆಡಿಎಸ್ ಟಿಕೆಟ್ ಫೈನಲ್ ಆಗಿದೆ. ಸ್ವಾಮೀಜಿ ಜೆಡಿಎಸ್‍ನಿಂದ ಎಂಟ್ರಿ ಕೊಟ್ಟಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.

    ಇಂದು ಮಧ್ಯಾಹ್ನ ಮೂರು ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಸ್ವಾಮೀಜಿ ನಿರ್ಧಾರ ಮಾಡಿದ್ದಾರೆ. ಜೆಡಿಎಸ್ ಪಕ್ಷ ಉಜಿನೆಪ್ಪ ಕೋಡಿಹಳ್ಳಿ ಎಂಬವರಿಗೆ ಈಗಾಗಲೇ ಟಿಕೆಟ್ ಘೋಷಿಸಿದ್ದು, ಆದರೆ ಈಗ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದನ್ನು ಸ್ವಾಮೀಜಿ ಖಚಿತಪಡಿಸಿದ್ದಾರೆ.

    ಇತ್ತೀಚೆಗೆ ಹಿರೇಕೆರೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ರಟ್ಟೀಹಳ್ಳಿ ಪಟ್ಟಣದಲ್ಲಿರುವ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಿದ್ದರು. ಹಿರೇಕೆರೂರು ಕ್ಷೇತ್ರದ ರಾಜಕಾರಣ ಅಪಮೌಲ್ಯ ಆಗಿದೆ. ಕ್ಷೇತ್ರದ ರಾಜಕೀಯ ವ್ಯವಸ್ಥೆ ಸರಿಪಡಿಸಲು ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಡ ಹಾಕಿದ್ದರು.

  • ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸ್ವಾಮೀಜಿಗೆ ಭಕ್ತರ ಒತ್ತಾಯ – ನಾಳೆ ಸಭೆ

    ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸ್ವಾಮೀಜಿಗೆ ಭಕ್ತರ ಒತ್ತಾಯ – ನಾಳೆ ಸಭೆ

    ಹಾವೇರಿ: ಜಿಲ್ಲೆಯ ಎರಡು ಅನರ್ಹ ಕ್ಷೇತ್ರಗಳಲ್ಲಿ ಉಪಚುನಾವಣೆ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ಸ್ವಾಮೀಜಿಗೆ ಭಕ್ತರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ.

    ಹಿರೇಕೆರೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ರಟ್ಟೀಹಳ್ಳಿ ಪಟ್ಟಣದಲ್ಲಿರುವ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದಾರೆ.

    ಹಿರೇಕೆರೂರು ಕ್ಷೇತ್ರದ ರಾಜಕಾರಣ ಅಪಮೌಲ್ಯ ಆಗಿದೆ. ಕ್ಷೇತ್ರದ ರಾಜಕೀಯ ವ್ಯವಸ್ಥೆ ಸರಿಪಡಿಸಲು ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಡ ಹಾಕುತ್ತಿದ್ದಾರೆ. ಭಕ್ತರ ಒತ್ತಾಯದ ಕುರಿತು ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಮಠದ ಬಳಿ ಇರುವ ಸಮುದಾಯ ಭವನದಲ್ಲಿ ನಾಳೆ ಭಕ್ತರ ಹಾಗೂ ಅಭಿಮಾನಿಗಳ ಸಭೆ ನಡೆಸಲಿದ್ದಾರೆ. ಸಭೆ ನಂತರ ಅಂತಿಮ ನಿರ್ಧಾರ ಪ್ರಕಟಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಬಿ.ಸಿ.ಪಾಟೀಲ್ ಅವರನ್ನು ಅನರ್ಹಗೊಳಿಸಿದ್ದರಿಂದ ಹಿರೇಕೇರೂರು ಕ್ಷೇತ್ರ ಈಗ ತೆರವಾಗಿದೆ. ಈ ಕ್ಷೇತ್ರಕ್ಕೆ ಈಗಾಗಲೇ ಹಲವರು ಪೈಪೋಟಿ ನಡೆಸಿದ್ದರು. ಅಲ್ಲದೆ ಬಿ.ಸಿ.ಪಾಟೀಲ್ ಅವರ ಸ್ಪರ್ಧೆಗೂ ಸಹ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸ್ವಾಮೀಜಿ ಸ್ವರ್ಧೆ ಮಾಡುತ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಹಿರೇಕೇರೂರಿನಲ್ಲಿ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ.

  • ಕೊನೆಗೂ ಆಣೆ ಪ್ರಮಾಣದ ಮೂಲಕ ಬಗೆಹರಿದ ಕೋಣದ ವಿವಾದ

    ಕೊನೆಗೂ ಆಣೆ ಪ್ರಮಾಣದ ಮೂಲಕ ಬಗೆಹರಿದ ಕೋಣದ ವಿವಾದ

    ದಾವಣಗೆರೆ: ಕಳೆದ ನಾಲ್ಕೈದು ದಿನಗಳಿಂದ ಎರಡು ಗ್ರಾಮಗಳ ನಡುವೆ ಜಗಳಕ್ಕೆ ಕಾರಣವಾಗಿದ್ದ ದೇವರ ಕೋಣದ ವಿಚಾರ ಈಗ ಆಣೆ ಪ್ರಮಾಣದ ಮೂಲಕ ಬಗೆ ಹರಿದಿದ್ದು, ಸ್ವಗ್ರಾಮ ಬೇಲಿಮಲ್ಲೂರುಗೆ ದೇವರ ಕೋಣ ಬಂದಿದೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮದ ಮಾರಿಕಾಂಬಾ ದೇವಿಯ ಕೋಣ ಕಾಣೆಯಾಗಿತ್ತು. ಅದೇ ಕೋಣ ಶಿವಮೊಗ್ಗದ ಹಾರ್ನಹಳ್ಳಿ ಗ್ರಾಮದಲ್ಲಿ ಕಾಣಿಸಿದ್ದು, ಆ ಕೋಣ ನಮ್ಮದೇ ಎಂದು ಹಾರ್ನಹಳ್ಳಿ ಗ್ರಾಮದವರು ಕಟ್ಟಿಹಾಕಿಕೊಂಡಿದ್ದರು. ಇದರಿಂದ ಎರಡು ಗ್ರಾಮಗಳ ನಡುವೆ ವಾಗ್ವಾದ ಶುರುವಾಗಿದ್ದು, ಕೊನೆಗೆ ಪೊಲೀಸ್ ಠಾಣೆಯ ಮಟ್ಟಿಲೇರಿ ಡಿಎನ್‍ಎ ಪರೀಕ್ಷೆ ಮಾಡಬೇಕು ಎನ್ನುವ ಮಟ್ಟಿಗೆ ತಲುಪಿತ್ತು.

    ಆದರೆ ಹೊನ್ನಾಳಿಯ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ಮಧ್ಯಸ್ಥಿಕೆ ವಹಿಸಿ ಮಠದ ಶ್ರೀಗಳ ಗದ್ದಿಗೆ ಮುಂದೆ ಆಣೆ ಪ್ರಮಾಣದ ಮೂಲಕ ವಿವಾದವನ್ನು ಪರಿಹರಿಸಿದ್ದಾರೆ. ಈ ಕೋಣ ದಾವಣಗೆರೆಯ ಬೇಲಿ ಮಲ್ಲೂರು ಗ್ರಾಮದ ಮಾರಿಕಾಂಬಾ ದೇವಿಯ ಕೋಣ ಎಂದು ತಿಳಿದುಬಂದಿದೆ.

    ಅದ್ದರಿಂದ ಇಂದು ಪೊಲೀಸರ ಭದ್ರತೆಯ ಮೂಲಕ ಶಿವಮೊಗ್ಗದ ಗೋಶಾಲೆಯಿಂದ ಹೊನ್ನಾಳಿಯ ಬೇಲಿಮಲ್ಲೂರು ಗ್ರಾಮಕ್ಕೆ ದೇವರ ಕೋಣ ಆಗಮಿಸಿತು. ಇನ್ನು ಶಾಸಕ ಎಂ ಪಿ ರೇಣುಕಾಚಾರ್ಯ ಹಿರೇಕಲ್ಮಠದ ಬಳಿ ಕೋಣಕ್ಕೆ ಪೊಜೆ ಸಲ್ಲಿಸಿದರು. ಇನ್ನು ಬೇಲಿಮಲ್ಲೂರು ಗ್ರಾಮಸ್ಥರು ರೇಣುಕಾಚಾರ್ಯ ರನ್ನು ಎತ್ತಿ ಕುಣಿದಾಡಿ ಹರ್ಷೋದ್ಗಾರ ವ್ಯಕ್ತಪಡಿಸಿದರು.

  • 11 ದಿನ ಗಾಳಿ ನೀರು ಇಲ್ಲದೇ ಅನುಷ್ಠಾನಕ್ಕೆ ಕುಳಿತಿದ್ದ ಸ್ವಾಮೀಜಿ ಇಂದು ಹೊರಕ್ಕೆ

    11 ದಿನ ಗಾಳಿ ನೀರು ಇಲ್ಲದೇ ಅನುಷ್ಠಾನಕ್ಕೆ ಕುಳಿತಿದ್ದ ಸ್ವಾಮೀಜಿ ಇಂದು ಹೊರಕ್ಕೆ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಅಮರೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ಸ್ವಾಮೀಜಿಯೊಬ್ಬರು ಕಳೆದ 11 ದಿನಗಳಿಂದ ಗಾಳಿ, ನೀರು ಇಲ್ಲದೆ ಅನುಷ್ಠಾನಕ್ಕೆ ಕುಳಿತಿದ್ದರು. ಇಂದಿಗೆ 11 ದಿನಗಳು ಮುಗಿದಿದ್ದು, ಇಂದು ಹೊರ ಬಂದಿದ್ದಾರೆ.

    ಗದಗ ಜಿಲ್ಲೆಯ ಅಂತುರು ಬಂತೂರಿನ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ 21 ದಿನಗಳ ಹಿಂದೆ ಅಮರೇಶ್ವರಕ್ಕೆ ಬಂದು ಗಡಿಗೆ ಬಾವಿ ಪ್ರದೇಶದ ಸಮಾಧಿಯೊಂದರಲ್ಲಿ ಮೌನ ಅನುಷ್ಠಾನ ನಡೆಸುತ್ತಿದ್ದರು. ಗಾಳಿ, ಬೆಳಕು ಮತ್ತು ಆಹಾರವಿಲ್ಲದೆ 11 ದಿನಗಳ ಕಾಲ ಅನುಷ್ಠಾನ ಕುಳಿತಿದ್ದರು. ಇಂದು ಸಮಾಧಿಯಿಂದ ಮೇಲೆ ಬರುವುದಾಗಿ ತಿಳಿಸಿದ್ದರಿಂದ ಸಮಾಧಿಯ ಮುಂದೆ, ಪೂಜೆ, ಯಜ್ಞ ಕಾರ್ಯಗಳು ನಡೆಸಲಾಗಿತ್ತು.

    ಅಮರೇಶ್ವರ ಮಠದ ಗಜದಂಡ ಸ್ವಾಮೀಜಿ ಸ್ಥಳದಲ್ಲಿದ್ದು, ಧಾರ್ಮಿಕ ವಿಧಿ ವಿಧಾನಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅನುಷ್ಠಾನಕ್ಕೆ ಕುಳಿತ ರಾಚೋಟಿ ಶಿವಾಚಾರ್ಯ ಸ್ವಾಮೀಜಿ ಮೇಲೆ ಬರುವುದನ್ನು ಕಣ್ತುಂಬಿಕೊಳ್ಳಲು ಜನ ತಂಡೋಪತಂಡವಾಗಿ ಅಮರೇಶ್ವರಕ್ಕೆ ಆಗಮಿಸಿದ್ದರು. ದೇವಸ್ಥಾನ ಈಗ ಕುತೂಹಲದ ಕೇಂದ್ರವಾಗಿದೆ. ಅಲ್ಲದೆ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನದಲ್ಲಿ ಈ ರೀತಿಯ ತಪೋನುಷ್ಠಾನಕ್ಕೆ ಅವಕಾಶ ನೀಡಿದ್ದು ಸಹ ಚರ್ಚೆಗೆ ಕಾರಣವಾಗಿದೆ.

    ಈಗ ಹೊರ ಬಂದಿರುವ ಸ್ವಾಮೀಜಿ ಮಾತನಾಡಿ, ನಾನು ಇದೇ ಮೊದಲೇನಲ್ಲ ಈ ರೀತಿ ಅನುಷ್ಠಾನಕ್ಕೆ ಕುಳಿತಿರುವುದು ಇದಕ್ಕೂ ಮುನ್ನ 6 ಬಾರಿ ಈ ರೀತಿ ಅನುಷ್ಠಾನಕ್ಕೆ ಕುಳಿತಿದ್ದೇನೆ. ಆದರೆ ನಾನು ಮಾಡಿದ ಅನುಷ್ಠಾನಗಳಲ್ಲಿ ಇದು ಅತ್ಯಂತ ಕಠಿಣವಾಗಿತ್ತು. ಇಲ್ಲಿ ಆಧಿಶೇಷನ ಅನುಗ್ರಹವಿದೆ. ಆತನ ಅನುಗ್ರಹದಿಂದಲೇ ನಾನು ಇಂದು ಅನುಷ್ಠಾನ ಮುಗಿಸಿ ಹೊರಗೆ ಬಂದೆ ಎಂದು ಹೇಳಿದ್ದಾರೆ.

  • ಆಡಿಯೋ ವೈರಲ್ ಬೆನ್ನಲ್ಲೇ ಪೀಠತ್ಯಾಗಕ್ಕೆ ಮುಂದಾದ ಕಣ್ವಮಠದ ಸ್ವಾಮೀಜಿ

    ಆಡಿಯೋ ವೈರಲ್ ಬೆನ್ನಲ್ಲೇ ಪೀಠತ್ಯಾಗಕ್ಕೆ ಮುಂದಾದ ಕಣ್ವಮಠದ ಸ್ವಾಮೀಜಿ

    -ಕೆಲವರ ಷಡ್ಯಂತ್ರಕ್ಕೆ ಬಲಿಪಶು ಆಗಿದ್ದೇನೆ

    ಯಾದಗಿರಿ: ಜಿಲ್ಲೆಯ ಕಣ್ವಮಠ ಕಾಮಿಸ್ವಾಮಿಯ ಕಾಮಪುರಾಣ ಆಡಿಯೋ ಸ್ಥಳೀಯ ಮಟ್ಟದಲ್ಲಿ ಬಾರಿ ಸುದ್ದಿಯಲ್ಲಿದೆ. ಆದರೆ ಇದರಲ್ಲಿ ನಂದೇನು ತಪ್ಪಿಲ್ಲ, ಇದೆಲ್ಲಾ ಷಡ್ಯಂತ್ರ ಎಂದು ಕಣ್ವಮಠದ ವಿದ್ಯಾವಾರೀಧಿತೀರ್ಥ ಸ್ವಾಮೀಜಿ ಪೀಠತ್ಯಾಗ ಮಾಡಲು ಮುಂದಾಗಿದ್ದಾರೆ.

    ಸುರಪುರ ತಾಲೂಕಿನ ಹುಣಸಿಹೊಳಿ ಗ್ರಾಮದ ಪ್ರಸಿದ್ಧ ಕಣ್ವಮಠ, ಪೀಠಾಧಿಪತಿ ಶ್ರೀ 1008 ವಿದ್ಯಾವಾರೀಧಿತೀರ್ಥ ಸ್ವಾಮಿಯ ಅಕ್ರಮ ಸಂಬಂಧ ಬಟಾ ಬಯಲಾಗಿದೆ. ಸಾಕ್ಷಿಗಳು ಸ್ವಾಮಿಯ ವಿರುದ್ಧವೇ ಇದ್ದರೂ ಇದರಲ್ಲಿ ನಂದೇನು ತಪ್ಪಿಲ್ಲ ಎಂದು ಸ್ವಾಮೀಜಿ ಹೇಳುತ್ತಿದ್ದಾರೆ. ಸ್ವಾಮೀಜಿ ಮೈಸೂರು ಮೂಲದ ಮಹಿಳೆ ಜೊತೆ ಅಸಭ್ಯಕರವಾಗಿ ವಾಟ್ಸಪ್‍ನಲ್ಲಿ ಚಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು, ಮಹಿಳೆ ಜೊತೆ ಸ್ವಾಮೀಜಿ ನಡೆಸಿರುವ ಚಾಟಿಂಗ್ ಫೋಟೋಗಳು, ವೀಡಿಯೋಗಳು ಮತ್ತು ಕಾಲ್ ರೆಕಾರ್ಡ್ ಅನಾಮಧೇಯ ವ್ಯಕ್ತಿಗಳಿಂದ ಹೊರ ಬಂದಿವೆ. ಇದನ್ನೂ ಓದಿ:ಈಗ ಬರ್ತಿಯಾ, ನಾನು ಬೇಡ್ವಾ- ಕಾಮಿಸ್ವಾಮಿಯ ಆಡಿಯೋ ಔಟ್

    ಈ ಸ್ವಾಮೀಜಿಗೆ ಈಗಾಗಲೇ ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆಂದು ಹೇಳಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿರುವ ಕಣ್ವ ಮಠದ ಆಸ್ತಿಯನ್ನು, ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಸ್ವಾಮಿ ಮೇಲಿದೆ. ಎಷ್ಟೇಲ್ಲಾ ಸಾಕ್ಷಿಗಳು ಸ್ವಾಮೀಜಿಯ ವಿರುದ್ಧವಿದ್ದರೂ ನಾನೇನು ಮಾಡಿಲ್ಲ, ನನ್ನ ಹೆಸರನ್ನು ಹಾಳು ಮಾಡಲು ಮಠವನ್ನು ಕಂಡರೆ ಆಗದವರು ಈ ರೀತಿ ಮಾಡುತ್ತಿದ್ದಾರೆ. ನನ್ನನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ನನಗೆ ಗೊತ್ತಿರದ ಮಹಿಳೆಯರು ಈ ರೀತಿ ಮೆಸೆಜ್ ಮಾಡಿದ್ದಾರೆ. ಆದರೆ ನಾನು ಅವರ ಬಳಿ ಅಸಭ್ಯವಾಗಿ ವರ್ತಿಸಿಲ್ಲ. ಅವರೇ ನನಗೆ ಮೊದಲು ಫೋಟೋ, ವಿಡಿಯೋ ಕಾಲ್ ಮಾಡಿದ್ದು ಎಂದು ಹೇಳಿದರು. ಪೀಠದಲ್ಲಿ ಇದ್ದುಕೊಂಡು ಈ ಆರೋಪವನ್ನು ನಾನು ಎದುರಿಸುವುದು ಸರಿಯಲ್ಲ. ಆದ್ದರಿಂದ ಪೀಠತ್ಯಾಗ ಮಾಡಿ ಆರೋಪವನ್ನು ಎದುರಿಸಿ, ಹೋರಾಡುತ್ತೇನೆ. ನಾನು ಯಾವ ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

    ಅಲ್ಲದೆ ನನ್ನ ಮೊಬೈಲ್‍ಗೆ ಲಾಕ್ ಇಟ್ಟಿಲ್ಲ. ಆದ್ದರಿಂದ ನನ್ನ ಫೋನ್ ತೆಗೆದುಕೊಂಡು ಯಾರೋ ನನ್ನ ವಿರುದ್ಧ ಈ ರೀತಿ ಷಡ್ಯಂತ್ರ ನಡೆಸಿದ್ದಾರೆ. ನನ್ನ ಧ್ವನಿಯಲ್ಲಿ ಕಾಲ್ ಮಾಡಿದ್ದಾರೆ, ನನ್ನ ಹೆಸರಿನಲ್ಲಿ ಮಹಿಳೆಯರೊಂದಿಗೆ ಚಾಟ್ ಮಾಡಿದ್ದಾರೆ. ನಾನು ಚಾಚುರ್ಮಾಸದ ಕಾರ್ಯಕ್ರಮಗಳಲ್ಲಿ ಇದ್ದಾಗ ಹೆಚ್ಚಾಗಿ ಮೊಬೈಲ್ ಬಳಸುತ್ತಿರಲಿಲ್ಲ. ಬೇಕಾದ ವ್ಯಕ್ತಿಗಳಿಗೆ ಕರೆ ಮಾಡಲು ಬಳಸುತ್ತಿದ್ದೆ. ಆದರೆ ನಾನು ಯಾರಿಗೂ ಚಾಟ್, ವಿಡಿಯೋ ಕಾಲ್ ಮಾಡಿಲ್ಲ ಎಂದರು.

    ಆಡಿಯೋ ಹೊರಬಂದಿರುವ ಬಗ್ಗೆ ಮಾತನಾಡಿ, ನನ್ನ ಧ್ವನಿಯಲ್ಲಿ ಯಾರೋ ಮಾತನಾಡಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ನಾನು ಮಾತನಾಡಿರುವುದು ಅಲ್ಲ ಎಂದು ಆರೋಪ ತಳ್ಳಿಹಾಕಿದ್ದಾರೆ. ನಿಮಗೆ ಕೇವಲ ಒಂದೆರಡು ನಂಬರ್‍ಗಳ ಚಾಟ್ ಮಾತ್ರ ಸಿಕ್ಕಿದೆ. ಆದ್ರೆ ಮೊದಲು ಮೂರ್ನಾಲ್ಕು ನಂಬರ್‍ಗಳಿಂದ ಏನು ಚಾಟ್ ಮಾಡಿದ್ದರು, ಏನೆಲ್ಲಾ ಫೋಟೋ ವಿಡಿಯೋ ಕಳುಹಿಸಿದ್ದರು ಎಂದು ನಿಮಗೆ ಗೊತ್ತಿಲ್ಲ. ಸಂಚು ರೂಪಿಸಿದ್ದಾರೆ ಅದ್ಯಾವುದನ್ನು ನಿಮಗೆ ತಲುಪಿಸಿಲ್ಲ. ಇದೆಲ್ಲಾ ಒಂದು ಸಂಚು, ನನ್ನ ಹೆಸರು ಹಾಳು ಮಾಡಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

    ಕಳೆದ 4-5 ವರ್ಷಗಳಿಂದಲೂ ಈ ರೀತಿ ಸಂಚುಗಳು ನನ್ನ ವಿರುದ್ಧ ನಡೆಯುತ್ತಲೇ ಬಂದಿದೆ. ನಾನು ಈ ಪೀಠವನ್ನು ಆರೋಹಣ ಮಾಡುತ್ತಿದ್ದಾಗ ಗಲಾಟೆ ಮಾಡಿದ ವ್ಯಕ್ತಿಗಳೇ ಇದರ ರುವಾರಿಗಳಾಗಿದ್ದಾರೆ. ಅವರೇ ನನ್ನ ವಿರುದ್ಧ ಸಂಚು ಹೂಡಿದ್ದಾರೆ. ಮಠದ ಟ್ರಸ್ಟ್ ಮುಖಾಂತರ, ಭಕ್ತರ ಸಹಾಯ ಪಡೆದು ಇದರ ತನಿಖೆ ನಡೆಸುತ್ತೇವೆ ಎಂದರು.

  • ಗುಪ್ತಾಂಗದಲ್ಲಿ ದೋಷವಿದೆ – ಪರಿಹಾರ ಬೇಕೆಂದ್ರೆ 5 ಬಾರಿ ಸೆಕ್ಸ್ ಎಂದ ಕಾಮಿಸ್ವಾಮಿ ಅರೆಸ್ಟ್

    ಗುಪ್ತಾಂಗದಲ್ಲಿ ದೋಷವಿದೆ – ಪರಿಹಾರ ಬೇಕೆಂದ್ರೆ 5 ಬಾರಿ ಸೆಕ್ಸ್ ಎಂದ ಕಾಮಿಸ್ವಾಮಿ ಅರೆಸ್ಟ್

    ಬೆಂಗಳೂರು: ನಿನ್ನ ಗುಪ್ತಾಂಗದಲ್ಲಿ ದೋಷವಿದ್ದು, ಪರಿಹಾರ ಬೇಕು ಎಂದರೆ 5 ಬಾರಿ ಸೆಕ್ಸ್ ಮಾಡಬೇಕು ಎಂದ ಕಾಮಿ ಸ್ವಾಮಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

    ಗಣೇಶ್ ಮತ್ತು ಮಣಿಕಂಠ ಲೈಂಗಿಕ ಕಿರುಕುಳ ನೀಡಿದ ತಂದೆ-ಮಗ. ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ಬೇರೆಯಾಗಿ ವಾಸಿಸುತ್ತಿದ್ದಾರೆ. ಮಹಿಳೆ ಬಾಣಸವಾಡಿಯ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದಾರೆ. ಮಹಿಳೆಗೆ ಸರ್ಪ ದೋಷವಿದ್ದು, ತನ್ನ ಪರಿಚಯಸ್ಥರಿಂದ ಆರೋಪಿ ತಂದೆ-ಮಗನನ್ನು ಭೇಟಿ ಮಾಡಿದ್ದರು. ಕಳೆದ ಶನಿವಾರ ತಂದೆ-ಮಗ ಸರ್ಪ ದೋಷ ಪರಿಹರಿಸುವುದಾಗಿ ಹೇಳಿ 10 ರಿಂದ ರಾತ್ರಿ 11ವರೆಗೂ ಮಹಿಳೆಯ ಮನೆಯಲ್ಲಿ ಪೂಜೆ ಮಾಡಿದ್ದಾರೆ. ಪೂಜೆ ನಂತರ ಪೂಜೆ ಮಾಡಿದ್ದ ವಸ್ತುಗಳನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿಡಬೇಕು ಎಂದು ಹೇಳಿದ್ದಾರೆ.

    ಇದೇ ವೇಳೆ ತಂದೆ-ಮಗ ಕುಕ್ಕೆಯಲ್ಲಿ ಎರಡು ಪ್ರತ್ಯೇಕ ರೂಮ್ ಮಾಡಿ ಕಾಮದಾಟ ಆಡಲು ಸ್ಕೆಚ್ ಹಾಕಿದ್ದರು. ಅಲ್ಲದೆ ತಂದೆ ಗಣೇಶ್ ನಿನ್ನ ಗುಪ್ತಾಂಗದಲ್ಲಿ ದೋಷವಿದೆ. ಪರಿಹಾರ ಮಾಡಬೇಕು ಎಂದರೆ 5 ಬಾರಿ ಸೆಕ್ಸ್ ಮಾಡಬೇಕು. ನನ್ನ ಜೊತೆ ಅಲ್ಲದೆ ನನ್ನ ಮಗನ ಜೊತೆಯೂ ಸೆಕ್ಸ್ ಮಾಡಬೇಕು. ನೀನು ಈ ವಿಷಯವನ್ನು ನಿನ್ನ ತಂದೆ-ತಾಯಿಯ ಬಳಿ ಹೇಳಬಾರದು ಎಂದು ಮಹಿಳೆಗೆ ಹೇಳಿದ್ದಾನೆ. ಸ್ವಾಮೀಜಿಯ ಮಾತು ಕೇಳಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಕಾಮಿ ಸ್ವಾಮಿಯ ಮಗ ಮಣಿಕಂಠನನ್ನು ಬಂಧಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ನನಗೆ ಸರ್ಪ ದೋಷವಿದ್ದು, ಜಗನ್ನಾಥ್ ಎಂಬವರು ನನಗೆ ಗಣೇಶ್ ಹಾಗೂ ಮಣಿಕಂಠ ಅವರ ಪರಿಚಯ ಮಾಡಿಸಿದ್ದರು. ಆಗ ಅವರು ಸರ್ಪ ದೋಷ ನಿವಾರಣೆಗೆ ಪೂಜೆ ಮಾಡಿಸಬೇಕು ಎಂದರೆ 40 ಸಾವಿರ ರೂ. ಆಗುತ್ತದೆ ಎಂದು ಹೇಳಿದ್ದರು. ಬಳಿಕ ಗಣೇಶ್ ಎಂಬವರು ನನ್ನ ಜೊತೆ ಪ್ರತ್ಯೇಕವಾಗಿ ಮಾತನಾಡಿ, ನಿನಗೆ ಎಷ್ಟು ಜನ ಬಾಯ್‍ಫ್ರೆಂಡ್ ಇದ್ದಾರೆ ಎಂದು ಕೇಳಿದ್ದಾರೆ. ಅಲ್ಲದೆ ನಿನ್ನದ್ದು ವೇಶ್ಯೆಯ ಜಾತಕವಾಗಿದ್ದು, ಎಷ್ಟು ಜನವನ್ನು ಮದುವೆ ಮಾಡಿದರೂ ಅದು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

    ಶನಿವಾರ ಪೂಜೆ ಮಾಡುವುದ್ದಾಗಿ ಹೇಳಿ ಮನೆಗೆ ಬಂದಿದ್ದರು. ಪೂಜೆ ನೆರವೇರಿಸಿದ ನಂತರ ಪ್ರತ್ಯೇಕವಾಗಿ ರೂಮಿಗೆ ಕರೆದು ನೀನು ನಾನು ಹೇಳಿದ ಹಾಗೆ ಮಾಡಬೇಕು. ಆಗ ನಿನ್ನ ದೋಷ ಪರಿಹಾರವಾಗುತ್ತದೆ ಎಂದು ಲೈಂಗಿಕವಾಗಿ ಪ್ರೇರೇಪಣೆ ಮಾಡಿ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಲು ಪುಸಲಾಯಿಸಿದ್ದಾನೆ. ಗಣೇಶ್ ಮಾತು ಕೇಳಿ ಭಾನುವಾರ ನಾನು ನನ್ನ ತಂದೆ-ತಾಯಿ ಜೊತೆ ಕುಕ್ಕೆಗೆ ಹೋಗಿ ಅಲ್ಲಿ ಪೂಜೆ ನೆರವೇರಿಸಿದ್ದೇವೆ. ಪೂಜೆ ನಂತರ ಗಣೇಶ್ ತನ್ನ ಮಗ ಮಣಿಕಂಠ ಹಾಗೂ ನನ್ನ ತಂದೆ-ತಾಯಿಯನ್ನಯ ಹೊರಗೆ ನಿಲ್ಲಿಸಿ ನನ್ನನ್ನು ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿದ್ದಾನೆ.

    ರೂಮಿನ ಬಾಗಿಲು ಹಾಕಿದ ನಂತರ ನಾನು 5 ಬಾರಿ ತಾಳಿ ಕಟ್ಟಿ, 5 ಬಾರಿ ನಿನ್ನ ಜೊತೆ ಲೈಂಗಿಕ ಕ್ರಿಯೆ ಮಾಡುತ್ತೇನೆ. ಆಗ ನಿನ್ನ ದೋಷ ಪರಿಹಾರವಾಗುತ್ತದೆ. ನನ್ನನ್ನು ದೇವರೆಂದು ನೋಡು ಎಂದು ಹೇಳಿ ಮೊಬೈಲಿನಲ್ಲಿ ಪೂಜೆಯ ಬಗ್ಗೆ ಒಂದು ವಿಡಿಯೋವನ್ನು ಸಹ ತೋರಿಸಿದ್ದಾನೆ. ಸರ್ಪ ದೋಷ ಪರಿಹಾರ ಪೂಜೆ ಮಾಡುವ ನೆಪದಲ್ಲಿ ಅವರು ಲೈಂಗಿಕವಾಗಿ ಪ್ರಚೋದನೆ ನೀಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.